Connect with us

DAKSHINA KANNADA

” ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !! ” ವೈರಲ್ ಆಯಿತು ಸತ್ಯದ ಕವಿತೆ..!

Published

on

ಬರಹ ಯಾರದೋ, ಕನ್ನಡದ ಗತಿ ಹೀಗಾದರೆ, ಇತರ ಪ್ರಾದೇಶಿಕ ಭಾಷೆಗಳ, ತುಳುವಿನ ಹಾಗೂ ತುಳುವನ, ಅಸ್ತಿತ್ವವೇನು?

ಕಾಸರಗೋಡು ಕೇರಳಕ್ಕೆ ಸೇರಿಹೋಯ್ತು !
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು‌ !
ಕೋಲಾರ, ಬಳ್ಳಾರಿ, ರಾಯಚೂರು ಆಂಧ್ರಕ್ಕೆ !

ಅಲ್ಲಿಗೆ….
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಉದಯ ಟಿವಿ ಮದ್ರಾಸ್‌ನವರದ್ದು !
ಸುವರ್ಣ ಟಿವಿ ಕೇರಳರವರದ್ದು,
ಕಲರ್ಸ್ ಟಿವಿ ಬಾಂಬೆ !
ಈಟಿವಿ ಆಂಧ್ರದವರದ್ದು !
ಜೀಟಿವಿ ಉತ್ತರ ಭಾರತರವರದ್ದು !
ತಲಕಾವೇರಿಯಲಿ ಹುಟ್ಟುವ ಕಾವೇರಿ ತಮಿಳುನಾಡಿಗೆ !

ಅಲ್ಲಿಗೆ….
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಐಎಎಸ್‌ ಆಫೀಸರ್‌ಗಳೆಲ್ಲಾ ಉತ್ತರಭಾರತದವರು !
ಐಪಿಎಸ್‌ ಆಫೀಸರ್‌ಗಳೆಲ್ಲ ಪರರಾಜ್ಯದವರು !
ಬ್ಯಾಂಕ್ ಅಧಿಕಾರ ಗಳೆಲ್ಲಾ ಪರಭಾಷೆಯವರು !
ಡ್ರೆೃವರ್‌ಗಳು, ಅಟೆಂಡರ್‌ಗಳು, ಸ್ವೀಪರ್‌ಗಳೆಲ್ಲ ಕನ್ನಡದವರು !

ಅಲ್ಲಿಗೆ….
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಚಿನ್ನದಂಗಡಿ, ಬಟ್ಟೆಯಂಗಡಿ, ಎಲ್ಲಾ ದೊಡ್ಡ ಅಂಗಡಿ ಮುಂಗಟ್ಟುಗಳು ಪರರಾಜ್ಯದವರವು !
ಅಲ್ಲಿ ಚೌಕಾಸಿ ಮಾಡುತ್ತಾ, ಕೊಂಡುಕೊಳ್ಳಲು ಸಾಲುಗಟ್ಟುವ ಗ್ರಾಹಕರು ಕನ್ನಡದವರು !

ಅಲ್ಲಿಗೆ…
ಉದಯವಾಯಿತು ನಮ್ಮ ಚಲುವ ಕನ್ನಡ ನಾಡು !!

ಸದಾಶಿವನಗರ ಸಿಂಧಿಗಳದ್ದು !
ಬಳೇಪೇಟೆ, ಚಿಕ್ಕಪೇಟೆ ಮಾರ್ವಾಡಿಗಳದ್ದು !

ಮಾವಳ್ಳಿ, ಗುಟ್ಟಹಳ್ಳಿ, ಸುಂಕನಹಳ್ಳಿಗಳೆಲ್ಲಾ ಕನ್ನಡಿಗರದ್ದು !

ಅಲ್ಲಿಗೆ….
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಹಿರೋಯಿನ್‌ಗಳು ಮುಂಬೈನವರು !
ಡೈರೆಕ್ಟರ್‌ಗಳು ಆಂಧ್ರ -ತಮಿಳುನಾಡಿನವರು !
ಲೈಟ್‌ಬಾಯ್ಸ್‌, ಪ್ರೊಡೆಕ್ಷನ್‌ ಬಾಯ್ಸ್‌, ಸೆಟ್‌ ಬಾಯ್ಸ್‌ಗಳೆಲ್ಲಾ
ಕನ್ನಡದವರು !

