Connect with us

kerala

ಸಿಬಿಐ ಸೋಗಿನಲ್ಲಿ ಕರೆ ಮಾಡಿ ಹಣ ವಸೂಲಿಗೆ ಸಂಚು..! ಬಚಾವ್ ಆದ ಉದ್ಯಮಿ..!!

Published

on

ಕಾಸರಗೋಡು: ಮಂಜೇಶ್ವರದ ಉದ್ಯಮಿಯೊಬ್ಬರಿಗೆ ದೂರವಾಣಿ ಕರೆಬಂದಿದ್ದು ತಾನು ಸಿಬಿಐ ಅಧಿಕಾರಿ ಎಂದು ಹೇಳಿ ಅವರಿಂದ 15 ಲಕ್ಷ ರೂಪಾಯಿ ವಸೂಲಿ ಮಾಡುವ ಪ್ರಯತ್ನ ನಡೆದಿದೆ.

ಉದ್ಯಮಿಗೆ ಕರೆ ಮಾಡಿದ ಆತ ಸಿಬಿಐ ಅಧಿಕಾರಿ ಸೋಗಿನಲ್ಲಿ ಮಾತನಾಡಿ ಉದ್ಯಮಿಯ ಪುತ್ರಿ ಮಾದಕವಸ್ತು ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿದ್ದು ಅವರನ್ನು ಬಂಧಿಸಲಾಗಿದೆ. ಅವರನ್ನು ದೆಹಲಿಗೆ ಕರೆದೊಯ್ಯುತ್ತಿದ್ದೇವೆ. ಈ ಪ್ರಕರಣದಿಂದ ಅವಳನ್ನು ಬಚಾವ್ ಮಾಡಬೇಕೆಂದಿದ್ದರೆ 15 ಲಕ್ಷ ರೂಪಾಯಿ ನೀಡಬೇಕು ಎಂದು ಹೇಳಿದ್ದಾರೆ. ಅಲ್ಲದೇ ಪುತ್ರಿ ಧ್ವನಿಯಲ್ಲೇ ಮಾತೃಭಾಷೆಯಲ್ಲಿ ತನ್ನ ತಂದೆಯ ಜೊತೆ ಮಾತನಾಡಿದ ಧ್ವನಿಯನ್ನು ಆಲಿಸಲಾಗಿತ್ತು. ವಂಚಕರು ಹಿಂದಿ ಭಾಷೆಯಲ್ಲಿ ಉದ್ಯಮಿ ಜೊತೆ ಮಾತನಾಡಿದ್ದಾರೆ. ಅಲ್ಲದೇ ಹಣ ಕಳುಹಿಸಲು ಗೂಗಲ್ ಪೇ ನಂಬರನ್ನು ಕೂಡಾ ರವಾನಿಸಿದ್ದಾರೆ.

ಪೊಲೀಸ್ ಮನೆಯಲ್ಲೇ ಕಳ್ಳತನ ಎಸಗಿದ ಕಳ್ಳರು.! ನಿಂಬೆ ಹಣ್ಣು ಇಟ್ಟು ಮನೆ ಬೀಗ ಮುರಿದ ಖದೀಮರು

ಇದರಿಂದ ಗಾಬರಿಗೊಂಡ ಉದ್ಯಮಿ ಕೂಡಲೇ ಪುತ್ರಿ ಕಲಿಯುತ್ತಿದ್ದ ಕಾಲೇಜಿಗೆ ಕರೆ ಮಾಡಿದ್ದಾರೆ. ಅಲ್ಲಿ ವಿದ್ಯಾರ್ಥಿನಿ ತರಗತಿಯಲ್ಲಿ ಇರುವುದಾಗಿ ಹೇಳಿದ್ದು, ಬಳಿಕ ಉದ್ಯಮಿ ನಿರಾತಂಕರಾಗಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಹಲವು ಕಾಲೇಜಿನ ವಿದ್ಯಾರ್ಥಿಗಳಿಗೆ ಇದೇ ರೀತಿ ಕರೆಗಳು ಬಂದಿದೆ ಎಂದು ಮಾಹಿತಿ ಲಭಿಸಿದೆ ಎನ್ನಲಾಗಿದೆ.

kerala

ಕಾಸರಗೋಡು: ಕೊನೆಯ ಹಂತದಲ್ಲಿದೆ ಮಧೂರು ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆ

Published

on

ಕಾಸರಗೋಡು: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರುಷ ಹಲವಾರು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವವು ನಡೆಯುತ್ತಿದ್ದು, ಇದೀಗ ಕಾಸರಗೋಡಿನ ಮಧುವಾಹಿನಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವವು ನಡೆಯಲಿದೆ. ಮಾ.27 ರಿಂದ ಎ.7ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಮೂಡು ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ. ಮುರುಡೇಶ್ವರದ ಶಂಕರ್ ಮತ್ತು ಬಳಗ ಅತ್ಯಾಕರ್ಷಕವಾಗಿ ಕೆತ್ತನೆ ಕೆಲಸ ನಿರ್ವಹಿಸಿದ್ದು, ಕಾಷ್ಠ ಶಿಲ್ಪವನ್ನು ಮೂಡುಬಿದಿರೆ ಸಂಪಿಗೆಯ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಹರೀಶ ಆಚಾರ್ಯ ಮಾಡಿದ್ದಾರೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ದೇಗುಲದ ನವೀಕರಣ ಕಾಮಗಾರಿ ನಡೆದಿದ್ದು, ರಾಜಾಂಗಣ, ಹೊರಾಂಗಣದ ಕಾಮಗಾರಿಗಳು ಸಂಪೂರ್ಣಗೊಂಡಿವೆ. ಗಣಪತಿ ನಡೆ, ಶಿವನ ನಡೆ, ದುರ್ಗಾ ಗುಡಿ, ಸುತ್ತು ಪೌಳಿಗೆ ಕೆಂಪುಕಲ್ಲು ಹಾಸಲಾಗಿದೆ. ನೂತನವಾಗಿ ಕಗ್ಗಲ್ಲಿನಿಂದ ನಿರ್ಮಾಣಗೊಂಡ ಕೆತ್ತನೆ ಕೆಲಸದ ಕಂಬಗಳು, ಕಾಷ್ಠ ಶಿಲ್ಪಗಳು ಆಕರ್ಷಿಸುತ್ತಿವೆ.

ಅನ್ನಛತ್ರ, ಉಗ್ರಾಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ, ಸಭಾ ಕಾರ್ಯಕ್ರಮಕ್ಕೆ ವೇದಿಕೆ, ಕಾರ್ಯಾಲಯ ಇತ್ಯಾದಿಗಳ ಕಾರ್ಯ ಪ್ರಗತಿಯಲ್ಲಿದೆ. ವಾಹನ ಪಾರ್ಕಿಂಗ್‌ಗೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. 2-3 ತಿಂಗಳುಗಳಿಂದ ಮಕ್ಕಳು, ಮಹಿಳೆಯರು ಸಹಿತ ಎಲ್ಲರೂ ರಾತ್ರಿ ಹಗಲೆನ್ನದೆ ಕರ ಸೇವೆಯಲ್ಲಿ ನಿರತರಾಗಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಚಪ್ಪರದ ಕಾರ್ಯ ನಡೆಯುತ್ತಿದೆ. ಈ ಬಾರಿ ಮಧೂರು ದೇವಾಲಯದ ಅಷ್ಟಬಂದ ಬ್ರಹ್ಮಕಲಶೋತ್ಸವವು ಒಂದು ಇತಿಹಾಸ ಸೃಷ್ಠಿಗೆ ಕಾರಣವಾಗಲಿದೆ.

Continue Reading

kerala

45 ವರ್ಷದ ಆಟೋ ಚಾಲಕನ ಜೊತೆ ನಾಪತ್ತೆಯಾಗಿದ್ದ 15 ವರ್ಷದ ವಿದ್ಯಾರ್ಥಿನಿ ಶವವಾಗಿ ಪತ್ತೆ…!

Published

on

ಕಾಸರಗೋಡು : ಇತ್ತೀಚಿಗೆ ಅಟೋ ಚಾಲಕನ ಜೊತೆ ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿತ್ತು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದೀಗ ಅಚ್ಚರಿಯೆಂಬಂತೆ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮಂಡೆಕಾಪು ಗ್ರಾಮದ ಸಮೀಪ 15 ವರ್ಷದ ವಿದ್ಯಾರ್ಥಿನಿ ಮತ್ತು ಆಟೋ ಚಾಲಕ ಪ್ರದೀಪ್(42) ಶವ ಪತ್ತೆಯಾಗಿದೆ. ಪ್ರದೀಪ್‌ನ ಮನೆಯಿಂದ ಅರ್ಧ ಕಿ. ಮೀ ದೂರದ ಕಾಡಿನಲ್ಲಿ ಆದಿತ್ಯವಾರ ಬೆಳಿಗ್ಗೆ 10.30 ರ ವೇಳೆಗೆ ಮೃತದೇಹ ಪತ್ತೆಯಾಗಿದೆ.

