Connect with us

FILM

ಚಂದನ್​ ಶೆಟ್ಟಿ-ನಿವೇದಿತಾ ಗೌಡ ಸಂಸಾರಕ್ಕೆ ಬ್ರೇಕ್ ನೀಡಲು​ ಇದೇನಾ ಕಾರಣ?

Published

on

ಬೆಂಗಳೂರು: ಸ್ಯಾಂಡಲ್​ವುಡ್​ ಕ್ಯೂಟ್​ ಕಪಲ್​ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಸಂಸಾರ ಸಾಗರಕ್ಕೆ ಪುಲ್​ ಸ್ಟಾಪ್​ ಹಾಕಿದ್ದಾರೆ. ಇಬ್ಬರು ಒಮ್ಮತದಿಂದ ದೂರವಾಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವಿಚಾರ ಹಂಚಿಕೊಂಡಿದ್ದಾರೆ. ಆದರೆ ಇವರಿಬ್ಬರ ನಡುವಿನ ಸಂಬಂಧ ದೂರವಾಗುತ್ತಿರುವ ಸಂಗತಿ ಕೇಳಿ ಅನೇಕರು ಅಚ್ಚರಿ ಪಟ್ಟಿದ್ದಾರೆ.

ಬಿಗ್​ ಬಾಸ್​ ಮೂಲಕ ಪರಿಚಯಗೊಂಡ ಈ ಜೋಡಿ ಪ್ರೀತಿಗೆ ಬಿದ್ದು, ಕೊನೆಗೆ ಮನೆಯವರ ಒಪ್ಪಿಗೆ ಮೇರೆಗೆ ವಿವಾಹವಾಗುತ್ತಾರೆ. ಮೈಸೂರು ದಸರಾದಲ್ಲಿ ಚಂದನ್​ ಶೆಟ್ಟಿ ತನ್ನೊಡತಿ ನಿವೇದಿತಾ ಗೌಡಗೆ ಪ್ರಪೋಸ್​ ಮಾಡುವ ಮೂಲಕ ವಿವಾಹವಾಗುತ್ತಾರೆ. ಆದರೆ 4 ವರ್ಷ ಸಂಸಾರ ನಡೆಸಿದ ಜೋಡಿ ದೂರವಾಗಲು ನಿರ್ದಿಷ್ಟ ಕಾರಣವೇನು ಎಂದು ಫ್ಯಾನ್ಸ್​ ಹುಡುಕಾಡುತ್ತಿದ್ದಾರೆ.

ಮಕ್ಕಳು ಬೇಡ ಅಂದ್ರಾ?

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದನ್​ ಹಾಗೂ ನಿವೇದಿತಾ ಗೌಡ ಬೇರೆ ಬೇರೆಯಾಗಲು ಫ್ಯಾನ್ಸ್​ ನಾನಾ ಕಾರಣವನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಂತೆಯೇ ಮಕ್ಕಳು ಮಾಡಿಕೊಳ್ಳುವ ವಿಚಾರಕ್ಕೆ ಚಂದನ್ – ನಿವಿ ದಾಂಪತ್ಯ ಮುರಿದುಬಿತ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ.

ನಿವೇದಿತಾಗೆ ನಾಯಕಿಯಾಗುವ ಕನಸು?

ನಿವೇದಿತಾ ಗೌಡ ಮೊದಲಿನಿಂದಲೂ ನಾಯಕಿ ಆಗುವ ಆಸೆ. ಸಿನಿಮಾ ಮಾಡುವ ಕನಸಿತ್ತು. ಅದರಂತೆಯೆ ಕೆಲವು ಶೋಗಳನ್ನು ನಿವೇದಿತಾ ಗೌಡ ಮಾಡುತ್ತಾ ಬಂದಿದ್ದಾರೆ. ಈಗ ಒಂದಷ್ಟು ಸಿನಿಮಾಗಳು ನಿವೇದಿತಾ ಗೌಡರನ್ನು ಹುಡುಕಿಕೊಂಡು ಬರ್ತಿವೆ. ಈ ಸಂದರ್ಭದಲ್ಲಿ ಮಕ್ಕಳು ಬೇಡ ಅನ್ನೋದು ನಿವೇದಿತಾ ವಾದವಾದರೆ. ಚಂದನ್ ಶೆಟ್ಟಿ ಪೋಷಕರಿಗೆ ಮಕ್ಕಳು ಬೇಕು ಎಂಬ ಆಸೆ ಎಂಬುದನ್ನು ಫ್ಯಾನ್ಸ್​ ಹಂಚಿಕೊಳ್ಳುತ್ತಿದ್ದಾರೆ.

