Connect with us

BIG BOSS

ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್

Published

on

ಬೆಂಗಳೂರು: ಹಿಂದೂ ಕಾರ್ಯಕರ್ತೆ ಆಗಿ ಚೈತ್ರಾ ಕುಂದಾಪುರ ಗುರುತಿಸಿಕೊಂಡಿದ್ದರು. ಅವರ ವಿರುದ್ಧ ವಂಚನೆ ಆರೋಪ ಇದೆ. ಈಗ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟಿಕೆಟ್ ಸಿಕ್ಕಿದೆ. ಅವರಿಗೆ ಮೊದಲ ದಿನವೇ ಹೊಸ ಬಿರುದು ಕೂಡ ಸಿಕ್ಕಿದೆ ಅನ್ನೋದು ವಿಶೇಷ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಹಲವು ವಿಚಾರಗಳನ್ನು ರಿವೀಲ್ ಮಾಡಲಾಗಿದೆ. ಗೌತಮಿ ಜಾಧವ್ ಅವರು ಟೋಪನ್ ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿ ಅವರನ್ನು ಮನೆಯ ಕೆಲವರು ಟೀಕೆ ಮಾಡಿದ್ದರು. ಇದಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಚೈತ್ರಾ ಕುಂದಾಪುರ್​ಗೆ ‘ಲೇಡಿ ಡಾನ್’ ಎಂಬ ಬಿರುದನ್ನು ಜಗದೀಶ್ ಅವರು ಕೊಟ್ಟಿದ್ದಾರೆ.

BIG BOSS

BBK12: ಯಾರು ಊಹಿಸದ ಸ್ಪರ್ಧಿಗಳಿಗೆ ಇಂದಿನ ಕಿಚ್ಚನ ಕ್ಲಾಸ್!?

Published

on

BBK12: ಈ ವಾರ ದೊಡ್ಮನೆಯಲ್ಲಿ ಟಾಸ್ಕ್‌ಗಳ ಸುರಿಮಳೆ ಉಂಟಾಗಿತ್ತು. ಅದರಲ್ಲೂ ಕೆಲವೊಂದು ಕಡೆ ತಂತ್ರ-ಕುತಂತ್ರಗಳ ಮೂಲಕ ಸ್ಪರ್ಧಿಗಳು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ವಾರದ ಕಿಚ್ಚನ ಪಂಚಾಯ್ತಿ ಬಂದಿದ್ದು, ಯಾರು ಊಹಿಸದ ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್‌ ಸಿಗುವ ಸಾಧ್ಯತೆ ಇದೆ.


ಈ ವಾರ ಬಿಗ್ ಬಾಸ್ ಮನೆಯಲ್ಲಿ ಮಾಳು ಅವರು ಕ್ಯಾಪ್ಟನ್ ಆಗಿದ್ದರು. ಟಾಸ್ಕ್‌ ಕೂಡ ಜೋರಾಗಿತ್ತು. ಇದರ ಮಧ್ಯೆ ಸ್ಪರ್ಧಿಗಳ ನಡುವಿನ ಜಗಳ ತಾರಕಕ್ಕೇರಿತ್ತು. ಅದರಲ್ಲೂ ಮಾಳು ಅವರು ನಾಮಿನೇಟ್ ಮಾಡಿದ ರೀತಿಗೆ ಕೆಲವು ಮನೆ ಸದಸ್ಯರು ಆಕ್ರೋಶಗೊಂಡಿದ್ದರು.

ನಂತರದ ಟಾಸ್ಕ್‌ಗಳಲ್ಲಿ ಎರಡು ಗುಂಪುಗಳಾಗಿ ಬದಲಾಗಿತ್ತು. ಅದುವೇ ನಾಮಿನೇಟ್ ತಂಡ ಹಾಗೂ ಸೇಫ್‌ ತಂಡ. ನಾಮಿನೇಟ್ ತಂಡ ಪಂದ್ಯ ಗೆದ್ದರೂ ಕೂಡ, ರಕ್ಷಿತಾ ಅವರ ಒಂಟಿ ನಿರ್ಧಾರಕ್ಕೆ ತಂಡದ ಸದಸ್ಯರು ಸುಸ್ತಾಗಿದ್ದರು. ತಂಡದಲ್ಲಿದ್ದರೂ ಕೂಡ ತಮ್ಮ ಹಠವನ್ನ ಮುಂದುವರಿಸಿದ್ದರು.

