Connect with us

FILM

‘ನನಗೆ ಸಿನಿಮಾ ಭಾಷೆ ಗೊತ್ತು, ನಾನು ಅದನ್ನೇ ಮಾತನಾಡುತ್ತೇನೆ’; ಫಿಲ್ಡ್ ಚೇಂಬರ್‌ಗೆ ಸುದೀರ್ಘ ಪತ್ರ ಬರೆದ ಕಮಲ್ ಹಾಸನ್

Published

on

ಮಂಗಳೂರು/ಬೆಂಗಳೂರು: “ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು” ಎಂಬ ಹೇಳಿಕೆಯನ್ನು ನೀಡಿ ವಾಪಸ್ ಕ್ಷಮೆಯನ್ನೂ ಕೇಳದೆ, ಮೊಂಡಾಟ ಮುಂದುವರಿಸಿರುವ ನಟ ಕಮಲ್ ಹಾಸನ್ ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.


ಕಮಲ್ ಹಾಸನ್ ಅವರ “ಥಗ್ ಲೈಫ್” ಸಿನಿಮಾ ಅತಂತ್ರ ಸ್ಥಿತಿಯಲ್ಲಿದೆ. ಕ್ಷಮೆ ಕೇಳದಿದ್ದರೆ ಜೂ. 5ರಂದು ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂಬ ಕರ್ನಾಟಕ ಫಿಲ್ಮ್ ಛೇಂಬರ್ ಎಚ್ಚರಿಕೆಯನ್ನೂ ಲೆಕ್ಕಿಸದೆ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಕನ್ನಡ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿದೆ. ಈ ನಡುವೆ ಫಿಲ್ಮ್ ಚೇಂಬರ್ ಕಮಲ್‌ಗೆ ಕ್ಷಮೆಯಾಚಿಸಲು ಮಂಗಳವಾರ ಮಧ್ಯಾಹ್ನ 12 ಗಂಟೆಯವರೆಗೆ ಗಡುವು ವಿಧಿಸಿತ್ತು.

ಇದೀಗ ಕಮಲ್ ಹಾಸನ್ ಅವರು ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರಿಗೆ ಸುದೀರ್ಘವಾದ ಪತ್ರ ಬರೆದಿದ್ದು, ಕನ್ನಡ ಭಾಷೆಯ ಬಗ್ಗೆ ಕನ್ನಡಿಗರ ಬಗ್ಗೆ ಉಲ್ಲೇಖಿಸಿದ್ದಾರೆ.
ಕಮಲ್ ಹಾಸನ್ ಬರೆದ ಪತ್ರದಲ್ಲೇನಿದೆ?

‘ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್ ಕುಮಾರ್ ಅವರ ಕುಟುಂಬದ ಬಗ್ಗೆ, ವಿಶೇಷವಾಗಿ ಶಿವರಾಜ್‌ಕುಮಾರ್ ಅವರ ಬಗ್ಗೆ ನಿಜವಾದ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಸಂದರ್ಭದಿಂದ ಹೊರಗಿಡಲಾಗಿದೆ ಎಂಬುದು ನನಗೆ ನೋವುಂಟುಮಾಡುತ್ತದೆ. ನನ್ನ ಮಾತುಗಳು ನಾವೆಲ್ಲರೂ ಒಂದೇ ಕುಟುಂಬದವರು ಮತ್ತು ಯಾವುದೇ ರೀತಿಯಲ್ಲಿ ಕನ್ನಡವನ್ನು ಕುಗ್ಗಿಸಲು ಅಲ್ಲ ಎಂಬುದನ್ನು ತಿಳಿಸುವ ಉದ್ದೇಶವನ್ನು ಹೊಂದಿದ್ದವು. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ ಎಂದಿದ್ದಾರೆ.

