Connect with us

DAKSHINA KANNADA

ಖ್ಯಾತ ಗಾಯಕಿ ನೈಟಿಂಗೇಲ್ ಆರೂರು ಸರೋಜಿನಿ ಪಟ್ಟಾಭಿ ಇನ್ನಿಲ್ಲ..!

Published

on

ಮಂಗಳೂರು: ಕನ್ನಡ, ತುಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೆಸರುವಾಸಿಯಾಗಿದ್ದ ದಿ. ಆರೂರು ಪಟ್ಟಾಭಿ ಅವರ ಪತ್ನಿ, ಖ್ಯಾತ ಗಾಯಕಿ ಆರೂರು ಸರೋಜಿನಿ ಪಟ್ಟಾಭಿ (95) ಅವರು ಚೆನ್ನೈನ ಮಂದವಳ್ಳಿಯ ಸ್ವಗೃಹದಲ್ಲಿ ನಿಧನರಾದರು.

ವಿವಾಹ ಪೂರ್ವದಲ್ಲಿ ‘ಜಿನ್ನಿ’ ಎಂದೇ ಖ್ಯಾತರಾಗಿದ್ದ ಅವರು, ತುಳು ಹಾಗೂ ಕನ್ನಡ ಚಿತ್ರಗೀತೆಗಳಿಗೆ ಹಾಡುಗಳನ್ನು ಹಾಡಿದ್ದರು. ಕನ್ನಡ ಚಿತ್ರದಲ್ಲಿನ ‘ಕುಂತ್ರೆ ನಿಂತ್ರೆ ಅವಂದೆ ಧ್ಯಾನ’ ಹಾಡಿನ ಮೂಲಕ ಮನೆ ಮಾತಾಗಿದ್ದರು.

ಪ್ರಸಿದ್ಧ ನೃತ್ಯಗಾರ್ತಿ ವೈಜಯಂತಿ ಮಾಲಾ ಬಳಗದಲ್ಲಿ ನಟುವಾಂಗ ಕಲಾವಿದೆಯಾಗಿ ವಿಶ್ವದಾದ್ಯಂತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ‘ನೈಟಿಂಗೇಲ್’ ಎಂದು ಕರೆಸಿಕೊಂಡಿದ್ದರು.

ತಮ್ಮ ಕೊನೆಯ ದಿನಗಳವರೆಗೂ ಮನೆಯಲ್ಲೇ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆಗಳ ಪಾಠ ನೀಡುತ್ತಿದ್ದರು.

BELTHANGADY

ಬೆಳ್ತಂಗಡಿ: ದಿನಸಿ ಅಂಗಡಿಗೆ ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ದೋಚಿದ ಕಳ್ಳರು

Published

on

ಬೆಳ್ತಂಗಡಿ: ದಿನಸಿ ಅಂಗಡಿಗೆ ಕಳ್ಳರು ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಎಂಬಲ್ಲಿ ಫೆ.10 ರಂದು ರಾತ್ರಿ ನಡೆದಿದೆ.

ಹರೀಶ್ ಕುಲಾಲ್ ಎಂಬುವವರಿಗೆ ಸೇರಿದ ದಿನಸಿ ಅಂಗಡಿ ಇದಾಗಿದ್ದು, ನಿನ್ನೆಯ ದಿನ ರಾತ್ರಿ ಕಳ್ಳರು ಅಂಗಡಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಹೋದಿ ಅಂಗಡಿಯಲ್ಲಿದ್ದ ಹಲವಾರು ವಸ್ತುಗಳನ್ನು ಬಾಚಿಕೊಂಡು ಹೋಗಿದ್ದಾರೆ.

ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಅಂಗಡಿಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Continue Reading

DAKSHINA KANNADA

ಭೂಮಿ ತಾಯಿ ಮುಟ್ಟಾಗಿದ್ದಾಳೆ; ತುಳುನಾಡಿನಲ್ಲಿ ‘ಕೆಡ್ಡಸ’ ದ ಸಂಭ್ರಮ

Published

on

ತುಳುನಾಡಿನಲ್ಲಿ ಆಚರಿಸುವ ಅರ್ಥಪೂರ್ಣ ಹಬ್ಬ “ಕೆಡ್ಡಸ”. ಮಾತೃ ಭೂಮಿಯನ್ನು ಪೂಜಿಸುವ ಉತ್ಸವ ಇದಾಗಿದ್ದು, ದಕ್ಷಿಣ ಭಾರತದ ತುಳುನಾಡಿನ ಪ್ರದೇಶದಲ್ಲಿ ಭೂಮಿ ಪೂಜೆಯೆಂದೇ ಜನಪ್ರಿಯವಾಗಿದೆ. ಫೆಬ್ರುವರಿ ಮುಕ್ತಾಯದ ದಿನಗಳಲ್ಲಿ ಆಚರಿಸಲಾಗುವ ಪ್ರಮುಖ ಮೂರು ದಿನಗಳ ಉತ್ಸವ ಇದಾಗಿದ್ದು, ತುಳುನಾಡಿನಲ್ಲಿ ವಾಸಿಸುವ ಜನರಲ್ಲಿ ಪ್ರಕೃತಿಯ ಅರಿವು ಮೂಡಿಸುತ್ತದೆ. ಕೆಡ್ಡಸ ಎಂದರೆ ಕೇಟ. ಅಂದರೆ ಬೇಟೆ ಎಂಬ ಅರ್ಥವನ್ನು ನೀಡುತ್ತದೆ. ಇದರಲ್ಲಿ ಮೂರು ವಿಧ ಇದ್ದು, ಕೆಡ್ಡಸ, ನಡು ಕೆಡ್ಡಸ, ಕಡೆ ಕೆಡ್ಡಸ ಎಂದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.

