Connect with us

FILM

ಮೇ 9 ರಂದು ಬಿಗ್‌ಬಾಸ್ ಚೈತ್ರಾ ಕುಂದಾಪುರ ಮದುವೆ; ಎಲ್ಲಿ ಗೊತ್ತಾ..?

Published

on

ಕುಂದಾಪುರ: ಬಿಗ್‌ಬಾಸ್‌ ಕನ್ನಡ ಸೀಸನ್ 11 ರಲ್ಲಿ ಫೈಯರ್ ಬ್ರ್ಯಾಂಡ್ ಅಂತಲೇ ಜನಪ್ರಿಯರಾಗಿದ್ದ ಚೈತ್ರಾ ಕುಂದಾಪುರ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಅಂತಹ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಸುಮ್ಮನೆ ಕೂತಿರಲಿಲ್ಲ. ಕಲರ್ಸ್ ಕನ್ನಡದಲ್ಲಿಯೇ ಆರಂಭ ಆಗಿದ್ದ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ Vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈಗ ಅದೂ ಮುಗಿಯುತ್ತಿದ್ದಂತೆ ಮದುವೆ ಬಗ್ಗೆ ಚರ್ಚೆ ಶುರುವಾಗಿದೆ.

ಬಿಗ್‌ ಬಾಸ್ ಮನೆಯೊಳಗೆ ಇರುವಾಗಲೇ ಚೈತ್ರಾ ಕುಂದಾಪುರ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಎಂಗೇಜ್ಮೆಂಟ್ ಮಾಡಿಕೊಂಡೇ ಬಿಗ್ ಬಾಸ್ ಮನೆಯೊಳಗೆ ಬಂದಿದ್ದೇನೆ ಎಂದು ಹೇಳಿದ್ದರು. ಅಲ್ಲಿಂದ ಇವರ ಮದುವೆ ಯಾವಾಗ ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಚೈತ್ರಾ ಕುಂದಾಪುರ ಕೂಡ ಮದುವೆ ಬಗ್ಗೆ ಕೇಳಿದಾಗಲೆಲ್ಲಾ ನಾಚಿ ನೀರಾಗುತ್ತಲೇ ಇದ್ದರು.

ಚೈತ್ರಾ ಪ್ರೀತಿಸಿದ ಹುಡುಗ ಯಾರು..?

ಬಿಗ್‌ಬಾಸ್ ಚೈತ್ರಾ ಕುಂದಾಪುರ 12 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನನ್ನು ಕೊನೆಗೂ ಮದುವೆಯಾಗಲಿದ್ದಾರೆ. ಇದರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದು ಇತ್ತೀಚಿಗೆ ನಡೆದ “ಮಜಾ ಟಾಕೀಸ್” ಶೋ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಎಲ್ಲರಂತೆ ನಮ್ಮದು ರೋಮ್ಯಾಂಟಿಕ್ ಆಗಿ ಪ್ರೀತಿ ಶುರು ಆಗಲಿಲ್ಲ. ಜಗಳ, ದ್ವೇಷದಿಂದಲೇ ಪ್ರೀತಿ ಶುರುವಾಗಿದ್ದು ಎಂದು ಚೈತ್ರಾ ಹೇಳಿದ್ದಾರೆ. ಆದರೆ ಹುಡುಗ ಯಾರು..? ಏನೋ ಮಾಡೋದು..? ಆ ಗುಟ್ಟನ್ನು ಇನ್ನು ರಟ್ಟು ಮಾಡಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ ಶ್ರೀಕಾಂತ್ ಎನ್ನುವ ಹೆಸರಿದೆ

ಮದುವೆ ಯಾವಾಗ?

