Connect with us

DAKSHINA KANNADA

ಶೌಚಾಲಯದಲ್ಲಿ ಮೊಬೈಲ್ ಇಟ್ಟ ಪ್ರಕರಣ: ಎಸ್ ಐ ಟಿ ತನಿಖೆಗೆ ಶಾಸಕ ಭರತ್ ಶೆಟ್ಟಿ ಆಗ್ರಹ

Published

on

ಶೌಚಾಲಯದಲ್ಲಿ ಮೊಬೈಲ್ ಇಟ್ಟವರನ್ನು ಪತ್ತೆ ಮಾಡುವುದನ್ನು ಬಿಟ್ಟು ಪೊಲೀಸ್ ಇಲಾಖೆ ಟ್ವೀಟ್ ಮಾಡಿದ ಬಡಪಾಯಿಯ ಮನೆಯ ಮೇಲೆ ತನಿಖೆಯ ನೆಪದಲ್ಲಿ ದಾಳಿ ಮಾಡಿರುವುದು ಅತಿರೇಕದ ವರ್ತನೆಯಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ.ಟೀಕಾ ಪ್ರಹಾರ ನಡೆಸಿದ್ದಾರೆ.

ಸುರತ್ಕಲ್:  ಶೌಚಾಲಯದಲ್ಲಿ ಮೊಬೈಲ್ ಇಟ್ಟವರನ್ನು ಪತ್ತೆ ಮಾಡುವುದನ್ನು ಬಿಟ್ಟು ಪೊಲೀಸ್ ಇಲಾಖೆ ಟ್ವೀಟ್ ಮಾಡಿದ ಬಡಪಾಯಿಯ ಮನೆಯ ಮೇಲೆ ತನಿಖೆಯ ನೆಪದಲ್ಲಿ ದಾಳಿ ಮಾಡಿರುವುದು ಅತಿರೇಕದ ವರ್ತನೆಯಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ.ಟೀಕಾ ಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಲು ರಾಜ್ಯದ ಪೊಲೀಸ್ ಪಡೆಯನ್ನ ಬಳಸಲು ಸಜ್ಜಾಗಿರುವಂತಿದೆ ಎಂದು ಹೇಳಿದರು.

ಉಡುಪಿಯ ಕಾಲೇಜು ಒಂದರ ಶೌಚಾಲಯದಲ್ಲಿ ಗುಪ್ತವಾಗಿ ಮೊಬೈಲ್ ಕ್ಯಾಮೆರಾ ಇಟ್ಟು ಚಿತ್ರೀಕರಣ ಮಾಡಲಾಗಿತ್ತು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಂತೆ, ಇದೀಗ ಪ್ರಕರಣ ತಿರುಚಲು ಹಾಗೂ ಏನೂ ಆಗಿಲ್ಲವೆಂಬತೆ ಮಾಡಲು ಮೊಬೈಲ್ ಅದಲು ಬದಲು ಮಾಡಲಾಗಿದೆ ಎಂಬ ಸಂಶಯ ಜನರಲ್ಲಿ ಉಂಟಾಗಿದೆ.

ಮೊದಲು ಇದಕ್ಕೆ ಉತ್ತರ ನೀಡಿ. ಉಡುಪಿ ಪೊಲೀಸರು ಘಟನೆ ನಡೆದಿರುವುದಕ್ಕೆ ಸಾಕ್ಷ್ಯ ಇಲ್ಲ ಎಂದು ಹೇಳುತ್ತಿದ್ದಾರೆ.

ಹಾಗಾದರೆ ದಿಢೀರ್ ಆಗಿ ವಿದ್ಯಾರ್ಥಿನಿಯರನ್ನು ವಜಾ ಗೊಳಿಸಲು ಕಾರಣ ಏನು, ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ.

