Connect with us

FILM

‘ಭಿಕ್ಷೆ ಬೇಡಿಯಾದರೂ ಬದುಕುತ್ತೇನೆ, ಆದರೆ ಆ ನಟನ ಜೊತೆ ಅಭಿನಯಿಸುವುದಿಲ್ಲ’ ಎಂದ ನಟಿ ಸೋನಾ

Published

on

‘ಭಿಕ್ಷೆ ಬೇಡಿಕೆಯಾದರೂ ಬದುಕುತ್ತೇನೆ ಆದರೆ ಆ ಹಾಸ್ಯ ನಟನೊಂದಿಗೆ ಮಾತ್ರ ಅಭಿನಯ ಮಾಡುವುದಿಲ್ಲ’ ಎಂದು ನಟಿ ಸೋನಾ ಬಹಿರಂಗವಾಗಿ ಹೇಳಿದ್ದು, ಮಾತನಾಡಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಭಾಷೆಗಳಲ್ಲೂ ನಟಿಸುವ ಮೂಲಕ ಗುರುತಿಸಿಕೊಂಡಿದ್ದಾರೆ.

2001 ರಿಂದ 2024 ರವರೆಗೆ ಅವರು ನಟಿಸಿದ ಸಿನಿಮಾಗಳು ಸತತವಾಗಿ ಬಿಡುಗಡೆಯಾದವು. ಅಜಿತ್ ಅಭಿನಯದ ‘ಪೂವೆಲ್ಲಂ ಉನ್ ವಾಸಂ’ ಸಿನಿಮಾ ಮೂಲಕ ಸೋನಾ ಮೊದಲ ಬಾರಿ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ಬಳಿಕ ವಿಜಯ್ ಜೊತೆಗೆ ಸಿನಿಮಾ ಶಾಜಹಾನ್‌ನಲ್ಲಿಯೂ ನಟಿಸಿದ್ದಾರೆ. ನಂತರ ಆಯುಧಂ, ಶಿವಪತಿಕಾರಂ, ಕೆಲ್ವಿಕುರಿ, ಮೃಗಂ, ಕುಸೇಲನ್ ಹೀಗೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2010 ರಿಂದ 2015 ರವರೆಗೆ ನಟಿ ಸೋನಾ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿ ಈ ವೆಬ್ ಸರಣಿಯೊಂದು ಆರಂಭವಾಯಿತು. ಈ ವೆಬ್ ಸರಣಿಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ, ಸೋನಾ ಹಲವು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಸೋನಾರ ಬಗ್ಗೆ ತಿಳಿಯದ ಅನೇಕ ವಿಷಯಗಳು ಬಹಿರಂಗವಾಗಿದೆ.

ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ನನ್ನ ಜೀವನದಲ್ಲಿ ನಾನು ಹೆಚ್ಚಾಗಿ ಮೋಸವನ್ನೇ ಎದುರಿಸಿದ್ದೇನೆ. ಆಗ ನನಗ್ಯಾರೂ ಇರಲಿಲ್ಲ. ಒಂದು ವೇಳೆ ಇದ್ದರೂ ಯಾರನ್ನೂ ನಂಬುತ್ತಿರಲಿಲ್ಲ. ನಿನಗಾಗಿ ನಾನು ಇದ್ದೇನೆ ಎಂದು ಹೇಳಿದರೂ ಅವರನ್ನು ನಾನು ನಂಬುತ್ತಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ನಾನು ಎಲ್ಲರ ಬಳಿಯೂ ಮೋಸ ಹೋಗಿದ್ದೇನೆ. ಹಾಗಿದ್ದಾಗ ನನಗೆ ನಟನೆ ಸಮಾಧಾನ ನೀಡಿತು. ಅದಕ್ಕೆ ನಾನು ಅನೇಕ ಸಿನಿಮಾಗಳಲ್ಲಿ ಶ್ರದ್ಧೆಯಿಂದ ನಟಿಸಿದೆ. ಅದರಲ್ಲಿಯೂ ನನಗೆ ಒಂದು ಸಮಸ್ಯೆ ಇದೆ. ನನ್ನನ್ನು ಎಲ್ಲರೂ ಗ್ಲಾಮರ್ ಆಗಿ ನೋಡಿದರು. ಇದರಿಂದ ಗ್ಲಾಮರ್ ಗಾಗಿ ಬಂದ ಅವಕಾಶಗಳನ್ನು ನಾನು ಬೇಡವೆಂದೆ. ಒಂದು ಸಮಯದಲ್ಲಿ ನಟನೆಯ ಮೇಲೆ ಬೇಸರದಿಂದ ನನ್ನ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ತೆಗೆಯಲು ಪ್ರಾರಂಭಿಸಿದೆ. ಗ್ಲಾಮರ್ ಕ್ವೀನ್ ಸಿಲ್ಕ್ ಸ್ಮಿತಾ ಮರಣದ ನಂತರ ಆಕೆಯ ಜೀವನ ಚರಿತ್ರೆ ಎಂದು ಅನೇಕರು ಹೇಳುತ್ತಾ ಬಂದರು. ಆದರೆ, ಅಲ್ಲಿಯವರೆಗೆ ಅಸಲಿ ಕಥೆ ಯಾರಿಗೂ ತಿಳಿದಿರಲಿಲ್ಲ. ಹಾಗೆಯೇ ನಾನು ಸತ್ತ ನಂತರವೂ ನನ್ನ ಬಗ್ಗೆ ಯಾರಾದರೂ ಒಂದು ಕಥೆ ಹೇಳಬಹುದು. ಅದಕ್ಕೆ ನನ್ನ ಕಥೆಯನ್ನು ನಾನೇ ಹೇಳಿಬಿಡಬೇಕೆಂದು ನಿರ್ಧರಿಸಿದೆ” ಎಂದು ಹೇಳಿದರು.

“ಅಮ್ಮ ಸತ್ತಾಗ ಆಕೆಯನ್ನು ಹೂತು ಬಂದಾಗ ಒಬ್ಬ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳುತ್ತೇನೆಂದು ನನ್ನ ಬಳಿ ಬಂದ. ಆದರೆ, ನಾನು ಅಮ್ಮ ತೀರಿಕೊಂಡಿದ್ದಾರೆ ಆಗುವುದಿಲ್ಲ ಎಂದು ಹೇಳಿದಾಗ ಜಗತ್ತಿನಲ್ಲಿ ನಡೆಯದಿದ್ದೇನು ಈಗ ನಡೆದಿದೆ, ಒಂದು ಸೆಲ್ಫಿ ಅಷ್ಟೇ ಎಂದ. ನಾನು ಗ್ಲಾಮರ್ ನಟಿಯಾಗಿದ್ದಕ್ಕೆ ಅವನು ಹಾಗೆ ಮಾತನಾಡಿದ. ಅದಕ್ಕೆ ನಾನು ಗ್ಲಾಮರ್ ಆಗಿ ನಟಿಸುವುದನ್ನೇ ಬಿಟ್ಟೆ. ಈಗ ನನ್ನನ್ನು ಎಲ್ಲರೂ ಗೌರವಿಸುತ್ತಾರೆ. ಕುಸೇಲನ್ ಸಿನಿಮಾದಲ್ಲಿ ವಡಿವೇಲು ಜೊತೆ ನಟಿಸಿದ್ದೇನೆ. ಆ ಸಿನಿಮಾ ನಂತರ ಅವರೊಂದಿಗೆ ನಟಿಸಲು ನನಗೆ 16 ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಆದರೆ, ನಾನು ನಟಿಸಲಿಲ್ಲ. ಅಗತ್ಯವಿದ್ದರೆ ಬೇಡಿಕೊಳ್ಳುತ್ತೇನೆ ಆದರೆ ವಡಿವೇಲು ಜೊತೆ ನಟಿಸುವುದಿಲ್ಲ” ಎಂದು ನಟಿ ಸೋನಾ ತಮ್ಮ ವೇಧನೆಯನ್ನು ವ್ಯಕ್ತಪಡಿಸಿದ್ದಾರೆ.

