Connect with us

LATEST NEWS

BENGALURU : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಾಂಬ್ ಇಟ್ಟವನ ಗುರುತು ಪತ್ತೆ!

Published

on

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನ ಗುರುತು ಪತ್ತೆಯಾಗಿದೆ. ಮಾರ್ಚ್‌ 1 ರಂದು ನಗರದ ಪ್ರತಿಷ್ಠಿತ ಕೆಫೆಯಲ್ಲಿ ಬಾಂಬ್ ಇಡಲಾಗಿತ್ತು. ಇದು ಇಡೀ ದೇಶದಲ್ಲೇ ಆತಂಕ ಹುಟ್ಟಿಸಿತ್ತು. ಇದೀಗ ಈ ಬಾಂಬ್ ಇಟ್ಟಿದ್ದು ತೀರ್ಥಹಳ್ಳಿಯ ಮುಸಾಬೀರ್ ಹುಸೇನ್‌ ಶಜೀಬ್‌ ಎಂದು ಗುರುತ್ತಿಸಲಾಗಿದೆ.

ರಾಮೇಶ್ವರಂ ಕೆಫೆ ಸಿಸಿಟಿವಿ ಕ್ಯಾಮರಾ ಹಾಗೂ ಬಸ್ ಇತರ ಸ್ಥಳಗಳಲ್ಲಿರು ಸಿಸಿಕ್ಯಾಮರಾದಲ್ಲಿರುವ ದೃಶ್ಯಗಳನ್ನು ಆಧರಿಸಿ ಆರೋಪಿಯ ಗುರುತು ಪತ್ತೆ ಮಾಡಲಾಗಿದೆ. 800 ಸಿಸಿ ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಶಜೀಬ್ ಭಾವಚಿತ್ರಕ್ಕೂ ಹೊಂದಾಣಿಕೆಯಾಗುತ್ತಿದೆ.

ಹಲವು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿ :

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ಶಾಜಿಬ್ ಒಬ್ಬ ಶಂಕಿತ ಉಗ್ರನಾಗಿದ್ದು ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿ ಎಂದು ರಾಷ್ಟ್ರೀಯ ತನಿಖಾ ದಳ (NIA)ಪತ್ತೆ ಹಚ್ಚಿದೆ. ಹೀಗಾಗಿ ಈ ಸ್ಪೋಟದ ಹಿಂದೆ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಕೈವಾಡ ಇರುವುದು ಖಚಿತವಾಗಿದೆ.

ಶಂಕಿತ ಆರೋಪಿ ಈ ಹಿಂದೆ ಕೂಡ ಹಲವಾರು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ ಶಾಜಿಬ್ ಕೈವಾಡವಿದೆ ಎನ್ನುವುದು ತಿಳಿದು ಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ನಡೆದ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ, ಮಂಗಳೂರು ಕುಕ್ಕರ್ ಸ್ಪೋಟ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ತೀರದಲ್ಲಿ ಬಾಂಬ್ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಪೋಟ ಹಾಗೂ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಗಳಿಗೆ ನಂಟಿದೆ.

ಯಾಕೆಂದರೆ ಮಂಗಳೂರು ಕುಕ್ಕರ್ ಸ್ಪೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗದಲ್ಲಿ ಪತ್ತೆಯಾಗಿದ್ದ ಸ್ಪೋಟಕ ವಸ್ತುಗಳಿಗೂ ಕೆಫೆ ಸ್ಪೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ.

ತಲೆಮರೆಸಿಕೊಂಡಿದ್ದ ಆರೋಪಿ :

ಜನವರಿ ಮತ್ತು ಫೆಬ್ರವರಿಯಲ್ಲಿ ಚೆನ್ನೈನಲ್ಲಿ ತಂಗಿದ್ದ ಮುಸಾವೀರ್‌ ಹುಸೇನ್‌ ಶಜೀಬ್‌ ಮಾರ್ಚ್‌ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಿದ್ದಾನೆ ಎನ್ನಲಾಗಿದೆ. ಆದರೆ, ಇದುವರೆಗೂ ಈತನೇ ಸ್ಫೋಟ ನಡೆಸಿದ್ದಾನೆ ಎಂದು ಖಚಿತವಾಗಿ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ಈತ ಮಾಸ್ಟರ್‌ ಮೈಂಡ್‌ ಕೂಡ ಆಗಿರಬಹುದು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಈತನ ಜೊತೆ ಅಬ್ದುಲ್‌ ಮತೀನ್‌ ತಹಾ ಕೂಡ ಇದ್ದ ಎಂಬುದು ಗೊತ್ತಾಗಿದೆ. ಈ ಇಬ್ಬರು ಕೂಡ ಅಲ್‌ ಹಿಂದ್‌ ಮಾಡ್ಯೂಲ್‌ ಕೇಸ್‌ನಲ್ಲಿ ಎನ್‌ಐಎಗೆ ಬೇಕಾಗಿದ್ದು, 2020ರಿಂದಲೂ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ನಾಪತ್ತೆ ದೂರು :

