Connect with us

LATEST NEWS

ಕೇರಳ ಬಾಂಬ್‌ ಸ್ಪೋಟ: ಮೃತರ ಸಂಖ್ಯೆ3 ಕ್ಕೆ ಏರಿಕೆ..!

Published

on

ಕೇರಳ: ಕೇರಳದ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ ಭಾನುವಾರ ಜೆಹೋವಾಸ್ ವಿಟ್ನೆಸಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮಡಿದವರ ಸಂಖ್ಯೆ 3 ಕ್ಕೇರಿದೆ. ತೀವ್ರ ಸುಟ್ಟಗಾಯಗೊಂಡ 12 ವರ್ಷದ ಬಾಲಕಿ ಇಂದು ನಸುಕಿನ ವೇಳೆ ಮೃತ ಪಟ್ಟಿದ್ದಾಳೆ.

ಐಸಿಯು ವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ 18 ಮಂದಿಯ ಪೈಕಿ ಇನ್ನೂ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಬಾಂಬ್‌ ಸ್ಫೋಟ ಪ್ರಕರಣ ಕುರಿತಂತೆ ಎಡಿಜಿಪಿ ಅಜಿತ್‌ ಕುಮಾರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಡಿಸಿಪಿ ಸಸಿಧರನ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಕೇರಳ ರಾಜ್ಯ ಪೊಲೀಸ್‌ ಮುಖ್ಯಸ್ಥ ಶೈಕ್‌ ದರ್ವೇಶ್‌ ಹಾಹಿಬ್‌ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕೊಲೆ, ಕೊಲೆ ಯತ್ನ, ಸ್ಫೋಟಕ ಕಾಯ್ದೆ, ಭಯೋತ್ಪಾದಕ ವಿರೋಧಿ ಮತ್ತು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ.

ಕಳಮಶ್ಶೇರಿಯ ಜಮ್ರಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಜೆಹೋವಾಸ್ ವಿಟ್ನೆಸಸ್ ಕ್ರೈಸ್ತ ಪಂಗಡದ ಮೂರು ದಿನಗಳ ಪ್ರಾರ್ಥನಾ ಸಭೆಯ ಕೊನೆಯ ದಿನವಾದ ನಿನ್ನೆ ಬೆಳಗ್ಗೆ 9.40 ರ ವೇಳೆಗೆ ಪ್ರಾರ್ಥನೆ ನಡೆಯುತ್ತಿದ್ದಾಗಲೇ ಸ್ಫೋಟ ಸಂಭವಿಸಿತ್ತು. ಈ ಸಂದರ್ಭದಲ್ಲಿ ಓರ್ವ ಮಹಿಳೆ ಮೃತ ಪಟ್ಟು 52 ಮಂದಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಇನ್ನೋರ್ವ ಮಹಿಳೆ ಸಂಜೆ ವೇಳೆಗೆ ಹಾಗೂ ಓರ್ವ ಬಾಲಕಿ ತಡ ರಾತ್ರಿ ಮೃತ ಪಟ್ಟಿದ್ದಳು. ಲಿಯೊನಾ ಪೌಲೋಸ್‌, ಕುಮಾರಿ ಪುಷ್ಪನ್‌, ಮತ್ತು 12 ವರ್ಷದ ಲಿಬಿನಾ ಮೃತ ಪಟ್ಟವರು. ಇರಿಂಗೋಲ್‌ ನಿವಾಸಿ ಲಿಯೋನಾ ಪೌಲೋಸ್‌ ಒಬ್ಭಂಟಿಯಾಗಿ ಸಮಾವೇಶಕ್ಕೆ ಬಂದಿದ್ದರಿಂದ ಗುರುತು ಪತ್ತೆ ವಿಳಂಬವಾಗಿತ್ತು. 53 ವರ್ಷ ಪ್ರಾಯದ ಕುಮಾರಿ ಪುಷ್ಪನ್‌ ತೋಡುಪುಯ ಕಳಿಯೂರು ನಿವಾಸಿಯಾಗಿದ್ದು ಆಕೆ ವಿಧವೆ. ಶೇ. 90 ಗಾಯಗೊಂಡಿದ್ದ ಆಕೆ ಸಂಜೆ ವೇಳೆಗೆ ಮೃತ ಪಟ್ಟರು. ಶೇ. 95 ಸುಟ್ಟ ಗಾಯಗೊಂಡು ವೆಂಟಿಲೇಟರ್ ನಲ್ಲಿದ್ದ ಬಾಲಕಿ ಲಿಬಿನಾ ಎರ್ನಾಕುಳಂ ಮೆಡಿಕಲ್‌ ಕಾಲೇಜಿನಲ್ಲಿ ಇಂದು ನಸುಕಿನ 12.40 ಕ್ಕೆ ಕೊನೆಯುಸಿರೆಳೆದಿದ್ದಾಳೆ.