ಯಾವುದೇ ಮನಸ್ತಾಪವಿಲ್ಲ

ಮತ್ತೊಂದು ಸಂಗತಿ ಎಂದರೆ ಚಂದನ್ ಶೆಟ್ಟಿ ಕೂಡ ನಟನಾಗಿ, ಸಂಗೀತ ನಿರ್ದೇಶಕನಾಗಿ ಸಾಕಷ್ಟು ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ದಾಂಪತ್ಯ ಮುಂದುವರೆಸುವ ಬದಲು ಸ್ನೇಹಿತರಾಗಿ ಉಳಿಯಲು ನಿರ್ಧಾರ ಮಾಡಿದ್ದಾರೆ. ಇದನ್ನು ಹೊರತು ಪಡಿಸಿ ಮತ್ಯಾವುದೇ ಮನಸ್ತಾಪ ಇಬ್ಬರ ಮಧ್ಯೆ ಇಲ್ಲ ಅನ್ನೋದು ಸಹ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಚಂದನ್​-ನಿವೇದಿತಾ ಹೇಳಿದಿಷ್ಟು

ಈ ದಿನ, ನಿವೇದಿತಾ ಗೌಡ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

FILM

ಒಂದೆಡೆ ಜಾಟ್2 ಚಿತ್ರ ಘೋಷಣೆ; ಮತ್ತೊಂದೆಡೆ ನಟ ಸನ್ನಿ ಡಿಯೋಲ್, ರಣದೀಪ್ ಹೂಡಾ ವಿರುದ್ಧ ಎಫ್‌ಐಆರ್!

Published

on

ಮಂಗಳೂರು/ಮುಂಬೈ : ಸನ್ನಿ ಡಿಯೋಲ್‌ರ ‘ಜಾಟ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಚಿತ್ರದಲ್ಲಿ ಆಯೇಶಾ ಖಾನ್, ಜರೀನಾ ವಹಾಬ್, ಬಾಂಧವಿ ಶ್ರೀಧರ್, ಪ್ರಣಿತಾ ಪಟ್ನಾಯಕ್, ದಯಾನಂದ ಶೆಟ್ಟಿ, ಜಗಪತಿ ಬಾಬು ನಟಿಸಿದ್ದಾರೆ.

ಚಿತ್ರ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಈ ನಡುವೆ ಈ ಚಿತ್ರದ ಮುಂದುವರಿದ ಭಾಗ ಬರಲಿದೆ ಎಂದು ನಟ ಸನ್ನಿ ಡಿಯೋಲ್ ಘೋಷಿಸಿದ್ದಾರೆ. ಜಾಟ್ 2 ಚಿತ್ರ ನಿರ್ಮಾಣವಾಗಲಿದೆ ಎಂದು ನಟ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೂ ಗೋಪಿಚಂದ್ ಮಲಿನೇನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬುದು ಪೋಸ್ಟರ್‌ನಿಂದ ಬಹಿರಂಗವಾಗಿದೆ.

ಮತ್ತೊಂದೆಡೆ ಎಫ್‌ಐಆರ್!

ಸಿನಿಮಾ ಯಶಸ್ವಿಯಾದ ಸಂಭ್ರಮದಲ್ಲಿ ಚಿತ್ರತಂಡವಿದ್ದು, ಇದೀಗ ಸಂಕಷ್ಟವೊಂದು ಎದುರಾಗಿದೆ. ಜಾಟ್ ಚಿತ್ರದ ಒಂದು ದೃಶ್ಯದಲ್ಲಿ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರಲಾಗಿದೆ. ಏಸುಕ್ರಿಸ್ತ ಮತ್ತು ಕ್ರೈಸ್ತ ಧಾರ್ಮಿಕ ಆಚರಣೆಗಳನ್ನು ಅಗೌರವಿಸುವ ದೃಶ್ಯಗಳು ಚಿತ್ರದಲ್ಲಿವೆ ಎಂದು ಕ್ರೈಸ್ತ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ಇದನ್ನೂ ಓದಿ : ಪ್ರಿಯಕರನೊಂದಿಗಿನ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ ಎರಡನೇ ಮಗಳು; ನಾನು ಮೊದಲೇ ಊಹಿಸಿದ್ದೆ ಎಂದ ಅಪ್ಪ!

ನಟರಾದ ಸನ್ನಿ ಡಿಯೋಲ್, ರಣದೀಪ್ ಹೂಡಾ, ವಿನೀತ್ ಕುಮಾರ್, ನಿರ್ದೇಶಕ ಗೋಪಿಚಂದ್, ನಿರ್ಮಾಪಕ ನವೀನ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

Continue Reading

FILM

ಪ್ರಿಯಕರನೊಂದಿಗಿನ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ ಎರಡನೇ ಮಗಳು; ನಾನು ಮೊದಲೇ ಊಹಿಸಿದ್ದೆ ಎಂದ ಅಪ್ಪ!

