Connect with us

FILM

80ರ ದಶಕದಲ್ಲಿ ಬಾಲ ನಟಿಯಾಗಿ ಮಿಂಚಿದ್ದ ಇಂದಿರಾ.. ಈಗ ಹೇಗಿದ್ದಾರೆ ಗೊತ್ತಾ!?

Published

on

ಕನ್ನಡ ಚಿತ್ರರಂಗದಲ್ಲಿ ಎಂಬತ್ತರ ದಶಕದಲ್ಲಿ ಮಿಂಚಿದ್ದವರು  ಈಗ ಕಣ್ಮರೆಯಾಗಿದ್ದಾರೆ. ಹೌದು, ಒಂದು ಕಾಲದಲ್ಲಿ ಬಾಳನಟಿಯರಾಗಿ, ನಟಿಯರಾಗಿ ನಟಿಸಿದ್ದ ನಟಿಯರು ಪತ್ತೆಯೇ ಇಲ್ಲದಂತಾಗಿದೆ. ಆದರೆ ಕೆಲವೊಂದು ಯೂಟ್ಯೂಬರ್ಸ್‌, ಚಾನೆಲ್‌ ಗಳ ಇಂಟರ್ವ್ಯೂವ್ ಮೂಲಕ ಹೊರ ಜಗತ್ತಿಗೆ ಕಾಣ ಸಿಗ್ತಾರೆ. ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ಎಂಬ ಸಾಂಗ್ ಹಿಂದಿನ ಕಾಲದಿಂದ ಈಗಿನವರೆಗೂ ಟ್ರೆಂಡ್‌ ನಲ್ಲಿದೆ. ರಾಮ ಲಕ್ಷ್ಮಣ ಸಿನೆಮಾದ ಹಾಡಾಗಿದ್ದು, ಇದರ ನಟಿ ಈಗ ಹೇಗಿದ್ದಾರೆ ಗೊತ್ತಾ?

ಬೇಬಿ ಇಂದಿರಾ.. ಒಂದು ಕಾಲದಲ್ಲಿ ಎಲ್ಲರ ನೆಚ್ಚಿನ ನಟಿ ಬೇಬಿ ಇಂದಿರಾ. ಮುದ್ದು ಮುದ್ದಾಗಿರುವ ಮೊಗದಿಂದ, ಅದ್ಭುತ ನಟನೆಯ ಮೂಲಕ ಜನರಿಗೆ ಪ್ರೀತಿ ಪಾತ್ರರಾಗಿದ್ದರು. ಈಗಲೂ ಕೂಡಾ ಕೆಲವರು ಇವರನ್ನು ನೆನಪಿಸಿಕೊಳ್ತಾರೆ. ಯಾಕಂದ್ರೆ ಹಿಂದಿನ ಕಾಲದ ಸಿನೆಮಾಗಳೇ ಹಾಗೆ ಅಲ್ವಾ. ಒಂದು ಅರ್ಥಬದ್ಧವಾದ  ಮನಸ್ಸಿಗೆ ಮುಟ್ಟುವಂಥ ಕಥೆಗಳು, ಹಾಡುಗಳು. ಬೇಬಿ ಇಂದಿರಾ ಬಾಲನಟಿಯಾಗ್ಗಿ ಸ್ಯಾಂಡಲ್‌ವುಡ್ ಬಾಲಿವುಡ್‌ ಸೇರಿದಂತೆ ಹಲವಾರು ದಿಗ್ಗಜರೊಂದಿಗೆ ನಟನೆಯನ್ನು ಮಾಡಿದ್ದಾರೆ.  ಕನ್ನಡ, ತಮಿಳು, ತೆಲುಗು ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬೇಬಿ ಇಂದಿರಾ ನಾಯಕಿಯಾಗಿ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು.  ಚೆನ್ನೈ ಮೂಲದ ಬೇಬಿ ಇಂದಿರಾ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ‘ಜನ್ಮ ರಹಸ್ಯ’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ಹಾಗೂ ಭಾರತಿ ವಿಷ್ಣುವರ್ಧನ್‌ ಜೋಡಿಯಾಗಿ ನಟಿಸಿದ್ದರು. ಆದರೆ ನಂತರ ಅವರು ನಟನೆಯಿಂದ ಸಂಪೂರ್ಣ ದೂರಾದರು.

