Connect with us

International news

ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!

Published

on

ಮಂಗಳೂರು : ಎಲನ್ ಮಸ್ಕ್ ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿ. ಮಸ್ಕ್ ಅಮೆರಿಕಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿ, ಭಾರತದ ಚುನಾವಣಾ ಪ್ರಕ್ರಿಯೆಯನ್ನು ಹೊಗಳಿದ್ದಾರೆ.


ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಮಸ್ಕ್, ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಅದ್ಬುತವಾಗಿ ನಡೆಯುತ್ತದೆ. ಒಂದೇ ಒಂದು ದಿನದಲ್ಲಿ ಇಡೀ ಲೋಕಸಭಾ ಚುನಾವಣೆಯ ಮತ ಎಣಿಕೆ ಮಾಡಿದ ಶ್ರೇಯಸ್ಸು ಭಾರತದ್ದು ಎಂದಿದ್ದಾರೆ.

ಇದನ್ನೂ ಓದಿ: ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !
ಕ್ಯಾಲಿಫೋರ್ನಿಯಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿರುವ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಈ ಪೊಸ್ಟ್ ಹಾಕಿದ್ದಾರೆ. ಅದರ ಅಡಿಬರಹದಲ್ಲಿ, ಭಾರತದಲ್ಲಿ ಚುನಾವಣೆ ಎಂದರೆ ವಂಚನೆಯೇ ಮೊದಲ ಗುರಿ ಇರುವಲ್ಲಿ ಒಂದೇ ಒಂದು ದಿನದಲ್ಲಿ 64 ಕೋಟಿ ಮತಗಳನ್ನು ಎಣಿಕೆ ಮಾಡಿದ್ದಾರೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಕೂಡ ಮತಗಳು ಎಣಿಕೆ ಆಗುತ್ತಲೇ ಇವೆ ಎಂದು ಬರೆದಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಮತ ಎಣಿಕೆ ಕಾರ್ಯ ವಿಳಂಬ ಯಾಕೆ :
ಅಮೆರಿಕಾದಲ್ಲಿ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದೆ. ಇದನ್ನು ಎಣಿಕೆ ಮಾಡುವ ಅನೇಕ ರೀತಿಯ ಪ್ರಕ್ರಿಯೆಗಳನ್ನು ಮಾಡುವ ಕಾರಣ ಚುನಾವಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಈ ಮೇಲ್ ಇನ್ ವೋಟಿಂಗ್ ಗಳು ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ವಿಳಂಬ ನೀತಿಯನ್ನು ಎಲನ್ ಮಸ್ಕ್ ಟೀಕಿಸಿ ಭಾರತವನ್ನು ಹೊಗಳಿದ್ದಾರೆ.
ಅಮೇರಿಕಾದಲ್ಲಿ ಹಿಂದಿನಿಂದಲೂ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದ್ದು, ಈಗಲೂ ಮುಂದುವರಿದುಕೊಂಡು ಬಂದಿದೆ.

International news

ಶೇನ್ ವಾರ್ನ್ ಸಾವಿಗೆ ಕಾರಣವಾಯಿತೇ ‘ಕಾಮಗ್ರ’ ಮಾದಕ ದ್ರವ್ಯ?

Published

on

ಮಂಗಳೂರು/ಬ್ಯಾಂಕಾಕ್: ಮಾರ್ಚ್ 2022ರಲ್ಲಿ ಶೇನ್ ವಾರ್ನ್ ಅವರ ಸಾವಿನ ಸುದ್ದಿ ಕ್ರಿಕೆಟ್ ಜಗತ್ತಿಗೆ ಬರ ಸಿಡಿಲಿನಂತೆ ಬಂದೆರಗಿತ್ತು. ಅವರು ನಿಧ*ನವಾದ ಮೂರು ವರ್ಷಗಳ ಬಳಿಕ ಇತ್ತೀಚೆಗೆ ವರದಿಯೊಂದು ಬಹಿರಂಗಗೊಂಡಿದ್ದು, ವಾರ್ನ್ ಮೃ*ತದೇಹ ಪತ್ತೆಯಾದ ಜಾಗದಲ್ಲಿ ‘ಬಾಟಲಿ’ಯೊಂದು ದೊರೆತಿರುವುದರ ಕುರಿತ ರಹಸ್ಯವನ್ನು ವರದಿ ದೃಢಪಡಿಸಿದೆ.


ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ಥೈಲ್ಯಾಂಡ್‌ನಲ್ಲಿದ್ದ ಶೇನ್ ವಾರ್ನ್ ಇದ್ದಕ್ಕಿದ್ದಂತೆ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾ*ವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯನ್ ನ್ಯೂಸ್ ಚಾನೆಲ್ ಫಾಕ್ಸ್ ಸ್ಪೋರ್ಟ್‌ ವರದಿ ಮಾಡಿತ್ತು. ವಾರ್ನ್ ಅವರು ಥಾಯ್ಲೆಂಡ್‌ನ ವಿಲ್ಲಾದಲ್ಲಿ ನೆಲೆಸಿದ್ದರು. ಬೆಳಿಗ್ಗೆ ಅವರು ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ವೈದ್ಯಕೀಯ ತಂಡದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಬದುಕುಳಿಸಲು ಸಾಧ್ಯವಾಗಿರಲಿಲ್ಲ ಎಂದು ವಾರ್ನ್​ ಅವರ ಆಪ್ತ ವಲಯ ಹೇಳಿಕೊಂಡಿತ್ತು.

ವಾರ್ನ್ ಸಾ*ವಿನ ಸುತ್ತ ಅನುಮಾನದ ಹುತ್ತ
ಇತ್ತೀಚಿನ ವರದಿಯೊಂದು ಶೇನ್ ವಾರ್ನ್ ಅವರ ಸಾವಿನ ಕುರಿತು ರಹಸ್ಯವೊಂದನ್ನು ತೆರೆದಿಟ್ಟಿದ್ದು, ಶೇನ್ ವಾರ್ನ್ ಅವರ ಮೃತದೇಹ ಪತ್ತೆಯಾದ ಜಾಗದಲ್ಲಿ ಅನುಮಾನ ಹುಟ್ಟಿಸುವಂತಹ ಬಾಟಲಿಯೊಂದು ಕಾಣಿಸಿಕೊಂಡಿತ್ತು. ಇದರಲ್ಲಿ ‘ಸೂಪರ್-ಸ್ಟ್ರಾಂಗ್ ಸೆಕ್ಸ್ ಡ್ರಗ್’ ಎಂದು ಹೇಳಲಾಗುವ ಕಾಮ ಉದ್ರೇಕ ಮಾದಕ ದ್ರವ್ಯ ಪತ್ತೆಯಾಗಿದ್ದು, ಇದು ಶೇನ್ ವಾರ್ನ್ ಅವರ ಸಾ*ವಿಗೆ ಪ್ರಮುಖ ಕಾರಣವಾಗಿರಬಹುದು ಎಂದು ಹೇಳಿದೆ.

ಡೈಲಿ ಮೇಲ್ ವರದಿಯ ಪ್ರಕಾರ, ದಿವಂಗತ ಕ್ರಿಕೆಟಿಗ ಶೇನ್ ವಾರ್ನ್ ಅವರ ಮೃತದೇಹದ ಪಕ್ಕದಲ್ಲಿ ‘ಕಾಮಗ್ರ’ ಎಂಬ ಮಾದಕವಸ್ತು ಪತ್ತೆಯಾಗಿತ್ತು. ಆದರೆ ಪೊಲೀಸರ ವರದಿಯಲ್ಲಿ ಈ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ.

