Connect with us

ಪ್ರಗತಿಪರ ಚಿಂತಕ-ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಇನಿಲ್ಲ..!!

Published

on

ಪ್ರಗತಿಪರ ಚಿಂತಕ-ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಇನಿಲ್ಲ..!!

ಬೆಂಗಳೂರು : ಪ್ರಗತಿಪರ ಚಿಂತಕ-ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್‌ ಇಂದು ಬೆಳಗ್ಗೆ ಹೃದಯಾಘಾತದಿಂದಾಗಿ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ನಿನ್ನೆ ರಾತ್ರೀಯೇ. ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಇಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾಗಿದ್ದ ಮಹೇಂದ್ರ ಕುಮಾರ್‌ ಆರಂಭದ ದಿನಗಳಲ್ಲಿ ಭಜರಂಗ ದಳದಲ್ಲಿ ಗುರುತಿಸಿಕೊಂಡಿದ್ದರು.

ಆದರೆ, 2008ರ ಮಂಗಳೂರು ಚರ್ಚ್‌ ದಾಳಿ ಪ್ರಕರಣದ ನಂತರ ಅವರು ಬಜರಂಗ ದಳಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಕಳೆದ ಒಂದು ದಶಕದಿಂದ ನಿರಂತರವಾಗಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಬಜರಂಗದಳದ ಮೂಲಕ ತಮ್ಮ ಸಾಮಾಜಿಕ ಜೀವನ ಆರಂಭಿಸಿದ್ದ ಮಹೇಂದ್ರ ಕುಮಾರ್ ಬಳಿಕ ಸಂಘಟನೆಯನ್ನು ಬಿಟ್ಟು ಸರ್ವಧರ್ಮ ಸೌಹಾರ್ದ, ಸಾಮಾರಸ್ಯದ ಕುರಿತು ಕಾಳಜಿಯಿಂದ ದುಡಿಯುತ್ತಿದ್ದರು.

ರಾಜ್ಯದಾದ್ಯಂತ ಅಪಾರ ಜನಮನ್ನಣೆ ಗಳಿಸಿದ್ದರು. ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಮಂಚೂಣಿಯಲ್ಲಿದ್ದು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು.

ಇತ್ತೀಚೆಗೆ ನಮ್ಮ ಧ್ವನಿ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದ ಅವರು ಈ ಚಾನೆಲ್ ಮೂಲಕ ಕೇಂದ್ರ ಸರ್ಕಾರದ ಇಬ್ಬಗೆಯ ನೀತಿ, ಸಿಎಎ, ಎನ್‌ಆರ್‌ಸಿ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಅನೇಕ ನಡೆಗಳನ್ನು ಉಗ್ರವಾಗಿ ಟೀಕಿಸಿದ್ದರು.

ಆದರೆ, ಇವರ ಅಕಾಲಿಕ ಅಗಲಿಕೆ ಇದೀಗ ಪ್ರಗತಿಪರ ವಲಯದಲ್ಲಿ ಆಘಾತವನ್ನು ಉಂಟು ಮಾಡಿದೆ. ಮಹೇಂದ್ರ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಮಹೇಂದ್ರ ಕುಮಾರ್‌ ನಿಧನಕ್ಕೆ ಶಾಸಕ ಯು.ಟಿ ಖಾದರ್ ಸಂತಾಪ :

