Connect with us

LIFE STYLE AND FASHION

ಇದರಲ್ಲಿ ಒಂದು ನಂಬರ್ ಚಾಯ್ಸ್ ಮಾಡಿ…ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಆ ಸಂಖ್ಯೆ…

Published

on

ಮನುಷ್ಯನ ಆಯ್ಕೆಗಳು ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ಅಂತೆಯೇ ಇಷ್ಟ ಕಷ್ಟಗಳು ಭಿನ್ನವಾಗಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿತ್ವಕ್ಕೆ ಸಂಬಂಧ ಪಟ್ಟ ನೂರಾರು ಪರೀಕ್ಷೆಗಳು ಅವಾಗವಾಗ ಬರುತ್ತಿರುತ್ತದೆ. ಒಬ್ಬ ವ್ಯಕ್ತಿಯ ಕಣ್ಣು, ಕಿವಿ ಬಾಯಿ, ಮೂಗು, ನಾಲಗೆ, ಕಿವಿ ಹಾಗೂ ದೇಹದ ಅಂಗಗಳ ಆಕಾರದಿಂದ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದು. ಅದೇ ರೀತಿ ವ್ಯಕ್ತಿಯ ಇಷ್ಟ ಕಷ್ಟಗಳು ನಿಗೂಢ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ನಮ್ಮ ಫೇವರಿಟ್ ಸಂಖ್ಯೆಯ ಆಧಾರದ ಮೇಲೆ ನಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಆ ಕುರಿತಾದ ಪೂರ್ಣ ಮಾಹಿತಿ ಇಲ್ಲಿದೆ.


ನಂಬರ್ 0 : ಶೂನ್ಯವು ಇಷ್ಟದ ಸಂಖ್ಯೆಯಾಗಿದ್ದರೆ ಅಂತಹವರು ಸಂಪೂರ್ಣತೆ ಮತ್ತು ಪರಿಪೂರ್ಣತೆಯನ್ನು ಸಾಕಾರಗೊಳಿಸುವ ಸ್ವಭಾವದವರು. ಜನರು ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳುವುದರ ಜೊತೆಗೆ ಇತರರನ್ನು ಉತ್ತಮಗೊಳಿಸಲು ಪ್ರಯತ್ನ ಪಡುತ್ತಾರೆ. ಇತರರಿಗೆ ಸಲಹೆ ನೀಡುವ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಬಯಸುವ ಗುಣ ಇವರದ್ದಾಗಿರುತ್ತದೆ.

ನಂಬರ್ 1 : ನೆಚ್ಚಿನ ಸಂಖ್ಯೆ ಒಂದು ಆಗಿರುವವರು ಯಾರನ್ನೂ ಅವಲಂಬಿತರಾಗದೇ ಸ್ವತಂತ್ರರಾಗಿ ಬದುಕಲು ಇಷ್ಟಪಡುತ್ತಾರೆ. ಈ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳಾಗಿದ್ದು ಜೀವನದಲ್ಲಿ ಅಂದುಕೊಂಡದ್ದೆಲ್ಲವನ್ನು ಸಾಧಿಸುತ್ತಾರೆ. ಯಾವುದೇ ಕೆಲಸವನ್ನು ತಮ್ಮ ಮನಸ್ಸಿನಿಂದ ಮಾಡುತ್ತಾರೆ. ಜೀವನದಲ್ಲಿ ಮುಂದಿರಲು ಇಷ್ಟ ಪಡುವ ಗುಣವು ಇವರದ್ದಾಗಿದ್ದು, ಈ ಜನರು ಧೈರ್ಯಶಾಲಿ ಮತ್ತು ಸೃಜನಶೀಲ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.

ನಂಬರ್ 2 : ಎರಡನೇ ಸಂಖ್ಯೆಯನ್ನು ಇಷ್ಟಪಡುವ ಜನರು ಭಾವನಾತ್ಮಕ ಜೀವಿಗಳು. ಜನರು ಸೃಜನಶೀಲರು, ಕಲ್ಪನಾಶೀಲರು ಹಾಗೂ ಸೂಕ್ಷ್ಮ ಸ್ವಭಾವದವರು. ಪ್ರಾಮಾಣಿಕವಾಗಿ ಹೃದಯದಿಂದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಈ ವ್ಯಕ್ತಿಗಳು ನಕಾರಾತ್ಮಕ ಸಂದರ್ಭಗಳಲ್ಲಿ ಸುಲಭವಾಗಿ ತಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ.