ಆಸ್ಟ್ರೇಲಿಯಾದ ಹಿರಿಯ ಅಧಿಕಾರಿಗಳ ಕೈವಾಡ
ಈ ಕುರಿತು ಹೆಸರು ಬಹಿರಂಗಪಡಿಸದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು,” ನಮ್ಮ ಹಿರಿಯ ಅಧಿಕಾರಿಗಳು ಮೃತದೇಹದ ಪಕ್ಕದಲ್ಲೇ ಸಿಕ್ಕ ಬಾಟಲಿಯನ್ನು ತೆಗೆದುಹಾಕಲು ಸೂಚಿಸಿದರು. ಅಧಿಕಾರಿಗಳಿಗೆ ಆಗಾಗೇ ಮೇಲಿನಿಂದ ಒತ್ತಡ ಬರುತ್ತಿದ್ದವು. ಈ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಹಿರಿಯ ಅಧಿಕಾರಿಗಳ ಕೈವಾಡ ಇರಬಹುದು ಎಂದು ನಾನು ಭಾವಿಸುತ್ತೇನೆ”.

“ಕೊನೆಯಲ್ಲಿ ವಾರ್ನ್ ಅವರಿಗೆ ಹೃದಯಾಘಾತವಾಗಿದೆ ಎಂದು ಅಧಿಕೃತ ವರದಿ ಹೊರಬಿತ್ತು ಮತ್ತು ಅದಕ್ಕೆ ಕಾರಣವೇನು ಎಂಬುದರ ಕುರಿತು ಯಾವುದೇ ವರದಿ ಬಂದಿಲ್ಲ. ಬಾಟಲಿಯಲ್ಲಿ ಪತ್ತೆಯಾದ ಸೂಪರ್ ಸ್ಟ್ರಾಂಗ್ ಸೆಕ್ಸ್ ಡ್ರಗ್ ಎಂಬ ಮಾದಕ ವಸ್ತು ಸೂಕ್ಷ್ಮ ವಿಷಯವಾಗಿ ಉಳಿದು ಬಿಟ್ಟಿದೆ. ಇದನ್ನು ತನಿಖೆ ನಡೆಸಲು ಯಾರು ಮುಂದೆ ಬರುವುದಿಲ್ಲ. ಏಕೆಂದರೆ ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ” ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಕ್ರಿಕೆಟ್ ಮಾಂತ್ರಿಕ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತಕ್ಕೆ ಬಲಿ..!

ಕ್ರಿಕೆಟ್ ದಂತಕಥೆ ಸಾ*ವಿಗೆ ಕಾರಣ ಏನು?
ಅಲ್ಲದೆ ಘಟನಾ ಸ್ಥಳದಲ್ಲಿ ವಾಂತಿ ಮತ್ತು ರಕ್ತದ ಕಲೆ ಪತ್ತೆಯಾಗಿತ್ತು. ಇದನ್ನು ಯಾರಿಗೂ ತಿಳಿಯದಂತೆ ಮೊದಲೇ ಸ್ವಚ್ಛಮಾಡಲಾಗಿತ್ತು ಎಂದು ಹೇಳಲಾಗಿದೆ.

ಆದರೆ ‘ಸೂಪರ್ ಸ್ಟ್ರಾಂಗ್ ಸೆಕ್ಸ್ ಡ್ರಗ್’ ಎಂಬ ಕಾಮ ಉದ್ರೇಕ ಮಾದಕ ದ್ರವ್ಯ ಥೈಲ್ಯಾಂಡ್‌ನಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಗಿದ್ದು, ಆದರೂ ಕೆಲವು ಕಡೆಗಳಲ್ಲಿ ಕಳ್ಳ ಮಾರಾಟ ದಂಧೆ ನಡೆಯುತ್ತಿದೆ. ಈ ಮಾದಕ ದ್ರವ್ಯ ಹೃದಯ ಸಮಸ್ಯೆ ಇರುವವರಿಗೆ ತುಂಬಾ ಅಪಾಯಕಾರಿಯಾಗಿದ್ದು, ಇದರಿಂದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.

ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಾರ್ನ್ ‘ಸೂಪರ್ ಸ್ಟ್ರಾಂಗ್ ಸೆಕ್ಸ್ ಡ್ರಗ್’ ಎಂಬ ಕಾಮ ಉದ್ರೇಕ ಮಾದಕ ದ್ರವ್ಯ ಸೇವಿಸುತ್ತಿದ್ದರೆ ಎಂಬ ಅನುಮಾನ ಈ ವರದಿಯ ಬಳಿಕ ಉಟ್ಟಿಕೊಂಡಿದೆ.