ಈ ನಡುವೆ ಘಟನೆಗೆ ಸಂಬಂಧಿಸಿ ತೃಶೂರಿನ ಕೊಡಕರ ಪೊಲೀಸ್‌ ಠಾಣೆಗೆ ಶರಣಾದ ಡೊಮಿನಿಕ್‌ ಮಾರ್ಟಿನ್‌ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಜೆಹೋವಾಸ್ ವಿಟ್ನೆಸಸ್ ವಿಚಾರ ಧಾರೆಯನ್ನು ತಾನು ಒಪ್ಪುವುದಿಲ್ಲ; ಅದು ದೇಶಕ್ಕೆ ಅಪಾಯಕಾರಿ ಆಗಿದೆ. ಹಾಗಾಗಿ ಈ ಸಂಘಟನೆಯನ್ನೇ ಇಲ್ಲವಾಗಿಸ ಬೇಕೆಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದೇನೆ ಎಂಬುದಾಗಿ ತಿಳಿಸಿದ್ದಾನೆ. ಸ್ಪೋಟ ಕೃತ್ಯಕ್ಕೆ 50 ಗುಂಡು ಎಂದು ಕರೆಯಲ್ಪಡುವ ಸುಡು ಮದ್ದು ಮತ್ತು 8 ಲೀ. ಪೆಟ್ರೋಲ್‌ ಬಳಕೆ ಮಾಡಿದ್ದು, ಐಇಡಿ ಉಪಯೋಗಿಸಿ ಮದ್ದು ಗುಂಡುಗಳಿಗೆ ಬೆಂಕಿ ಹಚ್ಚಿದ್ದೇನೆ. ಸ್ಫೋಟಕ ತಯಾರಿಸಲು 3000 ರೂ. ಖರ್ಚು ಮಾಡಿದ್ದು, ಯೂ ಟ್ಯೂಬ್‌ ವೀಡಿಯೋ ನೋಡಿ ಎಲೆಕ್ಟ್ರಾನಿಕ್‌ ಡಿಟೊನೇಟರ್‌ ತಯಾರಿಸುವುದನ್ನು ಕಲಿತಿದ್ದೇನೆ ಎಂಬುದಾಗಿ ತಿಳಿಸಿದ್ದಾನೆ.

ಆಲುವಾದಲ್ಲಿರುವ ತನ್ನ ಪೂರ್ವಜರ ಮನೆಯ ತಾರಸಿಯಲ್ಲಿ ಬಾಂಬ್‌ ತಯಾರಿಸಿದ್ದು, ಅದನ್ನು ಪ್ಲಾಸ್ಟಿಕ್‌ ಬ್ಯಾಗ್‌ ನಲ್ಲಿ ಹಾಕಿ ನಿನ್ನೆ ಬೆಳಗ್ಗೆ 7 ಗಂಟೆಗೆ ತಂದು ಕನ್ವೆನ್ಶನ್‌ ಹಾಲ್‌ ನಲ್ಲಿ ಇರಿಸಿದ್ದಾನೆ. ಬಳಿಕ ತಪ್ಪೊಪ್ಪಿಗೆ ಹೇಳಿಕೆಯನ್ನು ವೀಡಿಯೋ ರೆಕಾರ್ಡ್‌ ಮಾಡಿ ಫೇಸ್‌ ಬುಕ್‌ ಗೆ ಅಪ್‌ ಲೋಡ್‌ ಮಾಡಿದ್ದಾನೆ. ಸಭಾಂಗಣದಲ್ಲಿ ಒಟ್ಟು 6 ಕಡೆ ಇರಿಸಿದ್ದಾನೆ. ಎನ್ಎಸ್ ಜಿ ತಂಡದವರು ಸ್ಫೋಟಕ ಐಇಡಿ ಉಳಿಕೆ ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಟಿನ್‌ ನ ಅತ್ತೆ ಕೂಡಾ ಸಮಾವೇಶದಲ್ಲಿ ಭಾಗವಹಿಸಿದ್ದು, ಅಕೆ ಅಪಾಯದಿಂದ ಪಾರಾಗಿದ್ದಾರೆ. ಮಾರ್ಟಿನ್‌ ದುಬಾಯಿನಲ್ಗಿ 6 ವರ್ಷ ಕಾಲ ಫೋರ್‌ ಮೆನ್‌ ಆಗಿ ಕೆಲಸ ಮಾಡಿದ್ದ ಈತ ಯಹೋವನ ಸಾಕ್ಷಿಗಳ ಸಭೆಯ ವಿರುದ್ಧ ಪ್ರತೀಕಾರ ತೀರಿಸುವುದಕ್ಕಗಿ ವಾಪಸಾಗಿದ್ದನು ಎನ್ನಲಾಗಿದೆ.

