Connect with us

LATEST NEWS

ವಾರದ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದ ಆರೋಪಿಯಿಂದ ಗಾಂಜಾ ಮಾರಾಟ: ಮತ್ತೆ ಕೈಕೋಳ ತೊಡಿಸಿದ ಸಿಸಿಬಿ

Published

on

ಮಂಗಳೂರು: ನಗರದಾದ್ಯಂತ ಮಾದಕ ವಸ್ತು MDMA (Methylene dioxy methamphetamine) ನ್ನು  ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಸೇರಿದಂತೆ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಇಮ್ರಾನ್ @ ಮೂಡುಶೆಡ್ಡೆ ಇಮ್ರಾನ್(36), ಅಮ್ಜತ್ ಖಾನ್(42), ಅಬ್ದುಲ್ ಬಶೀರ್ ಅಬ್ಬಾಸ್(39) ಎಂದು ಗುರುತಿಸಲಾಗಿದೆ.

ಘಟನೆ ವಿವರ

ಮಂಗಳೂರು ಮೂಡುಶೆಡ್ಡೆಯ ಮೊಹಮ್ಮದ್ ಇಮ್ರಾನ್ ಎಂಬಾತನು ಇನ್ನಿಬ್ಬರು ಆರೋಪಿಗಳೊಂದಿಗೆ ಸೇರಿ ಬೆಂಗಳೂರಿನಿಂದ MDMA ಮಾದಕ ವಸ್ತುವನ್ನು ಖರೀದಿಸಿ  ಬೊಂದೆಲ್, ಪಡುಶೆಡ್ಡೆ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಪೊಲೀಸರು ದಾಳಿ ನಡೆಸಿ  170 ಗ್ರಾಂ ತೂಕದ ರೂ. 9,00,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಎಂಡಿಎಂಎ ಫಿಲ್ಸ್-5, ಮಾರುತಿ ರಿಡ್ಜ್ ಕಾರು-1,  6 ಮೊಬೈಲ್ ಫೋನುಗಳು ಹಾಗೂ ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 14,76,500/-ಆಗಬಹುದು. ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಶೋಧ ನಡೆಯುತ್ತಿದೆ.

ಆರೋಪಿಗಳ ಪೈಕಿ ಇಮ್ರಾನ್ @ ಮೂಡುಶೆಡ್ಡೆ ಇಮ್ರಾನ್ ಎಂಬಾತನ ವಿರುದ್ಧ 2016 ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಮಂಜೂರು ಚರಣ್ ಎಂಬಾತನ ಕೊಲೆ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣ, 2017 ರಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, 2019 ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣ, 2020 ರಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ಹಾನಿಗೊಳಿಸಿದ  ಪ್ರಕರಣ, 2022 ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಯ 1 ಪ್ರಕರಣ,

ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ MDMA ಸಾಗಾಟ ಮತ್ತು ಮಾರಾಟ ಪ್ರಕರಣ, ಉಡುಪಿ ಜಿಲ್ಲೆಯ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ  MDMA ಸಾಗಾಟ ಮತ್ತು ಮಾರಾಟ ಪ್ರಕರಣ, 2023 ರಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ MDMA ಸಾಗಾಟ ಮತ್ತು ಮಾರಾಟ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು  ದಾಖಲಾಗಿದೆ. ಈತನು ವಾರದ ಹಿಂದೆ ಜೈಲ್ ನಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದನು.

ಮತ್ತೋರ್ವ ಆರೋಪಿ ಅಬ್ದುಲ್ ಬಶೀರ್ ಅಬ್ಬಾಸ್ ಎಂಬಾತನ ವಿರುದ್ಧ ಈ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿದೆ.

ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ನರೇಂದ್ರ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ ಹಾಗೂ ಸಿಬ್ಬಂದಿ  ಪಾಲ್ಗೊಂಡಿದ್ದರು.

LATEST NEWS

ಬೆಂಕಿಯಲ್ಲ … ಬಾಹ್ಯಾಕಾಶದಲ್ಲಿ ಅರಳಿದ ಈ ಹೂವಿನ ಬಗ್ಗೆ ನಿಮಗೆಷ್ಟುಗೊತ್ತು ..?

