Connect with us

FILM

‘ಪುಷ್ಪ 2 ರಿಲೀಸ್’ ವೇಳೆ ಸಂಕಷ್ಟ: ಅಲ್ಲು ಅರ್ಜುನ್ ವಿರುದ್ದ ಪ್ರಕರಣ ದಾಖಲು !

Published

on

ಮಂಗಳೂರು/ಹೈದರಾಬಾದ್: ಅಲ್ಲು ಅರ್ಜುನ್ ನಟನೆಯ ಪುಷ್ಪ 2 ರಿಲೀಸ್ ಗೆ ಕೆಲವು ದಿನಗಳು ಮಾತ್ರವೇ ಬಾಕಿ ಇದೆ. ಇದರ ನಡುವೆ ಮುಂಬೈನಲ್ಲಿ ಪುಷ್ಪ 2 ಪ್ರೆಸ್ ಮೀಟ್ ನಲ್ಲಿ ಅಲ್ಲು ಅರ್ಜುನ್ ನೀಡಿದ ಹೇಳಿಕೆಯಿಂದ ಸಂಕಷ್ಟ ಎದುರಾಗಿದೆ.


ಗ್ರೀನ್ ಪೀಸ್ ಎನ್ವಿರೋನ್ಮೆಂಟ್ ಹಾಗೂ ಮಳೆ ಕೊಯ್ಲು ಫೌಂಡೇಶನ್ ನ ಅಧ್ಯಕ್ಷರಾಗಿರುವ ಶ್ರೀನಿವಾಸ ಗೌಡ ಹೈದರಾಬಾದ್ ನ ಜವಹಾರ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ ಎಂದು ಟ್ವಿಟರ್ ನಲ್ಲಿ ವೈರಲ್ ಆದ ಒಂದು ಪೋಸ್ಟ್ ನಿಂದ ತಿಳಿದು ಬಂದಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಿ’ ಕೈ ಮುಗಿದು ಕೇಳಿಕೊಂಡ ಶೋಭಾ ಶೆಟ್ಟಿ !
ಮುಂಬೈ ಪ್ರೆಸ್ ಮೀಟ್ ನಲ್ಲಿ ನಟ ಅಲ್ಲು ಅರ್ಜುನ್ ಪುಷ್ಪ2 ಸಿನಿಮಾ ಪ್ರಮೋಷನ್ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು, ನನಗೆ ಫ್ಯಾನ್ಸ್ ಇಲ್ಲ ನನಗೆ ಆರ್ಮಿ ಇದೆ ಎಂದು ಹೇಳಿದ್ದರು. ನಾನು ನನ್ನ ಅಭಿಮಾನಿಗಳನ್ನು ಪ್ರೀತಿಸುತ್ತೇನೆ. ಅವರು ನನ್ನ ಕುಟುಂಬದಂತೆ, ಅವರು ನನ್ನ ಜೊತೆ ಇರುತ್ತಾರೆ, ನನ್ನನ್ನು ಸಂಭ್ರಮಿಸುತ್ತಾರೆ. ಅವರು ಒಂದು ಆರ್ಮಿಯಂತೆ ನನಗಾಗಿ ನಿಲ್ಲುತ್ತಾರೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ, ನೀವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತೇನೆ. ಈ ಸಿನಿಮಾ ಹಿಟ್ ಆದರೆ ನಾನು ಅದನ್ನು ನನ್ನ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದಿದ್ದರು.

ಈ ಒಂದು ಹೇಳಿಕೆಯ ಬೆನ್ನಲ್ಲೇ ಶ್ರೀನಿವಾಸ್ ಗೌಡ ಎನ್ನುವವರು ಕೇಸ್ ದಾಖಲಿಸಿದ್ದು ಆರ್ಮಿ ಎಂದು ಅರ್ಜುನ್ ಬಳಸದ್ದು ಅಗೌರವವಾಗಿದೆ. ಯಾಕೆಂದರೆ ಆರ್ಮಿ ಎನ್ನುವ ಪದ ದೇಶ ಸೇವೆ ಮಾಡುವ ಸಶಸ್ತ್ರ ಪಡೆಗಳಿಗೆ ಬಳಸುವಂತದ್ದು ಎಂದಿದ್ದಾರೆ.
ಹೀಗಾಗಿ ‘ಪುಷ್ಪ 2’ ರಿಲೀಸ್ ಗೂ ಮುನ್ನವೇ ಅಲ್ಲು ಅರ್ಜುನ್ ಗೆ ಶಾಕ್ ಎದುರಾಗಿದೆ.