ನಂಬರ್ 3 : ಒಬ್ಬ ವ್ಯಕ್ತಿಯು ಮೂರನೇ ಸಂಖ್ಯೆಯನ್ನು ಈ ವ್ಯಕ್ತಿಗಳು ಸ್ನೇಹಮಯಿ ವ್ಯಕ್ತಿಗಳಾಗಿದ್ದು, ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಈ ಜನರು ಸಹಜವಾಗಿ ಎಲ್ಲಾ ವಿಷಯದಲ್ಲೂ ಕುತೂಹಲ ಸ್ವಭಾವವುಳ್ಳರಾಗಿದ್ದು, ಇತರರೊಂದಿಗೆ ಚರ್ಚಿಸುವುದೆಂದರೆ ಇವರಿಗೆ ತುಂಬಾನೇ ಇಷ್ಟ. ಈ ವ್ಯಕ್ತಿಗಳು ನಂಬಿಕೆ ಮೇಲೆಯೇ ಜೀವನ ನಡೆಸುತ್ತಾರೆ.

ನಂಬರ್ 4 : ನಾಲ್ಕು ಸಂಖ್ಯೆಯನ್ನು ಇಷ್ಟಪಡುವ ಜನರು ವಿಶ್ವಾಸಾರ್ಹರು, ಪ್ರಾಮಾಣಿಕ ಗುಣ ಹೊಂದಿರುತ್ತಾರೆ. ತನ್ನವರಿಗಾಗಿ ಏನ್ನನ್ನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅಪಾರವಾದ ಶ್ರದ್ಧೆಯಿಂದ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ಈ ವ್ಯಕ್ತಿಗಳ ಆಂತರಿಕ ಸೌಂದರ್ಯ ಮತ್ತು ವ್ಯಕ್ತಿತ್ವವು ಅವರ ಮುಖದಲ್ಲಿ ಪ್ರತಿಫಲಿಸುವುದರಿಂದ ಎಲ್ಲರನ್ನು ಸುಲಭವಾಗಿ ಸೆಳೆಯುತ್ತಾರೆ. ಅದಲ್ಲದೇ ಇಂತಹ ಜನರು ಹಠಮಾರಿ ಮತ್ತು ಮುಂಗೋಪಿಗಳು. ಸಿಟ್ಟು ಬಂದರೆ ಈ ವ್ಯಕ್ತಿಗಳನ್ನು ನಿಯಂತ್ರಿಸಲು ಆಗುವುದಿಲ್ಲ.

ನಂಬರ್ 5 : ನೆಚ್ಚಿನ ಸಂಖ್ಯೆ ಐದು ಆಗಿದ್ದರೆ ಈ ಜನರು ಉತ್ಸಾಹದಿಂದ ಕೂಡಿರುತ್ತಾರೆ. ಸ್ವಭಾವತಃ ಧೈರ್ಯಶಾಲಿಗಳಾಗಿರುತ್ತಾರೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೆದರುವುದಿಲ್ಲ, ಎಲ್ಲವನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗುವ ಇವರಲ್ಲಿ ಹೆಚ್ಚಿರುತ್ತದೆ. ಈ ವ್ಯಕ್ತಿಗಳು ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಇರುವುದಿಲ್ಲ. ಸ್ವತಂತ್ರ ರಾಗಿ ಬದುಕಲು ಇಷ್ಟ ಪಡುತ್ತಾರೆ.

ನಂಬರ್ 6 : ಯಾರ ನೆಚ್ಚಿನ ಸಂಖ್ಯೆ ಆರು ಆಗಿರುತ್ತದೆಯೋ ಆ ವ್ಯಕ್ತಿಗಳಲ್ಲಿ ಸಹಾಯ ಮಾಡುವ ಹೆಚ್ಚಾಗಿರುತ್ತದೆ. ಬೇಕಾದ್ದನು ಕೇಳಿ ಪಡೆದುಕೊಳ್ಳುತ್ತಾರೆ. ತಮ್ಮ ಕುಟುಂಬದವರಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತಾರೆ.

