Connect with us

LATEST NEWS

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ..? ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ

Published

on

ಹೈ ಹೀಲ್ಸ್ ಚಪ್ಪಲಿಗಳನ್ನು ಧರಿಸಿದರೆ ಎತ್ತರವಾಗಿ ಕಾಣುತ್ತೇವೆ ಮತ್ತು ಸ್ಟೈಲಿಶ್ ಆಗಿಯೂ ಕಾಣುತ್ತೇವೆ. ಆದರೆ ಇಂತಹ ಚಪ್ಪಲಿಗಳನ್ನು ನಿರಂತರವಾಗಿ ಧರಿಸುವುದರಿಂದ ಅನೇಕ ರೀತಿಯ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಕೆಳ ಬೆನ್ನು ನೋವಿನಿಂದ ಹಿಡಿದು ಪಾದದ ಉಳುಕಿನವರೆಗೆ ಏನಾದರೂ ಉಂಟುಮಾಡಬಹುದು. ನಿರಂತರವಾಗಿ ಹೀಲ್ಸ್ ಧರಿಸುವುದರಿಂದಾಗುವ ಆಗುವ ತೊಂದರೆಗಳನ್ನು ಇಲ್ಲಿ ತಿಳಿಸಲಾಗಿದೆ.

  • ಹೈ ಹೀಲ್ಸ್ ನಿಮ್ಮ ಪಾದಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುವುದಿಲ್ಲ. ಅಧಿಕ ತೂಕ ಮತ್ತು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಕೆಳ ಬೆನ್ನಿನಲ್ಲಿ ಊತ ಮತ್ತು ನೋವುಗಳನ್ನು ಉಂಟುಮಾಡುತ್ತದೆ.
  • ಹೈ ಹೀಲ್ಸ್ ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ.. ಆದರೆ ಅವರು ಎಷ್ಟು ಆಕರ್ಷಿತರಾಗಿದ್ದರೂ ಪರವಾಗಿಲ್ಲ ಹೈ ಹೀಲ್ಸ್ ಅಹಿತಕರವಾಗಿರುತ್ತದೆ. ಹೈ ಹೀಲ್ಸ್ ಪಾದಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಇದರಿಂದ ಹಿಮ್ಮಡಿ, ಅಡಿಭಾಗ ಅಥವಾ ಕಾಲ್ಕೆರಳುಗಳಲ್ಲಿ ನೀವು ತೀವ್ರವಾದ ನೋವನ್ನು ಅನುಭವಿಸಬಹುದು.
  • ಹೈ ಹೀಲ್ಸ್ ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಅದೇ ಸಮಯದಲ್ಲಿ ಇದು ಪಾದಗಳಿಗೆ ಹಲವಾರು ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ.
  • ಹೈ ಹೀಲ್ಸ್ ಬೂಟುಗಳನ್ನು ಧರಿಸುವುದರಿಂದ ಕಾಲು ನೋವು ಮತ್ತು ಮೊಣಕಾಲು ನೋವು ಉಂಟಾಗುತ್ತದೆ. ಗಂಟೆಗಟ್ಟಲೆ ಹೈ ಹೀಲ್ಸ್ ಧರಿಸುವುದರಿಂದ ಪಾದಗಳಲ್ಲಿ ನೋವು ಉಂಟಾಗುತ್ತದೆ. ವಾಸ್ತವವಾಗಿ ಹೈಹೀಲ್ಡ್ ಬೂಟುಗಳನ್ನು ಧರಿಸುವುದರಿಂದ ಸ್ನಾಯುಗಳಲ್ಲಿ ಒತ್ತಡ ಉಂಟಾಗುತ್ತದೆ. ಇದು ಪಾದಗಳಲ್ಲಿ ನೋವು ಮತ್ತು ಕಣಕಾಲುಗಳು, ಸೊಂಟದಲ್ಲಿ ನೋವನ್ನು ಉಂಟುಮಾಡುತ್ತದೆ.
  • ಹೈ ಹೀಲ್ಸ್ ಧರಿಸುವುದರಿಂದ ನಿಮ್ಮ ಬೆನ್ನುಮೂಳೆಯ ಮೇಲೆ ಒತ್ತಡ ಬೀಳುತ್ತದೆ. ಇದು ನಿಮ್ಮ ಮೊಣಕಾಲುಗಳ ಮೇಲೂ ಪರಿಣಾಮ ಬೀರಬಹುದು.
  • ಹೈ ಹೀಲ್ಸ್ ಧರಿಸುವುದರಿಂದ ಮುರಿತದ ಅಪಾಯವೂ ಇದೆ. ಈ ಕಾರಣದಿಂದಾಗಿ ಕಾಲುಗಳು ಮತ್ತು ಸೊಂಟದ ಮೂಳೆಗಳು ಮುರಿಯಬಹುದು. ಇದಲ್ಲದೆ ಭಂಗಿಯು ಹಾಳಾಗಬಹುದು. ಆದ್ದರಿಂದ ನಿಮ್ಮ ಮೂಳೆಗಳು ದುರ್ಬಲವಾಗಿದ್ದರೆ ಎಚ್ಚರಿಕೆಯಿಂದ ಹೈ ಹೀಲ್ಸ್ ಧರಿಸಿ.