ಮಹೇಂದ್ರ ಕುಮಾರ್ ನಿಧನಕ್ಲೆ ಶಾಸಕ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.  ವ್ಯಕ್ತಿತ್ವ ಬದಲಿಸಿ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟು ಏಕತೆಯಿಂದ ಬದುಕುವ ವಾತವರಣ ನಿರ್ಮಾಣ ಮಾಡಿದ್ದರು. ತಪ್ಪು ಸಹಜ ಕ್ಷಮೆ ದೊಡ್ಡ ಗುಣ ಎಂಬ ಧ್ಯೇಯ ಇಟ್ಟುಕೊಂಡು ದೇಶಕ್ಕೆ ಕಂಠಕವಾಗಿದ್ದ ಎನ್.ಆರ್.ಸಿ, ಸಿ.ಎ.ಎ ವಿರೋಧಿಸಿ ರಾಜ್ಯದ ಮೂಲೆ ಮೂಲೆಗೂ ತೆರಳಿ ತನ್ನ ನಿಲುವನ್ನು ಜನವರಿಗೆ ಮನವರಿಕೆ ಮಾಡಿದ್ದರು. ಯುವ ಜನಾಂಗ ಇಂದು ಉತ್ತಮ ಮಾರ್ಗದರ್ಶಕ ನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಂತಾಪ ಸಂದೇಶದಲ್ಲಿ ಖಾದರ್ ಹೇಳಿದ್ದಾರೆ.

 

5 ತಿಂಗಳ ಹಿಂದೆ ಮಹೆಂದ್ರ ಕುಮಾರ್ ಅವರೊಂದಿಗೆ ನಮ್ಮ ಕುಡ್ಲ ವಾಹಿನಿ ನಡೆಸಿದ ನೇರಾಮಾತು..!!

Advertisement
Click to comment

Leave a Reply

Your email address will not be published. Required fields are marked *

LATEST NEWS

Watch video: ಉಗ್ರ ಆಮಿರ್ ನಾಝಿರ್‌ ವಾನಿ ಹ*ತ್ಯೆಗೂ ಮುನ್ನ ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

Published

on

ಮಂಗಳೂರು/ಶ್ರೀನಗರ: ಇವತ್ತು ಪುಲ್ವಾಮಾದ ಟ್ರಾಲ್​ನಲ್ಲಿ ಭಾರತೀಯ ಸೇನೆ ಜೈಶ್ ಏ ಮೊಹಮ್ಮದ್​ನ ಮೂವರು ಉಗ್ರರನ್ನ ಹೊಡೆದುರುಳಿಸಿದೆ. ಸೇನೆ, ಉಗ್ರರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಮೂವರ ಹತ್ಯೆಯಾಗಿದೆ.


ಆದರೆ, ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕ ತನ್ನ ಸಾವಿಗೂ ಮುನ್ನ ಆತನ ತಾಯಿಯೊಂದಿಗೆ ವಿಡಿಯೋಕಾಲ್ ಮೂಲಕ ಮಾತನಾಡಿದ್ದಾನೆ. ಅವನ ತಾಯಿ ಶರಣಾಗುವಂತೆ ಬೇಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಭಯೋತ್ಪಾದಕ ಅಮೀರ್ ನಜೀರ್‌ವಾನಿ ತನ್ನ ತಾಯಿಯೊಂದಿಗೆ ಮಾತನಾಡುವಾಗ ಎಕೆ 47 ಹಿಡಿದುಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‌ಕೌಂಟರ್; ಮೂವರು ಉಗ್ರರ ಹ*ತ್ಯೆ

ಕೊನೆಯ ವಿಡಿಯೋ ಕರೆಯಲ್ಲಿ, ಅಮೀರ್‌ನ ತಾಯಿ ಅವನಿಗೆ ಶರಣಾಗುವಂತೆ ಹೇಳಿದ್ದಾರೆ. ಆದರೆ ಅವನು ತನ್ನ ತಾಯಿ ಮಾತನ್ನು ನಿರಾಕರಿಸಿದ್ದಾನೆ. ಸೈನ್ಯ ಮುಂದೆ ಬರಲಿ, ನಂತರ ನಾನು ನೋಡುತ್ತೇನೆ ಎಂದು ಆತ ಉತ್ತರಿಸಿದ್ದಾನೆ.

Watch video

Continue Reading

LATEST NEWS

ಒಂದೇ ಕುಟುಂಬದ ಮೂವರ ಆತ್ಮಹ*ತ್ಯೆ ಪ್ರಕರಣ; ಎಸ್ಪಿ ಡಾ. ಅರುಣ್‌ ಹೇಳಿದ್ದೇನು?

