Connect with us

FILM

‘ಎ’oತಹ ಖುಷಿ ಸುದ್ದಿ ಕೊಟ್ರು ಗೊತ್ತಾ ರಿಯಲ್ ಸ್ಟಾರ್ ಉಪೇಂದ್ರ?

Published

on

ಸ್ಯಾಂಡಲ್ ವುಡ್ : ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ ಕೇಳ್ಬೇಕಾ? ಅವರ ಸಿನಿಮಾ ನೋಡಲು ಎಲ್ಲರೂ ತುದಿಗಾಲಲ್ಲಿ ಕಾಯುತ್ತಾರೆ. ಅದರಲ್ಲೂ ಅವರ ನಿರ್ದೇಶನ ಅಂದ್ರೆ ಹೇಳೋದೆ ಬೇಡ. ಕುತೂಹಲ ಹೆಚ್ಚಾಗಿರುತ್ತದೆ. ಸದ್ಯ ಉಪ್ಪಿ ‘ಯುಐ’ ಸಿನಿಮಾದಲ್ಲಿ ಬಿಝಿಯಾಗಿರೋದು ಗೊತ್ತಿರುವ ವಿಚಾರ. ಸಿನಿಮಾದ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ರೆ, ಉಪ್ಪಿ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಯುಐ ಸಿನಿಮಾ ನಡುವೆ ಗುಡ್ ನ್ಯೂಸ್ ಕೊಟ್ರು ಉಪ್ಪಿ:

ಯುಐ ಉಪ್ಪಿದಾದಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಈಗಾಗಲೇ ಪೋಸ್ಟರ್, ಟೀಸರ್ ನಿಂದ ಭಾರೀ ಸದ್ದು ಮಾಡಿದೆ. ಅಲ್ಲದೇ, ‘ಟ್ರೋಲಾಗುತ್ತೆ’ ಹಾಡಂತೂ ಭಾರೀ ಸದ್ದು ಮಾಡಿದೆ, ಈಗಾಗಲೂ ಜನರ ನಾಲಗೆಯಲ್ಲಿ ನಲಿದಾಡುತ್ತಿದೆ.

ಮನೋಹರ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಯುಐ’ಗೆ ಅಜನೀಶ್ ಲೋಕನಾಥ್ ಸಂಗೀತವಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಚಿತ್ರದ ಬಗ್ಗೆ ಹೊಸ ವಿಚಾರ ಸಿಗಬಹುದಾ ಅಂತ ಕಾದವರಿಗೆ ಈಗ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಉಪ್ಪಿ ಬ್ಲಾಕ್ ಬಾಸ್ಟರ್ ಹಿಟ್ ಚಿತ್ರ ‘ಎ’ ತೆರೆಗೆ ಬರುತ್ತಿದೆ. ಅದೂ ಹೊಸ ರೂಪದಲ್ಲಿ.

ಮತ್ತೆ ಬರುತ್ತಿದೆ ‘ಎ’ :


ಹಳೆ ಚಿತ್ರಗಳು ಮತ್ತೆ ತೆರೆಗೆ ಬರೋದು ಸಾಮಾನ್ಯ. ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ನಟನೆಯ ಪವರ್, ಅಂಜನೀಪುತ್ರ ತೆರೆಗೆ ಬಂದಿದ್ದವು. ಇದೀಗ ಉಪೇಂದ್ರ ಅವರ ‘ಎ’ ಸಿನಿಮಾ ತೆರೆಗೆ ಬರಲಿದೆ. ‘ಎ’ ಸಿನಿಮಾ ಕನ್ನಡ ಸಿನಿ ರಂಗದಲ್ಲಿ ಹೊಸ ಹವಾ ಸೃಷ್ಟಿಸಿದ್ದ ಚಿತ್ರ. ಉಪೇಂದ್ರ ನಿರ್ದೇಶಕನಾಗಿ, ಸಹ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದರು. ‘ಎ’ ಚಿತ್ರದ ಮೂಲಕ ಅವರು ನಿರ್ದೇಶನದ ಜೊತೆ ನಾಯಕ ನಟನಾಗಿಯೂ ಕಾಣಿಸಿಕೊಂಡರು. 1998 ರಲ್ಲಿ ಈ ಸಿನಿಮಾ ಬಿಡುಗಡೆಗೊಂಡಿತ್ತು.

