Connect with us

BIG BOSS

ಕನ್ನಡ ಬಿಗ್ ಬಾಸ್ ಮತ್ತೆ ಪ್ರಾರಂಭ; ಇಲ್ಲಿದೆ ಬಿಗ್ ಅಪ್ಡೇಟ್

Published

on

ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-11 ಮುಗಿದಿದ್ದು ಮತ್ತೊಂದು ಆವೃತ್ತಿಗೆ ತಯಾರಿಗಳು ಜೋರಾಗಿ ನಡೆಯುತ್ತಿವೆ. ಸೀಸನ್ 12ರ ಬಿಗ್ ಅಪ್ಡೇಟ್ ಇದೀಗ ಲಭ್ಯವಾಗಿದೆ.

ಹೌದು, ಬಿಗ್ಬಾಸ್ ಸೀಸನ್ ಮತ್ತೆ ಪ್ರಾರಂಭವಾಗಿದೆ. ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಹೊಸ ಸೀಸನ್ನ ಪ್ರೋಮೊಗಳು, ಘೋಷಣೆಗಳು ಹರಿದಾಡುತ್ತಿವೆ. ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 12ರ ಅಪ್ಡೇಟ್ ಸಹ ಹೊರಬೀಳಲಿದೆ. ಈ ಬಾರಿ ನಿರೂಪಕರು ಯಾರಿರಲಿದ್ದಾರೆ. ಈ ಸೀಸನ್ನ ವಿಶೇಷತೆಗಳೇನು? ಎಂಬ ವೀಕ್ಷಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ನಿರೂಪಣೆಗೆ ಕಿಚ್ಚ ಸುದೀಪ್ ಗುಡ್ ಬೈ

ಕಳೆದ ಬಾರಿ ಬಿಗ್ ಬಾಸ್ ಮುಗಿಯುತ್ತಿದ್ದಂತೆ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದರು. ಕನ್ನಡ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ಸುದೀಪ್ ಅವರು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಅವರ ಜಾಗದಲ್ಲಿ ಮತ್ತೊಬ್ಬರನ್ನು ಊಹಿಸುವುದು ಅಸಾಧ್ಯ. ಆದರೆ ತಾವು ಇನ್ನು ಮುಂದೆ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಣೆ ಮಾಡಿರುವುದರಿಂದ ಬಿಗ್ ಬಾಸ್ ಆಯೋಜಕರು ಹೊಸ ನಿರೂಪಕರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಕೆಲವು ನಟರನ್ನು ಸಂಪರ್ಕ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಡಾಲಿ ಧನಂಜಯ್, ರಿಷಬ್ ಶೆಟ್ಟಿ, ರಮೇಶ್ ಅರವಿಂದ್ ಇನ್ನೂ ಕೆಲವು ಹೆಸರುಗಳು ತುಸು ಜೋರಾಗಿಯೇ ಕೇಳಿ ಬಂದಿತ್ತು. ಆದರೆ ಯಾವುದೂ ಸಹ ಅಧಿಕೃತ ಆಗಿರಲಿಲ್ಲ. ಆದರೆ ಈಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ಬಿಗ್ ಬಾಸ್ ಸೀಸನ್-12 ಬರೋದು ನಿಜನಾ ?

ಮೊನ್ನೆ ಮೊನ್ನೆ ಅಷ್ಟೆ ಬಿಗ್ ಬಾಸ್ ಸೀಸನ್-11 ಮುಗಿದಂತೆ ಅನ್ನೋ ಫೀಲ್ ಇದೆ. ಆದರೆ, ಬಿಗ್ ಬಾಸ್ ಎಂಡ್ ಆಗಿ ಹೆಚ್ಚು ಕಡಿಮೆ 6 ತಿಂಗಳು ಆಗಿದೆ. ಈ 6 ತಿಂಗಳ ಬಳಿಕ ಬಿಗ್ ಬಾಸ್ ಮತ್ತೆ ಶುರು ಆಗುತ್ತಿದೆ.