FILM

ಕಾಂಜೀವರಂ ಸೀರೆಯಲ್ಲೂ ಮಂಗಳೂರನ್ನು ಮರೆಯದ ಕುಡ್ಲದ ಬೆಡಗಿ ಪೂಜಾ ಹೆಗ್ಡೆ

Published

on

ಕುಡ್ಲದ ಬೆಡಗಿ ಬಹುಭಾಷಾ ನಟಿ ಪೂಜಾ ಹೆಗ್ಡೆ ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಸಖತ್ ಮಿಂಚುತ್ತಿದ್ದಾರೆ. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಪೂಜಾ ಸಿನಿಮಾಗಳ ಜತೆ ಜತೆಗೆ ಫೋಟೋಶೋಟ್‌ಗಳಿಗೂ ಪೋಸ್ ಕೊಡುತ್ತಾರೆ. ಇದೀಗ 70 ವರ್ಷ ಹಳೆಯ ಸೀರೆ ಧರಿಸಿ ಮಂಗಳೂರಿನ ಸೊಬಗನ್ನು ನೆನಪಿಸಿದ್ದಾರೆ.

ಪೂಜಾ ಹೆಗ್ಡೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಭಾನುವಾರ ಪೊಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ 70 ವರ್ಷ ಹಳೆಯ ಹಸಿರು ಕಾಂಜೀವರಂ ಸೀರೆ ಧರಿಸಿ ಫೋಟೋಗಳಿಗೆ ಪೋಸ್ ನೀಡಿರುವ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಅದ್ಬುತವಾಗಿ ಕಾಣಿಸಿಕೊಂಡಿರುವ ನಟಿ, ಅದಕ್ಕೆ ತಕ್ಕ ಬಳೆ, ಕತ್ತಿನ ಸರ ಧರಿಸಿ, ಮಲ್ಲಿಗೆ ಮುಡಿದಿದ್ದಾರೆ.

ಈ ಫೋಟೋಗಳಿಗೆ, “ವಿಂಟೇಜ್ ಕ್ಲೋಸೆಟ್‌ನಿಂದ, 70 ವರ್ಷ ಹಳೆಯ ಅದ್ಬುತ ಸೀರೆ. ನನ್ನ ಬ್ಯೂಟಿಫುಲ್ ಅಜ್ಜಿ ಕಾಂಜೀವರಂ ಧರಿಸಿದ ಕ್ಷಣಗಳು ಕಣ್ಮುಂದೆ ಬಂದಿವೆ. ಮದುವೆಗೆ ಹೋಗಲು ರೆಡಿಯಾಗುವಾಗ ಮನೆಯಲ್ಲಿ ಮಲ್ಲಿಗೆಯ ತಾಜಾ ಪರಿಮಳ ಮತ್ತು ಮೊದಲ ಮಳೆಯ ನಂತರ ಒದ್ದೆಯಾದ ಮಂಗಳೂರಿನ ಮಣ್ಣಿನ ಸುವಾಸನೆ.. ಓಹ್, ಸರಳವಾದ ವಸ್ತುಗಳಲ್ಲಿ ಸೌಂದರ್ಯ” ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತ-ಪಾಕ್ ಯುದ್ದ ನಡೆದರೆ ಸಚಿನ್ ತೆಂಡೂಲ್ಕರ್, ಧೋನಿ ಭಾಗವಹಿಸುತ್ತಾರಾ..!?

ನಟಿಯ ಸಿನಿಮಾ ವಿಚಾರಕ್ಕೆ ಬರುವುದಾದರೆ, ಪೂಜಾ ಹೆಗ್ಡೆ ಶಾಹಿದ್ ಕಪೂರ್ ನಾಯಕನಾಗಿ ನಟಿಸಿದ ‘ದೇವ’ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದರು. ಇದು ಇತ್ತೀಚೆಗೆ ಬಿಡುಗಡೆಯಾಯಿತು. ಆದರೆ ಆ ಚಿತ್ರವೂ ಭಾರಿ ನಿರಾಶೆಯನ್ನುಂಟು ಮಾಡಿತು. ನಟಿ ಪ್ರಸ್ತುತ ಸೂರ್ಯ ಜೊತೆ ‘ರೆಟ್ರೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

Continue Reading

FILM

ನಾನು ಅಷ್ಟೊಂದು ಫೇಮಸ್ ಕೂಡ ಆಗಿರಲಿಲ್ಲ, ಆದರೆ ಕನ್ನಡದ ಸ್ಟಾರ್ ನಟ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿದ್ರು..! ಗಗನಾ ಭಾರಿ