ಕುಟುಂಬದ ಓರ್ವ ವಯಸ್ಸಾದ ಮಹಿಳೆ ಕಡೆ ಕೆಡ್ಡಸದ ಸಮಯದಲ್ಲಿ ಈ ಆಚರಣೆ ಮಾಡಬೇಕು. ಕಡೆ ಕೆಡ್ಡಸದ ದಿನದಂದು ‘ಸಾರ್ನಡ್ಡೆ’ (ತುಳುನಾಡಿನ ಖಾದ್ಯ) ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತುಳಸಿ ಕಟ್ಟೆಯ ಮುಂದೆ ಇಡಬೇಕು. ಮುಂಜಾನೆ ತುಳಸಿ ಕಟ್ಟೆಯ ಸುತ್ತ ಹಸುವಿನ ಸಗಣಿಯನ್ನು ಸಾರಿಸಿ ಸುತ್ತಲು ದೀಪ ಬೆಳಗಬೇಕು. ಜೊತೆಗೆ ಕುಂಕುಮ, ಸೀಗೆ ಕಾಯಿಯನ್ನು ಕಟ್ಟೆಯ ಮುಂದೆ ಬಾಳೆ ಎಲೆಯಲ್ಲಿ ಬಡಿಸುತ್ತಾರೆ. ನಂತರ ತೆಂಗಿನ ಎಣ್ಣೆಯನ್ನು ಮಣ್ಣಿಗೆ ಸುರಿಯಬೇಕು (ಇದು ಭೂಮಿತಾಯಿಗೆ ಮಾಡುವ ಅಭಿಷೇಕ ಎಂಬ ನಂಬಿಕೆ). ಬಳಿಕ ಆ ಹಿರಿ ಮಹಿಳೆ ಸ್ನಾನ ಮಾಡಿ ಬರಬೇಕು.

ಕೆಡ್ಡಸ ಆಚರಣೆ ವಿಧಾನ : 

ಕೃಷಿ ಸಂಬಂಧಿಯಾಗಿ ಈ ಕೆಡ್ಡಸ ಹಬ್ಬವನ್ನು ತುಳುವರು ಆಚರಿಸುತ್ತಾರೆ.  ಕೃಷಿಯಲ್ಲಿ ಸಮೃದ್ಧಿ ಮತ್ತು ‍ಫಲಾಪೇಕ್ಷೆಯ ಆಶಯದಿಂದ ಈ ಹಬ್ಬದ ಆಚರಣೆ ಮಾಡಲಾಗಿದ್ದು, ಇದನ್ನು ಭೂಮಿ ತಾಯಿಯ ‘ಮಿಯಾದ ಹಬ್ಬ’ ವೆಂದು ಕರೆಯಲಾಗುತ್ತದೆ. ಭೂಮಿಯನ್ನು ಸಾಮಾನ್ಯ ಸ್ತ್ರೀ ಎಂಬಂತ ಪರಿಭಾವಿಸಿ ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಯೋಚಿಸಿ, ಅದರ ಪ್ರಕಾರ ಅವಳನ್ನು ಮಡಿಗೊಳಿಸುವ ದಿನ ಎಂಬುವುದಾಗಿ ಆಚರಿಸಲಾಗುತ್ತದೆ. ಕೆಡ್ಡಸದ ಮೂರು ದಿನ ಕೊಡಲಿ ಏಟು, ಹಾರೆ, ಪಿಕ್ಕಾಸಿಗಳಲ್ಲಿ ಭಅಗೆಯುವಂತಿಲ್ಲ. ಮನೆಯ ಆವರಣವನ್ನು ಸ್ವಚ್ಛ ಮಾಡಿ 7 ಬಗೆಯ ಧಾನ್ಯಗಳನ್ನು ಬೆರೆಸಿ ಬೂತಾಯಿಗೆ ಬಾಳೆಲೆಯಲ್ಲಿ ಇಡುವುದು ಕ್ರಮ. ಭೂದೇವಿಗೆ ವಸ್ತ್ರ, ಗೆಜ್ಜೆ, ಕತ್ತಿ, ಕಲಶ, ಅರಶಿನ, ಕುಂಕುಮ ಇತ್ಯಾದಿಯನ್ನು ಸಾಮಾನ್ಯವಾಗಿ ಇಡಬೇಕೆಂದು ವಾಡಿಕೆ.

