Connect with us

BANTWAL

ಸಾಮಾಜಿಕ ಜಾಲತಾಣದ ಸದ್ಬಳಕೆಗೆ ಒಂದೊಳ್ಳೆ ಉದಾಹರಣೆ…ಒಂದು ಫೇಸ್‌ಬುಕ್ ಪೋಸ್ಟ್‌ನಿಂದ ಶಾಲಾ ವಿದ್ಯಾರ್ಥಿನಿಗೆ ಸಿಕ್ತು ಹೊಸ ಸ್ಮಾರ್ಟ್‌ಫೋನ್..!

Published

on

ಮಂಗಳೂರು: ಸಾಮಾಜಿಕ ಜಾಲತಾಣ ಬಳಕೆಯಿಂದಾಗುವ ಅನಾಹುತಗಳನ್ನು ನೋಡಿದ್ದೀವಿ..ಕೇವಲ ಒಂದು ಫೆಸ್ ಬುಕ್ ಪೋಸ್ಟ್ ಬೆಂಗಳೂರಿನಲ್ಲಿ ಸೃಷ್ಠಿಸಿದ ಅನಾಹುತಗಳು ಇನ್ನು ನಮ್ಮ ಕಣ್ಣಮುಂದೆ ಇದೆ. ಆದರೆ ಅದೇ ಸಾಮಾಜಿಕ ಜಾಲತಾಣಗಳ ಸರಿಯಾದ ಬಳಕೆಯಿಂದ ಒಂದು ಬಡ ಕುಟುಂಬದ ವಿಧ್ಯಾರ್ಥಿಯ ಶಿಕ್ಷಣಕ್ಕೆ ಸಹಾಯವಾದ ಘಟನೆ ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಬಂಟ್ವಾಳದ ಭಾರತಿ ಪ್ರಶಾಂತ್ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಒಂದು ಪೋಸ್ಟ್‌ ಹಾಕಿದ್ದರು. ತಮ್ಮ ಮನೆಯ ಪಕ್ಕದಲ್ಲಿ ಒಂದು ಬಡ ಕುಟುಂಬವಿದೆ. ಆ ಮನೆಯಲ್ಲಿ ಇತ್ತೀಚೆಗೆ ದುಡಿಯೋಕೆ ಹೋಗ್ತಿರೋ ಒಬ್ಬ ಹುಡುಗ ಬಿಟ್ಟರೆ ಬೇರೆ ಗಂಡಸರಿಲ್ಲ. ದಿನದ ಹಿಂದೆ ಆ ಮನೆಯ ಅಮ್ಮ ಬಂದು ತನ್ನ ಮೊಮ್ಮಗಳ ಆನ್‌ಲೈನ್ ಕ್ಲಾಸಿಗಾಗಿ ಮೊಬೈಲ್‌ ಬೇಕಿದೆ. ಎರಡು ಸಾವಿರ ರೂಪಾಯಿ ಕೊಟ್ಟು ಮೊಬೈಲ್ ತಂದು ಕೊಡ್ತೀಯಾ ಎಂದು ಮುಗ್ದವಾಗಿ ಕೇಳಿದಾಗ ಅವರಿಗೆ ಮನಸ್ಸು ಕರಗಿದೆ.
ಹೀಗಾಗಿ ಈ ವಿಚಾರವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡ ಭಾರತಿ ಅವರು ಈ ಕುಟುಂಬಕ್ಕೆ ಸಹಾಯ ಮಾಡುವಂತೆ ತಮ್ಮ ಸ್ನೇಹಿತರಲ್ಲಿ ಮನವಿ ಮಾಡುತ್ತಾರೆ.

ಈ ಸಂಬಂಧ ಭಾರತಿ ಅವರು ಹಾಕಿದ ಫೇಸ್‌ಬುಕ್ ಪೋಸ್ಟ್ ನಿಂದಾಗಿ ಆ ಬಡ ಕುಟುಂಬಕ್ಕೆ ಹಲವರು ಸಹಾಯ ಮಾಡುವಂತೆ ಮಾಡಿದೆ.

