Connect with us

BANTWAL

ವಿಟ್ಲದಲ್ಲಿ ಬಜರಂಗದಳ ಮುಖಂಡನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಪುತ್ತೂರು ಆಸ್ಪತ್ರೆಗೆ ದಾಖಲು!!

Published

on

ಬಂಟ್ವಾಳ: ಬಜರಂಗದಳದ ವಿಟ್ಲ ಪ್ರಖಂಡ ಸಂಚಾಲಕರಾದ ಚಂದ್ರಹಾಸ ಕನ್ಯಾನ ರವರಿಗೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಾಲೆತ್ತೂರಿನಲ್ಲಿ ಇಂದು ( ಭಾನುವಾರ) ಸಂಜೆ ನಡೆದಿದೆ.

ಮಾರಕಾಸ್ತ್ರಗಳೊಂದಿಗೆ ಆಗಮಿಸಿದ 12 ಜನರ ತಂಡವು ಚಂದ್ರಹಾಸ್ ರವರ ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಯಾವ ಕಾರಣಕ್ಕೆ ಚಂದ್ರಹಾಸ್ ಮೇಲೆ ತಂಡ ದಾಳಿ ನಡೆಸಿದೆ ಎಂದು ಇನ್ನಷ್ಟೆ ತಿಳಿದು ಬರಬೇಕಿದ್ದು, ವಿಟ್ಲ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

BANTWAL

ದ್ವಿಚಕ್ರ ವಾಹನಕ್ಕೆ ಕಾರು ಡಿ*ಕ್ಕಿ; ಗಂ*ಭೀರ ಗಾಯಗೊಂಡಿದ್ದ ಸವಾರ ಸಾ*ವು

Published

on

ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿ ಮಂಚಿ ಕುಕ್ಕಾಜೆ ನಿವಾಸಿ ಲಿಖಿತ್‌(22) ಎಂಬಾತನಿಗೆ ಕಾರು ಡಿಕ್ಕಿಯಾಗಿ ಗಂ*ಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾ*ವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಈತ ರಜೆಯಲ್ಲಿ ಸ್ಟೇಜ್ ಡೆಕೋರೇಷನ್ ಕೆಲಸಕ್ಕೆ ಹೋಗುತ್ತಿದ್ದ ಎಂದು ಹೇಳಲಾಗಿದೆ. ಲಿಖಿತ್ ಮೇ 13ರ ಮಂಗಳವಾರ ಸಂಜೆ ಸುಮಾರು 5.30 ರ ವೇಳೆಗೆ ಬಿಸಿರೋಡಿನಿಂದ ಮನೆ ಕಡೆಗೆ ಸಂಚರಿಸುತ್ತಿದ್ದ ವೇಳೆ ಪಾಣೆಮಂಗಳೂರು ಎಂಬಲ್ಲಿ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಕಾರು ಡಿ*ಕ್ಕಿಯಾಗಿದೆ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣ; ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಅಪ*ಘಾತದಲ್ಲಿ ಗಂ*ಭೀರವಾಗಿ ಗಾಯಗೊಂಡಿದ್ದ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈತ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Continue Reading

BANTWAL

ಇಂದು ಮಧ್ಯಾಹ್ನ ಬೆಂಗಳೂರಿಗೆ ತಲುಪಲಿರುವ ಹುತಾತ್ಮ ಯೋಧ ಮುರಳಿ ನಾಯಕ್ ಪಾರ್ಥಿವ ಶರೀರ

Published

on

ಮಂಗಳೂರು/ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಸೇನಾ ಸಂಘರ್ಷದಲ್ಲಿ ನಿನ್ನೆ ಭಾರತೀಯ ಸೇನೆಯ ವೀರ ಯೋಧ ಮುರಳಿ ನಾಯ್ಕ್ ಹು*ತಾತ್ಮರಾಗಿದ್ದಾರೆ.

ಮೃ*ತ ಯೋಧನ ಪಾರ್ಥೀವ ಶ*ರೀರ ಇಂದು ಗ್ರಾಮಕ್ಕೆ ಆಗಮಿಸಲಿದೆ. ಮುರಳಿ ನಾಯಕ್ ಬಡತನದ ಹಿನ್ನೆಲೆಯಿಂದ ಬಂದವರು. ಸುಮಾರು 23 ವರ್ಷ ವಯಸ್ಸಿನ ಮುರಳಿ ನಾಯ್ಕ್ ಅವರು ಡಿಸೆಂಬರ್ 2022 ರಲ್ಲಿ ಸೇನೆಗೆ ಸೇರಿದ್ದರು. ಅವರ ಪೋಷಕರಾದ ಎಂ. ಜ್ಯೋತಿಬಾಯಿ ಮತ್ತು ಎಂ. ಶ್ರೀರಾಮ್ ನಾಯ್ಕ್, ದಿನಗೂಲಿ ಕಾರ್ಮಿಕರು.