Published

on

ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಿದ್ದ ಕೆಲಸಗಳನ್ನು ಪ್ರಸ್ತುತ ಮಾಡಲು ಸಾಧ್ಯವಾಗುತ್ತಿದೆ. ಅಂದರೆ ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿದೆ ಎಂದರ್ಥ. ಹೀಗಿರುವಾಗ ಜಗತ್ತಿಗೆ ಹೊಸ ಸಂಶೋಧನೆ ಪರಿಚಯಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ನಾಸಾ, ಬಾಹ್ಯಾಕಾಶದಲ್ಲಿ ಹೂ ಅರಳಿದ್ದ ಚಿತ್ರವನ್ನು ಪ್ರಕಟಿಸಿತ್ತು. ಆ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದವು. ನೀವೂ ಒಮ್ಮೆ ನೋಡಿ…

ಈ ಒಂದು ಚಿತ್ರ ಇಡೀ ವಿಶ್ವವನ್ನೇ ಅಚ್ಚರಿಗೆ ನೂಕಿತ್ತು. ಯಾಕೆಂದರೆ, ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಹೂವೊಂದು ಅರಳಿತ್ತು. ಈ ಫೋಟೋ ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಹೂವಿನಾದ ಆರೆಂಜ್ ಜಿನ್ನಿಯಾದ ಕ್ಲೋಸ್‌ಅಪ್‌ ಫೋಟೋ ಆಗಿತ್ತು. ಹೂವಿನ ಹಿನ್ನಲೆಯಲ್ಲಿ ಭೂಮಿಯನ್ನು ಕಾಣಬಹುದಾಗಿತ್ತು. ವಿಜ್ಞಾನಿಗಳು 1970 ರ ದಶಕದಿಂದಲೂ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಈ ನಿರ್ದಿಷ್ಟ ಪ್ರಯೋಗವನ್ನು 2015 ರಲ್ಲಿ ನಾಸಾ ಗಗನಯಾತ್ರಿ ಕೆಜೆಲ್ ಲಿಂಡ್‌ಗ್ರೆನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಾರಂಭಿಸಿದರು.

ಈ ಹೂವಿನ ಬೆಳವಣಿಗೆಯು VEG-01 ಪ್ರಯೋಗದ ಒಂದು ಭಾಗವಾಗಿದೆ ಎಂದು ನಾಸಾ ತಿಳಿಸಿತ್ತು. ನಾಸಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು 2016ರಲ್ಲಿ ಪ್ರಕಟ ಮಾಡಿತ್ತು. ಈ ಹೂವು ಬೆಳೆಸಿದ್ದರ ಹಿಂದೆ ಕಾರಣವೂ ಇತ್ತು. ಐಎಸ್‌ಎಸ್‌ನಲ್ಲಿನ ವೆಗ್ಗ-01 ಸೌಲಭ್ಯದ ಕಕ್ಷೆಯ ಮೇಲಿನ ಕಾರ್ಯಾಚರಣೆ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿ ಮಾಡಲಾಗಿತ್ತು. ಬಾಹ್ಯಾಕಾಶದಲ್ಲಿ ಮೊಳಕೆ ಬೆಳವಣಿಗೆ ಹೇಗಾಗುತ್ತದೆ, ಜೊತೆಗೆ ಸಸ್ಯಗಳು ಮತ್ತು ಸೌಲಭ್ಯದ ಮೇಲಿನ ಸೂಕ್ಷ್ಮಜೀವಿಯ ಸಸ್ಯವರ್ಗದ ಸಂಯೋಜನೆಯನ್ನು ಕೇಂದ್ರೀಕರಿಸಿತ್ತು. ಜಿನ್ನಿಯಾಗಳನ್ನು 60 ದಿನಗಳವರೆಗೆ ಬೆಳೆಸಲಾಯಿತು ಮತ್ತು ಈ ಅವಧಿಯಲ್ಲಿ ಹಲವು ಹೂವುಗಳು ಅರಳಿದ್ದವು.

“ಈ ಜಿನ್ನಿಯಾವನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ವೆಗ್ಗಿ ಸೌಲಭ್ಯದ ಭಾಗವಾಗಿ ಕಕ್ಷೆಯಲ್ಲಿ ಬೆಳೆಸಲಾಯಿತು” ಎಂದು ನಾಸಾ ತಿಳಿಸಿತ್ತು. “ನಮ್ಮ ಬಾಹ್ಯಾಕಾಶ ಉದ್ಯಾನವು ಕೇವಲ ಪ್ರದರ್ಶನಕ್ಕಾಗಿ ಅಲ್ಲ: ಸಸ್ಯಗಳು ಕಕ್ಷೆಯಲ್ಲಿ ಹೇಗೆ ಬೆಳೆಯುತ್ತವೆ ಎಂಬುದನ್ನು ಕಲಿಯುವುದು ಭೂಮಿಯಿಂದ ಹೊರಗೆ ಬೆಳೆಗಳನ್ನು ಹೇಗೆ ಬೆಳೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ, ಚಂದ್ರ, ಮಂಗಳ ಮತ್ತು ಅದರಾಚೆಗೆ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ತಾಜಾ ಆಹಾರದ ಅಮೂಲ್ಯ ಮೂಲವನ್ನು ಒದಗಿಸುತ್ತದೆ.” ಎಂದು ನಾಸಾ ತಿಳಿಸಿತ್ತು.

