Connect with us

DAKSHINA KANNADA

ಮಳಲಿ ವಿವಾದ: ಮಸೀದಿ ಕಮಿಟಿಯ ಪ್ರಮುಖರ ಭೇಟಿಗೆ ಸಿದ್ಧತೆ ನಡೆಸುತ್ತಿರುವ ವಿಹಿಂಪ

Published

on

ಮಂಗಳೂರು: ಮಳಲಿ ವಿವಾದಿತ ಮಸೀದಿ ಜಾಗದ ಕುರಿತು ಎರಡು ದಿನಗಳ ಹಿಂದೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ಶೈವ ಸಾನ್ನಿಧ್ಯ ಗೋಚರಿಸಿದೆ. ಈ ವಿಚಾರದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಲು ವಿಶ್ವಹಿಂದೂ ಪರಿಷತ್ ಎಚ್ಚರಿಕೆ ಹೆಜ್ಜೆ ಇರಿಸಲು ತೀರ್ಮಾನಿಸಿದೆ.

ಮಸೀದಿಯಲ್ಲಿ ದೇವ ಸಾನಿಧ್ಯ ಬಗ್ಗೆ ಹೆಚ್ಚಿನ ಶೋಧನೆ ನಡೆಸಲು ಅಷ್ಟಮಂಗಲ ಪ್ರಶ್ನೆಗೆ ನಿರ್ಧರಿಸಿರುವ ವಿಶ್ವಹಿಂದೂ ಪರಿಷತ್, ಅದಕ್ಕೂ ಮೊದಲು ಮಸೀದಿ ಪ್ರಮುಖರ ಭೇಟಿಗೆ ಮುಂದಾಗಿದೆ.


ಸೌಹಾರ್ದತೆ ಹೆಜ್ಜೆಯ ಮೊದಲ ಭಾಗವಾಗಿ ಹೋರಾಟಕ್ಕೆ ಸ್ಥಳೀಯರು, ಹಿ೦ದೂ ಸ೦ತರು, ಮುಖಂಡರನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಿ ಬಳಿಕ ಮಸೀದಿ ಪ್ರಮುಖರ ಭೇಟಿಗೆ ಚಿಂತನೆ ನಡೆಸಿದೆ.

ಮಸೀದಿ ಪ್ರಮುಖರನ್ನು ಭೇಟಿ ಮಾಡಿ ಅವರಿಗೆ ತಾಂಬೂಲ ಪ್ರಶ್ನೆಯಲ್ಲಿ ಕ೦ಡುಬಂದಂತೆ ಮಸೀದಿಯಲ್ಲಿ ಗುರು ಮಠದ ಗೋಚರದ ಬಗ್ಗೆ ಮನವರಿಕೆ ಮಾಡಿ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡುವಂತೆ ಕೋರಿಕೆ ಸಲ್ಲಿಸಲು ತೀರ್ಮಾನಿಸಿದೆ.


ವಿಹಿಂಪ ಮಸೀದಿ ಸ್ವಾಧೀನ ಹೋರಾಟದಿಂದ ಅಶಾಂತಿಗೆ ಕಾರಣವಾಗಬಾರದು. ಹಾಗಾಗಿ ಈ ವಿಚಾರದಲ್ಲಿ ಅಗತ್ಯ ದಾಖಲೆ ಸಹಿತ ಸೂಕ್ಷ್ಮ ಹೆಜ್ಜೆ ಇರಿಸಬೇಕಾಗುತ್ತದೆ.

ಹೀಗಾಗಿ ಅವಕಾಶಗಳನ್ನು ಮುಕ್ತವಾಗಿ ಇರಿಸಿಕೊಳ್ಳಲು ತೀರ್ಮಾನಿಸಿದೆ. ಆದರೆ ಯಾವುದೇ ಕಾರಣಕ್ಕೂ ಮಸೀದಿಯಲ್ಲಿರುವ ದೇವ ಸಾನ್ನಿಧ್ಯ ಕೈ ತಪ್ಪಬಾರದು ಎಂದು ಯೋಜನೆ ರೂಪಿಸಲಾಗುತ್ತಿದೆ.