ಇನ್ನೂ ಎರಡನೇ ಟಾಸ್ಕ್‌ನಲ್ಲೂ ರಕ್ಷಿತಾ ಅವರ ಒಬ್ಬಂಟಿ ನಿರ್ಧಾರಕ್ಕೆ ಅಶ್ವಿನಿ ಗೌಡ ರೊಚ್ಚಿಗೆದ್ದಿದ್ದರು. ಬಿಗ್‌ಬಾಸ್ ‘ಚಕ್ರವ್ಯೂಹ’ ಎಂಬ ಟಾಸ್ಕ್ ಕೊಟ್ಟಿದ್ದರು. ಈ ವೇಳೆ ನಾಮಿನೇಟ್ ಆಗಿರುವ ಸದಸ್ಯರು ಆಟ ಯಾರು ಆಡಬೇಕೆನ್ನುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿ ತಮ್ಮ ತಂಡದಲ್ಲಿ ಚರ್ಚಿಸಿದ ಗೇಮ್ ಪ್ಲಾನ್ ಕುರಿತು ಎದುರಾಳಿ ತಂಡದ ಗಿಲ್ಲಿ ಅವರೊಂದಿಗೆ ಹೇಳುತ್ತಾರೆ. ನಂತರ ಇದು ನಮ್ಮ ಪರ್ಸ್‌ನಲ್‌ ಎಂದು ರಕ್ಷಿತಾ ಹೇಳಿದ್ದರು. ಗಿಲ್ಲಿ ಅವರು ಇದಕ್ಕೆ ಇದು ನಮ್ಮ ಇಷ್ಟ. ಗೇಮ್ ಆಡಬೇಡಿ ಎಂದಿದ್ದರು. ಇದು ಮನೆಯವರ ಹಾಗೂ ವೀಕ್ಷಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಒಂದು ತಂಡವಾಗಿ ಮಾಡಿದ ಮೇಲೆ ಸ್ಪರ್ಧಿಗಳು ಎದುರಾಳಿ ತಂಡದ ಸದಸ್ಯರ ಜೊತೆಗೆ ತೊಡಗಿಕೊಳ್ಳಬಾರದಿತ್ತು ಎಂದು ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.

ಇದನ್ನೂ ಓದಿ:  ‘ಜೈ’ ಅಂದ್ರು ಪ್ರೇಕ್ಷಕರು…ತುಳು ಚಿತ್ರರಂಗದಲ್ಲಿ ಹೊಸ ದಾಖಲೆ!

ಇದೀಗ ವಾರದ ಕೊನೆಯಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಷಯದ ಕುರಿತು ಪ್ರಸ್ತಾಪವಾಗುವ ಸಾಧ್ಯತೆ ಇದ್ದು, ಗಿಲ್ಲಿ ಹಾಗೂ ರಕ್ಷಿತಾ ಅವರಿಗೆ ಕ್ಲಾಸ್ ಪಕ್ಕಾ ಎಂದು ಹೇಳಲಾಗುತ್ತಿದೆ.

Continue Reading

BIG BOSS

BBK12: ಆಟದಲ್ಲಿ ಕುತಂತ್ರ ಮಾಡಿದ್ರ ರಕ್ಷಿತಾ ಶೆಟ್ಟಿ..! ಅಶ್ವಿನಿ ಗೌಡ ಕೆಂಡಕಾರಿದ್ದೇಕೆ?