ಅರ್ಜುನ್‌ ಸರ್ಜಾ ಜೊತೆ ನಾಯಕಿಯಾಗಿ ಮಳೆ ಬಂತು ಮಳೆ ಸಿನಿಮಾದಲ್ಲಿ ನಟಿಸಿದ್ದಾರೆ. ಇದಾದ ಬಳಿಕ ಅಂಜದ ಗಂಡು ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕೂಡಾ ನಟಿಸಿದ್ದರು. ಆದರೆ ಕೆಲವರ್ಷಗಳ ನಂತರ ಇಂದಿರಾ ಕಣ್ಮರೆಯಾಗಿಬಿಟ್ಟರು.

ಸಿನಿಮಾಗಳಿಗೆ ಗುಡ್‌ ಬೈ ಹೇಳಿ ಮದುವೆ ಆದ ನಟಿ

ಸಿನಿಮಾಗಳಿಗೆ ಗುಡ್‌ ಬೈ ಹೇಳಿ ಇಂದಿರಾ ತಮಿಳಿನ ಶ್ರೀಧರ್‌ ಅವನ್ನು ಮದುವೆ ಆದರು. ಶ್ರೀಧರ್‌ ಕೂಡಾ ತಮಿಳಿನಲ್ಲಿ ಬಾಲ ಕಲಾವಿದರಾಗಿ ಹೆಸರು ಮಾಡಿದ್ದವರು. ಕರ್ಣನ್‌, ಚಿತ್ರಮೇಳ, ಸ್ನೇಹಂ, ಕ್ರೋಧಂ ಸೇರಿ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಈ ದಂಪತಿಗೆ ಪ್ರಶಾಂತ್‌ ಹಾಗೂ ರಕ್ಷಿತ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ದುರದೃಷ್ಟವಷಾತ್‌ ಶ್ರೀಧರ್‌ 11 ಡಿಸೆಂಬರ್‌ 2013 ರಂದು ಹೃದಯಾಘಾತದಿಂದ ನಿಧನರಾದರು.

ಅಯ್ಯರ್ ಫ್ಯಾಮಿಲಿಯಿಂದ ಬಂದ ಇವರು ಮೂಲತಃ ಕೇರಳದ ಪಾಲಕ್ಕಾಡ್ ನವರು. ಬಳಿಕ ತಂದೆ ಸರಕಾರಿ ಕೆಲಸದಲ್ಲಿ ವರ್ಗಾವಣೆ ಯಾಗಿ ಚೆನ್ನೈ ಯಲ್ಲಿ ನೆಲೆಸ್ತಾರೆ. ಸಿನೆಮಾಗೆ ಗುಡ್‌ಬೈ ಹೇಳಿದ ಬಳಿಕ ಶ್ರೀಧರ್ ರವರನ್ನು ಮದುವೆಯಾಗ್ತಾರೆ. ಆದರೆ ದುರದೃಷ್ಟವಷಾತ್‌ ಶ್ರೀಧರ್‌ 11 ಡಿಸೆಂಬರ್‌ 2013 ರಂದು ಹೃದಯಾಘಾತದಿಂದ ವಿಧಿವಶರಾಗ್ತಾರೆ.

ಪತಿ ನಿಧನರಾದ ನಂತರ ಬೇಬಿ ಇಂದಿರಾ ಬಹಳ ಆರ್ಥಿಕ ಸಮಸ್ಯೆ ಎದುರಿಸಿದ್ದಾರೆ. ಬಹಳ ವರ್ಷಗಳಿಂದ ಅವರು ಮಾಧ್ಯಮಗಳ ಕಣ್ಣಿಗೂ ಬಿದ್ದಿಲ್ಲ. ಸೋಷಿಯಲ್‌ ಮೀಡಿಯಾ ಕೂಡಾ ಬಳಸುತ್ತಿಲ್ಲ. ಸದ್ಯಕ್ಕೆ ಇಂದಿರಾ ತಮಿಳುನಾಡಿನ ಚೆನ್ನೈನ ಕೊಟ್ಟಿವಾಕಮ್‌ ಕರ್ಪಗಂಬಲ್‌ ನಗರದಲ್ಲಿ ಮಕ್ಕಳೊಂದಿಗೆ ವಾಸವಿದ್ದಾರೆ.

