Connect with us

DAKSHINA KANNADA

ಚತುಷ್ಪಥ ಹೆದ್ದಾರಿ ನಿರ್ಮಾಣ-ಪರಿಹಾರ ಪಾವತಿ ವಿಳಂಬಕ್ಕೆ ಭೂ ಮಾಲೀಕರ ಹೋರಾಟ ಸಮಿತಿ ಆಕ್ರೋಶ

Published

on

ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ರ ಬಿಕರ್ಣಕಟ್ಟೆ ಕೈಕಂಬದಿಂದ ಸಾಣೂರು ವರೆಗೆ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯಿಂದ ಭೂಮಿ ಕಳೆದುಕೊಂಡು ಸಂತ್ರಸ್ತರಾಗುವ ಕುಟುಂಬಗಳಿಗೆ ಪರಿಹಾರ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಭೂ ಮಾಲೀಕರ ಹೋರಾಟ ಸಮಿತಿ ಎನ್‌.ಎಚ್‌. 169 ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರು: ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ರ ಬಿಕರ್ಣಕಟ್ಟೆ ಕೈಕಂಬದಿಂದ ಸಾಣೂರು ವರೆಗೆ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯಿಂದ ಭೂಮಿ ಕಳೆದುಕೊಂಡು ಸಂತ್ರಸ್ತರಾಗುವ ಕುಟುಂಬಗಳಿಗೆ ಪರಿಹಾರ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಭೂ ಮಾಲೀಕರ ಹೋರಾಟ ಸಮಿತಿ ಎನ್‌.ಎಚ್‌. 169 ಆಕ್ರೋಶ ವ್ಯಕ್ತಪಡಿಸಿದ್ದು, ಆ. 22 ರಿಂದ 29 ರ ವರೆಗೆ ಎನ್‌ಎಚ್‌ಎಐ ಕಚೇರಿ ಎದುರು ಧರಣಿ ಮುಷ್ಕರವನ್ನು ಹಮ್ಮಿಕೊಂಡಿದೆ.

ಭೂ ಮಾಲೀಕರ ಹೋರಾಟ ಸಮಿತಿಯ ಅಧ್ಯಕ್ಷ ಮರಿಯಮ್ಮ ತೋಮಸ್‌ ಅವರು  ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ 2016 ರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಆದರೆ 2020 ರಲ್ಲಿ ಆಧಿಸೂಚನೆ ಹೊರಡಿಸಲಾಗಿದೆ. 2016 ರಲ್ಲಿ ನಿಗದಿ ಪಡಿಸಿದ ಪರಿಹಾರ ಮೊತ್ತ 485 ಕೋಟಿ ರೂ. ಅದು 2020 ರಲ್ಲಿ 1073 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಆದರೆ ಪರಿಹಾರ ಇನ್ನೂ ಪಾವತಿಯಾಗಿಲ್ಲ. ವಿಳಂಬ ನೀತಿ ಅನುಸರಿಸಲಾಗುತ್ತಿದೆ.

ಈಗ 2023 ರಲ್ಲಿ ಭೂ ಮೌಲ್ಯವನ್ನು ಸರಕಾರ ಜಾಸ್ತಿ ಮಾಡಿದೆ. ಒಂದೊಮ್ಮೆ ನಾವು ಜಾಗ ಖರೀದಿ ಮಾಡುವುದಾರೆ 2023 ರ ಮೌಲ್ಯ ನೀಡ ಬೇಕಾಗುತ್ತದೆ.

ಆದರೆ ನಮಗೆ ಈಗ ಸಿಗುವುದು 2020 ರಲ್ಲಿ ನಿಗದಿ ಪಡಿಸಿದ ಮೌಲ್ಯ ಮಾತ್ರ. ಆದನ್ನು ಪಾವತಿಸಲು ಕೂಡಾ ವಿಳಂಬ ಮಾಡಲಾಗುತ್ತಿದೆ.