ಆದರೆ ಧೂಮಪಾನ, ಕಳಪೆ ಆಹಾರ ಕ್ರಮಗಳೇ ವಾರ್ನ್ ಅವರ ಸಾವಿಗೆ ಕಾರಣ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ವೈದ್ಯರೊಬ್ಬರು ಹೇಳಿದ್ದರು.

 

 

Continue Reading

International news

ಎಲನ್ ಮಸ್ಕ್ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಮಹಿಳೆ

Published

on

ಮಂಗಳೂರು/ವಾಷಿಂಗ್ಟನ್: ಕೆಲದಿನಗಳ ಹಿಂದೆ ಆಶ್ಲೇ ಸೇಂಟ್‌ ಕ್ಲೇರ್  ಎಂಬ ಮಹಿಳೆ ತನ್ನ 5 ತಿಂಗಳ ಮಗುವಿಗೆ ಎಲಾನ್ ಮಸ್ಕ್ ತಂದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಮಹಿಳೆ,  ಮಸ್ಕ್ ಅವರೇ 5 ತಿಂಗಳ ಮಗುವಿನ ತಂದೆ ಎಂದು ಘೋಷಿಸ ಬೇಕು. ಅದಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು ಎಂದು ಅಮೆರಿಕದ ಮ್ಯಾನ್‌ಹಟನ್‌ನ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. 2024ರ ಜನವರಿಯಲ್ಲಿ ಸೈಂಟ್ ಬರ್ತಾಸ್ ಎಂಬಲ್ಲಿಗೆ ತೆರಳಿದ್ದಾಗ ಮಗುವಿಗೆ ಜನ್ಮ ನೀಡಿದ್ದೆ. ಮಸ್ಕ್ 3 ಬಾರಿ ಮಗುವನ್ನು ನೋಡಿದ್ದರು. ನಂತರ ಮಗುವಿನ ಬಗ್ಗೆ ವಿಚಾರಿಸಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಂ*ಬ್ ಬೆದರಿಕೆ; ನವದೆಹಲಿಯತ್ತ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶ

ಏನಿದು ಮಸ್ಕ್ ವಿರುದ್ದ ಮಹಿಳೆ ಮಾಡಿದ ಆರೋಪ ?

ಸಂಪ್ರದಾಯವಾದಿ ಪ್ರಭಾವಿ ಮಹಿಳೆ ಆಶ್ಲೇ ಸೇಂಟ್ ಕ್ಲೇರ್ ಅವರ ಐದು ತಿಂಗಳ ಮಗುವಿನ ತಂದೆ ಎಲನ್‌ ಮಸ್ಕ್ ಎಂದು ಹೇಳಿಕೊಂಡಿದ್ದರು. ಈ ಆರೋಪಗಳ ಬಗ್ಗೆ ಮೌನ ಮುರಿದ ಟೆಸ್ಲಾ ಸಿಇಒ ಎಲನ್ ಮಸ್ಕ್ , ಈ ಪೋಸ್ಟ್‌ಗೆ ವಾವ್ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಆಶ್ಲೇ ಸೇಂಟ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ,”ಐದು ತಂಗಳ ಹಿಂದೆ, ನಾನು ಹೊಸ ಮಗುವನ್ನು ಜಗತ್ತಿಗೆ ಸ್ವಾಗತಿಸಿದೆ. ಎಲಾನ್ ಮಸ್ಕ್ ಆ ಮಗುವಿನ ತಂದೆ” ಎಂದು ಲ್ಯಾಟಿನ್ ನುಡಿಗಟ್ಟಿನೊಂದಿಗೆ ಹೇಳಿದ್ದರು.