DAKSHINA KANNADA

ಕರಾವಳಿಯ ಕಲಾವಿದರನ್ನು ಹಾಡಿ ಹೊಗಳಿದ ಖ್ಯಾತ ನಟ ರಮೇಶ್ ಅರವಿಂದ್

Published

on

ಪುತ್ತೂರು : ಕರಾವಳಿಯ ಬೀಚ್ ಗಳು ನನ್ನ ರೋಮ್ಯಾಂಟಿಕ್ ಸಿನೆಮಾಗೆ ಜೀವ ತುಂಬಿದ್ರೆ, ಕರಾವಳಿಯ ತುಳು ನಾಟಕ ನೋಡಿ ಕಾಮಿಡಿ ಸಿನೆಮಾ ಮಾಡಿದೆ. ಯಕ್ಷಗಾನದ ವೇಷ ಹಾಕಿ ಇಲ್ಲಿನ ಯಕ್ಷಗಾನ ಕಲಾವಿದರ ಬಗ್ಗೆ ಗೌರವಪಟ್ಟೆ ಅಂತ ನಟ ರಮೇಶ್ ಅರವಿಂದ್ ಕರಾವಳಿಯನ್ನು ಹಾಡಿ ಹೊಗಳಿದ್ದಾರೆ.

ಪುತ್ತೂರಿನಲ್ಲಿ ಮುಳಿಯ ಗೋಲ್ಡ್ ಅ್ಯಂಡ್ ಡೈಮಂಡ್ ಶೋ ರೂಮ್ ಉದ್ಘಾಟನೆಗೆ ಆಗಮಿಸಿದ ಅವರು ಪತ್ರಕರ್ತರ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ತುಳು ರಂಗಭೂಮಿಯಲ್ಲಿ ಇರುವ ಕಲಾವಿದರ ಹ್ಯೂಮರ್ ತುಂಬಾನೆ ಚೆನ್ನಾಗಿದ್ದು , ಅವರ ಪಂಚಿಂಗ್ ಡೈಲಾಗ್ ನನಗೆ ತುಂಬಾ ಇಷ್ಟ. ತುಳು ಭಾಷೆ ಬಾರದೇ ಇದ್ರೂ ಅದನ್ನು ಅರ್ಥೈಸಿಕೊಂಡು ಕನ್ನಡದಲ್ಲೂ ತುಳು ಕಲಾವಿದರನ್ನು ಹಾಕಿ ಸಿನೆಮಾ ಮಾಡಿದ್ದೇನೆ. ನನ್ನ ಕೆಲವು ಕಾಮಿಡಿ ಸಿನೆಮಾಗಳಿಗೆ ತುಳು ರಂಗಭೂಮಿಯೇ ಪ್ರೇರಣೆಯಾಗಿತ್ತು ಅಂತ ಅವರು ಹೇಳಿದ್ದಾರೆ.

ಇದೇ ವೇಳೆ ಯಕ್ಷಗಾನ ಕಲಾವಿದರು ತಾವೇ ಬಣ್ಣ ಹಚ್ಚಿ ವೇಷ ಧರಿಸಿಕೊಳ್ಳುವಂತಹದು ನಿಜಕ್ಕೂ ಒಂದು ಅದ್ಭುತ ವಿಚಾರ ಅಂತ ಯಕ್ಷಗಾನದ ವೇಷಧಾರಿಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ರಮೇಶ್ ಅರವಿಂದ್ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಬೇಕು ಎಂದು ಸಲಹೆ ನೀಡಿದ್ದಾರೆ.

Continue Reading

FILM

ಸ್ಟೈಲಿಶ್ ಹೆಸರಿಡೋ ಕಾಲದಲ್ಲೂ ದೇವರ ಹೆಸರು ..! ನಟಿ ಪ್ರಣಿತಾ ಮಗುವಿಗೆ ಈ ಹೆಸರಿಡಲು ಕಾರಣವೇನು ..?