Continue Reading

LATEST NEWS

ಪತ್ನಿಗೆ ವಿಡಿಯೋ ಕಾಲ್ ಮಾಡಿ ಖ್ಯಾತ ಪತ್ರಕರ್ತ ಆತ್ಮಹತ್ಯೆ; ಕಾರಣ ನಿಗೂಢ ..!

Published

on

ಮಂಗಳೂರು/ಗದಗ : ನ್ಯೂಸ್‌ಗೆ ಬೇಕಾಗುವ ದೃಶ್ಯಾವಳಿಗಳನ್ನ ಸೆರೆ ಹಿಡಿಯುವಲ್ಲಿ ಪರಿಣತರಾಗಿದ್ದು, ಒಂದೇ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದ ರವಿ ಗಿರಣಿ ನಿನ್ನೆ (ಮಾ.21) ಸಂಜೆ ಸಾವನ್ನಪ್ಪಿದ್ದಾರೆ. ಈ ಸುದ್ಧಿ ಪತ್ರಕರ್ತ ವಲಯಕ್ಕೆ ನೋವುಂಟು ಮಾಡಿದೆ.

ಟಿವಿ9 ಪ್ರಾರಂಭವಾದ ಮೊದಲ ದಿನದಿಂದಲೇ ಹುಬ್ಬಳ್ಳಿ ಕ್ಯಾಮೆರಾಮೆನ್ ಆಗಿ ಸೇರಿಕೊಂಡಿದ್ದರು. ಬಳಿಕ ದಾವಣಗೆರೆ , ಮಂಗಳೂರು ಬಳಿಕ ಪ್ರಸ್ತುತ ಗದಗದಲ್ಲಿ ಕೆಲಸ ಮಾಡಿದ್ದರು. ಮಂಗಳೂರಿನಲ್ಲಿ ಅನೇಕ ವರ್ಷ ಕೆಲಸ ಮಾಡಿರುವ ರವಿ ಗಿರಣಿ ಜಿಲ್ಲೆಯಲ್ಲಿ ಅನೇಖ ಸ್ನೇಹಿತರನ್ನು ಪಡೆದುಕೊಂಡಿದ್ದರು.

ಶುಕ್ರವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದ ಅವರು ಪತ್ನಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು ಕಾರಣ ಏನು ಎಂದು ತಿಳಿಸಿರಲಿಲ್ಲ. ರವಿ ಅವರ ಪತ್ನಿ ಗಂಗಾವತಿಯಲ್ಲಿ ಶಿಶು ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ತಕ್ಷಣ ಮನೆ ಸಮೀಪದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಜನರು ಬಂದು ನೋಡುವಷ್ಟರಲ್ಲಿಯೇ ರವಿ ಇಹಲೋಕ ತ್ಯಜಿಸಿದ್ದರು.

ರವಿ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ರಾಘವ ಅತ್ತಾವರ ವಿಧಿವಶ ; ಕದ್ರಿ ನವನೀತ ಶೆಟ್ಟಿ ಸಂತಾಪ

Published

on

ಮಂಗಳೂರು : ಕೆಲವೊಂದು ಸಾವುಗಳು ನಮ್ಮನ್ನು ಮೌನವಾಗಿಸುತ್ತವೆ. ವ್ಯಕ್ತಿ ಅಳಿದರೂ  ಆತನ ನೆನಪುಗಳು ಸದಾ ಹಸಿರಾಗುತ್ತದೆ. ಆತನ ಸಾಧನೆಗಳು ಎಂದಿಗೂ ಮರೆಯದಂತೆ ಇರುತ್ತದೆ. ಇದೀಗ ಅಂತಹದ್ದೇ ಸಾಧಕನೊಬ್ಬ ನಮ್ಮನ್ನಗಲಿದ್ದಾರೆ. ಮಂಗಳೂರಿನ ಬಹುಮುಖ ಪ್ರತಿಭೆ ಕದ್ರಿ ನವನೀತ ಶೆಟ್ಟಿ ಮೃತರ ಕುರಿತು ಬರೆದ ಲೇಖನವು ಮನಮುಟ್ಟುವಂತಿದೆ.

