BBK12:ಬಿಗ್ ಬಾಸ್ ಫಿನಾಲೆ ವೀಕ್ ಟಾಸ್ಕ್ನಲ್ಲಿ ಸ್ಪರ್ಧಿ ಅಶ್ವಿನಿ ಗೌಡ ತಮಗಾಗಿ ʼಛಲಗಾರ್ತಿʼ ಎಂಬ ಹ್ಯಾಶ್ಟ್ಯಾಗ್ ಬರೆಯಲು ಹೋಗಿ ತಪ್ಪು ಮಾಡಿದ್ದರು. ಕನ್ನಡ ಪರ ಹೋರಾಟಗಾರ್ತಿಗೆ ಕನ್ನಡವೇ ಸರಿಯಾಗಿ ಬರೆಯೋಕೆ ಬರೋದಿಲ್ವಾ ಎಂಬ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ತಾನು ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ರಕ್ಷಕಿ ಎಂದೆಲ್ಲಾ ಮಾತನಾಡುವ ಅಶ್ವಿನಿ ಗೌಡ ಅವರಿಗೆ ಕನ್ನಡವೇ ಸರಿಯಾಗಿ ಬರೆಯೋಕೆ ಬರೋದಿಲ್ಲ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿತ್ತು.
ಬಿಗ್ಬಾಸ್ ಸೋಮವಾರದ ಎಪಿಸೋಡ್ನಲ್ಲಿ ಫಿನಾಲೆ ವೀಕ್ಗೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದ್ದರು. ಅದರಂತೆ ಸ್ಪರ್ಧಿಗಳು ತಮ್ಮ ಆಟಕ್ಕೆ ಅನುಗುಣವಾಗಿ ಸೋಶಿಯಲ್ ಮೀಡಿಯಾದಲ್ಲಿ ಬಳಸಬಹುದಾದ ಹ್ಯಾಶ್ಟ್ಯಾಗ್ಗಳನ್ನು ಸ್ವತಃ ಅವರೇ ಬೋರ್ಡ್ ಮೇಲೆ ಬರೆಯಬೇಕಿತ್ತು. ಅದರಂತೆ ಅಶ್ವಿನಿ ಗೌಡ ಅವರು ಬೋರ್ಡ್ ಮೇಲೆ ತಮ್ಮನ್ನು ಯಾವ ಹೆಸರಿನಿಂದ ಗುರುತಿಸಬೇಕು ಎಂದು ಬರೆದರು. ಬಿಗ್ಬಾಸ್ನಲ್ಲಿನ ತಮ್ಮ ಗೇಮ್ನಿಂದ ಜನ ‘ಚಲಗಾರ್ತಿ ಅಶ್ವಿನಿ’ ಎಂದು ಕರೆಯಬೇಕು ಎಂದು ಬಯಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಗೌರವಾಧ್ಯಕ್ಷೆಯಾಗಿರುವ ಅಶ್ವಿನಿ ಗೌಡ ಅವರಿಗೆ ಕನ್ನಡವೇ ಸರಿಯಾಗಿ ಬರೆಯೋಕೆ ಬರೋದಿಲ್ಲ ಅನ್ನೋದು ಇದರಲ್ಲಿ ಗೊತ್ತಾಗಿತ್ತು. ಇದನ್ನು ಅಶ್ವಿನಿ ಗೌಡ ಬರೆದರೋ ಅಥವಾ ಧ್ರುವಂತ್ ಅವರು ಬೋರ್ಡ್ ಮೇಲೆ ಬರೆದಿದ್ದೋ ಎನ್ನುವುದು ಗೊತ್ತಾಗಿಲ್ಲ. ಆದರೆ, ಕನ್ನಡದಲ್ಲಿ ಆಗಿರುವ ತಪ್ಪನ್ನು ಗುರುತಿಸಲು ಕೂಡ ಕರವೇ ನಾಯಕಿಗೆ ಗೊತ್ತಾಗಿಲ್ಲ ಅನ್ನೋದು ಅಚ್ಚರಿಯ ವಿಚಾರವಾಗಿದೆ.
