Connect with us

DAKSHINA KANNADA

ಅಪೌಷ್ಠಿಕತೆಯ ಜಾಗೃತಿ ಕಾರ್ಯಕ್ರಮದಲ್ಲಿ ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ

Published

on

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಯೋಜನೆ ಅಪೌಷ್ಟಿಕತೆಯ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಜ.21ರಂದು ಪೂರ್ವ ಮಹಾ ಶಕ್ತಿಕೇಂದ್ರದ ಕದ್ರಿ 32 ನೇ ವಾರ್ಡಿನ ಮಹಿಳಾ ಮಂಡಳಿಯಲ್ಲಿ ಪೋಷನ್ ಪಕ್ವಾಡ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.

ಮಂಡಲದ ಪ್ರಧಾನ ಕಾರ್ಯದರ್ಶಿ ರೂಪಾ ಡಿ ಬಂಗೇರ ಮಾತನಾಡಿ “ಪೋಷನ್ ಪಕ್ವಾಡ ದ ಬಗ್ಗೆ ಕೆಲವು ಮಾಹಿತಿ ನೀಡಿ ಗರ್ಭಿಣಿ ಮಹಿಳೆಯರು ಯಾವ ರೀತಿ ಪೌಷ್ಟಿಕ ಆಹಾರ ಸೇವಿಸಿ ತಮ್ಮಆರೋಗ್ಯಕಾಪಾಡಿಕೊಳ್ಳಬೇಕು” ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಪ್ರಧಾನ ಮಂತ್ರಿಗಳ ಹತ್ತು ಹಲವು ಯೋಜನೆಗಳ ಬಗ್ಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ಸಿಗುವ ಸವಲತ್ತು ಗಳ ಬಗ್ಗೆ ಸವಿವರವಾಗಿ ತಿಳಿಸಿ,

“ದಕ್ಷಿಣ ಮಂಡಲ ಮಹಿಳಾ ಮೋರ್ಚಾ ಈ ಮೊದಲು ಮಾಡಿದ ಕಾರ್ಯಕ್ರಮವಾದ ಜಪ್ಪಿನಮೊಗರು ವಾರ್ಡಿನ ಟೆಂಟ್ ಹೌಸ್ ಮಕ್ಕಳಿಗೆ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ನಡೆಸಿದ ಮಾಹಿತಿ ಕಾರ್ಯಗಾರ ಕಾರ್ಯಕ್ರಮವನ್ನು

ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಧ್ಯಕ್ಷರು ನಮ್ಮನ್ನು ಶ್ಲಾಘಿಸಿದ್ದಾರೆ” ಎಂದು ಹೇಳಿ ನಮ್ಮ ಮಹಿಳಾ ಮೋರ್ಚಾದ ತಂಡ ಇನ್ನಷ್ಟು ಪಕ್ಷ ಸಂಘಟನೆ ಕಾರ್ಯಕ್ರಮ ಮಾಡುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮನಪಾ ಸದಸ್ಯೆ ಶ್ರೀಮತಿ ಶಕೀಲಾ ಕಾವ , ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಮತ್ತು ಮಹಿಳಾ ಮೋರ್ಚಾ ದ ಪ್ರಭಾರಿ ಶ್ರೀಮತಿ ಸುಪ್ರೀತಾ ಶೆಟ್ಟಿ, ಮಂಡಲದ ಕಾರ್ಯದರ್ಶಿ ವಿನೋದ್ ಮೆಂಡನ್, ಆ ಭಾಗದ ಬೂತ್ ಅಧ್ಯಕ್ಷ ಪ್ರವೀಣ್ ಗುಂಡಲಿಕೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹರಿಯಾಪ್ಪ ಸಾಲಿಯಾನ್,ಮತ್ತು ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಹರಿಣಿ ಪ್ರೇಮ್,

ಉಪಾಧ್ಯಕ್ಷೆ ಶ್ರೀಮತಿ ರೂಪಾ, ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಲೋಕೇಶ್, ಪ್ರಿಯಾ ಕೋಟ್ಯಾನ್, ಖಜಾಂಜಿ ಶ್ರೀಮತಿ ಮಾಲತಿ ಅರುಣ್, ಸದಸ್ಯರಾದ ಶ್ರೀಮತಿ ಕವಿತಾ, ಭಾರತಿ ಕಿಣಿ, ಮಹಾಶಕ್ತಿ ಕೇಂದ್ರದ ಶ್ರೀಮತಿ ಯಶೋದಾ, ಶ್ರೀಮತಿ ಸವಿತಾ ರೈ ಮತ್ತು ಸಾಮಾಜಿಕ ಜಾಲತಾಣದ ಸಂತೋಷ್ ಮತ್ತು ಪರಿಸರದ ನಿವಾಸಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗರ್ಭಿಣಿ ಮಹಿಳೆಗೆ ಸೀಮಂತ ಶಾಸ್ತ್ರ ಮಾಡಿ ಮಹಿಳಾ ಮೋರ್ಚಾದ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿ ತಂದ

ಪೌಷ್ಟಿಕಯುಕ್ತ ತಿಂಡಿ ತಿನಿಸು ಬಡಿಸಿ, ಹೂ ಮುಡಿಸಿ, ಬಳೆ ತೊಡಿಸಿ, ಸೀರೆ ಉಡುಗೊರೆ ಕೊಟ್ಟು, ಆರತಿ ಮಾಡಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಹರಿಣಿ ಪ್ರೇಮ್ ಕಾರ್ಯಕ್ರಮ ನಿರೂಪಿಸಿದರು.

ಕವಿತಾ ಪ್ರಾರ್ಥನೆಗೈದು ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.

 

DAKSHINA KANNADA

WATCH : ಸಿನಿಮೀಯ ರೀತಿಯಲ್ಲಿ ನಡೆದಿತ್ತು ಕಾರ್ ಚೇಸಿಂಗ್! ಸುಹಾಸ್ ಹ*ತ್ಯೆಯ ಮತ್ತೊಂದು ಸಿಸಿ ಟಿವಿ ವೀಡಿಯೋ ವೈರಲ್

Published

on

ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸಿಸಿಟಿವಿ ವೀಡಿಯೋ ವೈರಲ್ ಆಗುತ್ತಿದೆ.

ಸಿನಿಮೀಯ ರೀತಿಯಲ್ಲಿ ಕಾರ್ ಚೇಸಿಂಗ್ : 

ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದ ಸುಹಾಸ್ ಶೆಟ್ಟಿ ಹತ್ಯೆಯ ವೀಡಿಯೋ, ಸಿಸಿ ಕ್ಯಾಮೆರಾದ ವೀಡಿಯೋ ಈಗಾಗಲೇ ವೈರಲ್ ಆಗಿವೆ. ಇದೀಗ ಮತ್ತೊಂದು ವೀಡಿಯೋ ವೈರಲ್ ಆಗಿದೆ.

ಸಿನಿಮೀಯ ರೀತಿಯಲ್ಲಿ ಕಾರ್ ಚೇಸಿಂಗ್ ಮಾಡಿ ಭೀಕರವಾಗಿ ಸುಹಾಸ್ ಶೆಟ್ಟಿ ಹ*ತ್ಯೆ ಮಾಡಲಾಗಿದೆ. ಕೊ*ಲೆ ಆರೋಪಿ ಸಫ್ವಾನ್ ಚಲಾಯಿಸುತ್ತಿದ್ದ ಮೀನು ಸಾಗಾಟದ ಪಿಕಪ್ ವಾಹನ ಕಾರನ್ನು ಚೇಸ್ ಮಾಡಿ ಡಿ*ಕ್ಕಿ ಹೊಡೆಯುವ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಮೀನು ಸಾಗಾಟದ ವಾಹನ ಓವರ್ ಟೇಕ್ ಮಾಡುತ್ತಿದ್ದಂತೆಯೇ ಅಲ್ಲಿ ಜನ ಸೇರಿದ್ದರು. ವಾಹನ ಡಿ*ಕ್ಕಿ ಹೊಡೆದು ಅಟ್ಟಾಡಿಸಿಕೊಂಡು ಹೋಗುವಾಗಲೂ ಜನರು ಮೂಕ ಪ್ರೇಕ್ಷಕರಂತೆ ನಿಂತಿದ್ದರು.

ನಾಳೆ(ಮೇ.25) ಬಜಪೆ ಚಲೋ :

ಮೇ 1 ರಂದು ಸಂಜೆ 7 ಗಂಟೆಗೆ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೊಂದು ಪಕ್ಕಾ ಪ್ರೀ ಪ್ಲ್ಯಾನ್ಡ್ ಮರ್ಡರ್ ಎಂದು ಹಿಂದೂ ಸಂಘಟನೆಗಳು ಹೇಳಿದ್ದು, ಈ ಕೃ*ತ್ಯದಲ್ಲಿ ಮೂವತ್ತಕ್ಕೂ ಅಧಿಕ ಜನ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಕಾಂಕ್ರೀಟ್‌ ಮಿಕ್ಸಿಂಗ್‌ ವಾಹನದಡಿಗೆ ಬಿದ್ದು ಮಹಿಳೆ ಸಾ*ವು

