Connect with us

DAKSHINA KANNADA

Ullala: ಕೇರಳಕ್ಕೆ ಗೋವಾ ಮದ್ಯ ಸಾಗಾಟ – ಆರೋಪಿ ಸೇರಿದಂತೆ 114 ಪೆಟ್ಟಿಗೆ ಮದ್ಯ, ವಾಹನ ವಶಕ್ಕೆ..!

Published

on

ಉಳ್ಳಾಲ: ಗೋವಾ ಮದ್ಯದ ಪೆಟ್ಟಿಗೆಗಳನ್ನು ಕೇರಳಕ್ಕೆ ಗೂಡ್ಸ್ ಟೆಂಪೋದಲ್ಲಿ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಮುಡಿಪು- ನೆತ್ತಿಲಪದವು ಎಂಬಲ್ಲಿ ಅಬಕಾರಿ ಪೊಲೀಸರು ಬಂಧಿಸಿ ಆತನಿಂದ ರೂ.6,87,720 ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹೊನ್ನಾವರ ನಿವಾಸಿ ರಾಧಾಕೃಷ್ಣ ಕಾಮತ್ ಯಾನೆ ಸದಾನಂದ ಕಾಮತ್ ಬಂಧಿತ. ಆರೋಪಿ ಅಶೋಕ್ ಲೈಲಾಂಡ್ ಗೂಡ್ಸ್ ಟೆಂಪೋದಲ್ಲಿ ಹೊರಭಾಗದಲ್ಲಿ ತೆಂಗಿನ ಗೆರಟೆಗಳನ್ನು ಇಟ್ಟು, ಒಳಗೆ ಮದ್ಯದ ಬಾಟಲಿಗಳನ್ನು ಇಟ್ಟು ಸಾಗಾಟ ನಡೆಸುತ್ತಿದ್ದ. ಮುಡಿಪು-ನೆತ್ತಿಲಪದವು ಮಾರ್ಗವಾಗಿ 114 ಪೆಟ್ಟಿಗೆಗಳಲ್ಲಿ ಗೋವಾ ಮದ್ಯ ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.

ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗ ನಿರ್ದೇಶನದಂತೆ, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ-ಅಧೀಕ್ಷಕ, ಉಪವಿಭಾಗ ಬಂಟ್ವಾಳ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ಮತ್ತು ಸಿಬ್ಬಂದಿ ಸುನಿಲ್ ಬೈಂದೂರು, ದೊಡ್ಡಪ್ಪ ಮತ್ತು ಸದಾಶಿವ ಹಕ್ಕ, ರವಿ ನಾರ್ವೇಕರ್, ಅರ್ಜುನ ಭಾಗೋಡಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.  2023ರ ಜು.9 ರಂದು 2484 ಲೀ ಅಕ್ರಮ ಸಾರಾಯಿ ಕೇರಳಕ್ಕೆ ಸಾಗಾಟ ನಡೆಸುವ ಸಂದರ್ಭ ಕಾಸರಗೋಡಿನಲ್ಲಿ ಕೇರಳದ ಪೊಲೀಸರು ಅಂದು ಬಂಧಿಸಿದ್ದರು. ತೆಂಗಿನ ಗೆರಟೆಗಳನ್ನು ಮೇಲಿಟ್ಟು, ಅದರೊಳಗೆ ಮದ್ಯದ ಬಾಟಲಿಗಳನ್ನಿಟ್ಟು ಕೊಂಡೊಯ್ಯುವ ಸಂದರ್ಭ ಬಂಧಿಸಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡ  ಕಾಮತ್ ಮತ್ತದೇ ಮಾದರಿಯಲ್ಲಿ ಅಕ್ರಮ ಸಾಗಾಟ ನಡೆಸುವ ಮೂಲಕ ಕರ್ನಾಟಕ ಅಬಕಾರಿ ಪೊಲೀಸರಿಂದ ಬಂಧಿತನಾಗಿದ್ದಾನೆ.

DAKSHINA KANNADA

ಮಂಗಳೂರಿನಿಂದ ಬೆಂಗಳೂರಿಗೆ 2 ಹೆಚ್ಚುವರಿ ವಿಮಾನಗಳ ಸಂಚಾರ

Published

on

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾ.30ರಿಂದ ಆರಂಭವಾಗಲಿರುವ ವಿಮಾನಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಲ್ಲಿ ರಾಜಧಾನಿ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಯಾನ ಸಂಪರ್ಕ ಕಲ್ಪಿಸಲಿದೆ.

