Connect with us

LATEST NEWS

ಮಂಗಳೂರು: ಮೇ 19ರಂದು ಮಸ್ಕತ್ ಒಮಾನ್ ನಲ್ಲಿ ‘ಸ್ವಾಮಿ ಕೊರಗಜ್ಜ’ ಹಾಗೂ ‘ಶ್ರೀ ಶನೀಶ್ವರ ಮಹಾತ್ಮೆ’ ತುಳು ಯಕ್ಷಗಾನ ತಾಳ ಮದ್ದಳೆ

Published

on

ಬಿರುವ ಜವನೆರ್ ಮಸ್ಕತ್ ಇವರು ಮೇ 19 ಶುಕ್ರವಾರದಂದು ಮಸ್ಕತ್ ಒಮಾನ್ ನಲ್ಲಿ “ಸ್ವಾಮಿ ಕೊರಗಜ್ಜ” ಹಾಗೂ “ಶ್ರೀ ಶನೀಶ್ವರ ಮಹಾತ್ಮೆ” ತುಳು ಯಕ್ಷಗಾನ ತಾಳ ಮದ್ದಳೆಯನ್ನು ಆಯೋಜಿಸಿದ್ದಾರೆ.

ಮಂಗಳೂರು: ಬಿರುವ ಜವನೆರ್ ಮಸ್ಕತ್ ಇವರು ಮೇ 19 ಶುಕ್ರವಾರದಂದು ಮಸ್ಕತ್ ಒಮಾನ್ ನಲ್ಲಿ “ಸ್ವಾಮಿ ಕೊರಗಜ್ಜ” ಹಾಗೂ “ಶ್ರೀ ಶನೀಶ್ವರ ಮಹಾತ್ಮೆ” ತುಳು ಯಕ್ಷಗಾನ ತಾಳ ಮದ್ದಳೆಯನ್ನು ಆಯೋಜಿಸಿದ್ದಾರೆ.ದಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನ ದಲ್ಲಿ ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ ಮಂಗಳೂರು ಇವರಿಂದ ನವರಸ ಭರಿತ ಎರಡು ತುಳು ಯಕ್ಷಗಾನ ಪ್ರಸಂಗಗಳು ಒಂದೇ ದಿನ ಪ್ರದರ್ಶನ ಕಾಣಲಿದೆ ಎಂದು ಬಿರುವ ಜವನೆರ್ ಸಂಘಟನೆಯ  ಮಾಧುರಿ ಸುವರ್ಣ ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಮಸ್ಕತ್ ನ ಬಿರುವ ಜವನೆರ್ ಸಂಘಟನೆಯು ಕಳೆದ ಒಂದು ದಶಕ ದಿಂದ ಮಸ್ಕತ್ ನಲ್ಲಿ ಸಾಮಾಜಿಕ, ಧಾರ್ಮಿಕ, ಸೇವಾ ಚಟುವಟಿಕೆ ಗಳನ್ನು ನಡೆಸಿಕೊಂಡು ಬಂದಿದ್ದು, ಈ ಮೊದಲು ಇದೇ ತಂಡವನ್ನು ಆಹ್ವಾನಿಸಿ ಒಮಾನ್ ರಾಷ್ಟ್ರದಲ್ಲಿ ಪ್ರಪ್ರಥಮ ಪೂಜಾ ಸಹಿತ “ಶನೀಶ್ವರ ಮಹಾತ್ಮೆ” ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸಿದ ಕೀರ್ತಿಗೆ ಭಾಜನವಾಗಿದೆ.

ಒಮಾನ್ ಬಿಲ್ಲವಾಸ್, ಬಂಟ್ಸ್ ಓಮನ್, ವಿಶ್ವಕರ್ಮ, ಗೌಡ ಸಾರಸ್ವತ ಬ್ರಾಹ್ಮಣ, ಮೊಗವೀರ ಒಮಾನ್ ಹಾಗೂ ತುಳು ಭಾಷಾ ಸಂಘಟನೆಗಳ ಸಹಕಾರ, ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಸಂಯೋಜನೆ ಮಾಡಲಾಗಿದೆ.