 

FILM

ಮತ್ತೆ ಹೆಣ್ಣು ಮಗು ಹುಟ್ಟಬಹುದೆಂಬ ಭಯ…! ವಿವಾದಕ್ಕೆ ಕಾರಣವಾಯಿತು ನಟ ಚಿರಂಜೀವಿ ಹೇಳಿಕೆ

Published

on

ಮಂಗಳೂರು/ನವದೆಹಲಿ : ಬ್ರಹ್ಮ ಆನಂದಂ ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ನೀಡಿದ ಹೇಳಿಕೆಗಳು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಹೌದು, ಈ ಸಂದರ್ಭ ಅವರು ಮನೆಯ ತುಂಬ ಹೆಣ್ಣು ಮಕ್ಕಳೇ ತುಂಬಿದ್ದಾರೆ. ನಮ್ಮ ವಂಶವನ್ನು ಉದ್ಧಾರ ಮಾಡಲು ಮೊಮ್ಮಗ ಬೇಕಿತ್ತು ಎಂದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗ್ರಾಸವಾಗಿದೆ.

ಚಿರಂಜೀವಿ ಹೇಳಿದ್ದೇನು?

ಮಾತಿನ ಭರದಲ್ಲಿ ಚಿರಂಜೀವಿ ಗಂಡು ಮಗು ಅಂದ್ರೆ ತನಗೆ ಮೊಮ್ಮಗ ಬೇಕು ಎಂಬ ಇಂಗಿತ ಹೊರ ಹಾಕಿದ್ದಾರೆ.  ನನ್ನ ಮನೆಯಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದಾರೆ. ಹೀಗಾಗಿ ನನಗೆ ಮನೆಯಲ್ಲಿರುವಂತೆ ಭಾಸವಾಗುವುದಿಲ್ಲ. ಬದಲಿಗೆ ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವಂತೆ, ನಾನು ವಾರ್ಡನ್ ಆಗಿರುವಂತೆ ಭಾಸವಾಗುತ್ತದೆ. ನಮ್ಮ ಕುಟುಂಬದ ವಂಶವನ್ನು ಮುಂದುವರಿಸಲು ಮೊಮ್ಮಗ ಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಮನೆಯಲ್ಲಿ ಇರುವಾಗ ಮೊಮ್ಮಕ್ಕಳು ಸುತ್ತುವರೆದಿರುವಂತೆ ಭಾಸವಾಗುವುದಿಲ್ಲ. ನನ್ನ ಸುತ್ತಲೂ ಹೆಂಗಸರೇ ಸುತ್ತುವರೆದಿರುವುದರಿಂದ ನಾನು ಲೇಡೀಸ್ ಹಾಸ್ಟೆಲ್ ವಾರ್ಡನ್ ಎಂದು ಅನಿಸುತ್ತದೆ. ನಮ್ಮ ವಂಶವು ಮುಂದುವರಿಯಲು ಈ ಬಾರಿಯಾದರೂ ಚರಣ್‌ಗೆ ಗಂಡು ಮಗುವಾಗಲಿ ಎಂದು ನಾನು ಹಾರೈಸುತ್ತಲೇ ಇದ್ದೇನೆ. ಆದರೆ ಅವನಿಗೂ ಹೆಣ್ಣು ಮಗುವಾಯಿತು ಎಂದಿದ್ದಾರೆ.

ನನ್ನ ಮಗ ರಾಮ್ ಚರಣ್‌ಗೆ ಮತ್ತೊಂದು ಹೆಣ್ಣು ಮಗು ಹುಟ್ಟಬಹುದು ಎಂಬ ಭಯವಿದೆ. ಅವನಿಗೆ ಮತ್ತೆ ಹೆಣ್ಣು ಮಗುವಾದರೆ… ಎಂದು ನಾನು ಹೆದರುತ್ತೇನೆ ಎಂದು ಚಿರಂಜೀವಿ ಹೇಳಿದ್ದು ಇದು ವಿವಾದಕ್ಕೆಡೆ ಮಾಡಿಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಕೆಳಮಟ್ಟದ ಯೋಚನೆ, ರೀಲ್‌ನಲ್ಲಿ ಹೀರೋ ರಿಯಲ್‌ನಲ್ಲಿ ವಿಲನ್, ಇದೊಂದು ಕೆಟ್ಟ ಮೆಂಟಾಲಿಟಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ಗುಟ್ಟಾಗಿ ಎಂಗೇಜ್ಮೆಂಟ್…! ದರ್ಶನ್ ಬಗ್ಗೆ ಸ್ವಾಂಡಲ್‌ವುಡ್ ಕ್ವೀನ್ ಹೇಳಿದ್ದೇನು?

