Connect with us

bangalore

ಹೊನ್ನಾವರ: ಬೆಂಕಿ ಅವಘಡದಿಂದ ಪಾರಾದ ಡಿಕೆಶಿ- ಹೆಲಿಕಾಪ್ಟರ್ ಲ್ಯಾಂಡ್ ವೇಳೆ ಹೆಲಿಪ್ಯಾಡ್​​​ನಲ್ಲಿ ಬೆಂಕಿ..!

Published

on

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿಯಾದ ಘಟನೆ ಮೊನ್ನೆಯಷ್ಟೆ ನಡೆದಿತ್ತು. ಅದರ ಬೆನ್ನಲ್ಲೇ ಇನ್ನೊಂದು ಗಂಡಾಂತರ ನಡೆದಿದೆ.

ಹೊನ್ನಾವರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿಯಾದ ಘಟನೆ ಮೊನ್ನೆಯಷ್ಟೆ ನಡೆದಿತ್ತು. ಅದರ ಬೆನ್ನಲ್ಲೇ ಇನ್ನೊಂದು ಗಂಡಾಂತರ ನಡೆದಿದೆ.

ಇದೀಗ ಡಿಕೆಶಿ ಅವರು ಬಂದಿಳಿದ ಹೆಲಿಪ್ಯಾಡ್​​​ ಬಳಿ ಬೆಂಕಿ ಕಾಣಿಸಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್​ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ.

ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್​​ನಲ್ಲಿ ತೆರಳಿದ್ದ ಶಿವಕುಮಾರ್ ಅವರು ರಾಮತೀರ್ಥದ ಹೆಲಿಪ್ಯಾಡ್​ಗೆ ಬಂದಿಳಿದರು.

ಈ ವೇಳೆ, ಹೆಲಿಪ್ಯಾಡ್​ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೆಲಿಕಾಪ್ಟರ್​ಗೆ ಸಿಗ್ನಲ್​​ ಕೊಡುವ ಸ್ಮೋಕ್​ ಕ್ಯಾಂಡಲ್​ನಿಂದ ಬೆಂಕಿ ಆವರಿಸಿದೆ ಎಂದು ಹೇಳಲಾಗುತ್ತಿದೆ.

ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಜಕ್ಕೂರಿನಿಂದ ಹೆಲಿಕಾಪ್ಟರ್ ಟೇಕಾಫ್ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದಿತ್ತು.

ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್ ಮುಂದಿನ ಗಾಜು ಪುಡಿ ಪುಡಿಯಾಗಿತ್ತು. ಕೂಡಲೇ ಎಚ್ಚೆತ್ತ ಪೈಲಟ್ ಹೆಚ್‌ಎಎಲ್‌ನಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದರು.

bangalore

ಸರಸವಿದ್ದರೂ ಡಿವೋರ್ಸ್ ..! ಕೊನೆಗೂ ವಿಚ್ಚೇದನದ ಹಿಂದಿನ ರಹಸ್ಯ ಬಾಯ್ಬಿಟ್ಟ ಚಂದನ್ ಶೆಟ್ಟಿ ..!

