Connect with us

MANGALORE

ಕರ್ಣಾಟಕ ಬ್ಯಾಂಕ್‌ನ ‘ಕೆಬಿಎಲ್‌ ಉತ್ಸವ 2021-22’ಗೆ ಚಾಲನೆ

Published

on

ಮಂಗಳೂರು: ದೇಶದ ಖಾಸಗಿ ರಂಗದ ಅಗ್ರಗಣ್ಯ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ‘ ಕೆಬಿಎಲ್‌ ಉತ್ಸವ 2021-22’ಕ್ಕೆ ಚಾಲನೆ ನೀಡಲಾಯಿತು.

ಅ.7 ರಿಂದ ಡಿ.31ರ ವರೆಗೆ ಗೃಹ ಸಾಲ, ಕಾರು ಸಾಲ ಹಾಗೂ ಚಿನ್ನಾಭರಣಗಳ ಮೇಲೆ ಸಾಲ, ಮೇಳ ನಡೆಯಲಿವೆ. ಗ್ರಾಹಕರು ದೇಶದಾದ್ಯಂತ ವ್ಯಾಪಿಸಿರುವ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿಯೂ ಇದರ ಪ್ರಯೋಜನ ಪಡೆಯಬಹುದು.

‘ಕೆಬಿಎಲ್ ಉತ್ಸವ 2021-22’ರ ಅಡಿಯಲ್ಲಿ ಗೃಹ ಸಾಲ , ಕಾರು ಸಾಲ ಹಾಗೂ ಚಿನ್ನಾಭರಣ ಸಾಲಗಳನ್ನು ಇತ್ಯಾದಿ ಹಲವಾರು ಅನುಕೂಲತೆಗಳು ಗ್ರಾಹಕರಿಗೆ ವಿಶೇಷವಾಗಿ ಒದಗಲಿವೆ.

ಈ ಸಂದರ್ಭಗಳಲ್ಲಿ ಸಾಲಗಳ ಪ್ರೊಸೆಸ್ಸಿಂಗ್ ಶುಲ್ಕಗಳಲ್ಲಿ ರಿಯಾಯಿತಿ ಹಾಗೂ ಆಕರ್ಷಕ ಬಡ್ಡಿದರಗಳಿಲ್ಲದೇ ಹಲವಾರು ಇತರ ಸೌಲಭ್ಯಗಳೊಂದಿಗೆ ಅರ್ಹ ಗ್ರಾಹಕರಿಗೆ ಲಭ್ಯವಾಗಿವೆ.

ಭವಿಷ್ಯದ ಡಿಜಿಟಲ್ ಬ್ಯಾಂಕ್‌ಗಳ ಹೊರಹೊಮ್ಮುವತ್ತ ಹೆಜ್ಜೆ ಇಡುತ್ತಿರುವ ಕರ್ಣಾಟಕ ಬ್ಯಾಂಕ್ ಡಿಜಿಟಲ್ ವ್ಯವಸ್ಥೆ ಮೂಲಕ ಸಾಲ ವಿತರಣೆಗಳಲ್ಲಿ ತೊಡಗಿದೆ. ಇದರಿಂದ ಗ್ರಾಹಕರಿಗೆ ಕ್ಷಿಪ್ರವಾಗಿ,ಸುಲಭವಾಗಿ, ಸಾಲ ಸಿಗುವ ಮೂಲಕ ಅವರಿಗೆ ಮುಖ್ಯ ಅನುಭೂತಿ ನೀಡಿದೆ.

ಈ ಸಂದರ್ಭ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್, ಕೆಬಿಎಲ್ ಉತ್ಸವ 2021-22 ಎನ್ನುವ ಸಂಭ್ರಮಾಚರಣೆಗೆ ಚಾಲನೆ ನೀಡಲು ಹರ್ಷವೆನಿಸುತ್ತದೆ.

ಹಬ್ಬಗಳ ದಿನಗಳಲ್ಲಿ ನಮ್ಮ ಗ್ರಾಹಕರ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲಿದೆ.