Published

on

ಮಂಗಳೂರು/ಬೆಂಗಳೂರು : ಖ್ಯಾತ ನಟ ಅರ್ಜುನ್ ಸರ್ಜಾ ಕಳೆದ ವರ್ಷವಷ್ಟೇ ಹಿರಿಯ ಪುತ್ರಿ, ನಟಿ ಐಶ್ವರ್ಯ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದರು. ಇದೀಗ ಎರಡನೇ ಮಗಳು ಹಸೆಮಣೆ ಏರಲು ಸಜ್ಜಾಗಿದ್ದು, ಸದ್ದಿಲ್ಲದೆ ನಿಶ್ಚಿತಾರ್ಥ ನಡೆದಿದೆ. ಸದ್ಯ ಈ ಜೋಡಿಯ ಫೋಟೋಗಳು ವೈರಲ್ ಆಗುತ್ತಿವೆ.

ಅರ್ಜುನ್ ಸರ್ಜಾ ಮತ್ತು ಪತ್ನಿ ನಿವೇದಿತಾ ದಂಪತಿ ಮಗಳ ಸಂಭ್ರಮದಲ್ಲಿ ಜೊತೆಯಾಗಿದ್ದರು. ಐಶ್ವರ್ಯಾ ಸರ್ಜಾ ಪತಿ ಉಮಾಪತಿ ಜೊತೆಗೆ ಈ ಶುಭ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಅಂಜನಾ ತನ್ನ ಭಾವಿ ಪತಿಯೊಂದಿಗಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಫ್ ಕೋರ್ಸ್ ಎಸ್ ಎಂದು ಹಾರ್ಟ್ ಎಮೋಜಿ ಹಾಕಿರುವ ಅವರು, #13yearslater ಎಂದು ಬರೆದುಕೊಂಡಿದ್ದಾರೆ.

ಅಂಜನಾ ಪೋಸ್ಟ್ ಸದ್ಯ ಎಲ್ಲರ ಗಮನಸೆಳೆಯುತ್ತಿದೆ. ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ವಿಶೇಷ ಅಂದ್ರೆ ಅರ್ಜುನ್ ಸರ್ಜಾ ಕೂಡ ಕಮೆಂಟ್ ಮಾಡಿರೋದು. ನಾನು ಮೊದಲೇ ಊಹಿಸಿದ್ದೆ, ಅವನು ನಿನ್ನ ಪಾರ್ಟ್ನರ್ ಆಗುತ್ತಾನೆಂದು ಎಂದು ಬರೆದಿದ್ದಾರೆ. ಐಶ್ವರ್ಯಾ ಸರ್ಜಾ ‘ಫೈನಲಿ’ ಎಂದು ಕಮೆಂಟ್ ಮಾಡಿದ್ದಾರೆ.

ಅಂದ್ಹಾಗೆ, ನಿವೇದಿತಾ ವರಿಸುತ್ತಿರುವ ಹುಡುಗ ಚಿತ್ರರಂಗದವರಲ್ಲ. ಈ ದೇಶದವರೂ ಅಲ್ಲ. ಅವರು ವಿದೇಶದವರು. ಇಟಲಿ ಮೂಲದವರು ಎಂದು ಹೇಳಲಾಗುತ್ತಿದೆ. ಎಂಗೇಜ್ಮೆಂಟ್‌ ಕೂಡ ಇಟಲಿಯಲ್ಲೇ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಋತುಚಕ್ರದ ಬಗ್ಗೆ ಮಾತನಾಡುವಾಗ ಈಗಲೂ ಮುಜುಗರವಾಗುತ್ತದೆ – ಸಮಂತಾ ಬೇಸರ

ಹುಡುಗ ಯಾರು? ಮದುವೆ ಯಾವಾಗ? ಇತ್ಯಾದಿ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ. ಅಂದ್ಹಾಗೆ ಕಳೆದ ವರ್ಷ ಜೂ.10 ರಂದು ಹಿರಿಯ ಮಗಳು ಐಶ್ವರ್ಯಾ ಸರ್ಜಾಳ ವಿವಾಹವನ್ನು ತಮಿಳು ನಟ ಉಮಾಪತಿಯೊಂದಿಗೆ ನೆರವೇರಿಸಿದ್ದ ಅರ್ಜುನ್ ಸರ್ಜಾ ಇದೀಗ ಎರಡನೇ ಮಗಳ ಮದುವೆ ತಯಾರಿಯಲ್ಲಿದ್ದಾರೆ.