ಸುಹಾಸ್ ಪ್ರಕರಣವನ್ನು ಎನ್ ಐ ಎ ಗೆ ಒಪ್ಪಿಸಲು ಹಿಂದೂ ಸಂಘಟನೆಗಳ ಆಗ್ರಹಿಸುತ್ತಿದೆ. ಮತ್ತೊಂದೆಡೆ, ನಾಳೆ ಮಧ್ಯಾಹ್ನ ಮೂರು ಗಂಟೆಗೆ ಬಜಪೆ ಚಲೋ  ಹಮ್ಮಿಕೊಳ್ಳಲಾಗಿದೆ. ಬಜ್ಪೆ ಶಾರಾದ ಮಂಟಪದಲ್ಲಿ ಹಕ್ಕೊತ್ತಾಯ ಸಭೆ ನಡೆಯಲಿದ್ದು,  ಜಿಲ್ಲೆಯಾದ್ಯಂತ ಸಾವಿರಾರು ಜನ ಸೇರುವ ನಿರೀಕ್ಷೆಯಿದೆ.

Continue Reading

DAKSHINA KANNADA

ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ಟಾಪ್​ ರ್ಯಾಂಕ್​ ಪಡೆದಿರುವವರ ಪಟ್ಟಿ

Published

on

ಮಂಗಳೂರು/ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳಲ್ಲಿ ನಡೆಸಿದ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ.


ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಕೆಇಎ ಕಚೇರಿಯಲ್ಲಿ ಇಂದು ಸಿಇಟಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಆ ಪೈಕಿ 3ಲಕ್ಷದ 11 ಸಾವಿರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ತಿಳಿಸಿದರು.

ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿ ಚೈತ್ಯನ್ಯ ಸಿಬಿಎಸ್ಇ ಶಾಲೆಯ 98.67 ಶೇಕಡಾ ಅಂಕ ಗಳಿಸುವುದರೊಂದಿಗೆ ಭವೇಶ್ ಜಯಂತಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ ಇದರ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ 99.33 ಶೇಕಡಾ ಅಂಕದೊಂದಿಗೆ ಎರಡನೇ ರ್ಯಾಂಕ್ ಪಡೆದಿದ್ದಾರೆ. 99 ಶೇಕಡಾ ಪಡೆದು ದಿನೇಶ್ ಗೋಮತಿ ಶಂಕರ್ ಅರುಣಾಚಲಂ 3ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಗ್ರಿಕಲ್ಚರ್ ವಿಭಾಗದಲ್ಲಿ ಅಕ್ಷಯ್ ಎಂ ಪ್ರಥಮ ಸ್ಥಾನ, ಸಾಯಿಶ್ ಶರವಣ ಪಂಡಿತ್ ದ್ವಿತೀಯ ಸ್ಥಾನ ಹಾಗೂ ಸುಚಿತ್.ಪಿ. ಪ್ರಸಾದ್ ಮೂರನೇ ಸ್ಥಾನ ಗಳಿಸಿದ್ದಾರೆ ಎಂದರು.

ಪಶು ವೈದ್ಯಕೀಯ ವಿಭಾಗದಲ್ಲಿ ಯಲಹಂಕದ ನಾರಾಯಣ ಇ-ಟೆಕ್ನೋ ಕಾಲೇಜಿನ ಹರೀಶ್ ರಾಜ್ ಪ್ರಥಮ ರ್ಯಾಂಕ್, ಹೆಚ್ಎಸ್ಆರ್ ಲೇಔಟ್ ನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆತ್ರೇಯ ನ್ಯಾಷನಲ್ ಪಬ್ಲಿಕ್ಸ್ಕೂಲ್ ವಿದ್ಯಾರ್ಥಿ ಆತ್ರೇಯ ದ್ವಿತೀಯ ರ್ಯಾಂಕ್ ಹಾಗೂ ಮಂಗಳೂರಿನ ವಳಚ್ಚಿಲ್ ನ ಎಕ್ಸ್ ಪರ್ಟ್ ಕಾಲೇಜಿನ ಸಫಲ್ ಶೆಟ್ಟಿ ಮೂರನೇ ರ್ಯಾಂಕ್ ಗಳಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ

ಇನ್ನು ಡಿ ಫಾರ್ಮ್ ವಿಭಾಗದಲ್ಲಿ ಆತ್ರೆಯಾ ವೆಂಕಟಚಲಂ ಪ್ರಥಮ ಸ್ಥಾನ, ಭವೇಶ್ ಜಯಂತಿ ದ್ವಿತೀಯ ಸ್ಥಾನ, ಹರೀಶ್ ರಾಜ್ ತೃತೀಯ ಸ್ಥಾನ ಪಡೆದಿದ್ದಾರೆ. ವೆಟರ್ನರಿ ಪ್ರಾಕ್ಟಿಕಲ್ ವಿಭಾಗದಲ್ಲಿ ರಕ್ಷಿತಾ.ವಿ.ಪಿ ಪ್ರಥಮ ರ್ಯಾಂಕ್, ನಂದನ್ ದ್ವಿತೀಯ ರ್ಯಾಂಕ್ ಹಾಗೂ ಭುವನೇಶ್ವರಿ ತೃತೀಯ ರ್ಯಾಂಕ್ ಗಳಿಸಿದ್ದಾರೆ ಎಂದು ಹೇಳಿದರು.

