Connect with us

LATEST NEWS

ಅಬ್ಬಾಬ್ಬಾ..! ಇವನು ಕಳ್ಳ ಮಾತ್ರವಲ್ಲ… ತನಿಖೆಯಲ್ಲಿ ಬಯಲಾಯ್ತು ಭಯಾನಕ ಕೃತ್ಯ……!

Published

on

ಕಳ್ಳತನದ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದಿದ್ದ ಆರೋಪಿಯೊಬ್ಬನ ವಿಚಾರಣೆ ನಡೆಸಿದ ಪೊಲೀಸರಿಗೆ ಆರೋಪಿ ಈ ಹಿಂದೆ ನಡಸಿದ್ದ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ ಎಂಬಲ್ಲಿ ಈ ಘಟನೆ ನಡೆದಿದ್ದು, ಕಳ್ಳನ ವಿಚಾರಣೆ ವೇಳೆ ಡಬಲ್ ಮರ್ಡ*ರ್ ಹಾಗೂ ಅತ್ಯಾ*ಚಾರ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಡಬಲ್ ಮರ್ಡ*ರ್ ಕೇಸ್‌ ಸಂಬಂಧಿಸಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


ಮಾರ್ಚ್‌ 2 ರಂದು ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪನ ಪುರಸಭಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿ ನಿತೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರಿಗೆ ಆರೋಪಿ ನಡೆಸಿದ್ದ ಹಳೆ ಕೃತ್ಯವೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ….450 ರೂಪಾಯಿಗೆ ನಡೆಯಿತು ಮಾ*ರಣಾಂತಿಕ ಹ*ಲ್ಲೆ..!! ಸಿಕ್ಕ ಸಿಕ್ಕಲ್ಲಿ ತಿವಿದು ಎಸ್ಕೇಪ್ ಆದ ಕಿರಾತಕರು

ಈತ ಕಳ್ಳ ಮಾತ್ರವಲ್ಲ ಕೊ*ಲೆಗಾರನೂ…!

ಆರೋಪಿಯು 2015 ರಲ್ಲಿ ವಾಮಾ*ಚಾರದ ಹೆಸರಿನಲ್ಲಿ ಯುವತಿಯೊಬ್ಬಳ ಅತ್ಯಾ*ಚಾರ ನಡೆಸಿದ್ದ. ಬಳಿಕ ಆಕೆಯಲ್ಲಿ ಜನಿಸಿದ ನಾಲ್ಕು ದಿನದ ಮಗುವನ್ನು ಕೊಂ*ದು ಹೂತು ಹಾಕಿದ್ದಾನೆ. ಇಷ್ಟೇ ಅಲ್ಲದೆ ಆಕೆಯ ತಂದೆಯನ್ನೂ ಮುಗಿಸಿ ಮನೆಯಲ್ಲೇ ಹೂತಿದ್ದು ಈಗ ಬಾಯಿ ಬಿಟ್ಟಿದ್ದಾನೆ. ಈ ಎರಡೂ ಕೊಲೆ ಪ್ರಕರಣದಲ್ಲಿ ಈತನಿಗೆ ಸಹಕರಿಸಿದ ತಾಯಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲು ವಾಮಾ*ಚಾರದ ಹೆಸರಿನಲ್ಲಿ ಮಗಳನ್ನು ಅತ್ಯಾ*ಚಾರ ಮಾಡಿದ್ದ ಆರೋಪಿ ಬಳಿಕ ಆಕೆಯ ತಾಯಿ ಮೇಲೂ ಅತ್ಯಾ*ಚಾರ ನಡೆಸಿದ್ದ. ಬಳಿಕ ಇಬ್ಬರ ಜೊತೆಯಲ್ಲೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಮಗಳಿಗೆ ಮಗುವಾದಾಗ ತಾಯಿಯ ಸಹಕಾರದೊಂದಿಗೆ ನಾಲ್ಕು ದಿನದ ಮಗುವನ್ನು ಕೊಂ*ದು ಹೂತು ಹಾಕಿದ್ದ.
ಜುಲೈ 2016 ರಲ್ಲಿ ಕಟ್ಟಪ್ಪನ ಬಳಿಯ ಸಾಗರ ಜಂಕ್ಷನ್‌ನಲ್ಲಿರುವ ಮನೆಯಲ್ಲಿ ನವಜಾತ ಶಿಶುವನ್ನು ಕೊ*ಲೆ ಮಾಡಿದ್ದ. ಈ ಬಗ್ಗೆ ಯಾರೂ ಬಾಯಿ ಬಿಟ್ಟಿರಲಿಲ್ಲ.

ಸ್ನೇಹಿತನ ತಂದೆಯ ಕೊ*ಲೆಗೈದಿದ್ದ…!