“ಮಗುವಿನ ಸುರಕ್ಷತೆಗಾಗಿ ಮಾಹಿತಿಯನ್ನು ಖಾಸಗಿಯಾಗಿಟ್ಟಿದ್ದೆ ಆದರೆ ಟ್ಯಾಬ್ಲಾಯ್ಡ್‌ಗಳು ಸುದ್ದಿಯನ್ನು ಪ್ರಕಟಿಸಲು ತಯಾರಿ ನಡೆಸುತ್ತಿವೆ ಎಂದು ತಿಳಿದ ನಂತರ ಸಾರ್ವಜನಿಕವಾಗಿ ಪ್ರಕಟಿಸಲು ನಿರ್ಧರಿಸಿದೆ” ಎಂದು ಅವರು ಹೇಳಿದ್ದಾರೆ. “ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಾನು ಇದನ್ನು ಈ ಹಿಂದೆ ಬಹಿರಂಗಪಡಿಸಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ, ಟ್ಯಾಬ್ಲಾಯ್ಡ್ ಮಾಧ್ಯಮ ಹಾನಿಯನ್ನು ಲೆಕ್ಕಿಸದೆ ಹಾಗೆ ಸುದ್ದಿ ಪ್ರಕಟಿಸಲು ಉದ್ದೇಶಿಸಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಆಶ್ಲೇ ಸೇಂಟ್ ಬರೆದಿದ್ದರು.

Continue Reading

International news

ಪಾಕ್ ವಾಯು ಪ್ರದೇಶದಲ್ಲಿ 46 ನಿಮಿಷ ಹಾರಟ ನಡೆಸಿದ ಮೋದಿ ವಿಮಾನ! ಹೇಗಿತ್ತು ಭದ್ರತೆ ?

Published

on

ಮಂಗಳೂರು/ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ವಿಮಾನ ನವದೆಹಲಿಯಿಂದ ಪ್ಯಾರಿಸ್‌ಗೆ ಪ್ರಯಾಣಿಸುವ ವೇಳೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿ ಸಂಚಾರ ನಡೆಸಿದೆ ಎಂದು ತಿಳಿದು ಬಂದಿದೆ.

ಅಫ್ಘಾನ್ ವಾಯುಪ್ರದೇಶ ಮುಚ್ಚಿದ್ದರಿಂದ ಇಂತಹದೊಂದು ಬೆಳವಣಿಗೆ ನಡೆದಿದೆ. ಇದರಿಂದಾಗಿ, ಭಾರತೀಯ ವಿಮಾನವು ಪಾಕಿಸ್ತಾನದ ಅನುಮತಿಯೊಂದಿಗೆ ಅಲ್ಲಿನ ವಾಯುಪ್ರದೇಶದ ಗಡಿಯೊಳಗೆ ಹಾರಬೇಕಾಯಿತು. ಪ್ರಧಾನಿ ಮೋದಿ ಇದ್ದ ವಿಮಾನವು ಪಾಕಿಸ್ತಾನದ ಪ್ರದೇಶಗಳಾದ ಶೇಖ್‌ಪುರ, ಹಫೀಜಾಬಾದ್, ಚಕ್ವಾಲ್ ಮತ್ತು ಕೊಹಾಟ್ ಮೂಲಕ ಹಾದು ಹೋಗಿ ಸುಮಾರು 46 ನಿಮಿಷಗಳ ಕಾಲ ಪಾಕಿಸ್ತಾನದ ವಾಯುಪ್ರದೇಶದಲ್ಲಿತ್ತು ಎಂದು ತಿಳಿದು ಬಂದಿದೆ.