‘ಎ’ ಚಿತ್ರ ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಚಿತ್ರ ಕನ್ನಡ ಸಿನಿರಂಗದಲ್ಲಿ ಹೊಸ ಅಲೆ ಹುಟ್ಟು ಹಾಕಿತ್ತು. ವಿಭಿನ್ನ ಶೈಲಿಯ ಕಥಾ ನಿರೂಪಣೆ ಜನರಿಗೆ ಇಷ್ಟವಾಗಿತ್ತು. ಸಿನಿಮಾ ನೋಡಿದವರು ಮತ್ತೆ ಮತ್ತೆ ನೋಡಲಾರಂಭಿಸಿದ್ದರು. ಉಪ್ಪಿ ಸಿನಿಮಾವೆಂದರೆ ಒಗಟು…ಅರ್ಥೈಯಿಸಿಕೊಂಡರೆ ಅದರಾಳದ ಜೀವಂತ ಬೇರು ಗೋಚರಿಸುವುದು. ಈ ಚಿತ್ರ ನೋಡಿದವರು ಮತ್ತೆ ಉಪ್ಪಿ ಸಿನಿಮಾಗಳಿಗಾಗಿ ಕಾಯಲಾರಂಭಿಸಿದರು. ಅಷ್ಟರ ಮಟ್ಟಿಗೆ ಸೌಂಡ್ ಮಾಡಿತ್ತು ‘ಎ’.

ಗುರುಕಿರಣ್ ಸಂಗೀತವೂ ಮೋಡಿ ಮಾಡಿತ್ತು. ಚಾಂದಿನೀ…ಎಂದು, ಸುಮ್ ಸುಮ್ನೇ ನಗ್ತಾಳೆ ಎನ್ನುತ್ತಾ…ಮಾರಿ ಕಣ್ಣು ಹೋರಿ ಮ್ಯಾಕೆ ಎಂದು ಜನ ನಲಿದರು. ಹೇಳ್ಕೊಳಕ್ಕೊಂದೂರು ತಲೆ ಮ್ಯಾಗೆ ಒಂದ್ಸೂರು ಎಂದವರು ಇದು ಒನ್ ಡೇ ಮ್ಯಾಚು ಕಣೋ…ಡೆರೆಂಡ್ಯಾವ್..ಡ್ಯಾವ್..ಡ್ಯಾವ್ ಎನ್ನುತ್ತಾ ಮ್ಯೂಸಿಕ್ ನ್ನೂ ಬಾಯಲ್ಲಿ ನುಡಿಸುವ ಮಟ್ಟಿಗೆ ಹಾಡುಗಳು ಕ್ಲಿಕ್
ಆಗಿದ್ದವು. ಈಗಲೂ ಆಗುತ್ತಿದೆ. ಇದು ಎವರ್ ಗ್ರೀನ್ ಸಿನಿಮಾ…ನಿತ್ಯಹರಿದ್ವರ್ಣ ಗೀತೆಗಳ ಚಿತ್ರ.

ಇದನ್ನೂ ಓದಿ : ಬದುಕುಳಿವ ಛಾನ್ಸ್ ಇದ್ದಿದ್ದು ಕೇವಲ ಶೇ. 30 ರಷ್ಟು…ನಿತ್ಯ ಜಗಳ…ಗಾಬರಿ; ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಗೆದ್ದ ಕಥೆ ಇಲ್ಲಿದೆ

ಯಾವಾಗ ತೆರೆಗೆ?

ಎ ಚಿತ್ರವನ್ನು 1.2 5 ಕೋಟಿಯಲ್ಲಿ ತಯಾರಿಸಲಾಗಿದ್ದು, 20 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.(ಗೂಗಲ್ ಮಾಹಿತಿ) ಇದೀಗ ಮತ್ತೆ ಚಿತ್ರ ಬಿಡುಗಡೆಯಾಗುತ್ತಿದೆ. ಮೇ 17 ರಂದು ತೆರೆಗೆ ಬರಲಿದೆ. ಇವತ್ತಿನ ಕಾಲಕ್ಕೆ ತಕ್ಕ ಹಾಗೆ ಚಿತ್ರವನ್ನು ತಯಾರು ಮಾಡಲಾಗಿದೆ. ಡಿಜಿಟಲ್ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಮತ್ತೆ ಹೇಗೆ ಉಪ್ಪಿ ‘ಎ’ ಸದ್ದು ಮಾಡಲಿದೆ? ಎಷ್ಟು ಕಲೆಕ್ಷನ್ ಮಾಡಲಿದೆ? ಎಂದು ಕಾದು ನೋಡಬೇಕಿದೆ.

