Connect with us

LATEST NEWS

ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಾ? ಹೆಚ್ಚು ಅಂಕ ಪಡೆಯಲು ಈ ಸರಳ ಟಿಪ್ಸ್ ಅನುಸರಿಸಿ

Published

on

ಪರೀಕ್ಷೆ ಎಂದೊಡನೆ ಯಾರಿಗೇ ಆದರೂ ಒಂದು ಕ್ಷಣ ಆತಂಕ ಸಹಜ. ಪರೀಕ್ಷೆ ಬರೆಯುವವರಿಗೆ ಹೇಗೆ ಗೊಂದಲ, ಆತಂಕ ಇರುತ್ತದೆಯೋ, ಅದೇ ರೀತಿ ಅವರ ಮನೆಯವರಿಗೂ ಮನಸ್ಸಿನಲ್ಲಿ ಒಂದಿಷ್ಟು ಕಸಿವಿಸಿ ಇರುತ್ತದೆ. ಪರೀಕ್ಷೆಯನ್ನು ಹೇಗೆ ಸಮಾಧಾನದಿಂದ ಎದುರಿಸಬಹುದು? ಹೆಚ್ಚಿನ ಅಂಕ ಗಳಿಸಲು ಹೇಗೆ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು? ಈ ಟಿಪ್ಸ್ ನಿಮಗಾಗಿ.

ಹಳೆಯ ಪ್ರಶ್ನೆ ಪತ್ರಿಕೆ ಗಮನಿಸಿ

ಈ ಹಿಂದಿನ ಪ್ರಶ್ನೆ ಪತ್ರಿಕೆ ಇದ್ದರೆ, ಅದನ್ನು ಸರಿಯಾಗಿ ಗಮನಿಸಿ. ಅದಕ್ಕೆ ಉತ್ತರ ಬರೆದು, ನೀವೇ ಮೌಲ್ಯಮಾಪನ ಮಾಡಿಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಜತೆಗೆ, ಪರೀಕ್ಷೆ ಹೇಗಿರಬಹುದು ಎಂಬ ಅರಿವಾಗುತ್ತದೆ.

ನಿರಂತರ ಓದು ಬೇಡ

ಪರೀಕ್ಷೆ ಎಂದು ಹಗಲು ರಾತ್ರಿ ನಿರಂತರ ಓದುವುದು ಸರಿಯಲ್ಲ, ಸತತವಾಗಿ ಓದುವುದರಿಂದ ಕಣ್ಣಿಗೆ ಆಯಾಸವಾಗಬಹುದು ಮತ್ತು ಓದಿದ್ದು ಸರಿಯಾಗಿ ಮನಸ್ಸಿಗೆ ನಾಟದೇ ಇರಬಹುದು. ಅದಕ್ಕಾಗಿ ಓದಿನ ಮಧ್ಯೆ ಅಗತ್ಯ ವಿಶ್ರಾಂತಿ ಪಡೆಯಿರಿ, ಸಣ್ಣಪುಟ್ಟ ವ್ಯಾಯಾಮ ಮಾಡಿ, ಮನಸ್ಸು ಉಲ್ಲಾಸವಾಗುತ್ತದೆ.

ಗಮನವಿಟ್ಟು ಓದಿ, ಅರ್ಥೈಸಿಕೊಳ್ಳಿ

ಕೆಲವರಿಗೆ ಒಮ್ಮೆ ಓದಿದರೆ ಸಾಕಾಗುತ್ತದೆ, ಅದೇ ಮನಸ್ಸಿನಲ್ಲಿ ಉಳಿಯುತ್ತದೆ. ಇನ್ನು ಕೆಲವರಿಗೆ ಎಷ್ಟೇ ಓದಿದರು ಬೇಗ ತಲೆಗೆ ಹೋಗುವುದಿಲ್ಲ. ಹಾಗಾಗಿ ಗಮನವಿಟ್ಟು ಓದಿ, ಸರಳ ತಂತ್ರಗಳ ಮೂಲಕ, ವಾಕ್ಯ ರಚನೆ, ಪದಗಳ ಮೂಲಕ ಉತ್ತರವನ್ನು ನೆನಪಿಟ್ಟುಕೊಳ್ಳಿ ಹಾಗೆ ಮಾಡಿದರೆ, ಮನನ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಸೂಕ್ತ ಉತ್ತರವಷ್ಟೇ ಬರೆಯಿರಿ

