Connect with us

LATEST NEWS

ದೇಶದಲ್ಲಿ 11 ಸಾವಿರದ ಗಡಿ ದಾಟಿದ ಕೊರೊನಾ ಪ್ರಕರಣ : ರಾಜ್ಯದಲ್ಲೂ ಕಟ್ಟೆಚ್ಚರಕ್ಕೆ ಸೂಚನೆ..!

Published

on

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದ್ದು 5 ಸಾವಿರದ ಗಡಿ ದಾಟಿದ ಒಂದು ವಾರದಲ್ಲೇ  ದೇಶದ ಹೊಸ ದೈನಿಕ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡು 11 ಸಾವಿರ ದಾಟಿದೆ.

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದ್ದು 5 ಸಾವಿರದ ಗಡಿ ದಾಟಿದ ಒಂದು ವಾರದಲ್ಲೇ  ದೇಶದ ಹೊಸ ದೈನಿಕ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡು 10 ಸಾವಿರ ದಾಟಿದೆ.

ಕಳೆದ ವರ್ಷದ ಆಗಸ್ಟ್ 25ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ.

ಕೇರಳದಲ್ಲಿ ಪ್ರಕರಣಗಳು ಗಣನೀಯವಾಗಿ ಹೆಚ್ಚಿದ್ದು, ದೆಹಲಿ, ತಮಿಳುನಾಡು ಮತ್ತು ಇತರ ಹಲವು ಉತ್ತರ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.

ದೇಶಾದ್ಯಂತ ಬುಧವಾರ 10168 ಪ್ರಕರಣಗಳು ದಾಖಲಾಗಿದ್ದು, 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕಳೆದ ಏಳು ದಿನಗಳಲ್ಲಿ 47 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಹಿಂದಿನ ಏಳು ದಿನಗಳಲ್ಲಿ ದಾಖಲಾದ 26300 ಪ್ರಕರಣಗಳಿಗೆ ಹೋಲಿಸಿದರೆ ಇದು ಶೇಕಡ 80ರಷ್ಟು ಅಧಿಕ.

ಇದೇ ಅವಧಿಯಲ್ಲಿ ಮೃತರ ಸಂಖ್ಯೆ 48 ರಿಂದ 85ಕ್ಕೇರಿದೆ.

ಗುರುವಾರ ತಡರಾತ್ರಿ ವೇಳೆಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 46 ಸಾವಿರ ಇತ್ತು.

ವಾರದ ಹಿಂದೆ ಇದು 26 ಸಾವಿರ ಆಗಿತ್ತು. ಅಂತೆಯೇ ಟೆಸ್ಟ್ ಪಾಸಿಟಿವಿಟಿ ದರ ಹಿಂದಿನ ವಾರ 3.22% ಇದ್ದುದು ಇದೀಗ ಶೇಕಡ 4.46ಕ್ಕೇರಿದೆ.

ಕೇರಳದಲ್ಲಿ 3420 ಹೊಸ ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷದ ಜುಲೈ 13ರ ಬಳಿಕ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ.

ದೆಹಲಿ (1159) ಮತ್ತು ಮಹಾರಾಷ್ಟ್ರ (1155) ದಲ್ಲಿ ಕೂಡಾ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲೂ ಕಟ್ಟೆಚ್ಚರಕ್ಕೆ ಸೂಚನೆ :
ರಾಜ್ಯದಲ್ಲೂ ಶೇ.30ರಷ್ಟು ರಾಟ್   ಹಾಗೂ ಶೇ.70ರಷ್ಟು RTPCR ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಹೆಚ್ಚು ಜನಸಂಖ್ಯೆ ಪ್ರದೇಶಗಳಲ್ಲಿ ಪಾಸಿಟಿವಿಟಿ ಆಧಾರದ ಮೇಲೆ ದಿನಕ್ಕೆ 20 ಸಾವಿರ ಪರೀಕ್ಷೆ ನಿಗದಿಪಡಿಸಲಾಗಿದ್ದು, ಎಲ್ಲ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸುವಂತೆ ಹೇಳಲಾಗಿದೆ.