ಇದೇ ಬರುವ ಮೇ 9, ಶುಕ್ರವಾರದಂದು ಚೈತ್ರಾ ಕುಂದಾಪುರ ಅವರ ವಿವಾಹವು ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಬಿಗ್‌ಬಾಸ್ ಸ್ಪರ್ಧಿಗಳು ಸೇರಿದಂತೆ ಹಲವು ಗಣ್ಯ ಅತಿಥಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

FILM

ರಾಕೇಶ್ ಪೂಜಾರಿ ನಿಧನಕ್ಕೆ ರಿಷಬ್‌ ಶೆಟ್ಟಿ ಭಾವುಕ ಪೋಸ್ಟ್

Published

on

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧ*ನರಾಗಿದ್ದಾರೆ. ಕಾಂತಾರ ಚಿತ್ರೀಕರಣದ ನಂತರ ಗೆಳೆಯನ ಮದುವೆಯಲ್ಲಿ ಭಾಗವಹಿಸಿದ್ದ ರಾಕೇಶ್, ಮಧ್ಯರಾತ್ರಿ ಹೃದಯಾಘಾತದಿಂದ ಮೃ*ತಪಟ್ಟಿದ್ದಾರೆ. ಇದೀಗ ರಿಷಬ್ ಶೆಟ್ಟಿ ಸಂತಾಪ ಸೂಚಿಸಿದ್ದು, ರಾಕೇಶ್‌ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಹಾಸ್ಯ ನಟ ರಾಕೇಶ್ ಪೂಜಾರಿ ಕಾಂತಾರ ಅಧ್ಯಾಯ 1 ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಸಹ ಮಾಡಿದ್ದರು. ಆದ್ರೆ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನಕ್ಕೆ ರಿಷಬ್ ಶೆಟ್ಟಿ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ

ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ
“ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ.. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ” ಎಂದು ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಹೊಂಬಾಳೆ ಸಂಸ್ಥೆಯಿಂದ ಸಂತಾಪ
‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಕೂಡ ರಾಕೇಶ್ ಪೂಜಾರಿ ಸಾವಿಗೆ ಸಂತಾಪ ಸೂಚಿಸಿದೆ. “ನಟ ರಾಕೇಶ್ ಪೂಜಾರಿ ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ” ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ.

Continue Reading

BIG BOSS

ಉಗ್ರಂ ಮಂಜು ಬಾಳಲ್ಲಿ ಹುಡುಗಿ ಕಮಿಂಗ್ ಸೂನ್..!

Published

on

ಸದ್ಯ ಬಿಗ್​ಬಾಸ್ ಸೀಸನ್ 11ರ ಸ್ಪರ್ಧಿಗಳು ಒಬ್ಬೊಬ್ಬರಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಉಗ್ರಂ ಮಂಜು ಬಾಳಲ್ಲಿ ಸದ್ಯದಲ್ಲೇ ಹೊಸ ಹುಡುಗಿ ಆಗಮನ ಆಗುತ್ತಿದೆ.

ಹೌದು, ಕನ್ನಡದ ಬಿಗ್​ಬಾಸ್​ ಸೀಸನ್ 11 ಅಂತ್ಯ ಕಂಡು 5 ತಿಂಗಳು ಕಳೆದಿದೆ. ಆದ್ರೆ ವೀಕ್ಷಕರು ಸ್ಪರ್ಧಿಗಳನ್ನು ಮಾತ್ರ ಮರೆತಿಲ್ಲ. ಸದಾ ರೀಲ್ಸ್ ಮೂಲಕವೇ ಟ್ರೇಂಡಿಗ್‌ನಲ್ಲಿರುವ ಬಿಗ್‌ಬಾಸ್‌ ಸ್ಪರ್ಧಿಗಳು ವೀಕ್ಷಕರ ಗಮನ ಸೆಳೆಯುತ್ತಾರೆ.

ಬಿಗ್‌ಬಾಸ್‌ ಸೀಸನ್ 11ರ ಬಹುತೇಕ ಎಲ್ಲ ಸ್ಪರ್ಧಿಗಳು ಮದುವೆ ಆಗುತ್ತಿದ್ದಾರೆ. ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ಅವರು ಮದುವೆಯಾಗಿದ್ದರು. ಇಂದು ಬಿಗ್​ಬಾಸ್​ ಖ್ಯಾತಿಯ ರಂಜಿತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಮಧ್ಯೆ ಮಂಜು ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಆದರೆ ಇದೀಗ ಮಂಜು ಅವರ ಬಾಳಲ್ಲಿ ಸದ್ಯದಲ್ಲೇ ಹೊಸ ಹುಡುಗಿ ಆಗಮನ ಆಗುತ್ತಿದೆ.

