Connect with us

LATEST NEWS

ಕುಗ್ರಾಮ ಯುವತಿಯ ಆಕಾಶದೆತ್ತರ ಹಾರುವ ಕನಸು ನನಸು;

Published

on

ತಿರುವನಂತಪುರಂ:ಕೇರಳದ ತಿರುವನಂತಪುರಂನ ಕುಗ್ರಾಮದಿಂದ ಬಂದ 23 ವರ್ಷದ ಯುವತಿ ಜೆನಿ ಜೆರೋಮ್​​ ಏರ್​ ಅರೇಬಿಯಾದ ಜಿ 9 449 ವಿಮಾನದಲ್ಲಿ ಸಹ ಪೈಲಟ್​ ಆಗಿ ಕಾರ್ಯನಿರ್ವಹಿಸಿದ್ದಾರೆ.

ಶಾರ್ಜಾದಿಂದ ತಿರುವನಂತಪುರಂ ಮಾರ್ಗದಲ್ಲಿ ಸಹ ಪೈಲೆಟ್​ ಆಗಿ ಕಾರ್ಯನಿರ್ವಹಿಸುವ ಮೂಲಕ ಕೇರಳದ ಮೊದಲ ಮಹಿಳಾ ವಾಣಿಜ್ಯ ಪೈಲಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ತನ್ನ ಪೋಷಕರೊಂದಿಗೆ ಅಜ್ಮಾನ್​ನಲ್ಲಿ ವಾಸವಿರುವ ಜೆನಿ ಬಾಲ್ಯದಿಂದಲೇ ಪೈಲಟ್​ ಆಗುವ ಕನಸನ್ನ ಹೊಂದಿದ್ದರು. ಇದೀಗ ತಮ್ಮ ತವರು ರಾಜ್ಯದಲ್ಲಿ ಕೋ ಪೈಲಟ್​ ಆಗಿ ಕಾರ್ಯನಿರ್ವಹಿಸುವ ಮೂಲಕ ಕನಸನ್ನ ನನಸು ಮಾಡಿಕೊಂಡಿದ್ದಾರೆ.ಜೆನಿಯ ಈ ಸಾಧನೆಗೆ ತಿರುವನಂತಪುರಂ ಸಂಸದ ಶಶಿ ತರೂರ್​ ಸೇರಿದಂತೆ ಸಾಕಷ್ಟು ಮಂದಿ ಸೋಶಿಯಲ್​ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.

ವಾಣಿಜ್ಯ ವಿಮಾನದಲ್ಲಿ ಮೊದಲ ಬಾರಿಗೆ ಸಹ ಪೈಲಟ್​ ಆಗಿ ಸೇವೆ ಸಲ್ಲಿಸಿದ ತಿರುವನಂತಪುರಂನ ಕೊಚಿತೊರಾ ಗ್ರಾಮದ ಜೆನಿ ಜೆರೋಮ್​ಗೆ ನನ್ನ ಅಭಿನಂದನೆಗಳು.

ಮೀನುಗಾರಿಕೆಯನ್ನ ನೆಚ್ಚಿಕೊಂಡು ಬಂದ ಪುಟ್ಟ ಗ್ರಾಮಕ್ಕೆ ಸೇರಿದ ಈ ಹೆಣ್ಣುಮಗಳು ಇದೀಗ ಶಾರ್ಜಾದಿಂದ ತಿರುವನಂತಪುರಂವರೆಗೆ ಏರ್​ ಅರೇಬಿಯಾ ವಿಮಾನದಲ್ಲಿ ಸಹ ಪೈಲಟ್​ ಆಗಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಬಾಲ್ಯದ ಕನಸನ್ನ ನನಸು ಮಾಡಿಕೊಂಡಿದ್ದಾರೆ.

ಈಕೆ ನಿಜಕ್ಕೂ ಹೆಣ್ಣುಮಕ್ಕಳಿಗೆ  ಒಂದು ಸ್ಪೂರ್ತಿ ಎಂದು ಶಶಿ ತರೂರ್​ ಟ್ವೀಟ್ ಮಾಡಿದ್ದಾರೆ .  ಈ ವಿಚಾರವಾಗಿ ಮಾತನಾಡಿರುವ ಜೆನಿ ಸೋದರ ಸಂಬಂಧಿ ಶೆರಿನ್​, ಜೆನಿಗೆ ಹಾರಾಟದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು.

