Connect with us

DAKSHINA KANNADA

Mangaluru: ಎನ್.ಎಂ.ಪಿ.ಎ. ವತಿಯಿಂದ ಪಣಂಬೂರಿನಲ್ಲಿ ವಾಕಥಾನ್‌

Published

on

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ಜಾಗೃತ ತಿಳುವಳಿಕೆ ಸಪ್ತಾಹದ ಅಂಗವಾಗಿ ವಾಕಥಾನ್‌ ಪಣಂಬೂರಿನಲ್ಲಿ ನಡೆಯಿತು. ಕೇಂದ್ರ ಜಾಗೃತ ಆಯೋಗದ ಸೂಚನೆಯಂತೆ ‘ಸೇ ನೋ ಟು ಕರೆಪ್ಶನ್‌…ಕಮಿಟ್‌ ಟು ದ ನೇಶನ್’ ಎಂಬ ಧ್ಯೇಯವಾಕ್ಯದಡಿ 2023 ನೇ ಸಾಲಿನ ಜಾಗೃತ ತಿಳುವಳಿಕೆ ಸಪ್ತಾಹವನ್ನು ಆಚರಿಸಲಾಗುತ್ತದೆ.

ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟ್ರಮಣ ಅಕ್ಕರಾಜು ಅವರು ಜಾಗೃತಿ ಸಪ್ತಾಹದ ವಾಕಥಾನ್‌ ಗೆ ಎನ್.ಎಂ.ಪಿ.ಎ. ಆಡಳಿತ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು. ಸುಮಾರು ಒಂದು ಕಿಲೋ ಮೀಟರ್‌ ಸಾಗಿದ ವಾಕಥಾನ್‌ ಪಣಂಬೂರು ಬೀಚ್‌ನಲ್ಲಿ ಮುಕ್ತಾಯಗೊಂಡಿತು. ಬಂದರು ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬಂದಿ ವಾಕಥಾನ್‌ ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂದೇಶ ನೀಡಿದ ಡಾ. ವೆಂಕಟ್ರಮಣ ಅಕ್ಕರಾಜು, ಭ್ರಷ್ಟಾಚಾರದಿಂದ ದೂರವಿರುವಂತೆ ಜನರನ್ನು ಸಂವೇದನಾಶೀಲರನ್ನಾಗಿ ಮಾಡುವ ಉದ್ದೇಶದಿಂದ ವಿಚಕ್ಷಣಾ ಆಯೋಗವು ಜಾಗೃತ ತಿಳುವಳಿಕೆ ಸಪ್ತಾಹ ಆಚರಿಸುತ್ತಿದ್ದು, ಅದರ ಭಾಗವಾಗಿ ಈ ವಾಕಥಾನ್‌ ಹಮ್ಮಿಕೊಳ್ಳಲಾಗಿದೆ.

ಎನ್.ಎಂ.ಪಿ.ಎ. ಯಲ್ಲಿ ಜಾಗೃತ ತಿಳುವಳಿಕೆ ಸಪ್ತಾಹ ಕಾರ್ಯಕ್ರಮ ಅ. 20 ರಂದು ಆರಂಭಗೊಂಡಿದೆ. ಅಂದಿನಿಂದ ಮೊದಲ್ಗೊಂಡು ಜಾಗೃತಿ ಕಾರ್ಯಕ್ರಮ, ಪ್ರಬಂಧ, ಭಾಷಣ ಮತ್ತಿತರ ವಿವಿಧ ಸ್ಪರ್ಧೆಗಳು, ಶಾಲೆಗಳಲ್ಲಿ ತಿಳುವಳಿಕೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಬಹು ದೊಡ್ಡ ಅಡ್ಡಗಾಲು ಆಗಿದೆ. ಈ ಪೈಕಿ ರಾಜಕೀಯ, ಸಾಮಾಜಿಕ ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಬಹು ಮುಖ್ಯವಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿನ ಭ್ರಷ್ಟಾಚಾರವನ್ನು ಅಳಿಸಿ ಹಾಕುವ ಮೂಲಕ ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಾಣ ಮಾಡ ಬೇಕಾಗಿದೆ ಎಂದು ಹೇಳಿದರು. ಜಾಗೃತ ತಿಳುವಳಿಕೆ ಸಪ್ತಾಹ 2023 ಪ್ರಯುಕ್ತ ಪಣಂಬೂರು ಬೀಚ್‌ನಲ್ಲಿ ಭ್ರಷ್ಟಾಚಾರ ತೊಲಗಲಿ, ಭಾರತ ದೇಶ ಬೆಳಗಲಿ ಎಂದು ಸಂದೇಶ ಸಾರುವ ಮರಳು ಶಿಲ್ಪ ಎಲ್ಲರ ಗಮನ ಸೆಳೆಯಿತು.

