Connect with us

LATEST NEWS

ಮಡಿಕೇರಿ ಹೋಂಸ್ಟೇಯಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವು

Published

on

ಮಡಿಕೇರಿ: ಕೊಡಗಿಗೆ ಪ್ರವಾಸಕ್ಕೆಂದು ಬಂದು ಮಡಿಕೇರಿಯ ಹೋಂಸ್ಟೇ ಯಲ್ಲಿ ತಂಗಿದ್ದ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಮುಂಬೈ ಮೂಲದ ಈಶ್ವರ್ ಅವರ ಮಗಳು ವಿಘ್ನೇಶ್ವರಿ(24) ಮೃತ ಯುವತಿಯಾಗಿದ್ದು, ಇದೇ ಶನಿವಾರ ಕೊಡಗು ಜಿಲ್ಲೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು.

ಮಡಿಕೇರಿ ನಗರದ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ತಂಗಿದ್ದರು. ಬಳಿಕ ಕೊಡಗಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿದ ಯುವತಿಯರ ತಂಡ ಭಾನುವಾರವೂ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ಭೇಟಿ ನೀಡಿದ್ದಾರೆ.

ಭಾನುವಾರ ರಾತ್ರಿ ಸ್ನಾನಕ್ಕೆಂದು ವಿಘ್ನೇಶ್ವರಿ ಬಾತ್ ರೂಮಿಗೆ ತೆರಳಿದ್ದ ಯುವತಿ ಬಾತ್ ರೂಮಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಬಾತ್ ರೂಮಿಗೆ ಅಳವಡಿಸಿದ್ದ ಗೀಸರ್ ನಿಂದ ಗ್ಯಾಸ್ ಲೀಕ್ ಆಗಿ ಯುವತಿ ಮೃತಪಟ್ಟಿರಬಹುದು ಎನ್ನಲಾಗಿದೆ. ಯುವತಿ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಜೊತೆಯಲ್ಲಿದ್ದ ಉಳಿದ ನಾಲ್ವರು ಯುವತಿಯರು ಹೋಂಸ್ಟೇ ಮಾಲೀಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ನಂತರ ತಕ್ಷಣವೇ ಮಾಲೀಕ ಮುಕ್ತರ್ ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಯುವತಿ ಮೃತಪಟ್ಟಿದ್ದಾಳೆ. ಯುವತಿಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿ ಬಳಿಕ ಪೋಷಕರಿಗೆ ಹಸ್ತಾಂತರ ಮಾಡಿದ್ದಾರೆ.

ಘಟನೆ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕರಿತಂತೆ ಮಾತನಾಡಿರುವ ಯುವತಿಯ ತಂದೆ ಈಶ್ವರ್, ನನ್ನ ಮಗಳು ಆರೋಗ್ಯವಾಗಿದ್ದಳು.

ನಿತ್ಯ ವಾಕ್ ಕೂಡ ಮಾಡುತ್ತಿದ್ದಳು. ಎರಡು ದಿನ ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಚೆನ್ನಾಗಿಯೇ ಓಡಾಡಿ ನೋಡಿದ್ದಾಳೆ. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮೃತಪಟ್ಟಿರುವುದು ಅನುಮಾನ ಮೂಡಿಸಿದೆ.

ಈ ಕುರಿತು ಸರಿಯಾದ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಹೋಂಸ್ಟೇ ಮಾಲೀಕ ಮುಕ್ತರ್ ಗ್ಯಾಸ್ ಗೀಜರ್ ಗೆ ಕನೆಕ್ಷನ್ ಕೊಟ್ಟಿಲ್ಲ. ಹೇಗೆ ಮೃತಪಟ್ಟಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

LATEST NEWS

ಈ ಪ್ರಾಣಿಯ ಹೃದಯ ಒಂದು ಕೋಣೆಯಷ್ಟು ದೊಡ್ಡದಾಗಿದೆ ಗೊತ್ತಾ..!

Published

on

ಮಂಗಳೂರು : ಪ್ರಪಂಚದಲ್ಲಿ ಅನೇಕ ರೀತಿಯ ಪ್ರಾಣಿಗಳಿವೆ. ಕೆಲವು ಪ್ರಾಣಿಗಳು ತುಂಬಾ ಚಿಕ್ಕದಾಗಿದ್ದರೆ, ಇನ್ನು ಕೆಲವು ಪ್ರಾಣಿಗಳು ತುಂಬಾ ದೈತ್ಯಕಾರವಾಗಿರುತ್ತವೆ. ಆದರೆ ಈ ಒಂದು ಪ್ರಾಣಿ ಉಸಿರಾಡುವಾಗ ಮತ್ತು ಹೃದಯ ಬಡಿಯುವಾಗ ಅದರ ದೇಹದ ಎಲ್ಲಾ ಭಾಗಗಳು ನಡುಗುತ್ತವೆ. ಈ ಹೃದಯವು ಒಂದು ಸಣ್ಣ ಕೋಣೆಯಂತಿದೆ.