ಬಹು ಆಯ್ಕೆಯ ಪ್ರಶ್ನೆಗಳನ್ನು ಹೊರತುಪಡಿಸಿದರೆ, ವಾಕ್ಯ ರಚಿಸಿ, ವಿವರಣಾತ್ಮಕವಾಗಿ ಬರೆಯುವ ಪ್ರಶನಗಳಿಗೆ, ಅಲ್ಲಿ ಕೇಳಿರುವಷ್ಟೇ ಉತ್ತರ ನೀಡಿ. ಅನಗತ್ಯ ಉತ್ತರ ಬರೆದರೆ, ಮಾಲ್ಯಮಾಪಕರಿಗೆ ಕಿರಿಕಿರಿಯಾಗಬಹುದು. ಅದರಿಂದ ನಿಮ್ಮ ಅಂಕಗಳ ಮೇಲೆ ಪರಿಣಾಮವಾಗಬಹುದು.

ಗುಂಪಾಗಿ ಚರ್ಚೆ ಮಾಡಿ

ಪರೀಕ್ಷೆಗೂ ಮೊದಲು ಓದುವ ಸಂದರ್ಭದಲ್ಲಿ ನಿಮಗೆ ಸೂಕ್ತ ಮತ್ತು ಆಪ್ತ ಗೆಳೆಯರ ಜತೆ ಒಟ್ಟಾಗಿ ಓದಿಕೊಳ್ಳಿ. ಅದರಲ್ಲಿ ನಿಮಗೆ ಗೊತ್ತಿರುವುದನ್ನು ಅವರಿಗೆ ಹೇಳಿಕೊಡಿ, ಗೊತ್ತಿಲ್ಲದಿರುವುದನ್ನು ಅವರಲ್ಲಿ ಕೇಳಿ ತಿಳಿದುಕೊಳ್ಳಿ. ಆದರೆ ಅನಗತ್ಯ ಹರಟೆ ಬೇಡ.

ಓದು, ವಿಶ್ರಾಂತಿಯನ್ನು ಸಮತೋಲನ ಮಾಡಿಕೊಳ್ಳಿ

ಪರೀಕ್ಷೆ ಸಮಯದಲ್ಲಿ ಸಾಕಷ್ಟು ಓದಬೇಕು ನಿಜ, ಅದರ ಜತೆಗೆ, ನಿದ್ರೆ ಮತ್ತು ನಿತ್ಯದ ಕೆಲಸಗಳಿಗೆ ಅಗತ್ಯವಿರುವಷ್ಟು ಸಮಯ ಕೊಡಿ. ಆರೋಗ್ಯ ಚೆನ್ನಾಗಿರಲು, ಅಗತ್ಯ ಸಮಯ ನಿದ್ರೆ ಮಾಡಿ ಅದಕ್ಕಾಗಿ ನೀವೇ ಒಂದು ಟೈಂ ಟೇಬಲ್ ಮಾಡಿಕೊಂಡು ಪಾಲಿಸಿ, ಓದು-ನಿದ್ರೆಗೆ ತೊಂದರೆಯಾಗದಂತೆ ನಿರ್ವಹಿಸಿ.

BIG BOSS

ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

Published

on

ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಅವರ ಹೆಸರು ಇನ್ನಷ್ಟು ಪ್ರಸಿದ್ಧಿಯಾಗುತ್ತದೆ. ದಿನಕ್ಕೊಂದು ಹೊಸ ಹೊಸ ಆಫರ್‌ಗಳು ಬರುತ್ತಲೇ ಇರುತ್ತದೆ. ಹೀಗಾಗಿ ಅದೆಷ್ಟೋ ಜನರು ಬಿಗ್‌ಬಾಸ್ ಮನೆಗೆ ನನಗೂ ಹೋಗಲು ಅವಕಾಶ ಸಿಗುತ್ತಿದ್ದರೆ ಒಳ್ಳೆಯದಿತ್ತು ಎಂದು ಬಯಸುತ್ತಾರೆ.