DAKSHINA KANNADA

15 ಫೀಟ್ ಆಳಕ್ಕೆ ಉರು*ಳಿದ ಕಾರು; ತಪ್ಪಿದ ಭಾರೀ ದುರಂ*ತ

Published

on

ಉಳ್ಳಾಲ : ಚಾಲಕನ ನಿಯಂತ್ರಣ ತಪ್ಪಿದ ಕಾರು ನದಿಯ ತೀರಕ್ಕೆ ಉ*ರುಳಿ ಬಿದ್ದ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ನಡೆದಿದೆ. ಕಲ್ಲಾಪುವಿನ ರಾಷ್ಟ್ರೀಯ ಹೆದ್ದಾರಿಯಿಂದ ಗುಳಿಗ ಕೊರಗಜ್ಜ ಶಿಲೆಯ ಪ್ರಧಾನ ಆದಿಸ್ಥಳಕ್ಕೆ ಹೋಗುವ ದಾರಿಯಲ್ಲಿ ಈ ಘಟನೆ ನಡೆದಿದೆ.

ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಕಾರು ಚಲಿಸುತ್ತಿತ್ತು. ಅಗಲ ಕಿರಿದಾದ ರಸ್ತೆ ಇದಾಗಿದ್ದು, ಹೆದ್ದಾರಿಯಿಂದ ತಿರುವು ಪಡೆದುಕೊಂಡ ಕಾರು  15 ಫೀಟ್ ಆಳಕ್ಕೆ ಉ*ರುಳಿ ಬಿದ್ದಿದೆ. ಅದೃಷ್ಟವಶಾತ್, ನದಿಯ ನೀರಿಗೆ ಬೀಳದೆ ಕಸಕಡ್ಡಿ ತುಂಬಿದ್ದ ಜಾಗದಲ್ಲಿ ಕಾರು ಸಿ*ಲುಕಿಕೊಂಡಿದೆ. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಅಪ*ಘಾತ ನಡೆದ ತಕ್ಷಣ ಕಾರಿನಿಂದ ಹೊರಬಂದಿದ್ದಾರೆಯಾದ್ರೂ ಸ್ಥಳದಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ : ಸ್ಕೂಟರ್‌ಗೆ ಅಡ್ಡ ಬಂದ ಕಾಡುಹಂದಿ; ರಸ್ತೆಗೆಸೆಯಲ್ಪಟ್ಟು ಹಿಂಬದಿ ಸವಾರೆ ಸಾ*ವು

ಕೊರಗಜ್ಜನ ದೈವಸ್ಥಾನಕ್ಕೆ ಹೋಗುವ ದಾರಿಯ ಫಲಕಕ್ಕೆ ಡಿ*ಕ್ಕಿ ಹೊಡೆದು ಕಾರು ನದಿಪಾತ್ರಕ್ಕೆ ಉರುಳಿ ಬಿದ್ದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಾರಿನಲ್ಲಿದ್ದವರು ಗಾ*ಯಗೊಂಡ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ತೆರಳಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ.

 

Continue Reading

DAKSHINA KANNADA

ಸ್ಕೂಟರ್‌ಗೆ ಅಡ್ಡ ಬಂದ ಕಾಡುಹಂದಿ; ರಸ್ತೆಗೆಸೆಯಲ್ಪಟ್ಟು ಹಿಂಬದಿ ಸವಾರೆ ಸಾ*ವು

Published

on

ಉಳ್ಳಾಲ : ವ್ಯಕ್ತಿಯ ಸ್ಕೂಟರ್‌ಗೆ ಕಾಡು ಹಂದಿಯೊಂದು ದಿಢೀರನೆ ಅಡ್ಡ ಬಂದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಹಿಂಬದಿ ಸವಾರೆ ಮೃ*ತಪಟ್ಟ ಘಟನೆ ಹರೇಕಳ ಗ್ರಾಮದ ಖಂಡಿಗ ಎಂಬಲ್ಲಿ ಸಂಭವಿಸಿದೆ. ಹರೇಕಳ ಗ್ರಾಮದ ಪೊಲ್ಕೆ ಮೇಗಿನಮನೆ ನಿವಾಸಿ ದೇವಕಿ ಮಾಣೈ(72) ಮೃತ ಹಿಂಬದಿ ಸವಾರೆ.

ಶನಿವಾರ ರಾತ್ರಿ(ಮಾ.15) ವರದರಾಜ್ ಮಾಣೈ ತನ್ನ ತಾಯಿ ದೇವಕಿ ಮಾಣೈ ಅವರ ಜೊತೆ ಬಜಾಲಿನ ಸಂಬಂಧಿಕರ ಮನೆಯಿಂದ ಸ್ಕೂಟರಲ್ಲಿ ಅಡ್ಯಾರು-ಪಾವೂರು ಮಾರ್ಗವಾಗಿ ಹರೇಕಳದ ಮನೆಗೆ ಮರಳುತ್ತಿದ್ದರು. ಈ  ವೇಳೆ ದಾರಿ ಮಧ್ಯೆ ಖಂಡಿಗ ಎಂಬಲ್ಲಿನ ಹಳೇ ಪಂಚಾಯತ್ ಕಚೇರಿ ಕಟ್ಟಡದ ಬಳಿಯ ಗುಡ್ಡಕಾಡು ಪ್ರದೇಶದಿಂದ ಕಾಡು ಹಂದಿಯೊಂದು ದಿಢೀರನೆ ರಸ್ತೆ ಕಡೆ ಧಾವಿಸಿದೆ.

