Connect with us

LATEST NEWS

ಸೂರತ್‌ನ ವಜ್ರದ ವ್ಯಾಪಾರಿಯ ಮಗಳು ಗೌತಮ್ ಅದಾನಿ ಸೊಸೆ

Published

on

ಮಂಗಳೂರು/ಅಹಮಾದಾಬಾದ್ : ಗೌತಮ್ ಅದಾನಿ ಮಗ ಜೀತ್ ಅದಾನಿ ಸೂರತ್ ಮೂಲದ ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಶಾ ಅವರನ್ನು ಫೆಬ್ರವರಿ 7ರಂದು ವಿವಾಹವಾಗಲಿದ್ದಾರೆ.

ಜೀತ್ ಅದಾನಿ ಅವರು ದಿವಾ ಶಾ ಜೈಮಿನ್‌ರವರನ್ನು ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ವಿವಾಹ ಪೂರ್ವ ಕಾರ್ಯಕ್ರಮವು ಡಿಸೆಂಬರ್ 10-11 ರಂದು ಉದಯಪುರದಲ್ಲಿ ನಡೆದಿತ್ತು.

ಅದ್ದೂರಿ ವಿವಾಹ ಎನ್ನುವ ವದಂತಿ
ಜೀತ್ ಅದಾನಿ ಮದುವೆಗೆ ಜಗತ್ತಿನ ಪ್ರಮುಖ ತಾರೆಯರು, ಸೆಲೆಬ್ರಿಟಿಗಳು ಬರುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಅಂದಾಜಿಸಿದ್ದರು. ಎಲಾನ್ ಮಸ್ಕ್, ಮಾರ್ಕ್‌ ಜುಕನ್ ಬರ್ಗ್, ಡೇನಿಯಲ್ ಕ್ರೇಗ್, ಟೇಲರ್ ಸ್ವಿಫ್ಟ್, ರಾಫೆಲ್ ನಡಲ್, ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸೇರಿದಂತೆ ಹಲವರ ಹೆಸರುಗಳು ಹರಿದಾಡಿದ್ದವು.

ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಜೀತ್ ಅದಾನಿ ಅವರ ಮದುವೆ ನಡೆಯಲಿದ್ದು, ಇಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವರದಿಗಳು ಹರಿದಾಡಿವೆ. ಅದಾನಿ ತಮ್ಮ ಮಗನ ಮದುವೆಗಾಗಿ 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇವೆಲ್ಲಾ ಸತ್ಯಕ್ಕೆ ದೂರವಾದ ವರದಿಗಳಾಗಿವೆ ಎಂದು ಗೌತಮ್ ಅದಾನಿ ಸ್ಪಷ್ಟನೆ ನೀಡಿದ್ದಾರೆ.

ಫೆಬ್ರವರಿ 7ರಂದು ಅಹಮಾದಾಬಾದ್‌ನಲ್ಲಿ ಮದುವೆ ನಡೆಯಲಿದೆ. ಅದಾನಿ ಮಗನ ವಿವಾಹಕ್ಕೆ ಜಗತ್ತಿನ ಪ್ರಮುಖ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ ಎನ್ನುವ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.