ಇದನ್ನೂ ಓದಿ: ವೆನಿಸ್ ನಗರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೆಜಾನ್ ಸಂಸ್ಥಾಪಕ

ಬಿಗ್ ಬಾಸ್ ಪ್ರೋಮೋ ಯಾವಾಗ?

ಬಿಗ್ ಬಾಸ್ ಸೀಸನ್‌ ಪ್ರೋಮೋ ವಿಶೇಷವಾಗಿಯೇ ಇರುತ್ತವೆ. ಶುರು ಆಗೋ ಮೊದಲು ರಿಲೀಸ್ ಮಾಡೋ ಪ್ರೋಮೋಗಳು ವೈರಲ್ ಕೂಡ ಆಗುತ್ತವೆ. ಕಲರ್ಸ್ ಕನ್ನಡ ತನ್ನ ಅಧಿಕೃತ ಪೇಜ್ ಅಲ್ಲಿಯೇ ಈ ಒಂದು ಪ್ರೋಮೋ ರಿಲೀಸ್ ಮಾಡೋದು ಇದೆ. ಆ ಬಳಿಕ ಈ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗೋದು ಇದೆ.

ಎಲ್ಲಾ ಊಹಾಪೋಹಗಳಿಗೆ ನಾಳೆ ಅಧಿಕೃತ ತೆರೆ

ಜೂನ್ 30 ರಂದು ಬಿಗ್ ಬಾಸ್ ಕನ್ನಡ ಆಯೋಜಕರು, ಕಲರ್ಸ್ ವಾಹಿನಿ ಬಿಗ್ ಬಾಸ್ ಕುರಿತು ಪತ್ರಿಕಾಗೋಷ್ಠಿ ಆಯೋಜನೆ ಮಾಡಿದೆ. ಈಗಾಗಲೇ ಕೆಲವು ಹರಿದಾಡಿರುವ ಊಹಾಪೋಹಗಳಿಗೆ ನಾಳೆ ಅಧಿಕೃತವಾಗಿ ಉತ್ತರ ದೊರೆಯಲಿದೆ.

BIG BOSS

13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಮಾಡಿದ ದಿವ್ಯಾ ಉರುಡುಗ; ವಿಡಿಯೋ ನೋಡಿ

Published

on

ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಗಮನಸೆಳೆದು, ಬಳಿಕ ಬಿಗ್ ಬಾಸ್ ಕನ್ನಡ ಶೋನಲ್ಲಿ ಸ್ಪರ್ಧಿಯಾಗಿ ಮಿಂಚಿದವರು ನಟಿ ದಿವ್ಯಾ ಉರುಡುಗ. ಹೌದು, ಒಂದಲ್ಲಾ ಎರಡು ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ದಿವ್ಯಾ ಕೊನೆಗೂ ವಿನ್ನರ್ ಆಗಲಿಲ್ಲ ಎಂಬುದು ಒಂದು ಕಡೆಯಾದರೆ, ಆ ಶೋನಿಂದ ಅವರ ಖ್ಯಾತಿಯ ದ್ವಿಗುಣವಾಯ್ತು ಅನ್ನೋದು ಮತ್ತೊಂದು ಕಡೆ.

ಇದೀಗ ನಟಿ ದಿವ್ಯಾ ಉರುಡುಗ ಸಾಹಸವೊಂದನ್ನು ಮಾಡಿದ್ದಾರೆ. ದುಬೈನಲ್ಲಿ ಸೈಡೈವಿಂಗ್ ಮಾಡಿದ್ದಾರೆ. ಬರೋಬ್ಬರಿ 13 ಸಾವಿರ ಅಡಿ ಎತ್ತರದಿಂದ ಕೆಳಕ್ಕೆ ಜಂಪ್ ಮಾಡಿದ್ದಾರೆ. ಸೈ ಡ್ರೈವಿಂಗ್ ಮಾಡಬೇಕು ಅಂತ ನಟಿ ದಿವ್ಯಾ ಉರುಡುಗ ಅವರಿಗೆ ಆಸೆ ಇತ್ತಂತೆ. ಕೊನೆಗೂ ಅದನ್ನೂ ಈಡೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: Watch Video: ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಜಗ್ಗೇಶ್

