Connect with us

BANTWAL

ಬಂಟ್ವಾಳ: ಬೀಡಿ ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

Published

on

ಬಂಟ್ವಾಳ: ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದೇಶಾದ್ಯಂತ ಪ್ರತಿಭಟನೆಯ ಭಾಗವಾಗಿ ಇಂದು ಬಿ.ಸಿ ರೋಡ್ ನಲ್ಲಿರುವ ಬಂಟ್ವಾಳ ತಾಲೂಕು ಕಚೇರಿಯೆದುರು ಬೀಡಿ ಕಾರ್ಮಿಕರು CITU ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬೀಡಿ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿ, ದೇಶಾದ್ಯಂತ ಸುಮಾರು 65 ಲಕ್ಷ ಕಾರ್ಮಿಕರು ಬೀಡಿ ಉದ್ಯಮವನ್ನು ನಂಬಿ ಬದುಕುತ್ತಿದ್ದು, ಪರೋಕ್ಷವಾಗಿ 3 ಕೋಟಿಯಷ್ಟು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಬೀಡಿ ಉದ್ಯಮ ತೀರಾ ಸಂಕಷ್ಟದಲ್ಲಿದ್ದು, ಕಾರ್ಮಿಕರ ಬದುಕು ಡೋಲಾಯಮಾನವಾಗಿದೆ.

ಕನಿಷ್ಟ ಕೂಲಿ, ತುಟಿ ಭತ್ತೆ ಹೆಚ್ಚಳ, ಪರ್ಯಾಯ ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರಗಳ ಮುಂದಿಟ್ಟರೂ ಸರಕಾರಗಳು ದಿವ್ಯ ಮೌನ ವಹಿಸಿದೆ ಎಂದು ದೂರಿದರು.


CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡಿ, ಬಾಯಿ ಬಿಟ್ಟರೆ ಅಭಿವೃದ್ಧಿಯ ಮಂತ್ರ ಜಪಿಸುವ ಡಬ್ಬಲ್ ಇಂಜಿನ್ ಸರಕಾರಗಳು ಬೀಡಿ ಕಾರ್ಮಿಕರ ಏಳಿಗೆಗಾಗಿ ಕಿಂಚಿತ್ತೂ ಗಮನ ನೀಡಿಲ್ಲ. ಮಾತ್ರವಲ್ಲದೆ ವಿಧಾನಸಭೆ ಸಂಸತ್ತಿನಲ್ಲಿ ಶಾಸಕ ಸಂಸದರು ಒಂದು ಶಬ್ದನೂ ಮಾತನಾಡಿಲ್ಲ ಎಂದು ಹೇಳಿದರು.

ಪ್ರತಿಭಟನೆ ಬಳಿಕ ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ನೀಡಲಾಯಿತು.

CITU ನಾಯಕರಾದ ಉದಯ ಕುಮಾರ್‌, ಜಯಂತಿ ಬಿ ಶೆಟ್ಟಿ, ಜಯಲಕ್ಷ್ಮಿ, ಬೀಡಿ ಕಾರ್ಮಿಕರ ಮುಖಂಡರಾದ ಲೋಲಾಕ್ಷಿ ಬಂಟ್ವಾಳ, ಗಿರಿಜಾ,ವಿಮಲ, ಸರಸ್ವತಿ, ಚಂದ್ರ ಪೂಜಾರಿ, ಜನಾರ್ದನ ಕುಲಾಲ್ ಮುಂತಾದವರು ವಹಿಸಿದ್ದರು.

BANTWAL

ಇಂದು ಮಧ್ಯಾಹ್ನ ಬೆಂಗಳೂರಿಗೆ ತಲುಪಲಿರುವ ಹುತಾತ್ಮ ಯೋಧ ಮುರಳಿ ನಾಯಕ್ ಪಾರ್ಥಿವ ಶರೀರ

Published

on

ಮಂಗಳೂರು/ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಸೇನಾ ಸಂಘರ್ಷದಲ್ಲಿ ನಿನ್ನೆ ಭಾರತೀಯ ಸೇನೆಯ ವೀರ ಯೋಧ ಮುರಳಿ ನಾಯ್ಕ್ ಹು*ತಾತ್ಮರಾಗಿದ್ದಾರೆ.

ಮೃ*ತ ಯೋಧನ ಪಾರ್ಥೀವ ಶ*ರೀರ ಇಂದು ಗ್ರಾಮಕ್ಕೆ ಆಗಮಿಸಲಿದೆ. ಮುರಳಿ ನಾಯಕ್ ಬಡತನದ ಹಿನ್ನೆಲೆಯಿಂದ ಬಂದವರು. ಸುಮಾರು 23 ವರ್ಷ ವಯಸ್ಸಿನ ಮುರಳಿ ನಾಯ್ಕ್ ಅವರು ಡಿಸೆಂಬರ್ 2022 ರಲ್ಲಿ ಸೇನೆಗೆ ಸೇರಿದ್ದರು. ಅವರ ಪೋಷಕರಾದ ಎಂ. ಜ್ಯೋತಿಬಾಯಿ ಮತ್ತು ಎಂ. ಶ್ರೀರಾಮ್ ನಾಯ್ಕ್, ದಿನಗೂಲಿ ಕಾರ್ಮಿಕರು.