ಪೈಲಟ್​ ಆಗೋದು ಆಕೆಯ ಬಾಲ್ಯದ ಕನಸು. ಕೇವಲ ಜೆನಿ ಮಾತ್ರವಲ್ಲದೇ ಆಕೆಯ ತಂದೆ ಜೆರೋಮ್​ ಸಹ ಮಗಳನ್ನ ಪೈಲಟ್​ ಮಾಡಬೇಕೆಂಬ ಕನಸನ್ನ ಹೊಂದಿದ್ದರು ಎಂದು ಹೇಳಿದ್ದಾರೆ.

FILM

ವೀಕ್ಷಕರಿಗೆ ಗುಡ್​ ಬೈ ಹೇಳಲು ಮುಂದಾದ ಕನ್ನಡದ ಟಾಪ್ ಸೀರಿಯಲ್ ಸೀತಾರಾಮ

Published

on

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಾಕಷ್ಟು ಜನಪ್ರಿಯ ಧಾರಾವಾಹಿಗಳಲ್ಲಿ ಸೀತಾರಾಮ ಧಾರಾವಾಹಿಯು ಕೂಡ ಒಂದು. ಇತ್ತೀಚೆಗಂತೂ ಈ ಧಾರವಾಹಿ ಸಖತ್‌ ಆಗಿ ಸೌಂಡ್‌ ಮಾಡಿತ್ತಾ ಪ್ರೇಕ್ಷಕರ ಗಮನ ಸೆಳೆದಿತ್ತು. ಆದರೆ ಇದೀಗ ಸೀತಾರಾಮ ಧಾರಾವಾಹಿಯು ತನ್ನ ಕಥೆಗೆ ಅಂತ್ಯ ಹಾಡುತ್ತಿದೆ.

ಹೌದು.. 2023 ಜುಲೈ 17ರಂದು ಸೀತಾ ರಾಮ ಧಾರಾವಾಹಿ ತೆರೆಗೆ ಬಂದಿತ್ತು. ಆದ್ರೆ 2025ಕ್ಕೆ ವೀಕ್ಷಕರಿಗೆ ಗುಡ್‌ ಬೈ ಹೇಳುತ್ತಿದೆ. ಈಗಾಗಲೇ 400 ಎಪಿಸೋಡ್‌ಗಳನ್ನು ಪೂರೈಸಿದೆ. ಮೇ 20ರಂದು ಈ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್‌ ಮುಗಿಸಿದೆ. ಇಡೀ ತಂಡದವರು ಕೇಕ್‌ ಕಟ್‌ ಮಾಡಿ, ಸೀರಿಯಲ್‌ಗೆ ಮುಕ್ತಾಯ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಎಲ್ಲರೂ ಭಾವುಕರಾಗಿದ್ದಾರೆ.

ಕೊನೆಯ ದಿನದ ಶೂಟಿಂಗ್‌ನಲ್ಲಿ ನಟ ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ ಎಸ್‌, ಕಲಾಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್‌, ಪೂಜಾ ಲೋಕೇಶ್‌, ಜಯದೇವ್‌ ಮೋಹನ್‌, ಅಶೋಕ್‌ ಶರ್ಮಾ, ರೀತು ಸಿಂಗ್‌ ನೇಪಾಳ, ಪೂರ್ಣಚಂದ್ರ ಮುಂತಾದವರು ಭಾಗವಹಿಸಿದ್ದರು.

ಇದನ್ನೂ ಓದಿ: ಐಪಿಎಲ್ 2025: ಎಲ್ಲಿ ನಡೆಯಲಿದೆ ಗೊತ್ತಾ ಪ್ಲೇಆಫ್‌ – ಫೈನಲ್ ಪಂದ್ಯ?

ಇನ್ನು ಸೀತಾರಾಮ ಧಾರಾವಾಹಿಯ ನಟಿ ವೈಷ್ಣವಿ ಗೌಡ ತಮ್ಮ ಇನ್ಸ್‌ಸ್ಟಾಗ್ರಾಂ ಪೇಜ್‌ನಲ್ಲಿ ಸೀರಿಯಲ್ ಬಗ್ಗೆ ಬರೆದುಕೊಂಡಿದ್ದಾರೆ. “ಈ ಅಂತ್ಯವು ಉತ್ತಮವೊಂದರ ಆರಂಭ ಮಾತ್ರ. ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಪ್ರಾಜೆಕ್ಟ್‌ಗಳಲ್ಲಿ ಇದು ಒಂದಾಗಿದೆ. ಇದನ್ನು ಮಾಡಿದವರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಸೀತಾ ಎಂದು ಸಹಿ ಹಾಕುತ್ತಿದ್ದೇನೆ. ಆದರೆ ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡುತ್ತೇನೆ” ಅಂತ ಹೇಳಿಕೊಂಡಿದ್ದಾರೆ.