ಅದೇ ರೀತಿ, ಇನ್ನೂ, ರೋಗಲಕ್ಷಣ ಕಂಡುಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷಿಸಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳು, ಪ್ರಯೋಗಾಲಯಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕೋವಿಡ್ ನೋಡಲ್ ಅಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.

LATEST NEWS

ಕೇಜ್ರಿವಾಲ್ ಸೋಲಿಗೆ ಕಾರಣ ಬಿಚ್ಚಿಟ್ಟ ಅಣ್ಣಾ ಹಜಾರೆ !

Published

on

ಮಂಗಳೂರು/ಮುಂಬೈ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲನುಭವಿಸಿದೆ. 27 ವರ್ಷಗಳ ಬಳಿಕ ಬಿಜೆಪಿಗೆ ಅಧಿಕಾರ ಸಿಗುವಂತಾಗಿದೆ. ಈ ಮೂಲಕ ಆಡಳಿತರೂಢ ಆಮ್ ಆದ್ಮಿ ಪಕ್ಷ ನಿರ್ಗಮಿಸುತ್ತಿದೆ. ದೆಹಲಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಾತನಾಡಿದ್ದಾರೆ.

ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ 87ರ ಹರೆಯದ ಅಣ್ಣಾ ಹಜಾರೆ, “ಕೇಜ್ರಿವಾಲ್ ನಾನು ಹೇಳಿದಕ್ಕೆ ಕಿವಿಗೊಡಲಿಲ್ಲ ಮತ್ತು ಮದ್ಯದ ಮೇಲೆ ಮಾತ್ರ ಗಮನಹರಿಸಿದರು. ಅವರು ಹಣದ ದುರಾಸೆಯಲ್ಲಿ ಮುಳುಗಿದರು” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 27 ವರ್ಷಗಳ ಬಳಿಕ ದೆಹಲಿಯಲ್ಲಿ ಅರಳಿದ ಕಮಲ; ದಿಲ್ಲಿಯ ದಿಲ್ ಗೆದ್ದ ಬಿಜೆಪಿ

“ಅಭ್ಯರ್ಥಿಯ ನಡವಳಿಕೆ ಮತ್ತು ಆಲೋಚನೆಗಳು ಶುದ್ದವಾಗಿರಬೇಕು, ಜೀವನವು ದೋಷರಹಿತವಾಗಿರಬೇಕು ಮತ್ತು ತ್ಯಾಗ ಇರಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ. ಈ ಗುಣಗಳಿದ್ದವರ ಮೇಲೆ ಮತದಾರರು ನಂಬಿಕೆ ಇಡುತ್ತಾರೆ. ಆದರೆ ಅವರು ಮದ್ಯ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಜನರು ಭಾವಿಸಿದ್ದಾರೆ. ರಾಜಕೀಯದಲ್ಲಿ ಆರೋಪಗಳನ್ನು ಮಾಡಲಾಗುತ್ತದೆ. ಆಗ ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕು. ಸತ್ಯವು ಸತ್ಯವಾಗಿ ಉಳಿಯುತ್ತದೆ” ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

 

Continue Reading

LATEST NEWS

ಮದುವೆ ಆಗುವ ಹುಡುಗರೇ ಎಚ್ಚರ; ನಿಮ್ಮ ಸಿಬಿಲ್ ಸ್ಕೋರ್‌ ಅನ್ನು ಒಮ್ಮೆ ನೋಡಿಕೊಳ್ಳಿ..!