LATEST NEWS

ಕುಂಭ ಮೇಳದಿಂದ ಹಿಂದಿರುಗುವಾಗ ದುರಂತ; ಕರ್ನಾಟಕದ ನಾಲ್ವರು ಸೇರಿ ಆರು ಮಂದಿ ಸಾ*ವು

Published

on

ಮಂಗಳೂರು/ಮಧ್ಯಪ್ರದೇಶ : ಕುಂಭ ಮೇಳದಿಂದ ಹಿಂದಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ನಾಲ್ವರು ಸೇರಿ ಒಟ್ಟು ಆರು ಮಂದಿ ಸಾ*ವನ್ನಪ್ಪಿದ್ದಾರೆ.

ಮಧ್ಯಪ್ರದೇಶದ ಇಂದೋರ್​ ಬಳಿ ಸಂಭವಿಸಿದ ಅಪಘಾತದಲ್ಲಿ ಬೆಳಗಾವಿಯ ನಾಲ್ವರು ಸೇರಿ ಆರು ಮಂದಿ ಸಾ*ವನ್ನಪ್ಪಿದ ಘಟನೆ ಜರುಗಿದೆ. ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ಹಿಂದಿರುಗುತ್ತಿದ್ದಾಗ ಈ ಅ*ವಘಡ ಸಂಭವಿಸಿದೆ.

ಮೃತರನ್ನು ಬೆಳಗಾವಿಯ ಶಹಾಪುರ ನಿವಾಸಿ ಡ್ರೈವರ್ ಸಾಗರ್ (55), ಗಣೇಶಪುರ ನಿವಾಸಿ ನಿತಿ ಪಾಟೀಲ್ (50) ಸೇರಿ ಒಟ್ಟು ಆರು ಮಂದಿ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಮತ್ತೆ ಅ*ಗ್ನಿ ಅವಘ*ಡ

ಟಿಟಿ ವಾಹನದಲ್ಲಿ 19 ಮಂದಿ ವಾಪಸಾಗುತ್ತಿದ್ದರು ಆಗ ಲಾರಿಗೆ ವಾಹನ ಡಿಕ್ಕಿ ಹೊಡೆದಿದೆ. ಬೆಳಗಾವಿಯ ನಾಲ್ವರು ಇಂದೋರ್​ನ ಇಬ್ಬರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನ್ಪುರ ಪೊಲೀಸ್ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

 

 

Continue Reading

LATEST NEWS

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರು

Published

on

ಮಂಗಳೂರು/ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕಳಕ್ಕೆ ಬೇಸತ್ತು ಅನೇಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದೆಷ್ಟೋ ಜನರು ಬೀದಿಗೆ ಬಿದ್ದಿದ್ದರು. ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ವಾಪಾಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

“ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ ಮೂರು ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ ಹೇಗೆ ಹಾಕುತ್ತೀರಾ” ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾಗೆ ಹೊಸ ಮೆರಗು; ಖ್ಯಾತ ಸೆಲೆಬ್ರಿಟಿಗಳಿಂದ ಸಲಹೆ, ಮಾರ್ಗದರ್ಶನ

