Connect with us

FILM

ತನ್ನ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಅರ್ಚನಾ ಉಡುಪ; ಕ್ಯಾ*ನ್ಸರ್ ಬಗ್ಗೆ ಏನಂದ್ರು?

Published

on

ಮಂಗಳೂರು/ಬೆಂಗಳೂರು : ಗಾಯಕಿ, ನಿರೂಪಕಿ ಅರ್ಚನಾ ಉಡುಪ  ಕ್ಯಾ*ನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರು ಹಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಸುದ್ದಿ ಭಾರೀ ವೈರಲ್ ಆಗಿದ್ದು, ಇದೀಗ ಸ್ವತಃ ಗಾಯಕಿಯೇ ಸ್ಪಷ್ಟನೆ ಕೊಟ್ಟಿದ್ದಾರೆ.

ನನ್ನನ್ನು ಬಹಳ ದಿನಗಳಿಂದ ಕಾಡುತ್ತಿರುವ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು ಎಂಬುದಾಗಿ ಕ್ಯಾಪ್ಷನ್ ಕೊಟ್ಟು ವೀಡಿಯೋವೊಂದನ್ನು  ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗಾಯಕಿ ಹಂಚಿಕೊಂಡಿದ್ದಾರೆ.

ಏನಂದ್ರು ಗಾಯಕಿ?

ನಾನು ಇವತ್ತು ಎರಡು ಅತೀ ಮುಖ್ಯವಾದ ವಿಷಯಗಳನ್ನು ಹಂಚಿಕೊಳ್ಳಲು ವೀಡಿಯೋ ಮಾಡುತ್ತಿದ್ದೇನೆ. ನನ್ನನ್ನು ಇವು ಬಹಳ ದಿನಗಳಿಂದ ಕಾಡುತ್ತಿವೆ. ಈ ವಿಡಿಯೋ ಮಾಡಬೇಕೋ, ಬೇಡವೋ? ಇದರಿಂದ ಉಪಯೋಗ ಆಗುತ್ತೋ ಇಲ್ವೋ? ಅನ್ನುವ ಅನುಮಾನವಿತ್ತು. ಕಿರಿ ಕಿರಿ ಜಾಸ್ತಿ ಆಗುತ್ತಿರುವುದರಿಂದ ನಿಮ್ಮ ಜೊತೆ ಈ ವಿಚಾರ ಹಂಚಿಕೊಳ್ಳುತ್ತಿದ್ದೇನೆ.

3-4 ವರ್ಷದ ಹಿಂದೆ ಸಂದರ್ಶನವೊಂದನ್ನು ಕೊಟ್ಟಿದ್ದೆ. ಆ ಸಂದರ್ಶನದಲ್ಲಿ ನನಗೆ 20 ವರ್ಷದ ಹಿಂದೆ ಸಣ್ಣದಾಗಿ ಗಂಟಲಿನ ಕಿರಿ ಕಿರಿ ಸಮಸ್ಯೆ ಉಂಟಾಗಿ ಕೆಲವು ತಿಂಗಳಗಳ ಕಾಲ ಹಾಡುವುದಕ್ಕೆ ಆಗಿರಲಿಲ್ಲ. ಈ ತೊಂದರೆಯಿಂದ ಹೇಗೆ ಹೊರಗೆ ಬಂದೆ, ಮತ್ತೆ ಹಾಡೋದಕ್ಕೆ ಹೇಗೆ ಪ್ರಾರಂಭಿಸಿದೆ ಎಂಬ ವಿಷಯವನ್ನು ನಾಲ್ಕೈದು ವರ್ಷಗಳ ಹಿಂದೆ ಇಂಟರ್​​ವ್ಯೂವ್​ನಲ್ಲಿ ಹಂಚಿಕೊಂಡಿದ್ದೆ.

