Connect with us

LATEST NEWS

ಹದಿಹರೆಯದ ಮಗಳ ಜೊತೆ ತಂದೆಯಾದವ ಹೇಗೆ ಇರಬೇಕು ಗೊತ್ತಾ ..?

Published

on

ಮಗಳು ಹದಿಹರೆಯಕ್ಕೆಕಾಲಿಡುತ್ತಿದ್ದಂತೆಯೇ ಅಪ್ಪನಾದವನು ಒಂದು ಅಂತರ ಕಾಯ್ದುಕೊಳ್ಳಲು ಶುರು ಮಾಡುತ್ತಾನೆ. ತಲೆ ಮೇಲೆ ಕೂರಿಸಿಕೊಂಡು ಮೆರೆಯುತ್ತಿದ್ದ ಅಪ್ಪನ ದಿಢೀರಾಗಿ ಬದಲಾಗುವ ನಡವಳಿಕೆಯಿಂದ ಮಗಳು ಕಂಗಾಲಾಗುವ ಸಾಧ್ಯತೆ ಹೆಚ್ಚಿದೆ. ಮಗಳ ಮೇಲೆ ಸುಮ್ಮನೆ ರೇಗುತ್ತಾನೆ. ಅನಗತ್ಯವಾಗಿ ಗಂಭೀರ ವರ್ತನೆ ತೋರುತ್ತಾನೆ. ಅದರ ಬದಲು ಮುದ್ದು ಮರಿಗೆ ಹುಡುಗರ ಬಗ್ಗೆ, ಅವರ ಸ್ವಭಾವ, ಲೈಂಗಿಕತೆ ಬಗ್ಗೆ ಅಪ್ಪನೇ ಅರಿವು ಮೂಡಿಸಿದರೆ ಒಳ್ಳೆಯದಲ್ಲವೇ ? ಹದಿಹರೆಯದ ಮಗಳ ತಂದೆ ಆಗಿದ್ದರೆ ಮುಕ್ತ ಮನಸ್ಸಿಂದ ಮಗಳಿಗೆ ಹೇಳಬೇಕಾದ್ದನ್ನು ಹೇಳಿ ಕೊಟ್ಟರೆ ಒಳ್ಳೆಯದು. ಮಗಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಅಪ್ಪ ಯಾವ ರೀತಿ ಇದ್ದರೆ ಒಳ್ಳೆಯದು ? ಇಲ್ಲಿದೆ ನೋಡಿ.

ಲಿಂಗ ಭೇದ ಮಾಡದೆ ಇರುವುದು :

ಬಹುತೇಕ ಅಪ್ಪಂದಿರು ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳ ಬಗ್ಗೆ ನೆಗೆಟೀವ್ ಒಪಿನಿಯರ್ ಬರೋ ಹಾಗೆ ಏನೇನೋ ಹೇಳುತ್ತಾರೆ. ಹುಡುಗರು ಕೆಟ್ಟವರು, ಅವರೊಂದಿಗೆ ಹೋಗಬೇಡ, ಅವರ ಜೊತೆಗಿನ ಒಡನಾಟ ಕೆಟ್ಟದ್ದು ಅನ್ನುವಂತೆಯೇ ಪಾಠ ಮಾಡುತ್ತಾರೆ. ಅಪ್ಪನೇ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಹೀರೋ. ಇಂಥ ಮಾತುಗಳು ಹರೆಯದ ಮಗಳಿಗೆ ಪುರುಷರ ಬಗ್ಗೆ ಪೂರ್ವಾಗ್ರಹ ಮೂಡಿಸುತ್ತದೆ. ಹುಡುಗರ ಬಗ್ಗೆ ಮಗಳಲ್ಲಿ ಭಯ ಉಂಟಾಗಬಹುದು. ಆಕೆಯ ಸ್ನೇಹಿತರು, ಭವಿಷ್ಯದಲ್ಲಿ ಕಟ್ಟಿಕೊಂಡವನನ್ನೇ ನಂಬಲು ಒದ್ದಾಡುವಂತಾಗುತ್ತದೆ. ಹುಡುಗರ ಬಗ್ಗೆ ಮಗಳಿಗೆ ಯಾವ ಅಭಿಪ್ರಾಯ ಇದೆ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಹುಡುಗರು ಯಾವುದನ್ನು ಬೇಗ ಗ್ರಹಿಸುತ್ತಾರೆ, ಯಾವುದು ಇಷ್ಟಪಡುವುದಿಲ್ಲ ಹಾಗೂ ಯಾವುದನ್ನು ಇಷ್ಟಪಡುತ್ತಾರ ಎಂಬ ಸ್ಪಷ್ಟ ಅರಿವು ಮೂಡಿಸುತ್ತಾ ಮುಕ್ತವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಲಿಂಗಭೇದ ಮಾಡಬಾರದು.

