Connect with us

MANGALORE

“ಮಂಗಳೂರು ಯೂನಿವರ್ಸಟಿ ಕೆರಿಯರ್ ಸೆಂಟರ್” ಆಪ್ ಶುಭಾರಂಭ

Published

on

ಮಂಗಳೂರು: “ನ್ಯೂಮರೋ ಉನೋ ಪಾರ್ಟ್ ನರ್ಸ್” ಸಹಯೋಗದೊಂದಿಗೆ ಮಂಗಳೂರು ಯೂನಿವರ್ಸಿಟಿ ಕೆರಿಯರ್ ಸೆಂಟರ್ ಅಪ್ಲಿಕೇಶನ್ ಅನ್ನು ಇಂದು ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಶುಭಾರಂಭಗೊಳಿಸಲಾಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಪ್ರಾಸ್ತಾವಿಕ ಮಾತನ್ನಾಡಿದ ನ್ಯೂಮರೋ ಉನೋ ಸಂಸ್ಥೆಯ ಎಂ.ಡಿ. ಶಿವ್ ಬಸವ್ ಅವರು, “ಕೆರಿಯರ್ ಸೆಂಟರ್ ಒಂದು ಸ್ಪೆಷಲಿಸ್ಟ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು ಇದು ವಿದ್ಯಾರ್ಥಿಗಳ ಪ್ರೊಫೈಲ್ ಬಿಲ್ಡಿಂಗ್ ಮೂಲಕ ಅವರಿಗೆ ಶಿಕ್ಷಣದ ಬಳಿಕ ಪ್ಲೇಸ್‌ಮೆಂಟ್‌ಗಳನ್ನು ಸುಗಮಗೊಳಿಸುತ್ತದೆ.

ಮಂಗಳೂರು ವಿಶ್ವವಿದ್ಯಾನಿಲಯ ಕೆರಿಯರ್ ಸೆಂಟರ್ (MUCC) ಒಂದು ಸಮಗ್ರ ಕ್ಲೌಡ್ ಆಧಾರಿತ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಆಗಿದ್ದು ಇದು ವಿಶ್ವವಿದ್ಯಾಲಯ, ಕಾಲೇಜುಗಳು, ವಿದ್ಯಾರ್ಥಿಗಳು, ಕಾರ್ಪೊರೇಟ್‌ ಕಂಪೆನಿಗಳು, ಕೋರ್ಸ್ ಪೂರೈಕೆದಾರರು, ಪ್ರಮಾಣಪತ್ರ ಏಜೆನ್ಸಿಗಳನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಈ ಮೂಲಕ ಉದ್ಯೋಗ ಪ್ಲೇಸ್ ಮೆಂಟ್ ಗಳನ್ನು ಪಡೆಯಲು ಸಹಕಾರಿಯಾಗಿದೆ” ಎಂದರು.
ಬಳಿಕ ಮಾತಾಡಿದ ಮಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ಡಾ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು, “ವಿದ್ಯಾರ್ಥಿಗಳು ಮೌಲ್ಯಯುತವಾಗಿ ಶಿಕ್ಷಣ ಪಡೆದಾಗ ಯಶಸ್ಸು ಪ್ರಾಪ್ತಿಯಾಗುತ್ತದೆ. ಇದಕ್ಕಾಗಿ ನ್ಯೂಮರೋ ಉನೋ ಜೊತೆಗೆ ಕೆರಿಯರ್ ಸೆಂಟರ್ ಅಪ್ಲಿಕೇಶನ್ ಅನ್ನು ಆರಂಭಿಸಲಾಗಿದೆ.

ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಮೂಲಕ ತಮ್ಮ ಕೆರಿಯರ್ ಅನ್ನು ವೃದ್ಧಿಸಿ ತಮ್ಮ ಮುಂದಿನ ದಾರಿಯನ್ನು ಸುಗಮಗೊಳಿಸಿ ಜೀವನದಲ್ಲಿ ಯಶಸ್ಸು ಕಾಣಬಹುದು. ಕೆರಿಯರ್ ಸೆಂಟರ್ ಅಪ್ಲಿಕೇಶನ್ ಬಳಸುವಂತೆ ವಿಶ್ವವಿದ್ಯಾಲಯ ಅಧೀನದಲ್ಲಿರುವ ಎಲ್ಲಾ ಕಾಲೇಜುಗಳಿಗೆ ಈಗಾಗಲೇ ತಿಳಿಸಲಾಗಿದೆ. ಕಡ್ಡಾಯವಾಗಿ ಇದನ್ನು ಬಳಸಲೇಬೇಕು ಎಂದು ಹೇಳುತ್ತಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲವಾದಲ್ಲಿ ಇಂತಹ ಅಪ್ಲಿಕೇಶನ್ ಸಹಾಯ ಪಡೆದುಕೊಳ್ಳಿ” ಎಂದರು.
ಸಂಸ್ಥೆಯ ರಾಜೀವ್ ಮೆನನ್ ಮಾತನಾಡಿ, “ಡಿಗ್ರಿ ಪಡೆಯುವುದರಿಂದ ಮಾತ್ರ ಉದ್ಯೋಗ ಪಡೆಯಲಾಗುವುದಿಲ್ಲ. ವಿದ್ಯಾರ್ಥಿಗಳು ಅವರ ಬೌದ್ಧಿಕ ಸಾಮರ್ಥ್ಯ ಹಾಗೂ ಸ್ಕಿಲ್ ಅನ್ನು ಕೌಶಲ್ಯವನ್ನು ವೃದ್ಧಿಸುವುದು ಅತ್ಯವಶ್ಯವಾಗಿದೆ.

ತಮ್ಮ ಪ್ರೊಫೈಲ್ ಅನ್ನು ವೃದ್ಧಿಸಿ ಕಾಲೇಜ್ ಶಿಕ್ಷಣ ಪಡೆಯುವ ಅವಧಿಯಲ್ಲಿ ಹತ್ತಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮನ್ನು ತಾವು ಅಪ್ ಡೇಟ್ ಆಗಿಟ್ಟುಕೊಳ್ಳಬಹುದು. ಇಂಟರ್ನ್ ಶಿಪ್ ಮೂಲಕ ವಿವಿಧ ಕಂಪೆನಿಗಳು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರಿತು ನೇರವಾಗಿ ಸಂದರ್ಶನ ನಡೆಸಿ ಉದ್ಯೋಗ ಕಲ್ಪಿಸಲು ಸಾಧ್ಯವಾಗುತ್ತದೆ. ಕೆರಿಯರ್ ಸೆಂಟರ್ ಅಪ್ಲಿಕೇಶನ್ ಇಂತಹ ಹಲವಾರು ಅವಕಾಶಗಳನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ ಎಂದರು.
ಬಳಿಕ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರ ಜೊತೆಗೆ ಸಂವಾದ ನಡೆಯಿತು.
ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ. ಸುಬ್ರಮಣ್ಯ ಯಡಪಡಿತ್ತಾಯ, ನ್ಯೂಮರೋ ಉನೋ ಎಂ.ಡಿ. ಶಿವ್ ಬಸವ್, ಪ್ರೊ. ಜಯಶಂಕರ್, ಪ್ರೊ. ಮಂಜುನಾಥ್ ಪಟ್ಟಾಭಿ, ರಾಜೀವ್ ಮೆನನ್, ಉಪಸ್ಥಿತರಿದ್ದರು.

DAKSHINA KANNADA

ಮಂಗಳೂರಿನಿಂದ ಬೆಂಗಳೂರಿಗೆ 2 ಹೆಚ್ಚುವರಿ ವಿಮಾನಗಳ ಸಂಚಾರ

Published

on

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾ.30ರಿಂದ ಆರಂಭವಾಗಲಿರುವ ವಿಮಾನಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಲ್ಲಿ ರಾಜಧಾನಿ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಯಾನ ಸಂಪರ್ಕ ಕಲ್ಪಿಸಲಿದೆ.

ಪ್ರಸ್ತುತ ಇಂಡಿಗೋ 6 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ 2 ಸಹಿತ 8 ದೈನಂದಿನ ವಿಮಾನಗಳು ಸಂಚರಿಸುತ್ತಿದ್ದು, ಇಂಡಿಗೋದಿಂದ ಒಂದು ಹೆಚ್ಚುವರಿಯಾಗಿ ಒಟ್ಟು 9 ವಿಮಾನಗಳು ಸಂಚರಿಸಲಿವೆ. ಮಂಗಳೂರು-ಮುಂಬೈ ನಡುವೆ ಪ್ರತಿದಿನ ಮೂರು ಇಂಡಿಗೋ ಮತ್ತು ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಸಂಚರಿಸಲಿವೆ.

ಇಂಡಿಗೋ ಮತ್ತು ಏರ್’ ಇಂಡಿಯಾ ಎಕ್ಸ್‌ಪ್ರೆಸ್ ರಾಜಧಾನಿ ನವದೆಹಲಿಗೆ ತಲಾ ಒಂದು ದೈನಂದಿನ ವಿಮಾನ ಸಂಚರಿಸುತ್ತಿದೆ. ಹೈದರಾಬಾದ್‌ಗೆ ವಾರದಲ್ಲಿ ಮೂರು ದಿನ ಎರಡು ದೈನಂದಿನ ಮತ್ತು ಒಂದು ಹೆಚ್ಚುವರಿ ವಿಮಾನ ಸಂಚರಿಸುತ್ತಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ತನ್ನ ಸಾಪ್ತಾಹಿಕ ಎರಡು ವಿಮಾನಗಳನ್ನು ಕಣ್ಣೂರು ಮೂಲಕ ಬದಲು ಮಂಗಳೂರಿನಿಂದ ನೇರವಾಗಿ ಬಹ್ರೈನ್‌ಗೆ ಹಾರಾಟ ನಡೆಸಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬೈಗೆ ಪ್ರತಿದಿನ ಎರಡು, ಅಬುಧಾಬಿಗೆ ದೈನಂದಿನ ವಿಮಾನ, ವಾರಕ್ಕೆ ನಾಲ್ಕು ವಿಮಾನಗಳು, ದಮ್ಮಾಮ್ ಮತ್ತು ಮಸ್ಕತ್ ಗೆ ತಲಾ ನಾಲ್ಕು ವಿಮಾನಗಳು, ದೋಹಾಗೆ ಪ್ರತಿ ವಾರ ಎರಡು ವಿಮಾನಗಳು ಮತ್ತು ಜಿಡ್ಡಾ ಮತ್ತು ಕುವೈತ್‌ ಗೆ ಕ್ರಮವಾಗಿ ವಾರಕ್ಕೆ ಒಂದು ವಿಮಾನವನ್ನು ನಿರ್ವಹಿಸಲಿದೆ. ಇಂಡಿಗೋ 232 ಆಸನಗಳ ಎರ್‌ಬಸ್ ಎ -321 ನಿಯೋ ವಿಮಾನವನ್ನು ಈ ಪ್ರಮುಖ ವಲಯದಲ್ಲಿ ನಿಯೋಜಿಸುವುದರಿಂದ ಅಬುಧಾಬಿಗೆ ತನ್ನ ದೈನಂದಿನ ಹಾರಾಟದೊಂದಿಗೆ ಆಸನಗಳ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಅಂತೆಯೇ, ಇಂಡಿಗೋ ದುಬೈಗೆ ವಾರಕ್ಕೆ ನಾಲ್ಕು ಹಾರಾಟವನ್ನು ಮುಂದುವರಿಸಲಿದೆ. ಬೇಸಿಗೆ ವೇಳಾಪಟ್ಟಿ 2025 ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಮತ್ತು ಮಂಗಳೂರು ಮತ್ತು ಪ್ರಮುಖ ಸ್ಥಳಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

Continue Reading

DAKSHINA KANNADA

ಅಕ್ರಮ ಗೋ ಸಾಗಾಟ ಗೋಹತ್ಯೆ ನಿಲ್ಲಿಸಲು ಒತ್ತಾಯ; ಪೊಲೀಸ್ ವೈಫಲ್ಯದ ಬಗ್ಗೆ ವಿಶ್ವ ಹಿಂದೂ ಪರಿಷತ್ ಖಂಡನೆ

Published

on

ಮಂಗಳೂರು : ಜಿಲ್ಲೆಯಾದ್ಯಂತ ಕಾನೂನು ಕಾಯ್ದೆಯನ್ನು ಮೀರಿ ನಿತ್ಯ ನೂರಾರು ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ಮಾಡಲಾಗುತ್ತಿದೆ. ಗೋ ಮಾಂಸ ಮಾಫಿಯಾದವರು ಎಗ್ಗಿಲ್ಲದೆ ನಡೆಸುತ್ತಿರುವ ಈ ದಂಧೆಯನ್ನು ಮಟ್ಟ ಹಾಕಲು ಪೊಲೀಸರು ವಿಫಲರಾಗಿದ್ದಾರೆ. ತಕ್ಷಣ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಅಂತ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಮಂಗಳೂರಿನ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಹೆಚ್‌ಪಿ ಪ್ರಮುಖರು ಈ ವಿಚಾರ ತಿಳಿಸಿದ್ದಾರೆ.