Published

on

ಉಡುಪಿ: ಕೊರೊನಾ ನಂತರ ಸಂಕಷ್ಟಕ್ಕೆ ಸಿಲುಕಿದ ತಂದೆ ಮತ್ತು ಪುತ್ರ ಬ*ಲಿಯಾದ ಹೃದಯ ವಿದ್ರಾವಕ ಘಟನೆಯೊಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ಬಾವಿಗೆ ಹಾರಿ ತಂದೆ ಮತ್ತು ಮಗ ಮೃತ ಪಟ್ಟ ಘಟನೆ ಮತ್ತು ಇದಕ್ಕೆ ಕಾರಣವೇನೆಂಬುದರ ಕುರಿತಂತೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೃತ ಮಾಧವ ಮತ್ತು ಅವರ ಪುತ್ರ ಪ್ರಸಾದ್ ಬಸ್ರೂರು ಮೂರು ಕೈ ಬಳಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಪತ್ನಿ ತಾರಾ ಅವರು ಗೃಹಿಣಿಯಾಗಿ ಮನೆಯಲ್ಲಿಯೇ ಇರುತ್ತಿದ್ದರು. ಮಾಧವ ಅವರು ಕುಟುಂಬದ ಜತೆ ಸೇರಿ ಮೂರು ಸಂಘಗಳಿಂದ ಸಾಲ ಪಡೆದಿದ್ದು, ಕೊರೊನಾ ಮಹಾಮಾರಿಯ ಬಳಿಕ ಸಾಲ ಮರುಪಾವತಿ ಮಾಡಲು ಕಷ್ಟ ಪಡುತ್ತಿದ್ದರು. ನಿಗದಿತ ಸಮಯಕ್ಕೆ ಸಾಲ ಕಟ್ಟದೆ ಇರುವುದರಿಂದ ಮಾಧವ ಅವರು ನೊಂದಿದ್ದು, ಇದೇ ವಿಚಾರದಲ್ಲಿ ಯಾವಾಗಲೂ ಮನೆಯಲ್ಲಿ ‘ನಾನು ಸಾಯುತ್ತೇನೆ’ ಎಂದು ಹೇಳುತ್ತಿದ್ದರು. ಇಂದು ಬೆಳಗ್ಗೆ ಮಾಧವ ಅವರು ಎದ್ದವರು ಮನೆಯಲ್ಲಿ ಸುಮ್ಮನೇ ಇದ್ದು, ಸುಮಾರು 6 ಗಂಟೆ ವೇಳೆಗೆ ಮನೆಯ ಎದುರಿನ ಬಾವಿಗೆ ಹಾರಿದ್ದಾರೆ. ಆಗ ತಂದೆಯನ್ನು ರಕ್ಷಿಸಲು ಪುತ್ರ ಪ್ರಸಾದ್ ಕೂಡಾ ಬಾವಿಗೆ ಹಾರಿರುತ್ತಾನೆ. ಗಂಡ ಮತ್ತು ಮಗನನ್ನು ರಕ್ಷಿಸಲು ಪತ್ನಿ ತಾರಾ ಅವರು ಕೂಡಾ ಬಾವಿಗೆ ಹಾರಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನ; ತಂದೆ, ಮಗ ಸಾವು, ತಾಯಿ ಸ್ಥಿತಿ ಗಂಭೀರ

ಆದರೆ ಪತಿ ಮತ್ತು ಪುತ್ರ ನೀರಿನಲ್ಲಿ ಮುಳುಗಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ತಾರಾ ಅವರಿಗೆ ಈಜಲು ಬರುತ್ತಿದ್ದುದರಿಂದ ಬಾವಿಯಲ್ಲಿದ್ದ ಪೈಪ್ ನ್ನು ಹಿಡಿದುಕೊಂಡು ನಿಂತಿದ್ದರು. ಬಳಿಕ ಊರಿನವರು ಬಂದು ಆಕೆಯನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಪತಿ ಮಾಧವ (60) ಮತ್ತು ಪುತ್ರ ಪ್ರಸಾದ್ (23) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಾರಾ (55) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಎಸ್.ಪಿ. ಅರುಣ್‌ ಕುಮಾರ್‌ ತಿಳಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Continue Reading