ಮಾನಸಿಕ, ದೈಹಿಕ ಬದಲಾವಣೆ ಬಗ್ಗೆ ಸ್ಪಷ್ಟತೆ :

ಹದಿಹರೆಯಲ್ಲಿ ಲೈಂಗಿಕ ಆಕರ್ಷಣೆ ಸಹಜ. ಮಗಳು ಹುಡುಗರೆಡೆಗೆ ಆಕರ್ಷಿತರಾಗಬಹುದು. ಪ್ರೀತಿಯಲ್ಲಿ ಬೀಳಬಹುದು. ಈ ವೇಳೆ ಬೇರೆಯವರ ಇಷ್ಟ, ಕಷ್ಟಗಳು ಗಣನೆಗೆ ಬರುವುದಿಲ್ಲ. ಹದಿಹರೆಯದವರಲ್ಲಿ ಆಗುವ ಹಾರ್ಮೋನ್ ಬದಲಾವಣೆಯನ್ನು ಯಾರೂ ತಡೆಯಲು ಆಗುವುದಿಲ್ಲ. ಈ ಬಗ್ಗೆ ಮಗಳಿಗೆ ತಿಳಿದಿರಬೇಕು. ಯಾವಾಗ ಸಂಗಾತಿಯ ಆಯ್ಕೆ ಮಾಡಬೇಕು? ಹೇಗಿರಬೇಕು? ಅದಕ್ಕೂ ಮುನ್ನ ಮನಸ್ಸನ್ನು ಹೇಗೆ ನಿಯಂತ್ರಿಸಬೇಕು ಅನ್ನೋದನ್ನು ಸರಿಯಾಗಿ ಹೇಳಬೇಕು. ಅಷ್ಟೇ ಅಲ್ಲ Opposite Sex ಜೊತೆ ಮಾತನಾಡುವಾಗ Body Language ಹೇಗಿರಬೇಕೆಂಬುದನ್ನು ಅರ್ಥವಾಗುವಂತೆ ಹೇಳಿ ಕೊಡಿ.

ಕೆಟ್ಟ ಸ್ನೇಹಿತರಿಂದ ಅಂತರ ಕಾಯ್ದುಕೊಳ್ಳುವುದು :