ಮೇ 19 ರಂದು ಬೆಳಿಗ್ಗೆ 8.30 ರಿಂದ 12.30 ರ ತನಕ ಹರೀಶ್ ಶೆಟ್ಟಿ ಸೂಡಾ ರಚನೆಯ “ಅಜ್ಜ ಕೊರಗಜ್ಜ” ತುಳು ತಾಳಮದ್ದಳೆ, ನಂತರ ಪ್ರಸಾದ ಭೋಜನ.

ಮಧ್ಯಾಹ್ನ 2.30 ರಿಂದ ಸಂಜೆ 7 ರ ತನಕ ಚಿನ್ಮಯ ದಾಸ ವಿರಚಿತ “ಶ್ರೀ ಶನೀಶ್ವರ ಮಹಾತ್ಮೆ” ವಿಕ್ರಮಾದಿತ್ಯ ಚರಿತ್ರೆ ಎಂಬ ಪುಣ್ಯ ಪ್ರಸಂಗ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ ಸ್ವರೂಪದಲ್ಲಿ ನಡೆಯಲಿದೆ.

ಕಳೆದ ಮೂರು ದಶಕಗಳಿಂದ ಶನಿ ಪೂಜಾ ಸಹಿತ ತಾಳಮದ್ದಳೆಯನ್ನು ಮಸ್ಕತ್, ದುಬೈ, ಅಬುದಾಬಿ, ಮುಂಬಯಿ, ಸಾಂಗ್ಲಿ ಸೇರಿ ದೇಶ ವಿದೇಶಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿರುವ ಕರಾವಳಿಯ ಪ್ರಸಿದ್ದ ಯಕ್ಷಗಾನ ತಂಡ ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ ಇದೀಗ ಎರಡನೇ ಬಾರಿ ಮಸ್ಕತ್ ನಲ್ಲಿ ಖ್ಯಾತ ಅರ್ಥಧಾರಿಗಳ ಸಮ್ಮಿಲನದೊಂದಿಗೆ ಕಾರ್ಯಕ್ರಮ ನೀಡಲು ಸನ್ನದ್ದವಾಗಿದೆ.

ತೆಂಕು ತಿಟ್ಟಿನ ಪ್ರಸಿದ್ದ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರ ಭಾಗವತಿಕೆಯಲ್ಲಿ ಎರಡೂ ಪ್ರಸಂಗಗಳು ಮಿಂಚಲಿವೆ.

ಹಿಮ್ಮೆಳ ದಲ್ಲಿ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ಭಾಸ್ಕರ ಭಟ್ ಕಟೀಲು ಸಹಕರಿಸಲಿದ್ದಾರೆ. ತಂಡದ ಪ್ರಧಾನ ಸಂಚಾಲಕ ಪಕ್ಷಿಕೆರೆ ಪದ್ಮನಾಭ ಶೆಟ್ಟಿಗಾರ್, ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ಶ್ರೀಪತಿ ಭಟ್ ಸಸಿಹಿತ್ಲು, ವಿಜಯ ಕುಮಾರ್ ಶೆಟ್ಟಿ ಮೊಯಿಲೊಟ್ಟು, ಸೀತಾರಾಮ್ ಕುಮಾರ್ ಕಟೀಲ್, ಸದಾಶಿವ ಆಳ್ವ ತಲಪಾಡಿ, ಕಾವಳಕಟ್ಟೆ ದಿನೇಶ್ ಶೆಟ್ಟಿ , ದಯಾನಂದ ಜಿ ಕತ್ತಲ್ ಸ್ಸಾರ್, ಪ್ರಸನ್ನ ಶೆಟ್ಟಿ ಅತ್ತೂರು, ಪುಷ್ಪರಾಜ ಕುಕ್ಕಾಜೆ, ರಾಮಚಂದ್ರ ಮುಕ್ಕ ಪಾಲ್ಗೊಳ್ಳಲಿದ್ದಾರೆ.

