Connect with us

DAKSHINA KANNADA

” ಕಂಬಳದ ಕೋಣಗಳನ್ನು ಮಹಿಳೆಯರು ಓಡಿಸೋದು ಸರಿಯಲ್ಲ “..!?

Published

on

ಮೊದಲ ಬಾರಿಗೆ ಮಹಿಳೆಯರು ಕಂಬಳದ ಕೋಣಗಳನ್ನು ಓಡಿಸಲಿದ್ದು ಅವರಿಗೆ ಅಗಸ್ಟ್ ತಿಂಗಳಿನಿಂದ ತರಬೇತಿ ನೀಡಲು ದಕ್ಷಿಣ ಕನ್ನಡ ಕಂಬಳ ಅಕಾಡೆಮಿಕ್ ಸಿದ್ದತೆ ನಡೆಸುತ್ತಿದೆ. ಆದರೆ ಕಂಬಳದ ಕೋಣಗಳನ್ನು ಮಹಿಳೆಯರು ಓಡಿಸೋದು ಸರಿಯಲ್ಲ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ದುಬೈ: ಕರಾವಳಿಯಲ್ಲಿ ಕಂಬಳದ ಆಚರಣೆ ಸುಮಾರು 800-900 ವರುಷಗಳ ಹಿಂದಿನಿಂದಲೇ ಬಂದಿರುವ ಇತಿಹಾಸ.

ಆಧುನಿಕ ಕಾಲದಲ್ಲಿ ಕಂಬಳವನ್ನು ಇಂದಿನ ಅಧುನಿಕ ಜಗತ್ತಿನ ದಾವಂತದ ಬದುಕಿನಲ್ಲಿ ಸಾಂಪ್ರದಾಯಿಕ ಆಚರಣೆಗಳೆಲ್ಲವು ಪ್ರಶ್ನಾರ್ಹವೆಂದು ತಿಳಿದಿರುವಾಗ ಕಂಬಳವು ಸಹ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ.

ಆದರೇ ಇಷ್ಟರ ತನಕ ಪುರುಷರು ಮಾತ್ರ ಕಂಬಳದ ಕೋಣಗಳನ್ನು ಓಡಿಸುತಿದ್ದು, ಇನ್ನೂ ಮಹಿಳೆಯರು ಈ ಕ್ಷೇತ್ರಕ್ಕೂ ಇಳಿಯಲಿದ್ದಾರೆ.

ಮೊದಲ ಬಾರಿಗೆ ಮಹಿಳೆಯರು ಕಂಬಳದ ಕೋಣಗಳನ್ನು ಓಡಿಸಲಿದ್ದು ಅವರಿಗೆ ಅಗಸ್ಟ್ ತಿಂಗಳಿನಿಂದ ತರಬೇತಿ ನೀಡಲು ದಕ್ಷಿಣ ಕನ್ನಡ ಕಂಬಳ ಅಕಾಡೆಮಿಕ್ ಸಿದ್ದತೆ ನಡೆಸುತ್ತಿದೆ.

ಇದಕ್ಕೆ ತರಬೇತಿಯೂ ಅಧಿಕೃತವಾಗಿ ಆರಂಭಗೊಳ್ಳಲಿದೆ. ಆದ್ರೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವೂ ಕೇಳಿ ಬಂದಿದ್ದು ಮಹಿಳೆಯರಿಗೆ ಕಂಬಳದಲ್ಲಿ ಕೋಣ ಓಡಿಸಲು ಅವಕಾಶ ನೀಡಬಾರದೆಂಬ ಆಗ್ರಹವೂ ಕೇಳಿ ಬಂದಿದೆ.

ಈ ಹಿಂದೆ ಕೋಣಗಳ ಓಟ ಸ್ಪರ್ಧೆಯ ಹಿಂದಿದ್ದ ಧಾರ್ಮಿಕ ಶ್ರದ್ಧೆ ಮಾಯವಾಗಿ ಮನೋರಂಜನಾತ್ಮಕ ಕ್ರೀಡೆಯಾಗಿ ಮಾರ್ಪಟ್ಟಿದೆ.

ಕಂಬುಳ ಒಂದು ಕ್ರೀಡೆ ಮಾತ್ರವಲ್ಲ ಅದು ನಮ್ಮ ದೈವ ದೇವರ ನಂಬಿಕೆ, ನಮ್ಮ ಸಂಸ್ಕೃತಿ, ಆಚಾರ ವಿಚಾರ ಇತಿಹಾಸ ಇರುವ ಕಲೆಯಾಗಿದೆ.

