Connect with us

FILM

ಕಮಿಟ್ ಆಗಿದ್ದಾರಾ ನಟಿ ಚೈತ್ರ ಜೆ ಆಚಾರ್? ಯುವ ನಟನೊಂದಿಗೆ ಪೋಸ್! ಇನ್ಸ್ಟಾ ಸ್ಟೋರಿಯಲ್ಲಿತ್ತು ಹಿಂಟ್..!

Published

on

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಗಮನ ಸೆಳೆದ ಕಲಾವಿದೆ ಚೈತ್ರಾ ಆಚಾರ್ ಮಹಿರ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಆ ದೃಶ್ಯ, ಗಿಲ್ಕಿ, ತಲೆದಂಡ, ಟೋಬಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚೈತ್ರಾ ನಟಿ ಮಾತ್ರವಲ್ಲದೇ ಗಾಯಕಿಯೂ ಕೂಡ ಹೌದು.
ಸದಾ ಗ್ಲಾಮರಸ್ ಫೋಟೋ, ಬೋಲ್ಡ್ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ.

ಕಮಿಟ್ ಆಗಿದ್ದಾರಾ ನಟಿ?

ಸದಾ ಮಾದಕ ಫೋಟೋ ಶೂಟ್ ಮೂಲಕ ಚೈತ್ರಾ ಜೆ ಆಚಾರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.
ಇತ್ತೀಚೆಗೆ ಅವರು ಹಾಕಿದ ಸ್ಟೋರಿ ಗಾಸಿಪ್ ಸೃಷ್ಟಿಸಿದೆ. ಗುಲ್ಟು, ಹೊಂದಿಸಿ ಬರೆಯಿರಿ ಖ್ಯಾತಿಯ ನಟ ನವೀನ್ ಶಂಕರ್ ಜೊತೆಗಿನ ಫೋಟೋ ಹಂಚಿಕೊಂಡಿದ್ದು, ಫೋಟೋಗೆ ಸಾಲೊಂದನ್ನು ಚೈತ್ರ ಹೊಂದಿಸಿ ಬರೆದಿದ್ದು ನವೀನ್ ಶಂಕರ್ ಹಾಗೂ ಚೈತ್ರಾ ನಡುವೆ ಏನು ನಡೀತಿದೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
“ಆನ್ಲೈನ್ ನಲ್ಲಿ ತಮ್ಮ ಸಂಭಂದ ಬಗ್ಗೆಗಿನ ವಿಚಾರವನ್ನು ಪ್ರಕಟಿಸಲು ಇಚ್ಛಿಸುವ ಜೋಡಿಗಳಿಗೆ ಪಿಂಟರೆಸ್ಟ್ ಶಿಫಾರಸ್ಸು ಮಾಡುವ ಭಂಗಿ ಇದು” ಎಂಬ ಅಡಿಬರಹದೊಂದಿಗೆ ಪೋಸ್ಟ್ ಮಾಡಿದ ಸ್ಟೋರಿ ಇದಾಗಿದ್ದು, ಪ್ರೇಮಗೀತೆಯೊಂದನ್ನು ಸಹ ಈ ಸ್ಟೋರಿಯಲ್ಲಿ ಬಳಸಿಕೊಂಡಿದ್ದು “ಈ ಹಾಡನ್ನು ಸಹ ಪರಿಗಣಿಸಬಹುದು’ ಎಂಬಂತೆ ಬರೆದುಕೊಂಡಿದ್ದರು.

ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ
‘ನೀವು ಏನು ಯೋಚಿಸುತ್ತಿದ್ದೀರೋ, ನಮ್ಮ ನಡುವೆ ಹಾಗೇನಿಲ್ಲ’ ಎಂಬ ಸಾಲು ಕೂಡ ಕೊನೆಯಲ್ಲಿ ಬರೆದು ಚೈತ್ರಾ ಪೋಸ್ಟ್ ಮಾಡಿದ್ದಾರೆ.


ಆದರೆ, ಅವರ ಗೆಳತಿ ನಟಿ ಅರ್ಚನಾ ಕೊಟ್ಟಿಗೆ ಈ ಸಂದರ್ಭ  ಒಂದು ಫೋಟೋವನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ‘ನೀವು ಹೇಳ್ತೀರಾ? ನಾನು ಹೇಳಲಾ?’ ಎಂದಿದ್ದಾರೆ. ಅದನ್ನು ಚೈತ್ರಾ ರಿ ಪೋಸ್ಟ್ ಮಾಡಿಕೊಂಡಿದ್ದಾರೆ. ಹಾಗಾಗಿ ಇವರ ನಡುವೆ ಏನಿದೆ? ಹೊಸ ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ.