 

 

Continue Reading

DAKSHINA KANNADA

ಹಲಸಿನಕಾಯಿ ಕೀಳಲು ಹೋಗಿ ದುರಂ*ತ; ಮರದಿಂದ ಬಿದ್ದು ವ್ಯಕ್ತಿ ಸಾ*ವು

Published

on

ಕಿನ್ನಿಗೋಳಿ :  ಹಲಸಿನ‌ಕಾಯಿ ಕೀಳಲು ಹೋಗಿ ಮರದಿಂದ ಕಾಂಕ್ರೀಟ್ ರಸ್ತೆಗೆ ಬಿದ್ದು ವ್ಯಕ್ತಿಯೊಬ್ಬ ಸಾ*ವನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಬಾಬಕೋಡಿಯಲ್ಲಿ ಶುಕ್ರವಾರ(ಮೇ.23) ನಡೆದಿದೆ. ಕೆಮ್ಮಡೆಯ ಮೂಲದ ಪ್ರಸ್ತುತ ಕರ್ನಿರೆ ನಿವಾಸಿ, ಹರೀಶ್ ( 40) ಮೃತ ವ್ಯಕ್ತಿ.

ಹರೀಶ್ ಶುಕ್ರವಾರ ಮಧ್ಯಾಹ್ನ ಬಾಬಕೋಡಿಯ ಪಿಲಿಕ್ಸ್ ಡಿಸೋಜ ಎಂಬವರ ಮನೆಗೆ ಹಲಸಿನ ಕಾಯಿ ಕೀಳಲು ತೆರಳಿದ್ದು ಮೊದಲಿಗೆ ತೆಂಗಿನ ಮರ ಹತ್ತಿ ತೆಂಗಿನ ಕಾಯಿ ಕಿತ್ತು ಬಳಿಕ ಹಲಸಿನ ಮರ ಹತ್ತಿದ್ದರು. ಈ ವೇಳೆ ಮರದಿಂದ ಆಯತಪ್ಪಿ ಕೆಳಗೆ  ಬಿದ್ದಿದ್ದಾರೆ.  ಗಂಭೀ*ರ ಗಾ*ಯಗೊಂಡ ಅವರನ್ನು ಕೂಡಲೇ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ.

ಇದನ್ನೂ ಓದಿ : ತೋಡಿನಂತಿರುವ ರೋಡಿನಲ್ಲಿ ಸ್ಕೂಟರ್ ಪಲ್ಟಿ; ಸವಾರ ಪ್ರಾಣಾಯಾಯದಿಂದ ಪಾರು

ಹರೀಶ್ ಮರಕಡಿಯುವ ಕೆಲಸ ನಿರ್ವಹಿಸುತ್ತಿದ್ದು, ಒಂದು ವರ್ಷದ ಹಿಂದೆ ಕಿನ್ನಿಗೋಳಿಯ ಮುಖ್ಯ ರಸ್ತೆ ಬದಿಯಲ್ಲಿ ಮರದ ರೆಂಬೆ ಕಡಿಯಲು ಮರ ಹತ್ತಿದ್ದ ವೇಳೆ ಮರದಲ್ಲಿಯೇ ತಲೆ ಸುತ್ತು ಬಂದು ಸಿಲುಕಿದ್ದರು. ಆ ಸಂದರ್ಭ ಅದೇ ದಾರಿಯಲ್ಲಿ ಹೋಗುತ್ತಿದ್ದ ಪಟ್ಟೆ ನಿವಾಸಿ ವಿಜಯ್ ಅಮೀನ್ ಮರ ಹತ್ತಿ ಹಗ್ಗ ಬಳಸಿ ಹರೀಶ್ ರನ್ನು ಮರದ ರೆಂಬೆಗೆ ಕಟ್ಟಿ, ಬಳಿಕ ಯಂತ್ರದ ಮೂಲಕ ಕೆಳಗಿಳಿಸಲಾಗಿತ್ತು. ಮೃತ ಹರೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page