Connect with us

LATEST NEWS

ಪ್ಲೇ ಸ್ಕೂಲ್‌ಗೆ ಸೆಡ್ಡುಹೊಡೆದ ಉಡುಪಿಯ ಬಂಟಕಲ್ಲು ಅಂಗನವಾಡಿ ಶಾಲೆ

Published

on

ಉಡುಪಿ: ಸುತ್ತಲೂ ಆವರಣ ಗೋಡೆ , ಗಮನ ಸೆಳೆಯುವ ಗೋಡೆ ಬರಹ, ಕಾರ್ಟೂನ್‌ ಚಿತ್ರಗಳು. ಕೊಠಡಿಗೆ ಹವಾ ನಿಯಂತ್ರಿತ ವ್ಯವಸ್ಥೆ, ಶಿಸ್ತಿನಿಂದ ಕುಳಿತು ನಿಷ್ಕಲ್ಮಶ ಮನಸ್ಸಿನಿಂದ ಗುರುಗಳ ಮಾತುಗಳನ್ನು ಆಲಿಸುತ್ತಿರುವಂತಹ ಪುಟ್ಟ ಪುಟ್ಟ ಮಕ್ಕಳು. ಇದೆಲ್ಲವೂ ನಾವೂ ನೀವೂ ಊಹಿಸುವಂತಹ ಪ್ಲೇ ಸ್ಕೂಲ್‌ನ ಚಿತ್ರಣವಲ್ಲ.


ಬದಲಾಗಿ ಪ್ರೀತಿಯಿಂದ ಅಕ್ಷರಭ್ಯಾಸ, ಪದ್ಯ, ಡ್ಯಾನ್ಸ್, ಹೇಳಿ ಕೊಡುತ್ತಿರುವ ಗುರುಗಳು ಕಂಡುಬಂದದ್ದು ಉಡುಪಿ ಕಾಪುವಿನ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲುವಿನಲ್ಲಿರುವಂತಹ ಮನೆಯ ವಾತಾವರಣ ಅನುಭವವನ್ನು ಕಟ್ಟಿಕೊಡುವಂತಹ ಹೈಟೆಕ್ ಸ್ಪರ್ಶ ನೀಡಲಾದ ಒಂದು ಅಂಗನವಾಡಿ ಶಾಲೆ.


ದಿ| ಅಚ್ಯುತ ಕಾಮತ್‌ ಅವರು ಗ್ರಾ.ಪಂ.ಗೆ ದಾನವಾಗಿ ನೀಡಿದ 6 ಸೆಂಟ್ಸ್‌ ಜಾಗದಲ್ಲಿ ತೀರಾ ದುಸ್ಥಿತಿಯ 35 ವರ್ಷದ ಹಳೆಯ ಕಟ್ಟಡದಲ್ಲಿ ಈ ಕೇಂದ್ರವು ಕಾರ್ಯ ನಿರ್ವಹಿಸುತ್ತಿತ್ತು. ಅಪಾಯಕಾರಿ ಸ್ಥಿತಿಯಲ್ಲಿದ್ದ ಅಂಗನವಾಡಿಗೆ ಹೊಸ ಸ್ಪರ್ಶವನ್ನು ನೀಡಲಾಗಿದೆ.


ಇಲ್ಲಿನ ಗ್ರಾಮಪಂಚಾಯತ್‌ಗೆ ದಾನಿಯೊಬ್ಬರು ಜಾಗವನ್ನು ದಾನವಾಗಿ ಕೊಟ್ಟಿದ್ದರು. ಅದೇ ಜಾಗದಲ್ಲಿ ಅಂಗನವಾಡಿಯ ಕಟ್ಟಡವೊಂದು ನಿರ್ಮಾಣ ಮಾಡಲಾಗಿತ್ತು.