ನಂಬರ್ 7 : ನೆಚ್ಚಿನ ಸಂಖ್ಯೆಯು ಏಳು ಸಂಖ್ಯೆಯಾಗಿದ್ದರೆ ಈ ವ್ಯಕ್ತಿಗಳು ಶಾಂತ ಸ್ವಭಾವದವರು. ಈ ವ್ಯಕ್ತಿಗಳಲ್ಲಿ ಕುತೂಹಲಕಾರಿ ಗುಣವು ಹೆಚ್ಚಿರುತ್ತದೆ. ಯಾವುದೇ ಕೆಲಸಕ್ಕೂ ಕೈ ಹಾಕಿದರೂ ಪ್ರಾಮಾಣಿಕವಾಗಿ ಮಾಡಿ ಮುಗಿಸುತ್ತಾರೆ. ಅದಲ್ಲದೇ, ತಮ್ಮ ಪಾಲುದಾರರಿಗೆ ತುಂಬಾ ನಿಷ್ಠವಂತರಾಗಿದ್ದು, ಹೀಗಾಗಿ ಎಲ್ಲರ ನಂಬಿಕೆ ಗಳಿಸಿಕೊಳ್ಳುತ್ತಾರೆ. ಇನ್ನು ಸಂಬಂಧವನ್ನು ಉಳಿಸಿಕೊಳ್ಳಲು ನೀವು ಯಾವುದೇ ಹಂತಕ್ಕೆ ಹೋಗುವ ವ್ಯಕ್ತಿಗಳಾ ಗಿರುತ್ತಾರೆ.

ನಂಬರ್ 8 : ಇಷ್ಟದ ಸಂಖ್ಯೆಯು ಎಂಟು ಆಗಿದ್ದರೆ ಈ ವ್ಯಕ್ತಿಗಳ ಭಾವನೆ ನಿಯಂತ್ರಿಸುವಲ್ಲಿ ನಿಪುಣರು. ಪ್ರೀತಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾರೆ. ಈ ವ್ಯಕ್ತಿತ್ವದಲ್ಲಿ ಶ್ರೀಮಂತರಾಗಿದ್ದು, ಬಲವಾದ ಇಚ್ಛಾಶಕ್ತಿ ಹಾಗೂ ತಮ್ಮ ಬಗ್ಗೆಯೇ ಹೆಮ್ಮೆ ಪಟ್ಟುಕೊಳ್ಳುವ ಗುಣ ಇವರದ್ದು. ಆದರೆ ಕೆಲವೊಮ್ಮೆ ಬೇಡದ ಆಲೋಚನೆಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ.

ನಂಬರ್ 9 : ನೆಚ್ಚಿನ ಸಂಖ್ಯೆ ಒಂಬತ್ತು ಆಗಿದ್ದರೆ ತಮ್ಮ ವರ್ಚಸ್ಸಿನಿಂದಲೇ ಇತರರನ್ನು ಆಕರ್ಷಿಸುತ್ತಾರೆ. ದಯೆ, ಆತ್ಮವಿಶ್ವಾಸ ಹಾಗೂ ಎಲ್ಲರೊಂದಿಗೆ ಬೆರೆಯುವ ಗುಣ ಹೆಚ್ಚಿರುತ್ತದೆ. ಜೀವನದ ಗುರಿಗಳ ಬಗ್ಗೆ ಸ್ಪಷ್ಟವಾಗಿದ್ದು ಹೀಗಾಗಿ ಅದರತ್ತ ಕೆಲಸ ಮಾಡುತ್ತಾರೆ. ಎಲ್ಲರ ಬಗ್ಗೆಯು ಅತೀವ ಕಾಳಜಿ, ಪ್ರೀತಿಯನ್ನು ಹೊಂದಿದ್ದು ಅದು ಇವರ ಮಾತಿನಿಂದಲೇ ತಿಳಿಯುತ್ತದೆ

LATEST NEWS

ಬಾಯಾರಿಕೆ ಎಂದು ಲೀಟರ್‌ಗಟ್ಟಲೆ ಒಂದೇ ಸಮನೆ ನೀರು ಕುಡಿಯುವವರು ಇದನ್ನೊಮ್ಮೆ ಓದಿ…

Published

on

ಮನುಷ್ಯ ಆರೋಗ್ಯಕರವಾಗಿರಲು ದಿನಕ್ಕೆ 3-4 ಲೀಟರ್ ನೀರು ಕುಡಿಯಬೇಕು. ಈ ಸುಡು ಬೇಸಿಗೆಯಲ್ಲಂತೂ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳಲು ದೇಹಕ್ಕೆ ಸರಿಹೊಂದುವಷ್ಟು ನೀರು ಕುಡಿಯಬೇಕು. ವಯಸ್ಸು, ದೇಹದ ತೂಕ, ಮಾಡೋ ಕೆಲಸ, ವಾತಾವರಣದ ಮೇಲೆ ಮನುಷ್ಯ ಎಷ್ಟು ನೀರು ಕುಡಿಯಬೇಕು ಎನ್ನುವುದು ಡಿಪೆಂಡ್ ಆಗಿರುತ್ತೆ.