ನಲಿಕೆ ಜನಾಂಗದವರ ಕರೆಯೋಲೆ :

“ಸೋಮವಾರ ಕೆಡ್ಡಸ, ಮುಟ್ಟುನೆ ಅಂಗಾರ ನಡು ಕೆಡ್ಡಸ ಬುಧವಾರ ಬಿರಿಪುನೆಪಜಿ ಕಡ್ಪರೆ ಬಲ್ಲಿ ಉನುಂಗೆಲ್ ಪೊಲಿಪ್ಯರೆ ಬಲ್ಲಿ, ಅರಸುಲೆ ಬೋಟೆಂಗ್ಸರ್ವೆರ್ ಉಲ್ಲಾಯನಕುಲು ಪೋವೋಡುಗೆ. ವಲಸಾರಿ ಮಜಲ್ಡ್ ಕೂಡ್ದುವಲಸರಿ ದೇರ್ದ್ದ್ ಪಾಲೆಜ್ಜಾರ್ ಜಪ್ಪುನಗ ಉಳ್ಳಾಲ್ದಿನಕುಲು ಕಡಿಪಿ ಕಂಜಿನ್ ನೀರ್ಡ್ ಪಾಡೋದು. ಓಡುಡ್ ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು. ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ. ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ, ಕೈಲ ಕಡೆಲ ಪತ್ತ್ದ್ಉಜ್ಜೆರ್ಗೊಂಜಿ ಎರ್ಪು ಏರ್ಪಾದ್ಇಲ್ಲ ಬೇತ್ತಡಿತ್ ಉಂತೊಂದು ಮುರ್ಗೊಲೆಗ್ ತಾಂಟಾವೊಡು. ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.ಎಂಕ್ ಅಯಿತ ಕೆಬಿ, ಕಾರ್, ಕೈ,ಉಪ್ಪು, ಮುಂಚಿ, ಪುಳಿ ಕೊರೊಡು” ಎಂದು ಕರಾವಳಿಯ ನಲಿಕೆ ಜನಾಂಗದವರು ಮನೆಮನೆಗೆ ತೆರಳಿ ಕರೆ ನೀಡುತ್ತಾರೆ.

ಇದನ್ನೂ ಓದಿ : ಎಚ್ಚರ : ಮನೆಯಲ್ಲಿ ನಡೆಯುವ ಈ ಘಟನೆಗಳು ಭವಿಷ್ಯದ ಅಶುಭ ಸೂಚಕ

ಕೆಡ್ಡಸ ವಿಶೇಷ ಆಹಾರ :

ಕುಡು ಅರಿ (ನನ್ಯೆರಿ) ಕೆಡ್ಡಸ ಸಮಯದಲ್ಲಿ ಕುಡು ಅರಿ (ಹುರುಳಿ, ಹೆಸರು ಕಾಳು, ಒಣಗಿದ ತೆಂಗಿನಕಾಯಿ, ಕುಚ್ಚುಲಕ್ಕಿ), ಬೆಲ್ಲ ಮತ್ತು ಕಡಲೆಕಾಯಿಗಳ ಮಿಶ್ರಣವನ್ನು ಎಲ್ಲರಿಗೂ ಹಂಚಲಾಗುತ್ತದೆ. ಏಕೆಂದರೆ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಬಹಳಷ್ಟು ಪೌ‌‍‍ಷ್ಟಿಕಾಂಶಗಳನ್ನು ಮತ್ತು ಎಣ್ಣೆ ಅಂಶಗಳನ್ನು ಇದು ಒದಗಿಸುತ್ತದೆ. ಈ ಮಿಶ್ರಣವು ದೇಹವು ಚಟುವಟಿಕೆಯಿಂದ ಇರಲು ಸಹಾಯವಾಗುತ್ತದೆ. ಕೋಟಿ-ಚೆನ್ನಯ, ಮುಗೇರ್ಲು, ಉಳ್ಳಾಕುಲು ಈ ದೈವಗಳನ್ನು ಮನಸಾರೆ ನೆನೆದುಕೊಂಡು ಆಚರಿಸಲಾಗುತ್ತದೆ.

Continue Reading

DAKSHINA KANNADA

ಉತ್ತರ ವಿಧಾನಸಭಾ ಕ್ಷೇತ್ರ : ರೂಪೇಶ್ ರೈ ಯೂತ್ ಕಾಂಗ್ರೆಸ್ ಅಧ್ಯಕ್ಷ

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉತ್ತರ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ರೂಪೇಶ್ ರೈ ಅವರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದ ರೂಪೇಶ್ ರೈ ಪಕ್ಷದ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ರಾಜ್ಯ NSUI ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ  ಪಕ್ಷ ಸಂಘಟನೆ ಮಾಡುವ ಮೂಲಕ ಗಮನಸೆಳೆದಿದ್ದರು.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಆಗಿದ್ದು ಎಲ್ಲಿ ಗೊತ್ತಾ ?

ಇದೀಗ ಉತ್ತರ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇವರ ಆಯ್ಕೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ. ರೂಪೇಶ್ ರೈ ಅವರ ಅವಧಿಯಲ್ಲಿ ಯುವಕರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷ ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page