“ಸಾಲ ಪಡೆಯುವವನ ಬಳಿ ಏನೂ ದಾಖಲೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದೀರಾ, ಆದರೆ ಇದು ಸರ್ಕಾರಿ ಸಂಸ್ಥೆಗಳ ಸಾಲದ ವೇಳೆ ಅನುಸರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಶಿಕ್ಷೆ ಪ್ರಮಾಣ ಹತ್ತು ವರ್ಷ ವಿಧಿಸಲಾಗಿದೆ. ಶಿಕ್ಷೆ ಪ್ರಮಾಣ ವಿಪರೀತವಾಗಿದೆ. ಪ್ರಾಮಾಣಿಕವಾಗಿ ಸಾಲ ಕೊಟ್ಟವರಿಗೂ ಇದು ಪರಿಣಾಮ ಬೀರಲಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರಿಗೂ ಸಮಸ್ಯೆ ಆಗಲಿದೆ ಎಂದಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಸಾದಕ-ಬಾಧಕ ಚರ್ಚಿಸಿ. ಈಗ ಇರುವ ಕಾನೂನುಗಳಲ್ಲೇ ಪೊಲೀಸರು ನಿಯಂತ್ರಿಸಬಹುದು. ಮತ್ತೊಂದು ಕಾನೂನಿನ ಅಗತ್ಯತೆ ಕಾಣುತ್ತಿಲ್ಲ” ಎಂದು ರಾಜ್ಯಪಾಲರು ಸೂಚಿಸಿದ್ದಾರೆ.

Continue Reading

LATEST NEWS

Viral Video: ಓಪನ್ ಜೀಪ್‌ನಲ್ಲಿ ಶ್ವಾನದ ಹುಟ್ಟುಹಬ್ಬ ಆಚರಣೆ ಮಾಡಿದ ಯುವಕರ ತಂಡ

Published

on

ಭೋಪಾಲ್: ಸಾಮಾನ್ಯವಾಗಿ ಜನರ ಬರ್ತ್‌ ಡೇ ಯನ್ನು ಅದ್ದೂರಿಯಾಗಿ ಆಚರಿಸುವುದುಂಟು. ಆದರೆ ಶ್ವಾನದ ಬರ್ತ್‌ ಡೇ ಯನ್ನು ಆಚರಿಸುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ.. ಹೌದು ಇಲ್ಲೊಂದು ನಾಯಿಗೆ ಯುವಕರ ಗುಂಪೊಂದು ಅದರ ಕುತ್ತಿಗೆಗೆ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಬಳಿಕ ಓಪನ್ ಜೀಪ್‌ನಲ್ಲಿ ಊರೆಲ್ಲಾ ಮೆರವಣಿಗೆ ಮಾಡಿ ಬಹಳ ವಿಜೃಂಭಣೆಯಿಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಲೂಡೋ ಮಧ್ಯಪ್ರದೇಶದ ದೇವಾಸ್ ನಗರದ ಒಂದು ಬೀದಿ ನಾಯಿ. ಬೀದಿಯಲ್ಲಿ ಹುಟ್ಟಿ ಬೆಳೆದ ಲೂಡೋಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಈ ಬೀದಿನಾಯಿ ಲೂಡೋಗಾಗಿ ಅಭಿಮಾನಿಗಳು ತೆರೆದ ಜೀಪಿನಲ್ಲಿ ನಗರ ಪ್ರದಕ್ಷಿಣೆ ಮಾಡಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಯುವಕರ ನಡೆಯನ್ನು ಮೆಚ್ಚಿ ಕಮೆಂಟ್ ಹಾಕುತ್ತಿದ್ದಾರೆ. ಈ ಘಟನೆ ಮಧ್ಯಪ್ರದೇಶದ ದೆವಾಸ್‌ನಲ್ಲಿ ನಡೆದಿದೆ. ಅಷ್ಟಕ್ಕೂ ಈ ಬೀದಿ ನಾಯಿಗೆ ಏಕೆ ಇಷ್ಟೊಂದು ಅಭಿಮಾನಿಗಳು ಎನ್ನುವ ಪ್ರಶ್ನೆಯೂ ಕಂಡುಬರುತ್ತದೆ.

ನೋಡಲು ಮುದ್ದಾಗಿರುವ ಈ ಬೀದಿ ನಾಯಿ ಲೂಡೋಗೆ ಯುವಕರ ಗುಂಪಿನ ಸದಸ್ಯರು ಸ್ನೇಹಿತರಾಗಿದ್ದು, ಯಾವಾಗಲೂ ಆಹಾರ ಕೊಡುತ್ತಾ ತಮ್ಮದೇ ಒಬ್ಬ ಸ್ನೇಹಿತನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಲೂಡೋ ಕೂಡ ಅವರೊಂದಿಗೆ ತುಂಬಾ ಆತ್ಮೀಯತೆಯಿಂದ ಇರುತ್ತದೆ.

Watch Video:

Continue Reading
Advertisement

Trending

Copyright © 2025 Namma Kudla News

You cannot copy content of this page