Connect with us

LATEST NEWS

ಬಾಂಡ್ ರಹಸ್ಯ ರಿವೀಲ್..! ಸುಪ್ರೀಂ ಕೋರ್ಟ್ ಆದೇಶ…! ಜನತಾ ನ್ಯಾಯಾಲಯದಲ್ಲಿ ವಿಚಾರಣೆ…!

Published

on

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಲೆಕ್ಟ್ರೋರಲ್ ಬಾಂಡ್‌ ಈಗ ಎಲ್ಲಾ ರಾಜಕೀಯ ಪಕ್ಷಗಳ ಕುತ್ತಿಗೆಗೆ ಸುತ್ತಿಕೊಂಡಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಎಸ್‌ಬಿಐನಿಂದ ಬಾಂಡ್‌ ರೂಪದಲ್ಲಿ ಪಡೆದುಕೊಂಡಿದ್ದ ಕೋಟ್ಯಂತರ ರೂಪಾಯಿಗಳು ಎಲ್ಲಾ ರಾಜಕೀಯ ಪಕ್ಷಗಳ ಭ್ರಷ್ಟಾಚಾರದ ಇನ್ನೊಂದು ಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ ಬಾಂಡ್ ಬಿಡುಗಡೆಗೆ ಸಮಯಾವಕಾಶ ಕೋರಿದ್ದ ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬಳಿಕ ಎಸ್‌ಬಿಐ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗ ಈ ಬಾಂಡ್ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಂತೆ ಜನತಾ ನ್ಯಾಯಾಲಯದ ಕಟಕಟೆಯಲ್ಲಿ ರಾಜಕೀಯ ಪಕ್ಷಗಳ ವಿಚಾರಣೆ ಆರಂಭವಾಗಿದೆ.

ಭ್ರಷ್ಟಾಚಾರದ ಇನ್ನೊಂದು ಮುಖ ಚುನಾವಣಾ ಬಾಂಡ್‌ ಅನ್ನೋದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಬಾಂಡ್ ವಿವರದಲ್ಲೇ ಗೊತ್ತಾಗುತ್ತಿದೆ. ದೊಡ್ಡ ರಾಷ್ಟ್ರೀಯ ಪಕ್ಷಗಳಿಂದ ಹಿಡಿದು ಪ್ರಾದೇಶಿಕ ಪಕ್ಷಗಳೂ ಕೂಡಾ ಈ ಬಾಂಡ್‌ ಫಲಾನುಭವಿಗಳಾಗಿದ್ದಾರೆ. ಪ್ರಮುಖವಾಗಿ ಸ್ವಚ್ಚ ಪಕ್ಷವಾಗಿ ,ಭ್ರಷ್ಟಾಚಾರವನ್ನು ಮಟ್ಟ ಹಾಕುತ್ತೇವೆ ಅಂದಿದ್ದ ಭಾರತೀಯ ಜನತಾ ಪಾರ್ಟಿ ಈ ಬಾಂಡ್‌ಗಳ ಪಾಲಿನ ದೊಡ್ಡ ಫಲಾನುಭವಿಯಾಗಿದೆ. 6060 ಕೋಟಿಗಳ ಬಾಂಡ್ ಸ್ವೀಕರಿಸಿರುವ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ , 1609 ಕೋಟಿ ಪಡೆದಿರುವ ತೃಣಮೂಲ ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ 1421 ಕೋಟಿ ಬಾಂಡ್ ಪಡೆದಿದ್ದರೆ, ಬಿಆರ್‌ಎಸ್‌ 1214 ಕೋಟಿಯ ಬಾಂಡ್ ಪಡೆದು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಆದ್ರೆ ದೇಶದ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸಿದ್ದ ಸದ್ಯ ಕೇರಳದಲ್ಲಿ ಆಡಳಿತದಲ್ಲಿರುವ ಸಿಪಿಐಎಂ ಪಕ್ಷ ಮಾತ್ರ ಈ ಬಾಂಡ್ ಪಟ್ಟಿಯಿಂದ ಹೊರಗುಳಿದಿದೆ.