Continue Reading

FILM

ಋತುಚಕ್ರದ ಬಗ್ಗೆ ಮಾತನಾಡುವಾಗ ಈಗಲೂ ಮುಜುಗರವಾಗುತ್ತದೆ – ಸಮಂತಾ ಬೇಸರ

Published

on

‘ಮಹಿಳೆಯರಾಗಿ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಆದರೂ ಋತುಚಕ್ರದ ವಿಚಾರಗಳ ಬಗ್ಗೆ ಮಾತನಾಡುವಾಗ ಇನ್ನೂ ಮೌನ ವಹಿಸುತ್ತೇವೆ. ​​ಪಿಸುಮಾತುಗಳಿಂದ ಹೇಳುತ್ತೇವೆ. ಅವಮಾನ ಎಂದು ಭಾವಿಸುತ್ತೇವೆ. ಈ ಮನಸ್ಥಿತಿ ಬದಲಾಗಬೇಕು ಎಂದು ನಮ್ಮ ಋತುಚಕ್ರ ಶಕ್ತಿಯುತವಾಗಿವೆ. ಇದು ಜೀವನವನ್ನು ದೃಢಪಡಿಸುತ್ತವೆ. ಇದು ಖಂಡಿತವಾಗಿಯೂ ಮುಜುಗರ ಅಥವಾ ಹಗುರವಾಗಿ ಪರಿಗಣಿಸುವ ವಿಷಯವಲ್ಲ. ಋತುಚಕ್ರ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪ್ರತಿ ತಿಂಗಳೂ ನಿರಂತರವಾಗಿ ಕಲಿಯುತ್ತಲೇ ಇರಬೇಕು’ ಎಂದು ನಟಿ ಸಮಂತಾ ಅಭಿಪ್ರಾಯಪಟ್ಟಿದ್ದಾರೆ.

 

ನಟಿ ಸಮಂತಾ ರುತು ಪ್ರಭು ಡಿವೋರ್ಸ್‌ ಬಳಿಕ ಪರದೆ ಮೇಲೆ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ‘ಖುಷಿ’ ಬಳಿಕ ಅನಾರೋಗ್ಯದ ಕಾರಣದಿಂದ ಸಮಂತಾ ಸಿನಿಮಾ ಕೆಲಸ ಕಡಿಮೆ ಮಾಡಿ ವೆಬ್ ಸೀರಿಸ್​​ಗಳತ್ತ ಅವರ ಗಮನ ಕೊಡಲು ಆರಂಭಿಸಿದ್ದಾರೆ. ಇದರ ಜೊತೆಗೆ ಸಮಂತಾ ಸಾಮಾಜಿಕ ಕಳಕಳಿ ತೋರಿಸುವ ಕೆಲಸ ಮಾಡುವುದರ ಜೊತೆಜೊತೆಗೆ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾರೆ. ಈಗ ನಟಿ ಋತುಚಕ್ರದ ಬಗ್ಗೆ ಮಾತನಾಡಿದ್ದು, ಈ ವಿಚಾರವನ್ನು ಓಪನ್ ಆಗಿ ಮಾತನಾಡಲು ಮುಜುಗರಪಟ್ಟುಕೊಳ್ಳುವ ಸ್ಥಿತಿ ಇದೆ ಎಂದು ಬೇಸರ ಹೊರಹಾಕಿದ್ದಾರೆ.

ಸಮಂತಾ ಅವರು ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಅವರ ನಟನೆಯ ‘ಶುಭಂ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರ ಜೊತೆಗೆ ಸಮಂತಾ ಅವರು ವೆಬ್ ಸೀರಿಸ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ‘ಮಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವರ್ಷ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಇನ್ನು, ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿರುವ ‘ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್​ಡಮ್’ ಹೆಸರಿನ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಇನ್ನು, ರಾಜ್ ಜೊತೆ ಸಮಂತಾ ಡೇಟಿಂಗ್ ಮಾಡತ್ತಿರುವ ಬಗ್ಗೆ ವರದಿಗಳೂ ಇವೆ. ಆದರೆ, ಇದನ್ನು ಸಮಂತಾ ಅವರು ಖಚಿತಪಡಿಸಿಲ್ಲ. ರಾಜ್ ಅವರಿಗೆ ಈಗಾಗಲೇ ವಿವಾಹ ಆಗಿದೆ. ಅವರ ಜೊತೆ ಸಮಂತಾ ಕಾಣಿಸಿಕೊಂಡಿರುವುದು ಆಶ್ಚರ್ಯಕರ ಸಂಗಾತಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page