ಬರೋಬ್ಬರಿ 35 ವರ್ಷ ಕಾಲ ಅದೇ ಜಾಗದಲ್ಲಿ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಶಾಲೆ ಬಳಿಕ ಶಿಥಿಲಾವ್ಯಸ್ಥೆಗೆ ತಲುಪಿ ಮಕ್ಕಳ ಜೀವಕ್ಕೆ ಅಪಾಯವಾಗುವಂತಹ ಸಾಧ್ಯತೆ ಇತ್ತು.


ಇದನ್ನು ಗಮನಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಆರ್‌.ಪಾಟ್ಕರ್‌ ಅವರು ಮಹಿಳಾ , ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಸುಮಾರು 20.5 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿಯನ್ನು ನಿರ್ಮಾಣ ಮಾಡಿಸಿ ಆಧುನಿಕ ಸ್ಪರ್ಶ ಕೊಡಲು ಕಾರಣರಾಗಿದ್ದಾರೆ.


ಈ ಅಂಗನವಾಡಿಯಲ್ಲಿ ಪುಟಾಣಿಗಳಿಗಾಗಿ ಪ್ರತ್ಯೇಕ ಜಾರುಬಂಡಿ, ವಾಟರ್‌ ಪ್ಯೂರಿಫೈಯರ್‌, ಸೋಫಾ, ಚಪ್ಪಲ್‌ ಸ್ಟಾಂಡ್‌, ಬ್ಯಾಗ್‌ ಸ್ಟಾಂಡ್‌, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್‌ ಮತ್ತು ಕುರ್ಚಿ ಸೇರಿದಂತೆ ಅನೇಕ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದ್ದು, ಮಾದರಿ ಅಂಗನವಾಡಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮಾತ್ರವಲ್ಲ ಖಾಸಗಿ ಪ್ಲೇ ಸ್ಕೂಲ್ ಗಳ ಭರಾಟೆ ಮಧ್ಯೆ, ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಹೈಟೇಕ್ ಆಗಿ ಕಂಗೊಳಿಸುತ್ತಿದೆ.


ಸಂಘ ಸಂಸ್ಥೆಗಳಾದ ಬಂಟಕಲ್ಲು ನಾಗರಿಕ ಸೇವಾ ಸಮಿತಿ, ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ, ಲಯನ್ಸ್‌ ಕ್ಲಬ್‌ ಬಂಟಕಲ್ಲು -ಬಿಸಿ ರೋಡ್‌, ಲಯನ್ಸ್‌ ಕ್ಲಬ್‌ ಬಂಟಕಲ್ಲು ಜಾಸ್ಮಿನ್‌, ಲಯನ್ಸ್‌ ಕ್ಲಬ್‌ ಉಡುಪಿ-ಕರಾವಳಿ, ರೋಟರಿ ಕ್ಲಬ್‌ ಶಿರ್ವ, ಸ್ತ್ರೀಶಕ್ತಿ ಸಂಘ ಮತ್ತು ಇತರ ದಾನಿಗಳು ಸಹಕರಿಸಿದ್ದರಿಂದಲೇ ಈ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ ಎನ್ನಬಹುದು.

ಕೇಬಲ್‌ ಟಿವಿ ಸಂಪರ್ಕದೊಂದಿಗೆ ಪುಟಾಣಿಗಳಿಗೆ ಕಾಟೂನ್‌ ನೆಟ್‌ವರ್ಕ್‌ ನೋಡುವ ಅವಕಾಶ ಕಲ್ಪಿಸಲಾಗಿದೆ. ಪುಟಾಣಿಗಳಿಗಾಗಿ ನೆರಳಿರುವ ಪ್ರತ್ಯೇಕ ಜಾರುಬಂಡಿ, ಸುಮಾರು 800 ಚ.ಅಡಿ ಚಪ್ಪರ, 1000 ಚ.ಅಡಿಯ ಇಂಟರ್‌ಲಾಕ್‌, ಮಕ್ಕಳ ಹೆತ್ತವರಿಗಾಗಿ ವಿರಮಿಸಲು ಕಾಂಕ್ರೀಟ್‌ ಬೆಂಚುಗಳು,