FILM

ಗ್ರ್ಯಾಂಡ್ ಕಾನ್​ ಚಿತ್ರೋತ್ಸವದಲ್ಲಿ ಮಿಂಚಿದ ಲಕ್ಷ್ಮೀ ನಿವಾಸ ನಟಿ; ವಿಶೇಷ ಸೀರೆಯಲ್ಲಿ ಕಂಗೊಳಿಸಿದ ದಿಶಾ ಮದನ್

Published

on

ಮಂಗಳೂರು/ಬೆಂಗಳೂರು : ಪ್ರತಿಷ್ಠಿತ ದಿ ಗ್ರ್ಯಾಂಡ್ ಕಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್‌ ಮೇಲೆ ನಟಿ, ಮಾಡೆಲ್ ದಿಶಾ ಮದನ್ ಹೆಜ್ಜೆ ಹಾಕಿದ್ದಾರೆ. ವಿಶೇಷ ಸೀರೆಯಲ್ಲಿ ಕಂಗೊಳಿಸಿದ್ದಾರೆ. ದಿಶಾ ಮದನ್ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರ ನಿರ್ವಹಿಸುತ್ತಿದ್ದು, ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತ ಫ್ರಾನ್ಸ್‌ನಲ್ಲಿ ಕನ್ನಡದ ಕಂಪು ಬೀರಿದ್ದಾರೆ.

ವಿಶೇಷ ಸೀರೆಯಲ್ಲಿ ದಿಶಾ ಮದನ್ :

ಕಾನ್ ಫೆಸ್ಟಿವಲ್‌ನಲ್ಲಿ ಹೆಚ್ಚಾಗಿ ಬಾಲಿವುಡ್‌ ಮಂದಿಗೆ ಅವಕಾಶ. ಈ ಬಾರಿ ಕನ್ನಡದ ನಟಿ ಮಿಂಚಿದ್ದಾರೆ. ವಿಶೇಷವಾದ ಉಡುಗೆಯಲ್ಲಿ ಅವರು ಕನ್ನಡದ ಕಂಪನ್ನು ಪಸರಿಸಿದ್ದಾರೆ. ದಕ್ಷಿಣ ಭಾರತದ ಸಂಸ್ಕೃತಿಯನ್ನು ಅನಾವರಣ ಮಾಡಿದ್ದಾರೆ. ತಮಿಳುನಾಡಿನ ಚೆಟ್ಟಿನಾಡ್ ಬಳಿಯ ವಿಶೇಷ ಕುಶಲಕರ್ಮಿಗಳು ರೇಷ್ಮೆ ಹಾಗೂ ಚಿನ್ನದ ಎಳೆಗಳಿಂದ ನೇಯ್ದ ವಿಶೇಷ ಕಾಂಚಿವರಂ ಸೀರೆ ಮತ್ತು ರವಿಕೆಯಲ್ಲಿ ದಿಶಾ ಕಾಣಿಸಿಕೊಂಡಿದ್ದಾರೆ.

ಗಣರಾಜ್ ಜ್ಯುವೆಲ್ಲರಿಯ ಹಳೆಯ ಸಂಗ್ರಹದಲ್ಲಿನ ಚಿನ್ನ ಮತ್ತು ವಜ್ರಾಭರಣ ಧರಿಸಿ ಮುದ್ದಾಗಿ ಕಂಗೊಳಿಸಿದ್ದಾರೆ.

ದಿಶಾ ಮದನ್ ಪೋಸ್ಟ್ :

ಕಾನ್​ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಬಗ್ಗೆ ದಿಶಾ ಮದನ್ ಸಂತಸ ವ್ಯಕ್ತಪಡಿಸಿದ್ದಾರೆ. #FromKarnatakaToCannes ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಫೋಟೋ, ವೀಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ

ತಮಿಳುನಾಡಿನ ಚೆಟ್ಟಿನಾಡ್ ಭಾಗದಲ್ಲಿ 1950ರಲ್ಲಿ ಪ್ರಖ್ಯಾತವಾಗಿದ್ದ ವಧುವಿನ ಉಡುಗೆಯನ್ನು ನಾನು ಧರಿಸಿದ್ದೆ, ಇದು ನನಗೆ ವೇಷಭೂಷಣಕ್ಕಿಂತಲೂ ಹೆಚ್ಚಿನದಾಗಿತ್ತು. ಕಳೆದು ಹೋದ ಸಂಸ್ಕ್ರತಿಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನೆನಪಿಸಿದ್ದು ಹೆಮ್ಮೆ ಮೂಡಿಸಿತು ಎಂದು ಬರೆದುಕೊಂಡಿದ್ದಾರೆ.