ಇನ್ನು ಬಿಗ್‌ಬಾಸ್ ಮನೆಗೆ ಹೋದವರಿಗೆ ಮೊದಲೇ ಪೇಮೆಂಟ್ ವಿಷಯವನ್ನು ಹೇಳುತ್ತಾರೆ. ಈ ಮೊದಲೇ ಹೆಸರು ಗಳಿಸಿದವರಿಗೆ ಸ್ವಲ್ಪ ಜಾಸ್ತಿ ಹಣವಿರುತ್ತದೆ. ಪ್ರತಿವಾರಕ್ಕೆ ಇಂತಿಷ್ಟು ಸಂಭಾವನೆ ಎಂದು ಅವರಿಗೆ ಸಿಗುತ್ತದೆ. ಅಲ್ಲದೇ ಬಿಗ್‌ಬಾಸ್ ಗೆದ್ದರೆ 50 ಲಕ್ಷ ಹಣವಿರುತ್ತದೆ. ಇದೀಗ ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಯಾರು ಗೊತ್ತಾ..?

 

ಹೌದು, ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆದವರು ಪುತ್ತೂರಿನ ಧನ್‌ರಾಜ್ ಆಚಾರ್ಯ. ಒಂದು ವಾರಕ್ಕೆ 30 ಸಾವಿರ ಸಂಭಾವನೆ ಸಿಗುತ್ತಿತ್ತು. ಬಿಗ್‌ಬಾಸ್ ಮನೆಯಲ್ಲಿ ಧನರಾಜ್ ಅವರು ಕೊನೆಯವರೆಗೂ ಇದ್ದರು. ಗ್ರ್ಯಾಂಡ್ ಫಿನಾಲೆಗೆ ಹೋಗುವ ಮೊದಲು ಎಲಿಮಿನೇಟ್ ಆದರು.

ಅಲ್ಲದೇ ಬಿಗ್‌ಬಾಸ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿದ್ದು ಸತ್ಯ ಧಾರಾವಾಹಿಯ ಗೌತಮಿ ಜಾದವ್ ಎಂದು ತಿಳಿದುಬಂದಿದೆ. ಬಿಗ್ ಬಾಸ್‌ ಮನೆಯಲ್ಲಿ ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಅವರ ಸ್ನೇಹ ಎಂಥದ್ದು ಎಲ್ಲರಿಗೂ ತಿಳಿದಿದೆ. ಇಬ್ಬರು ಕೂಡ ಜೀವಕ್ಕೆ ಜೀವದಂತೆ ಇದ್ದರು. ಹಾಗೆಯೇ ತನ್ನ ಕಾಮಿಡಿ ಮಾತುಗಳ ಮೂಲಕ ಧನ್‌ರಾಜ್ ವೀಕ್ಷಕರನ್ನು ಮನೋರಂಜಿಸುತ್ತಿದ್ದರು.

Continue Reading

LATEST NEWS

ಗೆಳತಿಗಾಗಿ ಕಳ್ಳನಾದ ಎಂಎಲ್ಎ ಮಗ !

Published

on

ಮಂಗಳೂರು/ಗುಜರಾತ್ : ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಇಲ್ಲೊಬ್ಬ ರಾಜಕೀಯ ಮುಖಂಡನ ಮಗನೇ ಕಳ್ಳನಾಗಿದ್ದಾನೆ. ಅಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

ಗುಜರಾತ್‌ನ ಮಾಜಿ ಶಾಸಕರೊಬ್ಬರ ಮಗನ ಇತ್ತೀಚಿನ ಕೃತ್ಯಗಳ ಬಗ್ಗೆ ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಗೆಳತಿಗಾಗಿ ಎಂಎಲ್‌ಎ ಮಗ ಕಳ್ಳನಾಗಿ ಬದಲಾಗಿದ್ದಾನೆ. ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಒಂದು ಕಳ್ಳತನ ನಡೆದಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಳ್ಳನನ್ನು ಗುರುತಿಸಿ ಬಂಧಿಸಲಾಗಿದೆ. ತನಿಖೆಯಲ್ಲಿ ಆತ ಮಾಜಿ ಶಾಸಕ ವಿಜೇಂದ್ರ ಸಿಂಗ್ ಚಂದ್ರಾವತ್ ಅವರ ಪುತ್ರ ಪ್ರದ್ಯುಮ್ನ ಸಿಂಗ್ ಚಂದ್ರಾವತ್ ಎಂದು ತಿಳಿದುಬಂದಿದೆ.

ಕಳೆದ ತಿಂಗಳು 25 ರಂದು ಪ್ರದ್ಯುಮ್ನ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡಿದ್ದ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಶಂಕಿತನನ್ನು ಗುರುತಿಸಿ ಬಂಧಿಸಿದಾಗ ಸತ್ಯ ಹೊರಬಂದಿತು.

