Connect with us

LATEST NEWS

ವಾಟ್ಸಪ್‌ ತಲಾಖ್‌ಗೆ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಪತಿ, ಕುಟುಂಬಸ್ಥರ ಸದಸ್ಯತ್ವ ಅಮಾನತುಗೊಳಿಸಿದ ಜಮಾತ್‌

Published

on

ಕೊಡಗು: ಮೊಬೈಲ್‌ನಲ್ಲೇ ಪತ್ನಿಗೆ ಪತಿ ತಲಾಖ್ ನೀಡಿದ್ದರ ಪರಿಣಾಮ ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲಾಖ್‌ ನೀಡಿದ್ದ ಪತಿ ಹಾಗೂ ಆತನ ತಂದೆ, ತಾಯಿಗೆ ಸ್ಥಳೀಯ ಜಮಾತ್ ಆಡಳಿತ ಮಂಡಳಿ ಶಿಕ್ಷೆ ವಿಧಿಸಿದೆ.

ಕುಂಜಿಲ ಪಯೆನ್​ರಿ ಮುಸ್ಲಿಂ ಜಮಾತ್ ಸದಸ್ಯತ್ವದಿಂದ ಮೂವರನ್ನು ಅಮಾನತು ಮಾಡಲಾಗಿದೆ. ಈಗಾಗಲೇ ಪತಿ ರುವೈಸ್, ತಂದೆ ಅಬ್ದುಲ್ಲಾ, ತಾಯಿ ಜಮೀಲರನ್ನು ಅಮಾನತು ಮಾಡಲಾಗಿದೆ. ಜಮಾತ್ ಆಡಳಿತ ಮಂಡಳಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದಲ್ಲಿ ವಾಟ್ಸಾಪ್ ವಾಯ್ಸ್​​ನಲ್ಲೇ ಪತಿ ತಲಾಖ್ ನೀಡಿದ್ದ ಅಘಾತದಿಂದ ನೊಂದ ಅಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಮಧ್ಯೆ ಪತಿಯ ತಂದೆ- ತಾಯಿ ವಿರುದ್ಧವೂ ವರದಕ್ಷಿಣೆ ಆರೋಪ ಕೇಳಿ ಬಂದಿತ್ತು.


ಅಕ್ಟೋಬರ್​ 4ಕ್ಕೆ ಮಧ್ಯಾಹ್ನ 2.30ರ ಸುಮಾರಿಗೆ ಪತಿ ರುಬೈಸ್ ವಾಟ್ಯಾಪ್​ ವಾಯ್ಸ್ ಮೆಸೇಜ್ ಮೂಲಕ ಅಮೀರಾಳಿಗೆ ಎರಡು ಬಾರಿ ತಲಾಖ್ ಹೇಳಿದ್ದಾನೆ. ವಾಟ್ಯಾಪ್​ ವಾಯ್ಸ್​ನಲ್ಲಿ ತಲಾಖ್ ಬಂದ ಬೆನ್ನಿಗೇ ಅಮೀರ ನೇಣು ಹಾಕಿಕೊಂಡಿದ್ದಾರೆ.
ಕಾಲೇಜು ದಿನಗಳಲ್ಲೇ ಪ್ರೇಮಾಂಕುರ
ಅಮೀರಾ ಮತ್ತು ಕುಂಜಿಲ ಗ್ರಾಮದ ರುಬೈಸ್​ ಕಾಲೇಜು ದಿನಗಳಲ್ಲೇ ಪ್ರೀತಿಸಿದ್ದರು. ಪಿಯುಸಿ ಮುಗಿಯುತ್ತಿದ್ದಂತೆ ಇಬ್ಬರೂ ಹಠಕ್ಕೆ ಬಿದ್ದು ಪೋಷಕರನ್ನು ಒಪ್ಪಿಸಿ ವಿವಾಹವಾಗಿದ್ದರು.

ಕಳೆದ ನವೆಂಬರ್​ ತಿಂಗಳಲ್ಲಿ ಇಬ್ಬರ ವಿವಾಹ ನೆರವೇರಿತ್ತು. ವಿವಾಹದ ಸಂದರ್ಭ 25 ತೊಲ ಚಿನ್ನ ಕೊಡುವಂತೆ ಪತಿ ರುಬೈಸ್​ ಕುಟುಂಬ ಬೇಡಿಕೆ ಇಟ್ಟಿತ್ತು.