ಬೆಂಗಳೂರಿನಲ್ಲಿ ರೆಡಿಮೆಡ್‌ ಗಾರ್ಮೆಂಟ್ಸ್‌ ವ್ಯವಹಾರವನ್ನು ಮುಸಾವೀರ್‌ ನಡೆಸುತ್ತಿದ್ದ ಎನ್ನಲಾಗಿದೆ. ಆದರೆ, 2019ರಿಂದ ನಾಪತ್ತೆಯಾಗಿದ್ದಾನೆ ಎಂದು ಅವರ ತಾಯಿ ಕೂಡ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಅವರ ದೂರಿನಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಮುಸಾವೀರ್‌ ಹುಸೇನ್‌ ಶಜೀಬ್‌ ಅನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದಾದ ಬಳಿಕ ಆತ ನನ್ನನ್ನು ಸಂಪರ್ಕಿಸಿಲ್ಲ, ನಾಪತ್ತೆಯಾಗಿದ್ದಾನೆ. ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು.

LATEST NEWS

ನೈಟ್ ನಿದ್ದೆ ಬರಲ್ವಾ ? ಸುಖ ನಿದ್ರೆಗೆ ಬೆಸ್ಟ್ ಆಯುರ್ವೇದಿಕ್ ಟಿಪ್ಸ್ ಇಲ್ಲಿದೆ..

Published

on

ಪ್ರಸ್ತುತ ದಿನಗಳಲ್ಲಿ ಒತ್ತಡ ಮತ್ತು ಬ್ಯುಸಿ ಲೈಫ್‌ನಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ಅದರಲ್ಲಿ ಮುಖ್ಯವಾಗಿ ನಿದ್ರಾಹೀನತೆ ಒಂದಾಗಿದ್ದು, ಇದನ್ನು ಎದುರಿಸೋದು ಸುಲಭವಲ್ಲ. ತಕ್ಷಣ ಇದರ ಬಗ್ಗೆ ನೋಡಿಕೊಳ್ಳದಿದ್ದರೆ ದೊಡ್ಡ ಹೆಲ್ತ್ ಪ್ರಾಬ್ಲಮ್ ಆಗುತ್ತೆ. ನಿದ್ರಾಹೀನತೆ ಸಮಸ್ಯೆ ಕಡಿಮೆ ಮಾಡಲು ಈ ಆಯುರ್ವೇದಿಕ್ ಟಿಪ್ಸ್ ಫಾಲೋ ಮಾಡುವುದು ಉತ್ತಮ.

ಸ್ಲೀಪ್ ಡಿಸಾರ್ಡರ್ ಎಂದು ಕರೆಯುವ ಈ ನಿದ್ರಾಹೀನತೆಯಿಂದ , ತಕ್ಷಣ ನಿದ್ದೆ ಬರದಿರುವುದು, ಕಡಿಮೆ ನಿದ್ದೆ, ಮೂಡ್ ಸರಿ ಇಲ್ಲದಿರುವುದು, ಕಡಿಮೆ ಏಕಾಗ್ರತೆ ಇಂತಹ ಹಲವು ಹೆಲ್ತ್ ಪ್ರಾಬ್ಲಮ್ಸ್ ಇರುತ್ತದೆ.ಹಾಗಾಗಿ ಇದನ್ನು ತಡೆಯಲು ಆಯುರ್ವೇದದಲ್ಲಿ ಕೆಲವು ಸಲಹೆಗಳಿದ್ದು, ಅದರಲ್ಲಿ ಪ್ರಮುಖ ಅಂಶಗಳು ಇಲ್ಲಿದೆ.