ತಮಿಳಿನ ರೀತಿಯೇ ಕನ್ನಡ ಸಹ ಶ್ರೀಮಂತ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಹೊಂದಿದ್ದು, ಅದನ್ನು ನಾನು ವರ್ಷಗಳಿಂದಲೂ ಗೌರವಿಸುತ್ತಾ ಬಂದಿದ್ದೇನೆ. ಕನ್ನಡ ಭಾಷಿಕರು, ನನ್ನ ವೃತ್ತಿ ಜೀವನದಲ್ಲಿ ನನಗೆ ತೋರಿದ ಪ್ರೀತಿ ಮತ್ತು ಗೌರವ ನನ್ನ ಎದೆಯಲ್ಲಿ ಭದ್ರವಾಗಿದೆ. ಭಾಷೆಯ ಬಗ್ಗೆ ನನಗಿರುವ ಪ್ರೀತಿ ಸ್ಪಟಿಕದಂಥಹದ್ದು, ಅದನ್ನು ನಾನು ಯಾವುದೇ ಭೀತಿ ಇಲ್ಲದೆ ಹೇಳುವೆ. ಅದರಂತೆ ಕನ್ನಡಿಗರಿಗೆ ಅವರ ಭಾಷೆಯ ಬಗ್ಗೆ ಇರುವ ಅದಮ್ಯ ಪ್ರೀತಿಯ ಬಗ್ಗೆಯೂ ನನಗೆ ಗೌರವ ಇದೆ’ ಎಂದಿದ್ದಾರೆ.

ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯ ಶಾಶ್ವತ ಮತ್ತು ಹೃತ್ತೂರ್ವಕವಾಗಿದೆ. ನಾನು ಯಾವಾಗಲೂ ಎಲ್ಲಾ ಭಾರತೀಯ ಭಾಷೆಗಳ ಸಮಾನ ಘನತೆಯ ಪರವಾಗಿ ನಿಲ್ಲುತ್ತೇನೆ ಮತ್ತು ಯಾವುದೇ ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ಏಕೆಂದರೆ ಅಂತಹ ಅಸಮತೋಲನವು ಭಾರತದ ಒಕ್ಕೂಟದ ಭಾಷಾ ರಚನೆಯನ್ನು ಹಾಳು ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ‘ಕ್ಷಮೆ ಕೇಳಲಾಗದಿದ್ದರೆ ಬಿಡಿ ಕರ್ನಾಟಕದಲ್ಲಿ ಬಿಡುಗಡೆ ಏಕೆ ಬೇಕು’; ಕಮಲ್ ಹಾಸನ್‌ಗೆ ಹೈಕೋರ್ಟ್ ತರಾಟೆ

‘ನನಗೆ ಸಿನಿಮಾ ಭಾಷೆ ಗೊತ್ತು, ನಾನು ಅದನ್ನೇ ಮಾತನಾಡುತ್ತೇನೆ. ಸಿನಿಮಾ ಭಾಷೆ ವಿಶ್ವಭಾಷೆ. ಆ ಭಾಷೆಗೆ ಪ್ರೀತಿಸುವುದು ಮಾತ್ರವೇ ಗೊತ್ತು. ನನ್ನ ಹೇಳಿಕೆ ಸಹ ನಮ್ಮ ನಡುವೆ ಇರುವ ಪ್ರೀತಿ ಮತ್ತು ಬಾಂಧವ್ಯ ಹಾಗೂ ಒಗ್ಗಟ್ಟನ್ನು ತೋರ್ಪಡಿಸುವ ಉದ್ದೇಶವನ್ನೇ ಹೊಂದಿತ್ತು. ನನ್ನ ಹಿರಿಯರು ನನಗೆ ಕಲಿಸಿಕೊಟ್ಟ ಪ್ರೀತಿ ಮತ್ತು ಗೌರವವನ್ನೇ ನಾನು ಪಾಲಿಸುತ್ತಿದ್ದೇನೆ. ಅದೇ ಪ್ರೀತಿ ಮತ್ತು ಗೌರವದ ಭಾಗವಾಗಿ ಶಿವಣ್ಣ, ಆಡಿಯೋ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಆ ಕಾರಣಕ್ಕಾಗಿ ಅವರು ಮುಜುಗರ ಅನುಭವಿಸಬೇಕಾಗಿ ಬಂದಿರುವುದಕ್ಕೆ ನನಗೆ ವಿಷಾದವಿದೆ. ಆದರೆ ನಮ್ಮಿಬ್ಬರ ನಡುವಿನ ಪ್ರೀತಿ ಮತ್ತು ವಿಶ್ವಾಸ ಹೀಗೆಯೇ ಮುಂದುವರೆಯುತ್ತದೆ ಎಂಬ ವಿಶ್ವಾಸ ನನಗೆ ಇದೆ’ ಎಂದಿದ್ದಾರೆ.