ಇದೇ ವಿಡಿಯೋವನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ” ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೇವಲ ಭಯಾನಕ ಆನಂದ ಇದನ್ನು ಮತ್ತೆ ಮಾಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ನಾನು 13,000 ಅಡಿಗಳಿಂದ ಜಿಗಿದಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

Watch Video:

Continue Reading

BIG BOSS

ಬಿಗ್ ಬಾಸ್-12ಗೆ ವಿವಾದಿತರಿಗೆ ನೋ ಎಂಟ್ರಿ; ಸಂಭಾವನೆ ಬಗ್ಗೆ ಮೌನ ಮುರಿದ ಸುದೀಪ್!?

Published

on

ಮಂಗಳೂರು/ಬೆಂಗಳೂರು: ಬಿಗ್‌ ಬಾಸ್ ಸೀಸನ್-12 ಶುರುವಾಗೋಕೆ ಕೌಂಟ್‌ಡೌನ್ ಶುರುವಾಗ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಕನ್ನಡ ಬಿಗ್‌ಬಾಸ್ ಶುರುವಾಗಲಿದೆ. ಮತ್ತೊಂದೆಡೆ ಈ ಬಾರಿ ವಿವಾದಿತರಿಗೆ ಅವಕಾಶ ಇಲ್ಲವೇ ಎಂಬ ಮಾತಿಗೆ ಪ್ರತಿಕ್ರಿಯಿಸಿದ್ದಾರೆ. ಇದರ ಜೊತೆಗೆ ಬಿಗ್‌ಬಾಸ್‌ ಶೋಗೆ ಸುದೀಪ್ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಬಗ್ಗೆ ಮೌನ ಮುರಿದಿದ್ದಾರೆ.