ಎರ‌ಡು ಶೌಚಾಲಯ, 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ವಾಟರ್‌ ಪ್ಯೂರಿಫೈಯರ್‌, ಸೋಫಾ, ಚಪ್ಪಲ್‌ ಸ್ಟಾಂಡ್‌, ಬ್ಯಾಗ್‌ ಸ್ಟಾಂಡ್‌, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್‌ ಮತ್ತು ಕುರ್ಚಿ ಹಾಗೂ ಆವರಣದಲ್ಲಿ ಸೋಲಾರ್‌ವಿದ್ಯುತ್‌ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾನೈಟ್‌ ಹೊದಿಕೆಯ ಅಡುಗೆ ಕೋಣೆಯೊಂದಿಗೆ ಗ್ರೈಂಡರ್ ಮತ್ತು ಗ್ಯಾಸ್‌ ಸ್ಟೌ ಸೌಲಭ್ಯ ಕಲ್ಪಿಸಲಾಗಿದೆ. ಪೌಷ್ಟಿಕ ಆಹಾರ ತೋಟ ರಚನೆಯೊಂದಿಗೆ ಅಲಂಕಾರಿಕ ಗಿಡಗಳನ್ನು ಕೂಡಾ ಈ ಬಾಲಭವನದ ಸುತ್ತಮುತ್ತ ನೆಡಲಾಗಿದೆ.

ಪ್ರಸ್ತುತ ಕೇಂದ್ರದಲ್ಲಿ 30 ಮಕ್ಕಳಿದ್ದು, ಅಂಗನವಾಡಿ ಕಾರ್ಯಕರ್ತೆಯಾಗಿ ವಿನಯಾ ಹರೀಶ್‌ ಕುಂದರ್‌, ಸಹಾಯಕಿ ಸಂಧ್ಯಾ ಆಚಾರ್ಯ ಮತ್ತು ಮೇಲ್ವಿಚಾರಕಿಯಾಗಿ ಶೈಲಾ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂಗನವಾಡಿಯ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಕ್ಕಳಿಗೆ ಉಣಬಡಿಸಲಾಗುತ್ತಿರುವುದು ವಿಶೇಷ.

 

LATEST NEWS

ಬೋಳು ತಲೆಯೆಂದು ಬೇಸರ ಬೇಡ; ಇದು ಆದಾಯದ ಮೂಲ

Published

on

ಕೇರಳ: ಬೋಳು ತಲೆ ಅವಮಾನವಲ್ಲ, ಅದೊಂದು ಆದಾಯದ ಮೂಲವಾಗಿದೆ ಎಂಬುದಾಗಿ ಕೇರಳದ ಆಲಪ್ಪುಳದ ಟ್ರಾವೆಲ್ ವ್ಲಾಗರ್ ಶಫೀಕ್ ಹಾಶಿಮ್ ಎಂಬವರು ತೋರಿಸಿ ಕೊಟ್ಟಿದ್ದಾರೆ.

