Connect with us

BIG BOSS

BBK11: ಮೈ ಮರೆತು ಮಾತಾಡಿದ ತ್ರಿವಿಕ್ರಮ್‌, ಮಂಜು, ಗೌತಮಿ; ಮೂವರಿಗೂ ಬಿಗ್ ಶಾಕ್‌!

Published

on

ಬಿಗ್ ಬಾಸ್ ಸೀಸನ್ 11 ಮನೆಯಲ್ಲಿ ಮತ್ತೆ ಹೋರಾಟದ ಕಿಚ್ಚು ಹಚ್ಚಿಕೊಳ್ಳುವ ಸುಳಿವು ಸಿಕ್ಕಿದೆ. ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಸುದೀಪ್ ಮನೆಯವರು ಮಾಡಿರೋ ತಪ್ಪುಗಳನ್ನ ಹುಡುಕಿದ್ದು, ಇವತ್ತು ತ್ರಿವಿಕ್ರಮ್, ಮಂಜು, ಗೌತಮಿ ಈ ಮೂವರಿಗೆ ಚಳಿ ಬಿಡಿಸೋ ಸಾಧ್ಯತೆ ಇದೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಂಟೆಸ್ಟೆಂಟ್ ತಮ್ಮ ರಕ್ತ ಸಂಬಂಧಗಳನ್ನ ಭೇಟಿ ಮಾಡಿದ್ದಾರೆ. ಆದರೆ ಮನೆ ಊಟ ತಿಂದು ಬಿಗ್ ಬಾಸ್ ಆಟದ ಮೈ ಮರೆತು ಮಾತನಾಡಿದ್ದಾರೆ. ಮನೆಯವರ ಮಾತನ್ನ ಕೇಳಿ ಎಚ್ಚರ ಆದವರು ಇದ್ದಾರೆ.

ಮನೆಯವರ ಭೇಟಿಯಿಂದ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ, ಸಂತೋಷ ಹೆಚ್ಚಾಗಿರಬಹುದು. ಆದರೆ ಸ್ಪರ್ಧಿಗಳ ಆಟದಲ್ಲೂ ಬದಲಾವಣೆ ಆಗಲಿದೆ. ಇದಕ್ಕೆ ಸಾಕ್ಷಿಯಾಗಿ ಮನೆಯವರ ಜೊತೆ ಮಾತಾಡಿದ ತ್ರಿವಿಕ್ರಮ್‌, ಮಂಜು, ಗೌತಮಿ ಅವರ ಮಾತುಗಳಾಗಿದೆ. ತ್ರಿವಿಕ್ರಮ್ ಅವರ ತಾಯಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಜೊತೆ ಸ್ವಲ್ಪ ದೂರ ಇರು ಅಂತ ನೇರವಾಗಿ ಹೇಳಿದ್ದಾರೆ. ಇದು ತ್ರಿವಿಕ್ರಮ್ ಅವರ ಮನಮುಟ್ಟಿದ್ದು, ಇನ್ಮುಂದೆ ಭವ್ಯಾ, ತ್ರಿವಿಕ್ರಮ್ ಅವರ ಗೇಮ್ ಪ್ಲಾನ್ ಚೇಂಜ್ ಆಗುವ ಸಾಧ್ಯತೆ ಇದೆ.

ಇನ್ನು ಗೌತಮಿ ಅವರ ಪತಿ ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನ ಉಪಯೋಗಿಸಿಕೊಳ್ಳುತ್ತಾ ಇರೋರು ಅವರು. ಬಿ ಕೇರ್ ಫುಲ್ ಎಂದ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಜು ಅವರ ತಂಗಿ ಕೂಡ ಬೇಡ ಅವರ ಜೊತೆ ಇರೋದು ಬೇಡ. ಫ್ರೆಂಡ್‌ ಶಿಪ್‌ನ ಬ್ರೇಕ್ ಅಪ್ ಮಾಡು. ನನಗೆ ಪ್ರಾಮಿಸ್ ಮಾಡಬೇಕು ಎಂದು ಮಂಜು ತಂಗಿ ಭಾಷೆ ಕೂಡ ತೆಗೆದುಕೊಂಡಿದ್ದಾರೆ.

ಇವತ್ತಿನ ಕಿಚ್ಚನ ಪಂಚಾಯ್ತಿಯಲ್ಲಿ ಮನೆಯವರ ಜೊತೆ ಕಾಲ ಕಳೆದ ಖುಷಿಯ ಜೊತೆಗೆ ಮೈ ಮರೆತು ಮಾತನಾಡಿರೋ ಮಾತು ಚರ್ಚೆಯಾಗಲಿದೆ. ಮನೆಯವರಿಗೆ ಮಾತು ಕೊಟ್ಟಂತೆ ತ್ರಿವಿಕ್ರಮ್, ಗೌತಮಿ, ಮಂಜು ಅವರು ನಡೆದುಕೊಳ್ತಾರಾ. ಗೆಳೆತನ, ಸ್ನೇಹ ಆಟದ ದಿಕ್ಕು ಬದಲಿಸುತ್ತಾ ಅನ್ನೋದು ರೋಚಕವಾಗಿದೆ.