ಬಿಗ್‌ ಬಾಸ್ ಸೀಸನ್ 11 ಮುಗಿದು ಹೆಚ್ಚು ಕಡಿಮೆ ಆರು ತಿಂಗಳು ಕಳೆದುಹೋಗಿದ್ದು, ಇದೀಗ ಸೀಸನ್ 12ಗೆ ಆರಂಭವಾಗಲೂ ಸಿದ್ದತೆ ನಡೆಯುತ್ತಿದೆ. ಈ ಬಗ್ಗೆ ವಿವರಣೆ ನೀಡಲು ನಿನ್ನೆ (ಜೂ.30) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ‘ಕಲರ್ಸ್ ಕನ್ನಡ’ ವಾಹಿನಿಯೂ ಸುದ್ದಿಗೋಷ್ಠಿ ಆಯೋಜಿಸಿತ್ತು. ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಯ ಬಗ್ಗೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡರು. ವಿವಿಧ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಬಿಗ್ ಬಾಸ್-12ಗೆ ವಿವಾದಿತರಿಗೆ ನೋ ಎಂಟ್ರಿ?
ಹೊಸ ಆವೃತ್ತಿಯಲ್ಲಿ ಕಾಂಟ್ರವರ್ಸಿ ಕಿಂಗ್‌/ಕ್ವೀನ್‌ಗಳನ್ನ ಬಿಗ್‌ಬಾಸ್‌ಗೆ ಆಯ್ಕೆ ಮಾಡಿಕೊಳ್ಳುವುದಿಲ್ಲವಾ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ವೀಕೆಂಡ್ ಅಂತ ಬಂದಾಗ ಕಾಂಟ್ರವರ್ಸಿ ಮಾಡಿಕೊಂಡವರ ಪಂಚಾಯ್ತಿಗೆ ಸಮಯ ಹಾಕಬೇಕಾಗುತ್ತೆ. ಕೆಲವರು ಹೊರಗಡೆ, ಸ್ಟೇಜ್‌ಮೇಲೆ ಚನಾಗಿಯೇ ಇರ್ತಾರೆ ಆದ್ರೆ, ಒಳಗಡೆ ಹೋದ್ಮೇಲೆ ಕಾಂಟ್ರವರ್ಸಿ ಶುರು ಮಾಡುತ್ತಾರೆ. ಹಾಗೆ ಯಾರನ್ನೂ ಜಡ್ಜ್ ಮಾಡೋಕೆ ಆಗೋಲ್ಲ. ಆದ್ರೆ ಕೆಲವು ಷರತ್ತುಗಳಿವೆ ಅದು ಏನು ಅಂತಾ ಈಗ ಹೇಳಲ್ಲ ಎಂದಿದ್ದಾರೆ ಕಿಚ್ಚ. ಇನ್ನು ಕಂಟೆಸ್ಟೆಂಟ್‌ ಆಯ್ಕೆ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ತಿಳಿಸಲಾಗುತ್ತೆ ಎಂದಿದೆ ಕಲರ್ಸ್‌ ತಂಡ. ಈ ಬಾರಿ ಒಬ್ಬರು ಬುದ್ದಿವಂತರು, ಮತ್ತೊಬ್ಬರು ಅತೀ ಬುದ್ಧಿವಂತರು ಎಂಬ ಎರಡು ರೀತಿಯ ಕಂಟೆಸ್ಟೆಂಟ್‌ಗಳು ಇರುತ್ತಾರೆ ಎಂದು ಸುಳಿವು ನೀಡಿದ್ದಾರೆ.

ಸಂಭಾವನೆ ಬಗ್ಗೆ ಮೌನ ಮುರಿದ ಸುದೀಪ್!
ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಅವರ ಸಂಭಾವನೆಯ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಈ ಬಾರಿಯ ಬಿಗ್ ಬಾಸ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸುದೀಪ್ ಅವರು ಇದಕ್ಕೆ ಜಾಣತನದ ಉತ್ತರ ನೀಡಿದ್ದಾರೆ. ಸುದೀಪ್ ಅವರು ಈ ಮೊದಲು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ, ಈಗ ಅವರು ನಿರ್ಧಾರವನ್ನು ಬದಲಿಸಿದ್ದಾರೆ.

ಸಂಭಾವನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕಿಚ್ಚ, ಮನೆ ಬಾಡಿಗೆಗೆ ಹೋದರೆ 10 ಪರ್ಸೆಂಟ್ ಇನ್​ಕ್ರಿಮೆಂಟ್ ಇರುತ್ತೆ. ನಾನು ಲೀಸ್​ಗೂ ಅಲ್ಲ, ರೆಂಟ್​ಗೂ ಅಲ್ಲ. ನಮ್ಮದೊಂದು ಇರುತ್ತೆ ತಾನೇ’ ಎಂದರು.