ಕಟ್ಟೆಚ್ಚರ ವಹಿಸಿದ ಭದ್ರತಾ ಪಡೆಗಳು

ದೇಶದ ಯಾವುದೇ ಉನ್ನತ ಮಟ್ಟದ ನಾಯಕರ ಅಂತರರಾಷ್ಟ್ರೀಯ ಪ್ರಯಾಣದ ಅವಧಿಯಲ್ಲಿ ಭದ್ರತೆ ವಿಚಾರದಲ್ಲಿ ಕಟ್ಟುನಿಟ್ಟಿನ ಶಿಷ್ಟಾಚಾರ ಪಾಲಿಸಲಾಗುಹತ್ತದೆ. ಒಂದು ರಾಷ್ಟ್ರದ ಮುಖ್ಯಸ್ಥರು ಇನ್ನೊಂದು ದೇಶದ ಮೇಲೆ ಪ್ರಯಾಣಿಸುವಾಗ ವಿಮಾನ ಭದ್ರತೆಗೆ ಸಂಬಂಧಿಸಿದಂತೆ ಸಮನ್ವಯವಿರುತ್ತದೆ. ಮೋದಿ ಅವರಿದ್ದ ವಿಮಾನ ಪಾಕಿಸ್ತಾನದ ಮೇಲೆ ಹಾದು ಹೋಗುವಾಗ ಭಾರತ ಮತ್ತು ಪಾಕ್ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿದ್ದವು.

ಇದನ್ನೂ ಓದಿ: ದುಬೈನಿಂದ ಹೊರಟ ವ್ಯಕ್ತಿ ನದಿಗೆ ಬಿದ್ದರೂ ಈಜಿ ಮನೆ ಸೇರಿದ!

ಇದೇ ಮೊದಲಲ್ಲ..!

ಪ್ರಧಾನಿ ಮೋದಿಯವರ ವಿಮಾನ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಆಗಸ್ಟ್ 2024ರಲ್ಲಿ ಉಕ್ರೇನ್‌ನಿಂದ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರಿದ್ದ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿ 46 ನಿಮಿಷಗಳ ಕಾಲ ಅಲ್ಲಿಯೇ ಸಂಚಾರ ನಡೆಸುತ್ತಿತ್ತು. ವಿಮಾನವು ಮೊದಲು ಚಿತ್ರಲ್ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿ ಅಮೃತಸರಕ್ಕೆ ಹೋಗುವ ಮೊದಲು ಇಸ್ಲಾಮಾಬಾದ್ ಮತ್ತು ಲಾಹೋರ್‌ನ ವಾಯು ನಿಯಂತ್ರಣ ವಲಯಗಳ ಮೂಲಕ ಹಾದುಹೋಗಿತ್ತು.

ವಿಮಾನದಲ್ಲಿದೆ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು

ಬೋಯಿಂಗ್ 777 ವಿಮಾನವು ಭಾರತದ ಉನ್ನತ ನಾಯಕರ ಭದ್ರತೆಗಾಗಿ ಇದೆ. ಇದೇ ರೀತಿ ಪ್ರಧಾನಿ ಮೋದಿಯವರ ವಿಮಾನ ‘ಏರ್‌ ಇಂಡಿಯಾ ಒನ್’ ಸಾಮಾನ್ಯ ಫ್ಲೈಟ್ ಅಲ್ಲ. ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು ಮತ್ತು ಅಡ್ವಾನ್ಸ್ಡ್ ಸೇಫ್ಟಿ ಫೀಚರ್ಸ್ ಹೊಂದಿದೆ. ಇದನ್ನು ಏರ್ ಇಂಡಿಯಾ ಪೈಲಟ್‌ಗಳಿಗಿಂತ ಭಾರತೀಯ ಐಎಎಫ್‌ನಿಂದ ತರಬೇತಿ ಪಡೆದ ಪೈಲಟ್‌ಗಳು ಆಪರೇಟ್ ಮಾಡುತ್ತಾರೆ. ಇದು ವೈಮಾನಿಕ ಬೆದರಿಕೆಗಳನ್ನು ನಿಭಾಯಿಸುತ್ತದೆ. ಅಗತ್ಯವಿದ್ದರೆ ರಕ್ಷಣಾತ್ಮಕ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ  ಹೊಂದಿದೆ.

ಎರಡು ದೇಶಗಳ ನಡುವೆ ಉದ್ವಿಗ್ನತೆಯ ಹೊರತಾಗಿಯೂ ಪಾಕಿಸ್ತಾನ ಅಂತರರಾಷ್ಟ್ರೀಯ ವಾಯುಯಾನ ನಿಯಮಗಳನ್ನು ಪಾಲಿಸಿದೆ. ಪಾಕಿಸ್ತಾನ ಕೂಡ ತನ್ನ ವಾಯುಪ್ರದೇಶದ ಮೂಲಕ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page