ಈ ಬಗ್ಗೆ ಖುದ್ದು ಗೌತಮಿ ಜಾಧವ್ ಅವರೇ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಯಾವುದೇ ಕ್ಯಾಪ್ಶನ್​ ಹಾಕದೇ ಹಾಡಿನ ಮೂಲಕ ಹಾಗೂ ಹುಡುಗಿ ಕಮಿಂಗ್ ಸೂನ್ ಅಂತ ಬರೆಯಲಾಗಿದೆ.

ಅದರಂತೆ ಈ ವಿಡಿಯೋ ನೋಡಿದ ಅಭಿಮಾನಿಗಳು ಮಂಜಣ್ಣನಿಗೆ ಹುಡುಗಿ ಸಿಕ್ಕರೆ ಒಳ್ಳೆದಾಗಲಿ ಆದಷ್ಟು ಬೇಗ ಮದುವೆ ಆಗಲಿ, ಮದುಮಗ ಮಂಜಣ್ಣ, ಬೇಗ ಒಳ್ಳೆ ಹುಡುಗಿ ನೋಡಿ ಮದುವೆ ಮಾಡಿ ಅಕ್ಕ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಒಟ್ಟಿನಲ್ಲಿ ಮಂಜು ಅವರ ಬಾಳಲ್ಲೂ ಆದಷ್ಟು ಬೇಗ ಹುಡುಗಿ ಎಂಟ್ರಿ ಕೊಡುವ ಸುಳಿವು ಸಿಕ್ಕಿದೆ.

 

Continue Reading

FILM

ಕೆಜಿಎಫ್ ಚಾಪ್ಟರ್‌-3 ಬಗ್ಗೆ ಲೇಟೆಸ್ಟ್‌ ಅಪ್ಡೇಟ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್‌

Published

on

ನಟ ಯಶ್ ಅವರ ಬದುಕು ಬದಲಿಸಿದ ಸಿನಿಮಾ ‘ಕೆಜಿಎಫ್: ಚಾಪ್ಟರ್-1’. ಆ ಸಿನಿಮಾ ಮೂಲಕ ಯಶ್ ಅವರು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದರು. ಬಳಿಕ ಬಂದ ‘ಕೆಜಿಎಫ್: ಚಾಪ್ಟರ್​ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತು. ಇದೀಗ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ‘ಕೆಜಿಎಫ್‌-3’ ಬಗ್ಗೆ ಬಿಗ್‌ ಹಿಂಟ್‌ ಕೊಟ್ಟಿದೆ.

ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ʻಟಾಕ್ಸಿಕ್‌ʼ ಸಿನಿಮಾದ ಶೂಟಿಂಗ್‌ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇತ್ತ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಕೂಡ ಬೇರೆ ಬೇರೆ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ʻಕೆಜಿಎಫ್‌ 2ʼ ತೆರೆಕಂಡು ಅದಾಗಲೇ ಮೂರು ವರ್ಷಗಳೇ ಕಳೆದಿದೆ. ʻಕೆಜಿಎಫ್‌ 3’ ಸಿನಿಮಾಗಾಗಿ ವಿಶ್ವಮಟ್ಟದಲ್ಲಿ ನಟ ಯಶ್‌ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇದೀಗ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ತನ್ನ ಅಫೀಶಿಯಲ್‌ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ʻಕೆಜಿಎಫ್‌ 3’ ಸಿನಿಮಾದ ಕುರಿತು ವಿಶೇಷ ಎಐ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ಮೂಲಕ ರಾಕಿಂಗ್‌ ಸ್ಟಾರ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ.