ಚಿರಂಜೀವಿ ಅವರಿಗೆ ಶ್ರೀಜಾ ಕೊನಿಡೇಲಾ, ಸುಶ್ಮಿತಾ ಕೊನಿಡೇಲಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಬ್ಬರಿಗೂ ಎರಡೆರಡು ಹೆಣ್ಣು ಮಕ್ಕಳಿವೆ. ಶ್ರೀಜಾಗೆ ನವೀಕ್ಷಾ,  ನಿವೃತ್ತಿ , ಸುಶ್ಮಿತಾಗೆ ಸಮರ,  ಸಂಹಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಮಗ ರಾಮ್ ಚರಣ್ ಪತ್ನಿ ಉಪಾಸನಾ 2023ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕ್ಲಿಂಕರಾ ಎಂದು ಹೆಸರಿಡಲಾಗಿದೆ.

 

Continue Reading

FILM

ಗುಟ್ಟಾಗಿ ಎಂಗೇಜ್ಮೆಂಟ್…! ದರ್ಶನ್ ಬಗ್ಗೆ ಸ್ವಾಂಡಲ್‌ವುಡ್ ಕ್ವೀನ್ ಹೇಳಿದ್ದೇನು?

Published

on

ಮಂಗಳೂರು/ಬೆಂಗಳೂರು : ಇತ್ತೀಚೆಗೆ ನಟಿ ರಕ್ಷಿತಾ ಪ್ರೇಮ್ ಅವರ ತಮ್ಮನ ವಿವಾಹ ನಡೆಯಿತು. ಈ ವೇಳೆ ಸ್ಯಾಂಡಲ್ ವುಡ್‌ ನಟ, ನಟಿಯರು ಗಮನ ಸೆಳೆದಿದ್ದರು. ಅವರಲ್ಲಿ ರಮ್ಯಾ ಕೂಡ ಒಬ್ಬರು. ಕಪ್ಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಂಗೊಳಿಸುತ್ತಿದ್ದ ಸ್ಯಾಂಡಲ್‌ವುಡ್ ಕ್ವೀನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಈ ವೇಳೆ ಅವರ ಕೈಯಲ್ಲಿದ್ದ ರಿಂಗ್ ಗಮನ ಸೆಳೆದಿತ್ತು.

ಎಂಗೇಜ್ಮೆಂಟ್…ಮದುವೆ ಊಟ:

ರಮ್ಯಾ ಮದುವೆ ಯಾವಾಗ? ಎಂಬ ಪ್ರಶ್ನೆ ಸದಾ ಚಾಲ್ತಿಯಲ್ಲಿರುತ್ತದೆ. ಇದೀಗ ಅವರ ಕೈಯಲ್ಲಿದ್ದ ರಿಂಗ್ ಮತ್ತೆ ಮದುವೆ ವಿಚಾರವನ್ನು ಮುನ್ನೆಲೆಗೆ ತಂದಿದೆ. ಈ ಬಗ್ಗೆ ಹಲವು ಊಹಾಪೋಹಾಗಳು ಹುಟ್ಟಿಕೊಂಡಿದೆ. ಗುಟ್ಟಾಗಿ ಎಂಗೇಜ್ಮೆಂಟ್ ಮಾಡ್ಕೊಂಡ್ರಾ ಮೋಹಕ ತಾರೆ? ಎಂದೇ ಹೇಳಲಾಗುತ್ತಿದೆ. ಇದೀಗ ಈ ಪ್ರಶ್ನೆಗೆ ರಮ್ಯಾ ಉತ್ತರ ಕೊಟ್ಟಿದ್ದಾರೆ. ಅದೂ ಒಗಟಾಗಿ.

ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಮಾಧ್ಯಮದವರು ಮದುವೆ, ರಿಂಗ್ ಬಗ್ಗೆ ಕೇಳಿದ್ದಾರೆ. ಅದಕ್ಕೆ ರಮ್ಯಾ ನಕ್ಕಿದ್ದಾರೆ. ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ. ಮದುವೆ ಆದ್ರೆ ಮಾತ್ರ ಸಿಹಿ ಊಟ ಹಾಕಿಸಬೇಕಾ? ಯಾವಾಗ ಬೇಕಾದರು ಹಾಕಿಸಬಹುದು. ಅದಕ್ಕೆ ಮದುವೆಯಾಗಲೇಬೇಕೆಂದೇನಿಲ್ಲ ಎಂದಿದ್ದಾರೆ. ಆಮೇಲೆ ವೈಯಕ್ತಿಕ ಪ್ರಶ್ನೆ ಬೇಡ ಎಂದು ಅಲ್ಲಿಂದ  ನಡೆದಿದ್ದಾರೆ.

ದರ್ಶನ್ ಬಗ್ಗೆ ರಮ್ಯಾ ಏನಂದ್ರು?

ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೈಲು ಪಾಲಾದಾಗ ನಟಿ ರಮ್ಯಾ ಟೀಕಿಸಿದ್ದರು. ತಮ್ಮ ಟ್ವೀಟ್ ಖಾತೆಯಲ್ಲಿ ದರ್ಶನ್ ವಿರುದ್ಧ ಟ್ವೀಟ್ ಮಾಡಿದ್ದರು.

ಕರ್ನಾಟಕ ಬಾಕ್ಸ್ ಆಫೀಸ್ ಎನ್ನುವ ಹೆಸರಿನ ಖಾತೆಯಿಂದ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ವೊಂದನ್ನು ಮಾಡಲಾಗಿತ್ತು. ಆ ಟ್ವೀಟ್‌ ಅನ್ನು ರಮ್ಯಾ ಅವರು ರೀ ಟ್ವೀಟ್ ಮಾಡಿದ್ದರು. ಐಪಿಸಿ ಸೆಕ್ಷನ್ 302 ಉಲ್ಲೇಖಿಸಿ, ಈ ಸೆಕ್ಷನ್‌ನ ಪ್ರಕಾರ ದರ್ಶನ್ ಕಠಿಣ ಶಿಕ್ಷೆಯಾಗಬಹುದು ಎಂದಿದ್ದರು. ಈ ಮೂಲಕ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದನ್ನೂ ಓದಿ : ಉ*ಗ್ರರ ಟಾರ್ಗೆಟ್ ಆದ ಪ್ರಧಾನಿ ಮೋದಿ..! ವಿಮಾನದ ಮೇಲೆ ದಾ*ಳಿಯ ಬೆದರಿಕೆ..!

ಇದೀಗ ದರ್ಶನ್ ಜೈಲಿನಿಂದ ಹೊರಬಂದ ಬಳಿಕ ನಟಿ ರಮ್ಯಾರಲ್ಲಿ ಅವರ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ರಮ್ಯಾ ಹಿಂಜರಿದಿದ್ದಾರೆ. ನೋ ಕಮೆಂಟ್ಸ್ ಎಂದು ಮೆಲು ದನಿಯಲ್ಲಿ ಹೇಳಿ ಜಾರಿಕೊಂಡಿದ್ದಾರೆ.

Continue Reading

FILM

ಅತ್ತೆಯನ್ನೇ ಪ್ರೀತಿಸಿ ಮದುವೆಯಾದ ಅಳಿಯ…! ಇದು ರೋಚಕ ಪ್ರೇಮಯಾನ…!