ಜಗತ್ತಿನಲ್ಲಿರುವ ಅತ್ಯಂತ ದೊಡ್ಡದಾದ ಜೀವಿ ಎಂದರೆ, ಅದು ನೀಲಿ ತಿಮಿಂಗಿಲ. ಅದರ ಹೃದಯದ ಉದ್ದ, ಅಗಲ ಮತ್ತು ತೂಕದ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದರ ಹೃದಯ ಜಗತ್ತಿನಲ್ಲೇ ಅತಿದೊಡ್ಡ ಹೃದಯ ಎಂದು ಹೇಳಲಾಗುತ್ತದೆ.

ಬ್ಲೂವೇಲ್‌ನ ಹೃದಯ 14 ಅಡಿ ಉದ್ದ, 06 ಅಡಿ ಅಗಲ ಮತ್ತು 05 ಅಡಿ ಎತ್ತರವಿದೆ. ಕೆನಡಾದ ಟೊರೆಂಟೊದಲ್ಲಿರುವ ರಾಯಲ್ ಒಂಟಾರಿಯೊ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಅದರ ಹೃದಯವು 05 ಅಡಿ ಉದ್ದ, 4 ಅಡಿ ಅಗಲ ಮತ್ತು 5 ಅಡಿ ಎತ್ತರವಿದೆ. ಇದರ ತೂಕ 190 ಕೆ.ಜಿ ಅಂದರೆ 4-5 ಜನರು ಒಟ್ಟಿಗೆ ನಿಂತರೆ ಅವರನ್ನು ಸೇರಿಸಿದಾಗ ಸಿಗುವ ತೂಕ ನೀಲಿ ತಿಮಿಂಗಿಲದ ಹೃದಯದ ತೂಕಕ್ಕೆ ಸಮಾನವಾಗಿದೆ.

ಇದನ್ನೂ ಓದಿ: ಉಗುರು ಕಚ್ಚುವ ಅಭ್ಯಾಸ ನಿಮಗೂ ಇದ್ಯಾ..? ಹಾಗಾದರೆ ಈ ಸ್ಟೋರಿಯನ್ನೊಮ್ಮೆ ಓದಿ

ಭೂಮಿಯ ಮೇಲಿನ ಯಾವುದೇ ಜೀವಿಗೆ ಇಷ್ಟು ದೊಡ್ಡ ಹೃದಯವಿಲ್ಲ. ಆಫ್ರಿಕನ್ ಆನೆಯನ್ನು ಪ್ರಸ್ತುತ ಭೂಮಿಯಲ್ಲಿ ವಾಸಿಸುವ ಅತಿದೊಡ್ಡ ಪ್ರಾಣಿ ಎಂದು ಪರಿಗಣಿಸಲಾಗಿದೆ. ಅದರ ಗೋಳಾಕಾರದ ಹೃದಯವು 30 ಪೌಂಡ್ ಅಥವಾ 13.6 ಕಿಲೋಗ್ರಾಂಗಳಷ್ಟು ತೂಗುತ್ತದೆ. ಅಂದರೆ ತಿಮಿಂಗಿಲ ಹೃದಯವು ಆನೆಯ ಹೃದಯಕ್ಕಿಂತ 14 ಪಟ್ಟು ಭಾರವಾಗಿರುತ್ತದೆ.

ಮಾನವನ ಹೃದಯವು 283 ಕಿಲೋ ಗ್ರಾಂ ಇರುತ್ತವೆ. ಅಂದರೆ ನೀಲಿ ತಿಮಿಂಗಿಲದ ಹೃದಯವು ಮಾನವನ ಹೃದಯಕ್ಕಿಂತ 640 ಪಟ್ಟು ಹೆಚ್ಚು ತೂಗುತ್ತದೆ.

ನೀಲಿ ತಿಮಿಂಗಿಲದ ತೂಕ ಎಷ್ಟು?