ಯಾರು ಎಷ್ಟು ನೀರು ಕುಡಿದೆ ಒಳ್ಳೆಯದು ?

ಸಾಮಾನ್ಯ ವ್ಯಕ್ತಿಗಳು ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಬೇಕು. ಆದರೆ ಮನೆಯಲ್ಲಿ ಮನೆಯಲ್ಲಿ ಇರುವ ಹೆಂಗಸರು ಹೆಚ್ಚು ಕೆಲಸ ಮಾಡುವ ಕಾರಣ ಜಾಸ್ತಿ ನೀರು ಕುಡಿಯಬೇಕು. ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗೋರು, ಎಸಿ ರೂಮ್ ಅಲ್ಲಿ ಕೂತು ಕೆಲಸ ಮಾಡೋರು ದಿನಕ್ಕೆ 2.5 ಲೀಟರ್ ಇಂದ 3 ಲೀಟರ್ ನೀರು ಕುಡಿದರೆ ಉತ್ತಮ.

ಹೆಚ್ಚು ಹೊರಗಡೆ ತಿರುಗಾಡುವವರು, ಬಿಸಿಲಲ್ಲಿ ಕೂಲಿ ಕೆಲಸ ಮಾಡುವವರು ದಿನಕ್ಕೆ 4 ಲೀಟರ್ ಇಂದ 5 ಲೀಟರ್ ನೀರು ಕುಡಿಬೇಕು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು..ಅಂದರೆ ಕಿಡ್ನಿ, ಹಾರ್ಟ್, ಶುಗರ್ ಪ್ರಾಬ್ಲಮ್ ಇರೋರು ಡಾಕ್ಟರ್ ಹತ್ರ ಕೇಳಿ ಎಷ್ಟು ಬೇಕೋ ಅಷ್ಟೇ ನೀರು ಕುಡಿಬೇಕು.

ಸರಿಯಾಗಿ ನೀರು ಕುಡಿಯುವ ವಿಧಾನ : 

ಯಾವಾಗಲೂ ಸ್ವಲ್ಪ ಸ್ವಲ್ಪನೇ ನೀರು ಕುಡಿಯಬೇಕು. ಅದೇ ಕಾರಣಕ್ಕೆ ಯಾರದ್ದಾದರು ಮನೆಗೆ ಹೋದಾಗ ಮೊದಲು ಒಂದು ಗ್ಲಾಸ್ ನೀರು ಕೊಡುದು. ಒಂದು ಗ್ಲಾಸ್ ನೀರು ಕುಡಿದರೆ ಒಮ್ಮೆಯ ಸುಸ್ತು ಇಳಿದಂತಾಗುತ್ತದೆ.  ಹಾಗೆಂದು ಒಂದೇ ಸಮನೇ ಜಾಸ್ತಿ ನೀರು ಕುಡಿಯುವುದರಿಂದ ದೇಹಕ್ಕೆ ತೊಂದರೆ ಆಗುತ್ತೆ.

ಸಿಹಿ ಇರೋ ಡ್ರಿಂಕ್ಸ್, ಸೋಡಾಗಳನ್ನು ಯಾವಾಗ ಬೇಕೆಂದರಾವಾಗ ಕುಡಿಯಬಾರದು. ಬಾಯಾರಿಕೆ ಆದ ವೇಳೆಯಂತೂ ಇವುಗಳನ್ನು ಕುಡಿಯಲೇ ಬಾರದು. ಒಂದು ವೇಳೆ ಕುಡಿದರೆ ಹೊಟ್ಟೆಯಲ್ಲಿ ಡೀಹೈಡ್ರೇಶನ್ ಆಗಬಹುದು. ಹಾಗಾಗಿ ಬಾಯಾರಿಕೆಯಾದ ಸಂದರ್ಭ ಉಗುರು ಬೆಚ್ಚಗಿನ ನೀರು ಅಥವಾ ರೂಮ್ ಟೆಂಪರೇಚರ್ ನೀರು ಕುಡಿದರೆ ಒಳ್ಳೆಯದು. ಇದರಿಂದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆದರೆ, ತುಂಬಾ ತಣ್ಣಗಿರೋ ನೀರು ಕುಡಿದರೆ ಜೀರ್ಣ ಸಮಸ್ಯೆಗಳು ಬರಬಹುದು.