ಪ್ರಸ್ತುತ ಇಂಡಿಗೋ 6 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ 2 ಸಹಿತ 8 ದೈನಂದಿನ ವಿಮಾನಗಳು ಸಂಚರಿಸುತ್ತಿದ್ದು, ಇಂಡಿಗೋದಿಂದ ಒಂದು ಹೆಚ್ಚುವರಿಯಾಗಿ ಒಟ್ಟು 9 ವಿಮಾನಗಳು ಸಂಚರಿಸಲಿವೆ. ಮಂಗಳೂರು-ಮುಂಬೈ ನಡುವೆ ಪ್ರತಿದಿನ ಮೂರು ಇಂಡಿಗೋ ಮತ್ತು ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಸಂಚರಿಸಲಿವೆ.

ಇಂಡಿಗೋ ಮತ್ತು ಏರ್’ ಇಂಡಿಯಾ ಎಕ್ಸ್‌ಪ್ರೆಸ್ ರಾಜಧಾನಿ ನವದೆಹಲಿಗೆ ತಲಾ ಒಂದು ದೈನಂದಿನ ವಿಮಾನ ಸಂಚರಿಸುತ್ತಿದೆ. ಹೈದರಾಬಾದ್‌ಗೆ ವಾರದಲ್ಲಿ ಮೂರು ದಿನ ಎರಡು ದೈನಂದಿನ ಮತ್ತು ಒಂದು ಹೆಚ್ಚುವರಿ ವಿಮಾನ ಸಂಚರಿಸುತ್ತಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ತನ್ನ ಸಾಪ್ತಾಹಿಕ ಎರಡು ವಿಮಾನಗಳನ್ನು ಕಣ್ಣೂರು ಮೂಲಕ ಬದಲು ಮಂಗಳೂರಿನಿಂದ ನೇರವಾಗಿ ಬಹ್ರೈನ್‌ಗೆ ಹಾರಾಟ ನಡೆಸಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬೈಗೆ ಪ್ರತಿದಿನ ಎರಡು, ಅಬುಧಾಬಿಗೆ ದೈನಂದಿನ ವಿಮಾನ, ವಾರಕ್ಕೆ ನಾಲ್ಕು ವಿಮಾನಗಳು, ದಮ್ಮಾಮ್ ಮತ್ತು ಮಸ್ಕತ್ ಗೆ ತಲಾ ನಾಲ್ಕು ವಿಮಾನಗಳು, ದೋಹಾಗೆ ಪ್ರತಿ ವಾರ ಎರಡು ವಿಮಾನಗಳು ಮತ್ತು ಜಿಡ್ಡಾ ಮತ್ತು ಕುವೈತ್‌ ಗೆ ಕ್ರಮವಾಗಿ ವಾರಕ್ಕೆ ಒಂದು ವಿಮಾನವನ್ನು ನಿರ್ವಹಿಸಲಿದೆ. ಇಂಡಿಗೋ 232 ಆಸನಗಳ ಎರ್‌ಬಸ್ ಎ -321 ನಿಯೋ ವಿಮಾನವನ್ನು ಈ ಪ್ರಮುಖ ವಲಯದಲ್ಲಿ ನಿಯೋಜಿಸುವುದರಿಂದ ಅಬುಧಾಬಿಗೆ ತನ್ನ ದೈನಂದಿನ ಹಾರಾಟದೊಂದಿಗೆ ಆಸನಗಳ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಅಂತೆಯೇ, ಇಂಡಿಗೋ ದುಬೈಗೆ ವಾರಕ್ಕೆ ನಾಲ್ಕು ಹಾರಾಟವನ್ನು ಮುಂದುವರಿಸಲಿದೆ. ಬೇಸಿಗೆ ವೇಳಾಪಟ್ಟಿ 2025 ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಮತ್ತು ಮಂಗಳೂರು ಮತ್ತು ಪ್ರಮುಖ ಸ್ಥಳಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