‘ನಮ್ಮ ಮನೆ ಹತ್ರ ಒಂದು‌ ಬಡ ಕುಟುಂಬವಿದೆ. ಮನೆಯಲ್ಲಿ ಇತ್ತೀಚೆಗೆ ದುಡಿಯೊಕೆ ಹೊಗ್ತಿರೊ ಒಬ್ಬ ಹುಡುಗ (ನನ್ನ ಮಗನ ಪ್ರಾಯದ) ಬಿಟ್ರೆ ಬೇರೆ ಗಂಡಸರಿಲ್ಲ. ಓಟು ಒತ್ತುವಾಗ ಬೇಕಾದ್ರೆ ಸಿಕ್ಕಾಪಟ್ಟೆ ಜನ ಬಂದು ಕೆಲವು ಭರವಸೆಗಳನ್ನು ಕೊಟ್ಟು ಹೋಗ್ತಾರೆ. ಅವರ ಮನೆಯು ಶಿಥಿಲಾವಸ್ಥೆಯಲ್ಲಿದ್ದು ಆ ಮನೆ ಸಿಮೆಂಟ್ ಕಾಣದೆ 35 ವರ್ಷಗಳಾಯ್ತು. ಸರಿಯಾಗಿ ದುಡಿಯುವ ಕೈಗಳಿಲ್ಲ ಆ ಮನೆಯಲ್ಲಿ. ಇವತ್ತು ಬೆಳಗ್ಗೆ ಆ ಮನೆಯ ಅಮ್ಮ ಬಂದು ತನ್ನ ಮೊಮ್ಮಗಳ online ಕ್ಲಾಸಿಗಾಗಿ ಮೊಬೈಲ್ ಬೇಕು ಅಂತಿದ್ದಾಳೆ ಎರಡು ಸಾವಿರಕ್ಕೆ ಒಂದು ತಂದು ಕೊಟ್ತಿಯಾ ನನ್ನಲ್ಲಿ ಬೇರೆ ದುಡ್ಡಿಲ್ಲ ಅಂದ್ರು. ಆ ಹಣದಲ್ಲಿ ಅಂಥ ಮೊಬೈಲ್ ಸಿಗಲ್ಲ ಕಾಣ್ಬೇಕು ಅಂದೆ. ಹಾಗೆ ಮೊಬೈಲ್ ಅಂಗಡಿಗೆ ಕಾಲ್ ಮಾಡಿ ವಿಚಾರಿಸಿದೆ. ಕಮ್ಮಿಯ ಮೊಬೈಲ್ ಅಂದ್ರೂ ಏಳು ಸಾವಿರ ಇದೆ ಅಂದ.