ಮಿತವಾಗಿ ಸರಿಯಾದ ಸಮಯದ ಅಂತರ ಕಾಯ್ದುಕೊಂಡು ನೀರು ಕುಡಿಯುವುದು ಒಳ್ಳೆಯದು. ವಾತಾವರಣ ಬಿಸಿ ಇದ್ರೆ ಜಾಸ್ತಿ ನೀರು ಕುಡಿಬೇಕು. ಜಾಸ್ತಿ ಬೆವರು ಬರೋ ಟೈಮ್ ಅಲ್ಲೂ ನೀರು ಜಾಸ್ತಿ ಕುಡಿಯೋದು ಮುಖ್ಯ. ಆದ್ರೆ ಒಂದೇ ಸಮನೆ ಕುಡಿಯಬಾರದು. ಮುಖ್ಯವಾಗಿ ತಲೆ ಸುತ್ತು ಬಂದ ಸಂದರ್ಭ,ಅಸ್ತಮ ಸಮಸ್ಯೆ ಇರುವವರು ಅಥವಾ ಹೆಚ್ಚು ರಕ್ತಸ್ರಾವದಂತಹ ಸಮಸ್ಯೆಗಳು ಉಂಟಾದಾಗ ನೀರು ಕುಡಿಯಬಾರದು. ಒಂದು ವೇಳೆ ನೀರು ಕುಡಿಸಿದ್ದೇ ಆದರೆ ಆ ವ್ಯಕ್ತಿ ಕೋಮಕ್ಕೂ ಹೋಗಬಹುದು ಅಥವಾ ಆತನ ಪ್ರಾಣಪಕ್ಷಿಯೇ ಹಾರಿ ಹೋಗಬಹುದು ಹಾಗಾಗಿ ಈ ಸಮಯ ನೀರಿಗಿಂತ ವಾಯು ಮುಖ್ಯವಾಗಿರುತ್ತದೆ ಎಂಬುವುದನ್ನು ತಿಳಿದಿರಬೇಕು.

Continue Reading

LIFE STYLE AND FASHION

ಮನೆಯಲ್ಲಿ ಬಾತ್‌ರೂಮ್‌ನ ಡ್ರೈನ್ನಲ್ಲಿ ಸಿಕ್ಕಿರುವ ಕೂದಲು ತೆಗೆಯಲು ಈ ಸರಳ ಟಿಪ್ಸ್ ಬಳಸಿ…

Published

on

ನಿತ್ಯವೂ ಸ್ನಾನ ಮಾಡುವ ಕಾರಣ ಬಾತ್‌ರೂಮ್ ಬಳಕೆಯಾಗುತ್ತಿರುತ್ತವೆ. ಇದರಿಂದ ಬಾತ್‌ರೂಮ್‌ನ ಡ್ರೈನ್ನಲ್ಲಿ ಕೂದಲು ಸಿಕ್ಕಿ ಸ್ವಚ್ಛ ಮಾಡಲು ಕಷ್ಟವಾಗುತ್ತದೆ. ಹೆಚ್ಚು ಕೂದಲು ಸಿಕ್ಕಂತೆಯೇ ನೀರು ಹೋಗಲು ತೊಂದರೆಯಾಗಿ ಬ್ಲಾಕ್ ಆಗುತ್ತದೆ ಹಾಗೂ ಮತ್ತೊಂದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಕೊನೆಗೆ ರಾಸಾಯನಿಕ ವಸ್ತುಗಳು ಅಥವಾ ಸ್ವಚ್ಛ ಮಾಡುವವರ ಸಹಾಯವನ್ನು ಪಡೆಯಬೇಕಾಗುತ್ತದೆ .ಆದರೆ, ಅದರ ಬದಲಾಗಿ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಸ್ವಚ್ಛ ಮಾಡಬಹುದು.