ಅದನ್ನು ಆಧುನಿಕದ ಜತೆಗೆ ಅದರ ಆಚಾರ ವಿಚಾರ ಇತಿಹಾಸವನ್ನು ಕಾಪಾಡಿಕೊಂಡು ಬರುವುದು ನಮ್ಮ ಕರ್ತವ್ಯ.

ಕಂಬಳ ಕ್ಷೇತ್ರದಲ್ಲಿ ಮಹಿಳೆಯರ ಬೆಂಬಲ ಹಾಗೂ ಸಹಕಾರ ಅಪಾರವಾದದು. ಆದರೆ ಕಂಬಳದ ಕೋಣಗಳನ್ನು ಓಡಿಸೊದು ಸರಿಯಲ್ಲವೆಂದು ದುಬೈನ ನಮ್ಮ ಕಂಬಳ ಟೀಮ್ ಸನತ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಕಂಬಳದ ಕ್ಷೇತ್ರದ ಹಿರಿಯರ ಅಭಿಪ್ರಾಯವನ್ನು ಪಡೆದು ಕಂಬಳ ಅಕಾಡೆಮಿಕ್ ಮಹಿಳೆಯರ ತರಬೇತಿ ಬಗ್ಗೆ ನಿರ್ಧರಿಸೊದು ಉತ್ತಮ.

ಬೇಕಾದರೆ ಮಹಿಳೆಯರಿಗೆ ಕಂಬಳದ ಉದ್ಘೋಷಕರಾಗಿ ಅಥವಾ ಕಂಬಳದ ಬರವಣಿಗೆಯ ಬಗ್ಗೆ ತರಬೇತಿ ನೀಡಲಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

DAKSHINA KANNADA

ಅಂತರ ಜಿಲ್ಲಾ ಶಾಲಾ ಕಾಲೇಜು ಕಳ್ಳತನದ ಆರೋಪಿ ಸೆರೆ; 1 ಕಾರು, 1 ಮೊಬೈಲ್ ಮತ್ತು 84,500 ರೂಪಾಯಿ ನಗದು ವಶ

Published

on

ಹಲವು ಶಾಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಶಾಲಾ ಕಾಲೇಜು ಆರೋಪಿ ಇಂದು ಸೆರೆಯಾಗಿದ್ದಾನೆ. ಆತನಿಂದ 1 ಕಾರು, 1 ಮೊಬೈಲ್ ಹಾಗೂ 84,500 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಫೆ.21 ರಿಂದ ಫೆ.22 ರ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲೆಯ ಕಛೇರಿಯ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಒಡೆದು ಒಳ ಪ್ರವೇಶಿಸಿ ಕಛೇರಿಯ ಕಪಾಟು ಮತ್ತು ಮೇಜಿನ ಡ್ರಾವರನ್ನು ಒಡೆದು ನಗದು ಹಣ ಅಂದಾಜು 1,50,000/- ಮತ್ತು 3 ಡಿವಿಆರ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಲ್ಲದೆ, ಶಾಲೆಯ ಸಿಸಿಟಿವಿಯನ್ನು ಹಾಳು ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 26/2025 ಕಲಂ 331(3) 331(4), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಾರ್ಚ್‌ 6 ರಿಂದ ಮಾಚ್‌ 7 ರ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು, ಒಳಪ್ರವೇಶಿಸಿ ಕಪಾಟಿನ ಬಾಗಿಲು ತೆಗೆದು, ರಿಜಿಸ್ಟರ್ ಗಳನ್ನು ಚಲ್ಲಾಪಿಲ್ಲಿ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 35/2025 ಕಲಂ 331(3), 331(4), 62 ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಮಾರ್ಚ್‌ 4 ರಿಂದ ಮಾಚ್‌ 5ರ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಸಂತ ಮರಿಯಾ ಗೊರಟ್ಟಿ ಆಂಗ್ಲ ಮಾದ್ಯಮ ಶಾಲೆಯ ಕಛೇರಿಯ ಬೀಗವನ್ನು ಯಾರೋ ಕಳ್ಳರು ಒಡೆದು ಒಳಪ್ರವೇಶಿಸಿ, ಕಪಾಟಿನ ಬೀಗವನ್ನು ಮುರಿದು ಅದರಲ್ಲಿದ್ದ ನಗದು 60000/- ಮತ್ತು 5000/- ಮೌಲ್ಯದ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಿರುವ ಬಗ್ಗೆ ಶಾಲಾ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 40/2025 ಕಲಂ 305, 331(3), 331(4) ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಎಲ್ಲಾ ಪ್ರಕರಣಗಳಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್‌ರವರ ನೇತೃತ್ವದ ಕಾರ್ಕಳ ನಗರ ಪೊಲೀಸ್ ಠಾಣಾ ಪಿ.ಎಸ್.ಐ ಶಿವಕುಮಾರ್, ಸಿಬ್ಬಂದಿಯವರಾದ ರಂಜಿತ್‌, ಶಿವಾನಂದ, ಕಾರ್ಕಳ ಗ್ರಾಮಾಂತರ ಠಾಣಾ ಚಂದ್ರಶೇಖರ, ಅಜೆಕಾರು ಠಾಣಾ ಸತೀಶ, ಪ್ರದೀಪ್‌ರವರನ್ನೊಳಗೊಂಡ ತಂಡ, ಮಾರ್ಚ್‌ 20ರಂದು ನಿಟ್ಟೆ ಗ್ರಾಮದ ಸಂತ ಲಾರೆನ್ಸ್ ಫ್ರೌಡ ಶಾಲೆಯ ಸಮೀಪ ಅನುಮಾನಾಸ್ಪದವಾಗಿ ಬಿಳಿ ಬಣ್ಣದ ಕಾರಿನಲ್ಲಿ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಅರ್ಷಿತ್ ಅವಿನಾಶ್ ದೋಡ್ರೆ(24), ಯೋಜನಾ ನಗರ, ಬೈಂದೂರು ಎಂಬುದಾಗಿ ತಿಳಿಸಿದ್ದು, ಮೇಲ್ಕಾಣಿಸಿದ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಕರಣಗಳಿಗೆ ಸಂಬಂದಿಸಿದಂತೆ ಆಪಾದಿತನನ್ನು ವಶಕ್ಕೆ ಪಡೆಯಲಾಯಿತು.