ಆಗಸ್ಟ್ 2023 ರಲ್ಲಿ ಸ್ನೇಹಿತ ವಿಷ್ಣುವಿನ ತಂದೆಯನ್ನು ಕೊ*ಲೆ ಮಾಡಿ ಮನೆಯೊಳಗೆ ಹೂತು ಹಾಕಿದ್ದರು. ಈ ಎಲ್ಲಾ ಕೃತ್ಯಗಳಲ್ಲಿ ಸ್ನೇಹಿತ ವಿಷ್ಣು ಹಾಗೂ ಆತನ ತಾಯಿ ಸುಮಾ ಸಹಕಾರ ಮಾಡಿದ ಆರೋಪದಲ್ಲಿ ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ. ಸ್ಥಳ ಮಹಜರು ನಡೆಸಿದ ಪೊಲೀಸರಿಗೆ ಮನೆಯಲ್ಲಿ ಹೂತು ಹಾಕಿರುವ ವಿಜಯನ್ ಅವರ ದೇಹದ ಅಸ್ತಿ ಪಂಜರಗಳು ಸಿಕ್ಕಿವೆ. ಆದ್ರೆ ಮಗುವಿನ ಅವಶೇಷಗಳೂ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಮಗುವಿನ ತಾಯಿಯ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ಸದ್ಯ ವಿಚಾರಣೆ ಮುಂದುವರೆಸಿದ್ದಾರೆ.

ಎ1 ಆರೋಪಿಯಾಗಿರುವ ನಿತೀಶ್‌ ವಾಮಾ*ಚಾರದ ತೆಗೆಯುವ ಹೆಸರಿನಲ್ಲಿ ಸ್ನೇಹಿತ ವಿಷ್ಣು ಮನೆ ಸೇರಿದ್ದ. ವಿಷ್ಣುವಿನ ಸಹೋದರಿಗೆ ಕುಜದೋಷವಿದ್ದು, ಅದರ ನಿವಾರಣೆಗೆ ವಿಶೇಷ ಪೂಜೆ ಮಾಡಬೇಕು ಎಂದು ಹೇಳಿ ವಿಷ್ಣುವಿನ ಸಹೋದರಿಯನ್ನು ಅತ್ಯಾ*ಚಾರ ಮಾಡಿದ್ದ. ಬಳಿಕ ಆತನೇ ಆಕೆಯನ್ನು ವಿವಾಹ ಮಾಡಿಕೊಂಡು ಅದೇ ಮನೆಯಲ್ಲಿ ವಾಸವಾಗಿದ್ದ. ಈ ನಡುವೆ ಆಕೆಯ ತಾಯಿಯನ್ನೂ ವಾಮಾ*ಚಾರದ ಹೆಸರಿನಲ್ಲಿ ಹೆದರಿಸಿ ಅತ್ಯಾ*ಚಾರ ನಡೆಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಆದ್ರೆ, ಬಳಿಕ ತಾಯಿಯ ಜೊತೆ ಆರೋಪಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ವಿಚಾರ ವಿಷ್ಣುವಿನ ತಂದೆ ಎನ್‌.ಜಿ.ವಿಜಯನ್ ಅವರಿಗೆ ಗೊತ್ತಾಗಿದ್ದಕ್ಕೆ ಅವರನ್ನೇ ಪತ್ನಿ ಸುಮಾ ಹಾಗೂ ನಿತಿಶ್ ಕೊಂ*ದು ಹೂತು ಹಾಕಿದ್ದರು. ಇದಕ್ಕೆ ವಿಷ್ಣು ಸಹಕಾರ ನೀಡಿದ್ದ ಹಿನ್ನಲೆಯಲ್ಲಿ ವಿಷ್ಣು ಹಾಗೂ ಆತನ ತಾಯಿ ಸುಮಾ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.

LATEST NEWS

Watch video: ಉಗ್ರ ಆಮಿರ್ ನಾಝಿರ್‌ ವಾನಿ ಹ*ತ್ಯೆಗೂ ಮುನ್ನ ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

Published

on

ಮಂಗಳೂರು/ಶ್ರೀನಗರ: ಇವತ್ತು ಪುಲ್ವಾಮಾದ ಟ್ರಾಲ್​ನಲ್ಲಿ ಭಾರತೀಯ ಸೇನೆ ಜೈಶ್ ಏ ಮೊಹಮ್ಮದ್​ನ ಮೂವರು ಉಗ್ರರನ್ನ ಹೊಡೆದುರುಳಿಸಿದೆ. ಸೇನೆ, ಉಗ್ರರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಮೂವರ ಹತ್ಯೆಯಾಗಿದೆ.