ತನ್ನ ಬೋಳು ತಲೆಯನ್ನು ಜಾಹೀರಾತಿನ ಜಾಗವನ್ನಾಗಿಸಿದ ಅವರು ಒಂದೇ ಒಂದು ಜಾಹೀರಾತು ಪ್ರದರ್ಶಿಸಿ 50,000 ರೂ. ಆದಾಯ ಗಳಿಸಿದ್ದಾರೆ. ಆಲಪ್ಪುಳ ಜಿಲ್ಲೆಯ ಅಂಬಲಪುಳದ ಕರೂರ್‌ ನಿವಾಸಿ 36 ವರ್ಷ ಪ್ರಾಯದ ಶಫೀಕ್ ಹಾಶಿಮ್ ತನ್ನ ಬೋಳು ತಲೆಯಲ್ಲಿ ಜಾಹೀರಾತಿಗೆ ಸ್ಪೇಸ್‌ ನೀಡುವುದಾಗಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದರು.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೂರಾರು ಕಂಪನಿಗಳು ಅವರನ್ನು ಸಂಪರ್ಕಿಸಿದವು. ಟ್ರಾವೆಲ್ ವ್ಲಾಗರ್ ಆಗಿ ಜನಪ್ರಿಯತೆ ಗಳಿಸಿರುವುದರಿಂದ ಅವರು ಹಾಕಿದ ಪೋಷ್ಟ್ ಹೆಚ್ಚು ಗ್ರಾಹಕರನ್ನು ಆಕರ್ಷಿಸಿತು. ತಾನು ಬೋಳು ತಲೆಯ ಮೇಲೆ ಜಾಹೀರಾತನ್ನು ಪ್ರದರ್ಶಿಸಿದ ಮೊದಲ ಭಾರತೀಯ ಎಂಬುದಾಗಿ ಶಫೀಕ್ ಹೇಳಿಕೊಂಡಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ವೀಡಿಯೊದಲ್ಲಿ, ಶಫೀಕ್ ಅವರು ಕೊಚ್ಚಿ ಮೂಲದ ಕೂದಲು ಕಸಿ ಕ್ಲಿನಿಕ್‌ನ ಜಾಹೀರಾತನ್ನು ಪ್ರದರ್ಶಿಸಿದ್ದಾರೆ. ಒಪ್ಪಂದದ ಪ್ರಕಾರ, ಶಫೀಕ್ ಮೂರು ತಿಂಗಳ ಅವಧಿಗೆ ಅವರು ಈ ಜಾಹೀರಾತನ್ನು ಪ್ರದರ್ಶಿಸ ಬೇಕು. ಶಫೀಕ್ ಅವರು ಕಾಲೇಜು ದಿನಗಳಿಂದಲೂ ತನ್ನ ಬೋಳು ಸಮಸ್ಯೆಯ ಬಗ್ಗೆ ಚಿಂತಿಸುತ್ತಿದ್ದು, ಕೂದಲ ಕಸಿ ಮಾಡಿಸಿ ಕೊಳ್ಳ ಬೇಕೆಂದು ಬಯಸಿದ್ದರು. ಎಲ್ಲಾ ಬೋಳು ತಲೆಯ ವ್ಯಕ್ತಿಗಳಂತೆ, ಶಫೀಕ್ ಕೂಡಾ ತನ್ನ ಸ್ನೇಹಿತರು ಮತ್ತು ಇತರರಿಂದ ಚುಡಾಯಿಸುವಿಕೆಯನ್ನು ಎದುರಿಸಿದ್ದರು.

ಆದಾಗ್ಯೂ, ಒಂದು ದಿನ, ಅವರು ತಮ್ಮ ಕೂದಲು ಕಸಿ ಯೋಜನೆಗಳನ್ನು ಕೈಬಿಟ್ಟರು ಹಾಗೂ ಬೋಳುತನವನ್ನು ಸ್ವೀಕರಿಸಲು ನಿರ್ಧರಿಸಿದರು. ಈ ನಿರ್ಧಾರವು ಅವನ ಬೋಳು ತಲೆಯನ್ನು ಜಾಹೀರಾತಿನ ಜಾಗವಾಗಿ ಪರಿವರ್ತಿಸುವ ಮೂಲಕ ಹಣಗಳಿಸಲು ಪ್ರೇರೇಪಿಸಿತು.

Continue Reading

LATEST NEWS

ಮೆಕ್ಸಿಕೊದಲ್ಲಿ ಟ್ರಕ್‌ ಮತ್ತು ಬಸ್ಸು ಢಿಕ್ಕಿಯಾಗಿ 41 ಜನ ಸಜೀವ ದಹನ

Published

on

ಮೆಕ್ಸಿಕೊ: ಬಸ್‌ಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 41 ಮಂದಿ ಸಜೀವ ದಹನಗೊಂಡ ಘಟನೆ ದಕ್ಷಿಣ ಮೆಕ್ಸಿಕೊ ನಗರದ ತಬಾಸ್ಕೊ ಎಂಬಲ್ಲಿ ನಡೆದಿದೆ.