ಸೋಡಾ ಮತ್ತು ವಿನೆಗರ್ :

ಮನೆಯಲ್ಲಿ ಬಾತ್‌ರೂಮ್‌ನ ಡ್ರೈನ್ನಲ್ಲಿ ಸಿಕ್ಕಿರುವ ಕೂದಲು ತೆಗೆಯಲು ಹೆಚ್ಚು ಹಣ ಖರ್ಚು ಮಾಡಬೇಕಾದ ಅವಶ್ಯಕತೆ ಇಲ್ಲ. ಕೇವಲ ಬೇಕಿಂಗ್ ಸೋಡಾ ಮತ್ತು ವಿನೆಗರ್ ಉತ್ತಮ ಸಹಾಯ ಮಾಡುತ್ತದೆ. ಮೊದಲು ಬಾತ್ರೂಮ್ ಡ್ರೈನ್ನಲ್ಲಿ ಬೇಕಿಂಗ್ ಸೋಡಾವನ್ನು ಹಾಕಬೇಕು. ನಂತರ ಅದರ ಮೇಲೆ ವಿನೆಗರ್ ಹಾಕಬೇಕು. ಸ್ವಲ್ಪ ಸಮಯ ಹಾಗೆಯೇ ಬಿಡಬೇಕು. ಸ್ವಲ್ಪ ಸಮಯದ ನಂತರ ಬಿಸಿನೀರನ್ನು ಡ್ರೈನ್ನಲ್ಲಿ ಹಾಕಬೇಕು.

ಬೇಕಿಂಗ್ ಸೋಡಾ ಮತ್ತು ವಿನೆಗರ್ ಸೇರಿ ಒಂದು ರಾಸಾಯನಿಕ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ ಇದರಿಂದ ಸಿಕ್ಕಿರುವ ಕೂದಲು ಸುಲಭವಾಗಿ ಹೊರಟುಹೋಗುತ್ತದೆ. ಮೊದಲು ಮುಚ್ಚಿಹೋಗಿರುವ ಡ್ರೈನ್ನಲ್ಲಿ ಉಪ್ಪನ್ನು ಹಾಕಿಬಿಡಿ. ಉಪ್ಪು ಕೂದಲನ್ನು ಸಡಿಲಗೊಳಿಸುತ್ತದೆ. ಇದರಿಂದ ಕೂದಲನ್ನು ಸುಲಭವಾಗಿ ತೆಗೆಯಬಹುದು. ಅಥವಾ ಕೂದಲು ಸಿಲುಕಿರುವ ಜಾಗದಲ್ಲಿ ಕೋಕಾ ಕೋಲಾ ಹಾಕಬೇಕು. ಇದಲ್ಲಿರುವ ರಾಸಾಯನಿಕಗಳು ಕೂದಲನ್ನು ಸಡಿಲಗೊಳಿಸುತ್ತವೆ. ಇದರಿಂದ ಸುಲಭವಾಗಿ ಕೂದಲು ತೆಗೆಯಬಹುದು.

Continue Reading

LATEST NEWS

ಹುಡುಗಿಯರು ಜಡೆ ಯಾಕೆ ಕಟ್ಟಬೇಕು …?? ಫ್ರೀ ಹೇರ್ ಬಿಡುವವರ ಬಗ್ಗೆ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು …??

Published

on

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಗಂಡುಮಕ್ಕಳು ಉದ್ದ ಕೂದಲು ಬಿಟ್ಟು ಜುಟ್ಟು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ, ಬಹುತೇಕ ಹೆಣ್ಣುಮಕ್ಕಳು ಪ್ಯಾಷನ್ ಹೆಸರಿನಲ್ಲಿ ಕೂದಲನ್ನು ಕಟ್ ಮಾಡಿಕೊಂಡು, ಅದನ್ನು ಬಿಟ್ಟುಕೊಂಡು ತಿರುಗಾಡುತ್ತಿದ್ದಾರೆ. ಜಡೆ ಕಟ್ಟುವುದು ಎಂದರೆ ಏನು ಎನ್ನುವುದರ ಅರಿವೇ ಇಲ್ಲದ ಮಟ್ಟಿಗೆ ಮಾಯವಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾಗಿ ಮಹಿಳೆಯರವರೆಗೂ  ಸಂಪೂರ್ಣ ಕೂದಲು ಬಿಟ್ಟು ತಿರುಗುವವರೇ ಹೆಚ್ಚು. ಒಟ್ಟಾರೆಯಾಗಿ, ಅಲಂಕಾರದ  ಮಾತು ಬಂದಾಗ ಸಂಪೂರ್ಣ ಕೂದಲು ಬಿಟ್ಟು ತಿರುಗುವುದಕ್ಕೆ ಮಹತ್ವ ಪಡೆದುಕೊಳ್ಳುತ್ತದೆ. ಸಿನಿಮಾಗಳಲ್ಲಿ, ಕಿರುತೆರೆಗಳಲ್ಲಿ ನಟಿಯರು ಹೀಗೆಯೇ ಮಾಡುವುದರಿಂದ ಇದು ಯುವತಿಯರ ಮೇಲೂ ಪ್ರಭಾವ ಬೀರುತ್ತಿರುವುದೂ ಸುಳ್ಳೇನಲ್ಲ .

ಹೆಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಬಹುದೊಡ್ಡದು. ಹಾಗಾಗಿ ಹಿಂದಿನ ಕಾಲದಲ್ಲಿ  ಹೆಣ್ಣಿನ ಕೂದಲನ್ನು ಬೋಳಿಸುವ ಪದ್ಧತಿ ಇತ್ತು. ಈಗಲೂ ಕೆಲವು ಕಡೆಗಳಲ್ಲಿ ಈ ಅನಿಷ್ಠ ಪದ್ಧತಿ ಚಾಲ್ತಿಯಲ್ಲಿ ಇದೆ. ಗಂಡ ಸತ್ತ ಮೇಲೆ ಹೆಣ್ಣು ಚೆನ್ನಾಗಿ ಕಾಣಿಸಬಾರದು, ಬೇರೆಯವರು ಆಕೆಯ ಬಳಿ ಸೆಳೆಯಬಾರದು ಎನ್ನುವ ಕಾರಣದಿಂದ ಹೀಗೆ ಮಾಡುವುದು. ಇದರ ಅರ್ಥ ತಲೆಗೂದಲು ಸೌಂದರ್ಯದಲ್ಲಿ ಅಷ್ಟು ದೊಡ್ಡ ಕೊಡುಗೆಯನ್ನು ನೀಡುತ್ತದೆ. ಇದೇ ಕಾರಣಕ್ಕೆ ಕೂದಲಿನ ಅಲಂಕಾರಕ್ಕೆಂದೇ ಈಗ ದೊಡ್ಡ ದೊಡ್ಡ ಷೋರೂಮ್​ಗಳೇ ತೆರೆಯಲಾಗುತ್ತಿದೆ.

ಯುವತಿಯರಿಗೆ ಭಾರತಿ ವಿಷ್ಣುವರ್ದನ್ ಕಡೆಯಿಂದ ಕಿವಿಮಾತು :

“ಕೂದಲು ಸಂಪೂರ್ಣ ಬಿಟ್ಟುಕೊಂಡು ತಿರುಗುವುದು ಸರಿಯಲ್ಲ. ಕೂದಲು ಬಿಟ್ಟುಕೊಂಡು ತಿರುಗುವ ನಿಜವಾದ ಅರ್ಥ ಕಷ್ಟದಲ್ಲಿದ್ದೇವೆ ಎಂದು ತೋರಿಸಲು, ಅದೇ ಮತ್ತೊಂದು ಬೇರೆಯವರನ್ನು ಅಟ್ರಾಕ್ಟ್​ ಮಾಡವುದೇ ಆಗಿದೆ. ದ್ರೌಪದಿ ತನ್ನ ಕಷ್ಟಕಾಲದಲ್ಲಿ ಇದ್ದ ಸಮಯದಲ್ಲಿ ಕೂದಲು ಬಿಟ್ಟಿದ್ದಳು. ದುಶ್ಯಾಸನನ ವಧೆ ಆಗುವವರೆಗೆ ಕೂದಲು ಕಟ್ಟಲ್ಲ ಎಂದು ಪ್ರತಿಜ್ಞೆ ಮಾಡಿದ್ದಳು. ಇದರ ಅರ್ಥ ಕಷ್ಟಕಾಲದಲ್ಲಿ ಹೆಣ್ಣುಮಕ್ಕಳು ಇದ್ದಾರೆ ಎನ್ನುವ ಅರ್ಥವನ್ನು ಕೂದಲು ಸಂಪೂರ್ಣ ಬಿಟ್ಟುಕೊಂಡು ತಿರುಗುವುದು ತೋರಿಸುತ್ತದೆ ಬೇರೆಯವರನ್ನು ಕೆಟ್ಟ ರೀತಿಯಲ್ಲಿ ಅಟ್ರಾಕ್ಟ್​ ಮಾಡುವುದು ಏಕೆ? ನಿಮ್ಮನ್ನು ನೀವು ಮೊದಲು ಪ್ರೀತಿಸಿ, ಬೇರೆಯವರನ್ನು ಅಟ್ರಾಕ್ಟ್​  ಮಾಡುವುದನ್ನು ನಿಲ್ಲಿಸಿ. ಇದು ಅಟ್ರಾಕ್ಟ್​ ಮಾತ್ರವಲ್ಲದೇ ನಿಮ್ಮ ಮೇಲೆ ಅಟ್ಯಾಕ್​ ಮಾಡಲೂ ನೀವು ಕಾರಣರಾಗುತ್ತೀರಿ ಎನ್ನುವುದು ನೆನಪಿನಲ್ಲಿ. ಬೇರೆಯವರನ್ನು ಹೀಗೆ ಪ್ರವೋಕ್​  ಮಾಡಿ ಏನು ಪ್ರಯೋಜನ ? ಮೊದಲು ನಿಮ್ಮನ್ನು ನೀವು ಗೌರವಿಸುವುದನ್ನು ಕಲಿತುಕೊಳ್ಳಿ, ಆಮೇಲೆ ಬೇರೆಯವರು ನಿಮ್ಮನ್ನು ಗೌರವಿಸುತ್ತಾರೆ” ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ ಯುವತಿಯರಿಗೆ ಕಿವಿಮಾತು ಹೇಳಿದ್ದಾರೆ.

