Connect with us

MANGALORE

ಸುರತ್ಕಲಿನಲ್ಲಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ..

Published

on

ಸುರತ್ಕಲಿನಲ್ಲಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ..

ಮಂಗಳೂರು : ಹಿಂದು ಜಾಗರಣ ವೇದಿಕೆ ಸುರತ್ಕಲ್ ನಗರ ಇದರ ಆಶ್ರಯದಲ್ಲಿ ಇಂದು ಇಡ್ಯಾ ಮಹಾಲಿಂಗೇಶ್ವರ ದೇವಸ್ಧಾನದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮವು ನಡೆಯಿತು.

ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಸ್ಥ ಬದ್ಧವಾಗಿ ಜಾಗರಣ ವೇದಿಕೆ’ಯ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಪರಿವಾರ ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಸಂಘಟನೆ ಕಾರ್ಯಕರ್ತರು ಉಪಷ್ಥಿತರಿದ್ದರು.

ಈ ಸಂದರ್ಭ ಇಡ್ಯಾ ಕ್ಷೇತ್ರದ ಮೊಕ್ತೇಸರರಾದ ಐ ರಮಾನಂದ ಭಟ್ ಇಡ್ಯಾ ಆಶ್ರೀರ್ವಚನ ನೀಡಿದರು, ಸಾಹಿತ್ಯ ಪರಿಷತ್ ರಮೇಶ್ ಜೀ ಮುಖ್ಯ ಭಾಷಣ ಮಾಡುತ್ತ ಪ್ರಾಣ ತೆತ್ತದರು ಸರಿ ಅಖಂಡ ಭಾರತ ವನ್ನು ನಿರ್ಮಾಣ ಮಾಡಿಯೇ ಸಿದ್ಧ ಎಂಬ ಸಂಕಲ್ಪ ತೊಡಲು ಯುವಕರಿಗೆ ಕರೆ ಇಟ್ಟರು.
ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧೀರ್ ಕುಳಾಯಿ ವಹಿಸಿದರು ಜಿಲ್ಲಾ ಉಪಧ್ಯಾಕ್ಷ ಬಾಲಕೃಷ್ಣ ಮುಂಚೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕುಳಾಯಿ, ನಿತಿನ್ ಕಾಟಿಪಳ್ಳ, ಹರಿಪ್ರಸಾದ್ ಮಧ್ಯ ಭರತ್ ಜನತಾ ಕಾಲೇನಿ, ರೂಪೇಶ್ ಇಡ್ಯಾ ದೀಪಕ್ ಚೇಳರ್ ಸೇರಿದಂತೆ ನೂರರೂ ಕಾರ್ಯಕರ್ತರು ಉಪಷ್ಥಿತರಿದ್ದರು.

Advertisement
Click to comment

Leave a Reply

Your email address will not be published. Required fields are marked *

LATEST NEWS

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಡಕೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ

Published

on

ಆನಂದಪುರ: ತೋಟವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಬೆಂಕಿ ಕಾಣಿಸಿಕೊಂಡ ಪರಿಣಾಮ ಮರಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದಿದೆ.


ಆನಂದಪುರ ಸಮೀಪದ ಲಕ್ಕವಳ್ಳಿ ಗ್ರಾಮದ ಮುರುಗೇಂದ್ರ ಗೌಡ್ರು ಎಂಬುವವರ 1 ಎಕರೆ ಅಡಕೆ ತೋಟದಲ್ಲಿ ಈ ಘಟನೆ ನಡೆದಿದ್ದು, ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಹೆಚ್ಚಿದ್ದರಿಂದ ಮತ್ತು ಒಣಗಿದ ಎಲೆಗಳು ತೋಟದಲ್ಲಿ ಇದ್ದುದರಿಂದ, ಶಾರ್ಟ್ ಸರ್ಕ್ಯೂಟ್ ಆದ ತಕ್ಷಣ ಬೆಂಕಿ ವೇಗವಾಗಿ ಹಬ್ಬಿದೆ.

ಬೆಂಕಿಯ ತೀವ್ರತೆಗೆ ಅಡಕೆ ಮರಗಳು ಭಾಗಶಃ ಸುಟ್ಟು ಹೋಗಿದ್ದು, ತೋಟದಲ್ಲಿದ್ದ ಬೆಲೆಬಾಳುವ ಹನಿ ನೀರಾವರಿ ಪೈಪ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮತ್ತೆ ಹಳೆ ಕಾಲಕ್ಕೆ ಮರಳಿದ ಹೋಟೆಲ್‌ಗಳು: ಗ್ಯಾಸ್ ಬಂದ್ ಬೆನ್ನಲ್ಲೇ ಒಲೆ ಹಚ್ಚಿದ ಮಾಲೀಕರು

ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಕಾಲದಲ್ಲಿ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿಷಯ ತಿಳಿದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

Continue Reading

LATEST NEWS

ಮಂಗಳೂರು: ಮನೆಯಿಂದ ಚಿನ್ನ-ಬೆಳ್ಳಿ ಕಳವು ಪ್ರಕರಣ; ಆರೋಪಿಗೆ ನ್ಯಾಯಾಂಗ ಬಂಧನ

Published

on

ಮಂಗಳೂರು: ಮಂಗಳೂರಿನ ಕಾವೂರು ಉಲ್ಲಾಸ್ ನಗರದ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು 24 ಗಂಟೆಗಳೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪನಡು ದೇರಾಜೆ ನಿವಾಸಿ, 41 ವರ್ಷ ಪ್ರಾಯದ ಅಶೋಕ್‌ ಬಂಧಿತ ಆರೋಪಿಯಾಗಿದ್ದಾನೆ.