ತಲೆ ಬಿಸಿ ಮಾಡ್ಕೊಂಡು ಆಕೆ ಮನೆಗೆ ಹೊದ್ರು. ಸ್ವಲ್ಪ ಹೊತ್ತಲ್ಲಿ ಮತ್ತೆ ಬಂದು ಮಗಳ ಕಿವಿದ್ದು ತುಂಡಾಗಿದೆ ಅದನ್ನು ನೀನೆ ಮಾರಿ ಒಂದು ಮೊಬೈಲ್ ತಂದು ಕೊಡ್ತಿಯಾ ಅಂದ್ರು. ನನ್ನ ಕಣ್ಣಂಚು ಒದ್ದೆಯಾಯಿತು. ಈ ಕೊರೋನಾ ಹಾಗೂ ಸರಕಾರ ಬಡವರನ್ನು ಮನೆಯಿಂದ ಎಳೆದು ತಂದು ಬೀದಿಗೆ ಹಾಕಿ ಬೇಕಿದ್ದರೆ ಬದುಕಿಕೋ ಅಂದ ಹಾಗಿದೆ. ದಯವಿಟ್ಟು ವಿಶಾಲ ಹೃದಯದವರು ಯಾರಾದರು ಇದ್ದರೆ ಆ ಮನೆಯವರಿಗೆ ಸ್ವಲ್ಪ ಸಹಾಯ ಮಾಡುವಿರಾ. ಮಾಡುವಿರೆಂದಾದರೆ ಅವರಲ್ಲಿ ಕೇಳಿ ಅವರ ಬ್ಯಾಂಕ್ ಅಕೌಂಟ್ ನಂಬರ್ ಹಾಕುವೆ. ಇಲ್ಲಿ ನೀವು ಕೊಟ್ಟಿರುವ ಸಹಾಯ ಅವರ ಜೀವನಕ್ಕೂ ಸಹಾಯ ಆದೀತು.’ ಹೀಗಂತಾ ಭಾರತಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ತಕ್ಷಣ ಅವರ ಮನವಿಗೆ ಸ್ಪಂದಿಸಿದ ಹತ್ತಾರು ಜನ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಪರಿಣಾಮ ಆ ಬಡಕುಟುಂಬದ ವಿದ್ಯಾರ್ಥಿನಿಗೆ ಉತ್ತಮ ಗುಣಮಟ್ಟದ ಮೊಬೈಲ್ ಕೊಡಿಸಲು ಸಾಧ್ಯವಾಗಿದೆ. ಈ ಸಂಬಂಧ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಮೊಬೈಲ್ ಅಂಗಡಿ ಮಾಲೀಕ ಶಾಹುಲ್ ಕಾಸೀಮ್, ‘ಇಂದು ನಮ್ಮಂಗಡಿಗೆ ಮೊಬೈಲ್ ಖರೀದಿಗಾಗಿ ಲೀಲಾ ಎಂಬುವವರನ್ನು ಭಾರತಿ ಮೇಡಂ ಕರೆ ತಂದಿದ್ದರು‌.ನನ್ನ ಗಳಿಕೆಯ ಒಂದಂಶವನ್ನು ಸೇರಿಸಿ ಸುಮಾರು 9 ಸಾವಿರ ಬೆಲೆಯ ಉತ್ತಮ ಗುಣಮಟ್ಟದ ವಿವೋ ಮೊಬೈಲ್ ಖರೀದಿಸಿದರು. ದಾನಿಗಳ ಸಹಕಾರದಿಂದ ಮೊಬೈಲ್ ಕೊಡಿಸಿದ ಭಾರತಿ ಮೇಡಂ ಹಾಗೂ ಸ್ಪಂದಿಸಿದ ಎಲ್ಲಾ ಮಿತ್ರರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.

BANTWAL

ಬಂಟ್ವಾಳದ ಯುವಕ ಚೆನ್ನರಾಯಪಟ್ಟಣದಲ್ಲಿ ರೈಲಿನಿಂದ ಬಿದ್ದು ಸಾವು

Published

on

ಬಂಟ್ವಾಳ: ಬಂಟ್ವಾಳ ಮೂಲದ ಯುವಕನೋರ್ವ ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪುಣಚ ಗ್ರಾಮದ ದೇವಿನಗರ ನಿವಾಸಿ 25 ವರ್ಷ ಪ್ರಾಯದ ನಿಶಿತ್ ನಾಯ್ಕ್ ಮೃತ ಯುವಕನಾಗಿರುತ್ತಾನೆ.


ನಿಶಿತ್ ಅವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಬೆಂಗಳೂರಿನ ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಊರಿಗೆ ರೈಲಿನಲ್ಲಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ, ಹಣ ಪಡೆದು ಪರಾರಿಯಾಗುತ್ತಿದ್ದ ಆರೋಪಿಗಳ ಬಂಧನ

ನಿಶಿತ್ ಅವರು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಮನೆಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ಟ್ರೈನ್ ಹಿಡಿದಿದ್ದರು. ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅವರು ಮುಂಜಾನೆ ಸುಮಾರು 2.30ರ ಹೊತ್ತಿಗೆ ರೈಲಿನಿಂದ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Continue Reading

BANTWAL

ವಿಟ್ಲ: ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಮಹಿಳೆ

Published

on

ವಿಟ್ಲ: ಮಹಿಳೆಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್‌ಸ್ಟ್ಯಾಂಡ್ ಸಮೀಪ ರವಿವಾರ ಬೆಳಿಗ್ಗೆ ನಡೆದಿದೆ. 68 ವರ್ಷದ ವಿಟ್ಲ ಮುಳ್ಳೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ ಮೃತ ಮಹಿಳೆ.


ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಕ್ ಸವಾರ ಪುತ್ತೂರು ಮೂಲದವರು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಬೈಕ್ ಸುಮಾರು 50 ಮೀಟರ್ ದೂರ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಳ್ಳಾಲ: ಎಮ್ ಡಿಎಮ್ ಎ ಮಾರಾಟ ಪ್ರಕರಣ: ಆರೋಪಿ ಬಂಧನ

ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನನ್ನು ಯಾರೂ ಮುಟ್ಟದೆ ಇದ್ದ ಸಂದರ್ಭ ಕಾಶಿಮಠ ನಿವಾಸಿ ಪ್ರತಾಪ್ ಅವರು ಮಾನವೀಯತೆ ಮೆರೆದಿದ್ದು, ತಮ್ಮ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಮೃತ ಸೀತಾ ಶೆಟ್ಟಿ ಅವರು ಪುತ್ರ ರೂಪೇಶ್ ಹಾಗೂ ಪುತ್ರಿ ರೂಪಿತಾರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Continue Reading

BANTWAL

ಇಂದಿನಿಂದ ಫೆ. 10ರ ತನಕ ಸಸಿಹಿತ್ಲು ಸಾರಂತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ

Published

on

ಮೂಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಕ್ಷೇತ್ರ ಸಜ್ಜಾಗಿ ನಿಂತಿದೆ.


ಇಂದಿನಿಂದ ಮೊದಲ್ಗೊಂಡು ಫೆಬ್ರವರಿ 10 ರ ತನಕ ನಿರಂತರ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ. ಬಿ. ಕರ್ಕೇರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ದೈವಸ್ಥಾನ ಭವ್ಯ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದೆ. ಶ್ರೀ ಉಳ್ಳಾಯ ಮತ್ತು ಪರಿವಾರ ಶಕ್ತಿಗಳಿಗೆ ಪ್ರಧಾನಗೊಂಡ ಕಾಂತಾಬಾರೆ ಬೂದಾಬಾರೆ ಮತ್ತು ಮಾಯಂದಾಲ್ ದೈವಕ್ಕೆ ಪ್ರತ್ಯೇಕ ಗುಡಿ ನಿರ್ಮಿಸಲಾಗಿದ್ದು, ದೈವಸ್ಥಾನದ ಪ್ರಧಾನ ಗೋಪುರವನ್ನು ನವೀಕರಿಸಲಾಗಿದೆ.

ಇದನ್ನೂ ಓದಿ: ಫೆ.7-8 ರಂದು ಈಶ್ವರ ಮಲ್ಪೆ ತಂಡದಿಂದ ಉಚಿತ ಶ್ರವಣ ತಪಾಸಣಾ ಶಿಬಿರ

ಹಳೆಯಂಗಡಿಯ ವೇದಮೂರ್ತಿ ಎಚ್. ರಂಗನಾಥ ಭಟ್ ನೇತೃತ್ವದಲ್ಲಿ ಏಳು ದಿನಗಳ ಕಾಲ ನಿರಂತರ ವೈದಿಕ ವಿಧಿ ವಿಧಾನಗಳು ನಡೆಯಲಿವೆ. ಬ್ರಹ್ಮಕಲಶೋತ್ಸವ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಗೌರವ ಸಲಹೆಗಾರ ಚಂದ್ರಶೇಖರ ನಾನಿಲ್, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್ ಎನ್ ಕೋಟ್ಯಾನ್ ಮತ್ತಿತರರು ಇದ್ದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page