ಅಲ್ಲಿಗೆ….
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಪರಭಾಷೆಯ ಸಿನಿಮಾ, ಕಾರ್ಯಕ್ರಮ ನಮ್ಮ ಮಾತೃಭಾಷೆಗೆ ಅನುವಾದವಾಗಲೀ ಎಂದರೇ
ತಮ್ಮ ಸ್ವಾರ್ಥ ಕ್ಕಾಗಿ ನಮ್ಮಂವರಿಂದಲೇ ಪ್ರತಿಭಟನೆ

ಪರಭಾಷೆಯ ಸಿನಿಮಾ ಕೋಟಿ, ಕೋಟಿ ಗಳಿಸಿವಾಗ ಎಲ್ಲರೂ ‘ಮೂಕಪ್ರೇಕ್ಷಕರು’ !

ಅಲ್ಲಿಗೆ…
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ !
ತುಳುನಾಡು ಪ್ರತ್ಯೇಕ ರಾಜ್ಯ !
ಬೆಂಗಳೂರು ಕೇಂದ್ರಾಡಳಿತ ಪ್ರದೇಶ !

ಅಲ್ಲಿಗೆ
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು !!

ಕನ್ನಡಿಗರೇ, ಸ್ವಾಭಿಮಾನಿಗಳಾಗಿ, ಗುಲಾಮ ಸಂಸ್ಕೃತಿ, ಹಿಂದಿ ಹೇರಿಕೆ,
ಉತ್ತರ ಭಾರತೀಯರ ಕುತಂತ್ರ.
ವಲಸಿಗರ ಪುಂಡಾಟಕ್ಕೆ ಉತ್ತರ…
ನಮ್ಮ ತನದ ಉಳಿವಿಗೆ ಹೋರಾಡುವುದು !!

ರಾಯಣ್ಣ, ಅಬ್ಬಕ್ಕ, ಕುವೆಂಪು, ಬಸವಣ್ಣ, ಪುಲಿಕೇಶಿ, ರಾಜಣ್ಣ ಕನ್ನಡಿಗರ ಗುರುತಾಗಲಿ….

ಕರ್ನಾಟಕ, ಕನ್ನಡದ ಬಗ್ಗೆ ನಮಗೇ ಅಭಿಮಾನವಿಲ್ಲದಿದ್ದಲ್ಲಿ ಮುಂದೊಂದು ದಿನ
ಕರ್ನಾಟಕವನ್ನು ಉತ್ತರ ಭಾರತದವರಿಗೆ ಮತ್ತು ವಲಸಿಗರಿಗೇ ಮಾರಿ, ಕನ್ನಡಿಗರು ಭಿಕ್ಷೆ ಬೇಡುವ ಪರಿಸ್ಥಿತಿ ಆಗೋದು ಖಚಿತ !!

ಕನ್ನಡಿಗರೇ ಎಚ್ಚೆತ್ತುಕೊಳ್ಳಿ ಕರ್ನಾಟಕ ಮತ್ತು ಕನ್ನಡವನ್ನು ಕಾಪಾಡಿಕೊಳ್ಳಿ…

ನಾಲ್ಕು ಇಂಗ್ಲಿಷ್ ಅಕ್ಷರ ಬರೆದೊಡನೆ,
ನಾಲ್ಕು ಹಿಂದಿ ಪದ, ಮಾತಾಡಿದೊಡನೇ
ನೀವೇನೋ ದೊಡ್ಡ ಸಾಧನೆ ಮಾಡಿದಂತಾಗುವುದಿಲ್ಲ !

ಕನ್ನಡ ಬಳಸಿ ಕೊನೆಪಕ್ಷ ಮುಂದಿನ ನಮ್ಮ ತಲೆಮಾರಿಗೆ ನಮ್ಮ ಮಾತೃಭಾಷೆಯನ್ನು ಉಳಿಸಿಕೊಟ್ಟ, ಬೆಳಸಿಕೊಟ್ಟ ಆತ್ಮತೃಪ್ತಿಯಾದರೂ ದೊರೆಯುತ್ತದೆ !!

ಜೈ ಹಿಂದ್,
ಜೈ ಕರ್ನಾಟಕ ಮಾತೆ !!!

ಜೈ ತುಳುನಾಡು..