2016 ರಲ್ಲಿ ಭೂ ಸ್ವಾಧೀನಕ್ಕೆ ಆದೇಶ ಆಗಿರುವುದರಿಂದ ಕಳೆದ 7- 8 ವರ್ಷಗಳಿಂದ ಸ್ವಾಧೀನತೆ ಆಗಲಿರುವ ಜಮೀನಿನಲ್ಲಿ ಕೃಷಿ ಮಾಡಿಲ್ಲ. ಇನ್ನೊಂದೆಡೆ ಪರಿಹಾರವನ್ನೂ ನೀಡಲಾಗಿಲ್ಲ.

ಆರು ತಿಂಗಳ ಹಿಂದೆ ಮಾ. 7 ರಂದು ಎನ್‌ಎಚ್‌ಎಐ ಕಚೇರಿ ಎದುರು ಪ್ರತಿಭಟನೆ ನಡೆಸಿದಾಗ ಒಂದು ತಿಂಗಳೊಳಗೆ ಪರಿಹಾರ ಪಾವತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ತಿಳಿಸಿದ್ದರು.

ಅದರೆ ಅವರು ಮಾತು ಕೊಟ್ಟು ಇದೀಗ 6 ತಿಂಗಳಾದರೂ ಇನ್ನೂ ಪರಿಹಾರ ಪಾವತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಹಾಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವಿಶ್ವಜಿತ್‌, ಸಂಚಾಲಕ ಪ್ರಕಾಶ್ಚಂದ್ರ, ರತ್ನಾಕರ ಶೆಟ್ಟಿ, ಜಯರಾಮ ಪೂಜಾರಿ ಉಪಸ್ಥಿತರಿದ್ದರು.

DAKSHINA KANNADA

ಮಂಗಳೂರು: ಪಾವನಿ ಸಿಲ್ಕ್ಸ್ & ಟೆಕ್ಸ್‌ಟೈಲ್ಸ್ ಶೋರೂಂ ಲೋಕಾರ್ಪಣೆ

Published

on

ಮಂಗಳೂರು: ಕಳೆದ 10 ವರ್ಷಗಳಿಂದ ಜವುಳಿ ಉದ್ಯಮದಲ್ಲಿ ಜನಮನ್ನಣೆಗೆ ಪಾತ್ರವಾಗಿರುವ ಪಾವನಿ ಸಿಲ್ಕ್ಸ್ ಮತ್ತು ಫ್ಯಾಬ್ರಿಕ್ಸ್‌ನ ಸಹ ಸಂಸ್ಥೆ ಪಾವನಿ ಸಿಲ್ಕ್ಸ್ ಮತ್ತು ಟೆಕ್ಸ್ ಟೈಲ್ಸ್ ಎರಡನೇ ಶೋರೂಂ ಮಂಗಳೂರಿನ ಭವಂತಿ ಸ್ಟ್ರೀಟ್ ನ ಮಹಾಲಕ್ಷ್ಮಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು.

ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್, ಕಟ್ಟಡ ಮಾಲಕ ರವೀಂದ್ರ ನಿಕಂ ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಶೋರೂಂ ಉದ್ಘಾಟಿಸಿದರು. ಪುಟ್ಟ ಮಕ್ಕಳಿಂದ ದೀಪ ಬೆಳಗಿಸುವ ಮೂಲಕ ಶೋರೂಂ ವಿಶೇಷ, ವಿಭಿನ್ನ ರೀತಿಯಲ್ಲಿ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗದಲ್ಲಿ ವ್ಯವಹಾರ ಮಾಡಬೇಕಾದರೆ ತುಂಬಾ ಕಷ್ಟವಿದೆ. ನಾವು ವ್ಯವಹಾರಕ್ಕೆ ಇಳಿದಾಗ ಅದರ ಕಷ್ಟ ಗೊತ್ತಾಗುತ್ತದೆ. ಆದರೆ ಆ ಕಷ್ಟವನ್ನು ಮೀರಿ ನಾವು ಯಶಸ್ವಿ ಆಗುವುದೇ ನಮ್ಮ ಸಾಧನೆ. ಆ ಸಾಧನೆ ಮಾಡಿ ಇನ್ನೂ ಹಲವರಿಗೆ ಉದ್ಯೋಗ ನೀಡುವ ಕೆಲಸಕ್ಕೆ ದೇವರ ಅನುಗ್ರಹ ಇರುತ್ತದೆ ಎಂದರು. ಪಾವನಿ ಸಂಸ್ಥೆಯ ಇನ್ನೂ ಹಲವು ಶಾಖೆಗಳು ಬೆಳೆದುಕೊಂಡು ಬರಲಿ ಎಂಧರು.