 

ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಈ ಬಾಂಡ್‌ ವಿವರ ಸದ್ಯ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ.  ದೇಶದ ರಾಜಕೀಯ ಪಕ್ಷಗಳ ಭ್ರಷ್ಟಾಚಾರದ ಮತ್ತೊಂದು ಮುಖ ಇದು ಎಂದು ಜನರು ಚರ್ಚೆ ಆರಂಭಿಸಿದ್ದಾರೆ. ಶೇಕಡಾ 50 ರಷ್ಟು ಬಾಂಡ್‌ ಸ್ವೀಕರಿಸಿದ ಪ್ರಮುಖ ರಾಜಕೀಯ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿ ಸದ್ಯ ಜನರ ಟಾರ್ಗೆಟ್‌ ಆಗಿದೆ. ಚುನಾವಣಾ ಆಯೋಗ ಪ್ರಕಟ ಮಾಡಿರುವ ಬಾಂಡ್ ನೀಡಿದ ಬಹುತೇಕ ಕಂಪೆನಿಗಳು ಒಂದಾ ಇಡಿ ದಾಳಿಗೆ ಒಳಗಾಗಿದ್ದರೆ, ಕೆಲ ಕಂಪೆನಿಗಳ ಮೇಲೆ ಐಟಿ ದಾಳಿ ನಡೆದಿದ್ದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಬಾಂಡ್‌ನ ಬಹುದೊಡ್ಡ ಪಾಲು 960 ಕೋಟಿ ಬಾಂಡ್ ನೀಡಿರುವ ಮೆಗಾ ಇಂಜಿನಿಯರಿಂಗ್ ಕಂಪೆನಿ ಸರ್ಕಾರದ ಬೃಹತ್ ಯೋಜನೆಗಳನ್ನ ಗುತ್ತಿಗೆ ಪಡೆದಿರುವ ಕಂಪೆನಿಯಾಗಿದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಲಕ್ಷ ಕೋಟಿಯ ಗುತ್ತಿಗೆ ವಹಿಸಿಕೊಂಡಿರುವ ಹೈದ್ರಾಬಾದ್ ಮೂಲದ ಕಂಪೆನಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇನ್ನು ದೇಶದಲ್ಲಿ ಬ್ಯಾನ್ ಮಾಡಿ ಬಳಿಕ ಅವಕಾಶ ನೀಡಲಾಗಿದ್ದ,  ಕೋವಿಡ್ ಲಸಿಕೆ ತಯಾರಿಕಾ ಸಂಸ್ಥೆ ಕೂಡಾ 50 ಕೋಟಿಗಳ ದೇಣಿಗೆ ನೀಡಿದೆ.

ಎಲ್ಲಾ ಪಕ್ಷಗಳೂ ತಪ್ಪಿತಸ್ಥರ ಸ್ಥಾನದಲ್ಲಿ!

ಇನ್ನು ಬಾಂಡ್ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಕೂಡಾ ಸದ್ಯಕ್ಕೆ ಜನತಾ ನ್ಯಾಯಾಲಯದಲ್ಲಿ ತಪ್ಪಿತಸ್ಥರ ಸ್ಥಾನದಲ್ಲೇ ಇದ್ದಾರೆ. ಕಾರ್ಪೋರೇಟರ್ ಕಂಪೆನಿಗಳಿಂದ ಸಾವಿರಾರು ಕೋಟಿ ಬಾಂಡ್‌ ಪಡೆದು ಅಧಿಕಾರದ ದುರುಪಯೋಗ ಪಡಿಸಿ ಕಂಪೆನಿಗಳಿಗೆ ಪರೋಕ್ಷವಾಗಿ ಏನಾದ್ರೂ ಸಹಾಯ ಮಾಡಿರಲೇ ಬೇಕು ಅನ್ನೋದು ಜನತಾ ನ್ಯಾಯಾಲಯದಲ್ಲಿ ಚರ್ಚೆ ಆಗುತ್ತಿರುವ ವಿಚಾರ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು,ಎಲ್ಲಾ ರಾಜಕೀಯ ಪಕ್ಷಗಳೂ ಕೂಡಾ ಲಂಚದ ರೂಪದಲ್ಲೇ ಈ ಬಾಂಡ್‌ಗಳನ್ನು ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡವರ ಮೇಲೆ ಬರೆ ಹಾಕುವ ರಾಜಕೀಯ ಪಕ್ಷಗಳು ಕಾರ್ಪೋರೇಟ್ ಕಂಪೆನಿಗಳ ಅಡಿಯಾಳಾಗಿ ಅವರಿಂದ ಲಾಭ ಪಡೆದು ಅವರಿಗೇ ಲಾಭ ಮಾಡಿಕೊಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