ಮುಂದುವರಿದುಮ, ‘ಟ್ವೀಟ್ ಮಾಡುವಾಗ ಸಂಭಾವನೆ ವಿಚಾರ ತಲೆಯಲ್ಲಿ ಇರಲಿಲ್ಲ. ಟ್ವೀಟ್ ಮಾಡದೆಯೂ ಸಂಭಾವನೆ ಹೆಚ್ಚು ಬೇಕು ಎಂದು ಕೇಳಬಹುದಲ್ಲ. ಅದು ಪಬ್ಲಿಕ್​ನಲ್ಲಿ ಮಾತನಾಡುವ ವಿಚಾರ ಅಲ್ಲ. ಹಣ ಅನ್ನೋದು ಲಾಸ್ಟ್. ನಾನು ಸಿನಿಮಾದಲ್ಲಿ ಎಷ್ಟು ಸಂಭಾವನೆ ಪಡೆಯುತ್ತೇನೆ ಎಂಬ ಸರಿಯಾದ ಲೆಕ್ಕ ಯಾರಿಗೂ ಸಿಗಲ್ಲ. ಏಕೆಂದರೆ ಪ್ರತಿ ಚಿತ್ರವೂ ಭಿನ್ನ, ಪ್ರತಿ ಚಿತ್ರದ ಬಜೆಟ್ ಕೂಡ ಬೇರೆ ಬೇರೆ ಇರುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: ಖ್ಯಾತ ಸುದ್ದಿ ನಿರೂಪಕಿ ಆತ್ಮಹತ್ಯೆ;  ಆಕೆ ಮಾಡಿದ್ದ ಕೊನೆಯ ಇನ್ಸ್ಟಾ ಪೋಸ್ಟ್ ಏನು?  

‘ನಾನು ರೇಟ್ ಕಟ್ಟೋಕೆ ಹೋಗಲ್ಲ. ನಾನು ಚೀಪ್ ಅಲ್ಲ. ದೊಡ್ಡ ಬಜೆಟ್ ಸಿನಿಮಾ ಇದ್ದಾಗ ನಾವು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು. ಮೊದಲ ಸೀಸನ್​​ನಲ್ಲಿ ಪಡೆದಿದ್ದ ಸಂಭಾವನೆಯನ್ನು ಈಗಲೂ ಪಡೆಯೋಕೆ ಆಗುತ್ತಾ? ಹೆಚ್ಚು ಬೇಕಾಗುತ್ತದೆ. ಪ್ರತಿ ಶೋಗೂ ಅದರದ್ದೇ ಆದ ಬಜೆಟ್ ಇರುತ್ತದೆ. ಸ್ಪರ್ಧಿಗಳಿಗೂ ಸಂಭಾವನೆ ಕೊಡಬೇಕು’ ಎಂದಿದ್ದಾರೆ ಅವರು. ಒಟ್ಟಿನಲ್ಲಿ ಸುದೀಪ್ ಅವರು ಸಂಭಾವನೆ ಕುರಿತ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ್ದಾರೆ.

 

 

 

 

 

Continue Reading

BIG BOSS

ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷಾಂತರ ಹಣ ವಂಚನೆ ಆರೋಪ

Published

on

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷಾಂತರ ಹಣ ವಂಚನೆ ಆರೋಪ ಕೇಳಿಬಂದಿದೆ.

ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎನ್ನುವವರು ಈ ಗಂಭೀರ ಆರೋಪ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸುರೇಶ್ ಅವರು ಕೇಬಲ್ ಚಾನೆಲ್‌ನ ಸೆಟ್‌ಅಪ್ ಮಾಡಿ ಕೊಡುವುದಾಗಿ ಹೇಳಿದ್ದರು. 14 ಲಕ್ಷಕ್ಕೆ ಒಪ್ಪಂದ ಕೂಡ ಆಗಿತ್ತು. ಹಾಗೂ ಸುರೇಶ್ 4 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಹಂತ ಹಂತವಾಗಿ ಏಳು ಲಕ್ಷ ರೂ ಹಣ ಸುರೇಶ್ ಗೆ ಮೈನುದ್ದೀನ್ ನೀಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ ಅರ್ಧಂಬರ್ಧ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಈಗ ಅವರು ಹಣವನ್ನು ಮರಳಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

READ IN ENGLISH : https://www.nammakudlaenglish.com/bigg-boss-fame-gold-suresh-accused-of-cheating-lakhs-of-rupees/

ಇದನ್ನೂ ಓದಿ: ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ನಟ ದರ್ಶನ್ ಭೇಟಿ

ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗಳಿಂದ ಮಾಹಿತಿ ನಿರೀಕ್ಷಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page