ಹದಿಹರೆಯದಲ್ಲಿ ಲೈಂಗಿಕ ಆಕಾಂಕ್ಷೆ ಹೆಚ್ಚು. ಹಾಗಾಗಿ ಸಾಧ್ಯವಾದಷ್ಟು ಕೆಟ್ಟ ಸ್ನೇಹಿತರಿಂದ ಮಗಳನ್ನು ದೂರವಿಡಲು ನೋಡಬೇಕು. ಮಗಳು ಬೇರೆಯವರ ಪ್ರೀತಿ ಅಥವಾ ಭೀತಿಯಿಂದ ದೇಹವನ್ನು ಅರ್ಪಿಸುತ್ತಿದ್ದರೆ ತಪ್ಪೆಂದು ನೇರವಾಗಿ ಹೇಳಬೇಕು. ಪುರುಷರ ವಿಚಾರದಲ್ಲಿ ಸಂಬಂಧ, ಲೈಂಗಿಕತೆ ಬಗ್ಗೆ ತನ್ನ ನಿರ್ಧಾರಗಳನ್ನು ಬಲಪಡಿಸಲು ಹೇಳಬೇಕು. ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠವಾಗುವ ವಯಸ್ಸು ಯಾವುದು ಎಂದು ತಿಳಿಹೇಳಬೇಕು. ಸುತ್ತ ಇರುವ ಕಾಮುಕರ ಎದುರಿಸಲು ಮಾನಸಿಕವಾಗಿ ಹೇಗೆ ಬಲಿಷ್ಠವಾಗಿರಬೇಕು ಮತ್ತು ದೈಹಿಕವಾಗಿ ಯಾವ ರೀತಿ ಬಲಿಷ್ಠವಾಗಿರಬೇಕು ಎಂದು ತಿಳಿಸಬೇಕು. ಮಗಳಿಗೆ ತಂದೆಯಾದವ ಮಾರ್ಗದರ್ಶಕರಾಗಿ ಇರಬೇಕು ಹೊರತು ಆಕೆಯ ಕ್ರಮಕ್ಕೆ ತೀರ್ಪು ನೀಡುವಂತೆ ಇರಬಾರದು. ಮಗಳಿಗೆ ಆತ್ಮರಕ್ಷಣೆ ಮಾಡುವಂತಹ ಯಾವುದಾದರೂ ತರಗತಿಗಳಿಗೆ ಆಕೆಯನ್ನು ಸೇರಿಸುವ ಮುಖಾಂತರ ಯಾರೇ ಎದುರಾದರೂ ಅವರನ್ನು ಎದುರಿಸುವಂತಹ ಧೈರ್ಯ ಮೂಡಿಸಬೇಕು.

ಲೈಂಗಿಕ ಕ್ರಿಯೆಯ ಬಗ್ಗೆ ಸರಿಯಾದ ಮಾಹಿತಿ :