ಗೌತಮ್ ಅದಾನಿ ಭಾವಿ ಸೊಸೆ ಯಾರು ಗೊತ್ತಾ?
ದಿವಾ ಶಾ ಅವರು ಸೂರತ್‌ನ ದೊಡ್ಡ ಉದ್ಯಮಿ ಜೈಮಿನ್ ಶಾ ಅವರ ಮಗಳು. ಇವರು ಸಿ ದಿನೇಶ್ ಮತ್ತು ಕಂಪನಿ ಪ್ರೈವೆಟ್ ಲಿಮಿಟೆಡ್‌ನ್ನು ಹೊಂದಿದ್ದಾರೆ. ಅವರ ವ್ಯಾಪಾರ ಸೂರತ್‌ನಿಂದ ಮುಂಬೈವರೆಗೆ ವ್ಯಾಪಿಸಿದೆ. ಕಂಪನಿಯ ವಿತರಣಾ ಕಚೇರಿಗಳು ನೆದರ್‌ಲ್ಯಾಂಡ್ಸ್ ಮತ್ತು ಹಾಂಗ್ ಕಾಂಗ್‌ನಲ್ಲಿವೆ. ಕಂಪನಿಯು 1976 ರಲ್ಲಿ ಚಿನುಭಾಯಿ ದೋಶಿ ಮತ್ತು ದಿನೇಶ್ಬಾಯಿ ಶಾರಿಂದ ಸ್ಥಾಪಿಸಲ್ಪಟ್ಟಿತು. ಈಗ ಜೈಮಿನ್ ಶಾ ನಿರ್ದೇಶಕರಾಗಿದ್ದಾರೆ.

ದಿವಾ ಜೈಮೀನ್ ಶಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ದಿವಾ ವ್ಯಾಪಾರ ಮತ್ತು ಹಣಕಾಸಿನ ಬಗ್ಗೆ ಉತ್ತಮ ಹಿಡಿತವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ತಂದೆಗೆ ವ್ಯಾಪಾರದಲ್ಲಿಯೂ ಸಹಾಯ ಮಾಡುತ್ತಾರೆ ಎನ್ನಲಾಗಿದೆ.

ಅದಾನಿ ಅವರ ಮಗ ಜೀತ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿದರು. 2019ರಲ್ಲಿ ಅದಾನಿ ಗ್ರೂಪ್‌ಗೆ ಸೇರುವ ಮೊದಲು, ಅವರು ಹಣಕಾಸು, ಬಂಡವಾಳ ಮಾರುಕಟ್ಟೆಗಳಿಗೆ ಸಂಬಂಧಿಸಿದ ಕೆಲಸ ನಿರ್ವಹಿಸಿದ್ದರು. ಈಗ ಅದಾನಿ ಪೋರ್ಟ್ಸ್, ಅದಾನಿ ಡಿಜಿಟಲ್ ಲ್ಯಾಬ್‌ಗಳಂತಹ ವಿಭಾಗಗಳ ಕೆಲಸವನ್ನು ಜೀತ್ ನೋಡಿಕೊಳ್ಳುತ್ತಾರೆ.

 

FILM

ಅಂಬಾನಿ ಮಗನ ಮದುವೆಯಲ್ಲಿ ನಡೆದ ಘಟನೆಯ ಬಗ್ಗೆ ಬೇಸರ ಹೊರಹಾಕಿದ ಮಾಡೆಲ್

Published

on

ಮಂಗಳೂರು/ನವದೆಹಲಿ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮಗನ ಅದ್ದೂರಿ ಮದುವೆಯಲ್ಲಿ ಅಮೆರಿಕನ್ ಮಾಡೆಲ್ ಕಿಮ್ ಕರ್ದಾಶಿಯನ್ ಪಾಲ್ಗೊಂಡಿದ್ದರು. ಮದುವೆಯಲ್ಲಿ ಆ ಒಂದು ಅಚಾನಕ್ ಘಟನೆಯ ಬಗ್ಗೆ ಇತ್ತೀಚೆಗೆ ನಡೆದ ಖಾಸಗಿ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಬಾಲಿವುಡ್‌ನ ಸೆಲೆಬ್ರಿಟಿಗಳನ್ನು ಕರೆದು ಒಂದು ಕಡೆ ಗುಡ್ಡೆ ಹಾಕಿದ್ದರು. ಸಾಲದಕ್ಕೆ ಇಂಟರ್‌ ನ್ಯಾಷನಲ್ ಸ್ಟಾರ್ಸ್‌ಗಳನ್ನು ಕರೆಸಿದ್ದರು. ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಬಂದಿದ್ದರು. ಆ ಪೈಕಿ ಜಗತ್ತಿನಲ್ಲಿ ಅತ್ಯಂತ ಸುಂದರ ನಟಿ ಎಂದೇ ಖ್ಯಾತಿಯನ್ನೂ ಪಡೆದ  ಶಿಯಾನ್ ಕೂಡ ಒಬ್ಬರು.