ನೀಲಿ ತಿಮಿಂಗಿಲಗಳು ಸಾಮಾನ್ಯವಾಗಿ 150 ಟನ್ ಮತ್ತು 200 ಟನ್ ತೂಕವಿರುತ್ತದೆ. ಡೈನೋಸಾರ್‌ಗಳು ಸಹ ಅದರ ಗಾತ್ರವನ್ನು ಹೊಂದಿಸಲು ಸಾಧ್ಯವಾಗವುದಿಲ್ಲ. ಒಂದು ದೊಡ್ಡ ನೀಲಿ ತಿಮಿಂಗಿಲವು ಸುಮಾರು 30 ಮೀಟರ್ ಅಥವಾ 98 ಅಡಿ ಉದ್ದವಿದೆ. ಬೋಯಿಂಗ್ 737ನ ಗಾತ್ರ. ಮರಿ ತಿಮಿಂಗಿಲ ಜನಿಸಿದಾಗ, ಅದು 2-3 ಟನ್ ತೂಕ ಮತ್ತು 8 ಮೀಟರ್ ಉದ್ದವಿರುತ್ತದೆ.

Continue Reading

LATEST NEWS

ಏನಾಶ್ಚರ್ಯ! ‘ಡಾಬಾ ಬಂತು’ ಎಂದಾಕ್ಷಣ ಉಸಿರಾಡಿದ ಮೃತ ವ್ಯಕ್ತಿ

Published

on

ಹಾವೇರಿ: ಬಿಳಿ ಕಾಮಾಲೆ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ ಹಿನ್ನಲೆಯಲ್ಲಿ ಊರಿಗೆ ಕರೆದುಕೊಂದು ಬರುತ್ತಿದ್ದಾಗ ದಾರಿ ಮಧ್ಯೆ ಎದ್ದು ಕುಳಿತ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.

ಬಿಷ್ಣಪ್ಪ ಅಶೋಕ್ ಗುಡಿಮನಿ ಬದುಕುಳಿದ ವ್ಯಕ್ತಿ. ಬಿಳಿ ಕಾಮಾಲೆ ರೋಗದಿಂದ ಬಳಲುತ್ತಿದ್ದ ಇವರು ಅನಾರೋಗ್ಯ ಹಿನ್ನಲೆಯಲ್ಲಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾಗಲೇ ಉಸಿರು ನಿಲ್ಲಿಸಿದ್ದರಿಂದ ಇವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು.

ಹಾಗಾಗಿ ಕುಟುಂಬದವರು ಅವರನ್ನು ಧಾರವಾಡದಿಂದ ಬಂಕಾಪುರಕ್ಕೆ ಆ್ಯಂಬುಲೆನ್ಸ್‌ ಅಲ್ಲಿ ಕರೆದೊಯ್ಯುತ್ತಿದ್ದರು. ಪತಿ ಸಾವನ್ನಪ್ಪಿದ್ದಾನೆ ಎಂಬ ನೋವಲ್ಲಿ ದಾರಿಯುದ್ದಕ್ಕೂ ಅಳುತ್ತಿದ್ದ ಪತ್ನಿ, ಬಳಿಕ ನಿನ್ನ ಇಷ್ಟದ ಡಾಬಾ ಬಂತು, ನಿನ್ನ ಅಂಗಡಿಯೂ ಬಂತು ಊಟ ಮಾಡುತ್ತೀಯಾ ಎಂದು ಗೋಳಾಡಿದ್ದಾಳೆ. ಪತ್ನಿ ಹೀಗೆ ಹೇಳುತ್ತಿದ್ದಂತೆ ಮೃತ ಪಟ್ಟ ವ್ಯಕ್ತಿ ಎದ್ದು ಕುಳಿತಿದ್ದಾನೆ. ಬಳಿಕ ಆತನನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

FILM

ಹ*ಲ್ಲೆಗೊಳಗಾದಾಗ ಆಟೋದಲ್ಲಿ ಹೋಗಿದ್ಯಾಕೆ ? ಘಟನೆಯ ಬಗ್ಗೆ ಸೈಫ್ ಬಿಚ್ಚಿಟ್ರು ಸತ್ಯ!