ಇದೇ ವೇಳೆ ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ದೈವ ಸಾನಿಧ್ಯ ಪತ್ತೆಯಾದ ಬೆನ್ನಲ್ಲೇ ಸಮೀಪದ ಗುರುಪುರ ಜಂಗಮ ಮಠಕ್ಕೆ ವಿಶ್ವಹಿಂದೂ ಪರಿಷತ್ ನಿಯೋಗ ಭೇಟಿ ನೀಡಿದೆ. ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ವೇಳೆ ಜಂಗಮ ಮಠದ ಐತಿಹಾಸಿಕ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಅಲ್ಲದೆ ಮುಂದಿನ ಹೋರಾಟಗಳ ಬಗ್ಗೆ ಸ್ವಾಮೀಜಿ ಜತೆ ಸುದೀರ್ಘ ಚರ್ಚೆ ನಡೆಸಿದರು. ಇದೇ ವೇಳೆ ಮಸೀದಿ ಸಂಬಂಧ ವಿಹಿಂಪ ನಡೆಸುವ ಹೋರಾಟಕ್ಕೆ ಮಠದ ಬೆಂಬಲ ಕೋರಲಾಯಿತು.


ಮಳಲಿ ಮಸೀದಿಯಲ್ಲಿ ದೈವ ಸಾನಿಧ್ಯ ಇದ್ದ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಇದೇ ವೇಳೆ ಟಿಪ್ಪು ಸುಲ್ತಾನ್ ಸಹಚರನ ದಾಳಿಯಿಂದ ಮಳಲಿ ಮಠ ನಾಶವಾದ ಬಗ್ಗೆ ಜಂಗಮ ಮಠದ ಪುಸ್ತಕದಲ್ಲಿ ಸ್ಫೋಟಕ ಅಂಶವೊಂದು ಇದೆ ಎನ್ನಲಾಗುತ್ತಿದ್ದು,

2000ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿ ಟಿಪ್ಪು ಸಹಚರನ ದಾಳಿಯ ಬಗ್ಗೆ ಉಲ್ಲೇಖವಾಗಿದೆ. ಮಳಲಿ ಮಸೀದಿ ಜಾಗದಲ್ಲಿದ್ದ ಶೈವ ಸಂಪ್ರದಾಯದ ಮಠಕ್ಕೆ ಟಿಪ್ಪು ಸಹಚರ ಶೇಖ್ ಆಲಿ ನವಾಬ ದಾಳಿ ನಡೆಸಿದ್ದ. ಮಂಗಳೂರಿನಲ್ಲಿ 64 ಲಿಂಗಾಯತ ಮಠಗಳ ಪೈಕಿ 21 ಮಠಗಳು ನಾಶವಾಗಿವೆ.

ಇದೇ ದಾಳಿಗೆ ತುತ್ತಾಗಿ ಮಸೀದಿ ಜಾಗದ ಲಿಂಗಾಯತ ಮಠವೂ ನಾಶವಾದ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಜೊತೆಗೆ ಮಳಲಿ ಮಸೀದಿ ವಾಸ್ತುಶಿಲ್ಪ ಮತ್ತು ಗುರುಪುರ ಲಿಂಗಾಯತ ಜಂಗಮ ಮಠದ ವಾಸ್ತುಶಿಲ್ಪಕ್ಕೂ ಸಾಮ್ಯತೆ ಕಂಡುಬಂದಿದೆ.

ಮೇಲ್ಛಾವಣಿ, ಬಾಗಿಲುಗಳ ಶಿಲ್ಪಕಲೆಗಳಲ್ಲಿ ಭಾರೀ ಸಾಮ್ಯತೆ ಇದ್ದು, ಮಳಲಿಯ ಶೈವ ಮಠಕ್ಕೆ ದಾಳಿ ನಡೆಸಿ ಟಿಪ್ಪು ಮಸೀದಿ ಕಟ್ಟಿಸಿರುವ ಶಂಕೆಯನ್ನು ರುದ್ರಮುನಿ ಸ್ವಾಮೀಜಿ ವ್ಯಕ್ತಪಡಿಸುತ್ತಾರೆ.

DAKSHINA KANNADA

ಉಡುಪಿ : ಪತ್ರಕರ್ತ ರಾಮ್ ಅಜೆಕಾರ್ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ

Published

on

ಉಡುಪಿ : ಕನ್ನಡ ರಿಪೋರ್ಟರ್ ರಾಮ್ ಅಜೆಕಾರ್‌ ಕಾಸರಗೋಡು ಜಿಲ್ಲೆಯ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಆಯಕೆಯಾಗಿದ್ದಾರೆ.