ಆದರೆ, ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕ ತನ್ನ ಸಾವಿಗೂ ಮುನ್ನ ಆತನ ತಾಯಿಯೊಂದಿಗೆ ವಿಡಿಯೋಕಾಲ್ ಮೂಲಕ ಮಾತನಾಡಿದ್ದಾನೆ. ಅವನ ತಾಯಿ ಶರಣಾಗುವಂತೆ ಬೇಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಭಯೋತ್ಪಾದಕ ಅಮೀರ್ ನಜೀರ್‌ವಾನಿ ತನ್ನ ತಾಯಿಯೊಂದಿಗೆ ಮಾತನಾಡುವಾಗ ಎಕೆ 47 ಹಿಡಿದುಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‌ಕೌಂಟರ್; ಮೂವರು ಉಗ್ರರ ಹ*ತ್ಯೆ

ಕೊನೆಯ ವಿಡಿಯೋ ಕರೆಯಲ್ಲಿ, ಅಮೀರ್‌ನ ತಾಯಿ ಅವನಿಗೆ ಶರಣಾಗುವಂತೆ ಹೇಳಿದ್ದಾರೆ. ಆದರೆ ಅವನು ತನ್ನ ತಾಯಿ ಮಾತನ್ನು ನಿರಾಕರಿಸಿದ್ದಾನೆ. ಸೈನ್ಯ ಮುಂದೆ ಬರಲಿ, ನಂತರ ನಾನು ನೋಡುತ್ತೇನೆ ಎಂದು ಆತ ಉತ್ತರಿಸಿದ್ದಾನೆ.

Watch video

Continue Reading

LATEST NEWS

ಒಂದೇ ಕುಟುಂಬದ ಮೂವರ ಆತ್ಮಹ*ತ್ಯೆ ಪ್ರಕರಣ; ಎಸ್ಪಿ ಡಾ. ಅರುಣ್‌ ಹೇಳಿದ್ದೇನು?

Published

on

ಉಡುಪಿ: ಕೊರೊನಾ ನಂತರ ಸಂಕಷ್ಟಕ್ಕೆ ಸಿಲುಕಿದ ತಂದೆ ಮತ್ತು ಪುತ್ರ ಬ*ಲಿಯಾದ ಹೃದಯ ವಿದ್ರಾವಕ ಘಟನೆಯೊಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ಬಾವಿಗೆ ಹಾರಿ ತಂದೆ ಮತ್ತು ಮಗ ಮೃತ ಪಟ್ಟ ಘಟನೆ ಮತ್ತು ಇದಕ್ಕೆ ಕಾರಣವೇನೆಂಬುದರ ಕುರಿತಂತೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೃತ ಮಾಧವ ಮತ್ತು ಅವರ ಪುತ್ರ ಪ್ರಸಾದ್ ಬಸ್ರೂರು ಮೂರು ಕೈ ಬಳಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಪತ್ನಿ ತಾರಾ ಅವರು ಗೃಹಿಣಿಯಾಗಿ ಮನೆಯಲ್ಲಿಯೇ ಇರುತ್ತಿದ್ದರು. ಮಾಧವ ಅವರು ಕುಟುಂಬದ ಜತೆ ಸೇರಿ ಮೂರು ಸಂಘಗಳಿಂದ ಸಾಲ ಪಡೆದಿದ್ದು, ಕೊರೊನಾ ಮಹಾಮಾರಿಯ ಬಳಿಕ ಸಾಲ ಮರುಪಾವತಿ ಮಾಡಲು ಕಷ್ಟ ಪಡುತ್ತಿದ್ದರು. ನಿಗದಿತ ಸಮಯಕ್ಕೆ ಸಾಲ ಕಟ್ಟದೆ ಇರುವುದರಿಂದ ಮಾಧವ ಅವರು ನೊಂದಿದ್ದು, ಇದೇ ವಿಚಾರದಲ್ಲಿ ಯಾವಾಗಲೂ ಮನೆಯಲ್ಲಿ ‘ನಾನು ಸಾಯುತ್ತೇನೆ’ ಎಂದು ಹೇಳುತ್ತಿದ್ದರು. ಇಂದು ಬೆಳಗ್ಗೆ ಮಾಧವ ಅವರು ಎದ್ದವರು ಮನೆಯಲ್ಲಿ ಸುಮ್ಮನೇ ಇದ್ದು, ಸುಮಾರು 6 ಗಂಟೆ ವೇಳೆಗೆ ಮನೆಯ ಎದುರಿನ ಬಾವಿಗೆ ಹಾರಿದ್ದಾರೆ. ಆಗ ತಂದೆಯನ್ನು ರಕ್ಷಿಸಲು ಪುತ್ರ ಪ್ರಸಾದ್ ಕೂಡಾ ಬಾವಿಗೆ ಹಾರಿರುತ್ತಾನೆ. ಗಂಡ ಮತ್ತು ಮಗನನ್ನು ರಕ್ಷಿಸಲು ಪತ್ನಿ ತಾರಾ ಅವರು ಕೂಡಾ ಬಾವಿಗೆ ಹಾರಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನ; ತಂದೆ, ಮಗ ಸಾವು, ತಾಯಿ ಸ್ಥಿತಿ ಗಂಭೀರ