Continue Reading

LATEST NEWS

ಐಪಿಎಲ್ 2025: ಎಲ್ಲಿ ನಡೆಯಲಿದೆ ಗೊತ್ತಾ ಪ್ಲೇಆಫ್‌ – ಫೈನಲ್ ಪಂದ್ಯ?

Published

on

ಮಂಗಳೂರು/ನವದೆಹಲಿ: ಐಪಿಎಲ್​ 2025 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಪ್ಲೇಆಫ್‌ ಹಾಗೂ ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಘೋಷಿಸಲಾಗಿದೆ.

ಹೌದು, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಉದ್ವಿಗ್ನತೆ ಕಾರಣದಿಂದ ಒಂದು ವಾರದ ಕಾಲ ಮುಂದೂಡಿಕೆಯಾಗಿದ್ದ 18ನೇ ಸೀಸನ್ ನ ಐಪಿಎಲ್ ಇದೀಗ ಮತ್ತೆ ಆರಂಭವಾಗಿದೆ. ಜೂನ್ 3ರಂದು ಫೈನಲ್ ನಡೆಯಲಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾದ ಮೊಹಮ್ಮದ್ ಶಮಿ; ಬಿಜೆಪಿ ಸೆರ್ತಾರಾ ಟೀಮ್‌ ಇಂಡಿಯಾ ವೇಗಿ

ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಪ್ಲೇಆಫ್‌ಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 70 ಲೀಗ್ ಪಂದ್ಯಗಳ ನಂತರ, ಪ್ಲೇ ಆಫ್‌ನ ಮೊದಲೆರಡು ಪಂದ್ಯಗಳಾದ ಕ್ವಾಲಿಫೈಯರ್‌ 1 ಮತ್ತು ಎಲಿಮಿನೇಟರ್ ಪಂದ್ಯವು ನ್ಯೂ ಚಂಡೀಗಡ್‌ನ ಮುಲ್ಲನ್‌ಪುರದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಗೆಯೇ ಜೂನ್‌ 1ರಂದು ನಡೆಯಲಿರುವ ಕ್ವಾಲಿಫೈಯರ್ 2 ಮತ್ತು ಜೂನ್ 3ರಂದು ಅಂತಿಮ ಪ್ರಶಸ್ತಿ ಕಾದಾಟ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

Continue Reading

DAKSHINA KANNADA

ಕಡಬ: ಅಪಘಾತದ ಗಾಯಾಳು ವಾರದ ಬಳಿಕ ಚಿಕಿತ್ಸೆ ಫಲಿಸದೆ ಸಾವು

Published

on

ಕಡಬ: ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೊಯ್ಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಒಂದು ವಾರದ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಳೆನೇರೆಂಕಿ ಗ್ರಾಮದ ಮಾಡೆಂಜಿಮಾರು ನಿವಾಸಿ ಪದ್ಮನಾಭ (48) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಮೇ 11 ರಂದು ರಾತ್ರಿ ಪದ್ಮನಾಭ ಅವರು ತಮ್ಮ ಸಹೋದರ ಸುದರ್ಶನ್ ಮತ್ತು ಸ್ನೇಹಿತರಾದ ಚೇತನ್ ಹಾಗೂ ಸತೀಶ್ ಎಂಬವರ ಜತೆ ಉಪ್ಪಿನಂಗಡಿ ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿತ್ತು.

ಪದ್ಮನಾಭ ಮತ್ತು ಸಂಗಡಿಗರು ಸಂಚರಿಸುತ್ತಿದ್ದ ಕಾರು ಮತ್ತು ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತಿತರ ಕ್ಷೇತ್ರಗಳಿಗೆ ಭೇಟಿ ನೀಡಿ ಶಿವಮೊಗ್ಗಕ್ಕೆ ವಾಪಸಾಗುತ್ತಿದ್ದ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ಸು ನಡುವೆ ಢಿಕ್ಕಿ ಸಂಭವಿಸಿ ಅಪಘಾತ ನಡೆದಿತ್ತು. ಈ ಅವಘಡದಲ್ಲಿ ಪದ್ಮನಾಭ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.

ಇದನ್ನೂ ಓದಿ: ಮುಂದಿನ 5 ದಿನ ಭಾರಿ ಮಳೆ, ಬಿಸಿ ಗಾಳಿಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಎಲ್ಲೆಲ್ಲೆ?

ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page