Published

on

ಮಂಗಳೂರು/ಬೆಂಗಳೂರು: ರಿಯಾಲಿಟಿ ಶೋ ಮೂಲಕವೇ ಕನ್ನಡಿಗರ ಮನೆಮಾತಾಗಿರುವ ಗಗನ ಭಾರಿ ಸದ್ಯ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ’ ಮೆಂಟರ್ ಆಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಒಂದು.. ನಾನು ಅಷ್ಟೊಂದು ಫೇಮಸ್ ಇಲ್ಲದ ಸಂದರ್ಭದಲ್ಲೇ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡದ ಸ್ಟಾರ್‌ ನಟರೊಬ್ಬರು ಫಾಲೋ ಮಾಡ್ತಿದ್ರು ಎಂದು ಹೇಳಿದ್ದಾರೆ. ಇದು ಅಭಿಮಾನಿಗಳ ಕೂತುಹಲಕ್ಕೆ ಕಾರಣವಾಗಿದೆ.

ಕಿರುತೆರೆಯಲ್ಲಿ ಫೇಮಸ್ಸು ಆಗಿರುವವರ ಪೈಕಿ ಗಗನಾ ಕೂಡಾ ಒಬ್ಬರು. “ಮಹಾನಟಿ” ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದಲ್ಲದೇ, ಮನೆಮಗಳಂತೆ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ ನಟಿ ಗಗನಾ ಭಾರಿ. ತಮ್ಮ ಇನ್‌ಸ್ಟೆಂಟ್ ಡೈಲಾಗ್‌ಗಳ ಮೂಲಕವೇ ಪ್ರೇಕ್ಷಕರ ಮನಕದ್ದ ಚೆಲುವೆ.

ಡೈಲಾಗ್ ಡೆಲಿವರಿಗೆ ಫೇಮಸ್ ಆಗಿದ್ದ ಗಗನಾ ಭಾರಿ, ಮಹಾನಟಿ ರಿಯಾಲಿಟಿ ಶೋನ ಉದ್ದಕ್ಕೂ ಬಹಳಷ್ಟು ಪಾಪ್ಯುಲಾರಿಟಿ ಗಳಿಸಿದ್ದರು. “ಮಹಾನಟಿ” ರಿಯಾಲಿಟಿ ಶೋ ಅಷ್ಟೇ ಅಲ್ಲದೆ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ರಿಯಾಲಿಟಿ ಶೋನಲ್ಲಿಯೂ ಈಕೆ ಕಾಣಿಸಿಕೊಂಡಿದ್ದಾರೆ. ಇದೀಗ “ಭರ್ಜರಿ ಬ್ಯಾಚುಲರ್” ಸೀಸನ್ 2 ನಲ್ಲಿಯೂ ಭಾಗವಹಿಸಿದ್ದಾರೆ. ತಮ್ಮ ಐಟಿ ಕೆಲಸ ಬಿಟ್ಟು ಇದೀಗ ರಿಯಾಲಿಟಿ ಶೋ ಗಳಲ್ಲಿಯೇ ಸಕ್ರಿಯರಾಗಿದ್ದಾರೆ.

ಆದರೆ ಗಗನಾ ಭಾರಿ “ಮಹಾನಟಿ” ರಿಯಾಲಿಟಿ ಶೋಗೆ ಬರುವ ಮೊದಲೇ ಇವರನ್ನು ಕನ್ನಡದ ಸ್ಟಾರ್ ನಟರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದರು.. ಎಂಬ ವಿಚಾರವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಹಾಡು ನಕಲು ಮಾಡಿದ ಆರೋಪ; ಎಆರ್‌ ರೆಹಮಾನ್‌ಗೆ 2 ಕೋಟಿ ರೂ. ದಂಡ