ಕೇರಳ ಮೂಲದ ವಿದ್ಯಾರ್ಥಿಗಳಾಗಿರುವುದರಿಂದ ಲವ್ ಜಿಹಾದ್ ಸಹಿತ, ವಿವಿಧ ವಿದ್ವಂಸಕ ಕೃತ್ಯ ಎಸಗಲು ಇದೊಂದು ಬ್ಲ್ಯಾಕ್ ಮೈಲ್ ಷಡ್ಯಂತ್ರವಾಗಿರುವ ಸಾಧ್ಯತೆಯಿದೆ.

ಈ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರ ತಕ್ಷಣ ಎಸ್ ಐ ಟಿ ತನಿಖೆಗೆ ಆದೇಶಿಸಿ ಎಂದು ಒತ್ತಾಯಿಸಿದ್ದಾರೆ.

ಪ್ರಕರಣವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುವ ಬದಲು ಉಡಾಫೆಯಾಗಿ ವರ್ತಿಸಿ ಮುಂದೊಂದು ದಿನ ಕಂಟಕಪ್ರಾಯವಾಗಬಹುದು.

ಇದರ ಹಿಂದೆ ನಿಷೇಧಿತ ಸಂಘಟನೆ ಪಿ ಎಫ್ ಐ ಕೈವಾಡ ಇದ್ದರೆ ತನಿಖೆ ನಡೆಸಿ, ಹಿಂದೂ ಸಮುದಾಯದ ಯುವತಿಯರು ಬಲಿಪಶುವಾಗದಂತೆ ರಕ್ಷಣೆಯನ್ನು ನೀಡುವ ಕೆಲಸ ಮೊದಲು ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಟ್ವೀಟ್ ಮಾಡಿ ಸರಕಾರ, ತನಿಖಾ ಇಲಾಖೆ ಹಾಗೂ ಸಾರ್ವಜನಿಕ ರನ್ನು ಎಚ್ಚರಿಸುವ ಕೆಲಸ ಮಾಡಿದ ಮಾತ್ರಕ್ಕೆ, ರಾತ್ರಿ ಸಮಯದಲ್ಲಿ ಯುವತಿಯ ಮನೆಗೆ ತೆರಳಿ ತನಿಖೆಯ ನೆಪದಲ್ಲಿ ಕಿರುಕುಳ ನೀಡಿರುವುದು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಾಗದು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ, ಭಾರತೀಯ ಜನತಾ ಪಕ್ಷಯ ಭದ್ರ ಕೋಟೆಯಾಗಿರುವ ಕರಾವಳಿ ಭಾಗವನ್ನು ಗುರಿಯಾಗಿಸಿ ಇರಿಸಿಕೊಂಡು ಹಿಂದೂ ಕಾರ್ಯಕರ್ತರ ಗಡಿಪಾರು, ಸುಳ್ಳು ಕೇಸುಗಳನ್ನು ದಾಖಲಿಸಲು ಪೂರ್ವ ತಯಾರಿ ನಡೆಸಿದೆ.

ಇದರ ಮುಂದುವರಿದ ಭಾಗವಾಗಿ ಟ್ವೀಟ್ ಮಾಡಿದ ರಶ್ಮಿ ಸಮಂತ ಅವರನ್ನು ಕೂಡ ತನಿಖೆ ನೆಪದಲ್ಲಿ ಪ್ರಕರಣ ದಾಖಲಿಸಿ, ಇಡೀ ಪ್ರಕರಣವನ್ನು ತೀರಿಸಲು ಮುಂದಾಗಿರುವಂತಿದೆ.

ಜಿಲ್ಲೆಯಲ್ಲಿ ಹಾಗೂ ಕರಾವಳಿಯಲ್ಲಿ ಸಂಘರ್ಷಮಯ ವಾತಾವರಣಕ್ಕೆ ಸರಕಾರ ಎಡೆ ಮಾಡಿಕೊಡಬಾರದು.

ದ್ವೇಷ ರಾಜಕಾರಣದಿಂದ ಕಾನೂನು ಹದೆಗೆಟ್ಟಲ್ಲಿ ರಾಜ್ಯದ ಆಡಳಿತ ರೂಢ ಕಾಂಗ್ರೆಸ್ ಸರ್ಕಾರವೇ ಜವಾಬ್ದಾರಿಯಾಗಲಿದೆ
ಎಂದು ಡಾಕ್ಟರ್ ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.