ಸ್ಲೀಪ್ ಡಿಸಾರ್ಡರ್ ತಡೆಯಲು 6 ಆಯುರ್ವೇದ ಸಲಹೆಗಳು :

ಆಹಾರ: ನಿದ್ರಾಹೀನತೆ ಇಲ್ಲದ ಲೈಫ್‌ಗೆ ಆಹಾರದಲ್ಲಿ ಪೌಷ್ಟಿಕಾಂಶ ಇರಬೇಕು. ನಿದ್ದೆಗೆ ಒಂದು ಗಂಟೆ ಮೊದಲು ಬಿಸಿ ಹಾಲು, ಬಾದಾಮಿ ಮತ್ತು ಕ್ಯಾಮೊಮೈಲ್/ಹರ್ಬಲ್ ಟೀ ಕುಡಿಯಿರಿ.
ಮಸಾಜ್: ತಲೆ ಮತ್ತು ದೇಹದ ಮಸಾಜ್ ಮನಸ್ಸು ಮತ್ತು ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ. ಬೃಂಗರಾಜ್ ಎಣ್ಣೆಯಿಂದ ತಲೆಗೆ ಮಸಾಜ್ ಮತ್ತು ಬಾದಾಮಿ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡುವುದು ಒಳ್ಳೆಯದು.
ನಿದ್ದೆ ವಾತಾವರಣ: ಹಾಸಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕ್ಲೀನ್ ಆಗಿರಬೇಕು ಮತ್ತು ಡಿಜಿಟಲ್ ಗ್ಯಾಜೆಟ್ಸ್ ಇರಬಾರದು. ಓದುವುದು, ಧ್ಯಾನ ಅಥವಾ ವಾಕಿಂಗ್ ಮಾಡಿ.
ವೈದ್ಯಕೀಯ ಸಹಾಯ: ನಿದ್ರಾಹೀನತೆಗೆ ಪರಿಹಾರ ಹುಡುಕುವಾಗ ಮತ್ತು ಆಯುರ್ವೇದ ಫಾಲೋ ಮಾಡುವಾಗ, ಕಾರಣಗಳನ್ನು ತಿಳಿದುಕೊಳ್ಳಲು ಮತ್ತು ಮೆಡಿಸಿನ್ ಬೇಕಿದ್ದರೆ ಡಾಕ್ಟರ್ ನೋಡಿ.
ಕೆಫೀನ್ ಅಥವಾ ಆಲ್ಕೋಹಾಲ್: ನಿದ್ದೆಗೆ ಮೊದಲು ಟೀ ಅಥವಾ ಕಾಫಿ ಕುಡಿಯಬೇಡಿ. ಇವೆರಡರಲ್ಲೂ ಕೆಫೀನ್ ಇರುವುದರಿಂದ ನಿದ್ದೆಗೆ ತೊಂದರೆ ಆಗುತ್ತದೆ. ಆಲ್ಕೋಹಾಲ್ ಕೂಡ ಒಂದು ಕಾರಣ.
ನಿದ್ದೆ ರೂಟೀನ್: ನಿದ್ದೆಗೆ ಮೊದಲು ಸ್ನಾನ ಮಾಡುವುದು ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ. ಲೂಸ್ ಡ್ರೆಸ್ ಹಾಕಿಕೊಳ್ಳಿ. ಕಣ್ಣಿಗೆ ಮಾಸ್ಕ್ ಹಾಕಿಕೊಳ್ಳಿ.

Continue Reading

LATEST NEWS

ಪ್ರೇಮ ನಿವೇದನೆ ದಿನ : ಮನದ ಪ್ರೀತಿ ಹೇಳುವ ಮುನ್ನ ಅದರ ಮಹತ್ವ ಅರಿಯಿರಿ…

Published

on

ಈಗಾಗಲೇ ಫೆ.7 ರಿಂದ ಫೆ.14ರವರೆಗಿನ ‘ವ್ಯಾಲೆಂಟೈನ್ಸ್ ವೀಕ್’ ಆರಂಭವಾಗಿದೆ, ಪ್ರೇಮಿಗಳ ವಾರದ ಎರಡನೇ ದಿನವಾದ ಇಂದು (ಫೆಬ್ರವರಿ 8) ಪ್ರೇಮ ನಿವೇದನೆ ದಿನ. ಮನದಾಳದ ಪ್ರೀತಿಯನ್ನು ವಿಶೇಷ ರೀತಿಯಲ್ಲಿ ಪ್ರಸ್ತಾಪಿಸುವ ಮೂಲಕ ಪ್ರೀತಿಯನ್ನು ಅಧಿಕೃತಗೊಳಿಸುವ ದಿನ. ಹಾಗಾದರೆ ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರೇಮ ನಿವೇದನೆ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲಿ ವಿಶೇಷವಾಗಿರುತ್ತದೆ. ಜೀವನ ಪರ್ಯಂತ ಸದಾ ನೆನಪಿನಲ್ಲಿ ಉಳಿಯುವ ಕಾರಣ ವಿಭಿನ್ನವಾಗಿ ನಿವೇದನೆ ಮಾಡಲು ಬಯಸುತ್ತಾರೆ. ಪ್ರೇಮ ಪಯಣಕ್ಕೆ ಹೊಸ ಹೆಜ್ಜೆ ಇಡಲು ಬಯಸುವವರಿಗೆ ಈ ದಿನ ಬೆಸ್ಟ್.