ಆದರೆ ಪತಿ ಮತ್ತು ಪುತ್ರ ನೀರಿನಲ್ಲಿ ಮುಳುಗಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ತಾರಾ ಅವರಿಗೆ ಈಜಲು ಬರುತ್ತಿದ್ದುದರಿಂದ ಬಾವಿಯಲ್ಲಿದ್ದ ಪೈಪ್ ನ್ನು ಹಿಡಿದುಕೊಂಡು ನಿಂತಿದ್ದರು. ಬಳಿಕ ಊರಿನವರು ಬಂದು ಆಕೆಯನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಪತಿ ಮಾಧವ (60) ಮತ್ತು ಪುತ್ರ ಪ್ರಸಾದ್ (23) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಾರಾ (55) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಎಸ್.ಪಿ. ಅರುಣ್‌ ಕುಮಾರ್‌ ತಿಳಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Continue Reading

LATEST NEWS

ತಿರುಪತಿಯಲ್ಲಿ ಮಿನಿ ಬಸ್ ಪಲ್ಟಿ; ಕಡಬದ ಮಹಿಳೆ ಸಾವು, ಹಲವರಿಗೆ ಗಾಯ

Published

on

ತಿರುಪತಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಿಂದ ತಿರುಪತಿಗೆ ತೆರಳಿದ್ದ ಯಾತ್ರಾರ್ಥಿಗಳಿದ್ದ ಮಿನಿ ಬಸ್ಸೊಂದು ತಿರುಪತಿ – ಶ್ರೀಕಾಳಹಸ್ತಿ ಹೆದ್ದಾರಿಯಲ್ಲಿ ಇಂದು ಭೀಕರ ಅಪಘಾತಕ್ಕೀಡಾದ ಪರಿಣಾಮ ಓರ್ವ ಮಹಿಳೆ ಮೃತ ಪಟ್ಟು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.

ಕಡಬ ತಾಲೂಕಿನ ಕೂಸಪ್ಪ ಎಂಬವರ ಪತ್ನಿ ಶೇಷಮ್ಮ (70) ಮೃತ ಪಟ್ಟವರು. ಕೈಕಂಬದ ತಿಲೈಶ್ (45) ಮತ್ತು ಕಮಲಾಕ್ಷಿ (60) ಸೇರಿದಂತೆ ಇತರ ಕೆಲವರು ತೀವ್ರ ಸ್ವರೂಪದ ಗಾಯಗೊಂಡಿದ್ದಾರೆ. ನಿವೃತ್ತ ಸೈನಿಕರಾದ ಸೋಮಶೇಖರ್, ಶೀನಪ್ಪ, ಕೂಸಪ್ಪ, ನಿಖಿಲ್, ತನುಷ್ ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೋಟ: ಟಿಟಿ ವಾಹನ ಪಲ್ಟಿ, 10 ಕ್ಕೂ ಹೆಚ್ಚು ಜನರಿಗೆ ಗಾಯ

ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬದ ಯಾತ್ರಾರ್ಥಿಗಳ ತಂಡವು ಮಂಗಳವಾರ ಗುಂಡ್ಯದಿಂದ ತಿರುಪತಿಗೆ ಪ್ಯಾಕೇಜ್ ಟೂರ್ ಬಸ್‌ನಲ್ಲಿ ತೆರಳಿತ್ತು. ಬುಧವಾರ ಸಂಜೆ ತಿರುಪತಿಯಲ್ಲಿ ತಮ್ಮ ನಿಗದಿತ ದರ್ಶನಕ್ಕೆ ಮುಂಚಿತವಾಗಿ, ಕರ್ನಾಟಕದ ಯಾತ್ರಿಕರು ಮೂರು ಮಿನಿ ಬಸ್‌ಗಳಲ್ಲಿ ಶ್ರೀಕಾಳಹಸ್ತಿಗೆ ತೆರಳುತ್ತಿದ್ದರು. ಈ ಸಂದರ್ಭ ಬಿಳಿನೆಲೆ ಕೈಕಂಬ ತಂಡವನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಫ್ಲೈ ಓವರ್‌ನಲ್ಲಿದ್ದಾಗ ನಿಯಂತ್ರಣ ತಪ್ಪಿ, ಡಿವೈಡರ್‌ ಗೆ ಢಿಕ್ಕಿ ಹೊಡೆದು ಪಲ್ಟಿಯಾಯಿತು ಎಂದು ತಿಳಿದು ಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page