DAKSHINA KANNADA

ರಾಘವ ಅತ್ತಾವರ ವಿಧಿವಶ ; ಕದ್ರಿ ನವನೀತ ಶೆಟ್ಟಿ ಸಂತಾಪ

Published

on

ಮಂಗಳೂರು : ಕೆಲವೊಂದು ಸಾವುಗಳು ನಮ್ಮನ್ನು ಮೌನವಾಗಿಸುತ್ತವೆ. ವ್ಯಕ್ತಿ ಅಳಿದರೂ  ಆತನ ನೆನಪುಗಳು ಸದಾ ಹಸಿರಾಗುತ್ತದೆ. ಆತನ ಸಾಧನೆಗಳು ಎಂದಿಗೂ ಮರೆಯದಂತೆ ಇರುತ್ತದೆ. ಇದೀಗ ಅಂತಹದ್ದೇ ಸಾಧಕನೊಬ್ಬ ನಮ್ಮನ್ನಗಲಿದ್ದಾರೆ. ಮಂಗಳೂರಿನ ಬಹುಮುಖ ಪ್ರತಿಭೆ ಕದ್ರಿ ನವನೀತ ಶೆಟ್ಟಿ ಮೃತರ ಕುರಿತು ಬರೆದ ಲೇಖನವು ಮನಮುಟ್ಟುವಂತಿದೆ.

ಹಿರಿಯ ನಾಟಕ ನಿರ್ದೇಶಕ, ಒಂದು ಕಾಲದ ಪ್ರಸಿದ್ದ ಸ್ತ್ರೀ ವೇಷ ಧಾರಿ  ರಾಘವ ಅತ್ತಾವರ ವಿಧಿವಶ ರಾಗಿ 5 ದಿನ ಕಳೆಯಿತು…ವೃತ್ತಿ ಯಲ್ಲಿ ನುರಿತ ಮೋಟಾರ್ ಎಲೆಕ್ಟ್ರಿಶನ್. ಪ್ರವೃತ್ತಿ..ರಂಗ ಭೂಮಿ…ಸುಮಾರು ನಾಲ್ಕು ದಶಕಗಳ ಕಾಲ ನಾಟಕ ಕ್ಷೇತ್ರ ದಲ್ಲಿ ಮಂಗಳೂರು ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿ ನೂರಾರು ನಾಟಕ ಗಳನ್ನು ನಿರ್ದೇಶಿಸಿದವರು. ಧನ ಅಪೇಕ್ಷೆ ಇಲ್ಲದೆ, ತನ್ನ ಸ್ಕೂಟರ್ ನಲ್ಲಿ ಪಯಣಿಸಿ, ತಿಂಗಳು ಗಟ್ಟಲೆ ರಂಗ ಅಭ್ಯಾಸ ಮಾಡಿಸಿ ನಾಟಕ ದ ಯಶಸ್ವಿ ಪ್ರದರ್ಶನ  ನೋಡಿ ಸಂಭ್ರಮ ಪಡುತಿದ್ದ ಕಲಾರಾಧಕ.