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ಉಗ್ರರ ಮೇಲೆ ಆಪರೇಷನ್ ಸಿಂಧೂರ್ ನಡೆಸಿತು. ಇದರಿಂದ ಕೆರಳಿದ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ದಾಳಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರ ಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿ ಏಕೈಕ ಪುತ್ರ ಮುರಳಿ ನಾಯಕ್ ಹು*ತಾತ್ಮರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಪಾಕ್‌ನ ದಾಳಿಗೆ ಜಮ್ಮು-ಕಾಶ್ಮೀರದ ಅಧಿಕಾರಿ ಸಾ*ವು

ದುರಂತ ಸುದ್ದಿ ತಿಳಿದ ತಕ್ಷಣವೇ ಆಂಧ್ರಪ್ರದೇಶದ ಸಮಾಜ ಕಲ್ಯಾಣ ಸಚಿವೆ ಸವಿತಾ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದ ಪರವಾಗಿ ರೂ. 5 ಲಕ್ಷ ಆರ್ಥಿಕ ನೆರವನ್ನು ನೀಡಿದರು.

Continue Reading

BANTWAL

ತಲವಾರು ತೋರಿಸಿ ಜೀವ ಬೆದರಿಕೆ ಪ್ರಕರಣ; ಮಾದ್ಯಮದ ಮೊರೆ ಹೋದ ದಂಪತಿ

Published

on

ವಿಟ್ಲ : ದಂಪತಿಗೆ ತಲವಾರು ತೋರಿಸಿ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುಣಚ ನಿವಾಸಿ ಹರೀಶ್ ಎನ್. ಎಂಬವರು ಈ ಕುರಿತು ಪೊಲೀಸ್ ದೂರು ನೀಡಿದ್ದರು. ಇದೀಗ ಮತ್ತೆ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ.

ಸಂತ್ರಸ್ತರಾದ ಹರೀಶ್ ಭಟ್ ಹಾಗೂ ಶ್ರೀದೇವಿ ನ್ಯಾಯಕ್ಕಾಗಿ ಇದೀಗ ಮಾದ್ಯಮದ ಮೊರೆ ಹೋಗಿದ್ದಾರೆ. ಕೆಲವೊಂದು ಸಮಸ್ಯೆಯಿಂದ ದಂಪತಿಯು ಪೆಟ್ರೋಲ್ ಪಂಪ್ ಮುಚ್ಚಿದ್ದರು. ಇದಾದ ಬಳಿಕ ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ ಅವರು ದಂಪತಿ ಬಳಿ ಹೋಗಿ ಆವಾಝ್ ಹಾಕಿದ್ದಾರೆ. ‘ನನ್ನ ತಾಕತ್ ಏನೂ ಅಂತ ತೋರಿಸಿಕೊಡುತ್ತೇನೆ’ ಎಂದು ಬೆದರಿಕೆ ಹಾಕಿರುವುದಾಗಿ ದಂಪತಿ ತಿಳಿದ್ದಾರೆ. ಇದಾದ ಬಳಿಕ ಸ್ವತಃ ಮುರಳೀಕೃಷ್ಣ ಅವರಿಗೆ ಶ್ರೀದೇವಿ ಬುದ್ಧಿ ಮಾತು ಹೇಳಿದ್ದಾರೆ. “ನೀವು ಈ ರೀತಿ ಅನ್ಯಾಯದ ದಾರಿ ಹಿಡಿಯುವುದು ಸರಿಯಲ್ಲ. ನೀವೊಬ್ಬ ಹಿಂದೂ ಸಂಘಟಕನಾಗಿ ಈ ಬೆದರಿಕೆಯೊಡ್ಡೋದು ತಪ್ಪು. ಸಮಾಜದಲ್ಲಿ ಗೌರವದ ಸ್ಥಾನದಲ್ಲಿರುವ ನೀವು ನಮ್ಮನ್ನ ಬೆದರಿಸಿ ಅನ್ಯಾಯ ಮಾಡುವುದು ಎಷ್ಟು ಸರಿ..?” ಎಂಬೆಲ್ಲಾ ಪ್ರಶ್ನೆ ಹಾಕಿದ್ದರು.