ಲೈಂಗಿಕತೆ ಬಗ್ಗೆ ಮಕ್ಕಳ ಮುಂದೆ ಮಾತನಾಡಲು ಬಹುತೇಕ ಪೋಷಕರು ಹಿಂದು ಮುಂದು ನೋಡುತ್ತಾರೆ. ಆದರೆ, ಯಾರ ಮನೆಯಲ್ಲಿ ಈ ವಿಷಯವನ್ನು ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಇರುತ್ತೋ ಅವರ ಮಕ್ಕಳು ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ. ತಪ್ಪು ತಿಳಿವಳಿಕೆಯಿಂದ ದೂರವಿದ್ದು, ಒಳ್ಳೇಯದನ್ನೇ ಕಲಿತುಕೊಡುತ್ತಾರೆ. ಇಂಥ ವಿಷಯಗಳು ಬೇರೆ ಕಡೆಯಿಂದ ಕಲಿತುಕೊಂಡರೆ ದುಷ್ಪರಿಣಾಮ ಬೀರಬಹುದು. ಪೋಷಕರೇ ಮಾತನಾಡಿದರೆ ಬಹುತೇಕ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದ ಒಳ್ಳೊಳ್ಳೆ ಪುಸ್ತಕಗಳನ್ನು ಓದಲು ಮಕ್ಕಳಿಗೆ ಕೊಡಬೇಕು. ಗರ್ಭಧಾರಣೆ, ಗರ್ಭನಿರೋಧಕ ಮತ್ತು ಹೆರಿಗೆ ಬಗ್ಗೆ ಸ್ವಲ್ಪ ಸ್ವಲ್ಪ ಅರಿವು ಮೂಡಿಸಿದರೆ ಒಳಿತು. ಅದರಲ್ಲಿಯೂ ಅಮ್ಮನಿಲ್ಲದ ಮಕ್ಕಳಿಗಂತೂ ಅಪ್ಪಂದಿರು ಎಷ್ಟು ಹೇಳಿ ಕೊಟ್ಟರೂ ಸಾಲದು.
ಪ್ರಕೃತಿ ಸಹಜವಾದ ಈ ಲೈಂಗಿಕ ಕ್ರಿಯೆ ಬಗ್ಗೆ ಯಾರಿಗೂ ಅಸಹ್ಯ ಇರಬಾರದು. ಪ್ರತಿಯೊಬ್ಬ ಮನುಷ್ಯನಿಗೂ ಇರಲೇಬೇಕಾದ ಸಹಜ ವಾಂಛೆ ಅದು ಎಂಬುವುದು ಸ್ಪಷ್ಟವಾಗಬೇಕು. ಆದರೆ, ಒಂದಡಿ ಮುಂದೆ ಹೆಜ್ಜೆ ಇಡುವಾಗ ಎಷ್ಟರ ಮಟ್ಟಿಗೆ ಹುಷಾರಾಗಿರಬೇಕೆಂದು ಮಕ್ಕಳಿಗೆ ಸ್ಪಷ್ಟವಾಗಿ ತಿಳಿದಿರಬೇಕು. ದೈಹಿಕ ಕ್ರಿಯೆಗೆ ಮಾನಸಿಕ ಹಾಗೂ ದೈಹಿಕವಾಗಿ ತಯಾರಾಗುವ ಪರಿಯನ್ನು ಹೇಳಿ ಕೊಟ್ಟಿರಬೇಕು. ದೈಹಿಕ ಸಂಬಂಧ ಹೊಂದಲು ಹೇಗೆ ಎರಡು ಜೀವಗಳು ಮಾನಸಿಕವಾಗಿ ಸನ್ನದ್ಧರಾಗಬೇಕು ಎಂಬ ಅರಿವು ಮಕ್ಕಳಿಗೆ ಇರಬೇಕು. ಏಕೆಂದರೆ, ಇದು ತಪ್ಪು ನಿರ್ಧಾರಗಳು ಮತ್ತು ಬೇರೆಯವರ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸುತ್ತದೆ. ಇಂಥ ವಿಚಾರಗಳನ್ನು ಪೋಷಕರೇ ಮಗಳಿಗೆ ತಿಳಿಸಿದರೆ ಅತ್ಯುತ್ತಮ. ಈ ರೀತಿ ಉತ್ತಮ ಸ್ನೇಹ ಬಾಂಧವ್ಯ ಅಪ್ಪ ಮಗಳ ಮಧ್ಯೆ ಬೆಳೆಯಬೇಕು.

LATEST NEWS

ಸಹಾಯ ಕೇಳಿ ಬಂದ ಯುವತಿಯ ಗ್ಯಾಂಗ್ ರೇ*ಪ್..! ಅಟೋ ಚಾಲಕ ಅಂದರ್..!