ಆಕರ್ಷಕ ಬಡ್ಡಿದರ , ತ್ವರಿತ ಮಂಜೂರಾತಿ, ಇತ್ಯಾದಿ ಸೌಲಭ್ಯಗಳು ಗ್ರಾಹಕರಿಗೆ ಅನುಕೂಲವಾಗಲಿವೆ. ಗ್ರಾಹಕರ ಕನಸಿನ ಮನೆ, ಕಾರು ಕೊಳ್ಳಲು ಕರ್ಣಾಟಕ ಬ್ಯಾಂಕ್ ಸದಾ ಅವರಿಗೆ ಅನುವು ಮಾಡಿಕೊಡುತ್ತದೆ.

ಡಿಜಿಟಲ್ ಬ್ಯಾಂಕ್ ಆಗುತ್ತಾ ಹೆಜ್ಜೆ ಇಡುತ್ತಿರುವ ನಾವು ಸಾಲ ವಿತರಣೆಯಲ್ಲೂ ಡಿಜಿಟಲ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷಿಪ್ರವಾಗಿ, ಸುಲಭವಾಗಿ ಗ್ರಾಹಕರಿಗೆ ಸಾಲ ವಿತರಿಸುತ್ತಿದ್ದೇವೆ.

ನಮ್ಮ ಈ ಎಲ್ಲಾ ಉಪಕ್ರಮಗಳು ಗ್ರಾಹಕರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಲಿವೆ ಎನ್ನುವ ಭರವಸೆ ನನಗಿದೆ ಎಂದು ಹೇಳಿದರು.

DAKSHINA KANNADA

7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ, ಲುಕ್ ಔಟ್ ನೋಟಿಸ್ ಹೊರಡಿಸಿದ ಕೊಣಾಜೆ ಪೊಲೀಸರು

Published

on

ಮಂಗಳೂರು: ನಗರದ ಹೊರವಲಯದ ಪಿ ಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕಾಸರಗೋಡು ನಿವಾಸಿ ಸಲೀಂ ಎಂಬವರ ಪುತ್ರ ಮೊಹಮ್ಮದ್ ಶಾಮೀಲ್‌(21) ಎಂಬವರು 7  ವರ್ಷಗಳ ಹಿಂದೆ ಪಿ ಎ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 14-4-2018ರಂದು ಕಾಲೇಜಿನ ಪಾರ್ಕಿಂಗ್ ಸ್ಥಳಕ್ಕೆ ಬಂದು ಕಾಲೇಜಿನ ಒಳಗೆ ಬಾರದೇ ಮನೆಗೂ ಹೋಗದೇ ನಾಪತ್ತೆಯಾಗಿದ್ದರು.

ಅವರನ್ನು ಕೂಡಲೇ ಪತ್ತೆ ಮಾಡಿಕೊಡುವಂತೆ ಲಿಖಿತ ದೂರನ್ನು ಕೊಣಾಜೆ ಠಾಣಾ ಪೊಲೀಸರಲ್ಲಿ ದಾಖಲಿಸಿದ್ದರು. ಪಿ ಎ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಶರೀಫ್ ಎಂಬವರು ಕೊಣಾಜೆ ಠಾಣೆಗೆ ಮತ್ತೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಎತ್ತರ 168 CM, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು, ಕಪ್ಪು ಕುರುಚಲು ಗಡ್ಡ ಮತ್ತು ಮೀಸೆ ಹಾಗೂ ಉದ್ದ ತಲೆ ಕೂದಲು ಹೊಂದಿದ್ದಾರೆ. ಮಾಲಯಾಳಂ, ಇಂಗ್ಲೀಷ್, ಹಿಂದಿ ಭಾಷೆಯನ್ನು ಅವರು ಮಾತನಾಡುತ್ತಾರೆ.

ಇವರು ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ  0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9091873198 ,9535247535 ನೇ ಸಂಖ್ಯೆಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

 

 

Continue Reading

DAKSHINA KANNADA

ಮಂಗಳೂರು: ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಸಹಿತ ಮೂವರು ಅರೆಸ್ಟ್

Published

on

ಮಂಗಳೂರು: ಡ್ರಗ್‌ ಪೆಡ್ಲಿಂಗ್ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಕೋಟೆಕಾರು ಗ್ರಾಮದ ಬಗಂಬಿಲ ಮೈದಾನ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಬಂಧಿಸಿದ್ದಾರೆ. ಮೊಹಮ್ಮದ್ ನಿಗಾರೀಸ್, ಅಬ್ದುಲ್ ಶಕೀಬ್ ಯಾನೆ ಶಾಕಿ ಮತ್ತು ಸಬೀರ್ ಅಹಮ್ಮದ್ ಬಂಧಿತ ಆರೋಪಿಗಳು.