Published

on

ಬಿಗ್‌ಬಾಸ್‌ನಲ್ಲಿ ಚಿಗುರಿದ್ದ ಪ್ರೇಮವೊಂದು ಇನ್ನೇನು ಸುಖಾಂತ್ಯ ಕಂಡಿತು ಎನ್ನುವಾಗಲೇ ಬಿರುಗಾಳಿಯ ರೀತಿ ಇಬ್ಬರ ನಡೆವೆ ಡಿವೋರ್ಸ್ ಪಡೆದುಕೊಂಡಿತ್ತು. ಪ್ರೀತಿಸಿ ಜೊತೆಯಾಗಿ ಸಪ್ತಪದಿ ತುಳಿದಿದ್ದ ಜೋಡಿಯು ಇದೀಗ ವಿಚ್ಛೇದನ ಪಡೆಯುವ ಮೂಲಕ ಭಾರೀ ಸುದ್ಧಿಯಲ್ಲಿದ್ದಾರೆ. ಇವರಿಬ್ಬರ ಜೀವನದ ಕುರಿತು ಅದೆಷ್ಟೋ ಗಾಳಿಸುದ್ಧಿಗಳು ಹರಡಿದ್ದರೂ ಕ್ಯಾರೇ ಎನ್ನದೆ ತಮ್ಮಿಷ್ಟದಂತೆ ಬದುಕುತ್ತಿದ್ದಾರೆ. ಪ್ರೀತಿಸಿ ಸುಖವಾಗಿ ಮದುವೆಯಾಗಿದ್ದ ಜೋಡಿ ದಿಡೀರ್ ಎಂದು ಡಿವೋರ್ಸ್ ಪಡೆದುಕೊಳ್ಳಲು ಕಾರಣವೇನು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕನ್ನಡನಾಡಿನ ರಾಪರ್, ಆಕ್ಟರ್ ಹಾಗೂ ಮ್ಯೂಸಿಕ್ ಕಂಪೋಸರ್ ಚಂದನ್ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಜೊತೆಗಿನ ಡಿವೋರ್ಸ್ ವಿಚಾರ ಮತ್ತ ಮಾತನಾಡಿದ್ದಾರೆ. ಸಮಾಜಕ್ಕೆ ಅವರಿಬ್ಬರ ವೈಯಕ್ತಿಕ ಜೀವನದ ಬಗ್ಗೆ ಅದು ಯಾಕೆ ಅಷ್ಟು ಆಸಕ್ತಿಯೋ ಏನೋ ಗೊತ್ತಿಲ್ಲ! ಏಕೆಂದರೆ ಅವರಿಬ್ಬರಲ್ಲಿ ಯಾರೇ ಸಿಕ್ಕರೂ, ಕಣ್ಣಿಗೆ ಕಂಡರೂ, ಸಿನಿಮಾ ಪ್ರೆಸ್‌ಮೀಟ್‌ ಇದ್ದರೂ ಮೊದಲು ಅಥವಾ ಕೊನೆಗೆ ಕೇಳುವುದು ಅದು ಒಂದೇ ಪ್ರಶ್ನೆ. ಚಂದನ್ ಹಾಗೂ ನಿವೇದಿತಾ ಇಬ್ಬರಿಗೂ ಅದನ್ನು ಕೇಳಿಯೇ ಸಾಕಾಗಿ ಹೋಗಿದೆಯಂತೆ..!

ಏನದು ಪದೇ ಪದೇ ಕೇಳಲ್ಪಡುವ ಪ್ರಶ್ನೆ ..?

ಇತ್ತೀಚೆಗೆ ಚಂದನ್ ನಟನೆಯ ‘ಸೂತ್ರಧಾರಿ’ ಚಿತ್ರದ ಪ್ರೆಸ್‌ಮೀಟ್ ನಡೆದಿತ್ತು. ಅದರಲ್ಲಿಯೂ ಆ ಒಂದು ಪ್ರಶ್ನೆಯನ್ನು ಮತ್ತೆ ಕೇಳಲಾಗಿದೆ. ಅದಕ್ಕೆ ಚಂದನ್‌ ಶೆಟ್ಟಿ ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ. “ನಮ್ಮಿಬ್ಬರ ಮಧ್ಯೆ ಅದೇನು ನಡೆಯಿತು ಎಂಬುದು ನಮಗಿಬ್ಬರಿಗೇ ಗೊತ್ತು. ಅದನ್ನು ಯಾರಿಗೂ ಹೇಳುವ ಅಗತ್ಯವಿಲ್ಲ. ಲವ್, ಮದುವೆ ನಡೆದಂತೆ ಡಿವೋರ್ಸ್ ಕೂಡ ಆಯ್ತು. ಅದ್ಯಾವುದನ್ನೂ ನಾವೀಗ ಸಾರ್ವಜನಿಕವಾಗಿ ಚರ್ಚೆ ಮಾಡಲು ಬಯಸೋದಿಲ್ಲ. ಆದರೆ, ಒಂದಂತೂ ಸತ್ಯ, ನಮ್ಮಿಬ್ಬರ ಮಧ್ಯೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಖಂಡಿತವಾಗಿಯೂ ಡಿವೋರ್ಸ್ ಆಗಿದ್ದಲ್ಲ” ಎಂದು ಗರಂ ಆಗಿದ್ದಾರೆ.

“ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಸಮಸ್ಯೆ ಇತ್ತು, ಸಾಕಷ್ಟು ಸಮಯ ತೆಗೆದುಕೊಂಡರೂ ನಮ್ಮಿಬ್ಬರ ಮಧ್ಯೆ ಮತ್ತೆ ಆಪ್ತತೆ ಮೂಡಲೇ ಇಲ್ಲ. ಆದರೆ, ವಿರಸ ಕೂಡ ಇರಲಿಲ್ಲ.. ರಸ-ವಿರಸ ಎರಡೂ ಇಲ್ಲದ ಬಾಳು ನೀರಸ ಎನ್ನಿಸ್ತು. ಆ ಕಾರಣಕ್ಕೆ ಡಿವೋರ್ಸ್ ಆಯ್ತು.. ಆ ಬಗ್ಗೆ ಈಗ ಬೇಸರವೂ ಇಲ್ಲ ಖುಷಿಯೂ ಇಲ್ಲ. ಆ ಬಗ್ಗೆ ಮತ್ತೆಮತ್ತೆ ಮಾತನ್ನಾಡಲು ಇಷ್ಟವೂ ಇಲ್ಲ. ಆದರೆ, ಪ್ರಶ್ನೆ ಕೇಳುವವರ ಬಗ್ಗೆ ಬೇಸರವೂ ಇಲ್ಲ. ಏಕೆಂದರೆ, ಅವರಿಗೆ ಆ ಬಗ್ಗೆ ಕ್ಲಾರಿಟಿ ಅಥವಾ ಸಮಾಧಾನ ಆಗುವಂತಹ ಉತ್ತರ ಬೇಕಾಗಿರಬಹುದು. ಆದರೆ, ಯಾವ ಉತ್ತರದಿಮದ ಅವರಿಗೆ ಸಮಾಧಾನ ಆಗಬಹುದು ಎಂಬ ಕ್ಲಾರಿಟಿ ನನಗಿಲ್ಲ” ಎಂದು ಚಂದನ್ ವೇದನೆ ವ್ಯಕ್ತ ಪಡಿಸಿದ್ದಾರೆ.

“ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಕೊರತೆ ಆಗಲು ಶುರುವಾಗಿ ಬಹಳಷ್ಟು ಕಾಲವೇ ಕಳೆದು ಹೋಗಿತ್ತು. ಆದರೆ, ಸಾಮಾನ್ಯವಾಗಿ ಇರುವಂತೆ ನಮ್ಮಿಬ್ಬರ ಮಧ್ಯೆ ಪದೇಪದೇ ಜಗಳ ಇರಲಿಲ್ಲ. ರಸ-ವಿರಸಗಳ ವಿಲೇವಾರಿ ಕೂಡ ಇರಲಿಲ್ಲ. ಹೀಗಾಗಿ ಸಾಕಷ್ಟು ಕಾಲ ಆರಾಮವಾಗಿಯೇ ಕಳೆದು ಹೋಯ್ತು. ಆದರೆ, ಎಷ್ಟು ದಿನ ಹಾಗೇ ಇರೋದಕ್ಕೆ ಆಗುತ್ತೆ? ಸಹಜವಾಗಿಯೇ ಇಬ್ಬರೂ ವಿಚ್ಛೇದನನ ನಿರ್ಧಾರ ತೆಗೆದುಕೊಳ್ಳಲೇಬೇಕಾಯ್ತು. ಆದರೆ, ಬಹಳಷ್ಟು ಕೇಸ್‌ಗಳಂತೆ ನಮ್ಮಿಬ್ಬರಲ್ಲಿ ಜಗಳ ಇರಲಿಲಲ, ಜೀವನಾಂಶದ ಸಮಸ್ಯೆಯೂ ಇರಲಿಲ್ಲ. ಹೀಗಾಗಿ ಎಲ್ಲವೂ ಫಟಾಫಟ್ ಅಂತ ಮಿಗಿದುಹೋಯ್ತು” ಎಂದಿದ್ದಾರೆ ಚಂದನ್ ಶೆಟ್ಟಿ.