ಆದರೆ ಬಡತನದಲ್ಲಿದ್ದ ಅಮೀರಾಳ ತಂದೆ ಮೊಹಮ್ಮದ್​ 12 ತೊಲ ಬಂಗಾರ ಹಾಕಿ ಚೆನ್ನಾಗಿಯೇ ವಿವಾಹ ಮಾಡಿಕೊಟ್ಟಿದ್ದರು. ಆದರೆ ವಿವಾಹದ ಬಳಿಕ ಕುಂಜಿಲ ಗ್ರಾಮದ ಪತಿ ಮನೆಯಲ್ಲಿ ಅಮೀರಾಳಿಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು.

ಪ್ರತಿದಿನ ಬಂಗಾರ ಮತ್ತು ಒಡವೆ ತರುವಂತೆ ಪತಿಮನೆಯವರು ಪೀಡಿಸುತ್ತಿದ್ದರು. ಹಾಗಾಗಿ ಹಿಂಸೆ ತಾಳಲಾರದೆ, ಹಲವು ಬಾರಿ ತಂದೆ-ತಾಯಿಗೆ ದೂರವಾಣಿ ಕರೆ ಮಾಡಿ ಅಮೀರಾ ಅತ್ತಿದ್ದಳು.

ಕೊನೆಗೆ ಯಾವಾಗ ಹಿಂಸೆ ಜಾಸ್ತಿಯಾಯಿತೋ ತಂದೆ ಮೊಹಮ್ಮದ್​ ಸ್ವತಃ ಹೋಗಿ ಮಗಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದರು. ಕಳೆದೊಂದು ತಿಂಗಳಿನಿಂದ ಅಮೀರಾ ತನ್ನ ತವರು ಮನೆಯಲ್ಲೇ ಉಳಿದಿದ್ದಳು.
ಪತಿ ರುಬೈಸ್​ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ವರದಕ್ಷಿಣೆ ತಾರದೆ ತನ್ನ ಮನೆಗೆ ಹೋಗದಂತೆ ಮೊಬೈಲ್‌ ತಾಕೀತು ಮಾಡುತ್ತಿದ್ದ. ಜೊತೆಗೆ ನೀನು ಸಾಯಿ, ನಾನು ಬೇರೆ ಹುಡುಗಿಯನ್ನು ನೋಡಿದ್ದೇನೆ.

ಅವಳನ್ನೇ ಮದುವೆಯಾಗುತ್ತೇನೆ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದ. ಇವೆಲ್ಲವನ್ನೂ ತಂದೆ -ತಾಯಿ ಜೊತೆ ಮುಕ್ತವಾಗಿ ಅಮೀರಾ ಹೇಳಿಕೊಂಡಿರಲಿಲ್ಲ.

ತಾನಾಗಿ ಇಷ್ಟಪಟ್ಟು ಆತನ್ನನ್ನು ವಿವಾಹವಾಗಿದ್ದಳು. ಇದೀಗ ತನ್ನಿಂದಾಗಿ ಬಡತನದಲ್ಲಿರುವ ತನ್ನ ತಂದೆಗೆ ಹಿಂಸೆಯಾಗುತ್ತಿದೆ ಎಂದು ನೊಂದುಕೊಳ್ಳುತ್ತಿದ್ದಳು.

ಹಾಗಾಗಿ ತಾನೇ ನೋವನ್ನು ನುಂಗಿಕೊಳ್ಳುತ್ತಿದ್ದಳು ಎಂದು ತಂದೆ ಮುಹಮ್ಮದ್ ಬೇಸರ ವ್ಯಕ್ತಪಡಿಸುತ್ತಾರೆ.
ಪೋಷಕರ ಮನೆಯಲ್ಲೇ ಇದ್ದ ಅಮೀರಾ ಅಯ್ಯಂಗೇರಿ ಸ್ವಗೃಹದ ಕೋಣೆಯೊಂದರಲ್ಲಿ ಹಗ್ಗದಿಂದ ಮನೆಯ ಮೇಲ್ಮಾವಣಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳು.

ಪ್ರಕರಣಕ್ಕೆ ಸಂಭಂದಿಸಿದಂತೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ ಮೊಹಮ್ಮದ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

DAKSHINA KANNADA

ಮಂಗಳೂರು : ಹೆಂಡತಿಯನ್ನು ಕೊಲೆಗೈದ ಪ್ರಕರಣ; ಗಂಡನಿಗೆ ಜೀವಾವಧಿ ಶಿಕ್ಷೆ..