ಪ್ರೇಮ ನಿವೇದನೆ ದಿನದ ಇತಿಹಾಸ :

ವ್ಯಾಲೆಂಟೈನ್ಸ್ ವೀಕ್ ಆಚರಣೆಯ ಭಾಗವಾಗಿ ಎರಡನೇ ದಿನವನ್ನು ಪ್ರಪೋಸ್ ಡೇ ಎಂದು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದ ಆಚರಣೆಯೂ ಮೊದಲಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಾರಂಭವಾಯಿತು, ತದನಂತರದಲ್ಲಿ ಭಾರತ ಸೇರಿದಂತೆ ಇತರ ದೇಶಗಳಿಗೂ ಹರಡಿತು. ಆದರೆ ಈ ದಿನದ ಆಚರಣೆ ಯಾವಾಗ ಶುರುವಾಯಿತು ಎನ್ನುವ ಬಗ್ಗೆ ನಿಖರವಾದ ಇತಿಹಾಸವಿಲ್ಲ. ಆದರೆ ಕೆಲ ಮಾಹಿತಿಯ ಪ್ರಕಾರ 1477ರಲ್ಲಿ ಆಸ್ಟಿಯನ್ ರಾಜಕುಮಾರ ಮ್ಯಾಕ್ಸಿಮಿಲಿಯನ್ ಬರ್ಗಂಡಿಯ ಮೇರಿಗೆ ವಜ್ರದ ಉಂಗುರವನ್ನು ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದನು ಎನ್ನಲಾಗಿದೆ. 1816ರಲ್ಲಿ ತನ್ನ ಭಾವಿ ಪತಿಯೊಂದಿಗೆ ರಾಜಕುಮಾರಿ ಷಾರ್ಲೆಟ್ ಅವರ ನಿಶ್ವಿತಾರ್ಥವು ಮಹತ್ವದ ಚರ್ಚೆಯಲ್ಲಿತ್ತು. ಹೀಗಾಗಿ ಈ ದಿನವನ್ನು ವ್ಯಾಲೆಂಟೈನ್ಸ್ ವೀಕ್‌ನ ಪ್ರಪೋಸ್ ಡೇ ಆಗಿ ಆಚರಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಪ್ರಪೋಸ್ ಡೇ ಆಚರಣೆ ಹೆಚ್ಚು ಜನಪ್ರಿಯವಾಗಿದ್ದು, ಜಗತ್ತಿನದಾದಂತ್ಯ ಈ ದಿನವನ್ನು ಆಚರಿಸಲಾಗುತ್ತದೆ.

ಪ್ರಪೋಸ್ ಡೇ ಮಹತ್ವ :

ಪ್ರಪೋಸ್ ಡೇ ಪ್ರೇಮಿಗಳ ವಾರದ ಅತ್ಯಂತ ಅರ್ಥಪೂರ್ಣ ದಿನಗಳಲ್ಲಿ ಒಂದಾಗಿದೆ. ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದು ಸುಲಭದ ಮಾತಲ್ಲ ಏಕೆಂದರೆ ಅಲ್ಲಿ ನಿರಾಕರಣೆಯ ಭಯವಿರುತ್ತದೆ, ಆದರೂ ಈ ದಿನ ಏನೋ ಧೈರ್ಯ ಮಾಡಿ ಪ್ರೇಮಿಯು ಪ್ರೇಮ ನಿವೇದನೆ ಮಾಡುತ್ತಾನೆ. ಇಲ್ಲಿಂದ ಹೊಸ ಸಂಬಂಧವು ಪ್ರಾಮಾಣಿಕತೆ ಮತ್ತು ಧೈರ್ಯದಿಂದ ಪ್ರಾರಂಭವಾಗುತ್ತವೆ. ನವ ಪ್ರೇಮ ಪ್ರಯಾಣವನ್ನು ಪ್ರಾರಂಭಿಸುವುದು ಅಥವಾ ತಮಗೆ ತಾವೇ ಹೃತ್ತೂರ್ವಕ ಭರವಸೆಗಳನ್ನು ನೀಡುವಂತಹ ದಿಟ್ಟ ಹೆಜ್ಜೆಗಳನ್ನು ಇಡಲು ಪ್ರೇರೇಪಿಸುವುದೇ ಪ್ರಪೋಸ್ ಡೇ ಮಹತ್ವ.