ದೈವಜ್ಞ ಕೆ ಸಿ ನಾಗೇಂದ್ರ ಅವರು ಮಾತನಾಡಿ ಶ್ರಮಜೀವಿಯಾಗಿರುವ ಐವರು ಯುವಕರು ಇಂದು ತಮ್ಮದೇ ಸಂಸ್ಥೇಯನ್ನು ಕಟ್ಟಿಕೊಂಡು ಇದೀಗ ೨ನೇ ಶೋರೂಂ ಉದ್ಘಾಟನೆ ಮಾಡಿರುವುದು ಸಂತಸದ ವಿಷಯ. ಈ ಮೂಲಕ ಅನ್ಯರಿಗೂ ಕೆಲಸ ನೀಡುತ್ತಿರುವುದು ಪುಣ್ಯದ ಕೆಲಸವಾಗಿದೆ. ಸಮಾಜಕ್ಕೆ ನಾವು ಮಾದರಿಯಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.

ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಮ್ ಜಮಾಅತ್ ನ ಖತೀಬ್ ಬಿ.ಕೆ.ಇಲ್ಯಾಸ್ ಬಾಖವಿ ಮಾತನಾಡಿ, ಇಲ್ಲಿ ಸರ್ವಧರ್ಮದವರು ಜೊತೆಗೆ ಸೇರಿ ಈ ಜವುಳಿ ಸಂಸ್ಥೇಯನ್ನು ಕಟ್ಟಿಕೊಂಡು ಬಂದಿದ್ದಾರೆ. ನಾವು ವ್ಯವಹಾರ ಮಾಡುವಾಗ ಜಾತಿ, ಧರ್ಮ ಎನ್ನುವ ಮನೋಭಾವನೆಯನ್ನು ಕಾಣದೇ ಎಲ್ಲರೊಂದಿಗೂ ಪ್ರೀತಿಯಿಂದ ಇದ್ದರೆ ವ್ಯವಹಾರಕ್ಕೆ ಆ ಭಗವಂತ ಕೂಡಾ ಕೈಹಿಡಿಯುತ್ತಾನೆ ಎಂದು ಶುಭ ನುಡಿದರು.