Published

on

ಮಹಾರಾಷ್ಟ್ರ: ಇತ್ತೀಚಿನ ದಿನದಲ್ಲಿ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡುತ್ತಾರೆ. ವಧುವಿನ ಕಡೆಯವರು ವರನನ್ನು ಹುಡುಕುವಾಗ ವರನ ಪೂರ್ವಪರ ವಿಚಾರಗಳನ್ನು ನೋಡುವುದುಂಟು. ಮೊದಲು ವರ ಧೂಮಪಾನ, ಮಧ್ಯಪಾನ ಮಾಡುತ್ತಿದ್ದರೆ ಆಕೆಗೆ ಹುಡುಗಿ ಕೊಡುತ್ತಿರಲಿಲ್ಲ. ಆದರೆ ಈಗ ವರನ ಕೆಲಸ, ಗುಣ, ನಡತೆ, ಜಾತಕವನ್ನು ನೋಡಿ ಹುಡುಗಿಯನ್ನು ಕೊಡುವುದುಂಟು. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.

ಮಹಾರಾಷ್ಟ್ರದ ಮುರ್ಜಿಜಾಪುರದಲ್ಲಿ ಈ ಘಟನೆ ನಡೆದಿದ್ದು, ಮದುವೆ ಮಾತುಕತೆಗೆ ಬಂದ ಎರಡು ಕಡೆಯವರು ಚೆನ್ನಾಗಿಯೇ ಎಲ್ಲಾ ರೀತಿಯ ಮಾತುಕತೆಗಳನ್ನು ಮುಗಿಸಿದ್ದರು. ಕೊನೆಗೆ ನಿಶ್ಚಿತಾರ್ಥದ ದಿನಾಂಕವನ್ನು ನಿಗದಿ ಮಾಡಲೂ ಮುಂದಾಗಿದ್ದರು.

ಬಳಿಕ ಹುಡುಗಿಯ ಅಂಕಲ್ ಒಬ್ಬರು ಅನಿರೀಕ್ಷಿತವಾದ ಬೇಡಿಕೆಯೊಂದನ್ನು ಇಡುತ್ತಾರೆ. ನಾನು ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಎನ್ನುತ್ತಾರೆ. ಇದನ್ನು ಕೇಳಿದ ಅಲ್ಲಿದ್ದ ಎಲ್ಲರಿಗೂ ಒಂದು ಕ್ಷಣ ಅಚ್ಚರಿಯಾಗುತ್ತದೆ. ಯಾವಾಗ ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೋ ಹುಡುಗ ಹಲವು ಕಡೆ ಸಾಲ ಮಾಡಿ ಆರ್ಥಿಕವಾಗಿ ಒದ್ದಾಡುತ್ತಿದ್ದಾನೆ ಎಂಬುದು ಕಂಡು ಬರುತ್ತದೆ. ಇದರಿಂದ ನನ್ನ ಮಗಳ ಬದುಕು ಹಾಳಾಗುತ್ತದೆ ಈ ಮದುವೆ ಬೇಡ ಎಂದು ನಿರ್ಧರಿಸಿದ ಹುಡುಗಿಯ ಕುಟುಂಬ ಹುಡುಗನ ಮನೆಯಿಂದ ಎದ್ದು ಬರುತ್ತದೆ.

ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿರುವ ಈ ಹುಡುಗನಿಗೆ ಮದುವೆ ಯಾಕೆ ಬೇಕು ? ಎಂದು ಪ್ರಶ್ನಿಸಿದ ಹುಡುಗಿಯ ಅಂಕಲ್​ ವಾದ ಮಾಡುತ್ತಾನೆ. ಉಳಿದವರು ಕೂಡ ಅವರ ಮಾತಿಗೆ ಸಮ್ಮತಿಯನ್ನು ನೀಡಿ ಮದುವೆಯ ಮಾತುಕತೆಯನ್ನು ಅಲ್ಲಿಗೆ ನಿಲ್ಲಿಸಿ ಮನೆಯಿಂದ ಎದ್ದು ಬರುತ್ತಾರೆ.