FILM

ನಟ ಸೋನು ಸೂದ್ ವಿರುದ್ದ ಬಂಧನ ವಾರೆಂಟ್ ಜಾರಿ

Published

on

ಮಂಗಳೂರು/ಪಂಜಾಬ್ : ಖ್ಯಾತ ಬಾಲಿವುಡ್ ನಟ ಸೋನು ಸೂದ್ ವಿರುದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಲೂಧಿಯಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ವಾರೆಂಟ್ ಹೊರಡಿಸಿದ್ದಾರೆ. ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ವಿರುದ್ಧ 10 ಲಕ್ಷ ರೂ. ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ದೇಶದ್ರೋಹದ ಆರೋಪ; ಖ್ಯಾತ ನಟಿ ಅರೆಸ್ಟ್

ಸಾಕ್ಷ್ಯ ಹೇಳಲು ಸೋನು ಸೂದ್ ಅವರಿಗೆ ನ್ಯಾಯಾಲಯಕ್ಕೆ ಬರುವಂತೆ ಸೂಚಿಸಲಾಗಿತ್ತು. ಆದರೆ ಅವರು ಹಾಜರಾಗಲು ವಿಫಲರಾದ ಕಾರಣ ಬಂಧನ ವಾರೆಂಟ್ ಹೊರಡಿಸಲಾಗಿದೆ. ಸೋನು ಸೂದ್ ಅವರನ್ನು ಬಂಧಿಸುವಂತೆ ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲುಧಿಯಾನ ನ್ಯಾಯಾಲಯವು ನಿರ್ದೇಶಿಸಿದೆ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಫೆ.10 ಕ್ಕೆ ಕೋರ್ಟ್ ನಿಗದಿಪಡಿಸಿದೆ.

ಸೋನು ಸೂದ್ ಪ್ರತಿಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದರ ಜೊತೆ ಮಾತನಾಡಿದ ಸೋನು ಸೂದ್, “ನಾನು ಯಾವುದಕ್ಕೂ ಬ್ರಾಂಡ್ ಅಂಬಾಸಿಡರ್ ಅಲ್ಲ, ನಾನು ಈಗಾಗಲೇ ನನ್ನ ವಕೀಲರ ಮೂಲಕ ಉತ್ತರಿಸಿದ್ದೇನೆ ಮತ್ತು ಫೆಬ್ರವರಿ 10 ರಂದು ಮತ್ತೆ ಉತ್ತರ ನೀಡುತ್ತೇನೆ. ಈ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲ ಏನೆಂದು ನನಗೂ ತಿಳಿದಿಲ್ಲ. ಕೆಲವರು ಬೇಕೆಂದೇ ಮಾನ ಹರಾಜು ಹಾಕಲು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಆದರೆ ಇದಕ್ಕೆಲ್ಲ ನಾನು ಹೆದರುವುದಿಲ್ಲ” ಎಂದು ಹೇಳಿದ್ದಾರೆ.