ನೂತನ ಶೋರೂಂನಲ್ಲಿ ಕೆಲಸ ಮಾಡಿದ ಕಂಟ್ರಾಕ್ಟರ್ ಶರತ್‌ಚಂದ್ರ, ಇಲೆಕ್ಟ್ರಿಕ್ ಕೆಲಸ ಮಾಡಿದ ಅನೂಪ್ ಬಂಗೇರ, ಇಂಟೀರಿಯರ್ ಡಿಸೈನಿಂಗ್ ಮಾಡಿದ ದೀಕ್ಷಿತ್ ರಾಜ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಸಮಾರಂಭದಲ್ಲಿ ಅಡ್ವೋಕೇಟ್ ದಯಾನಂಧ ರೈ, ಅಡ್ವೋಕೇಟ್ ಮತ್ತು ತೆರಿಗೆ ಸಲಹೆಗಾರ ಅಬ್ದುಲ್ ಖಾದರ್ ಇಡ್ಯಾ, ದಕ್ಷಿಣ ಕನ್ನಡ ಟೆಕ್ಸ್‌ಟೈಲ್ಸ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ್ ವಿ. ರಾವಲ್, ಐಸಿವೈಎಂ ನಿರ್ದೇಶಕ ರೆ. ಫಾ.ಅಶ್ವಿನ್ ಕಾರ್ಡೋಜ, ರವೀಂದ್ರ ನಿಕ್ಕಂ ಅವರ ಸಹೋದರ ಅರುಣ್ ನಿಕ್ಕಂ ಮೊದಲಾದವರಿದ್ದರು. ಸಂಸ್ಥೆಯ ಪಾಲುದಾರರಾದ ಹೈದರ್, ಗೌತಮ್ ಬಂಗೇರ, ಇಬ್ರಾಹಿಂ, ನರಸಿಂಹ, ನಾಗೇಶ್ ಅವರು ಅತಿಥಿಗಳನ್ನು ಗೌರವಿಸಿದರು. ನೂತನವಾಗಿ ಉದ್ಘಾಟನೆಗೊಂಡ ಈ ಶೋರೂಂನಲ್ಲಿ ಮದುವೆ, ನಿಶ್ಚಿತಾರ್ಥ ಸೇರಿದಂತೆ ಸಭೆ ಸಮಾರಂಭ ಹಾಗೂ ಇತರ ಎಲ್ಲಾ ಸಂದರ್ಭಗಳಿಗೆ ಪೂರಕವಾದ ಬಟ್ಟೆಬರೆಗಳ ಅಪೂರ್ವ ಸಂಗ್ರಹವಿದೆ. ಸಂಸ್ಥೆಯ 10ನೇ ವಾರ್ಷಿಕೋತ್ಸವ ಮತ್ತು ಹೊಸ ಶಾಖೆಯ ಉದ್ಘಾಟನೆ ಪ್ರಯುಕ್ತ ಏಪ್ರಿಲ್ 39ರವರೆಗೆ ಎಲ್ಲಾ ಬಟ್ಟೆಗಳ ಮೇಲೆ ಶೇ.೧೦ರಷ್ಟು ವಿಶೇಷ ರಿಯಾಯಿತಿ ಗ್ರಾಹಕರಿಗೆ ನೀಡಲಾಗುತ್ತಿದೆ.

Continue Reading

DAKSHINA KANNADA

ಮಂಗಳೂರು: ಪತ್ರಕರ್ತ ನವೀನ್ ಸೂರಿಂಜೆ ಇವರ “ಸತ್ಯೊಲು” ಸಂಶೋಧನಾ ಕೃತಿ ಬಿಡುಗಡೆ

Published

on

ಮಂಗಳೂರು: ತುಳುನಾಡಿನಲ್ಲಿ ದೈವಾರಾಧನೆ ಮತ್ತು ಅದರ ಹಿಂದಿರುವ ಸಾಮರಸ್ಯದ ಸಂದೇಶ ಈಗಿನ ಪೀಳಿಗೆಗೆ ಅಗತ್ಯವಾಗಿದ್ದು, ಇದರ ಕುರಿತಾದ ಸಂಶೋಧನ ಕೃತಿ ಬಿಡುಗಡೆಯಾಗಿದೆ.

ಪತ್ರಕರ್ತ ನವೀನ್ ಸೂರಿಂಜೆ ಅವರು ಹಲವು ಹಿರಿಯ ವಿದ್ವಾಂಸರು ಬರೆದ ಕೃತಿಗಳ ಅಧ್ಯಯನ ಮಾಡಿ ದೈವಗಳು ಸಾರಿದ ಸಾಮರಸ್ಯದ ಸಂದೇಶಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ‘ಸತ್ಯೊಲು’ ಎಂಬ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆದಿದೆ.

‘ಸತ್ಯೊಲು’ ಪುಸ್ತಕವನ್ನು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅತ್ರಾಡಿ ಅಮೃತ ಶೆಟ್ಟಿ ಅವರು ಬಿಡುಗಡೆ ಮಾಡಿದ್ದಾರೆ. ಮೊದಲ ಪ್ರತಿಯನ್ನು ಪತ್ರಕರ್ತ ನವೀನ್ ಸೂರಿಂಜೆ ಅವರ ಪೋಷಕರಿಗೆ ಹಸ್ತಾಂತರಿಸುವ ಮೂಲಕ ಕೃತಿ ಬಿಡುಗಡೆ ಮಾಡಲಾಗಿದೆ. ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾದ ಈ ಪುಸ್ತಕ ಈಗಿನ ಕಾಲಘಟ್ಟದಲ್ಲಿ ಜನರು ಅಗತ್ಯವಾಗಿ ಓದಬೇಕಾದ ಕೃತಿಯಾಗಿದೆ.

