Connect with us

LATEST NEWS

ಜನರ ಬೇಡಿಕೆಗೆ ಮಣಿದ ಕೇಂದ್ರ- ಮಂಗಳೂರಿಗೆ ವಂದೇ ಭಾರತ್ ರೈಲು ವಿಸ್ತರಣೆ

Published

on

ಮಂಗಳೂರು: ತಿರುವನಂತಪುರದಿಂದ ಕಾಸರಗೋಡುವರೆಗೆ ಆರಂಭವಾಗಿದ್ದ ವಂದೇ ಭಾರತ್ ರೈಲು ಇನ್ನು ಮಂಗಳೂರಿಗೂ ಬರಲಿದೆ. ಕಾಸರಗೋಡುವರಗೆ ಇದ್ದ ವಂದೇ ಭಾರತ್ ರೈಲನ್ನು ಕೇಂದ್ರ ಸರ್ಕಾರ ಮಂಗಳೂರುವರೆಗೂ ವಿಸ್ತರಣೆ ಮಾಡಿದೆ.

ಇಂದು ದೇಶಾದ್ಯಂತ ಹತ್ತು ಹೊಸ ವಂದೇ ಭಾರತ್ ರೈಲು ಓಡಾಟಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಕಾಸರಗೋಡಿನಿಂದ ಮಂಗಳೂರಿಗೆ ವಿಸ್ತರಿಸಿದ ರೈಲಿಗೂ ಚಾಲನೆ ನೀಡಿದ್ದಾರೆ. ವಂದೇ ಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಿಸಬೇಕು ಅನ್ನೋದು ಕೇರಳ ಹಾಗೂ ಕರ್ನಾಟಕದ ಪ್ರಯಾಣಿಕರ ಆಗ್ರಹವಾಗಿತ್ತು.

ರೈಲು ವಿಸ್ತರಣೆಯಾದ್ರೆ ಎರಡೂ ರಾಜ್ಯಕ್ಕೂ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.  ಪ್ರವಾಸಿಗರು, ಉದ್ಯಮಿಗಳು ಹಾಗೂ ಇತರ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ವಿಸ್ತರಣೆಯ ಬೇಡಿಕೆ ಇಡಲಾಗಿತ್ತು. ಹೀಗಾಗಿ ಇದೀಗ ಮಂಗಳೂರಿಗೆ ವಿಸ್ತರಣೆಗೊಂಡಿರುವ ರೈಲು ಸಂಚಾರಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ವೇಳೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಇದೊಂದು ಮಹತ್ತರ ಹೆಜ್ಜೆಯಾಗಿದ್ದು, ಎಲ್ಲಾ ತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

 

LATEST NEWS

ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿಯ ವರದಿ ತಿರಸ್ಕರಿಸಿದ ಭಾರತ..!

Published

on

ಮಂಗಳೂರು/ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರು ತೀರಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಸೂಚಿಸುವ USCIRF ನ 2025 ರ ವರದಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ.


ಇದರೊಂದಿಗೆ ಭಾರತೀಯ ಬೇಹುಗಾರಿಕಾ ಸಂಸ್ಥೆ ‘ರಾ’ ಮೇಲೆಯೂ ನಿರ್ಬಂಧ ಹೇರಲೂ ವರದಿ ಶಿಫಾರಸು ಮಾಡಿತ್ತು. ಈ ವರದಿ ಪಕ್ಷಪಾತ ಮತ್ತು ರಾಜಕೀಯ ಪ್ರೇರಿತ ಎಂದು ಭಾರತ ವರದಿಯನ್ನು ತಿರಸ್ಕಾರ ಮಾಡಿದೆ.

ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಆಯೋಗ (USCIRF) ವನ್ನು ‘ಕಳವಳಕಾರಿ ಘಟಕ’ ಎಂದು ಹೆಸರಿಸಬೇಕು ಎಂದು ಭಾರತ ಪ್ರತಿಪಾದಿಸಿದೆ. ಭಾರತದ ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಸಂಕೇತ ಎಂಬ ಖ್ಯಾತಿಯನ್ನು ಕುಗ್ಗಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ತನ್ನ ಕಠಿಣ ಹೇಳಿಕೆಯಲ್ಲಿ ತಿಳಿಸಿದೆ ಎಂದು ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಮಮ್ಮುಟ್ಟಿ ಹೆಸರಿನಲ್ಲಿ ಮೋಹನ್‌ಲಾಲ್ ವಿಶೇಷ ಪೂಜೆ: ಏನಿದು ವಿವಾದ ?