Published

on

ನಟಿ ಪ್ರಣಿತಾ ಸುಬಾಷ್ ಹಾಗೂ ನಿತಿನ್ ರಾಜು ದಂಪತಿಗೆ 2024 ರ ಸೆಪ್ಟೆಂಬರ್​ನಲ್ಲಿ ಜನಿಸಿದ್ದ ಗಂಡು ಮಗುವಿಗೆ ಈಗ ನಾಮಕರಣ ಶಾಸ್ತ್ರ ನಡೆದಿದೆ. ಎಲ್ಲರೂ ಸ್ಟೈಲಿಶ್ ಹೆಸರಿಡೋ ಈ ಕಾಲದಲ್ಲಿ ಪ್ರಣಿತಾ ಮಾತ್ರ ಮಹಾಭಾರತದಲ್ಲಿ ಬರುವ ಪ್ರಮುಖ ವ್ಯಕ್ತಿಯ ಹೆಸರು ಇಟ್ಟಿದ್ದಾರೆ. ಆ ಹೆಸರು ಇಡಲು ಕಾರಣ ಏನು ಎಂಬುವುದನ್ನೂ ಸಹ ಎಳೆ ಎಳಯಾಗಿ ವಿವರಿಸಿದ್ದಾರೆ. ಹಾಗಾದರೆ ನಟಿ ಪ್ರಣಿತಾಳ ಮಗುವಿನ ಹೆಸರೇನು ? ಆ ನಾಮ ಇಡುವುದರ ಹಿಂದಿನ ಉದ್ದೇಶ ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ರಣಿತಾ ಹಾಗೂ ಉದ್ಯಮಿ ನಿತಿನ್ ಜೋಡಿ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿತ್ತು. ಈ ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿತು. ಅವಳಿಗೆ ಅರ್ನಾ ಎಂದು ಹೆಸರು ಇಡಲಾಗಿದೆ. ಸೆಪ್ಟೆಂಬರ್​​ನಲ್ಲಿ ಪ್ರಣಿತಾ ಗಂಡು ಮಗುವನ್ನು ಬರಮಾಡಿಕೊಂಡಿದ್ದು, ಈಗ ನಾಮಕರಣ ಶಾಸ್ತ್ರ ನಡೆದಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ತಮ್ಮ ಮಕ್ಕಳಿಗೆ ಫ್ಯಾನ್ಸಿ ಹೆಸರನ್ನು ಇಡಲು ಬಯಸುತ್ತಾರೆ. ಅದರಲ್ಲೂ ಪೌರಾಣಿಕ ಪಾತ್ರಗಳ ಹೆಸರನ್ನು ಇಡಬೇಕು ಎಂದು ಯಾರೂ ಬಯಸುವುದಿಲ್ಲ.

ಆದರೆ, ನಟಿ ಪ್ರಣಿತಾ ತಮ್ಮ ಮುದ್ದಾದ ಗಂಡು ಮಗುವಿಗೆ ‘ಜೈ ಕೃಷ್ಣ’ ಎಂದು ನಾಮಕರಣ ಮಾಡಿದ್ದಾರೆ. ಮಾರ್ಡನ್ ನಟಿ ಸಾಂಪ್ರದಾಯಿಕ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಎಲ್ಲರಿಂದ ಮೆಚ್ಚುಗೆ ಪಡೆಕುಕೊಂಡಿದ್ದಾರೆ. “ಯಾಕಾಗಿ ಮಗುವಿಗೆ ಆ ಹೆಸರು ಇಡಲಾಗಿದೆ ?” ಎಂದಾಗ “ನನ್ನ ತಂದೆಯ ತಂದೆ ಹೆಸರು ಬಾಲಕೃಷ್ಣ ಅಂತ. ನಮ್ಮ ಹಾಸ್ಪಿಟಲ್ ಹೆಸರು ಶ್ರೀಕೃಷ್ಣ. ನನ್ನ ಪತಿಯ ತಂದೆಯ ಹೆಸರು ವಾಸುದೇವ ಅಂತ. ಎಲ್ಲಾ ಒಟ್ಟಿಗೆ ಸೇರಿ ಜೈ ಕೃಷ್ಣ ಎಂದು ಹೆಸರು ಇಟ್ಟಿದ್ದೇವೆ” ಎಂದಿದ್ದಾರೆ ನಟಿ ಪ್ರಣಿತಾ.