ಇದು ತುಳು ಭಾಷೆಯ ಸೊಗಡು, ಅಜ್ಜ ಕೊರಗಜ್ಜನ ಸಂದಿ ಪಾರ್ದನದ ತಿರುಳು, ಪುರಾಣ ಪುಣ್ಯ ಕಥಾನಕಕ್ಕೆ ಹೊಸ ಮೆರುಗು ನೀಡುವ ನವರಸ ಭರಿತ ಕಾರ್ಯಕ್ರಮವಾಗಿದೆ.

ಮಸ್ಕತ್ ನಲ್ಲಿ ನೆಲೆಸಿರುವ ಎಲ್ಲಾ ಸಮುದಾಯದ ಕಲಾಸಕ್ತರು ಪಾಲ್ಗೊಂಡು ಸಹಕರಿಸಬೇಕಾಗಿ ಬಿರುವ ಜವನೆರ್ ಮಸ್ಕತ್ ವಿನಂತಿಸಿದ್ದಾರೆ.

ದಾಮೋದರ್ ಕುಂದರ್ ಮಸ್ಕತ್, ಸುಹಾನ್ ಸುವರ್ಣ ಮಸ್ಕತ್, ಕದ್ರಿ ನವನೀತ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LATEST NEWS

ಪಾನಿಪುರಿ ತಿಂದು 31 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Published

on

ಮಂಗಳೂರು/ನಾಂದೇಡ್: ಪಾನಿಪುರಿ ತಿಂದು 31 ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್‌ ನಗರದಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪುರಿಯನ್ನು ತಿಂದ ಮಕ್ಕಳಿಗೆ ಕೆಲ ಹೊತ್ತಿನಲ್ಲೇ ವಾಂತಿಯಾಗಿದೆ. ಬಳಿಕ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರು.

ತಕ್ಷಣವೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಸ್ವಸ್ಥಗೊಂಡ 31 ವಿದ್ಯಾರ್ಥಿಗಳು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸೇರಿದವರು ಎನ್ನಲಾಗಿದೆ.

ಇದನ್ನೂ ಓದಿ: ಟ್ರೇಡ್‌ಮಾರ್ಕ್‌ ಅವಮಾನಿಸಿದ ಆರೋಪ; ಹೈಕೋರ್ಟ್‌ ಮೆಟ್ಟಿಲೇರಿದ ಆರ್‌ಸಿಬಿ

ಸದ್ಯ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿವೆ.

Continue Reading

LATEST NEWS

ವಿಮಾನ ಹೈಜಾಕ್ ಮಾಡಲು ಹೋಗಿ ಪ್ರಯಾಣಿಕನ ಗುಂಡೇಟಿಗೆ ಬ*ಲಿಯಾದ ಆಗಂತುಕ!

Published

on

ಮಂಗಳೂರು/ಬೆಲ್ಮೋಪನ್ : ಆಗಸದಲ್ಲಿ ಸಂಚರಿಸುತ್ತಿದ್ದ ವಿಮಾನವನ್ನು ಹೈಜಾಕ್ ಮಾಡುವ ಯತ್ನ ನಡೆದಿದೆ. ಆದರೆ, ಈ ವೇಳೆ ಪ್ರಯಾಣಿಕನೊಬ್ಬನ ಗುಂ*ಡಿಗೆ ಆ ಆಗಂತುಕ ಬ*ಲಿಯಾಗಿದ್ದಾನೆ. ಸ್ಯಾನ್ ಪೆಡ್ರೋಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

49 ವರ್ಷದ ಅಕಿನ್ಯೆಲಾ ಸಾವಾ ಟೇಲರ್ ಮೃ*ತ ಆಗಂತುಕ. ಚಾಕು ಹಿಡಿದಿದ್ದ ಅಮೆರಿಕದ ಪ್ರಜೆಯಾದ ಅಕಿನ್ಯೆಲಾ ಸಣ್ಣ ಟ್ರಾಫಿಕ್ ಏರ್ ವಿಮಾನವನ್ನು ಅಪಹರಿಸಲು ಯತ್ನಿಸಿದ್ದಾನೆ. ಚಾಕು ಹಿಡಿದು ವಿಮಾನದಲ್ಲಿದ್ದವರ ಮೇಲೆ ಹ*ಲ್ಲೆ ನಡೆಸಿದ್ದಾನೆ. ಈ ವೇಳೆ ಹಲವರು ಗಾ*ಯಗೊಂಡಿದ್ದು, ಆಗಂತುಕನ ದಾ*ಳಿಯಿಂದ ತಪ್ಪಿಸಿಕೊಳ್ಳಲು ವಿಮಾನದಲ್ಲಿದ್ದ ಮತ್ತೋರ್ವ ಪ್ರಯಾಣಿಕ ಆತನ ಮೇಲೆ ಗುಂ*ಡು ಹಾರಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.