ಹಿರಿಯ ಉದ್ಯಮಿ ಅಶ್ರಫ್ ಷಾ ಮಂತೂರು ಅವರ ದತ್ತಿನಿಧಿಯಿಂದ ನೀಡಲಾಗುವ ಪ್ರಶಸ್ತಿಗೆ ಪತ್ರಕರ್ತ ರಾಮ್ ಅಜೆಕಾರ್ ವರ ‘ಭಗೀರಥ ಅಪ್ಪಿಯಣ್ಣನ ಹೋರಾಟಕ್ಕೆ ಜಯ ಸಿಕ್ಕೀತೇ?’ ಶೀರ್ಷಿಕೆಯಡಿಯ ಸುದ್ಧಿ ಆಯ್ಕೆಯಾಗಿದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಈ ಸುದ್ಧಿ ಬಿಡುಗಡೆಯಾಗಿತ್ತು.

ದತ್ತಿನಿಧಿಯಿಂದ ನೀಡಲಾಗುವ ಈ ಪ್ರಶಸ್ತಿಯು ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ ೩ರಂದು ಸೀತಾಂಗೋಳಿಯ ಎಲೈನ್ಸ್ ಸಭಾಂಗಣದಲ್ಲಿ ನಡೆಯಲಿದೆ.

Continue Reading

DAKSHINA KANNADA

ಮಂಗಳೂರು : ವಕ್ಫ್ ಕಾಯ್ದೆ ವಿರುದ್ಧ ನಡೆಯಬೇಕಿದ್ದ ಪ್ರತಿಭಟನೆ ಮುಂದೂಡಿಕೆ

Published

on

ಮಂಗಳೂರು :ಈಗಾಗಲೇ ವಕ್ಫ್ ತಿದ್ದುಪಡಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದು, ಈ ಮಸೂದೆಯ ವಿರುದ್ಧ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಎ.29ರಂದು ಕೂಳೂರು ಡೆಲ್ಟಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿತ್ತು. ಆದರೆ ಈಗ ಅಚಾನಕ್‌ ಆಗಿ ಆ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್‌ರ ನಿವಾಸದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮೇ 16ರ ಶುಕ್ರವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಸಲಾಗಿದೆ ಎಂದು ಉಪಾಧ್ಯಕ್ಷ ಕೆ.ಅಶ್ರಫ್ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಲಹೆಗಾರರು ಪಾಲ್ಗೊಂಡಿದ್ದರು.

Continue Reading

DAKSHINA KANNADA

ಕ್ರಿಶ್ಚಿಯನ್‌ ಧರ್ಮಗುರು ಪೋಪ್ ಫ್ರಾನ್ಸಿಸ್ ವಿಧಿವಶ; ಖಾದರ್ ಸಂತಾಪ

Published

on

ಮಂಗಳೂರು : ಪೋಪ್‌ ಫ್ರಾನ್ಸಿಸ್​​ ಅಂದರೆ ಜನರಿಗೆ ನೆರಳು ಕೊಡುವ ಮರ. ನಿಸ್ವಾರ್ಥ ಮನಸ್ಸಿನ ದೊರೆ. ತಂಪಾಗಿ ಮಳೆ ಸುರಿಯುವ ಸೋನೆ, ಹಿಂದುಳಿದ ಬಡಜನರ ಪಾಲಿಗೆ ಆತನೇ ದೈವ. ಬದುಕಿನಲ್ಲಿನ ಸುಖ ಶಾಂತಿ, ನೆಮ್ಮದಿಗಳಿರುವ ಆಟಕ್ಕೆ ಫ್ರಾನ್ಸಿಸ್​​ ಚಾಂಪಿಯನ್.ಈಗಲೂ ವ್ಯಾಟಿಕನ್ ಸಿಟಿಯ ಮಂದಿಗೆ ಪೋಪ್​ ಫ್ರಾನ್ಸಿಸ್​​ ಚಾಂಪಿಯನ್ನೇ. ಅಂತಹ ಮಹಾನ್ ವ್ಯಕ್ತಿ, 88 ವರ್ಷದ ಪೋಪ್ ಫ್ರಾನ್ಸಿಸ್ ಡಬಲ್​​ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು.

ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಅಂಗಳದಲ್ಲಿ ಸಾವಿರಾರು ಭಕ್ತರು ಸೇರಿ “ಹ್ಯಾಪಿ ಈಸ್ಟರ್” ಆಚರಣೆ ನಡೆಸುವಾಗ, ಅವರನ್ನ ಹಾರೈಸಲು ಫ್ರಾನ್ಸಿಸ್ ವೀಲ್‌ಚೇರ್‌ನಲ್ಲಿ ಹೊರಬಂದಿದ್ದ ​​. ಅದೇ ಅವರ ಕೊನೆ ದರ್ಶನ ಎಂದು ಯಾರಿಗೂ ತಿಳಿದಿರಲಿಲ್ಲ. ಯಾಕೆಂದರೆ ಡಬಲ್ ನ್ಯುಮೋನಿಯಾ ಚಿಕಿತ್ಸೆ ಪಡೆದು ಮನೆಗೆ ಬಂದು ವಾರಗಳು ಕಳೆದಿದಷ್ಟೇ. ನಿನ್ನೆ (ಏ.21) ಪೋಪ್​ ಫ್ರಾನ್ಸಿಸ್ ಇಹಲೋಕ ತ್ಯಜಿಸಿದ್ದಾರೆ. ಫ್ರಾನ್ಸಿಸ್ ನಿಧನಕ್ಕೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ :  ಕ್ಯಾಥೊಲಿಕ್‌ ಕ್ರೈಸ್ತರ ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

“ಆಧ್ಯಾತ್ಮಿಕ ಗುರುಗಳಾಗಿದ್ದ ಫ್ರಾನ್ಸಿಸ್ ಸಹಾನುಭೂತಿ, ಸರಳತೆ, ನ್ಯಾಯ ಮತ್ತು ಶಾಂತಿ ಬಯಸುವ ನೈತಿಕ ಧ್ವನಿಯಾಗಿದ್ದರು. ಪೋಪ್ ಆಗಿ ಅವರ ಸರಳ ಜೀವನ ಮತ್ತು ಬಡವರ ಬಗ್ಗೆ ಪ್ರೀತಿ, ವಿಶೇಷ ಕಾಳಜಿ, ಪ್ರತಿಯೊಬ್ಬ ಮನುಷ್ಯನ ಘನತೆಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದರು. ಫ್ರಾನ್ಸಿಸ್ ಅವರ ಸೌಮ್ಯ ಸ್ವಭಾವ ಮತ್ತು ವಿವೇಕಪೂರ್ಣ ಮಾತುಗಳಿಗೆ ಬಹಳ ಆಕರ್ಷಿತನಾಗಿದ್ದೆ. ಈ ಉದಾತ್ತ ಗುಣಗಳು ನನ್ನಲ್ಲಿ ಮಾತ್ರವಲ್ಲ ಜಗತ್ತಿನ ಕೋಟ್ಯಂತರ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿಯಲಿವೆ” ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರನ್ನು 2024ರ ಡಿಸೆಂಬರ್‌ನಲ್ಲಿ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದ ಕ್ಷಣಗಳನ್ನು ನೆನಪಿಸಿಕೊಂಡಿರುವ ಸ್ಪೀಕರ್ ಯು.ಟಿ.ಖಾದರ್ “ಪೋಪ್ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಸ್ವೀಕರಿಸಿರುವುದು ಬದುಕಿನ ಅಮೂಲ್ಯ ಕ್ಷಣವಾಗಿ ಸದಾ ನೆನಪಿನಲ್ಲಿ ಉಳಿಯಲಿದೆ. ಅವರು ನೀಡಿರುವ ಸಲಹೆಯು ತನ್ನ ಮೇಲೆ ಪ್ರಭಾವ ಬೀರಿದೆ. ಕರ್ನಾಟಕ ವಿಧಾನಸಭೆಯ ಸದಸ್ಯರು ಮತ್ತು ನಮ್ಮ ರಾಜ್ಯದ ಜನರ ಪರವಾಗಿ, ಸಂತಾಪ ವ್ಯಕ್ತಪಡಿಸುವೆನು. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ . ಅವರ ದಯೆ ಮತ್ತು ಏಕತೆಯ ಪರಂಪರೆ ಮಾನವತೆಗಾಗಿ ಬೆಳಕು ನೀಡುವ ದಾರಿಯಾಗಿ ಮುಂದುವರಿಯಲಿ ಎಂದು ನಾವು ಆಶಿಸುತ್ತೇವೆ” ಎಂದು ಖಾದರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page