ಈ ವೇಳೆ ಕಿಮ್ ಕಾರ್ದಾಶಿಯಾನ್ ಅವರು ಕಸ್ಟಮ್ ಐವರಿ ಲೆಹಂಗಾ ಜೊತೆಗೆ ದುಬಾರಿ ಬೆಲೆಯ ವಜ್ರದ ಹಾರ, ಕಿವಿಯೋಲೆಗಳು ಮತ್ತು ಶಿರ ಮಾಲೆಯನ್ನು ಧರಿಸಿದ್ದರು.

ಇದನ್ನೂ ಓದಿ: ಭಾರತೀಯ ರೂಪಾಯಿ ಚಿಹ್ನೆಗೆ ತಮಿಳುನಾಡಿನ ನಂಟು!

ಮದುವೆ ಸಮಾರಂಭದಲ್ಲಿ ಅನಂತ್ ಅಂಬಾನಿ ಸಹೋದರಿ ಇಶಾ ಅಂಬಾನಿ ಜೊತೆ ಕಿಮ್ ಕರ್ದಾಶಿಯನ್ ಮಾತನಾಡುತ್ತಿದ್ದಾಗ ಅವರ ಡೈಮಂಡ್ ನೆಕ್ಲೆಸ್‌ನಿಂದ ಒಂದು ವಜ್ರದ ಹರಳು ಕೆಳಗೆ ಬಿದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ ಕರ್ದಾಶಿಯನ್, “ನನಗೆ ಅರಿವಿಲ್ಲದೇ ನನ್ನ ನೆಕ್ಲೆಸ್‌ನಿಂದ ವಜ್ರದ ಹರಳು ಕೆಳಗೆ ಬಿದ್ದಿದೆ. ಇದನ್ನೂ ನನ್ನ ಜೊತೆಗಿದ್ದ ಸ್ನೇಹಿತೆ ಕ್ಲೋಯ್ ಗಮನಿಸಿದ್ದು, ಬಳಿಕ ನನ್ನ ಗಮನಕ್ಕೆ ತಂದಳು. ನಾವೆಲ್ಲರೂ ಸೇರಿ ಆ ಡೈಮಂಡ್ ನೆಕ್ಲೆಸ್‌ನ ಹರಳನ್ನು ಹುಡುಕಿದೆವು ಆದರೆ ಕೊನೆಗೂ ದುಬಾರಿ ಆ ವಜ್ರದ ಹರಳು ಸಿಗಲಿಲ್ಲ” ಎಂದು ಹೇಳಿದ್ದಾರೆ.

Continue Reading

BELTHANGADY

ಭಾರೀ ಮಳೆಗೆ ಬೆಳ್ತಂಗಡಿಯಲ್ಲಿ ಧರೆಗುರುಳಿದ 131 ವಿದ್ಯುತ್ ಕಂಬಗಳು

Published

on

ಬೆಳ್ತಂಗಡಿ: ಕಳೆದ ಒಂದು ವಾರದಿಂದ ವಾತಾವರಣದ ಉಷ್ಣತೆಯು ವಿಪರೀತ ಏರಿಕೆಯಾಗಿತ್ತು. ಆದರೆ ಬಿಸಿಯ ಗಾಳಿಗೆ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ವರುಣದೇವ ತಂಪೆರೆದಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ಈಗ ಮಳೆಯ ಆರ್ಭಟ ಜೋರಾಗಿದೆ.

ಕರಾವಳಿಯಲ್ಲೂ ಮಳೆಯ ಸಿಂಚನವಾಗಿದ್ದು, ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಕೆಲ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ರಭಸಕ್ಕೆ 131 ವಿದ್ಯುತ್ ಕಂಬಗಳು ಧರೆಗುರುಳಿದೆ.