ಹಲವಾರು ಮಹಿಳಾ ಮಂಡಳಿ ಗಳು, ಯುವಕ ಮಂಡಳಿ ಗಳ ಗದ್ದೆ ಯ ಪರದೆ ನಾಟಕ ಗಳಿಗೆ ಜೀವ ತುಂಬಿ ಹುರಿದುಂಬಿಸಿ ನೂರಾರು ಕಲಾವಿದರನ್ನು ಸೃಷ್ಟಿ ಸಿ ಬೆಳೆಸಿದ ರಂಗ ಸಾಧಕ…ತಾರುಣ್ಯ ದಲ್ಲಿ ಸ್ತ್ರೀ ವೇಷ ಧಾರಿ ಯಾಗಿ   ಮರ್ಲೆದಿ, ಮಾಜಂದಿ ಬರವು, ಗಂಗಾರಾಮ್, ಬಯ್ಯ ಮಲ್ಲಿಗೆ, ಸರಸ್ವತಿ, ಮುತ್ತು ಮಾನಿಕ ಮೊದಲಾದ ನಾಟಕ ಗಳಲ್ಲಿ ಮನೋಜ್ಞ ಅಭಿನಯ ನೀಡುತಿದ್ದ ಅಗ್ರ ಪಂಕ್ತಿ ಯ ಕಲಾವಿದ….ಶೋಭಾ ಯಾತ್ರೆ ಗಳ, ಮಂಗಳಾದೇವಿ ರಥೋತ್ಸವ ದ ಟ್ಯಾಬ್ಲೋ ಗಳಲ್ಲಿ ಹಲವು ವರ್ಷ ಶ್ರದ್ದೆ, ಭಕ್ತಿ ಯಿಂದ ಪಾತ್ರ ನಿರ್ವಹಿಸಿದ್ದ ನಿಷ್ಠಾವಂತ ಕಲೋಪಾಸಕ…ರಾಘವ ಅತ್ತಾವರ ಅವರ ನಿರ್ದೇಶನ ದಲ್ಲಿ ನಾನು ಹಲವಾರು ಸಾಮಾಜಿಕ, ಚಾರಿತ್ರಿಕ, ಜಾನಪದ, ಪೌರಾಣಿಕ ನಾಟಕ ಗಳಲ್ಲಿ  ಅಭಿನಯ ಮಾಡಿದ್ದೇನೆ.

ನಮ್ಮ ಕದ್ರಿ ಕಂಬಳ ಮಿತ್ರ ವೃಂದ, ಸೌರಭ ಕಲಾವಿದರು ಕದ್ರಿ, ಬಲ್ಮಠ ಟ್ರೈನಿಂಗ್ ಶಾಲೆ ಯ ಹಲವಾರು ನಾಟಕ ಗಳಲ್ಲಿ ಸುಮಾರು ಎರಡು ದಶಕ ಗಳ ಕಾಲ ಅವರು ಹಲವಾರು ನಾಟಕ ಗಳನ್ನು ನಿರ್ದೇಶಿ ಸಿದ್ದಾರೆ. ಚಿತ್ರ ನಿರ್ದೇಶಕರಾದ ಸಾಯಿ ಕೃಷ್ಣ, ಆರ್. ಎಸ್. ಸುರೇಶ, ಚಿತ್ರ ನಟರಾದ ಸುಂದರ ಹೆಗ್ಡೆ, ಸುಧೀರ್ ಬಲ್ಮಠ, ನಿರೂಪಕಿ ಸೌಜನ್ಯಹೆಗ್ಡೆ    ಮೊದಲಾದ ಪ್ರತಿಭೆಗಳ ಆರಂಭದ ಗುರು ಅತ್ತಾವರ ಮಾಸ್ಟ್ರು.ನಾನು ರಚಿಸಿದ ಮೊದಲ ಹತ್ತು ನಾಟಕ ಗಳನ್ನು ಅತ್ತಾವರ ಅವರು ನಿರ್ದೇಶನ ಮಾಡಿದ್ದಾರೆ… ಮೂರು ದಶಕ ಗಳ ಹಿಂದೆ ರಚಿಸಿ, ಇಂದೂ ಪ್ರದರ್ಶನ ಕಾಣುತ್ತಿರುವ “ಕಾರ್ನಿಕದ ಶಿವ ಮಂತ್ರ ” ನಾಟಕ ದ ಮೊದಲ ಗುರು ಇವರೇ. ಸಾಮಾಜಿಕ ನಾಟಕ ಗಳಲ್ಲಿ ಅಭಿನಯ ಮಾಡುವಾಗ ಇಣುಕು ತಿದ್ದ  ಯಕ್ಷಗಾನ ದ ಛಾಯೆ ಯನ್ನು ಬೈದು, ತಿದ್ದಿ ತೀಡಿ,ನೇರ್ಪು ಗೊಳಿಸಿದ್ದ ದಿನಗಳನ್ನು ಮರೆಯಲಾಗುವುದಿಲ್ಲ.