ದಿಶಾ ಮದನ್ ಅವರಿಗೆ ಹಿರಿತೆರೆ, ಕಿರುತೆರೆ ಹಾಗೂ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Continue Reading

FILM

ವೈರಲ್‌ ಆಯ್ತು ವಿಜಯ್‌ ದೇವರಕೊಂಡ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್

Published

on

ನಟ ವಿಜಯ್‌ ದೇವರಕೊಂಡ ಸದ್ಯ ‘ಕಿಂಗ್‌ಡಮ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಇದರ ಬೆನ್ನಲ್ಲೇ ನಟನ ವಾಟ್ಸಾಪ್ ಚಾಟ್‌ನ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ವಿಜಯ್ ದೇವರಕೊಂಡ ತನ್ನ ತಾಯಿಯೊಂದಿಗಿನ ಚಿಟ್ ಚಾಟ್‌ನ ಒಂದು ಸ್ಕ್ರೀನ್‌ ಶಾಟ್‌ನ್ನು ಹಂಚಿಕೊಂಡಿದ್ದಾರೆ. ನಾವು ನಮ್ಮ ಹೆತ್ತವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬೇಕೆಂದು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ವಿಜಯ್ ದೇವರಕೊಂಡ ತಾಯಿ ಜೊತೆ ಮಾಡಿದ ವಾಟ್ಸಾಪ್‌ ಚಾಟ್‌ನ ಸ್ಕ್ರೀನ್‌ಶಾಟ್‌ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

ಎರಡು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ವಿಜಯ್ ದೇವರಕೊಂಡ ಪೋಸ್ಟ್ ಮಾಡಿದ್ದು, ನಾವಿಬ್ಬರೂ ಬಹಳ ದಿನಗಳಿಂದ ಒಟ್ಟಿಗೆ ಹೊರಗೆ ಹೋಗಿಲ್ಲದ ಕಾರಣ ಅಮ್ಮ ಇದ್ದಕ್ಕಿದ್ದಂತೆ ಊಟಕ್ಕೆ ಹೊರಗೆ ಹೋಗಬಹುದೇ ಎಂದು ಕೇಳಿದರು. ನಾವೆಲ್ಲರೂ ಯಾವಾಗಲೂ ಕೆಲಸ ಮತ್ತು ನಮ್ಮ ಕನಸುಗಳ ಹಿಂದೆ ಓಡುತ್ತಿರುತ್ತೇವೆ… ಕೆಲವೊಮ್ಮೆ ನಾವು ಬದುಕುವುದನ್ನು ಮರೆತುಬಿಡುತ್ತೇವೆ. ಹಾಗಾಗಿ ನಿನ್ನೆ ರಾತ್ರಿ ನಾವು ಹೊರಗೆ ಹೋಗಿ ತುಂಬಾ ಚೆನ್ನಾಗಿ ಸಮಯ ಕಳೆದೆವು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡುತ್ತಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅರೆಸ್ಟ್

ಮುಂದುವರಿದು, ನಿಮ್ಮ ಅಮ್ಮ ಮತ್ತು ಅಪ್ಪನೊಂದಿಗೆ ಸಮಯ ಕಳೆಯಲು ಮರೆಯಬೇಡಿ, ಅವರನ್ನು ಹೊರಗೆ ಕರೆದುಕೊಂಡು ಹೋಗಿ, ಪ್ರೀತಿ ನೀಡಿ, ಅಪ್ಪಿಕೊಂಡು ಅವರನ್ನು ಸಂತೋಷಪಡಿಸಿ.. ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಹೇಳಿ. ನಿಮ್ಮೆಲ್ಲರಿಗೂ ಮತ್ತು ನಿಮ್ಮ ಕುಟುಂಬಗಳಿಗೂ ಬಹಳಷ್ಟು ಪ್ರೀತಿಯನ್ನು ಕಳುಹಿಸುತ್ತಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

Continue Reading

FILM

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ

Published

on

ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯಕ್ಕೆ ಇಂದಿಗೆ 22 ವರ್ಷಗಳಾಗಿವೆ. ಇದೇ ಖುಷಿಯಲ್ಲಿ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಪೋಟೊವೊಂದನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್​ 2003ರಲ್ಲಿ ಮೇ 19ರಂದು ಧರ್ಮಸ್ಥಳದಲ್ಲಿ ವಿಜಯಲಕ್ಷ್ಮಿಯೊಂದಿಗೆ ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದರು. ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದ ಈ ಜೋಡಿ ಇದೀಗ 22ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ: ಪುತ್ತೂರು: ನಿಂತಿದ್ದ ಶಾಮೀಯಾನದ ಲಾರಿಗೆ ಬೈಕ್ ಡಿಕ್ಕಿ; ಸವಾರ ಸಾವು

ಸದ್ಯ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಟೊವೊಂದನ್ನು ಹಂಚಿಕೊಂಡಿದ್ದು. ಪೋಟೊ ಕೆಳಗೆ ‘ಶಾಶ್ವತವಾಗಿ’ ಎಂದು ಬರೆದುಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಈ ಜೋಡಿಗೆ ಫ್ಯಾನ್ಸ್​ಗಳು ಶುಭಾಶಯ ಕೋರುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page