ಫೆಬ್ರವರಿ 11ರಂದು ರಾತ್ರಿ ಪ್ರದೀಪ್ ಮತ್ತು ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು ಕುಂಬಳೆ ಪೊಲೀಸರಿಗೆ ಬಾಲಕಿಯ ತಾಯಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು ಆದರೆ ಅವರು ಪತ್ತೆಯಾಗಿರಲಿಲ್ಲ. ಪೋಷಕರು ಹೈಕೋರ್ಟ್ ಮೊರೆ ಹೋಗಿ ಹೇಬಿಯಸ್ ಕಾರ್ಪಸ್‌ಗೆ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಹುಡುಕಾಟ ನಡೆಸಿದಾಗ ಆಕೆಶಿಯಾ ಅರಣ್ಯದಲ್ಲಿ ಒಂದೇ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿವೆ. ಈ ಸಾವಿನ ಹಿಂದಿನ ಕಾರಣ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

kerala

ಆಟಿಕಳೆಂಜದಂತೆ ಮಾಯಿ ತಿಂಗಳಲ್ಲಿ ಬರುವ ಮಾಯಿದ ಕನ್ಯಾಪು ಬಗ್ಗೆ ನಿಮಗೆಷ್ಟು ಗೊತ್ತು ..?

Published

on

ಕಾಸರಗೋಡು : ಆಟಿ ತಿಂಗಳಲ್ಲಿ ರೋಗ ರುಜಿನಗಳನ್ನು ಓಡಿಸಲು ಆಟಿ ಕಳಂಜ ಮನೆ ಮನೆಗೆ ಬರುವ ಸಂಪ್ರದಾಯ ತುಳುನಾಡಿನ ವಿಶೇಷತೆ. ಇಂದು ಆಟಿ ಕಳಂಜೆ ಮನೆ ಮನೆಗೆ ಬರುವ ಸಂಪ್ರದಾಯ ಕೆಲವೊಂದು ಗ್ರಾಮಗಳಿಗೆ ಸೀಮಿತವಾಗಿ ಮಾತ್ರ ಉಳಿದುಕೊಂಡಿದೆ. ಅಂತಹದೇ ಒಂದು ತುಳುನಾಡ ಆಚರಣೆಯಾದ ಮಾಯಿದ ಕನ್ಯಾಪು ಎಂಬ ಪರಂಪರೆ ಕೂಡಾ ಇಂದು ನಶಿಸಿ ಹೋಗಿದೆ.

ಬೇಸಗೆಯ ಕಾಲದ ಆರಂಭದಲ್ಲಿ ತುಳು ಮಾಸವಾದ ಮಾಯಿ ತಿಂಗಳಲ್ಲಿ ಈ ಮಾಯಿದ ಕನ್ಯಾಪು ಮನೆ ಮನೆಗೆ ಬರುವ ಪದ್ಧತಿ ಹಿಂದಿನಿಂದಲೂ ಇತ್ತು. ಆದ್ರೆ ಕಾಲ ಬದಲಾದಂತೆ ಈ ಆಚರಣೆ ನಿಂತು ಹೋಗಿದೆಯಾದ್ರೂ ಇಂದು ಕೇರಳ ಕರ್ನಾಟಕ ಗಡಿ ಭಾಗದ ಪೆರ್ಲದಲ್ಲಿ ಈ ಆಚರಣೆ ಉಳಿದುಕೊಂಡಿದೆ. ಕೊರಗ ಹಾಗೂ ಕನ್ಯಾಪು ವೇಷಧಾರಿಗಳು ಮನೆ ಮನೆಗೆ ಬಂದು ಹತ್ತು ನಿಮಿಷಗಳ ಕಾಲ ನರ್ತಿಸಿ ಸಂದಿಯನ್ನು ಹೇಳುವ ಮೂಲಕ ಮಾರಿಯನ್ನು ಓಡಿಸುತ್ತಾರೆ ಎಂಬುದು ಈ ಆಚರಣೆಯ ಹಿಂದಿನ ರಹಸ್ಯ. ಮಾಯಿ ಮಾಸದ 30 ದಿನಗಳಲ್ಲಿ ಮಾಯಿದ ಕನ್ಯಾಪು ಜಾತಿ ಧರ್ಮದ ಹಂಗಿಲ್ಲದೆ ಎಲ್ಲರ ಮನೆಗೂ ಭೇಟಿ ನೀಡುತ್ತದೆ.

ತುಳುನಾಡಿನಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಪರಂಪರೆಯಾಗಿ ಮಾಯಿದ ಕನ್ಯಾಪನ್ನು ಗುರುತಿಸುತ್ತಾರೆ. ತಲೆಮಾರುಗಳಿಂದ ಈ ಆಚರಣೆಯನ್ನು ಸಂರಕ್ಷಿಸಿಕೊಂಡು ಬಂದಿರುವ ಪುಟ್ಟ ಕಂಡಿಗೆ ಎಂಬವರು ಇದನ್ನು ಮುಂದಿನ ಪೀಳಿಗೆಗೂ ಕೊಂಡಯ್ಯಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ. ಹೀಗಾಗಿ ಮಾಯಿ ತಿಂಗಳಲ್ಲಿ ನಾಲ್ಕು ಗ್ರಾಮಗಳಲ್ಲಿ ತಿರುಗಾಡಿ ಮನೆ ಮನೆಗೂ ಹೋಗಿ ಈ ಮಾಯಿದ ಕನ್ಯಾಪು ನರ್ತನ ನಡೆಸಲಾಗುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page