LATEST NEWS

ತಿರುಪತಿಯಲ್ಲಿ ಮಿನಿ ಬಸ್ ಪಲ್ಟಿ; ಕಡಬದ ಮಹಿಳೆ ಸಾವು, ಹಲವರಿಗೆ ಗಾಯ

Published

on

ತಿರುಪತಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಿಂದ ತಿರುಪತಿಗೆ ತೆರಳಿದ್ದ ಯಾತ್ರಾರ್ಥಿಗಳಿದ್ದ ಮಿನಿ ಬಸ್ಸೊಂದು ತಿರುಪತಿ – ಶ್ರೀಕಾಳಹಸ್ತಿ ಹೆದ್ದಾರಿಯಲ್ಲಿ ಇಂದು ಭೀಕರ ಅಪಘಾತಕ್ಕೀಡಾದ ಪರಿಣಾಮ ಓರ್ವ ಮಹಿಳೆ ಮೃತ ಪಟ್ಟು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.

ಕಡಬ ತಾಲೂಕಿನ ಕೂಸಪ್ಪ ಎಂಬವರ ಪತ್ನಿ ಶೇಷಮ್ಮ (70) ಮೃತ ಪಟ್ಟವರು. ಕೈಕಂಬದ ತಿಲೈಶ್ (45) ಮತ್ತು ಕಮಲಾಕ್ಷಿ (60) ಸೇರಿದಂತೆ ಇತರ ಕೆಲವರು ತೀವ್ರ ಸ್ವರೂಪದ ಗಾಯಗೊಂಡಿದ್ದಾರೆ. ನಿವೃತ್ತ ಸೈನಿಕರಾದ ಸೋಮಶೇಖರ್, ಶೀನಪ್ಪ, ಕೂಸಪ್ಪ, ನಿಖಿಲ್, ತನುಷ್ ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೋಟ: ಟಿಟಿ ವಾಹನ ಪಲ್ಟಿ, 10 ಕ್ಕೂ ಹೆಚ್ಚು ಜನರಿಗೆ ಗಾಯ

ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬದ ಯಾತ್ರಾರ್ಥಿಗಳ ತಂಡವು ಮಂಗಳವಾರ ಗುಂಡ್ಯದಿಂದ ತಿರುಪತಿಗೆ ಪ್ಯಾಕೇಜ್ ಟೂರ್ ಬಸ್‌ನಲ್ಲಿ ತೆರಳಿತ್ತು. ಬುಧವಾರ ಸಂಜೆ ತಿರುಪತಿಯಲ್ಲಿ ತಮ್ಮ ನಿಗದಿತ ದರ್ಶನಕ್ಕೆ ಮುಂಚಿತವಾಗಿ, ಕರ್ನಾಟಕದ ಯಾತ್ರಿಕರು ಮೂರು ಮಿನಿ ಬಸ್‌ಗಳಲ್ಲಿ ಶ್ರೀಕಾಳಹಸ್ತಿಗೆ ತೆರಳುತ್ತಿದ್ದರು. ಈ ಸಂದರ್ಭ ಬಿಳಿನೆಲೆ ಕೈಕಂಬ ತಂಡವನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಫ್ಲೈ ಓವರ್‌ನಲ್ಲಿದ್ದಾಗ ನಿಯಂತ್ರಣ ತಪ್ಪಿ, ಡಿವೈಡರ್‌ ಗೆ ಢಿಕ್ಕಿ ಹೊಡೆದು ಪಲ್ಟಿಯಾಯಿತು ಎಂದು ತಿಳಿದು ಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page