ʻನರಾಚಿʼ ದ್ವಾರದಿಂದ ಆರಂಭವಾಗುವ ಈ ವಿಡಿಯೋ ಕೆಜಿಎಫ್‌-2ನಲ್ಲಿ ರಾಕಿ ಭಾಯ್‌ ಹಡಗಿನ ಪೂರ್ತಿ ಚಿನ್ನ ತುಂಬಿಕೊಂಡು ಸಮುದ್ರದ ಮಧ್ಯೆ ನಿಲ್ಲುವವರೆಗೆ ಸಾಗುತ್ತದೆ. ಕೆಜಿಎಫ್‌ ಚಾಪ್ಟರ್‌-1ನಲ್ಲಿ ಯಶ್‌ ನರಾಚಿಗೆ ಎಂಟ್ರಿಕೊಟ್ಟಾಗಿನಿಂದ ಇಡೀ ಕೆಜಿಎಫ್‌ ಸಾಮ್ರಾಜ್ಯಕ್ಕೆ ಸಾಮ್ರಾಟನಾದವರೆಗಿನ ಕಥೆಯನ್ನ ಈ ವಿಡಿಯೋದಲ್ಲಿ ಕಟ್ಟಿಕೊಡಲಾಗಿದೆ. ಅಲ್ಲದೇ ವಿಡಿಯೋ ಕೆಳಗೆ ʻನೀವು ರಾಕಿ ಭಾಯ್ ಜೊತೆಗೆ ಮುಂದುವರಿಯಿರಿ, ಇದು ಯಾರೂ ನಿಯಂತ್ರಿಸಲಾಗದ ಶಕ್ತಿʼ ಎಂದು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದೆ.

ಹೊಂಬಾಳೆ ಫಿಲ್ಮ್ಸ್‌ನ ಈ ವಿಡಿಯೋ ರಿಲೀಸ್‌ ಆಗ್ತಿದ್ದಂತೆ ಯಶ್‌ ಅಭಿಮಾನಿಗಳು ಸಖತ್‌ ಖುಷಿಯಲ್ಲಿದ್ದಾರೆ. ಕೆಜಿಎಫ್‌-3 ಯಾವಾಗ ಬರುತ್ತೆ? ಯಶ್‌ ಅವ್ರನ್ನ ಯಾವಾಗ ರಾಖಿಭಾಯ್‌ ಅವತಾರದಲ್ಲಿ ನೋಡ್ತೀವಿ ಅಂತೆಲ್ಲ ಕಾಮೆಂಟ್‌ನಲ್ಲಿ ಪ್ರಶ್ನೆ ಕೇಳ್ತಿದ್ದಾರೆ.

ಇದನ್ನೂ ಓದಿ: ಐಪಿಎಲ್ ಸೀಸನ್-18 ಮತ್ತೆ ಶುರು; ಆರ್‌ಸಿಬಿ ಫ್ಯಾನ್ಸ್‌ಗೆ ಡಬಲ್ ಧಮಾಕಾ?

‘ಕೆಜಿಎಫ್: ಚಾಪ್ಟರ್-1’ ಹಾಗೂ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳಿಂದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ದೊಡ್ಡ ಲಾಭ ಆಯಿತು. ಜಾಗತಿಕ ಮಟ್ಟದಲ್ಲಿ ಈ ನಿರ್ಮಾಣ ಸಂಸ್ಥೆಯ ಹೆಸರು ಶೈನ್ ಆಯಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 2’ ಸದ್ದು ಮಾಡಿದ್ದರಿಂದ ಪರಭಾಷೆಯ ಸ್ಟಾರ್ ಕಲಾವಿದರು ಕೂಡ ‘ಹೊಂಬಾಳೆ ಫಿಲ್ಮ್ಸ್’ ಜೊತೆ ಸಿನಿಮಾ ಮಾಡಲು ಮುಂದೆ ಬಂದರು. ಈಗ ‘ಕೆಜಿಎಫ್ 3’ ಬಗ್ಗೆ ಈ ಸಂಸ್ಥೆಯಿಂದ ಸಿಗಲಿರುವ ಫ್ರೆಶ್ ಅಪ್​ಡೇಟ್​ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page