Published

on

ಮಂಗಳೂರು: ತನ್ನ ಪತ್ನಿಯನ್ನು ಕುಡಿದ ಅಮಲಿನಲ್ಲಿ ಪತಿ ಕೊಂದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪ್ರಕರಣದ ಮುಖ್ಯ ಆರೋಪಿ ಪತಿಗೆ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ನಿನ್ನೆ (ಫೆ.6) ತೀರ್ಪು ನೀಡಿದೆ.

ಸುಳ್ಯದ ತೋಡಿಕಾನ ಅಂಡ್ಯಡ್ಕ ಸಿಆರ್‌ಸಿ ಕ್ವಾಟ್ರರ್ಸ್ ನಿವಾಸಿ ರಾಜ (64) ಶಿಕ್ಷೆಗೊಳಗಾದ ಆರೋಪಿ ಎಂದು ಗುರುತಿಸಲಾಗಿದೆ.

ರಾಜ ತನ್ನು ಪತ್ನಿ ಕಮಲಾ (57) ಎಂಬಾಕೆಯನ್ನು ಕೊಲೆಗೈದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ. 2022ರ ಸೆ.4ರಂದು ದಂಪತಿ ರಾಜಾ ಮತ್ತು ಕಮಲಾ ರಬ್ಬರ್ ಮ್ಯಾಪಿಂಗ್ ಕೆಲಸ ಕೇಳುತ್ತಾ ಬೆಳ್ತಂಗಡಿ ಕೊಯೂರು ಗ್ರಾಮದ ಅಲೆಕ್ಕಿ ಎಂಬಲ್ಲಿನಧರ್ಣಪ್ಪ ಗೌಡರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇವರಿಗೆ ರಬ್ಬರ್ ತೋಟದ ಶೆಡ್‌ನಲ್ಲೇ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿತ್ತು.

 

ಇದನ್ನೂ ಓದಿ : ಮಂಗಳೂರು : ಸ್ನ್ಯಾಪ್‌ನಲ್ಲಿ ಅಶ್ಲೀಲ ವಿಡಿಯೋ ಸೆಂಡ್ ಮಾಡಿ ಬೆದರಿಕೆ ಹಾಕಿದವನ ವಿರುದ್ಧ ದೂರು ದಾಖಲು

 

ಪ್ರಸ್ತುತ ಆರೋಪಿಗೆ ನ್ಯಾಯಲಯವು ಜಾವಾವಧಿ ಶಿಕ್ಷೆ ವಿಧಿಸಿ ಕಮಲಾ ಸಾವಿಗೆ ನ್ಯಾಯ ನೀಡಿದೆ.

 

Continue Reading

DAKSHINA KANNADA

ಸುರತ್ಕಲ್: ಡ್ರೆಸ್ ಅಂಗಡಿಗೆ ಆಕಸ್ಮಿಕ ಬೆಂಕಿ; ಭಾರೀ ನಷ್ಟ

Published

on

ಸುರತ್ಕಲ್: ಮೈ ಚಾಯ್ಸ್ ಬಟ್ಟೆ ವಿನ್ಯಾಸ ಹಾಗೂ ಜವಳಿ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು, ಭಾರೀ ನಷ್ಟ ಸಂಭವಿಸಿರುವ ಘಟನೆ ಸುರತ್ಕಲ್‌ನ ಪೂವ ಆರ್ಕೆಡ್‌ನಲ್ಲಿರುವ ಮಳಿಗೆಯಲ್ಲಿ ಬುಧವಾರ ತಡರಾತ್ರಿ 1 ಗಂಟೆಗೆ ಸಂಭವಿಸಿದೆ.

ಸುಟ್ಟು ಕರಕಲಾಗಿದ್ದ ಮಳಿಗೆಯು ಕೃಷ್ಣಾಪುರ ನಿವಾಸಿ ಶಮೀಮ್ ಎಂಬವರಿಗೆ ಸೇರಿದ್ದು, ಬಟ್ಟೆ ಬರೆಗಳು ಹಾಗೂ ಯಂತ್ರೋಪಕರಣಗಳು ಸೇರಿ ಕೋಟಿ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಂಗಡಿಯ ಮೇಲ್ಛಾವಣಿಯಲ್ಲಿನ ಬಟ್ಟೆ ವಿನ್ಯಾಸ ವಿಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಗೆ ಕ್ಷಣಾರ್ಧದಲ್ಲಿ ಇಡೀ ಮಳಿಗೆಯನ್ನು ಸುಟ್ಟು ಭಸ್ಮ ಮಾಡಿತು.