Continue Reading

DAKSHINA KANNADA

ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ಯೋಗಿಂದ್ರ ಬಿ ಇನ್ನಿ*ಲ್ಲ

Published

on

ಕಿನ್ನಿಗೋಳಿ : ಕಿನ್ನಿಗೋಳಿಯ ಐಕಳ ಪೊಂಪೈ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಯೋಗಿಂದ್ರ ಬಿ. (62 )ಅವರು ಹೃದಯಘಾತದಿಂದ ಬುಧವಾರ ರಾತ್ರಿ ನಿ*ಧನ ಹೊಂದಿದರು.

ಮೂಲತಃ ಕಾಸರಗೋಡು ತಾಲೂಕಿನ ಬದಿಯಡ್ಕ ನಿವಾಸಿಯಾಗಿದ್ದ ಅವರು  1986ರಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ಪೊಂಪೈ ಕಾಲೇಜಿಗೆ ವರ್ಗಾವಣೆಗೊಂಡು 21 ವರ್ಷಗಳ ವರೆಗೆ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಮಂಗಳೂರು : ಹೆಂಡತಿಯನ್ನು ಕೊಲೆಗೈದ ಪ್ರಕರಣ; ಗಂಡನಿಗೆ ಜೀವಾವಧಿ ಶಿಕ್ಷೆ..

ಸಮಾಜಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಮತ್ತು ಮುಖ್ಯಸ್ಥರಾಗಿ ಒಟ್ಟು 36 ವರ್ಷಗಳ ಸೇವೆಯನ್ನು ಸಲ್ಲಿಸಿದ್ದ ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಪೊಂಪೈ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಎನ್.ಎಸ್. ಎಸ್ ಕಾರ್ಯಕ್ರಮ ಅಧಿಕಾರಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಹಲವು ವರ್ಷಗಳ ಕಾಲ ಸಹ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು‌ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Continue Reading

LATEST NEWS

ಜೊಮಾಟೊ ಹೆಸರು ಎಟರ್ನಲ್ ಎಂದು ಬದಲು; ಏಕೆ ಈ ನಾಮ ಬದಲಾವಣೆ ?

Published

on

ಮಂಗಳೂರು/ನವದೆಹಲಿ: ‘ಜೊಮಾಟೊ ಲಿ’ ಎಂದು ಹೆಸರಿಟ್ಟುಕೊಂಡಿದ್ದ ಪ್ರಸಿದ್ಧ ಫೂಡ್ ಡೆಲಿವರಿ ಕಂಪನಿ ದಿಢೀರ್ ತನ್ನ ಹೆಸರನ್ನು ‘ಎಟರ್ನಲ್ ಲಿ’ ಎಂದು ಬದಲಿಸಲಾಗಿದೆ. ಈ ನಾಮ ಬದಲಾವಣೆಗೆ ಜೊಮಾಟೊದ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ. ಕೇವಲ ಕಾರ್ಪೊರೇಟ್ ಹೆಸರು ಮಾತ್ರ ಬದಲಾಗಿದ್ದು, ಫೂಡ್ ಆ್ಯಪ್​ನಲ್ಲಿನ ಜೊಮಾಟೋ ಹೆಸರು ಹಾಗೇ ಇರುತ್ತದೆ ಎಂಬುವುದು ನಿನ್ನೆ (ಫೆ.6) ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ.

ನಾಮ ಬದಲಾವಣೆ ಯಾಕಾಗಿ ?