Published

on

ಮಂಗಳೂರು : ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ಬಂದು ಕೇರಳದ ಉಪ್ಪಳದಲ್ಲಿ ವಾಸವಾಗಿದ್ದ ಯುವತಿಯನ್ನು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಸಾಮೂಹಿಕ ಅ*ತ್ಯಾ*ಚಾರ ಮಾಡಲಾಗಿದೆ. ಏಪ್ರಿಲ್ 16 ರ ರಾತ್ರಿ ಈ ಹೇಯ ಕೃತ್ಯ ನಡೆದಿದ್ದು, ಅಟೋ ಚಾಲಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಪ್ಪಳದಲ್ಲಿ ವಾಸವಾಗಿದ್ದ ಯುವತಿ ಸ್ನೇಹಿತನ ಜೊತೆಯಲ್ಲಿ ಮಂಗಳೂರಿಗೆ ಬಂದಿದ್ದು, ಇಲ್ಲಿ ಇಬ್ಬರಿಗೂ ಜಗಳವಾಗಿ ಬೇರೆ ಬೇರೆಯಾಗಿದ್ದಾರೆ. ರಾತ್ರಿವೇಳೆಯಲ್ಲಿ ದಾರಿ ಗೊತ್ತಿಲ್ಲದ ಯುವತಿ ಅದೇ ದಾರಿಯಲ್ಲಿ ಬಂದ ಬಗಂಬಿಲ ಮೂಲದ ಅಟೋ ಚಾಲಕನಲ್ಲಿ ಸಹಾಯ ಯಾಚಿಸಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ಅಟೋದಲ್ಲಿ ಕೂರಿಸಿದ ಚಾಲಕ ಆಕೆಗೆ ಅ*ಮಲು ಪದಾರ್ಥ ನೀಡಿ ಮುನ್ನೂರು ಗ್ರಾಮ ಮತ್ತು ಉಳ್ಳಾಲ ನಗರಸಭೆ ಗಡಿಯಲ್ಲಿನ ಬೊಳ್ಳ ಹೌಸ್ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ನೇತ್ರವಾದಿ ನದಿ ಸಮೀಪದ ನಿರ್ಜನ ಪ್ರದೇಶವಾಗಿರುವ ಬೊಳ್ಳ ಹೌಸ್ ಬಳಿ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯನ್ನು ಅ*ತ್ಯಾ*ಚಾರ ಮಾಡಿದ್ದಾನೆ. ಅತ್ಯಾಚಾರಿಗಳ ಕೈನಿಂದ ತಪ್ಪಿಸಿಕೊಂಡು ಬಂದ ಯುವತಿ ಮನೆಯೊಂದರ ಬಾಗಿಲು ತಟ್ಟಿ ನೀರು ಕೇಳಿ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣ ಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಗಂಬಿಲದ ಅಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದು, ಇತರ ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದಾರೆ.

Continue Reading

LATEST NEWS

ಪಾಕಿಸ್ತಾನಿಯರು ಹಿಂದೂ-ಮುಸ್ಲಿಮರ ನಡುವಿನ ವ್ಯತ್ಯಾಸಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು: ಪಾಕ್ ಸೇನಾ ಮುಖ್ಯಸ್ಥ

Published

on

ಮಂಗಳೂರು/ನವದೆಹಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತ ಮತ್ತು ಹಿಂದೂ ಧರ್ಮವನ್ನು ಗುರಿಯಾಗಿಸಿಕೊಂಡು ಹಲವು ಹೇಳಿಕೆಗಳನ್ನು ನೀಡಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸಾಗರೋತ್ತರ ಪಾಕಿಸ್ತಾನಿ ಸಮ್ಮೇಳನದಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಗಳನ್ನು ಉದ್ದೇಶಿಸಿ ಮಾತನಾಡುವ ಬದಲು.. ಸೇನಾ ಮುಖ್ಯಸ್ಥರು ಧರ್ಮೋಪದೇಶಗಳು, ಎರಡು ರಾಷ್ಟ್ರದ ಸಿದ್ದಾಂತಗಳನ್ನು ಪ್ರತಿಪಾದಿಸಿ ಭಾರತದ ವಿರುದ್ದ ಮತ್ತೆ ಕ್ಯಾತೆ ತೆಗೆದಿದ್ದಾರೆ.