 

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತಾದ್ರೂ ಅದು ಇಷ್ಟು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ . ಇನ್ನು ಚುನಾವಣೆಯ ಸಮಯದಲ್ಲಿ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಅನ್ನೋದನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ತಿಳಿಸಿಬೇಕಿತ್ತು. ಹೀಗಾಗಿ ಅಲ್ಲಿ ಗೌಪ್ಯತೆ ಕೂಡಾ ಇರಲಿಲ್ಲ.  ಆದ್ರೆ 2017 ರಲ್ಲಿ ಕೇಂದ್ರ ಸರ್ಕಾರ ಈ ಎಲೆಕ್ಟ್ರೋರಲ್ ಬಾಂಡ್ ಯೋಜನೆಯನ್ನು ಘೋಷಿಸಿ 2018 ರಲ್ಲಿ ಜಾರಿಗೆ ತಂದಿತ್ತು. ಪಾರದರ್ಶಕತೆ ಹೆಚ್ಚಿಸಲು ಇದು ಅನುಕೂಲ ಆಗಲಿದೆ ಎಂದು ಸರ್ಕಾರ ಹೇಳಿತ್ತು. ಆದ್ರೆ ಬಾಂಡ್ ಖರೀದಿ ಹಾಗೂ ಅದು ಯಾರಿಗೆ ಎಷ್ಟು ಸಲ್ಲಿಕೆ ಆಗಿದೆ ಅನ್ನೋದು ಇದುವರೆಗೂ ಗೌಪ್ಯವಾಗಿಯೇ ಇತ್ತು. ಇದೀಗ ಸುಪ್ರೀಂ ಕೋರ್ಟ್ ಬೀಸಿದ ಚಾಟಿ ಏಟಿನಿಂದ ಎಸ್‌ಬಿಐ ಈ ಬಾಂಡ್ ವಿವರ ಬಹಿರಂಗಗೊಳಿಸಿದೆ.

ಏನಿದು ಎಲೆಕ್ಟ್ರೋರಲ್ ಬಾಂಡ್‌?

ಎಸ್‌ಬಿಐನ 29 ಶಾಖೆಗಳಿಂದ  ಒಂದು ಸಾವಿರ ಕೋಟಿಯ ಎಲೆಕ್ಟ್ರೋರಲ್ ಬಾಂಡ್‌ಗಳನ್ನು ಯಾರು ಬೇಕಾದರೂ ಖರೀದಿಸಿ ತಮ್ಮ ಇಷ್ಟದ ಪಕ್ಷಗಳಿಗೆ ನೀಡಬಹುದಾದ ಸ್ಕೀಮ್ ಇದು. ವರ್ಷದಲ್ಲಿ ನಾಲ್ಕು ಬಾರಿ ಈ ಬಾಂಡ್‌ ನೀಡಲಾಗುತ್ತಿದ್ದು, ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಒಂದು ಮತ ಪಡೆದ ಪಕ್ಷಕ್ಕೆ ಈ ದೇಣಿಗೆ ನೀಡಬಹುದು. ಬಾಂಡ್ ಪಡೆದ 15 ದಿನಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳಬೇಕು. ಆದರೆ ಯಾರು ಬಾಂಡ್ ಖರೀದಿ ಮಾಡಿದ್ದಾರೆ ಎಂಬ ವಿಚಾರ ಎಸ್‌ಬಿಐ ತಿಳಿಸಬೇಕಾಗಿಲ್ಲ ಎಂಬ ನಿಯಮವನ್ನು ಸರ್ಕಾರ ರೂಪಿಸಿತ್ತು. ಇನ್ನು ಎಲ್ಲಾ ಬಾಂಡ್‌ ವಿವರಗಳನ್ನು ಒಂದೆ ಬ್ರಾಂಚ್‌ನಲ್ಲಿ ಇರಿಸಿಕೊಂಡಿದ್ದ ಎಸ್‌ಬಿಐ ಸಮಯಾವಕಾಶ ಕೇಳಿ ಇದೀಗ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಬಿಡುಗಡೆ ಮಾಡಿದೆ.

