Connect with us

FILM

“ಒಂದುವೇಳೆ ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ….!!”

Published

on

ನಾನು ನಿಮ್ಮ ಮಗಳಿನ ವಯಸ್ಸಿನವಳು ಅಂದೆ. ಅದಕ್ಕೆ ಅವರು ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದು ಹೇಳಿದರು.
ಮುಂಬೈ : ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸದ್ದು ಇದೀಗ ಮತ್ತೆ ಜೋರಾಗಿದೆ.  ಇದೀಗ ಮತ್ತೊಬ್ಬ ನಟಿ ತನಗೆ ಆದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾಳೆ.
ಹಿಂದಿ ಕಿರುತೆರೆಯಲ್ಲಿ ಜನಂ ಮೋಹೇ ಬಿತಿಯ ಹಿ ಕಿಚೋ ಧಾರವಾಹಿ ಮೂಲಕ ಜನಮನ್ನಣೆ ಪಡೆದ ರತನ್ ರಜಪೂತ್ ತಮ್ಮ ವೃತ್ತಿ ಬದುಕಿನಲ್ಲಿ ಆಗಿದ್ದ ಕರಾಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

14 ವರ್ಷಗಳ ಹಿಂದೆ ಸಿನಿಮಾಕ್ಕಾಗಿ ಮುಂಬೈಗೆ ಹೋಗಿದ್ದೆ. ಅಲ್ಲಿ 60 ವರ್ಷದ ನಿರ್ಮಾಪಕರೊಬ್ಬರನ್ನು ಭೇಟಿಯಾಗಿದ್ದೆ. ಅವರು ನನ್ನನ್ನು ನೋಡಿ ನಿನ್ನ ಸಂಪೂರ್ಣ ಲುಕ್ ಬದಲಾಯಿಸಬೇಕು. ಅದಕ್ಕೆ ಆಗುವ ವೆಚ್ಚವನ್ನು ನಾನು ಭರಿಸುತ್ತೇನೆ. ಅದಕ್ಕೆ ನೀನು ನನ್ನೊಂದಿಗೆ ಸ್ನೇಹಿತೆ ಆಗಿರಬೇಕು ಎಂದು ಕೇಳಿದರು.

ನಾನು ನಿಮ್ಮ ಮಗಳಿನ ವಯಸ್ಸಿನವಳು ಅಂದೆ. ಅದಕ್ಕೆ ಅವರು ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದು ಹೇಳಿದರು.

ಆ ಮಾತನ್ನು ಕೇಳಿ ನಾನು ಆಘಾತಕ್ಕೊಳಗಾದೆ. ತಡ ಮಾಡದೆ ಅಲ್ಲಿಂದ ಹೊರಟು ಬಂದುಬಿಟ್ಟಿದೆ ಎಂದು ನಟಿ ರತನ್ ರಜಪೂತ್ ಹೇಳಿಕೊಂಡಿದ್ದಾಳೆ.

FILM

ಕಲಾವಿದನಿಗಿಂತ ಕಮರ್ಷಿಯಲ್  ಹೆಚ್ಚಾಯ್ತಾ!? ಡಿವೈನ್ ಸ್ಟಾರ್‌ಗೆ ಕ್ಲಾಸ್

Published

on

ಉಡುಪಿ : ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್‌ ಪೂಜಾರಿಯ ಅಕಾಲಿಕ ಸಾ*ವು ಇಡೀ ರಾಜ್ಯಕ್ಕೆ ಶಾ*ಕ್ ಕೊಟ್ಟಿದೆ. ಪ್ರತಿಭಾನ್ವಿತ ಕಲಾವಿದನ ಅಗ*ಲಿಕೆಗೆ ನಾಡಿನ ಜನತೆ ಕಂಬನಿ ಮಿಡಿದಿದ್ದಾರೆ. ಚಿತ್ರರಂಗದ ಕಲಾವಿದರು, ರಂಗಭೂಮಿ ಕಲಾವಿದರು ರಾಕೇಶ್‌ ಅಂತಿಮ ದರ್ಶನ ಪಡೆದಿದ್ದಾರೆ. ಆದರೆ, ಅಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಣಿಸದಿದ್ದದ್ದು ವಿವಾದಕ್ಕೆಡೆ ಮಾಡಿದೆ.