ಈ ಸಮ್ಮೇಳನದಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಸೆರಿದಂತೆ ಪಾಕಿಸ್ತಾನದ ಎಲ್ಲಾ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಪಾಕಿಸ್ಥಾನದ ಕಥೆಯನ್ನು ಹೇಳಬೇಕು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ‘ನೀವು ಖಂಡಿತವಾಗಿಯೂ ನಿಮ್ಮ ಮಕ್ಕಳಿಗೆ ಪಾಕಿಸ್ತಾನದ ಕಥೆಯನ್ನು ಹೇಳಬೇಕು. ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಅಂಶದಲ್ಲೂ ನಾವು ಹಿಂದೂಗಳಿಗಿಂತ ಭಿನ್ನರು ಎಂದು ಭಾವಿಸಿದ್ದರು. ನಮ್ಮ ಧರ್ಮಗಳು, ನಮ್ಮ ಪದ್ದತಿಗಳು, ಸಂಪ್ರದಾಯಗಳು, ಆಲೋಚನೆಗಳು ಮತ್ತು ಮಹತ್ವಾಕಾಂಕ್ಷೆಗಳು ವಿಭಿನ್ನವಾಗಿವೆ. ಅದು ಎರಡು ರಾಷ್ಟ್ರಗಳ ಸಿದ್ದಾಂತದ ಅಡಿಪಾಯವಾಗಿತ್ತು’ಎಂದು ಹೇಳಿದ್ದಾರೆ.

ಪಾಕಿಸ್ತಾನಿಯರು ಹಿಂದೂ-ಮುಸ್ಲಿಮರ ನಡುವಿನ ವ್ಯತ್ಯಾಸ ಹೇಳಿಕೊಡಿ
ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದೂಗಳಿಗಿಂತ ಭಿನ್ನರು ಎಂದೇ ಭಾವಿಸಿದ್ದರು. ನಮ್ಮ ಧರ್ಮ, ಆಚರಣೆ, ಸಂಪ್ರದಾಯ, ಆಲೋಚನೆ ಮತ್ತು ಗುರಿಗಳು ಬೇರೆ ಆದ್ದರಿಂದಲೇ, ದ್ವಿರಾಷ್ಟ್ರ ಪರಿಕಲ್ಪನೆ ಮೊಳಕೆಯೊಡೆಯಿತು. ಈಗಲೂ ಪಾಕಿಸ್ತಾನವು ದ್ವಿರಾಷ್ಟ್ರ ಸಿದ್ಧಾಂತದ ತಳಹದಿಯ ಮೇಲೆ ನಿಂತಿದೆ. ಇದರ ಮಹತ್ವ ಎಂದಿಗೂ ಕಡಿಮೆಯಾಗಬಾರದು. ಇದಕ್ಕಾಗಿ ನಾವು ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸವನ್ನು ಹೇಳಿಕೊಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಚೀನಾದ ಮೇಲೆ ಮುನಿದ ಅಮೆರಿಕ..!

ಭಯೋತ್ಪಾದಕರಿಗೆ ಎಚ್ಚರಿಕೆ
ಭಯೋತ್ಪಾದಕರಿಗೆ ಎಚ್ಚರಿಕೆ ನೀಡಿದ ಅಸಿಮ್ ಮುನೀರ್, ‘ಕೇವಲ 1500 ಭಯೋತ್ಪಾದಕರು ದೇಶದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ಪಾಕಿಸ್ತಾನದ ಶತ್ರುಗಳು ಭಾವಿಸುತ್ತಾರಾ? ನಾವು ಶೀಘ್ರದಲ್ಲೇ ಈ ಭಯೋತ್ಪಾದಕರ ಬೆನ್ನು ಮುರಿಯುತ್ತೇವೆ. 13 ಲಕ್ಷ ಜನರ ಭಾರತೀಯ ಸೇನೆಗೆ ನಮ್ಮನ್ನು ಹೆದರಿಸಲು ಸಾಧ್ಯವಾಗಲಿಲ್ಲ, ಈ ಭಯೋತ್ಪಾದಕರು ಏನು ಮಾಡುತ್ತಾರೆ?’’ ಎಂದು ಕುಹಕ ನಗೆ ಬೀರಿದರು.