Continue Reading

FILM

ಸಿನಿಮಾ ನಿರ್ದೇಶನಕ್ಕಿಳಿದ ಕನ್ನಡತಿ; ಪ್ರೇಮ್, ಗೋಲ್ಡನ್ ಸ್ಟಾರ್ ಮಗನಿಗೆ ಆ್ಯಕ್ಷನ್ ಕಟ್

Published

on

ಮಂಗಳೂರು/ಬೆಂಗಳೂರು : ಕಿರುತೆರೆಯಲ್ಲಿ ಮಿಂಚಿ ಜನಮನ ಗೆದ್ದಿರುವ ಕಲಾವಿದೆ ರಂಜನಿ ರಾಘವನ್.  ಹಿರಿತೆರೆಯಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಇದೀಗ ಮತ್ತೊಂದು ಅಗ್ನಿ ಪರೀಕ್ಷೆಗಿಳಿದಿದ್ದಾರೆ. ಈ ಬಾರಿ ನಿರ್ದೇಶಕಿಯಾಗಿ ಅವರು ಬೆಳ್ಳಿ ಪರದೆಯ ಮೇಲೆ ಕಮಾಲ್ ಮಾಡುವ ತಯಾರಿಯಲ್ಲಿದ್ದಾರೆ.

ರಂಜನಿಯವರ ಚೊಚ್ಚಲ ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪಾತ್ರವಾಗುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಪುತ್ರ ವಿಹಾನ್ ಪ್ರಮುಖ ಪಾತ್ರವಾಗುತ್ತಿರೋದು. ಈ ಚಿತ್ರದಲ್ಲಿ ತಂದೆ – ಮಗನ ಬಾಂಧವ್ಯದ ಕುರಿತ ಕಥೆಯಿದೆ ಎಂಬುದಾಗಿ ಹೇಳಲಾಗಿದೆ. ಸದ್ಯ ಚಿತ್ರದ ಮೋಷನ್ ಪೋಸ್ಟರ್ ಗಮನ ಸೆಳೆಯುತ್ತಿದೆ.

ಅಂದ್ಹಾಗೆ, ರಂಜನಿ ರಾಘವನ್ ವಿಭಿನ್ನಶೀರ್ಷಿಕೆಯನ್ನು ಚಿತ್ರಕ್ಕಿಟ್ಟಿದ್ದಾರೆ.  ‘ಡಿ ಡಿ ಢಿಕ್ಕಿ’ ಎಂಬುದು ಚಿತ್ರದ ಹೆಸರು. ನಟ ಪ್ರೇಮ್ ಹಾಗೂ ಗಣೇಶ್ ಪುತ್ರ ವಿಹಾನ್ ಈ ಚಿತ್ರದಲ್ಲಿ ತಂದೆ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಟೇರ ಚಿತ್ರದ ರೈಟರ್ ಜಡೇಶ್ ಕುಮಾರ್ ತಮ್ಮ ‘ಹಂಪಿ ಪಿಕ್ಚರ್ಸ್’ ಅಡಿಯಲ್ಲಿ ನಿರ್ಮಾಣಕ್ಕಿಳಿದಿದ್ದು, ರಾಮಕೃಷ್ಣ ಮತ್ತು ಆನಂದ್ ಕುಮಾರ್  ನೇತೃತ್ವದ ಆರ್‌ಕೆ ಮತ್ತು ಎಕೆ ಎಂಟರ್‌ಟೇನ್‌ಮೆಂಟ್ ಸಂಸ್ಥೆ ಜೊತೆಯಾಗಿದೆ.

ಇದನ್ನೂ ಓದಿ : ಮಗಳ ಹೆಸರು ರಿವೀಲ್ ಮಾಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಇಳಯರಾಜ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಶೇ.60 ರಷ್ಟು ಚಿತ್ರೀಕರಣ ನಡೆದಿದ್ದು, ಕೆಲಸಗಳು ಭರದಿಂದ ಸಾಗುತ್ತಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page