ಹಿರಿಯ ನಾಟಕ ನಿರ್ದೇಶಕ, ಒಂದು ಕಾಲದ ಪ್ರಸಿದ್ದ ಸ್ತ್ರೀ ವೇಷ ಧಾರಿ  ರಾಘವ ಅತ್ತಾವರ ವಿಧಿವಶ ರಾಗಿ 5 ದಿನ ಕಳೆಯಿತು…ವೃತ್ತಿ ಯಲ್ಲಿ ನುರಿತ ಮೋಟಾರ್ ಎಲೆಕ್ಟ್ರಿಶನ್. ಪ್ರವೃತ್ತಿ..ರಂಗ ಭೂಮಿ…ಸುಮಾರು ನಾಲ್ಕು ದಶಕಗಳ ಕಾಲ ನಾಟಕ ಕ್ಷೇತ್ರ ದಲ್ಲಿ ಮಂಗಳೂರು ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿ ನೂರಾರು ನಾಟಕ ಗಳನ್ನು ನಿರ್ದೇಶಿಸಿದವರು. ಧನ ಅಪೇಕ್ಷೆ ಇಲ್ಲದೆ, ತನ್ನ ಸ್ಕೂಟರ್ ನಲ್ಲಿ ಪಯಣಿಸಿ, ತಿಂಗಳು ಗಟ್ಟಲೆ ರಂಗ ಅಭ್ಯಾಸ ಮಾಡಿಸಿ ನಾಟಕ ದ ಯಶಸ್ವಿ ಪ್ರದರ್ಶನ  ನೋಡಿ ಸಂಭ್ರಮ ಪಡುತಿದ್ದ ಕಲಾರಾಧಕ.

ಹಲವಾರು ಮಹಿಳಾ ಮಂಡಳಿ ಗಳು, ಯುವಕ ಮಂಡಳಿ ಗಳ ಗದ್ದೆ ಯ ಪರದೆ ನಾಟಕ ಗಳಿಗೆ ಜೀವ ತುಂಬಿ ಹುರಿದುಂಬಿಸಿ ನೂರಾರು ಕಲಾವಿದರನ್ನು ಸೃಷ್ಟಿ ಸಿ ಬೆಳೆಸಿದ ರಂಗ ಸಾಧಕ…ತಾರುಣ್ಯ ದಲ್ಲಿ ಸ್ತ್ರೀ ವೇಷ ಧಾರಿ ಯಾಗಿ   ಮರ್ಲೆದಿ, ಮಾಜಂದಿ ಬರವು, ಗಂಗಾರಾಮ್, ಬಯ್ಯ ಮಲ್ಲಿಗೆ, ಸರಸ್ವತಿ, ಮುತ್ತು ಮಾನಿಕ ಮೊದಲಾದ ನಾಟಕ ಗಳಲ್ಲಿ ಮನೋಜ್ಞ ಅಭಿನಯ ನೀಡುತಿದ್ದ ಅಗ್ರ ಪಂಕ್ತಿ ಯ ಕಲಾವಿದ….ಶೋಭಾ ಯಾತ್ರೆ ಗಳ, ಮಂಗಳಾದೇವಿ ರಥೋತ್ಸವ ದ ಟ್ಯಾಬ್ಲೋ ಗಳಲ್ಲಿ ಹಲವು ವರ್ಷ ಶ್ರದ್ದೆ, ಭಕ್ತಿ ಯಿಂದ ಪಾತ್ರ ನಿರ್ವಹಿಸಿದ್ದ ನಿಷ್ಠಾವಂತ ಕಲೋಪಾಸಕ…ರಾಘವ ಅತ್ತಾವರ ಅವರ ನಿರ್ದೇಶನ ದಲ್ಲಿ ನಾನು ಹಲವಾರು ಸಾಮಾಜಿಕ, ಚಾರಿತ್ರಿಕ, ಜಾನಪದ, ಪೌರಾಣಿಕ ನಾಟಕ ಗಳಲ್ಲಿ  ಅಭಿನಯ ಮಾಡಿದ್ದೇನೆ.