ಒಟ್ಟಿನಲ್ಲಿ ಹೇಳಬೇಕು ಎಂದರೆ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಳ್ಳುವ ನಿಜವಾದ ಕಾರಣ, ಮಗು ಮಾಡಿಕೊಳ್ಳುವ ವಿಚಾರದ ಬಗ್ಗೆ ಅಲ್ಲ… ಎಂಬ ಕ್ಲಾರಿಟಿಯನ್ನು ಸ್ವತಃ ಚಂದನ್ ಶೆಟ್ಟಿ ಕೊಟ್ಟಿದ್ದಾರೆ. ಅದೇನು ಕಾರಣವೋ ಏನೋ ಒಟ್ಟಿನಲ್ಲಿ ಬೇರೆಯವರು ಅಂದುಕೊಳ್ಳದ್ದು, ಅವರಿಬ್ಬರೂ ಅಂದುಕೊಂಡಿದ್ದು ಬೇರೆಬೇರೆಯಾಗಿದೆ.

Continue Reading

bangalore

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗುತ್ತಿರುವ ‘ರಾಮಾಚಾರಿ’ ನಟಿ …!

Published

on

ಈ ವರ್ಷ ಬಹಳ ಅದೃಷ್ಟ ಎಂಬಂತೆ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಹಬ್ಬ ಜೋರಾಗಿದೆ. ಒಬ್ಬರಾದ ಮೇಲೆ ಒಬ್ಬರು ಎಂಗೇಜ್‌ ಆಗುವ ಮೂಲಕ ಮದುವೆ ಆಗುತ್ತಿದ್ದಾರೆ. ʼಬಿಗ್‌ ಬಾಸ್ʼ‌ ನ ರಂಜಿತ್‌ ಇತ್ತೀಚೆಗೆ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡ ಸುದ್ಧಿ ಅಚ್ಚರಿ ಜೊತೆ ಐರಲ್ ಆಗುತ್ತಿದೆ. ಈ ಬೆನ್ನಲ್ಲೇ ಇದೀಗ ‘ರಾಮಾಚಾರಿ’ ಧಾರಾವಾಹಿಯ ನಟಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಅಮಾಜಿಕ ಜಾಲತಾಣದಲ್ಲಿ ಆ ಸುದ್ಧಿ ಫುಲ್ ವೈರಲ್ ಆಗುತ್ತಿದೆ. ಯಾರು ಆ ನಟಿ ? ಹುಡುಗ ಯಾರು ? ಇಲ್ಲಿದೆ ಸಂಪೂರ್ಣ ಮಾಹಿತಿ.

‘ರಾಮಾಚಾರಿ’ ದಾರವಾಹಿಯಲ್ಲಯ ರಾಮಾಚಾರಿಯ ತಂಗಿ ಪಾತ್ರಧಾರಿಗಳು ಸಾಕಷ್ಟು ಬಾರಿ ಬದಲಾಗಿದ್ದಾರೆ. ಶ್ರುತಿ ಪಾತ್ರದಲ್ಲಿ ಒಮ್ಮೆ ಶೀಲಾ ಎಚ್‌ ಎನ್ನುವವರು ನಟಿಸಿದ್ದು, ಇದೀಗ ಆಕೆ ಹೊಸ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ರಾಮಾಚಾರಿ ಧಾರಾವಾಹಿ ತಂಡವು ಶೀಲಾ ನಿಶ್ಚಿತಾರ್ಥದಲ್ಲಿ ಬಹಳ ಸಂಭ್ರಮದಿಂದ ಭಾಗಿಯಾಗಿದ್ದರು.