ಆದರೆ ನಾನು ಹೇಳಿದ್ದ ಕ್ಲಿಪ್ ಅನ್ನು ಮಾತ್ರ ಪ್ರಮೋಷನ್‌ಗಾಗಿ  ಅವರು ಹಾಕಿದ್ದಾರೆ. ಆದರೆ, ನೀವು ಆ ಸಂದರ್ಶನವನ್ನು  ಪೂರ್ಣವಾಗಿ ನೋಡದೇ ನನಗೆ ಗಂಟಲು ಹೋಗಿದೆ, ಹಾಡೋದಕ್ಕೆ ಆಗುತ್ತಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಮನಸಿಗೆ ತುಂಬಾ ನೋ*ವು ಕೊಡುತ್ತಿದೆ. ಎಲ್ಲಿ ಹೋದರೂ ಆರೋಗ್ಯವಾಗಿದ್ದೀರಾ, ಹಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಆದರೆ ನನಗೆ ಏನು ಆಗಿಲ್ಲ. ಈಗ ನಾನು ಮೊದಲಿಗಿಂತ ಹೆಚ್ಚು ಬ್ಯುಸಿಯಾಗಿದ್ದೀನಿ. ಹೆಚ್ಚು ಹಾಡು ಹಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಶಾರ್ಟ್​ ಹೇರ್​ ಕಟ್ ಯಾಕೆ?

ತಮ್ಮ ಶಾರ್ಟ್ ಹೇರ್ ಕಟ್ ಬಗ್ಗೆಯೂ ಗಾಯಕಿ ಸ್ಪಷ್ಟನೆ ನೀಡಿದ್ದು, ​ ಹೇರ್​ ಕಟ್ ಯಾಕೆ ಮಾಡಿಸಿದ್ದೀನಿ ಅಂದರೆ, ನಾನೊಂದು ಹೊಸ ಸೀರಿಯಲ್​ನಲ್ಲಿ ಆ್ಯಕ್ಟ್ ಮಾಡುತ್ತಿದ್ದೇನೆ. ಆ ಪಾತ್ರಕ್ಕೆ ಇದೇ ರೀತಿಯ ಶಾರ್ಟ್ ಹೇರ್ ಕಟ್ ಬೇಕು ಅಂದದ್ದರಿಂದ ಮಾಡಿಸ್ಕೋಬೇಕಾಯಿತು. ಅದು ಬಿಟ್ಟು ನನಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ. ಆದರೆ ನನಗೆ ಕ್ಯಾನ್ಸರ್ ಬಂದಿದೆ ಅನ್ನೋ ಮಟ್ಟಕ್ಕೆ ಎಲ್ಲ ಕಡೆನೂ ಹಬ್ಬಿಸಿದ್ದಾರೆ. ಇದು ನನಗಿಂತ ಹೆಚ್ಚಾಗಿ ನನ್ನ ಕುಟುಂಬಸ್ಥರಿಗೆ, ಸ್ನೇಹಿತರಿಗೆ ತುಂಬಾ ನೋವಾಗಿದೆ.

ಇದನ್ನೂ ಓದಿ : ಭಜರಂಗಿ ನಟಿಯ 22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳ ಅಂದರ್

ದಯವಿಟ್ಟು ಪೂರ್ತಿ ವಿಷಯವನ್ನು ತಿಳಿದುಕೊಳ್ಳದೆ ಸೋಶಿಯಲ್​ ಮೀಡಿಯಾದಲ್ಲಿ ಏನನ್ನು ಹೇಳಬೇಡಿ. ಪೂರ್ತಿ ವಿಷಯ ತಿಳಿದುಕೊಳ್ಳಿ. ಇದರಿಂದ ಮತ್ತೊಬ್ಬರ ವೃತ್ತಿ ಜೀವನಕ್ಕೆ ಅಥವಾ ವೈಯಕ್ತಿಯ ಜೀವನಕ್ಕೆ ಘಾಸಿ ಆಗುವುದು ತಪ್ಪುತ್ತೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ. ದೇವರ ದಯೆಯಿಂದ ಗಟ್ಟಿ ಮುಟ್ಟಾಗಿ ಆರೋಗ್ಯವಾಗಿದ್ದೀನಿ  ಎಂದು ಅರ್ಚನಾ ಉಡುಪ ಹೇಳಿದ್ದಾರೆ.