ಬಸ್ಸಿನಲ್ಲಿ ಒಟ್ಟು 48 ಮಂದಿ ಪ್ರಯಾಣಿಕರಿದ್ದರು. ಮೃತ ಪಟ್ಟವರಲ್ಲಿ ಬಸ್ಸು ಮತ್ತು ಟ್ರಕ್‌ ನ ಇಬ್ಬರು ಚಾಲಕರೂ ಸೇರಿದ್ದಾರೆ. ಬಸ್ ಬೆಂಕಿಗೆ ಆಹುತಿಯಾದಾಗ, 39 ಪ್ರಯಾಣಿಕರು ಮತ್ತು ಇಬ್ಬರು ಚಾಲಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಬಳಿಕ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

ಘಟನಾ ಸ್ಥಳದಲ್ಲಿ ಇದುವರೆಗೆ 18 ಜನರ ಅವಶೇಷಗಳನ್ನು ಗುರುತಿಸಲಾಗಿದೆ. 7 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಾವು- ನೋವು ಹೆಚ್ಚಾಗುವ ಸಾಧ್ಯತೆ ಇದೆ. ಅಪಘಾತದ ಕಾರಣಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ.

Continue Reading

BIG BOSS

ಮಾನ್ಸಿ ಜೋಶಿಯ ಅರಶಿಣ ಶಾಸ್ತ್ರದಲ್ಲಿ ಮಿಂಚಿದ ಮೋಕ್ಷಿತಾ ಪೈ

Published

on

ಪಾರು ದಾರಾವಾಹಿಯ ನಟಿ ಮೋಕ್ಷಿತಾ ಪೈ ಬಿಗ್‌ಬಾಸ್ ಸೀಸನ್ 11 ರಲ್ಲಿ ತಮ್ಮ ನಡೆ-ನುಡಿ, ಆಟದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಬಿಗ್‌ಬಾಸ್‌ನಿಂದ ಬಂದ ಬಳಿಕ ಇದೀಗ ತನ್ನ ಸ್ನೇಹಿತೆ ಮಾನ್ಸಿ ಜೋಶಿಯ ಅರಶಿಣ ಶಾಸ್ತ್ರದಲ್ಲಿ ಮಿಂಚಿದ್ದಾರೆ.

ಓಪನ್ ಹೇರ್ ಬಿಟ್ಕೊಂಡು, ಕಟ್ಟಿಗೆ ಗ್ಲಾಸ್ ಹಾಕೊಂಡು, ಹಳದಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಡಿಫ್ರೆಂಟ್ ಲುಕ್‌ನಲ್ಲಿ ಬಂದಂತಹ ಮೋಕ್ಷಿತಾಳನ್ನು ನೋಡಿ ಅಲ್ಲಿಯ ಅತಿಥಿಗಳು ಖುಷಿ ಪಟ್ಟಿದ್ದಾರೆ.

ಇನ್ನು ಮಾನ್ಸಿ ಹಾಗೂ ಮೋಕ್ಷಿತಾ ಪಾರು ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಅಂದಿನಿಂದ ಇಂದಿನವರೆಗೆ ಇವರ ನಡುವಿನ ಗೆಳೆತನ ಮುಂದುವರಿದಿದೆ. ರಾಘವ್ ಎಂಬುವವನನ್ನು ಮಾನ್ಸಿ ವಿವಾಹವಾಗಲಿದ್ದು, ಫೆಬ್ರವರಿ 16 ರಂದು ಈ ಜೋಡೆಯ ಕಲ್ಯಾಣ ನಡೆಯಲಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಫರ್ಧಿಯಾಗಿ ಭಾಗವಹಿಸಿ, ಫಿನಾಲೆ ಸುತ್ತಿನವರೆಗೂ ಆಗಮಿಸಿದ ಮೋಕ್ಷಿತಾ, ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳೂ ಇದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page