Published

on

ಮಂಗಳೂರು/ಮುಂಬೈ : ಸೈಫ್ ಅಲಿ ಖಾನ್ ಮೇಲೆ ಜ.16 ರಂದು ದಾ*ಳಿ ನಡೆದಿತ್ತು. ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಅವರ ಮೇಲೆ ನಡೆದ ಹ*ಲ್ಲೆ ಪ್ರಕರಣದ ಬಗ್ಗೆ ಹಲವು ಊಹಾಪೋಹಾಗಳು ಹುಟ್ಟಿಕೊಂಡಿದ್ದವು. ಭದ್ರತೆಯ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿದ್ದವು. ಅದರಲ್ಲಿ ಪ್ರಮುಖವಾಗಿ ಹ*ಲ್ಲೆಗೊಳಗಾದ ಸೈಫ್‌ನನ್ನುಆಟೋದಲ್ಲಿ ಆಸ್ಪತ್ರೆಯಲ್ಲಿ ಸಾಗಿಸಿದ್ಯಾಕೆ? ಐಷಾರಾಮಿ ಕಾರುಗಳ ಒಡೆಯನಾಗಿರುವ ಸೈಫ್‌ ಯಾಕೆ ಆಟೋದಲ್ಲಿ ಹೋದ್ರು? ಅನ್ನೋದು. ಇದಕ್ಕೆಲ್ಲ ಇದೀಗ ಸೈಫ್ ಉತ್ತರ ನೀಡಿದ್ದಾರೆ.

ದಾ*ಳಿಯ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಸೈಫ್ ಮಾತಾನಾಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹ*ಲ್ಲೆಗೊಳಗಾದ ಸಂದರ್ಭದ ಬಗ್ಗೆ ವಿವರಿಸಿದ್ದಾರೆ.

ಕರೀನಾ ಊಟಕ್ಕಾಗಿ ಹೊರಗೆ ಹೋಗಿದ್ದು, ನನಗೆ ಬೆಳಗ್ಗೆ ಸ್ವಲ್ಪ ಮುಖ್ಯವಾದ ಕೆಲಸವಿದ್ದ ಕಾರಣ ಮನೆಯಲ್ಲೇ ಇದ್ದೆ. ಊಟ ಮುಗಿಸಿ ಕರೀನಾ ಮನೆಗೆ ವಾಪಾಸಾಗಿದ್ದಳು. ನಾವು ಸ್ವಲ್ಪ ಹೊತ್ತು ಮಾತಾಡಿ ಮಲಗಿದೆವು. ಅಷ್ಟರಲ್ಲಿ ಮನೆಯ ಸಹಾಯಕನೊಬ್ಬ ಯಾರೋ ಒಬ್ಬ ಮನೆಗೆ ನುಸುಳಿರುವ ಬಗ್ಗೆ ತಿಳಿಸಿದ. ಆತ ಜೆಹ್‌ನ ಕೋಣೆಯಲ್ಲಿದ್ದು, ಚಾ*ಕು ತೋರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ ಎಂದು ಹೇಳಿದ.

ತಕ್ಷಣ  ನಾವು ಅಲ್ಲಿಗೆ ಓಡಿದೆವು. ಜೆಹ್‌ನ ಹಾಸಿಗೆಯ ಮೇಲಿದ್ದ ಅವನನ್ನು ಎಳೆದೆ. ಬಳಿಕ ಇಬ್ಬರ ನಡುವೆ ಫೈ*ಟ್ ನಡೆಯಿತು. ಈ ವೇಳೆ ಆತ ನನ್ನ ಬೆನ್ನಿಗೆ ಬ*ಡಿಯುತ್ತಿದ್ದ. ಕುತ್ತಿಗೆ ಸೀ*ಳಲು ಯತ್ನಿಸಿದಾಗ ನಾನು ತಡೆದೆ. ನನ್ನ ಅಂಗೈ, ಮಣಿಕಟ್ಟು ಮತ್ತು ತೋಳಿಗೆ ಆತ ಚಾ*ಕುವಿನಿಂದ ಚು*ಚ್ಚಿದ. ಆತ ಎರಡೂ ಕೈಗಳಿಂದ ದಾ*ಳಿ ನಡೆಸುತ್ತಿದ್ದ. ಈ ಸಂದರ್ಭ ಮನೆ ಕೆಲಸಗಾರ್ತಿ ಗೀತಾ ಅವನನ್ನು ನನ್ನಿಂದ ಎಳೆದು ದೂರ ತಳ್ಳಿದಳು. ಬಳಿಕ ನಾವಿಬ್ಬರೂ ಬಾಗಿಲು ಮುಚ್ಚಿದೆವು. ಆ ಸಮಯದಲ್ಲಿ ನಾನು ರ*ಕ್ತದಲ್ಲಿ ಮುಳುಗಿದ್ದೆ. ಬಲಗಾಲಿನ ಸಂವೇದನೆ ಕಳೆದುಕೊಂಡಿದ್ದೆ. ಯಾಕೆಂದರೆ, ಆತನ ಬೆನ್ನುಮೂಳೆಗೆ ಚಾ*ಕುವಿನಿಂದ ಇರಿದಿದ್ದ. ಆತ ಬಂದ ದಾರಿಯಿಂದ ತಪ್ಪಿಸಿಕೊಂಡ. ಕರೀನಾ ರಿಕ್ಷಾಗಾಗಿ ಕೂಗಿದಳು. ರಿಕ್ಷಾದವನು ಬಂದು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದ ಎಂದಿದ್ದಾರೆ.