ಮೂಲತಃ ಫೂಡ್ ಟೆಕ್ ಕಂಪನಿಯಾಗಿ ಜೊಮಾಟೋ ಸಂಸ್ಥೆ ಗುರುತಿಸಿಕೊಂಡಿದ್ದು, ಬಳಿಕ ಅದರ ಕಾರ್ಯಕ್ಷೇತ್ರ ವಿಸ್ತರಿಸುತ್ತಾ ಬಂದಿದೆ. ಬ್ಲಿಂಕಿಟ್ ಕ್ವಿಕ್ ಕಾಮರ್ಸ್ ಕಂಪನಿಯನ್ನು ಖರೀದಿಸಿ ಲಾಜಿಸ್ಟಿಕ್ಸ್ ಬಿಸಿನೆಸ್ ಹೊಂದಿತ್ತು. ಈ ಹಿನ್ನೆಲೆ ಕಾರ್ಪೊರೇಟ್ ಕಂಪನಿಗೆ ಪ್ರತ್ಯೇಕ ಐಡೆಂಟಿಟಿ ಅವಶ್ಯಕತೆ ಇದ್ದ ಕಾರಣ ನಾಮ ಬದಲಾವಣೆಯಾಗಿದೆ. “ಬ್ಲಿಂಕಿಟ್ ಸಂಸ್ಥೆಯನ್ನು ಖರೀದಿಸಿದಾಗಲೇ ಜೊಮಾಟೋ ಸಂಸ್ಥೆ ಆಂತರಿಕವಾಗಿ ‘ಎಟರ್ನಲ್’ ಐಡೆಂಟಿಟಿಯನ್ನು ಬಳಸುತ್ತಿತ್ತು. ಕಂಪನಿ ಹಾಗೂ ಅದರ ಬ್ರ್ಯಾಂಡ್ ನಡುವೆ ಪ್ರತ್ಯೇಕ ಗುರುತಿಗೆ ಈ ಕ್ರಮ ಅನುಸರಿಸಲಾಗುತ್ತಿತ್ತು. ಜೊಮಾಟೋ ಹೊರತಾದ ಬೇರೆ ಬಿಸಿನೆಸ್ ನಮ್ಮ ಭವಿಷ್ಯಕ್ಕೆ ಹೊಸ ದೊಡ್ಡ ಹಾದಿ ಕಲ್ಪಿಸುತ್ತಿದೆ ಎಂದ ದಿನ ಕಂಪನಿಯ ಹೆಸರನ್ನು ಎಟರ್ನಲ್ ಎಂದು ಸಾರ್ವತ್ರಿಕವಾಗಿ ಬದಲಿಸುವುದು ಎಂದು ಮೊದಲೇ ನಿಶ್ಚಯಿಸಿದ್ದೆವು. ಇವತ್ತು ಬ್ಲಿಂಕಿಟ್​ನೊಂದಿಗೆ ನಮಗೆ ಆ ದಿನ ಬಂದಿದೆ” ಎಂದು ಜೊಮಾಟೋ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಗ್ರೂಪ್ ಸಿಇಒ ದೀಪಿಂದರ್ ಗೋಯಲ್ ನಿನ್ನೆ ಬಿಎಸ್​ಇಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.

 

ಇದನ್ನೂ ಓದಿ : ಮಂಗಳೂರು : ಸ್ವಿಗ್ಗಿ ಡೆಲಿವರಿ ಸಿಬ್ಬಂದಿಗಳಿಂದ ಏಕಾಏಕಿ ಮುಷ್ಕರ

 

ಜೊಮಾಟೊದ ಹೆಸರು ಬದಲಾವಣೆಯನ್ನು ಷೇರು ವಿನಿಮಯ ಕೇಂದ್ರಗಳ ಲಿಸ್ಟಿಂಗ್​ನಲ್ಲಿ ಕಾಣಬಹುದು. ಎಟರ್ನಲ್ ಸಂಸ್ಥೆಯ ಅಡಿಯಲ್ಲಿ ಈ ಕೆಳಗಿನ ನಾಲ್ಕು ಬ್ರ್ಯಾಂಡ್ ಅಥವಾ ಬಿಸಿನೆಸ್ ಇವೆ: ಜೊಮಾಟೊ, ಬ್ಲಿಂಕಿಟ್, ಹೈಪರ್​ಪ್ಯೂರ್, ಡಿಸ್ಟ್ರಿಕ್ಟ್. ಹೈಪರ್​ಪ್ಯೂರ್ ಎಂಬುದು ರೆಸ್ಟೋರೆಂಟ್, ಕೆಫೆ, ಹೋಟೆಲ್​ಗಳಿಗೆ ಬೇಕಾದ ತರಕಾರಿ, ದಿನಸಿ ಇತ್ಯಾದಿ ಆಹಾರವಸ್ತುಗಳನ್ನು ಹೋಲ್​ಸೇಲ್ ದರದಲ್ಲಿ ಸರಬರಾಜು ಮಾಡುವ ಒಂದು ಸೇವೆ. ಡಿಸ್ಟ್ರಿಕ್ಟ್ ಎಂಬುದು ಬುಕ್ ಮೈ ಶೋ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಟಿಕೆಟ್ ಬುಕ್ ಮಾಡುವ ಸೇವೆಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page