(ಬರಹ ಯಾರದೋ, ಕನ್ನಡದ ಗತಿ ಹೀಗಾದರೆ, ಇತರ ಪ್ರಾದೇಶಿಕ ಭಾಷೆಗಳ, ತುಳುವಿನ ಹಾಗೂ ತುಳುವನ, ಅಸ್ತಿತ್ವವೇನು?)

DAKSHINA KANNADA

ಮೇ 23 ರಿಂದ ತುಳುನಾಡಿನಾದ್ಯಂತ “ಗಂಟ್ ಕಲ್ವೆರ್’ ತುಳು ಚಿತ್ರ ತೆರೆಗೆ

Published

on

ಮಂಗಳೂರು: ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ತಯಾರಾದ ಕಲಾಸಾರ್ವಭೌಮ ಸುಧಾಕರ ಬನ್ನಂಜೆ ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ “ಗಂಟ್ ಕಲ್ವೆರ್” ತುಳು ಚಿತ್ರ ಮೇ 23 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಚಿತ್ರ ನಿರ್ಮಾಪಕರು, ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಸಿನಿಪೋಲಿಸ್ ಪಿವಿ ಆರ್ ,ರೂಪವಾಣಿ , ಉಡುಪಿಯಲ್ಲಿ ಭಾರತ್ ಸಿನಿಮಾಸ್, ಕಲ್ಪನಾ, ಮಣಿಪಾಲ, ಪಡುಬಿದ್ರೆ ಪುತ್ತೂರು, ದೇರಳಕಟ್ಟೆಯ ಭಾರತ್ ಸಿನಿಮಾಸ್, ಮಣಿಪಾಲದ ಐನಾಕ್ಸ್, ಕಾರ್ಕಳದ ರಾಧಿಕಾ, ಪ್ಲಾನೆಟ್ ಬೆಳ್ತಂಗಡಿಯ ಭಾರತ್, ಸುರತ್ಕಲ್ ನ ನಟರಾಜ್ ಹಾಗೂ ಸಿನಿ ಗ್ಯಾಲಕ್ಸಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದರು.

ಇದನ್ನೂ ಓದಿ: 35 ವರ್ಷದ ನಟಿಯನ್ನು ವರಿಸಲಿದ್ದಾರೆ ವಿಶಾಲ್..! ಅಷ್ಟಕ್ಕೂ ಹುಡುಗಿ ಯಾರು ಗೊತ್ತಾ..?

ತುಳು ಚಿತ್ರರಂಗದ ಖ್ಯಾತ ನಟರು ಇದರಲ್ಲಿ ನಟಿಸಿದ್ದಾರೆ ಎಂದು ವಿವರಿಸಿದರು. ವೇದಿಕೆಯಲ್ಲಿ ರಾಕೇಶ್ ಆಚಾರ್ಯ, ಸುಧಾಕರ್, ಪ್ರಶಾಂತ್ ಆಚಾರ್ಯ, ತಮ್ಮ ಲಕ್ಷ್ಮಣ ಮೊದಲಾದವರಿದ್ದರು.

Continue Reading

DAKSHINA KANNADA

ಶಾಸಕ ಹರೀಶ್ ಪೂಂಜಾ ವಿರುದ್ದ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

Published

on

ಉಪ್ಪಿನಂಗಡಿ : ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಹರೀಶ್ ಪೂಂಜಾ ವಿರುದ್ದ ಪ್ರಕರಣ ದಾಖಲಾಗಿತ್ತು. ಇಂದು(ಮೇ 20) ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಎಫ್ಐಆರ್ ರದ್ದುಗೊಳಿಸುವಂತೆ ಹರೀಶ್ ಪೂಂಜಾಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಕ್ರಮಕೈಗೊಳ್ಳದ ಹೈಕೋರ್ಟ್ ದೂರುದಾರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.

ಇದನ್ನೂ ಓದಿ : ಶಿಶಿಲದ ಶ್ರೀ ಶಿಶಿಲೇಶ್ವರನಿಗೆ ವಿಭಿನ್ನ ಶೈಲಿಯಲ್ಲಿ ತೆಪ್ಪೋತ್ಸವ

ಈ ನಡುವೆ ಪೊಲೀಸರು ಶಾಸಕ ಪೂಂಜಾ ವಿರುದ್ದ ಹೈಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಶಾಸಕ ಹರೀಶ್ ಪೂಂಜಾಗೆ ಮತ್ತೊಂದು ಹಿನ್ನಡೆಯಾಗಿದೆ.