ಶಾಕ್ ಕೊಟ್ಟ ತೈಮೂರ್ ಪ್ರಶ್ನೆ!

ಬೆನ್ನಿನಲ್ಲಿ ಏನೋ ತೊಂದರೆ ಇರುವಂತೆ ನನಗೆ ಅನಿಸಿತ್ತು. ಇದನ್ನು ಕರೀನಾಳಲ್ಲೂ ಹೇಳಿದೆ. ಅದಕ್ಕವಳು ಆಸ್ಪತ್ರೆಗೆ ಹೋಗು. ನಾನು ಸಹೋದರಿಯ ಮನೆಗೆ ಹೋಗುತ್ತೇನೆ ಎಂದಳು. ನಾನು ಚೆನ್ನಾಗಿದ್ದೇನೆ, ಸಾ*ಯುವುದಿಲ್ಲ ಎಂದು ಆಕೆಯನ್ನು ಸಂತೈಸಿದೆ. ಆಗ ಮಗ ತೈಮೂರ್, ನೀನು ಸಾ*ಯುತ್ತೀಯಾ ಎಂದು ಕೇಳಿದ. ನಾನು ‘ಇಲ್ಲ’ ಎಂದು ಹೇಳಿದೆ.

ಇದನ್ನೂ ಓದಿ : ತಾನು ಪ್ರೀತಿಸುವ ಪುರುಷನ ಬಳಿ ಮಾತ್ರ ಮಹಿಳೆ ಈ ರೀತಿ ಇರುತ್ತಾಳೆ..

ಆಟೋದಲ್ಲಿ ಹೋಗಿದ್ಯಾಕೆ?

ಸೈಫ್ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಆದರೆ, ಹ*ಲ್ಲೆಗೊಳಗಾದಾಗ ಆಟೋದಲ್ಲಿ ಯಾಕೆ ಹೋದರು ಎಂಬುದು ಬಹುದೊಡ್ಡ ಪ್ರಶ್ನೆ. ಇದಕ್ಕೂ ಸೈಫ್ ಉತ್ತರಿಸಿದ್ದಾರೆ. ರಾತ್ರಿಯಿಡೀ ಯಾರೂ ಉಳಿಯುವುದಿಲ್ಲ. ಎಲ್ಲರಿಗೂ ಮನೆ ಇರುತ್ತೆ ಅಲ್ವಾ? ಅವರು ಮನೆಗೆ ಹೋಗುತ್ತಾರೆ. ನಮ್ಮ ಮನೆಯಲ್ಲಿ ಕೆಲವರು ಉಳಿದುಕೊಳ್ಳುತ್ತಾರೆ. ಆದರೆ, ಅವರು ಚಾಲಕರಲ್ಲ. ರಾತ್ರಿ ಹೊರಗೆ ಹೋಗುವುದಿದ್ದರೆ ಅಥವಾ ಏನಾದರೂ ಅಗತ್ಯವಿದ್ದರೆ ಚಾಲಕರನ್ನು ಉಳಿದುಕೊಳ್ಳಲು ಹೇಳುವುದು. ಆದರೆ, ಅಂದು ಅಗತ್ಯವಿರಲಿಲ್ಲ. ಅವತ್ತು ಕಾರಿನ ಕೀ ಸಿಕ್ಕಿದ್ದರೆ ನಾನೇ ಕಾರು ಓಡಿಸುತ್ತಿದ್ದೆ. ಅದೃಷ್ಟವಶಾತ್ ನಾನು ಹಾಗೆ ಮಾಡಲಿಲ್ಲ. ಏಕೆಂದರೆ, ನನ್ನ ಬೆನ್ನನ್ನು ಹೆಚ್ಚು ಅಲುಗಾಡಿಸಬಾರದಿತ್ತು. ಕರೆ ಮಾಡಿ ಡ್ರೈವರ್‌ನ್ನು ಕರೆಯಬಹುದಿತ್ತು. ಆದರೆ, ಆತ ಅಲ್ಲಿಗೆ ಬರಲು ಸಮಯವಾಗುತ್ತದೆ ಎಂದು ತಿಳಿದು ಬೇಗನೆ ಆಸ್ಪತ್ರೆಗೆ ಹೋಗುವ ಉದ್ದೇಶದಿಂದ ಆಟೋದಲ್ಲಿ ಹೋದೆ ಎಂದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page