ಧಾರ್ಮಿಕ ಸ್ವಾತಂತ್ರ್ಯ ವರದಿ ಏನು ಹೇಳಿದೆ..?
2024ರಲ್ಲಿ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ತಾರತಮ್ಯ ಹೆಚ್ಚುತ್ತಲೇ ಇದೆ ಎಂದು 2025 ರ ವರದಿಯು ಉಲ್ಲೇಖಿಸಿದೆ. ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ “ದ್ವೇಷಪೂರಿತ ಭಾಷಣ” ವನ್ನು ಪ್ರಚಾರ ಮಾಡಿದೆ ಎಂದು ಆರೋಪಿಸಿದೆ.

ಅಲ್ಲದೆ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕೊಲೆ ಸಂಚುಗಳಲ್ಲಿ ಭಾಗಿಯಾಗಿರುವ ಆರೋಪ ಮಾಡಿದೆ. ಈ ಹಿನ್ನಲೆಯಲ್ಲಿ ಬೇಹುಗಾರಿಕಾ ಸಂಸ್ಥೆ ‘ರಾ’ವಿರುದ್ಧ ನಿರ್ಬಂಧ ವರದಿ ಶಿಫಾರಸು ಮಾಡಿದೆ.

ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ವಿಫಲವಾದ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ರಾ ಏಜೆಂಟ್ ವಿಕಾಸ್ ಯಾದವ್ ವಿರುದ್ಧ ಆರೋಪ ಹೊರಿಸಿದೆ. ಇದರಿಂದ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿದೆ.

 

Continue Reading

LATEST NEWS

ಮಮ್ಮುಟ್ಟಿ ಹೆಸರಿನಲ್ಲಿ ಮೋಹನ್‌ಲಾಲ್ ವಿಶೇಷ ಪೂಜೆ: ಏನಿದು ವಿವಾದ ?

Published

on

ಮಂಗಳೂರು/ತಿರುವನಂತಪುರ: ಮಲಯಾಳಂ ನಟ ಮೋಹನ್ ಲಾಲ್ ಅವರು ಮಾ.18ರಂದು ಮಮ್ಮುಟ್ಟಿ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.


ನಟ ಮಮ್ಮುಟಿ ಆರೋಗ್ಯ ಸಮಸ್ಯೆಯಲ್ಲಿದ್ದಾರೆಂದು ವರದಿ ಬಂದ ಬೆನ್ನಲ್ಲೇ ನಟ ಮೋಹನ್ ಲಾಲ್ ಶಬರಿಮಲೆಗೆ ತೆರಳಿ ವಿಶೇಷ ಉಷಃ ಪೂಜೆಯೆಂಬ ಸೇವೆಯನ್ನು ಮಮ್ಮುಟ್ಟಿಗಾಗಿ ನಡೆಸಿದ್ದರು.

ಅಷ್ಟಕ್ಕೂ ವಿವಾದಕ್ಕೆ ಕಾರಣವಾಗಿದ್ದು, ದೇಗುಲವು ನೀಡಿದ್ದ ರಸೀದಿಯಲ್ಲಿ ಮಮ್ಮುಟ್ಟಿ ಅವರ ಹೆಸರನ್ನು ಮಹಮ್ಮದ್ ಕುಟ್ಟಿ ಎಂದು ನಮೂದಿಸಲಾಗಿತ್ತು. ಪೂಜೆ ಸೇವಾ ರಶೀದಿ ಸಹಿತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಲವರು ಮಮ್ಮುಟ್ಟಿ ಅವರು ಇಸ್ಲಾಂ ಸಮುದಾಯಕ್ಕೆ ಸೇರಿದವರು. ಅವರ ಹೆಸರಿನಲ್ಲಿ ಹಿಂದೂ ದೇಗುಲದಲ್ಲಿ ಪೂಜೆ ಮಾಡಿಸಲಾಗಿದೆ ಎಂದು ತಕರಾರು ಎತ್ತಿದ್ದಾರೆ.