ಗೆಳತಿಯ ಆಸೆ ಪೂರೈಸಲು ಕಳ್ಳತನ

ಪೊಲೀಸರ ವಿಚಾರಣೆಯ ಬಳಿಕ ಆರೋಪಿ, ತನ್ನ ಗೆಳತಿಯ ಅಗತ್ಯಗಳನ್ನು ಪೂರೈಸಲು ನಾನು ಈ ಕೆಲಸ ಮಾಡಬೇಕಾಗಿ ಬಂತು ಎಂದು ಆರೋಪಿ ಹೇಳಿಕೊಂಡಿದ್ದಾನೆ. ತನಗೆ ಮಾಸಿಕ 15,000 ರೂ. ಸಂಬಳ ಬರುತ್ತಿದ್ದು, ಆ ಹಣದಿಂದ ತನ್ನ ಗೆಳತಿಯ ಐಷಾರಾಮಿ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ತಾನು ಶಾಸಕರ ಮಗನಾಗಿದ್ದರೂ ಮನೆಯಿಂದ ಓಡಿಹೋಗಿದ್ದಾಗಿ ಪ್ರದ್ಯುಮ್ನ ಪೊಲೀಸರಿಗೆ ಹೇಳಿದ್ದಾನೆ.

ಸದ್ಯ ಆರೋಪಿ ವಿರುದ್ದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಸ್ತುತ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಇದನ್ನೂ ಓದಿ: ಆ ಒಂದು ಸೆಲ್ಫಿ ಸಾವಿಗೆ ಆಹ್ವಾನ; ಕುಟುಂಬ ಹಾಗೂ ಸ್ನೇಹಿತರ ಎದುರೇ ಹಾರಿ ಹೋದ ಪ್ರಾಣಪಕ್ಷಿ

ವಿಜೇಂದ್ರ ಸಿಂಗ್ ಚಂದ್ರಾವತ್ 2008ರಲ್ಲಿ ಮಾನಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದರು. ಆ ಸಮಯದಲ್ಲಿ ಅವರು ಕಾಂಗ್ರೆಸ್‌ನಲ್ಲಿದ್ದರು. ನಂತರ, ಅವರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಬಿಜೆಪಿ ಸೇರಿದರು. ಮಗನ ಕಳ್ಳತನದ ಕೃತ್ಯದಿಂದ ತಂದೆ ತಲೆ ತಗ್ಗಿಸುವಂತಾಗಿದೆ.

 

 

Continue Reading

LATEST NEWS

ಬ್ರಹ್ಮಾವರ: ಮರಕ್ಕೆ ಕಾರು ಡಿ*ಕ್ಕಿ; ಮಹಿಳೆ ಸಾ*ವು, ಇಬ್ಬರಿಗೆ ಗಂ*ಭೀರ ಗಾ*ಯ

Published

on

ಬ್ರಹ್ಮಾವರ :  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸಾ*ವನ್ನಪ್ಪಿ, ಇಬ್ಬರು ಗಂಭೀ*ರ ಗಾ*ಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಸಮೀಪ ಕಾಡೂರಿನಲ್ಲಿ ನಡೆದಿದೆ.

ಬೀಜಾಡಿಯ ಜಯಲಕ್ಷ್ಮೀ(68) ಮೃ*ತಪಟ್ಟ ಮಹಿಳೆ. ರಾಮಚಂದ್ರ ಭಟ್, ಸುಜಾತಾ, ಮಂಗಳ, ಪ್ರೇಮಾ ಎಂಬವರು ಗಂ*ಭೀರವಾಗಿ ಗಾ*ಯಗೊಂಡಿದ್ದು, ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಬ್ಬಿನಾಲೆ ಜಾತ್ರೆ ಮುಗಿಸಿ ಈ ಐವರು ಕಾರಿನಲ್ಲಿ ಬೆಳಿಗ್ಗೆ ಮಂದಾರ್ತಿ, ಸಾಲಿಗ್ರಾಮ, ಹಾಗೂ ಕೋಟ ಅಮೃತೇಶ್ವರಿ  ದೇವಸ್ಥಾನಕ್ಕೆಂದು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಅಪ*ಘಾತ ಸಂಭವಿಸಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page