LATEST NEWS

ಕುದ್ರೋಳಿ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ನೇಮಕ: ಪೂಜಾರಿಯವರ ಮಾರ್ಗದರ್ಶನದಲ್ಲಿ ಸಮಿತಿ ಪುನರ್ ರಚನೆ.!

Published

on

ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಸಮಿತಿಯಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಬರೋಬ್ಬರಿ 35 ವರ್ಷಗಳ ಬಳಿಕ ಈ ಬದಲಾವಣೆ ಮಾಡಲಾಗಿದ್ದು, ಕುದ್ರೋಳೀ ಶ್ರೀ ಗೋಕರ್ಣನಾಥ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಸಾಹುಕಾರ್ ಕೊರಗಪ್ಪರವರ ಮೊಮ್ಮಗ ಎಚ್.ಎಸ್ ಸಾಯಿರಾಂ ಅವರ ಸಹೋದರ ಜಯರಾಜ್ ಎಚ್. ಸೋಮಸುಂದರಂ (ಎಚ್ ಎಸ್ ಜಯರಾಜ್) ಅವರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಕುದ್ರೋಳಿ ಕ್ಷೇತ್ರದ ಅಭಿವೃದ್ದಿ ರೂವಾರಿ, ಕೇಂದ್ರದ ಮಾಜಿ ಸಚಿವರಾದ ಬಿ ಜನಾರ್ದನ ಪೂಜಾರಿಯವರು ಈ ಬಗ್ಗೆ ಮಾಹಿತಿ ನೀಡಿದ್ದು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್ ಸಾಯಿರಾಂ 35 ವರ್ಷಗಳಿಂದ ಉತ್ತಮ ಕಾರ್ಯನಿರ್ವಹಿಸಿದ್ದು, ಇದೀಗ ನೂತನ ಅಧ್ಯಕ್ಷರಾಗಿ ಎಚ್ ಎಸ್ ಜಯರಾಜ್ ನೇಮಕ ಮಾಡಲಾಗಿದೆ ಎಂದರು ಇನ್ನುಳಿದಂತೆ ಉಪಾಧ್ಯಕ್ಷರಾಗಿ ಉರ್ಮಿಳಾ ರಮೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿಯಾಗಿ ಪದ್ಮರಾಜ್

ಸಮಿತಿ ಸದಸ್ಯರಾಗಿ ಎಚ್.ಎಸ್ ಸಾಯಿರಾಂ, ಸಂತೋಷ್ ಜೆ ಪೂಜಾರಿ, ಜಗದೀಪ್ ಸುವರ್ಣ. ಕೃತಿನ್ ಅಮೀನ್, ಕಿಶೋರ್ ದಂಡಕೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಕ್ಷೇತ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ದೇವೇಂದ್ರ ಪೂಜಾರಿ, ವೇದಕುಮಾರ್, ಡಾ.ಬಿ  ಬಿ ಸುವರ್ಣ, ಸೂರ್ಯಾಕಾಂತ್ ಜೆ ಸುವರ್ಣ, ಹರಿಕೃಷ್ಣ ಬಂಟ್ವಾಳ್, ಶೈಲೇಂದ್ರ ಸುವರ್ಣ, ಚಿತ್ತರಂಜನ್ ಗರಡಿ, ಲೀಲಾಕ್ಷ ಬಿ ಕರ್ಕೇರ, ಜಯಂತ್ ನಡುಬೈಲ್, ಸೇರಿದಂತೆ ಉದಯ್ ಪೂಜಾರಿ, ಸುನಿಲ್, ದಿನೇಶ್ ಸುವರ್ಣ ರಾಯಿ, ವಿಷ್ಣುದಾಸ್, ರೋಹಿದಾಸ್ ಸೇರಿ