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಬಲೂಚ್ ಲಿಬರೇಶನ್ ಫ್ರಂಟ್ (ಬಿಎಲ್‌ಎಫ್) ಮತ್ತು ಬಲೂಚ್ ರಿಪಬ್ಲಿಕನ್ ಆರ್ಮಿ (ಬಿಆರ್‌ಎ) ನಂತಹ ಸಂಘಟನೆಗಳನ್ನು ದೇಶಕ್ಕೆ ಬೆದರಿಕೆ ಎಂದು ಒಪ್ಪಿಕೊಳ್ಳಲು ಅವರು ನಿರಾಕರಿಸಿದರು ಮತ್ತು ಈ ಸಂಘಟನೆಗಳಿಗೆ ಶೀಘ್ರದಲ್ಲೇ ಸೂಕ್ತ ಉತ್ತರ ನೀಡಲಾಗುವುದು ಎಂದು ಹೇಳಿದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

Continue Reading

DAKSHINA KANNADA

WATCH : ವೇದಿಕೆಗೆ ನುಗ್ಗಿ ವೇಷಧಾರಿಯ ಮೈಮೇಲೆ ಎರಗಿದ ವ್ಯಕ್ತಿ, ವೀಡಿಯೋ ವೈರಲ್

Published

on

ಕಡಬ : ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಏಕಾಏಕಿ ಸಭೆಯಲ್ಲಿದ್ದ  ವ್ಯಕ್ತಿಯೊಬ್ಬರು ವೇದಿಕೆಗೆ ನುಗ್ಗಿ ವೇಷಧಾರಿಯ ಮೈಮೇಲೆ ಎರಗಿದ ಘಟನೆ ನಡೆದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

ಕಡಬದ ನಂದುಗುರಿ ಎಂಬಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಎಂಬವರ ಮನೆಯಲ್ಲಿ  ಸೇವಾರ್ಥವಾಗಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ವಿದ್ಯುನ್ಮಾಲಿ ಹಾಗೂ ಅದಿತಿ ಸಂಭಾಷಣೆ ನಡೆಯುತ್ತಿದ್ದ ವೇಳೆ  ಸಭೆಯಿಂದ ಏಕಾಏಕಿ ಓಡೋಡಿ ಬಂದ ವ್ಯಕ್ತಿಯೊಬ್ಬರು ವೇಷಧಾರಿಯ ಮೇಲೆ ಎರಗಿದ್ದಾರೆ.

ಇದನ್ನೂ ಓದಿ : ಕಾಡು ಹಂದಿ ಮಾಂಸದ ಆಮಿಷವೊಡ್ಡಿ ವಂಚನೆ; ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

ಏಕಾಏಕಿ ವೇದಿಕೆ ಮೇಲೆ ಹಾರಿ ಬಂದ ವ್ಯಕ್ತಿಯ ವರ್ತನೆಯಿಂದ   ಕಲಾವಿದರು, ಪ್ರೇಕ್ಷಕರು ದಿಗ್ಬ್ರಮೆಗೊಳಗಾಗಿ ಗಲಿಬಿಲಿಗೊಂಡಿದ್ದಾರೆ.  ಕೂಡಲೇ ಆತನನ್ನು ತಡೆದು ಇತರರ ಸಹಕಾರದಿಂದ ಎಳೆದುಕೊಂಡು ದೂರ ಹೋಗಿರುವುದು ವೀಡಿಯೋದಲ್ಲಿದೆ. ವೇದಿಕೆಗೆ ನುಗ್ಗಿದ ವ್ಯಕ್ತಿ ಸ್ಥಳೀಯ ನಿವಾಸಿ ರಾಧಾಕೃಷ್ಣ ಎಂದು ಗುರುತಿಸಲಾಗಿದ್ದು,  ಮೈಮೇಲೆ ಆವೇಶ ಬಂದ ರೀತಿಯಲ್ಲಿ ವರ್ತಿಸಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page