ಛಲಗಾರ್ತಿ ಪದವನ್ನು ತಪ್ಪಾಗಿ ಬರೆದ ಅಶ್ವಿನಿ ಗೌಡ
ಮೊದಲಿಗೆ ‘ಚಲಗಾರ್ಥಿ ಅಶ್ವಿನಿ’ ಎಂದು ಬರೆಯಲಾಗಿತ್ತು. ಬಳಿಕ ಅದನ್ನು ಹೊಡೆದು, ‘ಚಲಗಾರ್ತಿ ಅಶ್ವಿನಿ’ ಎಂದು ಬರೆಯಲಾಗಿದೆ. ಆದರೆ, ಕನ್ನಡದಲ್ಲಿ ‘ಛಲಗಾರ್ತಿ ಅಶ್ವಿನಿ’ ಎಂದು ಬರೆದರೆ ಸರಿ. ಇನ್ನು ಅವರು ಬಳಸಿರುವ ಹ್ಯಾಶ್ಟ್ಯಾಗ್ನಲ್ಲೂ ಆಕೆ ತಪ್ಪು ಮಾಡಿದ್ದಾರೆ. ‘ಹಠವಾದಿ ಅಶ್ವಿನಿ’ ಎನ್ನುವ ಬದಲು, ‘#ಹಠವಾಧಿಅಶ್ವಿನಿ’ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ವೀಕ್ನಲ್ಲಿ ಸ್ಪರ್ಧಿಯಿಂದ ಇದೆಂತಾ ನಿರ್ಧಾರ; ಸಹಸ್ಪರ್ಧಿಗಳಿಗೆ ಬಿಗ್ ಶಾಕ್..!
ಸ್ಪಷ್ಟಿಕರಣ ಕೊಟ್ಟ ನಾರಾಯಣ ಗೌಡ
“ಅಶ್ವಿನಿ ಗೌಡ ತಂದೆ ಆಗರ್ಭ ಶ್ರೀಮಂತರು, ಹೀಗಾಗಿ ಮಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ್ದಾರೆ. ಇನ್ನೊಂದು ಕಡೆ ಅಶ್ವಿನಿ ಗೌಡ ಅವರು ಕರವೇಗೆ ಬರುವಾಗ ನಾನು, ಅವರಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದೀರಾ? ಕನ್ನಡ ಮಾಧ್ಯಮದಲ್ಲಿ ಓದಿದ್ದೀರಾ ಎಂದು ಪ್ರಶ್ನೆ ಮಾಡಿರಲಿಲ್ಲ. ನೀವು ಇಲ್ಲಿಗೆ ಬರಲು ಉದ್ದೇಶ ಏನು ಎಂದು ಕೇಳಿದಾಗ ಅವರು, “ನಾನು ಕನ್ನಡತಿ, ಕನ್ನಡದ ಮೇಲೆ ಅಭಿಮಾನ ಇದೆ, ಕನ್ನಡದ ಪರವಾಗಿ ಸೇವೆ ಮಾಡಬೇಕು. ಅದನ್ನು ನಾನು ಗಮನಕ್ಕೆ ತಗೊಂಡೆ ಅಷ್ಟೇ” ಎಂದು ಹೇಳಿದ್ದಾರೆ.
ಮುಂದುವರಿದು, “ಕೆಲವು ಮಂತ್ರಿಗಳು ಹೇಳ್ತಾರೆ, ನಾವು ಕನ್ನಡದಲ್ಲಿ ಮಾತನಾಡ್ತೇವೆ.. ಆದ್ರೆ ಬರೆಯೋದು ಕಷ್ಟ ಅಂತಾರೆ. ಹಾಗಾಂತ ಮಂತ್ರಿಗಳಾಗಬಾರದು, ಶಾಸಕರಾಗಬಾರದು ಅಂಥ ಏನಾದರೂ ಕಾನೂನು ಇದೆಯಾ, ಹಾಗೆಯೇ ಕನ್ನಡ ಹೋರಾಟದಲ್ಲಿ ಕನ್ನಡ ಬರೆಯೋಕೆ ಗೊತ್ತಿರಬೇಕು ಅಂತ ಅಲ್ಲ. ಕನ್ನಡದ ಬಗ್ಗೆ ಪ್ರೀತಿ ಇದ್ದರೆ ಸಾಕು. ನಾಡಿನ ಕುರಿತು ಗೌರವ, ಕಾಳಜಿ, ಕಳಕಳಿ ಇದ್ದರೆ ಸಾಕು. ಯಾರು ಬೇಕಾದರೂ ಕನ್ನಡದ ಚಳುವಳಿಯಲ್ಲಿ ಪಾಲ್ಗೋಳ್ಳಬಹುದು” ಎಂದಿದ್ದಾರೆ.