ಕೇಶದಲ್ಲಿದ್ದಾಳೆ ಸರಸ್ವತಿ :

“ಜಡೆ ಮತ್ತು ಜ್ಞಾನದ ಬಗ್ಗೆ ಮಾತನಾಡಿರುವ ನಟಿ, ಕೂದಲಿನಲ್ಲಿ ಸರಸ್ವತಿ ಇದ್ದಾಳೆ. ಆಕೆಯನ್ನು ಕಟ್ಟಿಹಾಕಿಕೊಂಡರೆ ನಿಮ್ಮ ಜ್ಞಾನ ವರ್ಧಿಯಾಗುತ್ತದೆ. ಆದರೆ ಕೂದಲು ಬಿಟ್ಟು ಆಕೆಯನ್ನು ನೀವೇ ಹೊರಕ್ಕೆ ಕಳಿಸುತ್ತಿದ್ದೀರಿ. ದೇಶದಲ್ಲಿ ಇಂದು ಎಷ್ಟೆಲ್ಲಾ ಸಮಸ್ಯೆ ಬರುತ್ತಿರುವುದಕ್ಕೆ ಕಾರಣ, ಇಂದು ತಾಯಂದಿರು ಕೂಡ ಕೂದಲು ಬಿಟ್ಟುಕೊಂಡು ತಿರುಗಾಡುವುದೇ ಆಗಿದೆ. ಜ್ಞಾನ ಎನ್ನುವುದು ಈಗ ದೂರವಾಗುತ್ತಿದೆ. ಯಾರು ನೋಡಿದರೂ ಕೂದಲು ಬಿಟ್ಟುಕೊಂಡು ಓಡಾಡುವವರೇ ಆಗಿದ್ದಾರೆ. ಕೊನೆಯ ಪಕ್ಷ ಒಂದು ರಬ್ಬರ್​ ಅನ್ನಾದರೂ ಕಟ್ಟಿಕೊಳ್ಳಿ. ಸಂಪೂರ್ಣವಾಗಿ ಕೂದಲು ಬಿಡಬೇಡಿ. ಹೇಳುವುದನ್ನು ಹೇಳಿದ್ದೇನೆ. ಕೊನೆಗೆ ನಿಮ್ಮಿಚ್ಛೆ. ಏಕೆಂದರೆ ಇತ್ತೀಚೆಗೆ ತಾಯಂದಿರು ಕೂಡ ತಮ್ಮ ಮಕ್ಕಳಿಗೆ ಬುದ್ಧಿಹೇಳುವುದನ್ನು ಬಿಟ್ಟು ಫ್ಯಾಷನ್ ಹೆಸರಿನಲ್ಲಿ ಎಲ್ಲದಕ್ಕೂ ಅವಕಾಶ ಕಲ್ಪಿಸುತ್ತಿದ್ದಾರೆ. ವಿದೇಶಿಗರು ಭಾರತೀಯ ಸಂಪ್ರದಾಯವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದರೆ. ನಾವು ಅಲ್ಲಿನ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಿರುವುದು ನೋವಿನ ಸಂಗತಿ” ಎಂದು ಭಾರತಿ ಅಮ್ಮ ಹೇಳಿರುವ ಮಾತುಗಳು ಸುದ್ದಿಮನೆ ಆಫೀಷಿಯಲ್​ ಯೂಟ್ಯೂಬ್​ ಚಾನೆಲ್​ ಶೇರ್​ ಆಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page