Continue Reading

LATEST NEWS

ಅಯ್ಯೋ ದೇವಾ..! ಬೆಕ್ಕಿಗಾಗಿ ನಡೆಯಿತು ಎರಡು ಕುಟುಂಬಗಳ ನಡುವೆ ಜಗಳ

Published

on

ಮಂಗಳೂರು/ಹೈದರಾಬಾದ್ : ಹಾಸಿಗೆಯ ಮೇಲೆ ಬೆಕ್ಕೊಂದು ಮಲಗಿದ್ದ ಪ್ರಕರಣ ತೆಲಂಗಾಣದ ನೆಲ್ಗೊಂಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ‘ನಮ್ಮದು ಬೆಕ್ಕು, ನಮ್ಮದು ಬೆಕ್ಕು’ ಎಂದು ಹೇಳಿಕೊಂಡು ಎರಡು ಕುಟುಂಬಗಳು ರಸ್ತೆಯಲ್ಲಿ ಜಗಳವಾಡುತ್ತಿದ್ದಾರೆ.

ತೆಲಂಗಾಣದ ನೆಲ್ಗೊಂಡ ಪಟ್ಟಣದ ರಹಮತ್ ನಗರದ ನಿವಾಸಿ ಪುಷ್ಪಲತಾ ಅವರು ಬೆಕ್ಕನ್ನು ಸಾಕಿ ಅದಕ್ಕೆ ‘ಪಫಿ’ ಎಂದು ಹೆಸರಿಟ್ಟಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಬೆಕ್ಕು ಕಾಣೆಯಾದಾಗ, ಅವರು ಟೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೆಲ್ಲದರ ನಡುವೆ ಪುಷ್ಪಲತಾ ಅವರ ವಠಾರದಲ್ಲಿ ಅಶ್ರಫ್ ಎಂಬುವವರ ಮನೆಯಲ್ಲಿ ಕೂಡ ಪಫಿ ಹೋಲುವಂತಹ ಬೆಕ್ಕು ಕಂಡುಬಂದಿದೆ.

ಈ ಬಗ್ಗೆ ಪುಷ್ಪಲತಾ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನಲ್ಲಿ ಬೆಕ್ಕನ್ನು ಗುರುತಿಸದೆ ಬಣ್ಣ ಬಳಿಯಲಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಎಟಿಎಂ ದರೋಡೆ ಪ್ರಕರಣ ಬಯಲು ಮಾಡಿತು ಟೀ ಅಂಗಡಿ ಬಳಿ ನಡೆದ ಜಗಳ!

ಅಶ್ರಫ್ ಅವರ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಿಸಿದಾಗ, ಅವರು ಒಬ್ಬ ವ್ಯಕ್ತಿಯಿಂದ 3,500 ರೂ. ಗಳನ್ನು ಕೊಟ್ಟು ಖರೀದಿಸಿರುವುದಾಗಿ ಹೇಳಿದರು. ಮತ್ತೊಂದೆಡೆ ಎರಡು ಕುಟುಂಬಗಳು ಎಸ್‌ಪಿಯವರಿಗೆ ಕರೆಮಾಡಿ ಪಂಚಾಯಿತಿ ನಡೆಸುವಂತೆ ಕೇಳಿಕೊಂಡಿತ್ತು.

ಈ ಪ್ರಕರಣ ಪೊಲೀಸರ ತಲೆನೋವಿಗೆ ಕಾರಣವಾಗಿದ್ದು, ಬೆಕ್ಕಿನ ಕೂದಲಿನ ಮಾದರಿಗಳನ್ನು ಪರೀಕ್ಷೆ ಮಾಡುವಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಬೆಕ್ಕು ಯಾರಿಗೆ ಸೇರಿದ್ದು ಎಂದು ತಿಳಿಯಲಿದೆ. ಪ್ರಸ್ತುತ ಬೆಕ್ಕು ಅಶ್ರಫ್ ಅವರ ಮನೆಯಲ್ಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page