51 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಸಮಾಜದ ಸಂಘಟನೆ ಹಾಗು ಬ್ರಹ್ಮಶ್ರೀ ನಾರಾಯಣಗುರುಗಳ ಕ್ರಾಂತಿಗೆ ಪೂರಕವಾಗಿ ಕಾರ್ಯಕ್ರಮ ಆಯೋಜಿಸುವಂತೆ ಬಿ.ಜನಾರ್ದನ ಪೂಜಾರಿಯವರು ನಿರ್ದೇಶನ ನೀಡಿದರು.

Continue Reading

LATEST NEWS

ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಹಾಡಿನ ಮೂಲಕ ಜನ್ಮದಿನದ ಶುಭಾಶಯ ಕೋರಿದ ಅಂಧ ಮಕ್ಕಳು

Published

on

ಮಂಗಳೂರು/ಡೆಹಾರಡೂನ್: 67ನೇ ಜನ್ಮದಿನದ ಸಂಭ್ರಮದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಂಧ ಮಕ್ಕಳು ಹಾಡಿನ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಈ ವೇಳೆ ರಾಷ್ಟ್ರಪತಿ ಮುರ್ಮು ಭಾವುಕರಾಗಿದ್ದಾರೆ.


ಉತ್ತರಾಖಂಡಕ್ಕೆ ಮೂರು ದಿನಗಳ ಭೇಟಿ ನೀಡಿರುವ ರಾಷ್ಟ್ರಪತಿ ದೌಪದಿ ಮುರ್ಮು ಅವರ 67ನೇ ಜನ್ಮದಿನ ಅತ್ಯಂತ ಸ್ಮರಣೀಯವಾಗಿತ್ತು.

ಅಂಧ ವ್ಯಕ್ತಿಗಳ ಸಬಲೀಕರಣದ ರಾಷ್ಟ್ರೀಯ ಸಂಸ್ಥೆಗೆ ರಾಷ್ಟ್ರಪತಿ ಮುರ್ಮು ಅವರು ಶುಕ್ರವಾರ ಭೇಟಿ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಅಲ್ಲಿನ ವಿದ್ಯಾರ್ಥಿಗಳು ‘ಹ್ಯಾಪಿ ಬರ್ತ್ ಡೇ ಟು ಯೂ’ ಎಂಬ ಹಾಡನ್ನು ಹಾಡಿದರು. ಮಕ್ಕಳ ಹಾಡು ಕೇಳಿ ಭಾವುಕರಾದ ಅವರು, ಗಳಗಳನೆ ಅತ್ತರು.

‘ಮಕ್ಕಳು ಎಷ್ಟು ಸುಂದರವಾಗಿ ಹಾಡಿದರೆಂದರೆ ನನಗೆ ಕಣ್ಣೀರು ತಡೆಯಲೇ ಆಗಲಿಲ್ಲ. ಹೃದಯಾಳದ ಆ ಹಾಡು ಕೇಳಿ ಭಾವುಕಳಾದೆ’ ಎಂದು ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್‌ ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟ

‘ಅಂಗವೈಕಲ್ಯತೆಯೊಂದಿಗೆ ಹುಟ್ಟಿದ ಮಕ್ಕಳಿಗೆ ವಿಶೇಷವಾದ ಶಕ್ತಿಯೊಂದು ಇದ್ದೇ ಇರುತ್ತದೆ. ಹೀಗಾಗಿ ಆತ್ಮವಿಶ್ವಾಸದಿಂದ ಮುನ್ನುಡಿ ಇಟ್ಟಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ಈ ನಿಟ್ಟಿನಲ್ಲಿ ಅಂಗವಿಕಲರಿಗೂ ಸಮಾನ ಅವಕಾಶ ಸಿಗಬೇಕು ಎಂಬ ಕಾರಣದಿಂದ ಸರ್ಕಾರವು ಹಲವು ನೀತಿಗಳನ್ನು ರೂಪಿಸಿದೆ’ ಎಂದರು.