Published

on

BBK12: ದೊಡ್ಮನೆಯಲ್ಲಿ ಟಾಸ್ಕ್‌ಗಳ ಅಬ್ಬರ ಜೋರಾಗಿದೆ. ಇದರ ಜೊತೆ ಸ್ಪರ್ಧಿಗಳ ನಡುವೆ ವಾಗ್ವಾದವೂ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ಟಾಸ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತಾ ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.. ಮಾತ್ರವಲ್ಲದೆ ವೀಕ್ಷಕರು ಕೂಡ ರಕ್ಷಿತಾ ಶೆಟ್ಟಿ ಅವರ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ರಕ್ಷಿತಾ ಶೆಟ್ಟಿಯವರನ್ನ ಈ ವಾರ ಮನೆಯ ಕ್ಯಾಪ್ಟನ್ ಮಾಳು ನೇರವಾಗಿ ನಾಮಿನೇಟ್ ಮಾಡಿದ್ದರು. ಇದರಿಂದಾಗಿ ಟಾಸ್ಕ್‌ನಲ್ಲಿ ನಾಮಿನೇಟ್ ತಂಡದಲ್ಲಿ ಸೇರಿಕೊಂಡಿದ್ದಾರೆ. ನಾಮಿನೇಟ್ ತಂಡದಲ್ಲಿ ಅಶ್ವಿನಿ ಗೌಡ, ಧ್ರುವಂತ್, ಕಾಕ್ರೋಚ್ ಸುಧಿ, ಜಾಹ್ನವಿ, ರಾಶಿಕಾ ಶೆಟ್ಟಿ, ರಿಷಾ ಇದ್ದರು. ಈಗಾಗೀ ಟಾಸ್ಕ್‌ನಲ್ಲಿ ನಾಮಿನೇಟ್ ತಂಡ ಹಾಗೂ ಸೇಫ್ ತಂಡ ಎಂದು ಪ್ರತ್ಯೇಕಿಸಲಾಗಿದೆ. ಆದರೆ ರಕ್ಷಿತಾ ಅವರ ಒಬ್ಬಂಟಿ ನಿರ್ಧಾರಕ್ಕೆ ನಾಮಿನೇಟ್ ತಂಡದ ಸದಸ್ಯರು ಸುಸ್ತಾಗಿ ಹೋಗಿದ್ದಾರೆ.

ಪಟ್ಟು ಬಿಡದ ರಕ್ಷಿತಾ!
‌ಮೊದಲನೇ ಟಾಸ್ಕ್‌ನಲ್ಲಿ ನಾಮಿನೇಟೆಡ್ ತಂಡ ಗೆಲುವು ಸಾಧಿಸಿದೆ. ಇದರ ಅನುಸಾರ, ನಾಮಿನೇಟೆಡ್‌ ತಂಡ ತಮ್ಮಲ್ಲೇ ಚರ್ಚಿಸಿ, ಒಬ್ಬರನ್ನು ಸೇಫ್ ಮಾಡಬೇಕಿತ್ತು. ಈ ವೇಳೆ, ತಾವು ಸೇಫ್ ಆಗಬೇಕು ಅಂತ ರಾಶಿಕಾ ಶೆಟ್ಟಿ ಹಠ ಹಿಡಿದಿದ್ದರೆ, ರಕ್ಷಿತಾ ಮಾತ್ರ ಇದಕ್ಕೆ ಒಪ್ಪಲೇ ಇಲ್ಲ. ‘ಇಷ್ಟೂ ಡಿಸಿಷನ್ ಒಬ್ಬಳ ಮೇಲೆ ಡಿಪೆಂಡ್ ಆಗೋಕೆ ನಾನು ಬಿಡಲ್ಲ’ ಎಂದು ರಕ್ಷಿತಾ ವಿರುದ್ಧ ರಾಶಿಕಾ ಗುಡುಗಿದ್ದರು. ಆದಾಗ್ಯೂ, ಈ ಮಾತು ಸುಳ್ಳಾಗಿದೆ. ಇಡೀ ನಿರ್ಧಾರವನ್ನ ರಕ್ಷಿತಾ ಶೆಟ್ಟಿಯಿಂದ ನಾಮಿನೇಟೆಡ್‌ ತಂಡ ಬದಲಿಸುವಂತಾಗಿತ್ತು.