DAKSHINA KANNADA

ಶೋಷಣೆಯನ್ನು ಎದುರಿಸಿ ನಿಂತ ವಿದ್ಯಾವಂತ ಮಹಿಳೆಯ ಕಥೆ; ‘ಪಿದಾಯಿ’ ಮೇ 9 ಕ್ಕೆ ತೆರೆಗೆ

Published

on

ಮಂಗಳೂರು : ಸಂಪ್ರದಾಯಸ್ತರ ಮನೆಯಲ್ಲಿ ನಡೆಯುವ ಮಹಿಳಾ ಶೋಷಣೆಯ ವಿರುದ್ಧದ ಹೋರಾಟ ಹಾಗೂ ಮಹಿಳೆಯರ ಘನತೆ ಎತ್ತಿಹಿಡಿಯುವ ಸಂದೇಶ ಹೊಂದಿರುವ ತುಳು ಸಿನೆಮಾ ‘ಪಿದಾಯಿ’. ಈಗಾಗಲೇ ಈ ಚಿತ್ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿದೆ.  2 ನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ಈ ಚಿತ್ರ ಬೆಳ್ಳಿಪರದೆಯ ಮೇಲೆ ಮೋಡಿ ಮಾಡಲು ಬರುತ್ತಿದ್ದು, ಮೇ 9 ರಂದು ತೆರೆಗೆ ಅಪ್ಪಳಿಸಲಿದೆ.

ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸಂತೋಷ್ ಮಾಡ. ಜೀಟಿಗೆ ಚಿತ್ರ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂತೋಷ್ ಮಾಡ ಈ ಬಾರಿ ಮಹಮ್ಮಾಯಿ ಪಾತ್ರಿಯ ಮನೆಯಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರ ಮೇಲಾಗುವ ಶೋಷಣೆಯ ಕುರಿತು ಕಥೆ ಹೇಳಿದ್ದಾರೆ. ನಮ್ಮ ಕನಸು ಬ್ಯಾನರ್ ನಲ್ಲಿ  ಕೆ . ಸುರೇಶ್ ನಿರ್ಮಿಸಿದ್ದಾರೆ.  ಮುಡಿಪು ಹಾಗೂ ಮಂಜೇಶ್ವರ ಪರಿಸರದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ರಮೇಶ್ ಶೆಟ್ಟಿಗಾರ್ ಅವರು ಚಿತ್ರಕತೆ ಬರೆದಿದ್ದು,  ಮಹಾಮಾಹಿ ಪಾತ್ರಿಯಾಗಿ ಖ್ಯಾತ ನಟ ಶರತ್ ಲೋಹಿತಾಶ್ವ ನಟಿಸಿದ್ದಾರೆ.  ಹಲವಾರು ಪ್ರಶಸ್ತಿ ಪಡೆದಿರುವ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಖ್ಯಾತನಾಮರು ಈ ಸಿನೆಮಾದಲ್ಲಿ ಕೆಲಸ ಮಾಡಿದ್ದಾರೆ. ರೂಪಾ ವರ್ಕಾಡಿ, ಇಳಾ ವಿಟ್ಲ, ದೀಪಕ್ ರೈ ಪಾಣಾಜೆ, ದೇವಿ ನಾಯರ್, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ ಮೊದಲಾದವರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : ರನ್ಯಾ ರಾವ್‌ಗೆ ಮತ್ತೆ ಸಂಕಷ್ಟ; ನಟಿ ವಿರುದ್ಧ’ಕಾಫಿಪೋಸಾ’ ಜಾರಿ

ಈ ಸಿನಿಮಾದ ಛಾಯಾಗ್ರಾಹಣ ಹೊಣೆಯನ್ನು ಉಣ್ಣಿ ಮಾಡವೂರ್‌ ಹೊತ್ತಿದ್ದು, ಅಜಯ್ ನಂಬೂದಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ.