ಸಿನಿಮಾ ಜನರ ನಡುವೆ ಸೇತುವೆಯಾಗಿ ಉಳಿಯಬೇಕು, ಅವರನ್ನು ವಿಭಜಿಸುವ ಗೋಡೆಯಾಗಿ ಉಳಿಯಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಮತ್ತು ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಅವಕಾಶ ನೀಡಿಲ್ಲ ಮತ್ತು ಎಂದಿಗೂ ಬಯಸುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಮಾತುಗಳ ಉದ್ದೇಶವನ್ನು ಗ್ರಹಿಸಿ ಸ್ವೀಕರಿಸಲಾಗುವುದು ಮತ್ತು ಕರ್ನಾಟಕದ ಬಗ್ಗೆ, ಅಲ್ಲಿರುವ ಜನರ ಬಗ್ಗೆ ಮತ್ತು ಅವರ ಭಾಷೆಯ ಬಗ್ಗೆ ನನ್ನ ನಿರಂತರ ಪ್ರೀತಿಯನ್ನು ಅದರ ನಿಜವಾದ ಬೆಳಕಿನಲ್ಲಿ ಗುರುತಿಸಲಾಗುವುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಪುನರುಚ್ಚರಿಸಲು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದಿದ್ದಾರೆ.

FILM

ಇನ್ಮುಂದೆ ಖುಷಿ ಶಿವು ಅಲ್ಲ….ಹೆಸರು ಬದಲಿಸಿಕೊಂಡ ‘ನೀನಾದೆ ನಾ’ ನಟಿ..!

Published

on

ಮಂಗಳೂರು/ಬೆಂಗಳೂರು :  ಸಿನಿಮಾ – ಕಿರುತೆರೆ ತಾರೆಯರು ಹೆಸರು ಬದಲಾಯಿಸುವುದು ಸಾಮಾನ್ಯ ಸಂಗತಿ. ಅದೆಷ್ಟೋ ನಟ – ನಟಿಯರು ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದೀಗ ನೀನಾದೆ ನಾ ಧಾರಾವಾಹಿ ಖ್ಯಾತಿಯ ಖುಷಿ ಶಿವು ಸರದಿ.

ನೀನಾದೆ ನಾ …ದಿಲ್ ಖುಷ್

ದಿಲೀಪ್ ಶೆಟ್ಟಿ ಮತ್ತು ಖುಷಿ ಶಿವು ನಟಿಸಿದ್ದ ‘ ನೀನಾದೆ ನಾ..’  ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ದಿಲೀಪ್ ಖುಷಿ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದರು. ಈ ಜೋಡಿಯನ್ನು ದಿಲ್ ಖುಷ್ ಎಂದೇ ಅಭಿಮಾನಿಗಳು ಕರೆಯುತ್ತಿದ್ದರು.

ಈ ಧಾರಾವಾಹಿಯ ಯಶಸ್ಸಿಗೆ ಸಾಕ್ಷಿಯಾಗಿ ‘ನೀನಾದೆ ನಾ’ ಎರಡನೇ ಅಧ್ಯಾಯ  ಪ್ರಸಾರವಾಗಿತ್ತು.ಕರಾವಳಿಯಲ್ಲಿ ಹೊಸ ಪ್ರೇಮ ಕಥೆ ಅರಳಿ ನಲಿದಿತ್ತು. ತುಳುನಾಡಿನ ಸಂಸ್ಕೃತಿ, ಭಾಷೆಯ ಅನಾವರಣ ಮಾಡಲಾಗಿತ್ತು. ಆದರೆ, ಮೊದಲ ಅಧ್ಯಾಯದಷ್ಟು ಸಕ್ಸಸ್ ಸಿಗಲಿಲ್ಲ. ಹಾಗಾಗಿ ಕಥೆಯನ್ನು ಎಳೆಯದೆ ಧಾರಾವಾಹಿಗೆ ಅಂತ್ಯ ಹಾಡಲಾಯಿತು. ಆದರೆ, ದಿಲ್ ಖುಷ್‌ನ ಮಾತ್ರ ಜನ ಮರೆತಿಲ್ಲ.

ಇನ್ಮುಂದೆ ಖುಷಿ ಅಲ್ಲ… ರಮಿಕಾ :

ಖುಷಿ ಶಿವು ಸೋಶಿಯಲ್ ಮೀಡಿಯಾಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಫೋಟೋ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಇದೀಗ ಅವರು ಹೆಸರು ಬದಲಾಯಿಸಿಕೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಸುಂದರವಾದ ಹೊಸ ಕಥೆಯ ಆರಂಭ ಎಂಬುದಾಗಿ ಬರೆದುಕೊಂಡಿರುವ ನಟಿ ಹೊಸ ಹೆಸರನ್ನು ಘೋಷಿಸಿದ್ದಾರೆ.