ಆಗಿದ್ದೇನು?

ಅಕಿನ್ಯೆಲಾ ಸಾವಾ ಟೇಲರ್ ಆರಂಭದಲ್ಲಿ ಸಹ ಪ್ರಯಾಣಿಕರ ಜೊತೆ ಜಗಳವಾಡಿದ್ದಾನೆ. ನೋಡ ನೋಡುತ್ತಲೇ ಚಾಕು ಹೊರತೆಗೆದು ಇತರೆ ಪ್ರಯಾಣಿಕರ ಮೇಲೆ ದಾ*ಳಿ ಮಾಡಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ದಾ*ಳಿ ತಡೆಯಲು ಅದೇ ವಿಮಾನದಲ್ಲಿದ್ದ ಮತ್ತೋರ್ವ ಪ್ರಯಾಣಿಕ ಟೇಲರ್ ಮೇಲೆ ಗುಂ*ಡು ಹಾರಿಸಿದ್ದಾನೆ. ಈ ಸಂದರ್ಭ ಟೇಲರ್ ನೆ*ಲಕ್ಕುರುಳಿದ್ದಾನೆ. ಬಳಿಕ ವಿಮಾನದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಇದನ್ನೂ ಓದಿ :  ಭಾರೀ ಸದ್ದು ಮಾಡುತ್ತಿದೆ ‘ಜನಿವಾರ’ ಪ್ರಕರಣ ..! ಅಷ್ಟಕ್ಕೂ ಎಕ್ಸಾಂ ಹಾಲ್‌ನಲ್ಲಿ ನಡೆದಿದ್ದೇನು ..?

ಸಮೀಪದ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿದ್ದು, ವಿಮಾನವನ್ನು ಭದ್ರತಾ ಸಿಬ್ಬಂದಿ ನಿಯಂತ್ರಣಕ್ಕೆ ಪಡೆದಿದ್ದಾರೆ. ಟೇಲರ್‌ನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತಾದರೂ ಅಷ್ಟರಲ್ಲಾಗಲೇ ಆತ ಮೃ*ತಪಟ್ಟಿದ್ದ ಎಂದು ತಿಳಿದುಬಂದಿದೆ.

ಆತ ವಿಮಾನದೊಳಗೆ ಚಾ*ಕುವನ್ನು ಹೇಗೆ ತಂದ ಎಂಬ ಪ್ರಶ್ನೆ ಉದ್ಭವಿಸಿದೆ. ಸದ್ಯ, ಟೇಲರ್ ಮೇಲೆ ಗುಂ*ಡು ಹಾರಿಸಿದ ಪ್ರಯಾಣಿಕನನ್ನು ಹೀರೋ ಎಂದು ಹಲವರು ಹೊಗಳುತ್ತಿದ್ದಾರೆ.

Continue Reading

LATEST NEWS

ಭಾರೀ ಸದ್ದು ಮಾಡುತ್ತಿದೆ ‘ಜನಿವಾರ’ ಪ್ರಕರಣ ..! ಅಷ್ಟಕ್ಕೂ ಎಕ್ಸಾಂ ಹಾಲ್‌ನಲ್ಲಿ ನಡೆದಿದ್ದೇನು ..?