ಈ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ವರದರಾಜ್ ಅವರು ವಿಚಲಿತರಾಗಿ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ತಾಯಿ ಮತ್ತು ಮಗ ರಸ್ತೆಗೆಸೆಯಲ್ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ದೇವಕಿ ಅವರಿಗೆ ಹರೇಕಳದ ಕ್ಲಿನಿಕ್ ಒಂದರಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ  : ಒಂದೇ ವಾರದಲ್ಲಿ ಶನಿಗ್ರಹದ 124 ಹೊಸ ಉಪಗ್ರಹ ಪತ್ತೆ; ಮಾ.23 ರಂದು ನಡೆಯಲಿದೆ ವಿಸ್ಮಯ

ಮೃತ ದೇವಕಿ ಅವರ ಪತಿ ಭೋಜ ಮಾಣೈ ಅವರು ಕಳೆದ ಆರು ತಿಂಗಳ ಹಿಂದಷ್ಟೇ ಅಲ್ಪ ಕಾಲದ ಅನಾರೋಗ್ಯದಿಂದ ಮೃ*ತಪಟ್ಟಿದ್ದರು. ದೇವಕಿ ಅವರು ಓರ್ವ ಪುತ್ರ, ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳನ್ನ ಅಗಲಿದ್ದಾರೆ.

ಘಟನೆ ಕುರಿತು ದೇವಕಿ ಮಾಣೈ ಅವರ ಅಳಿಯ(ಮಗಳ ಗಂಡ) ರವೀಂದ್ರ ಭಂಡಾರಿ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

DAKSHINA KANNADA

ಮಲೀನವಾದ ನೇತ್ರಾವತಿಯ ಸ್ವಚ್ಚತಾ ಕಾರ್ಯ..! ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ ನೇತೃತ್ವ..!

Published

on

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಧ.ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಶ್ರೀ ಧ.ಮಂ. ಸ್ಪೋಟ್ಸ್ ಕ್ಲಬ್ ಉಜಿರೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ (ರಿ.) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಆರಕ್ಷಕ ಠಾಣ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಸುಮಾರು 650 ಮಂದಿಯಿಂದ ‘ವಂದೇ ಮಾತರಂ’ ನನ್ನ ಸೇವೆಗಾಗಿ.. ನೇತ್ರಾವತಿ ನದಿ ಸಂವತ್ಸರ ಕಾರ್ಯಕ್ರಮ ಮಾ.16ರಂದು ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಆರಂಭಗೊಂಡಿತು.


ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ದೀಪ ಬೆಳಗಿಸಿ ಧರ್ಮಸ್ಥಳದ ನೇತ್ರಾವತಿ ನದಿ ಪ್ರವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೇತ್ರಾವತಿ ಪುಣ್ಯ ನದಿಯಲ್ಲಿ ತಮ್ಮ ಪಾಪವನ್ನು ಕಳೆಯಲು ಸ್ನಾನ ಮಾಡುತ್ತಾರೆ. ಆದರೆ ಬಟ್ಟೆ ಬರೆಗಳನ್ನು ನದಿಗೆ ಎಸೆದು ಅಂಧಾನುಕರಣೆ ಮಾಡುತ್ತಾರೆ. ಇದು ಸರಿಯಲ್ಲ. ಬದುಕು ಕಟ್ಟೋಣ ಬನ್ನಿ ತಂಡ ಕಾಯ೯ಕ್ರಮ ಸಮಾಜಕ್ಕೆ ಮಾದರಿ ಹೇಳಿದರು.

ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ನ ಅಧ್ಯಕ್ಷ. ಕೆ. ಧನಂಜಯ ರಾವ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಾಪುರ ಮಠ, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅರ್ಜುನ್, ಧರ್ಮಸ್ಥಳ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಕಿಶೋರ್ ಪಿ. ವೇಣೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಶೈಲಾ ಡಿ. ಮುರುಗೋಡು, ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಏಣಿಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಉಜಿರೆಯ ಎಸ್.ಡಿ.ಎಂ. ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಕೆ. ಭಾಗವಹಿಸಿ ಶುಭ ಕೋರಿದರು. ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶಗಳನ್ನು ಪ್ರಕಟಿಸಿದರು.

ಉಜಿರೆ ಶ್ರೀ ಧ.ಮಂ. ಕಾಲೇಜಿನ ರಾ.ಸೇ.ಯೋ. ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿದರು. ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ವಂದಿಸಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page