ಪ್ರೀತಿಯ ಅಭಿಮಾನಿಗಳೇ, ಸ್ನೇಹಿತರೇ ಮತ್ತು ಹಿತೈಷಿಗಳೇ, ಕೃತಜ್ಞತೆ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಿಮಗೆಲ್ಲರಿಗೂ ತಿಳಿಸುವುದೇನೆಂದರೆ, ಹೊಸ ಕನಸಿನೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು, ನೀವೆಲ್ಲರೂ ಪ್ರೀತಿಸಿದ, ಅಭಿಮಾನಿಸಿದ, ಹಾರೈಸಿದ, ನನ್ನ ‘ಖುಷಿ ಶಿವು’  ಹೆಸರನ್ನು ವಿಶೇಷ ಕಾರಣಗಳಿಂದ ‘ರಮಿಕಾ ಶಿವು’ ಎಂದು ಬದಲಾಯಿಸಿಕೊಳ್ಳುತ್ತಿದ್ದೇನೆ.

ಇದನ್ನೂ ಓದಿ : ಕಾಸರಗೋಡು: ಸಿನಿಮಾ ನಿರ್ದೇಶಕನ ಪುತ್ರ ಆತ್ಮಹತ್ಯೆ!

ಆದರೆ, ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಪ್ರೋತ್ಸಾಹ ಬದಲಾಗದೆ ಇನ್ನೂ ಹೆಚ್ಚಾಗುತ್ತದೆ ಎಂದು ನಂಬಿದ್ದೇನೆ. ಇದು ಸುಂದರವಾದ ಹೊಸ ಕಥೆಯ ಆರಂಭ. ಇಂತೀ ನಿಮ್ಮ ಪ್ರೀತಿಯ ರಮಿಕಾ ಶಿವು ಎಂದು ಬರೆದುಕೊಂಡಿದ್ದಾರೆ.

Continue Reading

BIG BOSS

ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿಗೆ ಕಾನೂನು ಸಂಕಷ್ಟ!? ಕಾರಣ ಏನು?

Published

on

BBK12: ಬಿಗ್‌ ಬಾಸ್‌ ಸೀಸನ್‌ 12ರ ಸ್ಪರ್ಧಿ ಗಿಲ್ಲಿನಟ ಅವರು ತಮ್ಮ ಆಟ, ವ್ಯಕ್ತಿತ್ವ ಜತೆಗೆ ಆರಂಭದಿಂದಲೂ ಬಿಗ್‌ಬಾಸ್‌ ಮನೆಯಲ್ಲಿ ಹಾಸ್ಯ ಸ್ವಾಭಾವದಿಂದ ವೀಕ್ಷಕರ ಮನಗೆಲ್ಲುತ್ತಿದ್ದಾರೆ. ಆದರೆ ಇದೀಗ ಗಿಲ್ಲಿಗೆ ಶಾಕ್‌ವೊಂದು ಎದುರಾಗಿದೆ.


ಹೌದು, ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿ ಅವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.


ಇತ್ತೀಚೆಗೆ ಗಿಲ್ಲಿ ಮತ್ತು ರಿಷಾ ಅವರ ನಡುವೆ ಮನಸ್ತಾಪ ಉಂಟಾಗಿತ್ತು. ಗಿಲ್ಲಿಅವರು ರಿಷಾ ಅವರ ಬಟ್ಟೆಗಳನ್ನು ಬಾತ್‌ ರೂಮ್‌ ಏರಿಯಾದಲ್ಲಿ ಇಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ. ಜತೆಗೆ ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತಾನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: BBK12 : ಅಶ್ವಿನಿ ಗೌಡಗೆ ಶಿಕ್ಷೆ…ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ!