ಈ ಬಗ್ಗೆ ಕೇರಳದ ಪ್ರಮುಖ ರಾಜಕೀಯ ವಿಶ್ಲೇಷಕ, ಮಾಧ್ಯಮ ಪ್ರತಿನಿಧಿಯಾದ ಹಿರಿಯ ಪತ್ರಕರ್ತ ಓ. ಅಬ್ದುಲ್ಲಾ ಅವರು, ಮಮ್ಮುಟ್ಟಿಯ ಅನುಮತಿ ಇಲ್ಲದೇ ಮೋಹನ್ ಲಾಲ್ ತನ್ನಿಚ್ಛೆಯಂತೆ ಪೂಜೆ ನಡೆಸಿರಲಾರರು. ಮುಮ್ಮುಟ್ಟಿಯ ಅರಿವಿನಿಂದಲೇ ಪೂಜೆ ನಡೆಸಿದ್ದಾದರೆ ಮಮ್ಮುಟ್ಟಿ ಕ್ಷಮೆಯಾಚಿಸಬೇಕು. ಅದು ನಟನ ಕಡೆಯಿಂದ ಆದ ಗಂಭೀರ ಲೋಪ. ಮಮ್ಮುಟ್ಟಿ ಅವರ ಅರಿವಿಗೆ ಬಾರದೆ ಮೋಹನ್ ಲಾಲ್ ಪೂಜೆ ಮಾಡಿದ್ದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಇದು ಮೋಹನ್ ಲಾಲ್ ಅವರ ಅಯ್ಯಪ್ಪನ ಮೇಲಿನ ನಂಬಿಕೆಯನ್ನು ಸೂಚಿಸುತ್ತದೆ. ಆ ನಂಬಿಕೆ ಆಧಾರದ ಮೇಲೆ ಅವರು ಪೂಜೆ ಮಾಡಿರಬಹುದು.

ಆದಾಗ್ಯೂ, ಮಮ್ಮುಟ್ಟಿ ಅವರ ಸೂಚನೆಯಂತೆ ಪೂಜೆಯನ್ನು ಸಲ್ಲಿಸಿದ್ದರೆ, ಅದು ದೊಡ್ಡ ಅಪರಾಧ. ಏಕೆಂದರೆ ಇಸ್ಲಾಂ ನಂಬಿಕೆಗಳ ಪ್ರಕಾರ, ಮುಸಲ್ಮಾನನಿಗೆ ಅಲ್ಲಾಹುವಲ್ಲದೇ ಅನ್ಯ ದೇವರಿಲ್ಲ. ಈ ಕುರಿತು ಮಮ್ಮುಟ್ಟಿ ತನ್ನ ಸಮುದಾಯಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಹೊಸ ಟೋಲ್ ರೇಟ್ ..! ಎಷ್ಟು ಹೆಚ್ಚಾಗಲಿದೆ ಗೊತ್ತಾ ?

ಅಸಮಾಧಾನ ವ್ಯಕ್ತಪಡಿಸಿದ ಮೋಹನ್‌ಲಾಲ್
ವಿಶೇಷ ಪೂಜೆ ಕುರಿತ ರಸೀದಿಯನ್ನು ದೇಗುಲದ ಕೆಲವು ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ ಎಂದು ಮೋಹಾನ್‌ಲಾಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ತಿರುವಾಂಕೂರು ದೇವಸ್ವಂ ಮಂಡಳಿಯು,”ನಮ್ಮ ಕಡೆಯಿಂದ ರಸೀದಿಯು ಬಹಿರಂಗಗೊಂಡಿಲ್ಲ” ಎಂದು ಸ್ಪಷ್ಟನೆ ನೀಡಿದೆ.

Continue Reading

LATEST NEWS

SSLC ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Published

on

ಬೆಳಗಾವಿ: SSLC ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಭಯದಿಂದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ದೀಪಿಕಾ ಬಡಿಗೇರ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಫಾರೆಸ್ಟ್ ಕಾಲೋನಿಯಲ್ಲಿ SSLC ವಿದ್ಯಾಭ್ಯಾಸ ಮಾಡುತ್ತಿದ್ದಳು.

ಮಾ.25ರಂದು ಎಸ್ಎಸ್ ಎಲ್ ಸಿ ಪರೀಕ್ಷೆ ಬರೆದು ಬಂದಿದ್ದ ದೀಪಿಕಾ ಕಡಿಮೆ ಅಂಕ ಬರಬಹುದು ಎಂಬ ಭಯದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತ ದೀಪಿಕಾಳ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page