 

 

FILM

ಹೃದಯಾಘಾತದಿಂದ ಕರಿಷ್ಮಾ ಕಪೂರ್ ಮಾಜಿ ಪತಿ ನಿಧನ

Published

on

ಮಂಗಳೂರು/ಮುಂಬೈ : ಕರಿಷ್ಮಾ ಕಪೂರ್ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಹೃದಯಾ*ಘಾತದಿಂದ ನಿ*ಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

ಇಂಗ್ಲೆಂಡ್‌ನಲ್ಲಿದ್ದ ಸಂಜಯ್ ಕಪೂರ್ ಗಾರ್ಡ್ಸ್ ಪೋಲೊ ಕ್ಲಬ್‌ನಲ್ಲಿ ಪೋಲೋ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಕು*ಸಿದು ಬಿ*ದ್ದರೆನ್ನಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಸಂಜಯ್ ಹೃದಯಾ*ಘಾತದಿಂದ ಮೃ*ತಪಟ್ಟಿದ್ದಾರೆ ಎಂದು ಘೋಷಿಸಿದರು.

ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ಸಂಜಯ್ ಕಪೂರ್ ಮತ್ತ ನಟಿ ಕರಿಷ್ಮಾ ಕಪೂರ್ 2003ರಲ್ಲಿ ವಿವಾಹವಾಗಿದ್ದರು. ಇವರಿಗೆ ಸಮೈರಾ ಮತ್ತು ಕಿಯಾರಾ ಎಂಬ ಇಬ್ಬರು  ಮಕ್ಕಳಿದ್ದಾರೆ. ಸಂಸಾರದಲ್ಲಿ ಬಿರುಕು ಮೂಡಿ 2016 ರಲ್ಲಿ ವಿಚ್ಛೇದನ ಪಡೆದರು. ಬಳಿಕ ಸಂಜಯ್ ಕಪೂರ್ ಪ್ರಿಯಾ ಸಚ್‌ದೇವ್  ಎಂಬವರನ್ನು ವಿವಾಹವಾದರು.

ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ್ದ ಕಪೂರ್ :

ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಬಗ್ಗೆ ಸಂಜಯ್ ಕಪೂರ್ ಟ್ವೀಟ್ ಮಾಡಿದ್ದರು. ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತ ಭಯಾನಕ ಸುದ್ದಿ. ಸಂತ್ರಸ್ತರ ಎಲ್ಲಾ ಕುಟುಂಬಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಅವರಿಗೆ  ಶಕ್ತಿ ಸಿಗಲಿ ಎಂದು ಪೋಸ್ಟ್ ಮಾಡಿದ್ದರು.

Continue Reading

FILM

ಹೆಸರು ಬದಲಿಸಿಕೊಂಡ ಆಲಿಯಾ ಭಟ್… ಏನು ಗೊತ್ತಾ..?

Published

on

ರಣಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಮದ್ಯೆಯಾಗಿ ಹಲವು ವರ್ಷಗಳ ನಂತರ ತಮ್ಮ ಹೆಸರಿನ ಮುಂದೆ ಇರುವ ಭಟ್ ಎನ್ನುವ ಸರ್ ನೇಮ್ ತೆಗೆದು ಆಲಿಯಾ ಕಪೂರ್ ಎಂದು ಬದಲಿಸಿಕೊಂಡಿದ್ದಾರೆ.

ಆಲಿಯಾ ಭಟ್ ಅವರು ಬ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಹೋಟೆಲ್ ರೂಂನ ದೃಶ್ಯ ಕೂಡ ಇದೆ. ಹೋಟೆಲ್ನಲ್ಲಿ ‘ಆಲಿಯಾ ಕಪೂರ್” ಎಂದು ಬರೆಯಲಾಗಿದೆ. ಹೀಗಾಗಿ, ಆಲಿಯಾ ಭಟ್ ಅವರು ಅಧಿಕೃತವಾಗಿ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಆಲಿಯಾ, ಕಪೂರ್ ಕುಟುಂಬದವರನ್ನು ವಿವಾಹ ಆಗಿದ್ದಾರೆ. ಈ ಕಾರಣದಿಂದಲೇ ಆಲಿಯಾ ಕಪೂರ್ ಎಂದು ಹೋಟೆಲ್ನವರು ಬದಲಿಸಿರಬಹುದು ಎಂಬುದು ಕೆಲವರ ಊಹೆ. ಸದ್ಯ ಆಲಿಯಾ ಅವರು ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.