ಈ ಕುರಿತು ಮಹಿಳಾ ಆಯೋಗ ಸಂಬಂಧ ಪಟ್ಟ ವಿಡಿಯೋ ಫೊಟೇಜ್‌ಗಳನ್ನು ಪರಿಶೀಲನೆ ಮಾಡಿದ್ದು, ಮೇಲ್ನೋಟಕ್ಕೆ ಗಿಲ್ಲಿ ಅವರು ತಪ್ಪಾಗಿ ನಡೆದುಕೊಂಡಿರುವ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ಪ್ರಕರಣವನ್ನು ಲೀಗಲ್‌ ಟೀಮ್‌ ಅಭಿಪ್ರಾಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ವರದಿಯಾಗಿದೆ.

Continue Reading

FILM

ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬೀಸಿದ ಪಾಕಿಸ್ತಾನಿ ಕಲಾವಿದ!

Published

on

ಮಂಗಳೂರು/ಹೈದಾರಬಾದ್ : ತಲ್ಹಾ ಅಂಜುಮ್ ಅವರು ಪಾಕಿಸ್ತಾನದ ಜನಪ್ರಿಯ ಗಾಯಕ ಅಲ್ಲದೇ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ವೇದಿಕೆಯ ಪ್ರದರ್ಶನ ಮಾತ್ರವಲ್ಲದೇ ಕೆಲವೊಮ್ಮೆ ವಿವಾದಗಳಿಂದಲೂ ಸದ್ದು ಮಾಡುವ ಗಾಯಕ ಅವರು. ಇದೀಗ ಅವರು ಮತ್ತೊಮ್ಮೆ ಗಮನ ಸೆಳೆದಿದ್ದಾರೆ.


ನಾಟಕೀಯ ವಿಚಾರದಲ್ಲಿ ತಲ್ಹಾ ಅಂಜುಮ್ ಯಾವಾಗಲೂ ಚರ್ಚೆಗೊಳಪಡುವ ವ್ಯಕ್ತಿ. ಪ್ರೇಕ್ಷಕರ ವರ್ತನೆಗೆ ವೇದಿಕೆಯಿಂದ ತಕ್ಷಣ ಹೊರ ನಡೆಯುವ ವೀಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಮತ್ತೊಂದೆಡೆ ನೇಪಾಳದಲ್ಲಿ ಹೊಸದಾಗಿ ಸಂಗೀತ ಕಚೇರಿ ತೆರೆದಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ.

ಭಾರತದ ಧ್ವಜ ಬೀಸಿದ ಗಾಯಕ :
ತಲ್ಹಾ ಅಂಜುಮ್ ಅವರ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ವೇದಿಕೆಯಲ್ಲಿ ಪ್ರದರ್ಶನ ವೇಳೆ ಭಾರತದ ಧ್ವಜವನ್ನು ಹೆಮ್ಮೆಯಿಂದ ಪ್ರೇಕ್ಷಕರತ್ತ ಬೀಸಿದ ಬಳಿಕ ಬೆನ್ನಿಗೆ ಸುತ್ತಿಕೊಂಡಿದ್ದಾರೆ. ಇದು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.

ಇದನ್ನೂ ಓದಿ: BBK12 : ಅಶ್ವಿನಿ ಗೌಡಗೆ ಶಿಕ್ಷೆ…ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ!

ಈ ಬಗ್ಗೆ ಎಕ್ಸ್‌ಪೋಸ್ಟ್‌ನ ಮೂಲಕ ತಲ್ಹಾ ತನ್ನ ಮನದಾಳದ ವಿಚಾರ ಸ್ಪಷ್ಟಪಡಿಸಿದ್ದಾರೆ. ನನ್ನ ಹೃದಯದಲ್ಲಿ ದ್ವೇಷಕ್ಕೆ ಸ್ಥಾನವಿಲ್ಲ, ನನ್ನ ಕಲೆಗೆ ಯಾವುದೇ ಗಡಿಯಿಲ್ಲ. ನಾನು ಭಾರತೀಯ ಧ್ವಜ ಹಿಡಿದದ್ದು ವಿವಾದಕ್ಕೆ ಕಾರಣವಾದರೆ ಹಾಗೇ ಆಗಲಿ. ನಾನು ಅದನ್ನು ಮತ್ತೆ ಮಾಡುತ್ತೇನೆ. ಮಾಧ್ಯಮ, ಯುದ್ಧಪ್ರೇ ಮಿ ಸರ್ಕಾರಗಳು ಮತ್ತು ಅವರ ಪ್ರಚಾರಗಳ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ. ಉರ್ದು ರಾಪ್ ಯಾವಾಗಲೂ ಗಡಿರಹಿತವಾಗಿರುತ್ತದೆ ಎಂದ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page