ಆರೋಪಿಗಳಿಂದ 59,300 ರೂ. ಬೆಲೆಬಾಳುವ 1.511 ಕೆಜಿ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ತೂಕ ಮಾಪಕ, 2 ಮೊಬೈಲ್, 1 ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಆಗಿರುವ ಮಹಾರಾಷ್ಟ್ರದ ಧುಲೆ ನಿವಾಸಿ ಮೊಹಮ್ಮದ್ ನಿಗಾರೀಸ್  ವಿಲಾಸಿ ಜೀವನಕ್ಕಾಗಿ ತನ್ನ ಊರಿನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ.

ಇನ್ನೊಂದು ಪ್ರಕರಣದಲ್ಲಿ ನಾಟೆಕಲ್ ಉರುಮಣೆ ನಿವಾಸಿ ಅಬ್ದುಲ್ ಶಕೀಬ್ ಯಾನೆ ಶಾಕಿ ಮತ್ತು ಪೆರ್ಮನ್ನೂರು ಗಂಡಿ ನಿವಾಸಿ ಸಬೀರ್ ಅಹಮ್ಮದ್‌, ಡ್ರೈವರ್ ಮತ್ತು ಪೈಂಟರ್ ಅಗಿದ್ದವರು. ಶಕೀಬನು ಬಿ.ಸಿ.ರೋಡ್‌ನ ಫ್ಯಾಬೀನ್ ಎಂಬಾತನಿಂದ ಗಾಂಜಾ ಪಡೆದುಕೊಂಡು ಮಾರಾಟ ಮಾಡುತ್ತಿರುವಾಗ ಗಂಡಿ ಪ್ರದೇಶದಲ್ಲಿ  ಬಂಧಿಸಿದ್ದಾರೆ.

 

Continue Reading

MANGALORE

ಬಿಹಾರ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಕರ್ನಾಟಕದ ಪೊಲೀಸ್ ಹೃದಯಘಾ*ತಕ್ಕೆ ಬ*ಲಿ

Published

on

ಮಂಗಳೂರು/ಬಿಹಾರ : ಬಿಹಾರದಲ್ಲಿ ನಡೆಯುತ್ತಿದ್ದ ವಿಧಾನಸಭೆ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಕರ್ನಾಟಕ ಮೂಲದ ಕೆಎಸ್ಆರ್‌ಪಿಯ ಕಾನ್ಸ್ಟೇಬಲ್ ಒಬ್ಬರು ಹೃದಯಘಾ*ತಕ್ಕೆ ಬಲಿಯಾಗಿದ್ದಾರೆ. ವಿಜಯಪುರದ ರಾಜಕುಮಾರ್ ವಾಲಿಕಾರ್(32) ಮೃ*ತಪಟ್ಟವರು.

ಕೆಎಸ್ಆರ್‌ಪಿಯ ನಾಲ್ಕೈದು ಪಡೆಗಳು ಕಳೆದ ದಿನಗಳ ಹಿಂದೆ ವಿಧಾನಸಭೆ ಚುನಾವಣಾ ನಿಮಿತ್ತ ಬಿಹಾರಕ್ಕೆ ಹೋಗಿದ್ದವು. ಮಂಗಳವಾರ(ನ.11) ಕರ್ತವ್ಯದಲ್ಲಿದ್ದ ರಾಜಕುಮಾರ್ಗೆ ದಿಢೀರ್ ಎದೆ ನೋವು ಕಾಣಿಸಿದೆ. ಕುಸಿದು ಬಿದ್ದವರನ್ನು ಕಂಡು ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ರಾಜಕುಮಾರ್ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಪ್ರಾ*ಣ ಬಿಟ್ಟಿದ್ದಾರೆ.

ಇನ್ನೂ ಓದಿ:ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ

ರಾಜಕುಮಾರ್ ಅವರ ಮೃ*ತದೇಹವನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತರಿಸಲಾಗಿತ್ತು. ಬಳಿಕ ವಿಜಯಪುರ ಬೂದಿಹಾಳ ಗ್ರಾಮಕ್ಕೆ ತಲುಪಿಸಲಾಯಿತು ಎಂದು ಕೆಎಸ್ಆರ್‌ಪಿಯ ಮೂಲಗಳಿಂದ ತಿಳಿದು ಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page