ಇದನ್ನೂ ಓದಿ : ಸುರತ್ಕಲ್ : ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರು ಹೊಂಡಕ್ಕೆ ; ದಂಪತಿಗೆ ಗಾಯ

ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಮೂರು ಮತ್ತು ಎಂಆರ್ ಪಿಎಲ್ ನ ಒಂದು ಅಗ್ನಿ ನಿರೋಧಕ ವಾಹನಗಳು ಸತತ 4 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

DAKSHINA KANNADA

ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

Published

on

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಮತ್ತು ಮಂಗಳೂರಿನ ಪ್ರಸಿದ್ಧ ಟ್ರೈ ತಿಂಡಿ ಇನ್ಸ್ಟಾ ಗ್ರಾಮ್ ಪೇಜ್ ಸಹಭಾಗಿತ್ವದಲ್ಲಿ ಫೆ.7, 8 ಮತ್ತು 9ರಂದು 3 ದಿನ 2ನೇ ಆವ್ರತ್ತಿಯ ಐಸ್ ಕ್ರೀಮ್ ಪರ್ಬವನ್ನು ಅಯೋಜಿಸಲಾಗಿದೆ.

ಈ ತಣ್ಣನೆಯ ಚಳಿಗೂ ಐಸ್‌ಕ್ರೀಂ ಎಂದಾಕ್ಷನ ಬಾಯಲ್ಲಿ ನೀರು ಬರುವವರೇ ಹೆಚ್ಚು. ಹಾಗಾಗಿ ಅಂತಹ ಐದ್‌ಕ್ರೀಂ ಪ್ರಿಯರಿಗೆ ಬಿಗ್ ಗುಡ್‌ನ್ಯೂಸ್ ಸಿಕ್ಕಿದ್ದು,  ಭರ್ಜರಿ ಐಸ್ ಕ್ರೀಮ್ ಪರ್ಬ ಇಂದಿನಿಂದ ಮೂರು ದಿನ ಬೆಳಗ್ಗೆ 11ರಿಂದ ರಾತ್ರಿ 9 ರವರೆಗೆ ನಡೆಯಲಿದೆ.

ಯಾವೆಲ್ಲಾ ಐಸ್‌ಕ್ರೀಂ ಸಂಸ್ಥೆಗಳು ಭಾಗಿಯಾಗಲಿದೆ ?

ಮಂಗಳೂರನ್ನು ‘ಐಸ್ ಕ್ರೀಮ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂದು ಕರೆಯುತ್ತಾರೆ. ಎಲ್ಲಾ ಐಸ್ ಕ್ರೀಮ್ ಸಂಸ್ಥೆಗಳನ್ನ ಒಂದೇ ಸೂರಿನಡಿ ಸೇರಿಸಬೇಕು ಅನ್ನುವ ಆಲೋಚನೆಯಲ್ಲಿ ಈ ಕಾರ್ಯಕ್ರಮ ಆಯೋಜಕರದ್ದು, ಈ ಬಾರಿ 14ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಐಡಿಯಲ್ – ಪಬ್ಬಾಸ್ , ಹ್ಯಾಂಗ್ಯೋ, ಮ್ಯಾಂಗೋ ಬೆರ್ರಿಸ್ , ಎಂಚಿ ಕ್ರಂಚಿ – ದಿ ಮಿಲೆಟ್ ಹೌಸ್ , ಸ್ಕೂಪ್ಸೊ , ಕೈಲಾರ್ಸ್ , ಸ್ವಿರ್ಲಿಯೊ , ಎಫ್ 5, ಐಸ್ ಕ್ರೀಮ್ ಆಂಡ್ ಮೋರ್ , ಫ್ರೂಟ್ ಪೊಪ್ಜ್ , ಫ್ಲೇವರ್ಸ್ , ಹೈವ್ ಸ್ಕ್ಯೂಬ್ , ಬೊನ್ ಬೊನ್ಸ್, ಕ್ಯಾಮೆರಿ ಭಾಗವಹಿಸುವ ಐಸ್ ಕ್ರೀಮ್ ಸಂಸ್ಥೆಗಳು ಪಾಲ್ಗೊಳ್ಳಲಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page