Published

on

ನಿಜವಾದ ಪ್ರೀತಿಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂದು ಅನೇಕರು ಹೇಳುತ್ತಾರೆ. ಈ ಮಾತನ್ನು ತೆಲುಗು ಕಿರುತೆರೆಯ ಜೋಡಿಯೊಂದು ಸಾಬೀತುಪಡಿಸಿದ್ದು, ಧಾರಾವಾಹಿಯಲ್ಲಿ ಅತ್ತೆ ಮತ್ತು ಅಳಿಯನಾಗಿ ನಟಿಸಿದ್ದ ಇಂದ್ರಾನಿಲ್ ಹಾಗೂ ಮೇಘನಾ ನಿಜ ಜೀವನದಲ್ಲಿ ಪತಿ-ಪತ್ನಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

ತೆಲುಗು “ಚಕ್ರವಾಗಂ” ಎಂಬ ಜನಪ್ರಿಯ ಸೀರಿಯಲ್‌ನಲ್ಲಿ ಜೊತೆಯಾಗಿ ಇಂದ್ರಾನಿಲ್ ಹಾಗೂ ಮೇಘನಾ ಅಭಿನಯಿಸಿದ್ದಾರೆ. ಈ ಧಾರವಾಹಿ 2003 ರಲ್ಲಿ ಪ್ರಸಾರವಾಗುತ್ತಿತ್ತು. ಇದರಲ್ಲಿ ಇಂದ್ರಾನಿಲ್‌ನ ಅತ್ತೆಯಾಗಿ ಮೇಘನಾ ಅಭಿನಯಿಸಿದ್ದಾರೆ. ಉತ್ತಮ ಟಿ.ಆರ್‌.ಪಿ ಹೊಂದಿರುವ “ಚಕ್ರವಾಗಂ” ಧಾರವಾಹಿಯನ್ನು ಕೊರೊನಾ ಅವಧಿಯಲ್ಲಿ ಮರು ಪ್ರಸಾರ ಮಾಡಲಾಯಿತು. 1000 ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಈ ಧಾರಾವಾಹಿಯು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಧಾರವಾಹಿಯಲ್ಲಿ ನಟಿಸುವ ಮೂಲಕ ಪ್ರೀತಿಯಲ್ಲಿ ಬಿದ್ದಿದ್ದ ಇಂದ್ರಾನಿಲ್ ಹಾಗೂ ಮೇಘನಾ ನಿಜ ಜೀವನದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಆದರೂ, ತಮ್ಮ ಪ್ರೀತಿಯಲ್ಲಿ ಮಾತ್ರ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ದೃಢವಾಗಿ ಉಳಿದಿದ್ದಾರೆ. ಹಲವು ಅಡೆತಡೆಗಳನ್ನು ನಿವಾರಿಸಿಕೊಂಡು ಮದುವೆಯಾದ ಈ ಜೋಡಿ ಬಹಳ ಸುಖವಾಗಿ ಸಂಸಾರ ಮಾಡುತ್ತಿದೆ. ಮುಖದಲ್ಲಿ ವಯಸ್ಸಿನ ಅಂತರ ಕಾಣಿಸಿದರೂ ಇಂದ್ರಾನಿಲ್ ಹಾಗೂ ಮೇಘನಾ ದಾಂಪತ್ಯ ಬಹಳ ಚೆನ್ನಾಗಿದೆ. ಸದ್ಯ ಸೋಷಿಯಲ್ ಮೀಡಿಯಾದ್ಯಂತ ಇವರ ಪ್ರೇಮ್‌ಕಹಾನಿ ಸುದ್ಧಿ ಮಾಡುತ್ತಿದೆ. ಇಂದ್ರಾನಿಲ್ ಹಾಗೂ ಮೇಘನಾಳ ಪ್ರೀತಿಯ ಕಥೆ ತಿಳಿದ ಜನ “ಅಯ್ಯೋ ಅತ್ತೆ ಅಳಿಯನ ಮದುವೆಯಾ..?” ಎಂದು ಅಚ್ಚರಿ ಪಡುತ್ತಿದ್ದಾರೆ. ಆದರೆ ಇಂದ್ರಾನಿಲ್ ಹಾಗೂ ಮೇಘನಾ ಧಾರವಾಹಿಯಲ್ಲಿ ಮಾತ್ರ ಅಳಿಯ-ಅತ್ತೆ, ನಿಜ ಜೀವನದಲ್ಲಿ ಗಂಡ-ಹೆಂಡತಿ ಎಂಬುವುದು ವಾಸ್ತವ.

Continue Reading
Advertisement

Trending

Copyright © 2025 Namma Kudla News

You cannot copy content of this page