Continue Reading

FILM

ತೆಲುಗು ಸಿನಿಮಾಗೆ ಧ್ವನಿಯಾದ ಸಾನ್ವಿ ಸುದೀಪ್

Published

on

ಸುದೀಪ್ ಮಗಳಿಗೆ ಹಾಡೋದು ಎಂದರೆ ಎಲ್ಲಿಲ್ಲದ ಪ್ರೀತಿ. ಇನ್ನು ಸಾನ್ವಿ ಸುದೀಪ್ ಶಿಕ್ಷಣದ ಜೊತೆಗೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಸಾನ್ವಿ ಅವರ ಧ್ವನಿ ಬೇರೆಯದೇ ರೀತಿ ಇದೆ. ಈಗ ಅವರು ತೆಲುಗು ಸಿನಿಮಾಗೆ ಧ್ವನಿ ಆಗಿದ್ದಾರೆ ಅನ್ನೋದು ವಿಶೇಷ. “ಹಿಟ್ 3” ಟೇಲರ್ನಲ್ಲಿ ಬರೋ ಒಂದು ಆಲಾಪದಲ್ಲಿ ಸಾನ್ವಿ ಧ್ವನಿ ಇದೆ.

“ಹಿಟ್ 3” ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಟ್ರೇಲರ್ ಕೊನೆ ಆಗೋ ಸಂದರ್ಭದಲ್ಲಿ ಹಿನ್ನೆಲೆ ಸಂಗೀತದ ಜೊತೆ ಒಂದು ಧ್ವನಿಯ ಆಲಾಪ ಬರುತ್ತದೆ. ಇದು ಯಾರದ್ದು ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಲ್ಲ. ಈ ವಿಚಾರವನ್ನು ಸ್ವತಃ ನಾನಿ ಅವರೇ ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಡ್ರಿಲ್ ಆಗಿದ್ದಾರೆ.

ಅದು ಸಾನ್ವಿ ಅವರದ್ದು ಎಂದಿರೋ ನಾನಿ ಅವರು, ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ನಾನಿ ಹಾಗೂ ಸಾನ್ವಿ ಮಧ್ಯೆ ಪರಿಚಯ ಬೆಳೆಯೋಕ ಕಾರಣ ಆಗಿದ್ದು, ‘ಈಗ’ ಸಿನಿಮಾ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ನಾನಿ ಹೀರೋ ಆಗಿ ಕಾಣಿಸಿಕೊಂಡರೆ, ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಾನಿ ಪರಿಚಯ ಸಾನ್ನಿಗೆ ಆಗಿತ್ತು. ಆ ಬಾಂಡಿಂಗ್ ಈಗಲೂ ಮುಂದುವರಿದಿದೆ.

Continue Reading

FILM

ತಂದೆಗೆ ಕೊಟ್ಟ ಆ ಒಂದು ಮಾತಿನಿಂದ ಶಾರುಖ್ ಇನ್ನೂ ಸಹ ಸರಿಯಗಿ ಕಾಶ್ಮೀರ ನೋಡಿಲ್ವಂತೆ..!?

Published

on

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದವರನ್ನೇ ಟಾರ್ಗೆಟ್ ಮಾಡಿ ಹತ್ಯಾಕಾಂಡ ನಡೆಸಲಾಗಿದೆ. ಉಗ್ರರ ದಾಳಿಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ದಾಳಿಯ ಕುರಿತು ನಟ ಶಾರುಖ್ ಖಾನ್ ಅವರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶಾರುಖ್, ‘ಪಹಲ್ಗಾಮ್‌ನಲ್ಲಿ ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು. ಇಂತಹ ಸಮಯದಲ್ಲಿ ನಾವು ದೇವರ ಕಡೆಗೆ ನೋಡಿ, ಸಂತ್ರಸ್ಥ ಕುಟುಂಬಗಳಿಗಾಗಿ ಪ್ರಾರ್ಥಿಸಬಹುದು ಮತ್ತು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಬಹುದು. ಒಂದು ರಾಷ್ಟ್ರವಾಗಿ ಬಲವಾಗಿ ನಿಂತು ಈ ಘೋರ ಕೃತ್ಯದ ವಿರುದ್ದ ನ್ಯಾಯವನ್ನು ಪಡೆಯೋಣ’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದರು.