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ಉಗ್ರರ ಮೇಲೆ ಆಪರೇಷನ್ ಸಿಂಧೂರ್ ನಡೆಸಿತು. ಇದರಿಂದ ಕೆರಳಿದ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ದಾಳಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರ ಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿ ಏಕೈಕ ಪುತ್ರ ಮುರಳಿ ನಾಯಕ್ ಹು*ತಾತ್ಮರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಪಾಕ್‌ನ ದಾಳಿಗೆ ಜಮ್ಮು-ಕಾಶ್ಮೀರದ ಅಧಿಕಾರಿ ಸಾ*ವು

ದುರಂತ ಸುದ್ದಿ ತಿಳಿದ ತಕ್ಷಣವೇ ಆಂಧ್ರಪ್ರದೇಶದ ಸಮಾಜ ಕಲ್ಯಾಣ ಸಚಿವೆ ಸವಿತಾ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದ ಪರವಾಗಿ ರೂ. 5 ಲಕ್ಷ ಆರ್ಥಿಕ ನೆರವನ್ನು ನೀಡಿದರು.

Continue Reading

BANTWAL

ತಲವಾರು ತೋರಿಸಿ ಜೀವ ಬೆದರಿಕೆ ಪ್ರಕರಣ; ಮಾದ್ಯಮದ ಮೊರೆ ಹೋದ ದಂಪತಿ

Published

on

ವಿಟ್ಲ : ದಂಪತಿಗೆ ತಲವಾರು ತೋರಿಸಿ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುಣಚ ನಿವಾಸಿ ಹರೀಶ್ ಎನ್. ಎಂಬವರು ಈ ಕುರಿತು ಪೊಲೀಸ್ ದೂರು ನೀಡಿದ್ದರು. ಇದೀಗ ಮತ್ತೆ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ.

ಸಂತ್ರಸ್ತರಾದ ಹರೀಶ್ ಭಟ್ ಹಾಗೂ ಶ್ರೀದೇವಿ ನ್ಯಾಯಕ್ಕಾಗಿ ಇದೀಗ ಮಾದ್ಯಮದ ಮೊರೆ ಹೋಗಿದ್ದಾರೆ. ಕೆಲವೊಂದು ಸಮಸ್ಯೆಯಿಂದ ದಂಪತಿಯು ಪೆಟ್ರೋಲ್ ಪಂಪ್ ಮುಚ್ಚಿದ್ದರು. ಇದಾದ ಬಳಿಕ ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ ಅವರು ದಂಪತಿ ಬಳಿ ಹೋಗಿ ಆವಾಝ್ ಹಾಕಿದ್ದಾರೆ. ‘ನನ್ನ ತಾಕತ್ ಏನೂ ಅಂತ ತೋರಿಸಿಕೊಡುತ್ತೇನೆ’ ಎಂದು ಬೆದರಿಕೆ ಹಾಕಿರುವುದಾಗಿ ದಂಪತಿ ತಿಳಿದ್ದಾರೆ. ಇದಾದ ಬಳಿಕ ಸ್ವತಃ ಮುರಳೀಕೃಷ್ಣ ಅವರಿಗೆ ಶ್ರೀದೇವಿ ಬುದ್ಧಿ ಮಾತು ಹೇಳಿದ್ದಾರೆ. “ನೀವು ಈ ರೀತಿ ಅನ್ಯಾಯದ ದಾರಿ ಹಿಡಿಯುವುದು ಸರಿಯಲ್ಲ. ನೀವೊಬ್ಬ ಹಿಂದೂ ಸಂಘಟಕನಾಗಿ ಈ ಬೆದರಿಕೆಯೊಡ್ಡೋದು ತಪ್ಪು. ಸಮಾಜದಲ್ಲಿ ಗೌರವದ ಸ್ಥಾನದಲ್ಲಿರುವ ನೀವು ನಮ್ಮನ್ನ ಬೆದರಿಸಿ ಅನ್ಯಾಯ ಮಾಡುವುದು ಎಷ್ಟು ಸರಿ..?” ಎಂಬೆಲ್ಲಾ ಪ್ರಶ್ನೆ ಹಾಕಿದ್ದರು.