Continue Reading

DAKSHINA KANNADA

ಆನ್ಲೈನ್ ವಂಚನೆ ; ಕೊನೆಗೂ ಪೊಲೀಸರ ಕೈವಶವಾದ ಖದೀಮ

Published

on

ಮಂಗಳೂರು : ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಗಳು ಕೇರಳ ಮೂಲದ ಜುನೈದ ಎ.ಕೆ. ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಡಿಸಲಾಗಿದೆ.

ಜುನೈದ್ ಎ.ಕೆ. (32) ಆರೋಪಿ ಎಂದು ಗುರುತಿಸಲಾಗಿದೆ.ಅಪಚಿರಿತ ವ್ಯಕ್ತಿ ವಾಟ್ಸ್ ಆಫ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು ರೂ 46,00,000/- ಹಣವನ್ನು ಪಡೆದು ವಂಚನೆ ಮಾಡಿದ್ದಾನೆ.

ಆನ್ಲೈನ್ ವಂಚನೆಯ ಕುರಿತು 133/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ ಮತ್ತು 308(2), 318(2), 336(3),112 ಬಿ.ಎನ್.ಎಸ್ ಎಂದು ಮಂಗಳೂರಿನ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂದಿಸಿದಂತೆ ಪಿರ್ಯಾದಿದಾರರಿಂದ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಿದಾಗ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಗೆ ರೂ 10,00,000/- ಹಣ ವರ್ಗಾವಣೆಯಾಗಿದ್ದು, ನಂತರದಲ್ಲಿ ಸದ್ರಿ ಬ್ಯಾಂಕ್ ಖಾತೆಯಿಂದ ಕೇರಳ ಮೂಲದ ಆಯಿಷಾ ಹಾದಿಯಾ ಎಂಬುವವಳ ತಂದೆ ಆಶ್ರಫ್ ಪಿ.ಟಿ ಎಂಬಾತನ ಬ್ಯಾಂಕ್ ಖಾತೆಗೆ ರೂ,5,00,000/- ರೂ ಹಣ ಬಂದಿದ್ದು, ಈ ಬಗ್ಗೆ ತನಿಖೆ ಕೈಗೊಂಡಾಗ ಆಯಿಷಾ ಹಾದಿಯಾ ರವರ ಗಂಡ ಜುನೈದ ಎ ಕೆ (32) ಮಾವನ ಜೊತೆ ಸೇರಿಕೊಂಡು ವಿಥ್ ಡ್ರಾ ಮಾಡಿ ಆ ಹಣವನ್ನು ದುಬೈನಲ್ಲಿರುವ ಬಾಬು ಎಂಬಾಯನ ನಿರ್ದೇಶನದಂತೆ ಮನೀಬ್ ಎಂಬಾತನಿಗೆ ನೀಡಿ, ಪ್ರತಿಯಾಗಿ ರೂ 5,000 ರೂಗಳನ್ನು ಕಮಿಷನ್ ಪಡೆದಿರುವದಾಗಿದೆ, ಸದ್ರಿ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಜುನೈದ ಎ ಕೆ ಎಂಬ ಪ್ರಮುಖ ಎಂಬಾತನನ್ನು ಪತ್ತೆ ಮಾಡಿ ದಸ್ತಗಿರಿ ಕ್ರಮ ಜರುಗಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ : 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣ; ಆರೋಪಿ ಅಂದರ್

ಸದ್ರಿ ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ ಐಪಿಎಸ್, ಡಿಸಿಪಿ (ಕಾಮತ್ತುಸು) ಶ್ರೀ ಸಿದ್ದಾರ್ಥ ಗೋಯಲ್, ಡಿಸಿಪಿ (ಅ&ಸಂ) ಶ್ರೀ ರವಿಶಂಕರ್ ರವರ ಮಾರ್ಗದರ್ಶನದಂತೆ, ಸೆನ್ ಠಾಣಾಧಿಕಾರಿಯಾದ ಎಸಿಪಿ ಶ್ರೀ ರವೀಶ್ ನಾಯಕ, ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸತೀಶ್ ಎಂ ಪಿ ಮತ್ತು ಪೊಲೀಸ್ ಉಪ ನಿರೀಕ್ಷಕರಾದ ಮೋಹನ್ ರವರ ನೇತೃತ್ವದಲ್ಲಿ ಒಂದು ಹಂತದ ಯಶಸ್ಸು ಕಂಡಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page