ಎರಡನೇ ಟಾಸ್ಕ್‌ನಲ್ಲೂ ಕುತಂತ್ರ ಮುಂದುವರಿಸಿದ್ರ ರಕ್ಷಿತಾ?
ಇಂದಿನ ಸಂಚಿಕೆಯ ಪ್ರೋಮೋವನ್ನ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಇಂದು ಬಿಗ್‌ಬಾಸ್ ‘ಚಕ್ರವ್ಯೂಹ’ ಎಂಬ ಟಾಸ್ಕ್ ಕೊಟ್ಟಿದ್ದಾರೆ. ಈ ವೇಳೆ ನಾಮಿನೇಟ್ ಆಗಿರುವ ಸದಸ್ಯರು ಆಟ ಯಾರು ಆಡಬೇಕೆನ್ನುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿರುತ್ತಾರೆ. ಈ ವೇಳೆ ರಕ್ಷಿತಾ ಶೆಟ್ಟಿ ತಮ್ಮ ತಂಡದಲ್ಲಿ ಚರ್ಚಿಸಿದ ಗೇಮ್ ಪ್ಲಾನ್ ಕುರಿತು ಎದುರಾಳಿ ತಂಡದ ಗಿಲ್ಲಿ ಅವರೊಂದಿಗೆ ಹೇಳುವಂತೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಸಿನಿಮಾದಲ್ಲಿ ‘ಮಂದಾಕಿನಿ’ ಆದ್ರು ಈ ಖ್ಯಾತ ನಟಿ!

ಗರಂ ಆದ ಅಶ್ವಿನಿ ಗೌಡ!
ಇದನ್ನು ನೋಡಿದ ಅಶ್ವಿನಿ ಗರಂ ಆಗಿದ್ದಾರೆ. ‘ನೀನು ಈ ತಂತ್ರ -ಕುತಂತ್ರವೆಲ್ಲ ಮಾಡಬೇಡ. ನೀನು ನಮ್ ಟೀಮ್ ಅಥವಾ ಅವರ ಟೀಮ್ ಎಂದು ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ಅವರು ಇದಕ್ಕೆ ಇದು ನಮ್ಮ ಇಷ್ಟ. ಗೇಮ್ ಆಡಬೇಡಿ ಎಂದಿದ್ದಾರೆ. ರಕ್ಷಿತಾ ಇದು ನನ್ನದು ಅವರದು ಪರ್ಸನಲ್ ಎಂದು ಹೇಳಿದ್ದಾರೆ.

ಆಟ ಏನಕ್ಕೆ ಕೊಟ್ಟಿದ್ದಾರೆ. ಅವರು ಇರೋದೆ ಆಟ ಕೆಡಿಸೋಕೆ. ನಾವೆಲ್ಲ ಇಲ್ಲಿ ಕತ್ತೆ ಕಾಯೋಕೆ ಇರೋದಾ? ಮೊದಲು ನಮಗೆ ಜ್ಞಾನ ಇರಬೇಕು ಎಂದು ಅಶ್ವಿನಿ ಆಕ್ರೋಶಗೊಂಡು ಮಾತನಾಡಿದ್ದಾರೆ. ಒಟ್ಟಿನಲ್ಲಿ ರಕ್ಷಿತಾ ಅವರು ಟೀಂ ಜೊತೆಗಿದ್ದೂ, ಅವರ ಜೊತೆಗೆ ಇಲ್ವಾ ಎನ್ನುವಂತಾಗಿದ್ದಾರೆ. ಇನ್ನು ನೆಟ್ಟಿಗರು ರಕ್ಷಿತಾ ಗಿಲ್ಲಿ ಅವರ ಕೈಗೊಂಬೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Continue Reading

BIG BOSS

BBK12: ಟಾಸ್ಕ್‌ನಲ್ಲಿ ಸೋತು ತಂಡವನ್ನು ಸಂಕಷ್ಟದಲ್ಲಿ ಸಿಲುಕಿಸಿದ ಗಿಲ್ಲಿ!?