ರಭಸದ ಗಾಳಿಯೊಂದಿಗೆ ಆರ್ಭಟಿಸಿದ ವರ್ಷದ ಮೊದಲ ಮಳೆಗೆ ಬೆಳ್ತಂಗಡಿಯಲ್ಲಿ ಒಟ್ಟು 131 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಹೀಗಾಗಿ ತಾಲೂಕಿನೆಲ್ಲೆಡೆ ಕರೆಂಟ್ ಇಲ್ಲದೇ ಜನರು ಪರದಾಡುವಂತೆ ಆಗಿದೆ. ಅಪಾರ ಸಂಖ್ಯೆಯಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ತುಂಡಾಗಿ ಅಪಾರ ಪ್ರಮಾಣದ ಕೃಷಿನಷ್ಟ ಉಂಟಾಗಿದೆ.

Continue Reading

DAKSHINA KANNADA

ಭಗತ್ ಸಿಂಗ್ ಆರ್ಮಿ ಮಂಗಳೂರು : ಎಪ್ರಿಲ್ 25 ರಂದು ಉರ್ವದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ; ಆಮಂತ್ರಣ ಪತ್ರಿಕೆ ಬಿಡುಗಡೆ

Published

on

ಮಂಗಳೂರು : ಭಗತ್ ಸಿಂಗ್ ಆರ್ಮಿ ಮಂಗಳೂರು ವತಿಯಿಂದ ಎಪ್ರಿಲ್ 25 ರ ಶುಕ್ರವಾರದಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನವನ್ನು ಆಯೋಜಿಸಲಾಗಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಇಂದು(ಮಾ.14) ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಅನಾವರಣ ಮಾಡಲಾಗಿದೆ.

ಕಾರ್ಯಕ್ರಮ ವಿವರ :

ಉರ್ವ ಮೈದಾನದಲ್ಲಿ ‘ಶ್ರೀದೇವಿ ಮಹಾತ್ಮೆ’  ಯಕ್ಷಗಾನ ಬಯಲಾಟ ನಡೆಯಲಿದೆ.  ಸಂಜೆ 5.30 ಕ್ಕೆ ಚೌಕಿ ಪೂಜೆ ನಡೆಯಲಿದೆ. ಅನ್ನ ಸಂತರ್ಪಣೆಯನ್ನೂ ಹಮ್ಮಿಕೊಳ್ಳಲಾಗಿದೆ. ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶವಾತಾರ ಯಕ್ಷಗಾನ ಮಂಡಳಿಯಿಂದ ಪ್ರತಿ ವರ್ಷ ಉರ್ವ ಮೈದಾನದಲ್ಲಿ ದೇವಿ ಮಹಾತ್ಮೆ ಯಕ್ಷಗಾನವನ್ನು ಭಗತ್ ಸಿಂಗ್ ಆರ್ಮಿ ಆಯೋಜಿಸಿಕೊಂಡು ಬಂದಿದೆ. ಈ ವರ್ಷದ ಯಕ್ಷಗಾನ ಎಪ್ರಿಲ್ 25 ರಂದು ನಡೆಯಲಿದೆ. ಮಧ್ಯಾಹ್ನ 3  ಗಂಟೆಗೆ ಸರಿಯಾಗಿ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಹೊಯ್ಗೆಬೈಲ್‌ನಿಂದ ಭವ್ಯವಾದ ಮೆರವಣಿಗೆ ಹೊರಡಲಿದೆ.

ಇದನ್ನೂ ಓದಿ : ಕಟೀಲು ಕ್ಷೇತ್ರಕ್ಕೆ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಭೇಟಿ

ಭಕ್ತಾದಿಗಳು ತನು ಮನ, ಧನದಿಂದ ಸಹಕರಿಸಿ ದೇವಿಯ ಗಂಧ ಪ್ರಸಾದ ಸ್ವೀಕರಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page