Continue Reading

BELTHANGADY

ಬೆಳ್ತಂಗಡಿ: ಕಾರು ಓವರ್ ಟೇಕ್ ಮಾಡುವ ವೇಳೆ ಅಪಘಾತ, ಬೈಕ್ ಸವಾರ ಸಾವು

Published

on

ಬೆಳ್ತಂಗಡಿ: ಕಾರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಕಲ್ಲಗುಡ್ಡೆ ನಿವಾಸಿ 42 ವರ್ಷ ಪ್ರಾಯದ ಸಯ್ಯದ್ ಪಾಶ ಮೃತ ದುರ್ಧೈವಿಯಾಗಿದ್ದಾರೆ. ಬೆಳ್ತಂಗಡಿಯ ಚರ್ಚ್ ರಸ್ತೆಯ ಕಲ್ಕುಣಿ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು, ಸಯ್ಯದ್ ಪಾಶ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದಿತ್ತಾದ್ರೂ ಅವರು ಇಹಲೋಕ ತ್ಯಜಿಸಿದ್ದಾರೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದ ಕಾರಣ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

DAKSHINA KANNADA

ಪುತ್ತೂರು: ರೈಲಿನಿಂದ ಜಾರಿ 25 ಅಡಿ ಆಳಕ್ಕೆ ಬಿದ್ದ ಯುವಕ

Published

on

ಪುತ್ತೂರು: ರೈಲಿನಿಂದ ಜಾರಿ ಯುವಕನೊಬ್ಬ 25 ಅಡಿ ಆಳಕ್ಕೆ ಬಿದ್ದು ಬಳಿಕ ಪವಾಡ ಸದೃಶವಾಗಿ ಬದುಕುಳಿದ ಘಟನೆ ಕಡಬದ ಸವಣೂರು ಎಂಬಲ್ಲಿ ನಡೆದಿದೆ.

ಉದಯ್ ಕುಮಾರ್ ರೈಲಿನಿಂದ ಬಿದ್ದ ಯುವಕ. ಈತ ಮಂಗಳೂರಿನಿಂದ ಬೆಂಗಳೂರು ಕಡೆಗೆ ರೈಲಿನಲ್ಲಿ ಹೊರಟಿದ್ದನು. ಆದರೆ ಬಾಗಿಲ ಬಳಿ ನಿಂತಿದ್ದರಿಂದ ಆಕಸ್ಮತ್‌ ಆಗಿ ರೈಲಿನಿಂದ 25 ಅಡಿ ಆಳಕ್ಕೆ ಜಾರಿ ಮೋರಿ ಬಳಿ ಬಿದ್ದಿದ್ದ. ರಾತ್ರಿ ವೇಳೆ ಈತ ಬಿದ್ದಿದ್ದರಿಂದ ಸಹ ಪ್ರಯಾಣಿಕರಿಗೆ ಮಾತ್ರ ತಿಳಿದಿತ್ತು.

ನಂತರ ರೈಲು ಮುಂದಿನ ನಿಲ್ದಾಣ ತಲುಪಿದಾಗ ರೈಲ್ವೇ ಮಾಸ್ಟರ್ಗೆ ವಿಷಯವನ್ನು ತಿಳಿಸಿದರು. ಆದರೆ ಯುವಕ ಎಲ್ಲಿ ಬಿದ್ದ ಎಂಬುದಾಗಿ ಯಾರಿಗೂ ತಿಳಿದಿರಲಿಲ್ಲ. ರಾತ್ರಿಯಾದ್ದರಿಂದ ಹುಡುಕಲು ಸಹ ಸಾಧ್ಯವಾಗಲಿಲ್ಲ.

ಆದರೆ ಮರುದಿನ ಬೆಳಗ್ಗೆ ಯುವಕ ಮೋರಿಯ ಬಳಿ ನರಳಾಡುವುದನ್ನು ಸ್ಥಳೀಯರು ಗಮನಿಸಿ ಕೂಡಲೇ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಮುಖ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಹೀಗೆ 15 ಗಂಟೆಯ ಬಳಿಕ ಈತ ಪತ್ತೆಯಾಗಿರುವುದು ವಿಶೇಷವೇ ಸರಿ.

Continue Reading
Advertisement

Trending

Copyright © 2025 Namma Kudla News

You cannot copy content of this page