ನಮ್ಮ ಕದ್ರಿ ಕಂಬಳ ಮಿತ್ರ ವೃಂದ, ಸೌರಭ ಕಲಾವಿದರು ಕದ್ರಿ, ಬಲ್ಮಠ ಟ್ರೈನಿಂಗ್ ಶಾಲೆ ಯ ಹಲವಾರು ನಾಟಕ ಗಳಲ್ಲಿ ಸುಮಾರು ಎರಡು ದಶಕ ಗಳ ಕಾಲ ಅವರು ಹಲವಾರು ನಾಟಕ ಗಳನ್ನು ನಿರ್ದೇಶಿ ಸಿದ್ದಾರೆ. ಚಿತ್ರ ನಿರ್ದೇಶಕರಾದ ಸಾಯಿ ಕೃಷ್ಣ, ಆರ್. ಎಸ್. ಸುರೇಶ, ಚಿತ್ರ ನಟರಾದ ಸುಂದರ ಹೆಗ್ಡೆ, ಸುಧೀರ್ ಬಲ್ಮಠ, ನಿರೂಪಕಿ ಸೌಜನ್ಯಹೆಗ್ಡೆ    ಮೊದಲಾದ ಪ್ರತಿಭೆಗಳ ಆರಂಭದ ಗುರು ಅತ್ತಾವರ ಮಾಸ್ಟ್ರು.ನಾನು ರಚಿಸಿದ ಮೊದಲ ಹತ್ತು ನಾಟಕ ಗಳನ್ನು ಅತ್ತಾವರ ಅವರು ನಿರ್ದೇಶನ ಮಾಡಿದ್ದಾರೆ… ಮೂರು ದಶಕ ಗಳ ಹಿಂದೆ ರಚಿಸಿ, ಇಂದೂ ಪ್ರದರ್ಶನ ಕಾಣುತ್ತಿರುವ “ಕಾರ್ನಿಕದ ಶಿವ ಮಂತ್ರ ” ನಾಟಕ ದ ಮೊದಲ ಗುರು ಇವರೇ. ಸಾಮಾಜಿಕ ನಾಟಕ ಗಳಲ್ಲಿ ಅಭಿನಯ ಮಾಡುವಾಗ ಇಣುಕು ತಿದ್ದ  ಯಕ್ಷಗಾನ ದ ಛಾಯೆ ಯನ್ನು ಬೈದು, ತಿದ್ದಿ ತೀಡಿ,ನೇರ್ಪು ಗೊಳಿಸಿದ್ದ ದಿನಗಳನ್ನು ಮರೆಯಲಾಗುವುದಿಲ್ಲ.

ಅವರ ನಿರ್ದೇಶನ ದ ನಾಟಕ ದ ಅಂಕ ದ ಪರದೆ  ತೆರೆಯುವ ಹಾಗೂ ಹಾಕುವ  ಕಾಯಕ ವನ್ನು ಸ್ವತಃ ಅವರೇ ಮಾಡುತಿದ್ದರು. ಚೌಕಿ ಪೂಜೆ ಮಾಡಿ, ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಮಾಡಿ ಅಂಕದ ಪರದೆ ಸರಿಸಿ ಬಿಡುತ್ತಿದ್ದ ರಾಘವ ಅತ್ತಾವರ ನನಗೆ ಇಂದೂ ನನ್ನ ನಾಟಕ ಪ್ರದರ್ಶನ ಕಾಲ ದಲ್ಲಿ ನೆನಪಾಗುತ್ತಾರೆ. ಸ್ವಾಭಿಮಾನಿ, ಮಿತ ಭಾಷಿ, ಛಲವಾದಿ, ಅಭ್ಯಾಸ ಕಾಲದಲ್ಲಿ ಶೀಘ್ರ ಕೋಪಿ… ರಂಗ ವೇದಿಕೆ ಯನ್ನು ಆರಾಧನಾ ಮಂದಿರದಂತೆ ಕಾಣುತಿದ್ದವರು… ನಾಟಕದ ಅಂಕದ ಪರದೆ ಯನ್ನು  ನಾಟಕ ಮುಗಿದಾಗ ಅವರೇ ಎಳೆಯು ತಿದ್ದದ್ದು ಸ್ವಾಭಿಮಾನಿ ನಿರ್ದೇಶಕನಾಗಿ…ಅವರ ನಿಧನ ವಾರ್ತೆ ಯನ್ನು ಇಂದು ಅವರ ಮಮತೆಯ ಪುತ್ರಿ ತಿಳಿಸಿದಾಗ ನನಗೆ ಅನಿಸಿದ್ದು…”ಬದುಕಿನ ಅಂಕದ ಪರದೆ ಯನ್ನೂ ಅವರೇ ಎಳೆದು ಬಿಟ್ಟ ರಲ್ಲಾ… ಜೀವನ ನಾಟಕ ಸಹಜ ಮುಕ್ತಾಯ ಕಾಣುವ ಮುನ್ನ.!!”

ಬರಹ : ಕದ್ರಿ ನವನೀತ ಶೆಟ್ಟಿ

Continue Reading
Advertisement

Trending

Copyright © 2025 Namma Kudla News

You cannot copy content of this page