Published

on

ಬ್ರಾಹ್ಮಣ ಸಮುದಾಯಕ್ಕೆ ಜನಿವಾರ ಅಥವಾ ಯಜ್ಞೋಪವೀತ ಎಂಬುವುದು ಬಹಳ ಮಹತ್ವದ್ದಾಗಿದೆ. ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಗಾಯತ್ರಿ ಮಂತ್ರ ದೀಕ್ಷೆಯ ಜತೆಗೆ ಬ್ರಾಹ್ಮಣ ವಟುಗಳಿಗೆ ಧಾರಣೆ ಮಾಡಿಸುವ 3 ಎಳೆಗಳುಳ್ಳ ಪವಿತ್ರ ದಾರವೇ ‘ಜನಿವಾರ’. ಅದನ್ನು ಧರಿಸಿದ ನಂತರ ಆತ ಗಾಯತ್ರಿ ಮಂತ್ರ ಉಪಾಸನೆ ಮಾಡಲು, ವೇದಗಳನ್ನು ಕಲಿಯಲು, ಯಜ್ಞ ಮಾಡಲು ಅರ್ಹನಾಗುತ್ತಾನೆ. ಆದರೆ ಇದೀಗ ರಾಜ್ಯದಲ್ಲಿ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡುವಂತಹ ಘಟನೆಗಳು ನಡೆದಿದೆ. ಒಂದೆಡೆ ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಜನಿವಾರ ತುಂಡರಿಸಿ ಕಸದ ಬುಟ್ಟಿಗೆ ಎಸೆದರೆ ಇನ್ನೊಂದೆಡೆ ಬೀದರ್​​​ನಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ವಂಚಿಸಿದ್ದಾರೆ. ಸದ್ಯ, ರಾಜಕೀಯವಾಗಿಯೂ ಭಾರೀ ಸದ್ದು ಮಾಡುತ್ತಿರುವ ‘ಜನಿವಾರ’ ಪ್ರಕರಣದ ಸಮಗ್ರ ಮಾಹಿತಿ ಇಲ್ಲಿದೆ.

ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ ಎಂದು ಪೋಷಕರು ಆರೋಪಿಸಿದ್ದು, ಎರಡೂ ಘಟನೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಮತ್ತು ಕೈಗೆ ಕಟ್ಟಿದ್ದ ಕಾಶಿ ದಾರವನ್ನು ತೆಗೆಸಿ ಅಧಿಕಾರಿಗಳು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಂತೆಯೇ ಬೀದರ್‌ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿಲ್ಲ. ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಹಾಸಭಾದ ಅಧ್ಯಕ್ಷ ಎಸ್​​ ರಘುನಾಥ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಪ್ರತಿಭಟನೆಗೂ ಕರೆ ನೀಡಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿಗಳ ಜನಿವಾರ ತೆಗಿಸಿದ ಸಿಬ್ಬಂದಿ; ಬ್ರಾಹ್ಮಣ ಸಮುದಾಯದಿಂದ ಭಾರೀ ಆಕ್ರೋಶ

ರಾಜ್ಯ ಸರ್ಕಾರ ಹಾಗೂ ಸಚಿವರು ಹೇಳಿದ್ದೇನು ?

ಬೀದರ್ ಹಾಗೂ ಶಿವಮೊಗ್ಗದ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ” ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ, “ಜನಿವಾರ ತೆಗೆಸಿದ ಕ್ರಮದ ವಿರುದ್ಧ ಹಿಂದೂಗಳು ಒಂದಾಗಿ ಹೋರಾಟ ಮಾಡಬೇಕು ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಹೇಳಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸಿ ಕ್ರಮಕ್ಕೆ ಸೂಚಿಸುತ್ತೇವೆ” ಎಂದು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಕರೆ ನೀಡಿದ್ದಾರೆ.

ರಾಜ್ಯದಾದ್ಯಂತ ಹೋರಾಟಕ್ಕೆ ಕರೆ :

ಜನಿವಾರ ತೆಗೆಸಿದ ವಿಚಾರವಾಗಿ ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕರೆ ನೀಡಿದೆ. ಈ ವಿಚಾರವಾಗಿ ಬೆಂಗಳೂರಿನ ಪ್ರೆಸ್ ​ಕ್ಲಬ್​ನಲ್ಲಿ ನಾಳೆ (ಏ.19) ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಮಾಹಿತಿ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page