ಶೀಲಾ ನಿಶ್ಚಿತಾರ್ಥದಲ್ಲಿ ಕಲಾವಿದರು ಭಾಗಿ :

ರಾಮಾಚಾರಿ ಧಾರಾವಾಹಿ ಕಲಾವಿದರಾದ ಐಶ್ವರ್ಯಾ ಸಾಲೀಮಠ, ಮೌನ ಗುಡ್ಢೇಮನೆ, ನಟ ವಿನಯ್‌ ಯುಜೆ, ರಿತ್ವಿಕ್‌ ಕೃಪಾಕರ್‌, ತೇಜಸ್ವಿ ಪ್ರಕಾಶ್‌ ಮುಂತಾದವರು ಭಾಗಿಯಾದರು. ಇದರ ಜೊತೆಗೆ ಸಾಕಷ್ಟು ನಟ-ನಟಿಯರು ಶೀಲಾ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದು ಬಹಳ ಅದ್ದೂರಿಯಾಗಿ ಎಂಗೇಜ್‌ಮೆಂಟ್‌ ನಡೆದಿದೆ.

ಶೀಲಾ ಮದುವೆ ಯಾವಾಗ ?

‘ಚಿರಂತ್‌’ ಎನ್ನುವವರ ಜೊತೆ ಶೀಲಾ ನಿಶ್ಚಿತಾರ್ಥ ನಡೆದಿದೆ. ಚಿರಂತ್‌ ಯಾರು? ಎಲ್ಲಿಯವರು? ಚಿರಂತ್‌ ಹಾಗೂ ಶೀಲಾ ಭೇಟಿ ಆಗಿದ್ದು ಎಲ್ಲಿ? ಇವರಿಬ್ಬರದ್ದು ಲವ್‌ ಮ್ಯಾರೇಜ್?‌ ಅರೇಂಜ್ ಮ್ಯಾರೇಜ್?‌ ಎಂಬ ಬಗ್ಗೆ ಉತ್ತರ ಸಿಗಬೇಕಷ್ಟೇ. ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಪ್ರಶ್ನೆ ಇದ್ದು, ಇದಕ್ಕೆ ಶೀಲಾ ಅವರೇ ಉತ್ತರ ಕೊಡಬೇಕಿದೆ. ಇನ್ನು ಯಾವಾಗ ಮದುವೆ ಆಗಲಿದೆ ಎಂಬ ಬಗ್ಗೆಯೂ ಮಾಹಿತಿ ಲಬ್ಯವಾಗಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ಧಿ ವೈರಲ್ ಆಗುತ್ತಿದೆ.

Continue Reading

bangalore

ದೇವಾಲಯದಲ್ಲಿ ದೇವರ ತಾಳಿ ಕದ್ದ ಆರೋಪಿ ಅಂದರ್..

Published

on

ಬೆಂಗಳೂರು : ದೇವಾಲಯಲ್ಲಿಯೇ ಕಳ್ಳನೋರ್ವ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಶ್ಯಾಮರಾಜಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್‌ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

ಸಂಜಯ್‌ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಸಂಜಯ್ ದೇವಸ್ಥಾನದಲ್ಲಿ ಮಾ.5 ರಂದು ದೇಗುಲದ ಬೆಳ್ಳಿ ತಟ್ಟೆ, 15 ಬೆಳ್ಳಿ ಬಟ್ಟಲು, ಬೆಳ್ಳಿ ಹಸುವಿನ ವಿಗ್ರಹ, 4 ತಾಳಿ, ಕಾಸಿನ ಸರವನ್ನು ಕದ್ದಿದ್ದ. ನಂತರ ಈತ ಪರಾರಿಯಾಗಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಬಂಧನ ಮಾಡಲಾಗಿದೆ.

ಕಳ್ಳ ಸಂಜಯ್‌ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು, ವಾರೆಂಟ್‌ ಜಾರಿಯಾಗಿತ್ತು. ಆದರೆ ವಕೀಲರಿಗೆ ಕೊಡಲು ಹಣವಿಲ್ಲದ ಕಾರಣ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಸದ್ಯ ಪೊಲಿಸರು ಸಂಜಯ್‌ನನ್ನು ಬಮಧಿಸಿದ್ದು, ವಿಚಾರನರ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page