ತುಳುನಾಡಿನ ಪಾಡ್ದನ, ಬೀರ, ಐತಿಹ್ಯದ ಅಧ್ಯಯನದ ಮೂಲಕ “ಸತ್ಯೊಲು” ಎನ್ನುವುದು, ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಿದ ನಮ್ಮ ಪೂರ್ವಿಕರು ಎಂಬುದನ್ನು ಈ ಕೃತಿಯಲ್ಲಿ ತೋರಿಸಲಾಗಿದೆ. ಅಲ್ಲದೆ ಎಲ್ಲಾ ಜಾತಿ ಧರ್ಮಗಳ ಜನರನ್ನು ದೈವಗಳು ಹೇಗೆ ಒಂದೇ ಕುಟುಂಬವಾಗಿ ನೋಡಿವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಸಣ್ಣ ಸಣ್ಣ ವಿಚಾರಗಳಲ್ಲಿ ಕೋಮು ಸಂಘರ್ಷಗಳಾಗುತ್ತಿರುವ ಕರಾವಳಿಯಲ್ಲಿ ದೈವಗಳು ಯಾವ ರೀತಿಯ ಸೌಹಾರ್ದದ ಸಂದೇಶ ನೀಡಿವೆ ಎಂಬ ಕುರಿತಾಗಿ ಪಾಡ್ದನ, ಬೀರಗಳನ್ನು ಸಾಕ್ಷಿಯಾಗಿಟ್ಟುಕೊಂಡು ಈ ಕೃತಿ ರಚಿಸಲಾಗಿದೆ. ದೈವಾರಾಧನೆಯಲ್ಲಿ ವೈದಿಕ ಪ್ರವೇಶದ ಕುರಿತಾಗಿ ದೈವಗಳು ಏನು ಹೇಳುತ್ತವೆ ಎಂಬುದು ಕೂಡಾ ಇದರಲ್ಲಿ ವಿವರಿಸಲಾಗಿದೆ. ಪತ್ರಕರ್ತ ನವೀನ್ ಸೂರಿಂಜೆ ಅವರ ಈ ಅಧ್ಯಯನ ಕೃತಿಯ ಬಗ್ಗೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೈವಾರಾಧಕರು ಸೇರಿದಂತೆ ಪ್ರತಿಯೊಬ್ಬರು ಓದ ಬೇಕಾದ ಅಧ್ಯಯನ ಕೃತಿಯಾಗಿದೆ.

Continue Reading

DAKSHINA KANNADA

ಭೀಕರ ರಸ್ತೆ ಅಪಘಾತ; ಗಾಯಾಳು ಸಾವು

Published

on

ಬಜಪೆ : ಕೆಂಜಾರ್‌ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ  ಘಟನೆ  ನಡೆದಿದೆ.

ಜೋಶ್ವಾ ಪಿಂಟೋ (27) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಈಸ್ಟರ್‌ ವಸ್ತುಗಳನ್ನು ಖರೀದಿಸಿ, ಮಂಗಳೂರಿನಿಂದ ಸ್ನೇಹಿತರೊಂದಿಗೆ ವಾಪಾಸು ಬರುತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಗುಂಡಿಗೆ ಕಾರು ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ : ಮಂಗಳೂರು: ರಸ್ತೆ ಬದಿಗೆ ಉರುಳಿದ ಕಾರು; ಚಾಲಕನಿಗೆ ಗಂಭೀರ ಗಾಯ

ಡಿಕ್ಕಿಯ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ವಾಹನವು ತಿರುವಿನಲ್ಲಿ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಗಾಯಾಳು ಮೃತಪಟ್ಟಿದ್ದಾನೆ.

ಈ ಘಟನೆ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page