ಈ ವಿಚಾರವನ್ನು ಗಗನಾ ಭಾರಿ ಅವರೇ ಹಂಚಿಕೊಂಡಿದ್ದು, “”ನಾನು ರಿಯಾಲಿಟಿ ಶೋಗೆ ಬರುವುದಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದೆ. ಹೀಗಿರುವಾಗ ನನ್ನ ಒಂದು ರೀಲ್ಸ್ ರವಿ ಸರ್‌ಗೆ ಇಷ್ಟವಾಗಿ, ಅವರು ಅದನ್ನು ಲೈಕ್ ಮಾಡಿದರು. ಜೊತೆಗೆ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಕೂಡ ಮಾಡಿದ್ರು. ‘ಮಹಾನಟಿ’ ಶೋಗಿಂತಲೂ ಮುಂಚೆ ಯಾರಾದರೂ ಸೆಲೆಬ್ರಿಟಿ ನನ್ನನ್ನು ಫಾಲೋ ಮಾಡಿದ್ದಾರೆ ಎಂದರೆ, ಅದು ರವಿಚಂದ್ರನ್ ಸರ್. ನಾನು ಆಮೇಲೆ ರವಿ ಸರ್‌ಗೆ ಮೇಸೆಜ್ ಮಾಡಿ, ‘ನೀವು ನನ್ನನ್ನು ಫಾಲೋ ಮಾಡಿದ್ದು ನನಗೆ ಖುಷಿ ಆಯ್ತು, ನನಗೆ ಬೂಸ್ಟ್ ಅಪ್ ಸಿಕ್ಕಂತೆ ಆಯ್ತು ಅಂತ ಹೇಳಿದ್ದೆ. ಬಹಳಷ್ಟು ಜನ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರದ್ದು ಲಕ್ಕಿ ಹ್ಯಾಂಡ್ ಎಂದು ಹೇಳುವುದನ್ನು ಕೇಳಿದ್ದೆ, ಅದು ನನ್ನ ವಿಷಯದಲ್ಲಿ ಸತ್ಯವೇ ಆಯಿತು. ಅವರು ನನ್ನನ್ನು ಫಾಲೋ ಮಾಡಲು ಆರಂಭಿಸಿ ಕೆಲವೇ ದಿನಗಳಿಗೆ ಮಹಾ ನಟಿ ಎಂಬ ದೊಡ್ಡ ರಿಯಾಲಿಟಿ ಶೋ ಗೆ ನಾನು ಆಯ್ಕೆಯಾಗಿ ಇಂದು ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದಿದ್ದೇನೆ” ಎಂದಿದ್ದಾರೆ ನಟಿ ಗಗನಾ.

Continue Reading

bangalore

ಇಬ್ಬರು ಮೂವರಾಗಿ ಇಂದಿಗೆ 3 ತಿಂಗಳು; ಮಗನ ಫೊಟೋ ರಿವೀಲ್ ಮಾಡಿದ ವಶಿಷ್ಠ ದಂಪತಿ

Published

on

ಸ್ಯಾಂಡಲ್‌ವುಡ್‌ನ ಕ್ಯೂಟ್ ಹೋಡಿಯಾಗಿ ಗುರುತಿಸಿಕೊಂಡಿರುವ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ಗಂಡು ಮಗುವಿಗೆ ಜನ್ಮ ನೀಡಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿತ್ತು. ಈಗ ಮಗು ಜನಿಸಿ 3 ತಿಂಗಳು ತುಂಬಿದ ಖುಷಿಯಲ್ಲಿ ಮಗನ ಫೋಟೋವನ್ನು ವಸಿಷ್ಠ ದಂಪತಿ ರಿವೀಲ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಫುಲ್ ಖುಷ್ ಆಗಿದೆ.
2023ರ ಜನವರಿ 26ರಂದು ವಸಿಷ್ಠ ಮತ್ತು ಹರಿಪ್ರಿಯಾ ಮೈಸೂರಿನಲ್ಲಿ ಮದುವೆಯಾದರು. ಇದೇ ದಿನಾಂಕ ಅಂದರೆ 2025 ರ ಜ.26ರಂದು ಹರಿಪ್ರಿಯಾ ಮುದ್ದಾದ ಗಂಡು ಮಗನಿಗೆ ಜನ್ಮ ನೀಡಿದರು. ಹೀಗಾಗಿ ಸಿನಿಮಾಗೆ ಬ್ರೇಕ್ ಕೊಟ್ಟು ಮಗನ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಮಗನಿಗೆ 3 ತಿಂಗಳು ತುಂಬಿದ ಖುಷಿಯಲ್ಲಿ ಮೊದಲ ಬಾರಿಗೆ ಹರಿಪ್ರಿಯಾ ದಂಪತಿ ಮಗನ ಫೊಟೋ ರಿವೀಲ್ ಮಾಡಿದ್ದಾರೆ.
ಮಗನೊಂದಿಗಿನ ಬ್ಲ್ಯಾಕ್ & ವೈಟ್ ಫೋಟೋ ಶೇರ್ ಮಾಡಿ, ‘ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು’ ವಸಿಷ್ಠ ದಂಪತಿ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸದ್ಯ ಈ ಫೊಟೋ ಫುಲ್ ವೈರಲ್ ಆಘುತ್ತಿದೆ ಹಲವಾರು ಕಾಮೆಂಟ್‌ಗಳನ್ನು ಒಳಗೊಂಡಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page