BIG BOSS

ಲಕ್ಸುರಿ ಕಾರನ್ನು ಖರೀದಿ ಮಾಡಿದ ಬಿಗ್‌ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ

Published

on

ಬೆಂಗಳೂರು: ಬಿಗ್​ಬಾಸ್​ ಮೂಲಕ ಫೇಮಸ್​ ಆದ ನಟಿ ಐಶ್ವರ್ಯ ಸಿಂಧೋಗಿ ಇದೀಗ ಲಕ್ಸುರಿ ಕಾರು ಒಂದನ್ನು ಖರೀದಿ ಮಾಡಿದ್ದಾರೆ. ಈ ಮುಕೇನ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.

ಐಶ್ವರ್ಯ ಸಿಂಧೋಗಿ MG ಹೆಕ್ಟರ್ ಪ್ಲಸ್ ಕಾರನ್ನು ಖರೀದಿ ಮಾಡಿದ್ದಾರೆ. ಹೊಚ್ಚ ಹೊಸ ಕಾರನ್ನು ಖರೀದಿ ಸಮಯದಲ್ಲಿ ಸ್ನೇಹಿತರಾದ ಮೋಕ್ಷಿತಾ ಪೈ ಹಾಗೂ ಶಿಶಿರ್​ ಶಾಸ್ತ್ರಿ ಇದ್ದರು.

ಇನ್ನು ಈ ಕಾರಿನ ಬೆಲೆಯೂ ಭಾರತದಲ್ಲಿ ₹17.50 ಲಕ್ಷದಿಂದ ₹23.67 ಲಕ್ಷದವರೆಗೆ ಇದೆ. ಇದೀಗ ಹೊಸ ಕಾರನ್ನು ಖರೀದಿ ಮಾಡಿರೋ ಖುಷಿಯಲ್ಲಿ ಐಶ್ವರ್ಯ ಶಿಂಧೋಗಿ ಇದ್ದಾರೆ.

ಇದನ್ನೂ ಓದಿ: ಚೈತ್ರಾ ತಂದೆಯ ಹೇಳಿಕೆಗಳಿಗೆ ತಾಯಿ ರೋಹಿಣಿ ಕೌಂಟರ್

ಕಾರು ಪರ್ಚೇಸ್ ಮಾಡಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಟಿಗೆ ಶುಭ ಹಾರೈಸುತ್ತಿದ್ದಾರೆ.

Continue Reading

BIG BOSS

ದೇವರ ಮುಂದೆ ಅಪ್ಪ ಕುಡುಕ‌ ಎಂದು ಪ್ರಮಾಣ‌ ಮಾಡಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು

Published

on

ಉಡುಪಿ: ಚೈತ್ರಾ ಕುಂದಾಪುರ ಮದುವೆ ವಿಚಾರದಲ್ಲಿ ವಿರೋಧ ಹೊರ ಹಾಕಿದ್ದ ತಂದೆ ಬಾಲಕೃಷ್ಣ ನಾಯ್ಕ್ ಅವರಿಗೆ ಪುತ್ರಿ ಚೈತ್ರಾ ಸಾಮಾಜಿಕ ಜಾಲ ತಾಣದಲ್ಲಿ ನೀಡಿರುವ ಪ್ರತಿಕ್ರಿಯೆ ಬಗ್ಗೆ ತಂದೆ ಬಾಲಕೃಷ್ಣ ನಾಯ್ಕ್‌ ಕೆಂಡಾಮಂಡಲರಾಗಿದ್ದಾರೆ.

‘ಕುಡುಕ‌ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೆ ಗೊತ್ತು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರು’ ಎಂಬುದಾಗಿ ಚೈತ್ರಾ ಕುಂದಾಪುರ ನಿನ್ನೆ ಸಾಮಾಜಿಕ‌ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

ಇದನ್ನೂ ಓದಿ: ತಂದೆಯನ್ನೇ ಮದುವೆಗೆ ಕರೆದಿಲ್ವಾ? ಚೈತ್ರಾ ಕುಂದಾಪುರ ವಿರುದ್ಧ ಕೇಳಿ ಬಂತು ಗಂಭೀರ ಆರೋಪ!