ಆಪಾದಿತನು ಕೃತ್ಯಕ್ಕೆ ಬಳಸಿದ್ದ ಸುಮಾರು 2,00,000/- ಮೌಲ್ಯದ KA21N3929 Ritz ಕಾರು, 20,000/- ಮೌಲ್ಯದ ಮೊಬೈಲ್ ಫೋನ್, ನಗದು ರೂ 84,500/- ಮತ್ತು ಇತರೇ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡು, ಆಪಾದಿತನನ್ನು ವಿಚಾರಣೆ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಾನ್ಯ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂದನಕ್ಕೆ ನೀಡಿರುತ್ತಾರೆ.

Continue Reading

DAKSHINA KANNADA

ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ 5.75 ಮೀ ನೀರು ಸಂಗ್ರಹ..! ಎರಡು ತಿಂಗಳು ನಿರಾತಂಕ..!

Published

on

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಂಚ ನೀರಿನ ಸಂಗ್ರಹ ಕಡಿಮೆ ಆಗಿದೆ. ಹಾಗಂತ ಮುಂದಿನ 60 ದಿನಗಳ ಕಾಲ ನಗರದ ನೀರಿನ ಬೇಡಿಕ ಪೂರೈಸುವ ವಿಚಾರವಾಗಿ ಯಾವುದೇ ಆತಂಕ ಇಲ್ಲ ಎನ್ನಲಾಗಿದೆ. ಹಾಗಂತ ಮಳೆ ಬಾರದೆ ಬಿಸಿಲಿನ ತಾಪ ಏರಿಕೆಯಾದ್ರೆ ಕೊಂಚ ಮಟ್ಟಿನ ತೊಂದರೆಯನ್ನು ತಳ್ಳಿಹಾಕುವಂತಿಲ್ಲ.

ಮಂಗಳೂರು ನಗರಕ್ಕೆ ಪ್ರತಿ ನಿತ್ಯ 160 MLD ನೀರಿನ ಬೇಡಿಕೆ ಇದ್ದು, ತುಂಬೆ ಡ್ಯಾಮ್ ನಿಂದ ನಿರಂತರವಾಗಿ ನೀರು ಪೂರೈಕೆ ಆಗುತ್ತಿದೆ. ಮಂಗಳೂರಿನಲ್ಲಿರುವ 80 MLD ಸಾಮರ್ಥ್ಯದ ಎರಡು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣಗೊಂಡು ನಗರದ ಜನರಿಗೆ ಪೂರೈಕೆ ಆಗುತ್ತಿದೆ. ತುಂಬೆ ಡ್ಯಾಮ್ ನ ಶೇಖರಣಾ ಸಾಮರ್ಥ್ಯ 6 ಮೀಟರ್ ಆಗಿದ್ದು, ಇದೀಗ ಮಾರ್ಚ್ ಅಂತ್ಯದ ವೇಳೆಗೆ 5.75 ಮೀಟರ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ 5.85 ಇದ್ದು, ಕಳೆದ ವರ್ಷಕ್ಕಿಂತ ಈ ವರ್ಷ .10 ಮೀಟರ್ ಕಡಿಮೆ ನೀರಿನ ಸಂಗ್ರಹ ಇದೆ.