“ಮುರಳೀಕೃಷ್ಣ ಹಸಂತಡ್ಕ ಅವರು ಈ ರೀತಿ ಬೆದರಿಕೆ ಹಾಕುವ ಬದಲು ಕಾನೂನು ರೀತಿಯಲ್ಲಿ ನೋಡಿಕೊಳ್ಳಲಿ. ಮುರಳೀಕೃಷ್ಣ ನಮಗೆ ಬೆದರಿಸಿ ಆವಾಝ್ ಹಾಕಿರೋದು ತುಂಬಾ ನೋವಾಗಿದೆ. ಪಾಲುದಾರಿಕೆಯಲ್ಲಿ ಒಗ್ಗಟ್ಟುತನ ಇರಬೇಕು. ಆದರೆ ಮುರಳೀಕೃಷ್ಣ ನನ್ನದೇ ಎಲ್ಲವೂ ಎಂಬಂತೆ ನಮಗೆ ಮೋಸ ಮಾಡಿದ್ರು. ಒಂದೊಮ್ಮೆ ಪಂಚಾಯಿತಿ ಮಾಡಿ ವ್ಯವಹಾರವನ್ನ ಸರಿಪಡಿಸಲಾಯಿತು. ಆದ್ರೆ ಮುರಳೀಕೃಷ್ಣ ಅವರು ಸ್ವಲ್ಪ ಸಮಯದ ಬಳಿಕ ಮತ್ತೆ ಅಡ್ಡಗಾಲಿಟ್ಟರು. ಸದ್ಯ ನಮಗೆ ಮುರಳೀಕೃಷ್ಣ ಅವರಿಂದ ಅನ್ಯಾಯ ಆಗಿದೆ ಎಂದು ಕಾನೂನು ರೀತಿಯಲ್ಲಿ ಮೊರೆ ಹೋಗಿದ್ದೇವೆ” ಎಂದು ಹೇಳಿದ್ದಾರೆ.

“ಕಳೆದೆರಡು ದಿನಗಳ ಹಿಂದೆ ಮುರಳೀಕೃಷ್ಣ ಹಸಂತಡ್ಕ ಅವರು ಆಣೆ ಪ್ರಮಾಣ ಮಾಡಲು ಬನ್ನಿ ಎಂದು ಮಾಧ್ಯಮದ ಮುಖಾಂತರ ಹೇಳಿದ್ದರು. ಆಣೆ ಪ್ರಮಾಣಕ್ಕೆ ದಂಪತಿಯಾಗಿ ನಾವು ಕೂಡ ರೆಡಿ ಇದ್ದೇವೆ. ಆದ್ರೆ ಸದ್ಯ ನಾವು ಕಾನೂನು ಮೊರೆ ಹೋಗಿರುವುದರಿಂದ ನ್ಯಾಯಾಲಯದಲ್ಲಿ ಏನು ತೀರ್ಪು ಸಿಗುತ್ತದೋ ಅದಕ್ಕೆ ಬದ್ಧ. ಮುರಳೀಕೃಷ್ಣ ಅವರು ಕೂಡ ಕಾನೂನು ರೀತಿಯಲ್ಲಿ ಎದುರಿಸಲಿ. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ನಾವು ಕೂಡ ದೈವ ದೇವರನ್ನ ನಂಬುವವರು. ಅದು ಬಿಟ್ಟು ಆಣೆ ಪ್ರಮಾಣಕ್ಕೆ ಬನ್ನಿ ಎಂದು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಸರಿಯಲ್ಲ. ಇಷ್ಟೆಲ್ಲ ಆದ ಮೇಲೆ ಮುರಳೀಕೃಷ್ಣ ಅವ್ರು ಸುರತ್ಕಲ್ ಮೂಲದ ವ್ಯಕ್ತಿಯಿಂದ ಮತ್ತೆ ಬೆದರಿಕೆ ಹಾಕಿಸಿದ್ದಾರೆ. ಬೆದರಿಕ ಮೇಲೆ ಬೆದರಿಕೆ ಹಾಕಿ ನಮ್ಮಲ್ಲಿ ಆತಂಕವನ್ನ ಸೃಷ್ಟಿ ಮಾಡಿದ್ದಾರೆ” ಎಂದು ದಂಪತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Continue Reading

BANTWAL

ಬಸ್ ಡ್ರೈವರ್ ಹಾಗೂ ಕಂಡಕ್ಟರ್‌ಗೆ ಬೆದರಿಕೆ; ಪ್ರಕರಣ ದಾಖಲು

Published

on

ಬಂಟ್ವಾಳ : ಬಸ್‌ ತಿರುಗಿಸುವ ವಿಚಾರದಲ್ಲಿ ಖಾಸಗಿ ಬಸ್‌ನ್ನು ತಡೆದ ತಂಡವೊಂದು ಡ್ರೈವರ್ ಹಾಗೂ ಕಂಡಕ್ಟರ್‌ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ನಡೆದಿತ್ತು.

ಎ.21 ರಂದು ರಾತ್ರಿ 7.40 ರ ಸುಮಾರಿಗೆ ಬಸ್‌ ಪೊಳಲಿ-ಕೊಳತ್ತಮಜಲು ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಬಸ್‌ ತಿರುಗಿಸುವ ವಿಚಾರದಲ್ಲಿ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ, ಪ್ರಶಾಂತ್‌ ಹಾಗೂ ಇತರರು ತಕರಾರು ತೆಗೆದಿದ್ದಾರೆ.

ಗಲಾಟೆ ಮಾಡಿ ಬಳಿಕ ಆರೋಪಿಗಳು ಪಲಾಯನಗೈದಿದ್ದಾರೆ. ಬಳಿಕ ಬಸ್‌ ಕಂಡಕ್ಟರ್ ಅಭಿಜಿತ್‌ ಶೆಟ್ಟಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page