ಕಳೆದ ಎರಡು ವಾರಗಳಲ್ಲಿ ನಾಲ್ಕು ಕಡೆಯಲ್ಲಿ ಬಜರಂಗದಳದ ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸರು ಒಂದು ಟನ್ ಗೂ ಅಧಿಕ ಗೋ ಮಾಂಸ ಜಪ್ತಿ ಮಾಡಿದ್ದಾರೆ. ನಗರದ ಹತ್ತಾರು ಕಡೆಗಳಲ್ಲಿ ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿದ್ದು ಅಕ್ರಮವಾಗಿ ಗೋವಧೆ ಮಾಡಲಾಗುತ್ತಿದೆ. ಆದ್ರೆ ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋ ಮಾಂಸ ಜಪ್ತಿಯ ವಿಚಾರದಲ್ಲೂ ವಿಶ್ವ ಹಿಂದೂ ಪರಿಷತ್ ಕೆಲವೊಂದು ಬೇಡಿಕೆ ಇಟ್ಟಿದ್ದು, ಅಕ್ರಮ ಗೋ ಮಾಂಸ ಕದ್ದ ಗೋವಿನಿಂದ ಆಗಿದ್ದ ಎಂಬ ಬಗ್ಗೆ ತನಿಖೆ ನಡೆಸಬೇಕು. ಮಾಂಸದ ಅಂಗಡಿಗೆ ಲೈಸೆನ್ಸ್ ಪಡೆದು ಗೋ ಮಾಂಸ ಮಾರಾಟ ಮಾಡುವುದಕ್ಕೂ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಗೋ ರಕ್ಷಾ ಪ್ರಮುಖ್ ಸುನಿಲ್ ಹಾಗೂ ಜಿಲ್ಲಾಧ್ಯಕ್ಷ ಎಚ್ ಕೆ ಪುರುಷೋತ್ತಮ ಸಹಿತ ಹಲವು ವಿಹೆಚ್‌ಪಿ ಬಜರಂಗದಳ ಪ್ರಮುಖರು ಈ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಮಂಗಳೂರು : ಇಂದಿನಿಂದ ಭಟ್ರಕೋಡಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಆರಂಭ

Published

on

ಮಂಗಳೂರು : ನಗರದ ನೀರುಮಾರ್ಗ ಸಮೀಪದ ಪಡು ಭಟ್ರಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದಿನಿಂದ (ಮಾ.27) ಆರಂಭಗೊಂಡು ಮಾ.30ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಡಾ ವೈ ಭರತ್ ಶೆಟ್ಟಿ ತಿಳಿಸಿದ್ದಾರೆ.

ನಿನ್ನೆ (ಮಾ.26) ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಭರತ್ ಶೆಟ್ಟಿ, “ಮಾ.27ರಂದು ಬೆಳಿಗ್ಗೆ 8ರಿಂದ ಆಚಾರ್ಯಾದಿ ಋತ್ವಿಜರ ಆಗಮನವಾಗಿ, ಸಾಮೂಹಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ, 11ರಿಂದ ತೋರಣ ಮುಹೂರ್ತ, ಉಗ್ರಾಣಮುಹೂರ್ತ ನಡೆಯಲಿದೆ. ಪ್ರತಿನಿತ್ಯ ಅನ್ನಸಂತರ್ಪಣೆ, ಧಾರ್ಮಿಕ , ವೈದಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದ ಸಾಮಾಜಿಕ ಮುಖಂಡರು, ವಿವಿಧ ಮಠಗಳ ಶ್ರೀಗಳು, ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ಆಯೋಜನೆ ಮಾಡಲಾಗಿದೆ” ಎಂದು ವಿವರಿಸಿದರು.

ಇಂದು (ಮಾ.27) ಸಂಜೆ 3 ಗಂಟೆಗೆ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಳ್ಳಲಿದೆ. ಮಾರ್ಚ್‌ 30ರಂದು ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page