ತುಂಬೆ ವೆಂಟೆಡ್ ಡ್ಯಾಮ್ ಗೂ ಮೊದಲು ಸಿಗುವ ಎಎಂಆರ್, ಸರಳಿಕಟ್ಟೆ, ಜಕ್ಕ್ರಿಬೆಟ್ಟು, ಮೊದಲಾದ ಕಡೆಯಲ್ಲೂ ನೀರಿನ ಸಂಗ್ರಹ ಇರುವ ಕಾರಣ ಮಂಗಳೂರು ನಗರಕ್ಕೆ ನೀರು ಪೂರೈಕೆಗೆ ಯಾವುದೇ ಆತಂಕ ಇಲ್ಲಾ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಂತ ನೀರನ್ನು ಜನರು ಇತಿಮಿತಿಯಲ್ಲಿ ಬಳಸುವ ಮೂಲಕ ನೀರಿನ ಉಳಿತಾಯ ಮಾಡುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

Continue Reading

DAKSHINA KANNADA

ಹಳೆ ಮೀಸಲು ಪಟ್ಟಿಯಂತೆ ಪಾಲಿಕೆ ಚುನಾವಣೆ ..!? ಶೀಘ್ರವೇ ಆಗಲಿದೆ ಘೋಷಣೆ..!

Published

on

ಮಂಗಳೂರು / ಮೈಸೂರು: ಮಂಗಳೂರು ಸೇರಿದಂತೆ ರಾಜ್ಯದ ಐದು ಮಹಾನಗರ ಪಾಲಿಕೆಗೆ ಈ ವರ್ಷದಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಸರ್ಕಾರದಿಂದ ಈ ಐದೂ ಮಹಾನಗರ ಪಾಲಿಕೆಗಳ ಮೀಸಲು ಪಟ್ಟಿ ನೀಡಿದ್ರೆ ಅದರಂತೆ ಚುನಾವಣೆ ನಡೆಯಲಿದೆ. ಇಲ್ಲವಾದಲ್ಲಿ ಹೈ ಕೋರ್ಟ್ ಮೊರೆ ಹೋಗಿ ಹಳೆ ಮೀಸಲು ಪಟ್ಟಿಯಂತೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.


ಮಂಗಳೂರು ಸೇರಿದಂತೆ ಮೈಸೂರು, ಶಿವಮೊಗ್ಗ, ದಾವರಣಗೆರೆ, ತುಮಕೂರು ಈ ಐದು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿದಿಗಳ ಅವದಿ ಮುಕ್ತಾಯಗೊಂಡಿದೆ. ಈ ಐದೂ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆಸಬೇಕಾಗಿದ್ದು, ಚುನಾವಣಾ ಆಯೋಗ ರಾಜ್ಯ ಸರ್ಕಾರದ ಬಳಿ ಮೀಸಲು ಪಟ್ಟಿ ನೀಡಲು ಮನವಿ ಮಾಡಿದೆ. ನಿಯಮಾನುಸಾರ ಸರ್ಕಾರ ಮೀಸಲು ಪಟ್ಟಿ ಕೊಟ್ಟ ಬಳಿಕ ಅದರಂತೆ ಚುನಾವಣೆ ನಡೆಸಲಾಗುತ್ತದೆ. ಆದ್ರೆ ಸರ್ಕಾರ ಇನ್ನೂ ಮೀಸಲು ಪಟ್ಟಿ ನೀಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೊಂದು ವೇಳೆ ಮೀಸಲು ಪಟ್ಟಿ ನೀಡದೇ ಇದ್ರೆ ಈ ಹಿಂದಿನ ಮೀಸಲು ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣ ಆಯಕ್ತು ಜಿ.ಎಸ್. ಸಂಗ್ರೇಶಿ ಮಾಹಿತಿ ನೀಡಿದ್ದಾರೆ. ಮತದಾರರ ಪಟ್ಟಿ ಸಿದ್ಧವಾಗಿದೆಯಾದ್ರೂ ಮೀಸಲು ಪಟ್ಟಿಗಾಗಿ ಮಾತ್ರ ಕಾಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page