Continue Reading

DAKSHINA KANNADA

ಶಿಶಿಲದ ಶ್ರೀ ಶಿಶಿಲೇಶ್ವರನಿಗೆ ವಿಭಿನ್ನ ಶೈಲಿಯಲ್ಲಿ ತೆಪ್ಪೋತ್ಸವ

Published

on

ಬೆಳ್ತಂಗಡಿ : ಶಿಶಿಲದ ಶ್ರೀಶಿಶಿಲೇಶ್ವರ ದೇವರಿಗೆ 7 ದಿನ ಜಾತ್ರಾಮಹೋತ್ಸವದ ಕಡೆ ದಿನ ಅವಭೃತ ಸ್ನಾನದಂದು ವಿಭಿನ್ನ ಶೈಲಿಯಲ್ಲಿ ತೆಪ್ಪೋತ್ಸವ ನಡೆಯುವುದು ವಿಷಯ. ಬಿದಿರುಗಳನ್ನು ಬಳಸಿ ಸಿದ್ಧಗೊಳಿಸಿದ ತೆಪ್ಪದಿಂದ ಶ್ರೀದೇವರ ಸಮೀಪದಲ್ಲೇ ಹಾದುಹೋಗುವ ಕಪಿಲಾ ನದಿಗೆ ಶಿಶಿಲೇಶ್ವರನನ್ನು ಕಪಿಲೆ ಕಲ್ಲಿಗೆ ಮೂರು ಸುತ್ತು ಬರುವ ಮೂಲಕ ತೆಪ್ಪೋತ್ಸವ ಪೂರ್ಣಗೊಳ್ಳುತ್ತದೆ.

ಬಿದಿರಿನ ತೆಪ್ಪವನ್ನು ದೇವಾಲಯದ ಚಾಕರಿಯವರು ಒಂದೇ ಗಾತ್ರದ ಬಿದಿರನ್ನು ಸಿದ್ಧಗೊಳಿಸಿ ಸಮಾನವಾಗಿ ಜೋಡಣೆ ಮಾಡಿ ಅದಕ್ಕೆ ಬಿಗಿಯಾಗಿ ದಾರ ಕಟ್ಟಿ ಅದರ ಮೇಲೊಂದು ಮರದ ಪೀಠವಿಟ್ಟು ಅದರಲ್ಲಿ ಉತ್ಸವ ದೇವರು ವಿರಾಜಮಾನರಾದರೆ ಅದರ ಅಂದವೇ ಅದ್ಭುತ.

ಇಷ್ಟು ಮಾತ್ರವಲ್ಲದೆ ಮತ್ಸ್ಯತೀರ್ಥವೆಂದೇ ಪ್ರಖ್ಯಾತವಾದ ಈ ಕಪಿಲ ನದಿಯಲ್ಲಿ  ಮಹಶೀರ್ (ಪೆರುವೋಳ್) ಮೀನು ಇದ್ದು, ಈ ಮೀನುಗಳು ಶಿಶಿಲೇಶ್ವರ ದೇವರ ರೀತಿಯೇ ಉದ್ಭವಾಗಿದೆ ಎಂದು ಭಕ್ತ ಸಮೂಹ ನಂಬಿದೆ. ಈ ಮೀನುಗಳು ತೆಪ್ಪೋತ್ಸವ ನಡೆಯುವ ಸಂದರ್ಭದಲ್ಲಿ ಅತ್ತಿಂದ ಇತ್ತ – ಇತ್ತಿಂದ ಅತ್ತ ಓಡಾಡುವ ದೃಶ್ಯ ವಿಸ್ಮಯ.

ಇದನ್ನೂ ಓದಿ : ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿಗಳು ಲಿಂಗೈಕ್ಯ

ಶಿಶಿಲದ ತೆಪ್ಪೋತ್ಸವದಲ್ಲಿ ತೆಪ್ಪವನ್ನು ಸುಮಾರು 6 ಮಂದಿ ಚಾಕರಿಯವರು 3 ಸುತ್ತು ಕೊಂಡೊಯ್ಯುವ ದೈವಿಶಕ್ತಿ ನೋಡಲು ಜನಸಾಗರವೇ ಶಿಶಿಲದ ಕಪಿಲಾ ನದಿಯ ದಂಡೆಯಲ್ಲಿ ಸೇರಿರುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page