ಅವರ ನಿರ್ದೇಶನ ದ ನಾಟಕ ದ ಅಂಕ ದ ಪರದೆ  ತೆರೆಯುವ ಹಾಗೂ ಹಾಕುವ  ಕಾಯಕ ವನ್ನು ಸ್ವತಃ ಅವರೇ ಮಾಡುತಿದ್ದರು. ಚೌಕಿ ಪೂಜೆ ಮಾಡಿ, ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಮಾಡಿ ಅಂಕದ ಪರದೆ ಸರಿಸಿ ಬಿಡುತ್ತಿದ್ದ ರಾಘವ ಅತ್ತಾವರ ನನಗೆ ಇಂದೂ ನನ್ನ ನಾಟಕ ಪ್ರದರ್ಶನ ಕಾಲ ದಲ್ಲಿ ನೆನಪಾಗುತ್ತಾರೆ. ಸ್ವಾಭಿಮಾನಿ, ಮಿತ ಭಾಷಿ, ಛಲವಾದಿ, ಅಭ್ಯಾಸ ಕಾಲದಲ್ಲಿ ಶೀಘ್ರ ಕೋಪಿ… ರಂಗ ವೇದಿಕೆ ಯನ್ನು ಆರಾಧನಾ ಮಂದಿರದಂತೆ ಕಾಣುತಿದ್ದವರು… ನಾಟಕದ ಅಂಕದ ಪರದೆ ಯನ್ನು  ನಾಟಕ ಮುಗಿದಾಗ ಅವರೇ ಎಳೆಯು ತಿದ್ದದ್ದು ಸ್ವಾಭಿಮಾನಿ ನಿರ್ದೇಶಕನಾಗಿ…ಅವರ ನಿಧನ ವಾರ್ತೆ ಯನ್ನು ಇಂದು ಅವರ ಮಮತೆಯ ಪುತ್ರಿ ತಿಳಿಸಿದಾಗ ನನಗೆ ಅನಿಸಿದ್ದು…”ಬದುಕಿನ ಅಂಕದ ಪರದೆ ಯನ್ನೂ ಅವರೇ ಎಳೆದು ಬಿಟ್ಟ ರಲ್ಲಾ… ಜೀವನ ನಾಟಕ ಸಹಜ ಮುಕ್ತಾಯ ಕಾಣುವ ಮುನ್ನ.!!”

ಬರಹ : ಕದ್ರಿ ನವನೀತ ಶೆಟ್ಟಿ

Continue Reading

DAKSHINA KANNADA

ಮಂಗಳೂರು : ಕೂಳೂರು ಸೇತುವೆ ಬಳಿ ದರ್ಪ ; ಪೊಲೀಸರಿಂದ ಸ್ಪಷ್ಟನೆ

Published

on

ಮಂಗಳೂರು : ಮಾ.21ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಕೂಳೂರು ಸೇತುವೆ ಬಳಿ ದರ್ಪ ಮೆರೆದ ಸಂಚಾರ ಪೊಲೀಸರು” ಎಂಬ ವೀಡಿಯೊ 2024ರ ಡಿ.23ರಂದು ಕುದುರೆಮುಖ ಜಂಕ್ಷನ್‌ ನಲ್ಲಿ ನಡೆದಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕುರಿತು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

ಪಾನಮತ್ತನಾದ ಓರ್ವ ವ್ಯಕ್ತಿ ಕುದುರೆಮುಖ ಜಂಕ್ಷನ್ ನಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದ್ದು, ಸಾರ್ವಜನಿಕರ ಸಹಾಯದೊಂದಿಗೆ ಪೊಲೀಸರು ಆ ವ್ಯಕ್ತಿಯನ್ನು ಬದಿಗೆ ಕಳುಹಿಸಿದರೂ ಆತ ಮತ್ತೆ ಪದೇ ಪದೇ ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ಸಮಯ ತುಂಬಾ ಕುಡಿದಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದು ಆತನಿಗೆ ಮೂಗಿನಲ್ಲಿ ರಕ್ತ ಬಂದಿರುತ್ತದೆ.