ಇದರ ಬೆನ್ನಲ್ಲೇ ಶಾರುಖ್ ಖಾನ್ ಅವರು ನಾನು ಕಾಶ್ಮೀರಕ್ಕೆ ಮಾತ್ರ ಹೋಗಲ್ಲ ಎಂದು ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹಿಂದೆ ನಟ ಶಾರುಖ್ ಖಾನ್ 2012ರಲ್ಲಿ ‘ಜಬ್ ತಕ್ ಹೈ ಜಾನ್’ ಸಿನಿಮಾದ ಶೂಟಿಂಗ್‌ಗಾಗಿ ಕಾಶ್ಮೀರಕ್ಕೆ ಹೋಗಿದ್ದರು. ಆದಾದ ನಂತರ 11 ವರ್ಷಗಳ ನಂತರ ‘ಡಂಕಿ’ ಸಿನಿಮಾದ ಶೂಟಿಂಗ್ ಸಲುವಾಗಿ ತೆರಳಿದ್ದರು. ಆದರೆ ಎಂಜಾಯ್ ಮಾಡಲು ಕುಟುಂಬಸ್ಥರ ಜೊತೆಗೆ ಅವರು ಒಂದು ಬಾರಿಯೂ ಕಾಶ್ಮೀರಕ್ಕೆ ಭೇಟಿ ಕೊಟ್ಟಿಲ್ಲ. ಇದಕ್ಕೆ ಕಾರಣ ತಂದೆಗೆ ಕೊಟ್ಟ ಮಾತು.

ಇದನ್ನೂ ಓದಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡ ಸೂರತ್‌ನ ಉದ್ಯಮಿ

ತಂದೆಯ ಮಾತಿಗೆ ತಪ್ಪದ ಶಾರುಖ್
ಈ ಹಿಂದೆ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಶಾರುಖ್ ತಮ್ಮ ದಿವಂಗತ ತಂದೆಗೆ ನೀಡಿದ್ದ ಮಾತಿನಿಂದಾಗಿ ಕಾಶ್ಮೀರಕ್ಕೆ ಭೇಟಿ ನೀಡಿಲ್ಲ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ತನ್ನ ತಂದೆಯೊಂದಿಗೆ ಮಾತಾಡಿದ್ದನ್ನು ನೆನಪಿಸಿಕೊಳ್ಳುತ್ತಾ, ನನ್ನ ತಂದೆಯ ತಾಯಿ ಕಾಶ್ಮೀರಿ. ಜೀವನದಲ್ಲಿ ಈ ಮೂರು ಪ್ರದೇಶಗಳಿಗೆ ಹೋಗಲೇಬೇಕು. ಒಂದು ಇಸ್ತಾಂಬುಲ್, ಇಟಲಿಯ ರೋಮ್ ಮತ್ತು ಕಾಶ್ಮೀರಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು ಎಂದಿದ್ದರಂತೆ. ಇಸ್ತಾಂಬುಲ್, ಇಟಲಿ ರೋಮ್‌ಗೆ ಹೋಗಿಲ್ಲಂದ್ರೂ ಪರವಾಗಿಲ್ಲ. ಆದ್ರೆ ಕಾಶ್ಮೀರ ನೋಡಲೇಬೇಕು ಅಂದಿದ್ದರು. ಆದ್ರೆ ನನ್ನ ತಂದೆ ಬಹಳ ಬೇಗ ನಿಧನರಾದರು. ನಾನು ಇಡೀ ಜಗತ್ತನ್ನು ಸುತ್ತಾಡಿದ್ದೇನೆ. ಆದರೆ ಕಾಶ್ಮೀರಕ್ಕೆ ಮಾತ್ರ ಎಂದಿಗೂ ಹೋಗಿಲ್ಲ. ಅದರಲ್ಲೂ ನನ್ನ ಸ್ನೇಹಿತರು ಪ್ರತಿ ಬಾರಿ ಕರೆಯುತ್ತಾರೆ. ಕುಟುಂಬ ರಜೆಗೆ ಕಾಶ್ಮೀರಕ್ಕೆ ಹೋಗುತ್ತಾರೆ. ಆದರೆ ನಾನು ಎಂದಿಗೂ ಹೋಗಲೇ ಇಲ್ಲ. ಏಕೆಂದರೆ ನನ್ನ ತಂದೆ ಹೇಳಿದ್ದರು ನಾನು ಇಲ್ಲದೇ ಕಾಶ್ಮೀರವನ್ನು ನೋಡಬೇಡ, ಅದನ್ನು ನಿನಗೆ ನಾನು ತೋರಿಸುತ್ತೇನೆ ಎಂದಿದ್ದರು. ಹೀಗಾಗಿ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಟ ಶಾರುಖ್ ಖಾನ್ ಇನ್ನೂ ಸಹ ಸರಿಯಾಗಿ ಕಾಶ್ಮಿರವನ್ನು ನೋಡಿಲ್ವಂತೆ.

Continue Reading
Advertisement

Trending

Copyright © 2025 Namma Kudla News

You cannot copy content of this page