Watch video

Continue Reading

FILM

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರ ನಡೆದ ನಟಿ ಶ್ವೇತಾ; ಕಾರಣವೇನು?

Published

on

ಬೆಂಗಳೂರು/ಮಂಗಳೂರು : ಕೌಟುಂಬಿಕ ಕಥಾಹಂದರ ಹೊಂದಿರುವ ಧಾರಾವಾಹಿ ‘ಲಕ್ಷ್ಮೀ ನಿವಾಸ’. ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಯಿಂದ ಇತ್ತೀಚೆಗಷ್ಟೇ ತನು ಪಾತ್ರಧಾರಿ ಯುಕ್ತಾ ಹೊರ ನಡೆದಿದ್ದರು. ಇದೀಗ ಹಿರಿಯ ನಟಿ ಶ್ವೇತಾ ಧಾರಾವಾಹಿ ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಶ್ವೇತಾ ಈ ಧಾರಾವಾಹಿಯಲ್ಲಿ ಲಕ್ಷ್ಮೀಯಾಗಿ ಕಾಣಿಸಿಕೊಂಡಿದ್ದರು. ಗಂಡನಿಗೆ ಸದಾ ಜೊತೆಯಾಗಿ ನಿಲ್ಲುವ ಪತ್ನಿಯಾಗಿ, ಮಕ್ಕಳ ಹಿತ ಬಯಸುವ ತಾಯಿಯಾಗಿ ಮನೋಜ್ಞ ಅಭಿನಯ ನೀಡುತ್ತಿದ್ದರು. ಆದರೆ, ಇದೀಗ ದಿಢೀರಾಗಿ ಧಾರಾವಾಹಿಯಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

ಕಾರಣವೇನು ?

ಧಾರಾವಾಹಿಯಿಂದ ಹೊರಬಂದಿರುವ ವಿಚಾರದ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವೈಯಕ್ತಿಕ ಕಾರಣ ಹಾಗೂ ತಾಯಿಯ ಅನಾರೋಗ್ಯದಿಂದ ಲಕ್ಷ್ಮೀ ನಿವಾಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ.  ಬಹಳ ದಯೆಯಿಂದ ವರ್ತಿಸಿ ಮತ್ತು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು.  ಸೆಟ್‌ನ ಕೆಲವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಿದಕ್ಕಾಗಿ ಝೀ ಕನ್ನಡ ವಾಹಿನಿಗೆ ಧನ್ಯವಾದಗಳು. ನೀವೆಲ್ಲ  ಅದ್ಭುತ ಮಂದಿ. ಶೀಘ್ರದಲ್ಲೇ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಒಂದೇ ಧಾರಾವಾಹಿಯಲ್ಲಿ ತಾಯಿ, ಮಗ, ಮಗಳು; ಲಕ್ಷ್ಮೀ ನಿವಾಸಕ್ಕೆ ಬಂದ ಹೊಸ ನಟಿ ಯಾರು ಗೊತ್ತಾ?

ಲಕ್ಷ್ಮೀಯಾಗಿ ಮಾಧುರಿ ಎಂಟ್ರಿ :

ಶ್ವೇತಾ ಜಾಗಕ್ಕೆ ಮತ್ತೊಬ್ಬ ಹಿರಿಯ ನಟಿಯ ಪ್ರವೇಶವಾಗಿದೆ. ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಜನಮನಸೂರೆಗೊಳಿಸಿದ್ದ ಮಾಧುರಿ, ಲಕ್ಷ್ಮೀಯಾಗಿ ಎಂಟ್ರಿ ಕೊಟ್ಟಿದ್ದಾರೆ . ಜಗ್ಗೇಶ್, ಪ್ರಭಾಕರ್, ದೇವರಾಜ್ ಮೊದಲಾದವರ ಜೊತೆ ನಟಿಸಿರುವ ಮಾಧುರಿ ಕನ್ನಡ ಮಾತ್ರವಲ್ಲದೇ ಹಿಂದಿ ಧಾರಾವಾಹಿಗಳಿಗೂ ಬಣ್ಣ ಹಚ್ಚಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page