ಮಾರ್ಚ್ 7 ರಂದು ಮದ್ಯಾಹ್ನ 12 ಗಂಟೆ ವೇಳೆಗೆ ಕಾವೂರು ಉಲ್ಲಾಸ್ ನಗರದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿ, 4 ಲಕ್ಷದ 80 ಸಾವಿರ ರೂಪಾಯಿ ಬೆಲೆಯ 39 ಗ್ರಾಂ ಚಿನ್ನಾಭರಣ ಮತ್ತು 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದರು.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಕಾವೂರು ಪೊಲೀಸ್ ಠಾಣಾ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ಮತ್ತು ಉಪ-ನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬಂದಿಯನ್ನು ಒಳಗೊಂಡ ಪತ್ತೆ ತಂಡವನ್ನು ರಚಿಸಲಾಗಿತ್ತು.

ಇದನ್ನೂ ಓದಿ: ಉಪ್ಪಿನಂಗಡಿ: ಅಕ್ರಮವಾಗಿ ಶೇಖರಿಸಿದ 4,175 ಲೀಟರ್ ಡೀಸೆಲ್ ಪತ್ತೆ; ಪ್ರಕರಣ ದಾಖಲು

ಕಾರ್ಯಾಚರಣೆ ನಡೆಸಿದ ತಂಡವು ಆರೋಪಿ ಅಶೋಕ್‌ನನ್ನು 24 ಗಂಟೆಯಲ್ಲಿ ಅಂದರೆ ಮಾರ್ಚ್ 8 ರಂದು ದಸ್ತಗಿರಿ ಮಾಡಿ ಆತನಿಂದ ಕಳವು ಮಾಡಿರುವ ಎಲ್ಲಾ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Continue Reading

LATEST NEWS

ಕಾಪು : ಸ್ಕೂಟಿ – ಬೈಕ್ ಡಿಕ್ಕಿ, ಓರ್ವ ಸಾವು, ಇಬ್ಬರಿಗೆ ಗಾಯ

Published

on

ಕಾಪು: ಸ್ಕೂಟಿ ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ರಾತ್ರಿ ಕಾಪುವಿನಲ್ಲಿ ನಡೆದಿದೆ.


ಬೈಕ್ ಸವಾರ ಅದಮಾರು ಕಾಲೇಜ್ ಬಳಿಯ ನಿವಾಸಿ, ಸೂರಜ್(23) ಮೃತಪಟ್ಟು ಸಹಸವಾರ ಅಧೀಶ್ ಮತ್ತು ಬೈಕ್ ಸವಾರ ಕೊಪ್ಪಲಂಗಡಿ ನಿವಾಸಿ ಉಮೇಶ್ ಗಾಯಗೊಂಡಿದ್ದಾರೆ.

ಮೃತ ಸೂರಜ್ ಪಡುಬಿದ್ರಿ ಸುಜ್ಲಾನ್ ಕಂಪೆನಿಯ ಸೂಪರ್ ವೈಸರ್ ಆಗಿದ್ದು, ರವಿವಾರ ರಾತ್ರಿ ಕಟಪಾಡಿಗೆ ತೆರಳಿ, ಅಲ್ಲಿಂದ ಅದಮಾರಿನ ತನ್ನ ಮನೆಗೆ ಆಗಮಿಸುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೆ 1 ಹೋಟೆಲ್ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದ ಸ್ಕೂಟಿ ಸವಾರ ಉಮೇಶ್ ಮತ್ತು ಬೈಕ್ ಸವಾರ ಸೂರಜ್ ಗಂಬೀರ ಗಾಯಗೊಂಡಿದ್ದು, ಸಹಸವಾರ ಆದೀಶ್ ಸಣ್ಣ ಪುಟ್ಟ ಗಾಯಗೊಂಡಿದ್ದರು. ಸ್ಥಳೀಯರು ಗಾಯಾಳುಗಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿನ ವೈದ್ಯರ ಸೂಚನೆಯಂತೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಕಾರಿಗೆ ಗುದ್ದಿದ ಕಂಟೇನರ್ ಚಾಲಕ-ಪುಟ್ಟ ಬಾಲಕ ದಾರುಣ ಅಂತ್ಯ

ಸೂರಜ್‌ನನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದು, ಮಿದುಳು ನಿಷ್ಕ್ರೀಯಗೊಂಡಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದು ಅದರಂತೆ ವಾಪಾಸು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆ ಫಲಿಸದೆ ಸೋಮವಾರ ಮುಂಜಾನೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.‌

Continue Reading
Advertisement

Trending

Copyright © 2025 Namma Kudla News

You cannot copy content of this page