ಈ ವೇಳೆ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಉಪಚರಿಸಿ ಆಸ್ಪತ್ರೆಗೆ ಸಾಗಿಸಲು ವಾಹನದ ಬಳಿ ಕರೆದುಕೊಂಡು ಬರುತ್ತಿರುವಾಗ ಯಾರೋ ಸಾರ್ವಜನಿಕರು ತಪ್ಪಾಗಿ ತಿಳಿದುಕೊಂಡು ವೀಡಿಯೊ ಮಾಡಿ ವೈರಲ್‌ ಮಾಡಿದ್ದಾರೆ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

Continue Reading

DAKSHINA KANNADA

ಸದನದಲ್ಲಿ ಗದ್ದಲ; 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು!

Published

on

ಮಂಗಳೂರು/ ಬೆಂಗಳೂರು :  ಇಂದು ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿರುವ  ಬಜೆಟ್ ಅಂಗೀಕಾರಗೊಂಡಿದೆ. ಈ ವೇಳೆ ವಿಪಕ್ಷ ಸದಸ್ಯರು ಬಜೆಟ್ ನಲ್ಲಿ ಸೇರಿಸಿರುವ ಕೆಲವೊಂದು ವಿಚಾರಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಸದನದಲ್ಲಿ ಹನಿಟ್ರ್ಯಾಪ್ ವಿಚಾರವೂ ಸದ್ದು ಮಾಡಿದ್ದು, ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟ ನಾಲ್ಕು ಶೇಕಡ ಮೀಸಲಾತಿ ರದ್ದು ಮಾಡುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಅಲ್ಲದೇ, ಸ್ಪೀಕರ್ ಪೀಠಕ್ಕೇರಿದ ವಿಪಕ್ಷ ಸದಸ್ಯರು
ಖಾದರ್ ಮೇಲೆ ಪೇಪರ್‌ಗಳನ್ನು ಹರಿದು ಹಾಕಿ ಗಲಾಟೆ ಮಾಡಿದ್ದರು. ಮಧ್ಯಾಹ್ನ ಭೋಜನ ವಿರಾಮದ ಬಳಿಕವೂ ಇದು ಮುಂದುವರಿದಿತ್ತು.

ಹೀಗಾಗಿ ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆ ಕರಾವಳಿಯ ಮೂವರು ಸೇರಿದಂತೆ ಒಟ್ಟು 18 ಬಿಜೆಪಿ ಶಾಸಕರನ್ನು 6 ತಿಂಗಳ ವರೆಗೆ ಅಮಾನತುಗೊಳಿಸಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಗದ್ದಲದ ನಡುವೆ ಅಂಗೀಕಾರವಾದ ಬಜೆಟ್; ಮುಸ್ಲಿಂ ಮೀಸಲಾತಿ ರದ್ಧಿಗೆ ಆಗ್ರಹಿಸಿ ಸ್ಪೀಕರ್ ಪೀಠಕ್ಕೇರಿದ ವಿಪಕ್ಷ ಸದಸ್ಯರು

ಯಾರೆಲ್ಲ ಅಮಾನತು?

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಮೂಡುಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ದೊಡ್ಡಣ್ಣ ಗೌಡ ಪಾಟೀಲ್, ಸಿ ಕೆ ರಾಮಮೂರ್ತಿ, ಅಶ್ವತ್ಥ ನಾರಾಯಣ, ಎಸ್ ಆರ್ ವಿಶ್ವನಾಥ್, ಬೈರತಿ ಬಸವರಾಜ, ಎಂ ಆರ್ ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಹರೀಶ್ ಬಿಪಿ, ಮುನಿರತ್ನ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಡಾ. ಚಂದ್ರು ಲಮಾಣಿ.

Continue Reading
Advertisement

Trending

Copyright © 2025 Namma Kudla News

You cannot copy content of this page