Published

on

BBK12: ಬಿಗ್‌ ಬಾಸ್‌ ಸೀಸನ್ 12ರಲ್ಲಿ ಗಿಲ್ಲಿ ಬೆಸ್ಟ್ ಎಂಟರ್‌ಟೈನರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಟಾಸ್ಕ್ ವಿಚಾರಕ್ಕೆ ಬಂದಾಗ ಎಲ್ಲೋ ಒಂದು ಕಡೆ ಎಡವಿ ಬೀಳುತ್ತಿರುತ್ತಾರೆ. ಅದು ಈ ವಾರದ ಟಾಸ್ಕ್‌ನಲ್ಲಿಯೂ ರೀಪಿಟ್ ಆಗಿದೆ. ಈ ಬಾರಿ ಗಿಲ್ಲಿ ಟಾಸ್ಕ್‌ನಲ್ಲಿ ಸೋತಿರುವ ಕಾರಣ ಇಡೀ ತಂಡನೇ ಬೆಲೆ ತೆರಬೇಕಿದೆ.

ಹೌದು, ಬಿಗ್ ಬಾಸ್‌ನಲ್ಲಿ ಈ ವಾರ ಮಾಳು ಕ್ಯಾಪ್ಟನ್ ಆಗಿದ್ದು, ಟಾಸ್ಕ್‌ಗಳ ಅಬ್ಬರ ಜೋರಾಗಿದೆ. ಮನೆಯಲ್ಲಿ ನಾಮಿನೇಟ್ ಟೀಮ್ ಹಾಗೂ ಸೇಫ್‌ ಟೀಮ್ ಎಂಬ ಎರಡು ಗುಂಪುಗಳಾಗಿದ್ದು, ಟಾಸ್ಕ್‌ನಲ್ಲಿ ಪೈಪೋಟಿ ನೀಡುತ್ತಿದ್ದಾರೆ.

ಆದರೆ ಸೇಫ್ ಟೀಮ್‌ ಸೋತು ಹೋಗಿದೆ. ಇದಕ್ಕೆ ಕಾರಣ ಗಿಲ್ಲಿ ಮಾಡಿಕೊಂಡಿರುವ ಎಡವಟ್ಟು. ಈ ಬಗ್ಗೆ ಗಿಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: BBK12: ‘ನಾಮಿನೇಟೆಡ್’ ತಂಡಕ್ಕೆ ಹೊಸ ಚಾಲೆಂಜ್ ನೀಡಿದ ಬಿಗ್ ಬಾಸ್; ರಾಶಿಕಾ ವಿರುದ್ದ ತಿರುಗಿಬಿದ್ದ ರಕ್ಷಿತಾ!

ಮೊದಲು ತಂಡದ ಪರವಾಗಿ ನಾನೇ ಆಡೋಕೆ ಹೊಗ್ತೀನಿ ಅಂತ ಮುಂದೆ ಹೋಗಿದ್ದಾರೆ. ಆದರೆ ಆಟದ ಮಧ್ಯದಲ್ಲಿ ಎಡವಟ್ಟು ಮಾಡಿಕೊಂಡು ಸೋತು ಹೋಗಿದ್ದಾರೆ. ಈ ಬಗ್ಗೆ ಗಿಲ್ಲಿ ‘ನಾನು ಹೋದ ಟೀಮ್ ಸೋಲುತ್ತೆ ಅಂತ ಎಲ್ಲರೂ ಹೇಳ್ತಿದ್ರು, ನನಗೂ ಈಗ ನಿಜ ಅನಿಸ್ತಿದೆ. ಎಷ್ಟು ಸ್ಟಾಂಗ್ ಇದ್ರೂ ಸೋಲುತ್ತಿದ್ದೇವೆ ಅಂದ್ರೆ ನನ್ನಲ್ಲೇ ಏನೋ ಸಮಸ್ಯೆ ಇರಬೇಕೆಂದು’ ತಂಡದ ಜೊತೆ ತಮಾಷೆಯಿಂದ ಮಾತನಾಡಿದ್ದಾರೆ. ಇನ್ನೊಂದು ಕಡೆ ಗಿಲ್ಲಿಗೆ ನಾಮಿನೇಟ್ ಆಗುವ ಆತಂಕ ಎದುರಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page