Continue Reading

FILM

‘ಆ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ’: ಬರ್ತ್‌ಡೇ ಪಾರ್ಟಿ ಬಗ್ಗೆ ಮಂಗ್ಲಿ ಸ್ಪಷ್ಟನೆ

Published

on

ಮಂಗಳೂರು/ಹೈದರಾಬಾದ್: ಖ್ಯಾತ ಗಾಯಕಿ ಮಂಗ್ಲಿ ಅವರ ಬರ್ತ್‌ಡೇ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮದ್ಯ ಮತ್ತು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದರ ಬಗ್ಗೆ ಮಂಗ್ಲಿ ಕೊನೆಗೂ ಸ್ಪಷ್ಟನೆ ಕೊಟ್ಟಿದ್ದಾರೆ.


ಹೈದರಾಬಾದ್‌ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಜೂನ್ 10ರಂದು ಗಾಯಕಿ ಮಂಗ್ಲಿಯ ಬರ್ತಡೇ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಹಲವರು ಭಾಗಿಯಾಗಿದ್ದರು. ಮ್ಯೂಸಿಕ್, ಡ್ರಿಂಕ್ಸ್ ಒಳಗೊಂಡಂತೆ ಬಲು ಜೋರಾಗಿ ಪಾರ್ಟಿಯನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: Watch video: ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್ಸ್‌ ಸೇವನೆ ಪ್ರಕರಣ; ಪೊಲೀಸರಿಗೆ ಗಾಯಕಿ ಅವಾಜ್

ಇದೇ ಸಂದರ್ಭದಲ್ಲಿ ತಡರಾತ್ರಿ ಪೊಲೀಸರು ಮಂಗ್ಲಿ ಅವರ ಪಾರ್ಟಿಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮಾದಕ ವಸ್ತುಗಳು ಪತ್ತೆಯಾಗಿದೆ. ಇದಲ್ಲದೆ ಸ್ಥಳದಲ್ಲಿ ವಿದೇಶಿ ಮದ್ಯ ಕೂಡ ಪತ್ತೆಯಾಗಿದೆ. ವಿದೇಶಿ ಮದ್ಯವನ್ನು ವಶಕ್ಕೆ ಪಡೆದ ಬಗ್ಗೆ ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಮಂಗ್ಲಿ ಕೊನೆಗೂ ಸ್ಪಷ್ಟನೆ ಕೊಟ್ಟಿದ್ದಾರೆ.

 

ಈ ಬಗ್ಗೆ ಮಾತನಾಡಿರುವ ಅವರು ‘ಆಲ್ಕೋಹಾಲ್ ನೀಡುವ ವಿಚಾರದಲ್ಲಿ ಒಪ್ಪಿಗೆ ಪಡೆಯಬೇಕು ಎನ್ನುವ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ನಾನು ಹಾಗೆ ಮಾಡಲಿಲ್ಲ ಎಂಬ ಕೊರಗು ಇದೆ. ಯಾರಾದರೂ ನನಗೆ ಮಾರ್ಗದರ್ಶನ ನೀಡಿದ್ದರೆ, ನಾನು ಹಾಗೆ ಮಾಡುತ್ತಿದ್ದೆ. ಪಾರ್ಟಿಯಲ್ಲಿ ಯಾವುದೇ ವಿದೇಶಿ ಮದ್ಯ ಇರಲಿಲ್ಲ. ಲಭ್ಯವಿದ್ದದ್ದು ಸ್ಥಳೀಯ ಮದ್ಯ ಮಾತ್ರ. ಪೊಲೀಸರು ಸಹ ಇದನ್ನೇ ದೃಢಪಡಿಸಿದ್ದಾರೆ. ಯಾವುದೇ ಮಾದಕ ದ್ರವ್ಯ ಸಿಕ್ಕಿಲ್ಲ ಎಂದು ಕೂಡ ಹೇಳಿದ್ದಾರೆ’ ಎಂದು ಮಂಗ್ಲಿ ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page