ಈ ಬಗ್ಗೆ ತಂದೆ ಬಾಲಕೃಷ್ಣ ನಾಯ್ಕ್ ಇದೀಗ ಕೆಂಡಾಮಂಡಲ‌ರಾಗಿದ್ದು ‘ನಾನು ಕುಡುಕ ಎಂದು ಚೈತ್ರಾ ಸಾಬೀತು ಪಡಿಸಲಿ. ಗೋವಿಂದ ಬಾಬು ಪೂಜಾರಿಯಿಂದ ಕೋಟಿ ಪಡೆದದ್ದು ಸಾಬೀತಾಗಿದೆ. ಹಾಗೆ ನಾನು ಕುಡಿಯುವುದು ಸಾಬೀತು ಪಡಿಸಲಿ. ಸರಕಾರಿ ವೈದ್ಯರಿಂದ ರಕ್ತ ಪರೀಕ್ಷೆ ಮಾಡಿಸಿ ಸರ್ಟಿಫಿಕೇಟ್ ‌ತೋರಿಸಲಿ. ಯಾವುದೇ ದೇವಸ್ಥಾನದಲ್ಲಿ ಬೇಕಾದರೂ ಪ್ರಮಾಣ‌ ಮಾಡಲಿ. ಮಂಜುನಾಥ, ಸುಬ್ರಹ್ಮಣ್ಯ, ಕುಲದೇವರ ಮುಂದೆ ‌ಪ್ರಮಾಣ ಮಾಡಬೇಕು. ವೈದ್ಯರ ಸರ್ಟಿಫಿಕೇಟ್ ಜತೆ ಬಂದು ದೇವರ ಮುಂದೆ ಅಪ್ಪ ಕುಡುಕ‌ ಎಂದು ಪ್ರಮಾಣ‌ ಮಾಡಲಿ. ಸುಖಾ ಸುಮ್ಮನೆ ಬಾಯಿಗೆ ಬಂದ ಹಾಗೆ ಅಪ್ಪ ಕುಡುಕ ಎಂದು ಹೇಳುವುದಲ್ಲ’ ಎಂದು ನೇರವಾಗಿ ಸವಾಲು ಹಾಕಿದ್ದಾರೆ.

 

Continue Reading

BIG BOSS

ತಂದೆಯನ್ನೇ ಮದುವೆಗೆ ಕರೆದಿಲ್ವಾ? ಚೈತ್ರಾ ಕುಂದಾಪುರ ವಿರುದ್ಧ ಕೇಳಿ ಬಂತು ಗಂಭೀರ ಆರೋಪ!

Published

on

ಉಡುಪಿ: ಕನ್ನಡ ಬಿಗ್ ಬಾಸ್ ಸೀಸನ್ 11ರ ಫೈಯರ್ ಬ್ರಾಂಡ್ ಚೈತ್ರಾ ಕುಂದಾಪುರ ಮೇ 9 ರಂದು ಶ್ರೀಕಾಂತ್ ಕಶ್ಯಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದೀಗ ಚೈತ್ರಾ ಬಗ್ಗೆ ಅವರ ತಂದೆ ಗಂಭೀರ ಆರೋಪ ಮಾಡಿದ್ದಾರೆ.

ಚೈತ್ರಾ ಮದುವೆಯಲ್ಲಿ ಭಾಗವಹಿಸದಿರುವ ವಿಚಾರವಾಗಿ ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚೈತ್ರಾ ಕುಂದಾಪುರ ನನ್ನನ್ನು ಮದುವೆಗೆ ಆಹ್ವಾನಿಸಲಿಲ್ಲ ಎಂದು ಆರೋಪಿಸಿದ್ದಾರೆ. ಚೈತ್ರಾ ನನ್ನನ್ನು ಕರೆದಿಲ್ಲ. ನಾನೂ ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ ಎಂದಿದ್ದಾರೆ.

ಇದಲ್ಲದೆ, ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್ ಕಶ್ಯಪ್ ಇಬ್ಬರನ್ನೂ ‘ಕಳ್ಳರು’ ಎಂದು ಕರೆದಿದ್ದಾರೆ. ನನ್ನ ಪತ್ನಿ ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಬೆಡಗಿ ಚೈತ್ರಾ ಕುಂದಾಪುರ

ದೊಡ್ಡ ಮಗಳಷ್ಟೇ ಆಸರೆ:

ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನನ್ನ ದೊಡ್ಡ ಮಗಳು ಗಾಯತ್ರಿ ನಿರಪರಾಧಿ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ ಎಂದಿದ್ದಾರೆ.

ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಬಿಟ್ಟು ಬೀಗ ಹಾಕಿ ಬಿಗ್‌ಬಾಸ್‌ ಗೆ ಹೋಗಿದ್ದಳು. ನಾನು ಕಟ್ಟಿದ ಮನೆಯಲ್ಲಿ ಈಗ ನನಗೇ ಜಾಗವಿಲ್ಲ. ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ. ಆಕೆ ನನ್ನ ಜೀವನದಲ್ಲಿ ಬರಲೇ ಬಾರದಿತ್ತು. ಜನ ಆಕೆಗೆ ಮನ್ನಣೆ ಕೊಡಬಾರದು. ತಂದೆ ಇಲ್ಲದ ಮಗಳು ಎಂದು ಹೇಳಿಕೊಂಡು ಬರುತ್ತಾಳೆ ಎಂದು ಹೇಳಿದ್ದಾರೆ.

ಚೈತ್ರಾ ರಿಯಾಕ್ಷನ್ ಏನು?

ಅತ್ತ ತಂದೆ ಆರೋಪದ ಸುದ್ದಿ ಸದ್ದು ಮಾಡುತ್ತಿದ್ದರೆ ಇತ್ತ ಚೈತ್ರಾ ಕುಂದಾಪುರ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಂದೆ ಬಗ್ಗೆ ಬರೆದುಕೊಂಡಿದ್ದಾರೆ.


ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಎಂದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page