“ಮುರಳೀಕೃಷ್ಣ ಹಸಂತಡ್ಕ ಅವರು ಈ ರೀತಿ ಬೆದರಿಕೆ ಹಾಕುವ ಬದಲು ಕಾನೂನು ರೀತಿಯಲ್ಲಿ ನೋಡಿಕೊಳ್ಳಲಿ. ಮುರಳೀಕೃಷ್ಣ ನಮಗೆ ಬೆದರಿಸಿ ಆವಾಝ್ ಹಾಕಿರೋದು ತುಂಬಾ ನೋವಾಗಿದೆ. ಪಾಲುದಾರಿಕೆಯಲ್ಲಿ ಒಗ್ಗಟ್ಟುತನ ಇರಬೇಕು. ಆದರೆ ಮುರಳೀಕೃಷ್ಣ ನನ್ನದೇ ಎಲ್ಲವೂ ಎಂಬಂತೆ ನಮಗೆ ಮೋಸ ಮಾಡಿದ್ರು. ಒಂದೊಮ್ಮೆ ಪಂಚಾಯಿತಿ ಮಾಡಿ ವ್ಯವಹಾರವನ್ನ ಸರಿಪಡಿಸಲಾಯಿತು. ಆದ್ರೆ ಮುರಳೀಕೃಷ್ಣ ಅವರು ಸ್ವಲ್ಪ ಸಮಯದ ಬಳಿಕ ಮತ್ತೆ ಅಡ್ಡಗಾಲಿಟ್ಟರು. ಸದ್ಯ ನಮಗೆ ಮುರಳೀಕೃಷ್ಣ ಅವರಿಂದ ಅನ್ಯಾಯ ಆಗಿದೆ ಎಂದು ಕಾನೂನು ರೀತಿಯಲ್ಲಿ ಮೊರೆ ಹೋಗಿದ್ದೇವೆ” ಎಂದು ಹೇಳಿದ್ದಾರೆ.

“ಕಳೆದೆರಡು ದಿನಗಳ ಹಿಂದೆ ಮುರಳೀಕೃಷ್ಣ ಹಸಂತಡ್ಕ ಅವರು ಆಣೆ ಪ್ರಮಾಣ ಮಾಡಲು ಬನ್ನಿ ಎಂದು ಮಾಧ್ಯಮದ ಮುಖಾಂತರ ಹೇಳಿದ್ದರು. ಆಣೆ ಪ್ರಮಾಣಕ್ಕೆ ದಂಪತಿಯಾಗಿ ನಾವು ಕೂಡ ರೆಡಿ ಇದ್ದೇವೆ. ಆದ್ರೆ ಸದ್ಯ ನಾವು ಕಾನೂನು ಮೊರೆ ಹೋಗಿರುವುದರಿಂದ ನ್ಯಾಯಾಲಯದಲ್ಲಿ ಏನು ತೀರ್ಪು ಸಿಗುತ್ತದೋ ಅದಕ್ಕೆ ಬದ್ಧ. ಮುರಳೀಕೃಷ್ಣ ಅವರು ಕೂಡ ಕಾನೂನು ರೀತಿಯಲ್ಲಿ ಎದುರಿಸಲಿ. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ನಾವು ಕೂಡ ದೈವ ದೇವರನ್ನ ನಂಬುವವರು. ಅದು ಬಿಟ್ಟು ಆಣೆ ಪ್ರಮಾಣಕ್ಕೆ ಬನ್ನಿ ಎಂದು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಸರಿಯಲ್ಲ. ಇಷ್ಟೆಲ್ಲ ಆದ ಮೇಲೆ ಮುರಳೀಕೃಷ್ಣ ಅವ್ರು ಸುರತ್ಕಲ್ ಮೂಲದ ವ್ಯಕ್ತಿಯಿಂದ ಮತ್ತೆ ಬೆದರಿಕೆ ಹಾಕಿಸಿದ್ದಾರೆ. ಬೆದರಿಕ ಮೇಲೆ ಬೆದರಿಕೆ ಹಾಕಿ ನಮ್ಮಲ್ಲಿ ಆತಂಕವನ್ನ ಸೃಷ್ಟಿ ಮಾಡಿದ್ದಾರೆ” ಎಂದು ದಂಪತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page