ಎಲ್ಲರನ್ನೂ ನಗಿಸುತ್ತಿದ್ದ ಮೇರು ಪ್ರತಿಭೆ ಉಸಿರು ಮರೆತು ಮಲಗಿದ್ದರೆ ಇಡೀ ಕಿರುತೆರೆ, ಹಿರಿತೆರೆ ಮಂದಿ ಶಾ*ಕ್‌ಗೊಳಗಾಗಿತ್ತು. ನೋವಿನಿಂದ ನರಳಿತ್ತು.  ನಟಿ ರಕ್ಷಿತಾ ಪ್ರೇಮ್ ಬಂದಿದ್ರು, ನಿರೂಪಕಿ ಅನುಶ್ರೀನೂ ಬಂದು  ಸಂತಾಪ ಸೂಚಿಸಿದ್ರು. ನಿರ್ದೇಶಕ ಯೋಗರಾಜ್ ಭಟ್, ಮಾಸ್ಟರ್ ಆನಂದ್ ಸೇರಿದಂತೆ ಕಾಮಿಡಿ ಕಿಲಾಡಿಗಳ ತಂಡವೇ ಆಗಮಿಸಿತ್ತು. ಉಡುಪಿ ಮೂಲದವರೇ ಆದ ಡಿವೈನ್ ಸ್ಟಾರ್ ಮಾತ್ರ ಬರಲೇ ಇಲ್ಲ. ಅವರ ಆಗಮನ ನಿರೀಕ್ಷೆ ಯಾಕಿತ್ತು ಅಂದ್ರೆ, ರಾಕೇಶ್ ಎಂಬ ಒಬ್ಬ ಅಪ್ಪಟ ಕಲಾವಿದ ಕಾಂತಾರ ಚಾಪ್ಟರ್ 1 ರಲ್ಲಿ ನಟಿಸುತ್ತಿದ್ದರು. ಅಂತಹ ಅಪ್ರತಿಮ ಕಲಾವಿದನಿಗೆ ಜಸ್ಟ್ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸಂತಾಪ ಸೂಚಿಸಿ ತಣ್ಣಗೆ ಕೂತಿರುವ ರಿಷಬ್ ಬಗ್ಗೆ ಆಕ್ರೋಶ ಕೇಳಿ ಬರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಡಿವೈನ್ ಸ್ಟಾರ್ ವಿರುದ್ಧ ಪೋಸ್ಟರ್‌ಗಳು ಹರಿದಾಡುತ್ತಿವೆ. ‘ಕಲಾವಿದನಿಗಿಂತ ಕಮರ್ಷಿಯಲ್  ಹೆಚ್ಚಾಯ್ತಾ’ ಎಂಬುದು ನೆಟ್ಟಿಗರ ಪ್ರಶ್ನೆ. ಸದ್ಯ ಉಡುಪಿಯ ಕಾಂತಾರ ಚಾಪ್ಟರ್ 1 ಚಿತ್ರೀಕರಣ ಬೈಂದೂರಿನಲ್ಲಿ ನಡೆಯುತ್ತಿದೆ. ಉಡುಪಿಯ ಹೂಡೆಯಲ್ಲಿದೆ ರಾಕೇಶ್ ಮನೆ. ನಡುವೆ ಇರುವ ಅಂತರವೆಷ್ಟು? ಒಂದು ಘಳಿಗೆ ಬರಲಿಲ್ಲವಲ್ಲ ನಟ ಎಂಬುದು ಜನರ ಪ್ರಶ್ನೆ. 500 ಕಿಮೀ ದೂರದಿಂದ ಬಂದವರ ನಡುವೆ 30 ಕಿಮೀ ದೂರದಲ್ಲಿದ್ದು ಬರಲು ಪುರಸೊತ್ತು ಇಲ್ಲವೇ ಎಂದು ಕೇಳುತ್ತಿದ್ದಾರೆ.

ಸಹ ಕಲಾವಿದನ ಜೀವಕ್ಕೆ ಇಷ್ಟೇನಾ ಬೆಲೆ ಎಂದು ಕೇಳಲಾಗುತ್ತಿದೆ.  ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆಯಲು ಬೆಂಗಳೂರಿನಿಂದ ಓಡೋಡಿ ಸೆಲೆಬ್ರಿಟಿಗಳು ಬಂದಿದ್ದಾರೆ. ದರ್ಶನ್ ಕೂಡ ಫೋನ್ ಮಾಡಿ ವಿಚಾರಿಸಿದ್ದಾರೆ. ಆದರೆ, ಶೆಟ್ಟಿಗೆ ಮನಸ್ಸು ಕೂಡ ಬರಲಿಲ್ಲ . ನೀನೆಂತಹ ನಿರ್ದೇಶಕನಯ್ಯ ಎಂಬುದಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

 

 

 

 

 

Continue Reading

FILM

ರಾಕೇಶ್ ಪೂಜಾರಿ ನಿಧನಕ್ಕೆ ರಿಷಬ್‌ ಶೆಟ್ಟಿ ಭಾವುಕ ಪೋಸ್ಟ್

Published

on

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧ*ನರಾಗಿದ್ದಾರೆ. ಕಾಂತಾರ ಚಿತ್ರೀಕರಣದ ನಂತರ ಗೆಳೆಯನ ಮದುವೆಯಲ್ಲಿ ಭಾಗವಹಿಸಿದ್ದ ರಾಕೇಶ್, ಮಧ್ಯರಾತ್ರಿ ಹೃದಯಾಘಾತದಿಂದ ಮೃ*ತಪಟ್ಟಿದ್ದಾರೆ. ಇದೀಗ ರಿಷಬ್ ಶೆಟ್ಟಿ ಸಂತಾಪ ಸೂಚಿಸಿದ್ದು, ರಾಕೇಶ್‌ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಹಾಸ್ಯ ನಟ ರಾಕೇಶ್ ಪೂಜಾರಿ ಕಾಂತಾರ ಅಧ್ಯಾಯ 1 ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಸಹ ಮಾಡಿದ್ದರು. ಆದ್ರೆ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನಕ್ಕೆ ರಿಷಬ್ ಶೆಟ್ಟಿ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ

ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ
“ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ.. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ” ಎಂದು ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಹೊಂಬಾಳೆ ಸಂಸ್ಥೆಯಿಂದ ಸಂತಾಪ
‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಕೂಡ ರಾಕೇಶ್ ಪೂಜಾರಿ ಸಾವಿಗೆ ಸಂತಾಪ ಸೂಚಿಸಿದೆ. “ನಟ ರಾಕೇಶ್ ಪೂಜಾರಿ ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ” ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ.

Continue Reading

BIG BOSS

ಉಗ್ರಂ ಮಂಜು ಬಾಳಲ್ಲಿ ಹುಡುಗಿ ಕಮಿಂಗ್ ಸೂನ್..!

Published

on

ಸದ್ಯ ಬಿಗ್​ಬಾಸ್ ಸೀಸನ್ 11ರ ಸ್ಪರ್ಧಿಗಳು ಒಬ್ಬೊಬ್ಬರಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಉಗ್ರಂ ಮಂಜು ಬಾಳಲ್ಲಿ ಸದ್ಯದಲ್ಲೇ ಹೊಸ ಹುಡುಗಿ ಆಗಮನ ಆಗುತ್ತಿದೆ.

ಹೌದು, ಕನ್ನಡದ ಬಿಗ್​ಬಾಸ್​ ಸೀಸನ್ 11 ಅಂತ್ಯ ಕಂಡು 5 ತಿಂಗಳು ಕಳೆದಿದೆ. ಆದ್ರೆ ವೀಕ್ಷಕರು ಸ್ಪರ್ಧಿಗಳನ್ನು ಮಾತ್ರ ಮರೆತಿಲ್ಲ. ಸದಾ ರೀಲ್ಸ್ ಮೂಲಕವೇ ಟ್ರೇಂಡಿಗ್‌ನಲ್ಲಿರುವ ಬಿಗ್‌ಬಾಸ್‌ ಸ್ಪರ್ಧಿಗಳು ವೀಕ್ಷಕರ ಗಮನ ಸೆಳೆಯುತ್ತಾರೆ.

ಬಿಗ್‌ಬಾಸ್‌ ಸೀಸನ್ 11ರ ಬಹುತೇಕ ಎಲ್ಲ ಸ್ಪರ್ಧಿಗಳು ಮದುವೆ ಆಗುತ್ತಿದ್ದಾರೆ. ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ಅವರು ಮದುವೆಯಾಗಿದ್ದರು. ಇಂದು ಬಿಗ್​ಬಾಸ್​ ಖ್ಯಾತಿಯ ರಂಜಿತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಮಧ್ಯೆ ಮಂಜು ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಆದರೆ ಇದೀಗ ಮಂಜು ಅವರ ಬಾಳಲ್ಲಿ ಸದ್ಯದಲ್ಲೇ ಹೊಸ ಹುಡುಗಿ ಆಗಮನ ಆಗುತ್ತಿದೆ.

ಈ ಬಗ್ಗೆ ಖುದ್ದು ಗೌತಮಿ ಜಾಧವ್ ಅವರೇ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಯಾವುದೇ ಕ್ಯಾಪ್ಶನ್​ ಹಾಕದೇ ಹಾಡಿನ ಮೂಲಕ ಹಾಗೂ ಹುಡುಗಿ ಕಮಿಂಗ್ ಸೂನ್ ಅಂತ ಬರೆಯಲಾಗಿದೆ.

ಅದರಂತೆ ಈ ವಿಡಿಯೋ ನೋಡಿದ ಅಭಿಮಾನಿಗಳು ಮಂಜಣ್ಣನಿಗೆ ಹುಡುಗಿ ಸಿಕ್ಕರೆ ಒಳ್ಳೆದಾಗಲಿ ಆದಷ್ಟು ಬೇಗ ಮದುವೆ ಆಗಲಿ, ಮದುಮಗ ಮಂಜಣ್ಣ, ಬೇಗ ಒಳ್ಳೆ ಹುಡುಗಿ ನೋಡಿ ಮದುವೆ ಮಾಡಿ ಅಕ್ಕ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಒಟ್ಟಿನಲ್ಲಿ ಮಂಜು ಅವರ ಬಾಳಲ್ಲೂ ಆದಷ್ಟು ಬೇಗ ಹುಡುಗಿ ಎಂಟ್ರಿ ಕೊಡುವ ಸುಳಿವು ಸಿಕ್ಕಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page